Krushi Rushi News Website & Latest Posts https://krushirushi.in/rss/latest-posts Krushi Rushi News Website & Latest Posts en Copyright 2025 Krushi Rushi & All Rights Reserved ಈ ಬೆಳೆಗಳಿಗೆ ಬೆಳೆವಿಮೆ ಕಟ್ಟಲು ಕೊನೆಯ ದಿನಾಂಕ,ಯಾವ ಬೆಳೆಗೆ ಯಾವುದು ಕೊನೆಯ ದಿನಾಂಕ ಚೆಕ್ ಮಾಡಿ ಬೆಳೆವಿಮೆ ಕಟ್ಟಿ&Belevime last date   https://krushirushi.in/Belevime-last-date-2143 https://krushirushi.in/Belevime-last-date-2143 ಈ ಬೆಳೆಗಳಿಗೆ ಬೆಳೆವಿಮೆ ಕಟ್ಟಲು ಕೊನೆಯ ದಿನಾಂಕ,ಯಾವ ಬೆಳೆಗೆ ಯಾವುದು ಕೊನೆಯ ದಿನಾಂಕ ಚೆಕ್ ಮಾಡಿ ಬೆಳೆವಿಮೆ ಕಟ್ಟಿ-Belevime last date  

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

 https://samrakshane.karnataka.gov.in/ 

ನಂತರ ವರ್ಷದ ಆಯ್ಕೆ "2025-26" ಮತ್ತು ಋುತು "Kharif

" ಎಂದು select ಮಾಡಿ, "ಮುಂದೆ/Go" ಮೇಲೆ click ಮಾಡಿ

Farmer ಕಾಲಂನಲ್ಲಿ "View cutoff dates" ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ನಿಮ್ಮ ಜಿಲ್ಲೆ select ಮಾಡಿ

ನಂತರ ಈ ಕೆಳಗಿನಂತೆ ಯಾವ ಬೆಳೆಗೆ ಯಾವುದು ಕೊನೆಯ ದಿನಾಂಕ ಎಂದು ತೋರಿಸುತ್ತದೆ.ನಿಮ್ಮ ಬೆಳೆಗೆ ಯಾವುದು ಕೊನೆಯ ದಿನಾಂಕ ತಿಳಿದುಕೊಂಡು ಬೆಳೆವಿಮೆ ಕಟ್ಟಿ

]]>
Thu, 05 Jun 2025 07:47:16 +0530 shivuagrico
Crop loss compensation&ಮಳೆಯಿಂದಾದ ಬೆಳೆಹಾನಿಗೆ ಪರಿಹಾರ ಪಡೆಯುವುದು ಹೇಗೆ? https://krushirushi.in/Crop-loss-compensation-2142 https://krushirushi.in/Crop-loss-compensation-2142 Crop loss compensation-ಮಳೆಯಿಂದಾದ ಬೆಳೆಹಾನಿಗೆ ಪರಿಹಾರ ಪಡೆಯುವುದು ಹೇಗೆ?

ಈ ಬಾರಿ ಮುಂಗಾರು ಆಗಮನ ವಾಡಿಕೆಗಿಂತ ಬೇಗನೆ ಆಗಮಿಸಿದ ಕಾರಣ ಮೇ ಅಂತ್ಯದ ವೇಳೆಗೆ ಕರ್ನಾಟಕ ಸೇರಿ ಭಾರತದಾದ್ಯಂತ ಭರ್ಜರಿ ಮಳೆಯಾಗುತ್ತಿದೆ. ಆದರೆ ಜೂನ್‌ ಮೊದಲ ವಾರದಲ್ಲಿ ಕೊಂಚ ಮಳೆ ಪ್ರಮಾಣ ಕಡಿಮೆಯಾದರೂ ಸಹ ಕರ್ನಾಟಕದಲ್ಲಿ ಜೂನ್‌ 8ರಿಂದ ಮಳೆ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.


ಇನ್ನು, ಪ್ರತಿ ವರ್ಷವೂ ದೇಶದ ಹಲವು ರಾಜ್ಯಗಳಲ್ಲಿ ಮಳೆ ಮತ್ತು ಪ್ರವಾಹದಿಂದ ಮಾನ್ಸೂನ್ ಹಾನಿಯನ್ನು ಉಂಟು ಮಾಡುತ್ತದೆ. ಉತ್ತರ ಪ್ರದೇಶ, ಬಿಹಾರದಿಂದ ಈಶಾನ್ಯ ಭಾರತದ ರಾಜ್ಯಗಳವರೆಗೆ ಅನೇಕ ಪ್ರದೇಶಗಳಲ್ಲಿ ಜನರು ಮನೆ ಮತ್ತು ಕೃಷಿ ಬೆಳೆಯನ್ನೂ ಕಳೆದುಕೊಂಡಿದ್ದಾರೆ. ಆದರೆ ಅಂತಹ ವಿಪತ್ತಿನಲ್ಲಿ, ಸರ್ಕಾರವು ಮನೆ ಮತ್ತು ಬೆಳೆ ಕಳೆದುಕೊಂಡವರಿಗೆ ಆರ್ಥಿಕ ಸಹಾಯವನ್ನು ಸಹ ನೀಡುತ್ತದೆ. ನಷ್ಟವನ್ನು ಸರಿದೂಗಿಸಲು ಪರಿಹಾರವನ್ನು ಹೇಗೆ ಪಡೆಯುವುದು ಎಂದು ನೀವು ಮೊದಲು ಸರಿಯಾಗಿ ತಿಳಿದುಕೊಳ್ಳಬೇಕು.

ಆಡಳಿತವು ಹಾನಿ ಸಮೀಕ್ಷೆ ನಡೆಸುತ್ತೆ:

ಸ್ಥಳೀಯ ಆಡಳಿತವು ಮೊದಲು ನೈಸರ್ಗಿಕ ವಿಕೋಪ ಅಥವಾ ಭಾರೀ ಮಳೆಯಿಂದ ಉಂಟಾದ ಹಾನಿಯನ್ನು ಮೌಲ್ಯಮಾಪನ ಮಾಡುತ್ತದೆ. ಹಾನಿ ತುಂಬಾ ಹೆಚ್ಚಾದಾಗ, ರಾಜ್ಯ ಸರ್ಕಾರ ಪರಿಹಾರ ನಿಧಿ ಅಥವಾ ಪರಿಹಾರವನ್ನು ಘೋಷಿಸುತ್ತದೆ. ಇದಕ್ಕಾಗಿ, ಅಧಿಕಾರಿಗಳು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷಾ ವರದಿಯನ್ನು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸುತ್ತಾರೆ.

ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ?

ನಿಮ್ಮ ಮನೆ, ಅಂಗಡಿ ಅಥವಾ ಜಮೀನು, ಬೆಳೆ, ಕೃಷಿ ಭೂಮಿ ಹೀಗೆ ಪ್ರವಾಹ ಅಥವಾ ಮಳೆಯಿಂದ ಯಾವುದೇ ಹಾನಿಗೊಳಗಾಗಿದ್ದರೂ ಸಹ ಮೊದಲು ನೀವು ಸ್ಥಳೀಯ ಆಡಳಿತಕ್ಕೆ ತಿಳಿಸಬೇಕು.

 ಇದು ಅತ್ಯಂತ ಮುಖ್ಯವಾದ ಹಾಗೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಯಾಗಿದೆ.

ಇಲ್ಲಿದೆ ಹಂತ ಹಂತದ ವಿವರ* ಇದಕ್ಕಾಗಿ, ಗ್ರಾಮ ಪಂಚಾಯತ್, ಪುರಸಭೆ ಅಥವಾ ಬ್ಲಾಕ್ ಮಟ್ಟದಲ್ಲಿ ಲಿಖಿತ ಮಾಹಿತಿಯನ್ನು ನೀಡಬಹುದು.* ಆಡಳಿತ ಅಧಿಕಾರಿಗಳು ಹಾನಿಯನ್ನು ಪರಿಶೀಲಿಸುತ್ತಾರೆ ಮತ್ತು ವರದಿಯನ್ನು ಸಿದ್ಧಪಡಿಸುತ್ತಾರೆ.* ವರದಿಯೊಂದಿಗೆ ಬಾಧಿತ ಸ್ಥಳಗಳ ಫೋಟೋಗಳು ಮತ್ತು ವೀಡಿಯೊಗಳನ್ನು ಸಹ ಕಳುಹಿಸಲಾಗುತ್ತದೆ.* ಈ ವರದಿಯು ಜಿಲ್ಲಾಡಳಿತದಿಂದ ರಾಜ್ಯ ಸರ್ಕಾರಕ್ಕೆ ಹೋಗುತ್ತದೆ.* ಇದಾದ ನಂತರ ರಾಜ್ಯ ಸರ್ಕಾರ ಪರಿಹಾರ ಮೊತ್ತವನ್ನು ಘೋಷಿಸುತ್ತದೆ ಮತ್ತು ಪರಿಹಾರವನ್ನು ವಿತರಿಸಲಾಗುತ್ತದೆ.

ಮುಖ್ಯವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು:

> ಪರಿಹಾರಕ್ಕಾಗಿ ಸಾಧ್ಯವಾದಷ್ಟು ಬೇಗ ಮಾಹಿತಿ ನೀಡುವುದು ಇಲ್ಲಿ ಮುಖ್ಯವಾಗುತ್ತದೆ.> ನಷ್ಟಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಮತ್ತು ಛಾಯಾಚಿತ್ರಗಳನ್ನು ಸುರಕ್ಷಿತವಾಗಿಡುವುದು ಮುಖ್ಯ.> ನಿಮ್ಮ ವರದಿಯನ್ನು ಸರಿಯಾಗಿ ಸಲ್ಲಿಸಲು ಸ್ಥಳೀಯ ಅಧಿಕಾರಿಗಳೊಂದಿಗೆ ಸಹಕರಿಸಬೇಕು.> ಇದಾದ ಬಳಿಕ ಪರಿಹಾರವನ್ನು ಸರ್ಕಾರ ಘೋಷಿಸಿದ ಬಳಿಕ ಅಧಿಕಾರಿಗಳ ಬಳಿಕ ಹೋಗಿ ಅಗತ್ಯ ದಾಖಲೆಗಳನ್ನು ನೀಡಿ ಪಡೆಯಬೇಕು.

Crop insurance news-ಮಳೆಯಿಂದ ಬೆಳೆ ಹಾನಿಯಾಗಿ 72 ಗಂಟೆಯೊಳಗೆ ಈ ಕೆಲಸ ಮಾಡಿದವರಿಗೆ ಮಾತ್ರ ಜಮಾ ಆಗಲಿದೆ ಬೆಳೆವಿಮೆ
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಉದ್ದೇಶಬೆಳೆ ವೈಫಲ್ಯದ ಆರ್ಥಿಕ ನಷ್ಟವನ್ನು ಕಡಿಮೆ ಮಾಡುವ ಮೂಲಕ, ಇದು ರೈತರ ಆದಾಯವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಮತ್ತು ರೈತರು ಸ್ಥಿರವಾದ ಆದಾಯವನ್ನು ಹೊಂದಿರುವಾಗ, ಅವರು ಉತ್ತಮ ಕೃಷಿ ಪದ್ಧತಿಗಳಲ್ಲಿ ಹೂಡಿಕೆ ಮಾಡಬಹುದು, ಇದು ಹಲವಾರು ಪ್ರಯೋಜನಗಳನ್ನು ತರುತ್ತದೆ. ಬೆಳೆ ಹಾನಿ/ನಷ್ಟದ ವಿರುದ್ಧ ರೈತರಿಗೆ ಆರ್ಥಿಕ ನೆರವು ನೀಡುವುದು.
ಸ್ಧಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ (Localized calamity) ಆಲೀಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ(ಇನಂಡೇಷನ್), ಮೇಘಸ್ಪೋಟ (Cloud burst) ಮತ್ತು ಗುಡುಗು ಮಿಂಚುಗಳಿಂದಾಗಿ ಉಂಟಾಗುವ ಬೆಂಕಿ ಅವಘಡ (Natural fire due to lightning) ಗಳಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯುಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ಯೋಜನೆಯಡಿ ಅವಕಾಶವಿರುತ್ತದೆ.
ಒಂದು ವೇಳೆ ಒಂದು ಅಧಿಸೂಚಿತ ಘಟಕದಲ್ಲಿ ಶೇಕಡಾ 25 ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ನಷ್ಟವಾದರೆ ಅಧಿಸೂಚಿತ ಘಟಕದಲ್ಲಿ ಬೆಳೆ ವಿಮೆಗೆ ಒಳಪಟ್ಟ ರೈತರಲ್ಲಿಬೆಳೆ ನಷ್ಟವಾದ ರೈತರಿಗೆ ಮಾತ್ರ ಮಾದರಿ ಸಮೀಕ್ಷೆಗನುಗುಣವಾಗಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುವುದು.
ಇಂತಹ ಸ್ಧಳೀಯ ಗಂಡಾಂತರಗಳ ಕಾರಣದಿಂದ ಬೆಳೆ ನಷ್ಟಸಂಭವಿಸಿದರೆ, ಬೆಳೆ ವಿಮೆ ಮಾಡಿಸಿರುವ ರೈತರು ಬಗ್ಗೆನೇರವಾಗಿ ಸಂಬಂಧಪಟ್ಟ ಅನುಷ್ಠಾನಗೊಳಿಸುವ ವಿಮಾಸಂಸ್ಥೆಗಳ ಕಛೇರಿಗಳಿಗೆ ಅಥವಾ ಹಣಕಾಸು ಸಂಸ್ಧೆ ಅಥವಾ ಕೃಷಿ/ತೋಟಗಾರಿಕೆ ಇಲಾಖೆ ಮೂಲಕ ತಕ್ಷಣಸೂಚನೆ ನೀಡಬೇಕು.
ಇಂತಹ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯವಿವರಗಳನ್ನು, ಹಾನಿಯ ವ್ಯಾಪ್ತಿ ಹಾಗೂ ಹಾನಿಗೆಕಾರಣಗಳನ್ನು 72 ಗಂಟೆಗಳೊಳಗಾಗಿ ತಿಳಿಸಬೇಕು.
ನಷ್ಟದ ಬಗೆಗಿನ ಮಾಹಿತಿಯನ್ನು ಸ್ವೀಕರಿಸಿದ ಮೇಲೆ ವಿಮಾಸಂಸ್ಥೆಗಳು ಬೆಳೆ ನಷ್ಟವನ್ನು ನಿರ್ಧರಿಸುವುದಕ್ಕೆ ನಷ್ಟನಿರ್ಧಾರಕರನ್ನು ಸಂಬಂಧಪಟ್ಟ ಪ್ರದೇಶಕ್ಕೆ 48 ಗಂಟೆಯೊಳಗಾಗಿ ನಿಯೋಜಿಸುವುದು.
ವಿಮೆ ಸಂಸ್ಥೆಯಿಂದ ನೇಮಿಸಲ್ಪಟ್ಟ ನಷ್ಟ ನಿರ್ಧಾರಕರುಮತ್ತು ಸ್ಥಳೀಯ ತಾಲ್ಲೂಕು/ಹೋಬಳಿ ಮಟ್ಟದ ಕೃಷಿ ಮತ್ತುತೋಟಗಾರಿಕಾ ಇಲಾಖಾ ಅಧಿಕಾರಿಗಳು ಜಂಟಿಯಾಗಿ, ಹಾನಿಗೊಳಗಾದ ರೈತರ ಸಮ್ಮುಖದಲ್ಲಿ ಬೆಳೆ ನಷ್ಟನಿರ್ಧರಿಸಲಾಗುವುದು.
ಸದರಿ ಬೆಳೆ ನಷ್ಟದ ವರದಿಯನ್ನು ಜಿಲ್ಲೆಗಳ ಇಲಾಖಾಮುಖ್ಯಸ್ಥರು ಅನುಷ್ಟಾನ ವಿಮಾ ಸಂಸ್ಥೆಗಳಿಗೆ ನೇರವಾಗಿಸಲ್ಲಿಸಲು ಕ್ರಮ ಕೈಗೊಳ್ಳುವುದು.
1. Post Harvest Losses
ಯೋಜನೆಯಡಿ ಬೆಳೆ ಕಟಾವಿನ ನಂತರ ಬೆಳೆಯನ್ನುಜಮೀನಿನಲ್ಲೆ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ (Post Harvest Losses) ಕಟಾವು ಮಾಡಿದ ಎರಡುವಾರಗಳೊಳಗೆ (ಹದಿನಾಲ್ಕು ದಿನಗಳು) ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕಮಳೆಯಿಂದಾಗಿ ಬೆಳೆ ನಾಶವಾದರೆ ವೈಯುಕ್ತಿಕವಾಗಿ(Case to Case basis) ವಿಮಾ ಸಂಸ್ಧೆಯು ನಷ್ಟ ನಿರ್ಧಾರ ಮಾಡಿಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಒಳಪಡಿಸಲಾಗಿದೆ.
ಬೆಳೆ ವಿಮೆ ಮಾಡಿಸಿದ ರೈತರು ಯಾರಿಗೆ ಸಂಪರ್ಕಿಸಬೇಕು?

ಬೆಳೆ ವಿಮೆ ಮಾಡಿಸಿದ ರೈತರು ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದಾರೋ ಆ ವಿಮಾ ಕಂಪನಿಗೆ ಸಂಪರ್ಕಿಸಬೇಕು. ಒಂದು ವೇಳೆ ವಿಮಾ ಕಂಪನಿಯ ನಂಬರ್‌ ಗೊತ್ತಿಲ್ಲದಿದ್ದರೆ ಬೆಳೆ ವಿಮೆ ಉಚಿತ ಸಹಾಯವಾಣಿ 1800 180 1551 ನಂಬರಿಗೆ ಕರೆ ಮಾಡಿ ನಿಮ್ಮ ಜಿಲ್ಲೆ ವಿಮಾ ಕಂಪನಿಯ ನಂಬ‌ರ್ ಪಡೆದು ಕರೆ ಮಾಡಬೇಕು.

ಬೆಳೆ ವಿಮೆ ಹಣ ಎಷ್ಟು ಜಮೆಯಾಗುತ್ತದೆ?

ಬೆಳೆ ವಿಮೆ ಮಾಡಿಸಿದ ನಂತರ ಬೆಳೆ ಎಷ್ಟು ಪ್ರಮಾಣದಲ್ಲಿ ಹಾಳಾಗಿದೆ ಹಾಗೂ ಬೆಳೆ ಯಾವ ಹಂತದಲ್ಲಿ ಹಾಳಾಗಿದೆ ಎಂಬುದನ್ನು ನಿರ್ಧರಿಸಿ ರೈತರಿಗೆ ವಿಮೆ ಹಣ ಪಾವತಿಸಲಾಗುವುದು.
]]>
Wed, 04 Jun 2025 13:04:14 +0530 shivuagrico
IPL 2025 winner&ಈ ಸಲ ಕಪ್ ನಮ್ದು,18 ವರ್ಷಗಳ ಅಭಿಮಾನಿಗಳ ಕನಸು ನನಸಾಗಿಸಿದ RCB https://krushirushi.in/IPL-2025-winner-2141 https://krushirushi.in/IPL-2025-winner-2141 IPL 2025 winner-ಈ ಸಲ ಕಪ್ ನಮ್ದು,18 ವರ್ಷಗಳ ಅಭಿಮಾನಿಗಳ ಕನಸು ನನಸಾಗಿಸಿದ RCB


 ನಿರೀಕ್ಷೆಯಂತೆಯೇ ಹಾಲಿ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ.


ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ರನ್ ಗಳ ಅಂತರದಲ್ಲಿ ಮಣಿಸಿ 18 ವರ್ಷಗಳ ಬಳಿಕ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.

ಆರ್ ಸಿಬಿ ನೀಡಿದ 191 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಪಂಜಾಬ್ ಕಿಂಗ್ಸ್ ತಂಡ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಪಂಜಾಬ್ ಪರ ಪ್ರಿಯಾಂಶ್ ಆರ್ಯ 24 ರನ್ ಗಳಿಸಿದರೆ, ಪ್ರಭ್ ಸಿಮ್ರನ್ ಸಿಂಗ್ 26 ರನ್ ಗಳಿಸಿ ಔಟಾದರು.

ನಾಯಕ ಶ್ರೇಯಸ್ ಅಯ್ಯರ್ ಕೇವಲ 1 ರನ್ ಗಳಿಸಿ ರೊಮಾರಿಯೋ ಶೆಫರ್ಡ್ ಗೆ ವಿಕೆಟ್ ಒಪ್ಪಿಸಿದರು. ಆದರೆ ಈ ಹಂತದಲ್ಲಿ ಪಂಜಾಬ್ ಇನ್ನಿಂಗ್ಸ್ ಗೆ ಬಲ ನೀಡಿದ ಜಾಶ್ ಇಂಗ್ಲಿಸ್ 23 ಎಸೆತಗಳಲ್ಲಿ 39 ರನ್ ಗಳಿಸಿದರು. ಆದರೆ ಕೃನಾಲ್ ಪಾಂಡ್ಯಾಗೆ ವಿಕೆಟ್ ಒಪ್ಪಿಸಿದರು.


ಈ ಹಂತದಲ್ಲಿ ಪಂಜಾಬ್ ಇನ್ನಿಂಗ್ಸ್ ಜೀವ ತುಂಬಿದ್ದು ನೇಹಲ್ ವಧೇರಾ (15). ಆದರೆ ಅವರ ರನ್ ಗಳಿಕೆ ಕೂಡ 15ಕ್ಕೇ ಸೀಮಿತವಾಯಿತು. ಅಪಾಯಕಾರಿ ಪರಿಣಮಿಸಿದ್ದ ವಧೇರಾರನ್ನು ಭುವನೇಶ್ವರ್ ಕುಮಾರ್ ಔಟ್ ಮಾಡಿದರು. ಬಳಿಕ ಕ್ರೀಸ್ ಗೆ ಬಂದ ಮಾರ್ಕಸ್ ಸ್ಟಾಯ್ನಿಸ್ ಸಿಕ್ಸರ್ ಭಾರಿಸಿ 2ನೇ ಎಸೆತದಲ್ಲೇ ಭುವನೇಶ್ವರ್ ಕುಮಾರ್ ಗೆ ವಿಕೆಟ್ ಒಪ್ಪಿಸಿದರು.

ಶಶಾಂಕ್ ಸಿಂಗ್ ಹೋರಾಟ ವ್ಯರ್ಥ

ಇನ್ನು ಈ ಇನ್ನಿಂಗ್ಸ್ ನಲ್ಲಿ ಪಂಜಾಬ್ ಪರ ಅಂತಿಮ ಹಂತದಲ್ಲಿ ಹೋರಾಟ ನಡೆಸಿದ್ದು ಶಶಾಂಕ್ ಸಿಂಗ್, ಕೇವಲ 30 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 3 ಬೌಂಡರಿ ನೆರವಿನಿಂದ ಅಜೇಯ 61 ರನ್ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಿಲಿಲ್ಲ. ಅಂತಿಮವಾಗಿ ಪಂಜಾಬ್ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿ ಕೇವಲ 6 ರನ್ ಅಂತರದಲ್ಲಿ ಸೋಲು ಕಂಡಿತು.

ಆರ್ ಸಿಬಿ ಪರ ಭುವನೇಶ್ವರ್ ಕುಮಾರ್ ಮತ್ತು ಕೃನಾಲ್ ಪಾಂಡ್ಯ ತಲಾ 2 ವಿಕೆಟ್ ಪಡೆದರೆ, ಯಶ್ ದಯಾಳ್, ಜಾಶ್ ಹೇಜಲ್ ವುಡ್ ಮತ್ತು ರೊಮಾರಿಯೋ ಶೆಫರ್ಡ್ ತಲಾ 1 ವಿಕೆಟ್ ಪಡೆದರು.

]]>
Wed, 04 Jun 2025 00:59:20 +0530 shivuagrico
Karnataka rain alert&ಮುಂಗಾರು ಮಳೆ ಅರ್ಭಟಕ್ಕೆ ತಾತ್ಕಾಲಿಕ ವಿರಾಮ,ಜೂನ್ ತಿಂಗಳಲ್ಲಿ ಹೇಗಿರಲಿದೆ ಮಳೆ ಮುನ್ಸೂಚನೆ? https://krushirushi.in/Karnataka-rain-alert-2140 https://krushirushi.in/Karnataka-rain-alert-2140 Karnataka rain alert-ಮುಂಗಾರು ಮಳೆ ಅರ್ಭಟಕ್ಕೆ ತಾತ್ಕಾಲಿಕ ವಿರಾಮ,ಜೂನ್ ತಿಂಗಳಲ್ಲಿ ಹೇಗಿರಲಿದೆ ಮಳೆ ಮುನ್ಸೂಚನೆ?


ಮುಂಗಾರು ಮಳೆ ಆರ್ಭಟ ತಾತ್ಕಾಲಿಕವಾಗಿ ಕಡಿಮೆ ಆಗಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡಕ್ಕೆ ಜೂನ್ ಮೂರರಿಂದ ಮತ್ತೆ ಅಲರ್ಟ್ ಘೋಷಿಸಲಾಗಿದೆ. ಅಲ್ಲಿಯವರೆಗೆ ಮೋಡ-ಬಿಸಿಲಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜೂನ್‌ 4 ರಿಂದ ಮತ್ತೆ ಮಳೆ ಜೋರು

ಬೆಂಗಳುರು ಸೇರಿದಂತೆ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಬೆಂಗಳೂರು, ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಭಾರೀ ಮಳೆಯಾಗಲಿದ್ದು ಜೂನ್ ನಾಲ್ಕರಂದು ಯೆಲ್ಲೋ ಅಲರ್ಟ್ ಕೊಡಲಾಗಿದೆ.

ಇಂದು ಎಲ್ಲೆಲ್ಲಿ ಮಳೆ?

ಜೂನ್ 1 ಭಾನುವಾರ,ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಹುತೇಕ ಕಡೆಗಳಲ್ಲಿ ಸಾಧಾರಣ ಮಳೆ, ಕೊಡಗು, ಚಿಕ್ಕಮಗಳೂರು, ಹಾಸನ, ಮೈಸೂರು, ಚಾಮರಾಜನಗರ ಮತ್ತು ಮಂಡ್ಯದಲ್ಲಿ ಅಲ್ಲಲಗಲಿ ಮಳೆ ಬರಲಿದೆ.

ಉಳಿದಂತೆ ಬಳ್ಳಾರಿ, ಬೆಂಗಳೂರು (ಗ್ರಾಮಾಂತರ), ಬೆಂಗಳೂರು (ನಗರ), ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆಯುವ ಸಾಧ್ಯತೆ ಇದೆ. ಅಂದರೆ, ಈ ಜಿಲ್ಲೆಗಳಲ್ಲಿ ಮಳೆ ಬರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.

ನಾಳೆಯ ಹವಾಮಾನ

ಜೂನ್-02 ಸೋಮವಾರದಂದು ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಹುತೇಕ ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಹಾಸನ, ಕೊಡಗು ಮತ್ತು ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಲಘು/ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.


ಜೂನ್ 5 ರಿಂದ ಜೂನ್‌ 7 ರವರೆಗಿನ ಹವಾಮಾನ

ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಸಾಧಾರಣ ಮಳೆ, ಗದಗ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಲಘು ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಬೀದರ್, ಹಾವೇರಿ, ಬೆಳಗಾವಿ, ಧಾರವಾಡ, ಕಲಬುರ್ಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆಯುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡು ಕರ್ನಾಟಕ:

ಬಳ್ಳಾರಿ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು (ಗ್ರಾಮಾಂತರ), ಬೆಂಗಳೂರು (ನಗರ), ಚಿಕ್ಕಮಗಳೂರು, ಕೋಲಾರ ಮತ್ತು ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಲಘು/ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಚಾಮರಾಜನಗರ, ದಾವಣಗೆರೆ, ಹಾಸನ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆಯುವ ಸಾಧ್ಯತೆ ಇದೆ. ಅಂದರೆ, ಈ ಜಿಲ್ಲೆಗಳಲ್ಲಿ ಮಳೆ ಬರುವ ಸಾಧ್ಯತೆ ತೀರಾ ಕಡಿಮೆ.

ಕರಾವಳಿ : ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಆಗಾಗ ಬಿಸಿಲು, ಮೋಡದ ಜೊತೆಗೆ ಅಲ್ಲಲ್ಲಿ ದಿನದಲ್ಲಿ 2 ಅಥವಾ 3 ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.

ಈ ವಾತಾವರಣವು ಜೂನ್ 4ರ ತನಕ ಮುಂದುವರಿಯುವ ಮುನ್ಸೂಚೆನೆ ಇದ್ದು, 5 ರಿಂದ ಹೆಚ್ಚಿನ ಅವಧಿಯೂ ಬಿಸಿಲಿನ ವಾತಾವರಣದ ಸಾಧ್ಯತೆ ಇದೆ.
ಈಗಿನಂತೆ ಜೂನ್ 10ರಿಂದ ಮತ್ತೆ ಮುಂಗಾರು ಸ್ವಲ್ಪ ಚುರುಕಾಗುವ ಲಕ್ಷಣಗಳಿವೆ. ಮಳೆ ಆರಂಭವಾಗಬಹುದು.

ಮಲೆನಾಡು : ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡ ಹಾಗೂ ದಿನದಲ್ಲಿ ಒಂದೆರಡು ಮಳೆಯ ಮುನ್ಸೂಚೆನೆ ಇದೆ.
ಜೂನ್ 4ರ ತನಕ ಈ ವಾತಾವರಣ ಮುಂದುವರಿಯಬಹುದು. ನಂತರ ಬಿಸಿಲು ಹಾಗೂ ಮೋಡದ ವಾತಾವರಣದ ಸಾಧ್ಯತೆಗಳಿದ್ದು, ಜೂನ್ 10ರಿಂದ ಸಾಮಾನ್ಯ ಮಳೆ ಪ್ರಾರಂಭವಾಗುವ ಸೂಚನೆಗಳಿವೆ. 

ಒಳನಾಡು : ಉತ್ತರ ಒಳನಾಡಿನ ಹಾವೇರಿ, ಧಾರವಾಡ, ಬೆಳಗಾವಿ, ಕಲಬುರ್ಗಿ ಜಿಲ್ಲೆಗಳ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಮೋಡ ಹಾಗೂ ಬಿಸಿಲಿನ ವಾತಾವರಣದ ಮುನ್ಸೂಚೆನೆ ಇದೆ.
ದಕ್ಷಿಣ ಒಳನಾಡಿನ ಮೈಸೂರಿನ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಮೋಡ ಹಾಗೂ ಬಿಸಿಲಿನ ವಾತಾವರಣದ ಮುನ್ಸೂಚೆನೆ ಇದೆ.
ಈಗಿನಂತೆ ಉತ್ತರ ಒಳನಾಡಿನಲ್ಲಿ ಮೋಡ ಹಾಗೂ ಬಿಸಿಲಿನ ವಾತಾವರಣ ಮುಂದುವರಿಯಲಿದ್ದು, ದಕ್ಷಿಣ ಒಳನಾಡಿನಲ್ಲಿ ಜೂನ್ 4ರಂದು ಒಂದೆರಡು ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚೆನೆ ಇದೆ. ನಂತರ ಬಿಸಿಲಿನ ವಾತಾವರಣ ಮುಂದುವರಿಯಲಿದೆ.

ಮುಂಗಾರು ದುರ್ಬಲಗೊಂಡಿದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ಚಟುವಟಿಕೆಗಳು ಉಂಟಾದರೆ ಮಾತ್ರ ಮುಂಗಾರು ಸ್ವಲ್ಪ ಚುರುಕಾಗಬಹುದು.
ಇದರ ಹೊರತು ಜೂನ್ ತಿಂಗಳಲ್ಲಿ ದುರ್ಬಲ ಮುಂಗಾರು ಮುಂದುವರಿಯಲಿದೆ.

SACHET-ಹವಾಮಾನ ಮುನ್ಸೂಚನೆಗೆ ಹೊಸ ಆ್ಯಪ್ ಬಿಡುಗಡೆ ಮಾಡಿದ ಪ್ರಧಾನಿ ಮೋದಿ,ನಿಮ್ಮ ಮೊಬೈಲ್ ನಲ್ಲೇ ಹೀಗೆ ತಿಳಿದುಕೊಳ್ಳಿ ಹವಾಮಾನ ಮುನ್ಸೂಚನೆ


ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಮನ್ ಕಿ ಬಾತ್‌ನಲ್ಲಿ (Mann Ki Baat)ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA)ದ CAP ಆಧಾರಿತ ಇಂಟಿಗ್ರೇಟೆಡ್ ಅಲರ್ಟ್ ಸಿಸ್ಟಮ್ ಸ್ಯಾಚೆಟ್ ಆಪ್‌ ಬಗ್ಗೆ ಉಲ್ಲೇಖಿಸಿದ್ದಾರೆ. ಈ ವ್ಯವಸ್ಥೆಯು ಭಾರತದಾದ್ಯಂತ ಲಭ್ಯವಿದ್ದು, ಅದರ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದಂತೆ ಭೂ ಗುಪ್ತಚರವನ್ನು ಬಳಕೆ ಮಾಡಿಕೊಂಡು ಬಹು ತಂತ್ರಜ್ಞಾನದ ಮೂಲಕ ಮುಂಚಿನ ಎಚ್ಚರಿಕೆಯ ನೈಜ-ಸಮಯದ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ.

ಸಚೇತ್‌ನ ವೆಬ್‌ಸೈಟ್ ಪ್ರಕಾರ,"XX-NDMAEW ಹೆಡರ್‌ನಿಂದ ಎಸ್‌ಎಂಎಸ್‌ ಮೂಲಕ ವಿಪತ್ತು ಎಚ್ಚರಿಕೆಗಳನ್ನು ಸ್ವೀಕರಿಸಿಕೊಳ್ಳಬಹುದಾಗಿದ್ದು, ಬಳಕೆದಾರರು ಜಾಗರೂಕರಾಗಿರಬಹುದಾಗಿದೆ. ಆಯಪ್ ಅನ್ನು ಪ್ರತ್ಯೇಕವಾಗಿ "ಹವಾಮಾನ ಮುನ್ಸೂಚನೆ ಮಾಹಿತಿಗಾಗಿ ಮತ್ತು ಬಹು ಸ್ಥಳಗಳ ಚಂದಾದಾರಿಕೆ ಸೌಲಭ್ಯದೊಂದಿಗೆ ವಿಪತ್ತು ಎಚ್ಚರಿಕೆಗಳನ್ನು ಸ್ವೀಕರಿಸಲು ಬಳಸಬಹುದು". ಎಂದು ಮೋದಿ ತಿಳಿಸಿದ್ದಾರೆ.

ಬಳಕೆದಾರರು ತಮ್ಮ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಬ್ರೌಸರ್‌ಗಳಲ್ಲಿ ಬ್ರೌಸರ್ ನೋಟಿಫಿಕೇಶ್‌ ಅನ್ನು ಪಡೆಯುತ್ತಾರೆ. ಬಳಕೆದಾರರು ವಿಪತ್ತು ಸಂಬಂಧಿತ ಮಾಹಿತಿಯ ಅಧಿಸೂಚನೆಯನ್ನು ತತ್‌ ಕ್ಷಣವೇ ಪಡೆಯಬಹುದು ಎಂದು ವೆಬ್‌ಸೈಟ್ ನಲ್ಲಿ ಉಲ್ಲೇಖ ಮಾಡಿದೆ.

ಆರ್‌ಎಸ್‌ಎಸ್ ಫೀಡ್‌ನಲ್ಲಿಯೂ ಎಚ್ಚರಿಕೆಯನ್ನು ಪ್ರಕಟಿಸಲಾಗುತ್ತದೆ. ಅಲ್ಲದೆ ಸುದ್ದಿ ಸಂಸ್ಥೆಗಳು ಇದಕ್ಕೆ ಚಂದಾದಾರರಾಗಿದ್ದರೆ ಮುಂಚಿತವಾಗಿ ಈ ಬಗ್ಗೆ ಮಾಹಿತಿ ಪ್ರಕಟ ಮಾಡಬಹುದಾಗಿದೆ. ಈ ಮೂಲಕ ಮುಂದೆ ಆಗುವ ದೊಡ್ಡ ಮಟ್ಟದ ಅನಾಹುತಗಳನ್ನು ತಪ್ಪಿಸಬಹುದಾಗಿದೆ.

ವೆಬ್‌ಸೈಟ್‌ನಲ್ಲಿ ಪ್ರಕಟವಾದ ಮಾಹಿತಿಯ ಪ್ರಕಾರ, ಆಪ್‌ ಅನ್ನು ಉತ್ತರ ಪ್ರದೇಶದಲ್ಲಿ ಸುಮಾರು 5.4 ಕೋಟಿ ಜನರು, ರಾಷ್ಟ್ರ ರಾಜಧಾನಿಯಲ್ಲಿ 4.6 ಕೋಟಿ ಜನರು, ಮಹಾರಾಷ್ಟ್ರದಲ್ಲಿ 1.1 ಕೋಟಿ ಜನರು ಡೌನ್‌ಲೋಡ್ ಮಾಡಿದ್ದಾರೆ.

ನೀವೂ ಆ್ಯಪ್ ಮೂಲಕ ಮಳೆ ಮುನ್ಸೂಚನೆ ತಿಳಿಯಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://play.google.com/store/apps/details?id=com.cdotindia.capsachet

ನಂತರ ಆ್ಯಪ್ ಡೌನಲ್ಲೋಡ್ ಮಾಡಿಕೊಳ್ಳಿ

ನಂತರ ಮುಂದೆ ಮೇಲೆ ಕ್ಲಿಕ್ ಮಾಡಿ

ನಂತರ ಮತ್ತೆ ಮುಂದೆ ಮೇಲೆ ಕ್ಲಿಕ್ ಮಾಡಿ

ನಂತರ /(Yes) ಮಾರ್ಕ್ ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯನ್ನು ನಮೂದಿಸಿ,ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ

ನಂತರ ಈ ಕೆಳಗಿನಂತೆ ನಿಮಗೆ ಹವಾಮಾನ ಮಾಹಿತಿ ಸಿಗಲಿದೆ

]]>
Tue, 03 Jun 2025 07:14:02 +0530 shivuagrico
Secondary agriculture&50 ರಿಂದ 75% ಸಬ್ಸಿಡಿಯಲ್ಲಿ ಸೆಕೆಂಡರಿ ಕೃಷಿ ಯೋಜನೆಗೆ ಅರ್ಜಿ ಆಹ್ವಾನ https://krushirushi.in/Secondary-agriculture-2139 https://krushirushi.in/Secondary-agriculture-2139 Secondary agriculture-50 ರಿಂದ 75% ಸಬ್ಸಿಡಿಯಲ್ಲಿ ಸೆಕೆಂಡರಿ ಕೃಷಿ ಯೋಜನೆಗೆ ಅರ್ಜಿ ಆಹ್ವಾನ

ಸೆಕೆಂಡರಿ ಅಗ್ರಿಕಲ್ಚರ್ ಅಡಿ ಜೇನು ಸಾಕಾಣೆ, ಬೇವಿನ ಉತ್ಪನ್ನಗಳು, ಕಾರ್ನ್ ಪೌಡರ್ ತಯಾರಿಕೆ, ಹೈಡ್ರೋಪೋನಿಕ್ಸ್, ಕೈತೋಟ, ಅಡಿಕೆ ಹಾಳೆ ಉತ್ಪನ್ನಗಳು, ಅಲೊವೆರಾ ಉತ್ಪನ್ನಗಳು, ಬಿದಿರು ಉತ್ಪನ್ನಗಳು, ಅಂಟು ಉತ್ಪಾದನೆ, ರೇಷ್ಮೆ ಉತ್ಪನ್ನಗಳು, ಕುರಿಮರಿ ಹೊಸ ತಳಿ ಸಾಕಣೆ, ಹೋರಿ ಸಾಕಣೆ, ಡಯಾಂಚ ಬೆಳೆಸುವ ಮೂಲಕ ಪರ್ಯಾಯ/ಪೂರಕ ಉದ್ಯಮಗಳಿಗೆ ಉತ್ತೇಜಿಸುವುದು.

ಸೆಕೆಂಡರಿ  ಕೃಷಿ ಮಾರ್ಗಸೂಚಿ 2025-26

1. ಸೆಕೆಂಡರಿ  ಕೃಷಿ ಕುರಿತು ಹಿನ್ನೆಲೆ, ದೃಷ್ಟಿಕೋನ, ಪರಿಕಲ್ಪನೆ:

 

ಕರ್ನಾಟಕ ರಾಜ್ಯದ ರೈತರ ದಾಯ ದ್ವಿಗುಣಗೊಳಿಸುವನಿಟ್ಟಿನಲ್ಲಿ ರಾಜ್ಯ ಸೆಕೆಂಡರಿ ಕೃಷಿ ನಿರ್ದೇಶನಾಲಯವು ಮಾನ್ಯ ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷೆಯ ಪರಿಕಲ್ಪನೆಯಾಗಿರುತ್ತದೆ. ರಾಷ್ಟ್ರದಲ್ಲೇಪ್ರಥಮ ಬಾರಿಗೆ ಮಾದರಿಯಾಗಿ ಕರ್ನಾಟಕ ರಾಜ್ಯದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲು ಯೋಜಿಸಲಾಗಿರುತ್ತದೆ.

ಕೃಷಿಯ ಪ್ರಾಥಮಿಕ ಉತ್ಪನ್ನಗಳನ್ನು, ಸ್ಥಳೀಯ ಮಾನವಸಂಪನ್ಮೂಲ ಮತ್ತು ಕೌಶಲ್ಯಗಳನ್ನು ಬಳಸಿ ಮೌಲ್ಯವರ್ಧನೆ ಮಾಡುವಮೂಲಕ ರೈತರಿಗೆ ಹೆಚ್ಚಿನ ಆದಾಯ ಒದಗಿಸುವಂತಹ ಚಟುವಟಿಕೆ /ಕಾರ್ಯಗಳನ್ನು ಸೆಕೆಂಡರಿ   ಕೃಷಿ ಎಂದು ವ್ಯಾಖ್ಯಾನಿಸಲಾಗಿದೆ.

ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಪ್ರಾಣಿಜನ್ಯ ಉತ್ಪನ್ನಗಳಸಂಸ್ಕರಣೆ, ಗ್ರಾಮೀಣ ಮತ್ತು ಗುಡಿ ಕೈಗಾರಿಕೆಗಳ ಮೂಲಕ ರೈತರಿಗೆಹೆಚ್ಚಿನ ಆದಾಯ ತರಲು ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನಉದ್ಯೋಗ ಸೃಜನೆಗೆ, ಕೃಷಿ ಉತ್ಪನ್ನಗಳಿಂದ ಉಪ ಉತ್ಪನ್ನಗಳತಯಾರಿಕೆಗೆ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲು ಸುಸ್ಥಿರಹಾಗೂ ಕ್ರೋಡೀಕೃತ ವ್ಯವಸ್ಥೆಗಾಗಿ ಪ್ರತ್ಯೇಕ ರಾಜ್ಯ ಸೆಕೆಂಡರಿ ಕೃಷಿನಿರ್ದೇಶನಾಲಯವನ್ನು ಸರ್ಕಾರದ ಆದೇಶ ಸಂಖ್ಯೆ: .ಎಸ್. ಸಿ/73/2021 (ಪಿ.-3) ಬೆಂಗಳೂರು, ದಿನಾಂಕ: 18-01-2022 ರನ್ವಸ್ಥಾಪಿಸಲಾಗಿದೆ.  

ಸೆಕೆಂಡರಿ ಕೃಷಿ ನಿರ್ದೇಶನಾಲಯವು ಕರ್ನಾಟಕ ರಾಜ್ಯದ ರೈತರಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಪ್ರಮುಖ ಸಂಸ್ಥೆಯಾಗಿರುತ್ತದೆ. ಸದರಿ ಆದೇಶದಲ್ಲಿ ಕೃಷಿ ಹಾಗೂ ಪೂರಕಚಟುವಟಿಕೆಗಳಿಗೆ ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆಅನುಷ್ಠಾನೊಳ್ಳಲು ಅನುವಾಗುವಂತೆ ಸೆಕೆಂಡರಿ ಕೃಷಿನಿರ್ದೇಶನಾಲಯವು ಕೃಷಿ, ಜಲಾನಯನ ಅಭಿವೃದ್ಧಿ, ಪಶುಸಂಗೋಪನೆ, ತೋಟಗಾರಿಕೆ, ರೇಷ್ಮೆ, ಕೃಷಿ ಮಾರುಕಟ್ಟೆ, ಅರಣ್ಯ ಹಾಗೂ ಇನ್ನಿತರೆಇಲಾಖೆಯ ಅಧಿಕಾರಿಗಳನ್ನು ಒಳಗೊಂಡಿರುತ್ತದೆ.

ಮಾರ್ಗದರ್ಶನಕ್ಕಾಗಿ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿರಾಜ್ಯಮಟ್ಟದ ಚಾಲನಾ ಸಮಿತಿ ಹಾಗೂ ಚಟುವಟಿಕೆಗಳಅನುಷ್ಠಾನಕ್ಕಾಗಿ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯನ್ನುರಚಿಸಲಾಗಿರುತ್ತದೆ.

ರೈತರ ಅದಾಯವನ್ನು ಹೆಚ್ಚಿಸುವ ಧ್ಯೇಯದೊಂದಿಗೆ ರಾಷ್ಟ್ರದಲ್ಲಿಯೇಮೊದಲ ಬಾರಿಗೆ ಸೆಕೆಂಡರಿ ಕೃಷಿ ನಿರ್ದೇಶನಾಲಯವನ್ನು ಸ್ಥಾಪಿಸಲಾಗಿದೆ. ರೈತ ಉತ್ಪಾದಕ ಸಂಸ್ಥೆಗಳನ್ನು ಬಳಸಿ ಕೃಷಿಯ ಪ್ರಾಥಮಿಕ ತ್ಪನ್ನಗಳಿಗೆಹೆಚ್ಚಿ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸಲು ಇದುಸಹಕಾರಿಯಾಗಲಿದೆ ಎಂಬುದಾಗಿ ಘೋಷಿಸಿಲಾಗಿದೆ.

 

 

 

 

ಯೋಜನೆಯ ದೃಷ್ಟಿಕೋನ:

ಕೃಷಿಯಲ್ಲಿ ಲ್ಲಿಯವರೆಗೆಇಳುವರಿಹೆಚ್ಚಳಕ್ಕೆ ಹೆಚ್ಚಿನಮಹತ್ವವನ್ನು ನೀಡಲಾಗುತ್ತಿದ್ದು, ಸೆಕೆಂಡರಿ ಕೃಷಿ ನಿರ್ದೇಶನಾಲಯಕಾರ್ಯಕ್ರಮಗಳ ಅನುಷ್ಠಾನ ಮೂಲಕ ಉಪ ಉತ್ಪನ್ನಗಳನ್ನುತಯಾರಿಸಲು ಉತ್ತೇಜನ ನೀಡುವುದರಿಂದ (ಇಳುವರಿೆಚ್ಚಳಕ್ಕೆಹೋಲಿಸಿದಾಗ) ಸ್ಥಳೀಯ ಉದ್ಯೋಗ ಸೃಜನೆಯಿಂದ ಆರ್ಥಿಕವೃದ್ಧಿ ಮಹತ್ವ ನೀಡಿದಂತಾಗುತ್ತದೆ.

 

1. ಪ್ರಾಥಮಿಕ ಕೃಷಿ : ಕೃಷಿ ಉತ್ಪನ್ನಗಳನ್ನು ಉತ್ಪಾದಿಸುವುದು

 

2. ಸೆಕೆಂಡರಿ ಕೃಷಿ: ಸ್ಥಳೀಯವಾಗಿ ಲಭ್ಯವಿರುವ ಕೃಷಿ ಮತ್ತು ಇತರೆಜೈವಿಕ ಸಂಪನ್ಮೂಲಗಳ ಪ್ರಾಥಮಿಕ ಉತ್ಪನ್ನ ಮತ್ತುಉಪ-ಉತ್ಪನ್ನಗಳನ್ನು ಕಚ್ಚಾ ವಸ್ತುವಾಗಿ ಬಳಸಿಕೊಂಡು ಸಂಸ್ಕರಣೆ, ಮೌಲ್ಯವರ್ಧನೆ, ಪ್ಯಾಕಿಂಗ್ ಹಾಗೂ ಸೂಕ್ತ ಬ್ರ್ಯಾಂಡ್ ಮೂಲಕಮಾರುಕಟ್ಟೆ ಕಲ್ಪಿಸಿ ರೈತರ ದಾಯ ದ್ವಿಗುಣಗೊಳಿಸುವುದು ಮುಖ್ಯಧ್ಯೇಯೋದ್ದೇಶವಾಗಿದೆ.

ಕೃಷಿ ಪ್ರಾಥಮಿಕ ಉತ್ಪನ್ನಗಳನ್ನು ಸಂಸ್ಕರಿಸಿ / ಮೌಲ್ಯವರ್ಧನೆಮಾಡುವುದರ ಮೂಲಕ ಅವುಗಳಿಗೆ ಹೆಚ್ಚಿ ಮೌಲ್ಯಒದಗಿಸಿದಂತಾಗುತ್ತದೆ.

 

ಕೃಷಿ ಸಂಸ್ಕರಣೆಯಲ್ಲಿ ನಾಲ್ಕು ವಿಧಗಳಿವೆ.

 

(i) ಪ್ರಾಥಮಿಕ ಸಂಸ್ಕರಣೆ:  ಭೌತಿಕರಾಸಾಯನಿಕಬದಲಾವಣೆಗಳಿಲ್ಲದೆ ಉತ್ಪನ್ನಗಳನ್ನು ಸಂಸ್ಕರಿಸುವುದು.

ಉದಾಹರಣೆ: ಸ್ವಚ್ಛತೆ, ವಿಂಗಡಣೆ, ವರ್ಗೀಕರಿಸುವುದು, ಇತ್ಯಾದಿಗಳನ್ನು           ಒಳಗೊಂಡಿರುತ್ತದೆ.

 

(ii) ದ್ವಿತೀಯ ಹಂತದ ಸಂಸ್ಕರಣೆ:  ಪ್ರಾಥಮಿಕ ಉತ್ಪನ್ನ/ಉಪಉತ್ಪನ್ನಗಳನ್ನು (ಆಹಾರ ಆಹಾರೇತರ) ಸ್ಥಳೀಯ ಬೇಡಿಕೆಗೆಅನುಗುಣವಾಗಿ ಭೌತಿ ಮತ್ತು ಾಸಾಯನಿಕ ಬದಲಾವಣೆಗಳಮೂಲಕ ಹೆಚ್ಚಿನ ಬಾಳಿಕೆ ಬರುವಂತೆ ಸರಳ ಸಂಸ್ಕರಣೆಗೆ ಒಳಪಡಿಸುವುದು.

ಉದಾಹರಣೆ: ಉಪ್ಪಿನಕಾಯಿ, ಪಾಪಡ್, ಕೆಚಪ್ಆಹಾರಉತ್ಪನ್ನಗಳು

                      ಕಾಂಪೋಸ್ಟ್, ಚಾರ್ ಕೋಲ್ಆಹಾರೇತರಉತ್ಪನ್ನಗಳು

 

(iii) ತೃತೀಯ ಹಂತದ ಸಂಸ್ಕರಣೆ: ದ್ವಿತೀಯ ಹಂತದಲ್ಲಿ ಸಂಸ್ಕರಿಸಿದಉತ್ಪನ್ನಗಳನ್ನು ಇನ್ನೂ ಹೆಚ್ಚಿನ ಸಂಸ್ಕರಣೆಗೆ ಒಳಪಡಿಸುವುದು. ಇದು ಹೆಚ್ಚಿನ ಬಂಡವಾಳ ಹಾಗೂ ತಾಂತ್ರಿಕತೆಗಳನ್ನುಒಳಗೊಂಡಿರುತ್ತದೆ.

ಉದಾಹರಣೆ: ತಿನ್ನಲು ಸಿದ್ಧ (ready-to-eat) / ಬಿಸಿಮಾಡಿ ಊಟ ಮಾಡುವ ಆಹಾರಗಳು (heat-and-serve foods).

 

(iv) ಉನ್ನತ ಮಟ್ಟದ ಸಂಸ್ಕರಣೆ: ಇನ್ನೂ ಮೇಲ್ದರ್ಜೆ ಹೊಂದಿದ ಉನ್ನತಮಟ್ಟದ ಸಂಸ್ಕರಿತ ಉತ್ಪನ್ನಗಳು. ದ್ವಿತೀಯ ಹಂತದ ಸಂಸ್ಕರಿಸಿದಉತ್ಪನ್ನಗಳನ್ನು ಉಪಯೋಗಿಸಿಕೊಂಡು ಸಂಸ್ಕರಿಸಲಾಗುತ್ತದೆ.  ಇದು ಅತೀ ಹೆಚ್ಚಿನ ಬಂಡವಾಳ ಹಾಗೂ ತಾಂತ್ರಿಕತೆಗಳನ್ನುಒಳಗೊಂಡಿರುತ್ತದೆ.

 

2. ಸೆಕೆಂಡರಿ  ಕೃಷಿಯ  ಗುರಿ , ಉದ್ದೇಶಗಳು ಮತ್ತು ಸಹಯೋಗಇಲಾಖೆಗಳು / ಸಂಸ್ಥೆಗಳು

2.1 ಸೆಕೆಂಡರಿ ಕೃಷಿಯ ಗುರಿ:  

ಕೃಷಿ ಪ್ರಾಥಮಿಕ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡುವುದರಮೂಲಕ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಅವಕಾಶಗಳನ್ನುಸೃಷ್ಟಿಸಿ ರೈತರ ಆದಾಯವನ್ನು ಹೆಚ್ಚಿಸುವುದು.

 

2.2 ಸೆಕೆಂಡರಿ  ಕೃಷಿಯ  ಉದ್ದೇಶಗಳು

ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳ ಮೂಲಕ ಉದ್ಯೋಗಮತ್ತು ರೈತರ ಆದಾಯವನ್ನು ಹೆಚ್ಚಿಸುವುದು. 
ರೈತ ಕುಟುಂಬಗಳಿಗೆ ವಿವಿಧ ಆದಾಯ ಮೂಲಗಳ ಸೃಜನೆಗೆಪೂರಕವಾಗಿ ಯೋಜನೆ ರೂಪಿಸಿ ಕೃಷಿಯಲ್ಲಿನ ಸಮಸ್ಯೆಗಳಪರಿಹಾರಕ್ಕೆ ಕ್ರಮವಹಿಸುವುದು.
ಕೌಶಲ್ಯ ಹಾಗೂ ಅರೆಕೌಶಲ್ಯವುಳ್ಳ ಗ್ರಾಮೀಣ ಮಾನವಸಂಪನ್ಮೂಲಗಳ ಮೂಲಕ ಕೈಗಾರಿಕೆಗಳ ಭಿವೃದ್ಧಿ ಹಾಗೂ ಸೇವಾವಿಭಾಗಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವುದು.
ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಒಗ್ಗೂಡಿಸಿ ಸ್ಥಳನಿರ್ದಿಷ್ಟ/ ಪ್ರಾದೇಶಿಕ ಉತ್ಪನ್ನಗಳನ್ನು ಸ್ಥಳೀಯವಾಗಿಪ್ರಸಿದ್ಧಗೊಳಿಸುವುದು
ಬೆಳೆ ಸಾಂದ್ರತೆ ಹೆಚ್ಚಿಸುವ ಕ್ರಮಗಳು ಮತ್ತು ಹೆಚ್ಚಿನ ಮೌಲ್ಯದಬೆಳೆಗಳ ವೈವಿಧ್ಯೀಕರಣ ಮೂಲಕ ಬೆಳೆ ಉತ್ಪಾದಕತೆಯಲ್ಲಿಸುಧಾರಣೆ.
ಕೃಷಿಯಿಂದ ಕೃಷಿಯೇತರ ಚಟುವಟಿಕೆ ಕೈಗೊಳ್ಳಲು ಪ್ರೇರೇಪಿಸುವುದು

2.3 :ಸಹಯೋಗ  ಇಲಾಖೆಗಳು

i. ಕೃಷಿ ಇಲಾಖೆ
ii. ತೋಟಗಾರಿಕೆ ಇಲಾಖೆ
iii. ಜಲಾನಯನ ಅಭಿವೃದ್ಧಿ ಇಲಾಖೆ
iv. ಪಶು ಸಂಗೋಪನಾ ಇಲಾಖೆ
v. ರೇಷ್ಮೆ ಇಲಾಖೆ
vi. ಮೀನುಗಾರಿಕೆ ಇಲಾಖೆ
vii. ಅರಣ್ಯ ಇಲಾಖೆ
viii. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ
ix. ಸಹಕಾರ ಇಲಾಖೆ
x. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
xi. ಕೆ. ಪಿ.ಟಿ.ಸಿ.ಎಲ್
xii. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (NRLM)

2.4: ಸಹಯೋಗ ಸಂಸ್ಥೆಗಳು

i.  ಕಬ್ಬು ನಿರ್ದೇಶನಾಲಯ, ಬೆಳಗಾವಿ
ii.  ಎಲ್ಲಾ ಕೃಷಿ / ತೋಟಗಾರಿಕೆ/ ಪಶು ವೈದ್ಯಕೀಯ ವಿಶ್ವವಿದ್ಯಾಲಯಗಳು
iii.  ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ, ಮೈಸೂರು
iv.  ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ - ನಬಾರ್ಡ್
v.  ಲೀಡ್ ಬ್ಯಾಂಕ
vi.  ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ
vii.  ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತುನಿಗಮ ನಿಯಮಿತ
viii.  ಇಕ್ರಿಸ್ಯಾಟ್ (ICRISAT), ಹೈದರಾಬಾದ್
ix.  ಮ್ಯಾನೇಜ್ (MANAGE), ಹೈದರಾಬಾದ್
x.  . . ಎಮ್. ಆರ್ (IIMR), ಹೈದರಾಬಾದ್
xi.  ಕೃಷಿ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟದಲ್ಲಿತೊಡಗಿಸಿಕೊಂಡ ಪ್ರತಿಷ್ಠಿತ ಸಂಸ್ಥೆಗಳು
xii. ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ತಲಘಟ್ಟಪುರ

2.5: ಸಹಯೋಗ ಇಲಾಖೆಗಳು/ ಸಂಸ್ಥೆಗಳು ಸೆಕೆಂಡರಿ ಕೃಷಿಚಟುವಟಿಕೆಗಳನ್ನು ಕೈಗೊಳ್ಳಲು ಪಾಲಿಸಬೇಕಾದ ಅಂಶಗಳು

1. ಸೆಕೆಂಡರಿ ಕೃಷಿ ಚಟುವಟಿಕೆಗಳ ಗುರುತಿಸುವಿಕೆ

2. ಚಟುವಟಿಕೆಗಳ ಆಯ್ಕೆ ಮತ್ತು ಯೋಜನಾ ವರದಿ ತಯಾರಿ

3. ಚಟುವಟಿಕೆಗಳ ಯಶಸ್ಸಿನ ಮೌಲ್ಯಮಾಪನ ಮತ್ತು ವರದಿತಯಾರಿಕೆ

 

2.5.1: ಸೆಕೆಂಡರಿ ಕೃಷಿ ಚಟುವಟಿಕೆಗಳ ಗುರುತಿಸುವಿಕೆ ಹಾಗೂ ಬೆಳೆವಾರು ಚಟುವಟಿಕೆಗಳ ಮ್ಯಾಪಿಂಗ್

    ರೈತರು ಕೃಷಿಯಲ್ಲಿ ಸಂಪನ್ಮೂಲಗಳನ್ನು ಸಮರ್ಪಕವಾಗಿಬಳಸಿಕೊಂಡು ಆರ್ಥಿಕವಾಗಿ ಮುಂದುವರೆಯಲ ತಾಲ್ಲೂಕಿನ ಮುಖ್ಯಬೆಳೆಗಳನ್ನು (ಉತ್ಪನ್ನ) ಆಯ್ಕೆ ಮಾಡಿ ಆದ್ಯತೆ ನೀಡುವುದು.

ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಚಟುವಟಿಕೆಗಳನ್ನುಗುರುತಿಸುವುದು
ಜಿಲ್ಲೆಗಳಲ್ಲಿ ಕ್ಷೇತ್ರ ಸಮೀಕ್ಷೆ ಕೈಗೊಂಡು, ಅದರಂತೆ, ಅವಶ್ಯಕತೆಗನುಗುಣವಾದ ಚಟುವಟಿಕೆಗಳನ್ನು ಗುರುತಿಸುವುದುಹಾಗೂ ವ್ಯಾಪಕ ಪ್ರಚಾರ ನೀಡುವುದು.
ಪ್ರಸ್ತುತ ಜಿಲ್ಲೆಗಳಲ್ಲಿ ಪ್ರಾರಂಭಿಸಿರುವ ಮಾದರಿ ಅಗ್ರಿಸ್ಟಾರ್ಟ್ಅಪ್ ಗಳನ್ನು ಗುರುತಿಸುವುದು. ಅವುಗಳ ಕಾರ್ಯವೈಖರಿ, ಮಾರುಕಟ್ಟೆ ಪ್ರಕ್ರಿಯೆ, ವಾಣಿಜ್ಯ ಪರಿಕಲ್ಪನೆ ಕುರಿತು ಅರಿವು ಮೂಡಿಸಿಇತರರನ್ನು ಪ್ರೇರೇಪಿಸುವುದು.
ಕೃಷಿ/ ತೋಟಗಾರಿಕೆ/ ಪಶು ವೈದ್ಯಕೀಯ ವಿಶ್ವ ವಿದ್ಯಾಲಯಗಳಲ್ಲಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಯಶಸ್ವಿ ಪ್ರಾಯೋಗಿಕಸಂಸ್ಥೆಗಳಲ್ಲಿನ ಇನ್ಕುಬೇಷನ್ ಸೆಂಟರ್ ಮುಖಾಂತರ ಆರಂಭಿಕಹಂತದ ಪರಿಕಲ್ಪನೆ ಬಗ್ಗೆ ಅರಿವು ಮೂಡಿಸುವುದು.
ಸಾರ್ವಜನಿಕ/ಖಾಸಗಿ ಅನುಷ್ಠಾನ ಮಾಡಲು ಅವಕಾಶವಿದ್ದಲ್ಲಿ, ನಿಯಮಾನುಸಾರ ಕ್ರಮ ಕೈಗೊಂಡು ಚಟುವಟಿಕೆಗಳನ್ನು ಗುರುತಿಸುವುದು.

2.5.2:  ಚಟುವಟಿಕೆಗಳ ಆಯ್ಕೆ ಮತ್ತು ಯೋಜನೆ ವರದಿ ತಯಾರಿ

ಚಟುವಟಿಕೆಗಳ ಆಯ್ಕೆಯಲ್ಲಿನ ಮಾನದಂಡಗಳು:

1. ಆರ್ಥಿಕ ವಿಶ್ಲೇಷಣಾ ಪದ್ಧತಿಗಳನ್ನು ಬಳಸಿ ರೈತರ ಆದಾಯಹೆಚ್ಚಿಸುವ ಚಟುವಟಿಕೆಗಳು
2. ಶ್ರಮ/ವೆಚ್ಚ/ಸಂಕೀರ್ಣತೆ ಆಧಾರದ ಮೇಲೆ ತೊಡಗಿಸಿಕೊಂಡಿರುವಚಟುವಟಿಕೆಗಳು
ಕಡಿಮೆ ಶ್ರಮ ಮತ್ತು ಹೆಚ್ಚಿನ ಪರಿಣಾಮ- ಸುಲಭವಾಗಿ, ಕಡಿಮೆಕಾಲಮಿತಿಯಲ್ಲಿ ಯಶಸ್ಸು ಪಡೆಯಬಹುದಾದ ಚಟುವಟಿಕೆಗಳನ್ನುಪರಿಗಣಿಸಬಹುದಾಗಿದೆ.
ಹೆಚ್ಚಿನ ಶ್ರಮ ಮತ್ತು ಹೆಚ್ಚಿನ ಪರಿಣಾಮ-  ಮುಖ್ಯ ಯೋಜನೆಗಳಿಗೆ ಅನುಗುಣವಾಗಿ ಪರಿಗಣಿಸಬಹುದಾಗಿದೆ
ಕಡಿಮೆ ಶ್ರಮ ಮತ್ತು ಕಡಿಮೆ ಪರಿಣಾಮ- ಹೆಚ್ಚು ಸೂಕ್ತವಲ್ಲದವರ್ಗ
ಹೆಚ್ಚಿನ ಶ್ರಮ ಮತ್ತು ಕಡಿಮೆ ಪರಿಣಾಮ- ಹೆಚ್ಚು ಸೂಕ್ತವಲ್ಲದವರ್ಗ

ಯೋಜನೆ ಆಯ್ಕೆಗೆ ಉದಾಹರಣೆಗಳು:

ಕ್ರ ಸಂ

ಯೋಜನೆಯ ಹೆಸರು

ಶ್ರಮ/ ವೆಚ್ಚ

ಪರಿಣಾಮ/ ಲಾಭ

ಶಿಫಾರಸ್ಸು

1

ಕೃಷಿ ತ್ಯಾಜ್ಯ ಸಂಸ್ಕರಣೆ

ಮಧ್ಯಮ

ಹೆಚ್ಚು

ಸೆಕೆಂಡರಿ ಕೃಷಿ ಯೋಜನೆಗಳಡಿಪರಿಗಣಿಸುವುದು.

2

ರೈತ ಉತ್ಪಾದಕ

ಸಂಸ್ಥೆಗಳ ಮಾರುಕಟ್ಟೆವೇದಿಕೆ/ ವ್ಯವಸ್ಥೆ

ಹೆಚ್ಚು

ಹೆಚ್ಚು

ಸೆಕೆಂಡರಿ ಕೃಷಿ ಯೋಜನೆಗಳಡಿಪರಿಗಣಿಸುವುದು.

3

ಪಾಲಿಹೌಸ್ ಕೃಷಿ

ಹೆಚ್ಚು

ಹೆಚ್ಚು

ಚಾಲ್ತಿ ಯೋಜನೆಗಳಡಿಪರಿಗಣಿಸುವುದು.

      ಶ್ರಮವನ್ನು ಕಡಿಮೆ, ಮಧ್ಯಮ ಮತ್ತು ಹೆಚ್ಚು ಎಂದು ವರ್ಗಗಳಾಗಿವಿಂಗಡಣೆ ಮಾಡಲು ಚಟುವಟಿಕೆಗಳಿಗೆ ತಗಲುವ ಸಮಯ, ಅನುದಾನಮತ್ತು ಸಂಕೀರ್ಣತೆಯನ್ನು ಪರಿಗಣಿಸಬಹುದಾಗಿದೆ. ಹಾಗೆಯೇ, ಲಾಭದವರ್ಗಗಳ ವಿಂಗಡಣೆಗೆ, ಮೂಲ ಆರ್ಥಿಕ ಬಂಡವಾಳ ಹೂಡಿಕೆ ಮೇಲಿನಪ್ರತಿಫಲದನ್ವಯ (Returns on investment-ROI) ಪರಿಗಣಿಸುವುದು.

2.5.3: ಚಟುವಟಿಕೆಗಳ ಯಶಸ್ಸಿನ ಮೌಲ್ಯಮಾಪನ ಮತ್ತು ವರದಿತಯಾರಿಕೆ:

1. ಯೋಜನೆಗಳ ಪ್ರಗತಿ ಪರಿಶೀಲನೆ:  ರೂಪಿಸಿದಕ್ರಿಯಾಯೋಜನೆಯಂತೆ  ಯೋಜನೆಗಳ ಮಧ್ಯಂತರ ಪ್ರಗತಿತಿಳಿಯಲು ಪ್ರಗತಿ ಪರಿಶೀಲನೆ
ಜಿಲ್ಲಾ ಮಟ್ಟದ  ಅನುಷ್ಠಾನ ಸಮಿತಿ
ಜಿಲ್ಲಾ ಮಟ್ಟದ  ತಾಂತ್ರಿಕ ಸಮಿತಿ
ರಾಜ್ಯ ಮಟ್ಟದ ಚಾಲನಾ ಸಮಿತಿ
ಇಲಾಖೆಗಳ ಕಾರ್ಯ ಪಡೆ

 

2. ಪರಿಣಾಮ ಪರಿಶೀಲನೆ:
ೋಜನೆಯ ಫಲಾನುಭವಿಗಳ ಸಂಖ್ಯೆ
ಶೇಕಡವಾರು ಸೆಕೆಂಡರಿ ಕೃಷಿ ಅಳವಡಿಕೆ (ಯೋಜನಾ ಪೂರ್ವ ಮತ್ತು ಯೋಜನಾ ನಂತರ)
ಆದಾಯ ಹೆಚ್ಚಳ other parameters - ಯೋಜನೆ ಅನುಷ್ಠಾನದ ಮೊದಲು ಮತ್ತು ನಂತರ
ಉದ್ಯೋಗ ಸೃಜನೆ

 

3 : ಸೆಕೆಂಡರಿ ಕೃಷಿಗೆ ಸಂಬಂಧಿಸಿದಂತೆ ರೈತರ ಆದಾಯ ಹೆಚ್ಚಿಸಲುನವೀನ ಪರಿಕಲ್ಪನೆಗಳು :

ಸೆಕೆಂಡರಿ ಕೃಷಿ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಕೆಲವುಪರಿಣಾಮಕಾರಿ ಯೋಜನೆಗಳ ಕುರಿತು

3.1 ಕೃಷಿ ತ್ಯಾಜ್ಯ ಬಳಸಿ ಹೆಚ್ಚಿನ ಆದಾಯ ಗಳಿಕೆ

3.2 ರೈತ ಉತ್ಪಾದಕ ಸಂಸ್ಥೆಗಳಿಗೆ ಸೀಮಿತವಾಗಿರುವ -ಮಾರುಕಟ್ಟೆ(Digital platform)

    ವೇದಿಕೆಯನ್ನು ಎಲ್ಲಾ ಮಾರಾಟ ಕೇಂದ್ರಗಳಿಗೆ ವಿಸ್ತರಣೆಮಾಡುವುದು.

3.3 ಗ್ರಾಮ ಮಟ್ಟದಲ್ಲಿ ಕೃಷಿ ತ್ಪನ್ನಗಳಿಗೆ ಅವಶ್ಯವಿರುವ ಎಲ್ಲಾ ಕೃಷಿಸಂಸ್ಕರಣಾ ಘಟಕಗಳನ್ನು ಒಂದ ಸೂರಿನಡಿ ಸ್ಥಾಪಿಸುವುದು(Common Facility Center for Agro Processing similar to CHSC) ಮತ್ತು ಸದರಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಯನ್ನುಪ್ರತ್ಯೇಕವಾಗಿ ಕಲ್ಪಿಸುವುದು
3.4 ಜಿಲ್ಲಾವಾರು ಇಲಾಖಾವಾರು ಮುಖ್ಯ ಬೆಳೆಗಳಿಗೆ ಆಹಾರಸರಪಳಿಯಡಿ ಬರುವ ಚಟುವಟಿಕೆಗಳ ಉತ್ತೇಜನ:
3.5 ಸ್ಥಳೀಯ ಉದ್ಯಮಗಳಿಗೆ ಉತ್ತೇಜನ ಹಾಗೂ ಭೌಗೋಳಿಕ ಸೂಚ್ಯಂಕ (Geographical indicator-GI ) ಉತ್ಪನ್ನಗಳಿಗೆ ಆದ್ಯತೆನೀಡುವುದು.
3.6 ಇತರೆ ಚಟುವಟಿಕೆಗಳ ಮೂಲಕ ಉತ್ತೇಜನ ಉದಾ: ಕೃಷಿಪ್ರವಾಸೋದ್ಯಮ

 

ವಿವರ ಕೆಳಗಿನಂತಿವೆ:

3.1 ಕೃಷಿ ತ್ಯಾಜ್ಯ ಬಳಸಿ ಹೆಚ್ಚಿನ ಆದಾಯ ಗಳಿಕೆ :

ಅ) ಬೆಳೆಯ ಅವಶೇಷಗಳು ಹಲವು ಕೈಗಾರಿಕೆಗಳಿಗೆ ಪೂರಕವಸ್ತುಗಳಾಗಿರುತ್ತವೆ.  ಆದ್ದರಿಂದ ಸಂಸ್ಕರಣೆಯಿಂದ ಇವುಗಳನ್ನುಹಲವಾರು ಕೈಗಾರಿಕೆಗಳಾಗಿ ರೂಪಿಸಬಹುದಾಗಿರುತ್ತದೆ.

 

ಉಪಯೋಗಗಳು: 

ಘನ ಇಂಧನವಾಗಿ ಬಳಸಬಹುದಾಗಿದೆ
ಗೊಬ್ಬರ ತಯಾರಿಕೆಗೆ ಮೂಲವಸ್ತುವಾಗಿ ಬಳಸಬಹುದಾಗಿದೆ
ಇತರೆ ಇಂಗಾಲ ಆಧಾರಿತ ರಾಸಾಯನಿಕಗಳ ತಯಾರಿಕೆಗಾಗಿಬಳಸಬಹುದಾಗಿದೆ

) ಕೃಷಿ ತ್ಯಾಜ್ಯಗಳಿಂದ ಕಾಂಪೋಸ್ಟ್ ತಯಾರಿಸುವುದು

 

3.2 ರೈತ ಉತ್ಪಾದಕ ಸಂಸ್ಥೆ ಕೇಂದ್ರೀಕೃತ  - ಮಾರುಕಟ್ಟೆವೇದಿಕೆಗಳು :

 

 ಕೃಷಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಹಲವಾರು ಖಾಸಗಿಮಾರುಕಟ್ಟೆಗಳಿದ್ದು, ರೈತ ಉತ್ಪಾದಕ ಸಂಸ್ಥೆಗಳಿಗೆ  ಕೇಂದ್ರೀಕೃತಮಾರುಕಟ್ಟೆ ವೇದಿಕೆ ರೂಪಿಸಿ,  ಸಮಗ್ರ ಮಾರುಕಟ್ಟೆ ಸಂಪರ್ಕ ಮತ್ತುತಮ್ಮ ಉತ್ಪನ್ನಗಳನ್ನು ಒಂದೇ ಸೂರಿನಡಿ  ಎಲ್ಲೆಡೆ ಮಾರಾಟಮಾಡಬಹುದಾಗಿದೆ.
ರೈತ ಉತ್ಪಾದಕ ಸಂಸ್ಥೆಗಳು ತಮ್ಮ ಉತ್ಪನ್ನಗಳಿಗೆ ಸಕ್ರಿಯವಾಗಿ ಖಾಸಗಿಮಾರುಕಟ್ಟೆಯಲ್ಲಿ ಪ್ರವೇಶ ಪಡೆಯಲು ಪ್ರತ್ಯೇಕ API (Application Programming Interface) ಹೊಂದಬಹುದಾಗಿದೆ. ಇದರಿಂದಾಗಿಖರೀದಿದಾರರ ಸಂಖ್ಯೆ ಹೆಚ್ಚಳವಾಗುವ ಜೊತೆಗೆ ಮಾಸ್ಟರ್ ಮಾರುಕಟ್ಟೆವೇದಿಕೆ ಸೃಜನೆಯಾಗುತ್ತದೆ.   ರೀತಿಯಾಗಿ ಸರ್ಕಾರದಿಂದ ರೂಪಿಸಿದಮಾರುಕಟ್ಟೆ ವೇದಿಕೆಯು ಎಲ್ಲಾ ರೈತ ಉತ್ಪಾದಕ ಸಂಸ್ಥೆಗಳಿಗೆ ತಮ್ಮಉತ್ಪನ್ನಗಳನ್ನು ಮಾರಾಟ ಮಾಡಲು ಸಹಕಾರಿಯಾಗುತ್ತದೆ.

                                                                                   

3.3 ಗ್ರಾಮ ಮಟ್ಟದಲ್ಲಿ ಕೃಷಿ ಉತ್ಪನ್ನಗಳಿಗೆ ಅವಶ್ಯವಿರುವ ಎಲ್ಲಾಕೃಷಿ ಸಂಸ್ಕರಣಾ ಘಟಕಗಳನ್ನು ಒಂದೇ ಸೂರಿನಡಿ ಸ್ಥಾಪಿಸುವುದು(Common Facility Center for Agro Processing similar to CHSC) ಮತ್ತು ಸದರಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಯನ್ನುಪ್ರತ್ಯೇಕವಾಗಿ ಕಲ್ಪಿಸುವುದು.

     ಜಿಲ್ಲೆಯ ಮುಖ್ಯ ಬೆಳೆಗಳನ್ನು ಆದರಿಸಿ ಸದರಿ ಕೃಷಿ ಉತ್ಪನ್ನಗಳನ್ನುಸೆಕೆಂಡರಿ ಕೃಷಿಗೆ ಪರಿಗಣಿಸಲು ಬೇಕಾದ  ಹಾಗೂ ಗ್ರಾಮ ಮಟ್ಟದಲ್ಲಿಅವಶ್ಯವಿರುವ ಎಲ್ಲಾ ಕೃಷಿ ಸಂಸ್ಕರಣಾ ಘಟಕಗಳನ್ನು ಒಂದೇ ಸೂರಿನಡಿಸ್ಥಾಪಿಸುವುದು. ಇದನ್ನು ಸ್ಥಳೀಯ ದ್ದಿಮೆದಾರರು / ಉತ್ತಮ ರೈತಉತ್ಪಾದಕ ಸಂಸ್ಥೆ /ಸ್ವಸಹಾಯ ಗುಂಪು ಇವರ ನೇತೃತ್ವದಲ್ಲಿ ಸ್ಥಾಪಿಸಲುಉದ್ದೇಶಿಸಲಾಗಿದೆ. ಮೂಲಭೂತ ಸೌಕರ್ಯಗಳನ್ನು ಬಳಸಿ ತಯಾರಿಸಲಾದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಯನ್ನು ಪ್ರತ್ಯೇಕವಾಗಿ ಕಲ್ಪಿಸುವುದು.

3.4 ಜಿಲ್ಲಾವಾರು ಇಲಾಖಾವಾರು ಮುಖ್ಯ ಬೆಳೆಗಳಿಗೆ ಆಹಾರ ಸರಪಳಿ (promotion of value chain activities for major crops of the district) ಯಡಿ ಬರುವ ಚಟುವಟಿಕೆಗಳ ಉತ್ತೇಜನ

      ಜಿಲ್ಲಾವಾರು ಸೆಕೆಂಡರಿ ಕೃಷಿಗೆ ಸಾಮರ್ಥ್ಯವಿರುವ ಚಟುವಟಿಕೆಗಳನ್ನುಆಯ್ಕೆ ಮಾಡುವುದು.

3.5 ಸ್ಥಳೀಯ ಉದ್ಯಮಗಳಿಗೆ ಉತ್ತೇಜನ ಹಾಗೂ ಭೌಗೋಳಿಕ ಸೂಚ್ಯಂಕ –(Geographical indicator-GI ) ಉತ್ಪನ್ನಗಳಿಗೆ ಆದ್ಯತೆ ನೀಡುವುದು.

     ಸ್ಥಳೀಯವಾಗಿ ಚಾಲ್ತಿಯಲ್ಲಿರುವ ಉದ್ಯಮಗಳಿಗೆ ಇನ್ನೂ ಹೆಚ್ಚಿನ ತಾಂತ್ರಿಕತೆಗಳನ್ನು

      ಉತ್ತೇಜಿಸುವ ಮೂಲಕ ಸೆಕೆಂಡರಿ ಕೃಷಿಯಲ್ಲಿ ಅಳವಡಿಸಬಹುದಾಗಿದೆ.

 

3.6 ಇತರೆ ಚಟುವಟಿಕೆಗಳ ಮೂಲಕ ಉತ್ತೇಜನ
ಕೃಷಿ ಪ್ರವಾಸೋದ್ಯಮ,
ಜೇನುಸಾಕಾಣಿಕೆ,
ಅಣಬೆ ಬೇಸಾಯ,
ಬಿದಿರು ಕೃಷಿ
ಕೃಷಿ-ಅರಣ್ಯ
ಅಡುಗೆ ಎಣ್ಣೆ ಉತ್ಪಾದನೆ
ಡೈರಿ ಉತ್ಪನ್ನಗಳು

 

4 : ಒಗ್ಗೂಡಿಸುವಿಕೆಯಡಿಯಲ್ಲಿ ಕೆಳಗಿನ ಕೇಂದ್ರ ಪುರಸ್ಕೃತ ಯೋಜನೆಗಳನ್ನು ಪರಿಗಣಿಸುವುದು

1. ಮುದ್ರಾ ಸಾಲಗಳು ,  Stand-Up India, Start-Up India
2. RKVY-RAFTAAR: to promote incubation facilities, enterprises etc
3. ರೈತ ಉತ್ಪಾದಕ ಸಂಸ್ಥೆಗಳು
4. ಕೃಷಿ ಬಂಡವಾಳ ನಿಧಿ (AIF)
5. ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬಧ್ಧಗೊಳಿಸುವಿಕೆ ಯೋಜನೆ (PMFME)  
6. ಸ್ಪೂರ್ತಿ ಯೋಜನೆ
7. ಖಾಧಿ ಮತ್ತು ಗ್ರಾಮೋದ್ಯೋಗ ಮಂಡಳಿ ಕಾರ್ಯಕ್ರಮಗಳು( MSME)
8. ಕೌಶಲ್ಯ ಅಭಿವೃದ್ದಿಗಾಗಿ  ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (NRLM)
9. ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶಾಭಿವೃದ್ದಿ ಪ್ರಾಧಿಕಾರ (NRAA)
10. ರಾಷ್ಟ್ರೀಯ ಪಶು ಸಂಗೋಪನಾ ಮಿಷನ್ (NLM)

ಇದೇ ರೀತಿ ವಿವಿಧ ಇಲಾಖೆಯಡಿ ಲಭ್ಯವಿರುವ ಯೋಜನೆಗಳನ್ನು ಪರಿಗಣಿಸುವುದು 5. ಸೆಕೆಂಡರಿ ಕೃಷಿಯ ಅನುಷ್ಠಾನ ಮಾರ್ಗಸೂಚಿ:

 

5.1  ಪೀಠಿಕೆ:

          ರೈತರ ಆದಾಯವನ್ನು ಹೆಚ್ಚಿಸುವ ಧ್ಯೇಯದೊಂದಿಗೆ ರಾಷ್ಟ್ರದಲ್ಲೇ ಮೊದಲ ಬಾರಿಗೆ ಸೆಕೆಂಡರಿ  ಕೃಷಿ ನಿರ್ದೇಶನಾಲಯವನ್ನು ಸ್ಥಾಪಿಸಲಾಗಿದೆ. ರೈತ ಉತ್ಪಾದಕರ ಸಂಸ್ಥೆಗಳನ್ನು ಬಳಸಿ ಕೃಷಿಯ ಪ್ರಾಥಮಿಕ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ, ಈ  ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸಲು ಸಹಕಾರಿಯಾಗಲಿದೆ ಎಂದು 2022-23ನೇ ಸಾಲಿನಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದ ಆಯವ್ಯಯದಲ್ಲಿ ಘೋಷಣೆಯಾಗಿದೆ.

         ಕರ್ನಾಟಕ ರಾಜ್ಯದ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ  ರಾಜ್ಯ ಸೆಕೆಂಡರಿ  ಕೃಷಿ ನಿರ್ದೇಶನಾಲಯವು ಮಾನ್ಯ ಮುಖ್ಯ ಮಂತ್ರಿಗಳ ಮಹತ್ವಾಕಾಂಕ್ಷಿ ಪರಿಕಲ್ಪನೆಯಾಗಿರುತ್ತದೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಪ್ರಾಣಿಜನ್ಯ ಉತ್ಪನ್ನಗಳ ಸಂಸ್ಕರಣೆ, ಗ್ರಾಮೀಣ ಮತ್ತು ಗುಡಿ ಕೈಗಾರಿಕೆಗಳ ಮೂಲಕ ರೈತರಿಗೆ ಹೆಚ್ಚಿನ ಆದಾಯ ತರಲು ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಉದ್ಯೋಗ ಸೃಜನೆಗೆ ಪೂರಕವಾಗಿ, ಕೃಷಿ ಉತ್ಪನ್ನಗಳಿಂದ ಉಪ ಉತ್ಪನ್ನಗಳ ತಯಾರಿಕೆಗೆ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲು ಸುಸ್ಥಿರ ಹಾಗೂ ಕ್ರೂಡೀಕೃತ ವ್ಯವಸ್ಥೆಗಾಗಿ ಪ್ರತ್ಯೇಕ ರಾಜ್ಯ ಸೆಕೆಂಡರಿ ಕೃಷಿ ನಿರ್ದೇಶನಾಲಯವನ್ನು ಸರ್ಕಾರದ ಆದೇಶ ಸಂ: ಎ ಎಸ್ ಸಿ/73/2021(ಪಿ-3), ಬೆಂಗಳೂರು, ದಿನಾಂಕ: 18-01-2022 ರನ್ವಯಅಧಿಸೂಚಿಸಲಾಗಿದೆ.

        ಸೆಕೆಂಡರಿ ಕೃಷಿ ನಿರ್ದೇಶನಾಲಯವು ಕರ್ನಾಟಕ ರಾಜ್ಯದ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಸಂಸ್ಥೆಯಾಗಿದ್ದು, ರಾಷ್ಟ್ರದಲ್ಲೇ ಪ್ರಪ್ರಥಮ ಮಾದರಿಯಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಯೋಜಿಸಲಾಗಿರುತ್ತದೆ.

ಸರ್ಕಾರದ ಆದೇಶ ಸಂಖ್ಯೆ: AGRI-AML/172/2023, ದಿನಾಂಕ: 06-09-2023 ರನ್ವಯ, ಸೆಕೆಂಡರಿ ಕೃಷಿ ನಿರ್ದೇಶನಾಯದಕಾರ್ಯಕ್ರಮಗಳ ಅನುಷ್ಠಾನ ಮಾರ್ಗಸೂಚಿಯನ್ನುಅನುಮೋದಿಸಲಾಗಿರುತ್ತದೆ. ಅದರಂತೆ ಕೃಷಿ ಹಾಗೂ ಕೃಷಿ ಸಂಬಂಧಿತಅವಶ್ಯವಿರುವ ಕ್ರಿಯಾಯೋಜನೆಯನ್ನು ಸೆಕೆಂಡರಿ ಕೃಷಿನಿರ್ದೇಶನಾಲಯದ ಮೂಲಕ ರಾಜ್ಯಾದ್ಯಂತಅನುಷ್ಠಾನಗೊಳಿಸಲಾಗುತ್ತದೆ.

5.2 : ಆಯವ್ಯಯ:

   2024-25ನೇ ಸಾಲಿನಲ್ಲಿ ಯೋಜನೆಯ ಅನುಷ್ಠಾನಕ್ಕಾಗಿಆಯವ್ಯಯದಲ್ಲಿ ರೂ.1.97 ಕೋಟಿಗಳ ಅನುದಾನವನ್ನು ನಿಗಧಿಪಡಿಸಲಾಗಿದೆ.

 

5.3 : ಯೋಜನೆಯ ಕಾರ್ಯ  ವ್ಯಾಪ್ತಿ

          ಕರ್ನಾಟಕ ರಾಜ್ಯದ ಹವಾಮಾನ ಆಧಾರಿತ ಕೃಷಿ ವಲಯದಆಧಾರದ ಮೇಲೆ ಐದು ಜಿಲ್ಲೆಗಳನ್ನು ಆಯ್ಕೆ ಮಾಡಿ ಅನುಷ್ಠಾನಮಾಡಲಾಗುವುದು. ಆಯ್ಕೆ ಮಾನದಂಡ ಮತ್ತು ಆಯ್ಕೆಯಾದ ಜಿಲ್ಲೆ ವಿವರ ಕೆಳಗಿನಂತಿದೆ.

 

 

ಕ್ರ ಸಂ

ಆಯ್ಕೆಯಾದ ಜಿಲ್ಲೆ

ಕೃಷಿ ವಲಯ

ತಾಲ್ಲೂಕುಗಳ ಸಂಖ್ಯೆ

1

ಕಲಬುರ್ಗಿ

ಈಶಾನ್ಯ ಅರೆಮಲೆನಾಡು ಮತ್ತು ಈಶಾನ್ಯ ಒಣ ವಲಯ

7

2

ವಿಜಯಪುರ

ಉತ್ತರ ಒಣ ವಲಯ

5

3

ದಾವಣಗೆರೆ

ಮದ್ಯಮ ಒಣ ವಲಯ ಮತ್ತು ದಕ್ಷಿಣ ಅರೆಮಲೆನಾಡು  ವಲಯ

6

4

ಮಂಡ್ಯ

ದಕ್ಷಿಣ ಒಣ ವಲಯ

7

5

ಚಿಕ್ಕಮಗಳೂರು

ದಕ್ಷಿಣ ಅರೆಮಲೆನಾಡು  ವಲಯ,

ಮದ್ಯಮ ಒಣ ವಲಯ ಮತ್ತು ಗುಡ್ಡಗಾಡು ವಲಯ

7

ಒಟ್ಟು

32

 

ಸೂಚನೆ:

1. ಆಯ್ಕೆಯಾದ ಐದು ಜಿಲ್ಲೆಗಳ ಎಲ್ಲಾ ತಾಲ್ಲೂಕುಗಳಲ್ಲಿ ವ್ಯಾಪಕ ಪ್ರಚಾರ ನೀಡಿ ಅನುಷ್ಠಾನ ಮಾಡಲು ಆದ್ಯತೆ ನೀಡುವುದು. 
2. ಯೋಜನೆಯ ಪ್ರದೇಶದಲ್ಲಿ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಚಾಲ್ತಿಯಲ್ಲಿರುವ ಕಾರ್ಯಕ್ರಮಗಳ ಅನುಷ್ಠಾನ ಜೊತೆಗೆ ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ಇಲಾಖಾವಾರು  ಸೆಕೆಂಡರಿ ಕೃಷಿ  ತಾಂತ್ರಿಕತೆಗಳನ್ನು ಗುರುತಿಸಿ ಅನುಷ್ಠಾನ ಮಾಡವುದು.

 

ಜಿಲ್ಲಾವಾರು ಸೆಕೆಂಡರಿ ಕೃಷಿಗೆ  ಸೂಕ್ತವಿರುವ ಚಟುವಟಿಕೆಗಳನ್ನು ಗುರುತಿಸುವ ಕುರಿತು

      ಕರ್ನಾಟಕ ರಾಜ್ಯದಲ್ಲಿ ಜಿಲ್ಲಾವಾರು ಬೆಳೆಗಳಲ್ಲಿ, ಕೃಷಿ ಹಾಗೂ ಕೃಷಿ ಸಂಬಂಧಿತ ವಲಯಗಳಲ್ಲಿ ಅಗಾಧವಾದ ವೈವಿಧ್ಯತೆಯನ್ನು ಕಾಣಬಹುದಾಗಿದೆ. ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಪದ್ಧತಿ, ಪಶು ಸಂಗೋಪನೆ, ರೇಷ್ಮೆ, ಮೀನುಗಾರಿಕೆ, ಅರಣ್ಯ ಇತ್ಯಾದಿಗಳ ಆಧಾರದಲ್ಲಿ ಜಿಲ್ಲೆಗಳಲ್ಲಿ ವಿಭಿನ್ನ ಚಟುವಟಿಕೆಗಳಿಗೆ ಅವಕಾಶವಿದ್ದು, ಸ್ಥಳೀಯ ಅವಶ್ಯಕತೆ ಹಾಗೂ ಬೇಡಿಕೆಯನುಸಾರ ಸೂಕ್ತ ಚಟುವಟಿಕೆಗಳನ್ನು ಕೈಗೊಂಡಲ್ಲಿ ರೈತರ ಆದಾಯವನ್ನು ವೃದ್ಧಿಸಬಹುದಾಗಿದೆ.

        ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಜಿಲ್ಲಾವಾರು ಸೆಕೆಂಡರಿ ಕೃಷಿಗೆಸೂಕ್ತವಾಗಿರುವ ಸಂಭಾವ್ಯ ಚಟುವಟಿಕೆಗಳನ್ನು ಸ್ಥಳೀಯ ಅವಶ್ಯಕತೆಗನುಗುಣವಾಗಿ ಗುರುತಿಸುವ ಅವಶ್ಯಕತೆ ಇರುತ್ತದೆ. ಈ ಕಾರ್ಯವನ್ನು ಕೈಗೊಳ್ಳಲು ಸೂಕ್ತ ಸಂಸ್ಥೆಯನ್ನು ಗುರುತಿಸಿ, ನಿಗಧಿತ ಸಮಯದಲ್ಲಿ ಜಿಲ್ಲಾವಾರು ಸೂಕ್ತವಾದ ಲಾಭದಾಯಕ ಸೆಕೆಂಡರಿ ಕೃಷಿ ಚಟುವಟಿಕೆಗಳ ಮಾಹಿತಿಯನ್ನು ಕ್ರೋಡೀಕರಿಸಿ ವರದಿಯನ್ನು ತಯಾರಿಸುವುದು. ಸದರಿ ಕಾರ್ಯವನ್ನು ಕೈಗೊಳ್ಳಲು ಸೂಕ್ತವಾದ ಸಂಸ್ಥೆಯನ್ನು ನಿಯಮಾನುಸಾರ ಆಯ್ಕೆ ಮಾಡುವುದು ಹಾಗೂ ಇದಕ್ಕೆ ತಗಲುವ ವೆಚ್ಚವನ್ನು ಸಂಬಂಧಿಸಿದ ಘಟಕದಡಿ ಭರಿಸುವುದು.

 

ಸೆಕೆಂಡರಿ ಕೃಷಿಯಲ್ಲಿ ಕೈಗೊಳ್ಳುವ ಕಾರ್ಯಕ್ರಮ/ ಚಟುವಟಿಕೆಗಳ ವಿವರ :        

       ಸೆಕೆಂಡರಿ ಕೃಷಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಿಂದ ಈ ಕೆಳಗಿನ ಘಟಕಗಳಡಿ ಕೈಗೊಳ್ಳುವ ಕಾರ್ಯಕ್ರಮ/ ಚಟುವಟಿಕೆಗಳಿಗೆ ರೂಪಿಸುವ ಯೋಜನಾ ವರದಿಗಳನ್ವಯ ಅನುದಾನ ನೀಡಲಾಗುವುದು. ಸೆಕೆಂಡರಿ ಕೃಷಿ ಚಟುವಟಿಕೆಗಳನ್ನು ಪ್ರಮುಖವಾಗಿ 3 ವಿಧವಾಗಿ ವಿಂಗಡಿಸಿದೆ.

ಅ)   ಉತ್ಪಾದಿತ ಬೆಳೆಗಳ ಮೌಲ್ಯವರ್ಧನೆ: ಜಿಲ್ಲಾವಾರು ಪ್ರಮುಖ ಬೆಳೆಗಳ ಆಹಾರ ಸರಪಳಿಯಡಿ ಬರುವ ಚಟುವಟಿಕೆಗಳ ಉತ್ತೇಜನ-“Type A” activities.

ಆ)  ಪರ್ಯಾಯ ಉದ್ಯಮಗಳಿಗೆ ಉತ್ತೇಜನ – “Type B” activities

)   ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಪಶು ಸಂಗೋಪನಾ ತ್ಯಾಜ್ಯಗಳನ್ನು ಬಳಸಿ ಕೈಗೊಳ‍್ಳಬಹುದಾದ ಚಟುವಟಿಕೆಗಳಿಗೆ ಉತ್ತೇಜನ- “Type –C “activities

(ಸೂಚನೆ: ಪಿ.ಎಮ್.ಎಫ್.ಎಮ್.ಇ. (PMFME) ಯೋಜನೆಯಡಿಕೈಗೊಳ್ಳಬಹುದಾದ ಚಟುವಟಿಕೆಗಳನ್ನು ಹೊರತುಪಡಿಸಿ (separate Food Processing Directorate) ಚಟುವಟಿಕೆಗಳಿಗೆ ಸೆಕೆಂಡರಿ ಕೃಷಿ ಯೋಜನೆಯಡಿ ಒತ್ತು ನೀಡುವುದು)

5.4 ತಾಂತ್ರಿಕ ಸಮಿತಿಗಳು:

1. ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ:  

ವೈಯಕ್ತಿಕ ಮತ್ತು ಗುಂಪು ಆಧಾರಿತ ಚಟುವಟಿಕೆಗಳ ಎಲ್ಲಾ ಯೋಜನಾ ವರದಿಗಳನ್ನು ಈ ಕೆಳಗಿನ ತಾಂತ್ರಿಕ ಸಮಿತಿಯು ಮಾರ್ಗಸೂಚಿಯನ್ವಯ ಪರಿಶೀಲಿಸಿ, ತನ್ನ ಶಿಫಾರಸ್ಸಿನೊಂದಿಗೆಅನುಮೋದನೆಗಾಗಿ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಗೆ ಸಲ್ಲಿಸುವುದು.

 

ಕ್ರ.ಸಂ

ಸದಸ್ಯರ ಹುದ್ದೆ

ಸ್ಥಾನ

1.

ಜಂಟಿ ಕೃಷಿ ನಿರ್ದೇಶಕರು  

ಅಧ್ಯಕ್ಷರು

2.

ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕರು ಅಥವಾ ಸಂಬಂಧಿಸಿದ ವಿಜ್ಞಾನಿಗಳು

ಸದಸ್ಯರು

3.

ಜಂಟಿ  ನಿರ್ದೇಶಕರು (ಕೈಗಾರಿಕೆ  ಮತ್ತು ವಾಣಿಜ್ಯ ಇಲಾಖೆ)

ಸದಸ್ಯರು

4.

ಉಪ ನಿರ್ದೇಶಕರು(ಪಶು ಸಂಗೋಪನೆ)

ಸದಸ್ಯರು

5.

ಉಪ ನಿರ್ದೇಶಕರು (ತೋಟಗಾರಿಕೆ)

ಸದಸ್ಯರು

6.

ಉಪ ನಿರ್ದೇಶಕರು (ರೇಷ್ಮೆ)

ಸದಸ್ಯರು

7.

ಉಪ ನಿರ್ದೇಶಕರು (ಮೀನುಗಾರಿಕೆ)

ಸದಸ್ಯರು

8

ಪ್ರಸ್ತಾಪಿಸಿದ ಯೋಜನಾ ವರದಿಯ ಸಂಬಂಧಿತ ಜಿಲ್ಲಾ ಮಟ್ಟದ ಅಧಿಕಾರಿಗಳು

ಸದಸ್ಯರು

9

ಗುರುತಿಸಲಾದ ಜಿಲ್ಲಾ ಸಂಪನ್ಮೂಲ ವ್ಯಕ್ತಿ

ಸದಸ್ಯರು

10

ಸಹಾಯಕ ಕೃಷಿ ನಿರ್ದೇಶಕರು (ವಿ. ತ)

ಸಂಚಾಲಕರು

 

ಪರಿಶೀಲಿಸಬೇಕಾದ ಮುಖ್ಯ ಅಂಶಗಳು :

1. ಮಾರ್ಗಸೂಚಿಯನ್ವಯ ಬಂಡವಾಳ ವೆಚ್ಚ (Capital Cost), ದುಡಿಮೆ ಬಂಡವಾಳ (Working Capital), DSCR (Debt Service Coverage Ratio), IRR (Internal Rate of Return) ಹಾಗೂ BC Ratio (Benefit Cost Ratio) ಅನುಪಾತಗಳನ್ನು ಪರಿಶೀಲಿಸುವುದು.
2. ಇತರೆ ಇಲಾಖೆಯಲ್ಲಿ ಈಗಾಗಲೇ ಸಹಾಯಧನದ ಪುನರಾವರ್ತನೆ (Duplicate) ಕುರಿತು ಪರಿಶೀಲನೆ.
3. ಚಾಲ್ತಿ ಯೋಜನೆಗಳಲ್ಲಿ ಕಡಿಮೆ ಸಹಾಯಧನ ಇದ್ದಲ್ಲಿ ಅಥವಾ ಪ್ರಸಕ್ತ ವರ್ಷದಲ್ಲಿ ಅನುದಾನ ಲಭ್ಯವಿಲ್ಲದ ಸಂದರ್ಭಗಳಲ್ಲಿ ಸದರಿ ಚಟುವಟಿಕೆಗಳನ್ನು ಸೆಕೆಂಡರಿ ಕೃಷಿ ಯೋಜನೆಯಡಿ ಪರಿಗಣಿಸುವುದು.
4. ಯೋಜನೆಯ ಕಾರ್ಯಸಾಧ್ಯತೆ (Feasibility/Viability) ಕುರಿತು ಪರಿಶೀಲನೆ.

 

2. ರಾಜ್ಯ ಮಟ್ಟದ ತಾಂತ್ರಿಕ ಸಮಿತಿ

ಸಮುದಾಯ ಸೆಕೆಂಡರಿ ಕೃಷಿ ಉದ್ದಿಮೆಗೆ ಸಂಬಂಧಿಸಿದ ಯಂತ್ರೋಪಕರಣಗಳ ಸ್ಥಾಪನೆಗೆ (ಬಾಡಿಗೆ ಆಧಾರಿತ ಸೇವಾ ಕೇಂದ್ರಮಾದರಿಯಂತೆ) ಸಂಬಂಧಿಸಿದ ಎಲ್ಲಾ ಯೋಜನಾ ವರದಿಗಳನ್ನು ಈ ಕೆಳಗಿನ ತಾಂತ್ರಿಕ ಸಮಿತಿಯು ಮಾರ್ಗಸೂಚಿಯನ್ವಯ ಪರಿಶೀಲಿಸಿ, ಸೂಕ್ತ ಯೋಜನಾ ವರದಿಯನ್ನು ಅನುಮೋದಿಸಿ ಸಂಬಂಧಿಸಿದ ಜಿಲ್ಲಾ ಮಟ್ಟದ ಸಮಿತಿಗೆ ಅನುಷ್ಠಾನಕ್ಕಾಗಿ ಕಳುಹಿಸುವುದು. ರಾಜ್ಯ ಮಟ್ಟದ ತಾಂತ್ರಿಕ ಸಮಿತಿಯಲ್ಲಿ ಅನುಮೋದನೆಗೊಂಡ ಯೋಜನಾ ವರದಿಗಳನ್ನು ರಾಜ್ಯ ಮಟ್ಟದ ಚಾಲನಾ ಸಮಿತಿ ಸಭೆಯ ಗಮನಕ್ಕೆ ಮಂಡಿಸುವುದು.

 

ಕ್ರ.ಸಂ

 

ಸದಸ್ಯರ ಹುದ್ದೆ

ಸ್ಥಾನ

1.

ನಿರ್ದೇಶಕರು , ರಾಜ್ಯ ಸೆಕೆಂಡರಿ ಕೃಷಿ ನಿರ್ದೇಶನಾಲಯ

ಅಧ್ಯಕ್ಷರು

2.

ಸಂಬಂಧಿಸಿದ ಕೃಷಿ ವಿಶ್ವ ವಿದ್ಯಾಲಯದ ಇನ್ಕುಬೇಷನ್ ಕೇಂದ್ರದ ವಿಜ್ಞಾನಿಗಳು

ಸದಸ್ಯರು

3.

ಜಂಟಿ ನಿರ್ದೇಶಕರು(ಪಶು ಸಂಗೋಪನೆ)*

ಸದಸ್ಯರು

4.

ಜಂಟಿ ನಿರ್ದೇಶಕರು (ತೋಟಗಾರಿಕೆ)*

ಸದಸ್ಯರು

5.

ಜಂಟಿ ನಿರ್ದೇಶಕರು (ರೇಷ್ಮೆ)*

ಸದಸ್ಯರು

6.

ಜಂಟಿ ನಿರ್ದೇಶಕರು( ಮೀನುಗಾರಿಕೆ)*

ಸದಸ್ಯರು

7

ಜಂಟಿ ಕೃಷಿ ನಿರ್ದೇಶಕರು(ಜಲಾನಯನ ಅಭಿವೃದ್ಧಿ)*

ಸದಸ್ಯರು

8

ಪ್ರಸ್ತಾಪಿಸಿದ ಯೋಜನಾ ವರದಿಯ ಸಂಬಂಧಿತ ರಾಜ್ಯ ಮಟ್ಟದ ನೋಡಲ್ ಅಧಿಕಾರಿಗಳು

ಸದಸ್ಯರು

9

ಜಂಟಿ ಕೃಷಿ ನಿರ್ದೇಶಕರು (ಸೆಕೆಂಡರಿ  ಕೃಷಿ ನಿರ್ದೇಶನಾಲಯ)*

ಸದಸ್ಯ ಕಾರ್ಯದರ್ಶಿಗಳು

        * ಆಯಾ ಇಲಾಖೆಯ ಸೆಕೆಂಡರಿ ಕೃಷಿ ಕಾರ್ಯಪಡೆ ಮುಖ್ಯಸ್ಥರು

 

ಪರಿಶೀಲಿಸಬೇಕಾದ ಮುಖ್ಯ ಅಂಶಗಳು :

1. ಮಾರ್ಗಸೂಚಿಯನ್ವಯ ಬಂಡವಾಳ ವೆಚ್ಚ (Capital Cost), ದುಡಿಮೆ ಬಂಡವಾಳ (Working Capital), DSCR (Debt Service Coverage Ratio), IRR (Internal Rate of Return) ಹಾಗೂ BC Ratio (Benefit Cost Ratio) ಅನುಪಾತಗಳನ್ನು ಪರಿಶೀಲಿಸುವುದು.
2. ಇತರೆ ಇಲಾಖೆಯಲ್ಲಿ ಈಗಾಗಲೇ ಸಹಾಯಧನದ ಪುನರಾವರ್ತನೆ (Duplicate) ಕುರಿತು ಪರಿಶೀಲನೆ.
3. ಚಾಲ್ತಿ ಯೋಜನೆಗಳಲ್ಲಿ ಕಡಿಮೆ ಸಹಾಯಧನ ಇದ್ದಲ್ಲಿ ಅಥವಾ ಪ್ರಸಕ್ತ ವರ್ಷದಲ್ಲಿ ಅನುದಾನ ಲಭ್ಯವಿಲ್ಲದ ಸಂದರ್ಭಗಳಲ್ಲಿ ಸದರಿ ಚಟುವಟಿಕೆಗಳನ್ನು ಸೆಕೆಂಡರಿ ಕೃಷಿ ಯೋಜನೆಯಡಿ ಪರಿಗಣಿಸುವುದು.
4. ಯೋಜನೆಯ ಕಾರ್ಯಸಾಧ್ಯತೆ (Feasibility/Viability) ಕುರಿತು ಪರಿಶೀಲನೆ.

 

5.5:  ಸೆಕೆಂಡರಿ ಕೃಷಿಯ ಮುಖ್ಯ ಘಟಕಗಳು

1. ವೈಯಕ್ತಿಕ ರೈತ ಫಲಾನುಭವಿಗಳಿಗೆ ಸಹಾಯಧನ
2. ರೈತ ಉತ್ಪಾದಕರ ಸಂಸ್ಥೆಗಳಿಗೆ /ಸ್ವಸಹಾಯ ಗುಂಪು/ಸಹಾಕಾರಿ ಸಂಘಗಳು/ ಸೊಸೈಟಿಗಳು ಇತ್ಯಾದಿಗಳಿಗೆ ಸಹಾಯಧನ
3. ಸಮುದಾಯ ಸೆಕೆಂಡರಿ ಕೃಷಿ ಉದ್ದಿಮೆಗೆ ಸಂಬಂಧಿಸಿದ ಯಂತ್ರೋಪಕರಣಗಳ ಸ್ಥಾಪನೆಗೆ (ಬಾಡಿಗೆ ಆಧಾರಿತ ಸೇವಾ ಕೇಂದ್ರ  ಮಾದರಿಯಂತೆ) ಸಹಾಯಧನ

ಯೋಜನಾ ವರದಿಯಲ್ಲಿ ಪರಿಗಣಿಸಬೇಕಾದ ಅಂಶಗಳು:

1. ಬಂಡವಾಳ ವೆಚ್ಚ (capital cost):
ಯಂತ್ರೋಪಕರಣಗಳು, ಸಲಕರಣೆಗಳು ಇತ್ಯಾದಿ
ಮೂಲಭೂತ ಸೌಕರ್ಯಗಳು: ಯಂತ್ರ ಸಾಮಗ್ರಿಗಳಿಗೆ ತಳಪಾಯ , ಶೆಡ್ ಇತ್ಯಾದಿ ತಾಂತ್ರಿಕ ಸಿವಿಲ್ ಕಾಮಗಾರಿಗಳು (ಒಟ್ಟು ಯೋಜನಾ ವೆಚ್ಚದ ಶೇ.30 ಕ್ಕೆ ಮೀರದಂತೆ).
2. ದುಡಿಮೆ ಬಂಡವಾಳ (working capital):  ಇದು ಕಚ್ಚಾ ಸಾಮಗ್ರಿಗಳು, ಕಾರ್ಮಿಕ ವೆಚ್ಚ, ಸಾಗಾಣಿಕೆ ವೆಚ್ಚ, ವಿದ್ಯುತ್ ಶುಲ್ಕ, ನೀರಿನ ಸೌಲಭ್ಯ ಇತ್ಯಾದಿಗಳ ವೆಚ್ವವನ್ನು ಒಳಗೊಂಡಿದೆ.
5.6 : ಸೆಕೆಂಡರಿ ಕೃಷಿ ಚಟುವಟಿಕೆ ಕೈಗೊಳ್ಳಲು ಸಹಾಯಧನ :

 

1. ವೈಯಕ್ತಿಕ ರೈತ ಫಲಾನುಭವಿಗಳಿಗೆ  ಸಹಾಯಧನ:   

ಅ) 3 ಲಕ್ಷದವರೆಗಿನ ಸಹಾಯಧನದ ಪ್ರಸ್ತಾವನೆಗಳಿಗೆ: ಎಲ್ಲಾ ವರ್ಗದ ರೈತರಿಗೆ ಕಿರು ಉದ್ಯಮವನ್ನು ಸ್ಥಾಪಿಸಲು/ ಮೇಲ್ದರ್ಜೆಗೇರಿಸಲು ಅನುವಾಗುವಂತೆ ಶೇ. 50 ಸಹಾಯಧನಅಥವಾ ಗರಿಷ್ಟ ಸಹಾಯಧನ ರೂ.3.00 ಲಕ್ಷಗಳು ಮೀರದಂತೆ, ಅರ್ಹಯೋಜನಾ ಪ್ರಸ್ತಾವನೆಗಳಿಗೆ ಜಿಲ್ಲಾ ಅನುಷ್ಟಾನ ಸಮಿತಿಯಲ್ಲಿಅನುಮೋದನೆ ಪಡೆದು ಸಹಾಯಧನ ನೀಡುವುದು.      

    ಫಲಾನುಭವಿಗಳು ಉಳಿಕೆ ಶೇ.50 ನ್ನು  ಬ್ಯಾಂಕ್ ಸಾಲ/ ಸ್ವಂತ ಬಂಡವಾಳ ಹೂಡಿಕೆಯಿಂದ ಅನುಷ್ಟಾನ ಮಾಡಲು ಅವಕಾಶವಿರುತ್ತದೆ. ಸಹಾಯಧನವನ್ನು ಬ್ಯಾಂಕ್ ಸಾಲದ ಮುಖಾಂತರ (Backended subsidy) ಅಥವಾ ನೇರವಾಗಿ ಫಲಾನುಭವಿಗೆ ಅಥವಾ ಮಾರಾಟಗಾರರಿಗೆ (vendor) ನೀಡಲಾಗುವುದು.

ಆ) ರೂ. 3 -10 ಲಕ್ಷದವರೆಗಿನ ಸಹಾಯಧನದ ಪ್ರಸ್ತಾವನೆಗಳಿಗೆ:  ಎಲ್ಲಾ ವರ್ಗದ ರೈತರಿಗೆ ಶೇ. 50 ರ ಸಹಾಯಧನ ಅಥವಾ ಗರಿಷ್ಟ ರೂ.10.00 ಲಕ್ಷಗಳು ಮೀರದಂತೆ ಸಹಾಯಧನದ ಪ್ರಸ್ತಾವನೆಗಳಿಗೆ ಜಿಲ್ಲಾ ಅನುಷ್ಟಾನ ಸಮಿತಿಯಲ್ಲಿ ಅನುಮೋದನೆ ಪಡೆದು ಅನುಷ್ಟಾನ ಮಾಡುವುದು. ಫಲಾನುಭವಿಗಳು ಉಳಿಕೆ ಶೇ.50 ನ್ನು ಕಡ್ಡಾಯವಾಗಿ ಬ್ಯಾಂಕ್ ಸಾಲದ ರೂಪದಲ್ಲಿ ಪಡೆದುಕೊಳ್ಳುವುದು.

ಸಹಾಯಧನವನ್ನು ಬ್ಯಾಂಕ್ ಸಾಲದ ಮುಖಾಂತರ(Backended subsidy) ಅಥವಾ ಮಾರಾಟಗಾರರಿಗೆ (vendor) ನೀಡಲಾಗುವುದು.

 

ಸಹಾಯಧನಕ್ಕಾಗಿ ಈ ಕೆಳಗಿನ ವೆಚ್ಚಗಳನ್ನು ಮಾತ್ರ ಪರಿಗಣಿಸಲಾಗುವುದು.

ಯಂತ್ರೋಪಕರಣಗಳು/ ಸಲಕರೆಣೆಗಳು ಇತ್ಯಾದಿ
ಮೂಲಭೂತ ಸೌಕರ್ಯಗಳು: ವಿದ್ಯುತ್, ಯಂತ್ರ ಸಾಮಗ್ರಿಗಳಿಗೆ ತಳಪಾಯ , ಶೆಡ್ ಇತ್ಯಾದಿ ತಾಂತ್ರಿಕ ಸಿವಿಲ್ ಕಾಮಗಾರಿಗಳು (ಸಹಾಯಧನದ ಶೇ.30 ಕ್ಕೆ ಮೀರದಂತೆ)
ಸಹಾಯಧನಕ್ಕಾಗಿ ದುಡಿಮೆ ಬಂಡವಾಳವನ್ನು ಪರಿಗಣಿಸಲಾಗುವುದಿಲ್ಲ.

 

2. ರೈತ ಉತ್ಪಾದಕ ಸಂಸ್ಥೆಗಳಿಗೆ /ಸ್ವಸಹಾಯ ಸಂಘಗಳು/ಸಹಕಾರಿ ಸಂಘಗಳು / ರೈತರ ಗುಂಪು ಗಳಿಗೆ ಸೆಕೆಂಡರಿ ಕೃಷಿ ಚಟುವಟಿಕೆ ಕೈಗೊಳ್ಳಲು ಉತ್ತೇಜನ:

ಸೆಕೆಂಡರಿ ಕೃಷಿ ಕೈಗೊಳ್ಳುವ ಉತ್ಪಾದಕ ಸಂಸ್ಥೆಗಳಿಗೆ /ಸ್ವಸಹಾಯಗುಂಪಿಗೆ/ ಸಂಘ ಸಂಸ್ಥೆಗಳು/ ಸಹಾಕಾರಿ ಸಂಘಗಳು ಇತ್ಯಾದಿ ಸಂಸ್ಥಗಳಿಗೆಅನುಮೋದಿತ ಯೋಜನಾ ವೆಚ್ಚದ ಗರಿಷ್ಟ 10 ಲಕ್ಷದವರೆಗೆ ಶೇ. 50 ರ ಸಹಾಯಧನ ನೀಡಲಾಗುವುದು. ಉಳಿಕೆ ಮೊತ್ತವನ್ನು ರೈತ ಉತ್ಪಾದಕರ ಸಂಸ್ಥೆ/ ಸ್ವಸಹಾಯ ಗುಂಪು/ ಸಂಘ ಸಂಸ್ಥೆಗಳು ಬ್ಯಾಂಕ್ ಸಾಲದ ಮುಖಾಂತರ ಪಡೆಯಬೇಕಾಗಿರುತ್ತದೆ. ಈ ಯೋಜನಾ ವರದಿಗಳನ್ನು ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಯ ಅನುಮೋದನೆಗಾಗಿ ಸಲ್ಲಿಸುವುದು. ಸಹಾಯಧನವನ್ನು ಬ್ಯಾಂಕ್ ಸಾಲದ ಮುಖಾಂತರ (Backended subsidy) ಫಲಾನುಭವಿಗಳ ಖಾತೆಗೆ ಅಥವಾ ಮಾರಾಟಗಾರರಿಗೆ (vendor) ನೀಡಲಾಗುವುದು.

ಸಹಾಯಧನಕ್ಕಾಗಿ ಈ ಕೆಳಗಿನ ವೆಚ್ಚಗಳನ್ನು ಮಾತ್ರ ಪರಿಗಣಿಸಲಾಗುವುದು.

ಯಂತ್ರೋಪಕರಣಗಳು/ ಸಲಕರೆಣೆಗಳು ಇತ್ಯಾದಿ
ಮೂಲಭೂತ ಸೌಕರ್ಯಗಳು: ಯಂತ್ರ ಸಾಮಗ್ರಿಗಳಿಗೆ ತಳಪಾಯ , ಶೆಡ್ ಇತ್ಯಾದಿ ತಾಂತ್ರಿಕ ಸಿವಿಲ್ ಕಾಮಗಾರಿಗಳು (ಸಹಾಯಧನದ ಶೇ.30 ಕ್ಕೆ ಮೀರದಂತೆ)
ಸಹಾಯಧನಕ್ಕಾಗಿ ದುಡಿಮೆ ಬಂಡವಾಳ ವೆಚ್ಚವನ್ನು ಪರಿಗಣಿಸಲಾಗುವುದಿಲ್ಲ

ಸಮುದಾಯ ಸೆಕೆಂಡರಿ ಕೃಷಿ ಉದ್ದಿಮೆಗೆ ಸಂಬಂಧಿಸಿದ ಯಂತ್ರೋಪಕರಣಗಳ ಸ್ಥಾಪನೆಗೆ (ಬಾಡಿಗೆ ಆಧಾರಿತ ಸೇವಾ ಕೇಂದ್ರ  ಮಾದರಿಯಂತೆ) ಸಹಾಯಧನ:      

ಸೆಕೆಂಡರಿ ಕೃಷಿ ಚಟುವಟಿಕೆ ಕೈಗೊಳ್ಳಲು ಬೇಕಾಗುವ ಯಂತ್ರೋಪಕರಣಗಳನ್ನು ಒಂದೇ ಸೂರಿನಡಿ ಕಲ್ಪಿಸುವ ಉದ್ದೇಶದೊಂದಿಗೆ ರೈತ ಉತ್ಪಾದಕರ ಸಂಸ್ಥೆಗಳಿಗೆ/ ಸಹಕಾರಿ ಸಂಘಗಳು /ಸ್ವಸಹಾಯ ಗುಂಪಿಗೆ ಇತ್ಯಾದಿ ಅನುಮೋದಿತ ಯೋಜನಾ ವರದಿಯ ಗರಿಷ್ಟ 15 ಲಕ್ಷದವರೆಗೆ ಅಥವಾ ಶೇ. 50 ಸಹಾಯಧನವನ್ನು ನೀಡಲಾಗುವುದು. ಉಳಿಕೆ ಮೊತ್ತವನ್ನುಆಯ್ಕೆಯಾದ ಸಂಸ್ಥೆಯು ಬ್ಯಾಂಕ್ ಸಾಲದ ಮುಖಾಂತರಭರಿಸಬೇಕಾಗಿರುತ್ತದೆ. ಸಹಾಧನ ಪಡೆಯಲು ಸಂಸ್ಕರಣ ಘಟಕದ ಜೊತೆ ಶೀತಲ ಘಟಕ, ಶೇಕರಣಾ ಮಳಿಗೆಗಳು ಹಾಗೂ ಪ್ರಯೋಗಾಲಯಗಳನ್ನು ಒಳಗೊಂಡಿರಬೇಕು. ಈ ಯೋಜನಾ ವರದಿಗಳನ್ನು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಶಿಫಾರಸ್ಸಿನೊಂದಿಗೆ ರಾಜ್ಯ ಮಟ್ಟದ ತಾಂತ್ರಿಕ ಸಮಿತಿಯ ಅನುಮೋದನೆಗಾಗಿ ಸಲ್ಲಿಸುವುದು.

ಸಹಾಯಧನಕ್ಕಾಗಿ ಈ ಕೆಳಗಿನ ವೆಚ್ಚಗಳನ್ನು ಮಾತ್ರ ಪರಿಗಣಿಸಲಾಗುವುದು.

ಯಂತ್ರೋಪಕರಣಗಳು/ ಸಲಕರೆಣೆಗಳು ಇತ್ಯಾದಿ
ಮೂಲಭೂತ ಸೌಕರ್ಯಗಳು: ವಿದ್ಯುತ್, ಯಂತ್ರ ಸಾಮಗ್ರಿಗಳಿಗೆ ತಳಪಾಯ , ಶೆಡ್ ಇತ್ಯಾದಿ ತಾಂತ್ರಿಕ ಸಿವಿಲ್ ಕಾಮಗಾರಿಗಳು (ಸಹಾಯಧನದ ಶೇ.30 ಕ್ಕೆ ಮೀರದಂತೆ)
ಸಹಾಯಧನಕ್ಕಾಗಿ ದುಡಿಮೆ ಬಂಡವಾಳ ವೆಚ್ಚವನ್ನು ಪರಿಗಣಿಸಲಾಗುವುದಿಲ್ಲ

 

5.7 ಅರ್ಹತೆಗಳು:
1. 18 ವರ್ಷ ಮೇಲ್ಪಟ್ಟವರಾಗಿರಬೇಕು
2. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅವಕಾಶವಿರುತ್ತದೆ
3. ಅರ್ಹ ಫಲಾನುಭವಿಗಳು:
ವೈಯಕ್ತಿಕ ಫಲಾನುಭವಿಗಳು: ರೈತ/ರೈತ ಮಹಿಳೆ/ ಕೃಷಿ ಕಾರ್ಮಿಕರುಇತ್ಯಾದಿ
ಅರ್ಹ ಗುಂಪುಗಳು: ರೈತ ಉತ್ಪಾದಕ ಸಂಸ್ಥೆಗಳಿಗೆ /ಸ್ವಸಹಾಯ ಸಂಘಗಳು/ಸಹಕಾರಿ ಸಂಘಗಳು/ ರೈತರ ಗುಂಪುಗಳು ಇತ್ಯಾದಿ
ಸಮುದಾಯ ಆಧಾರಿತ ಮೂಲಸೌಕರ್ಯದಡಿ: ರೈತ ಉತ್ಪಾದಕರಸಂಸ್ಥೆಗಳಿಗೆ /ಸ್ವಸಹಾಯ ಗುಂಪುಗಳು/ ಸಹಕಾರಿ ಸಂಘಗಳು/ ರೈತರ ಗುಂಪುಗಳು ಇತ್ಯಾದಿ ಸಹಾಯಧನ ಪಡೆಯಬಹುದು
4. ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ ಮತ್ತು ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಮುಂದೆ ಪ್ರಸ್ತಾವನೆಗಳನ್ನು ಮಂಡಿಸಿದಾಗ ಯೋಜನೆಪುನಾರಾವರ್ತನೆ (ಡುಫ್ಲಿಕೇಶನ್) ಆಗದ ಕುರಿತು ಖಾತರಿಪಡಿಸಬೇಕು ಮತ್ತು ಸಂಭದಪಟ್ಟ ಇಲಾಖೆಗಳಿಂದ ನಿರಾಕ್ಷೇಪಣಾಪ್ರಮಾಣಪತ್ರ ಪಡೆಯಬೇಕು
5. 01.04.2024 ನಂತರ ಹೊಸದಾಗಿ ಸ್ಥಾಪಿಸಲ್ಪಟ್ಟ/ ಮೇಲ್ದರ್ಜೆಗೇರಿಸಿದ ಘಟಕಗಳನ್ನು ಮಾತ್ರ ಪರಿಗಣಿಸುವುದು.
5.8 ಅನುಷ್ಠಾನಗೊಳಿಸುವ ವಿಧಾನ:
1.   ಸೆಕೆಂಡರಿ ಕೃಷಿ ನಿರ್ದೇಶನಾಲಯವು, ಸೆಕೆಂಡರಿ ಕೃಷಿಯಲ್ಲಿ ವ್ಯಾಖ್ಯಾನಿಸಿದಂತೆ ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಏಕ ಗವಾಕ್ಷಿ” ಮಾದರಿಯಲ್ಲಿ ಸ್ವೀಕರಿಸಲು ಹಾಗೂ ಕಾರ್ಯನಿರ್ವಹಿಸಲು ಯೋಜಿಸಲಾಗಿರುತ್ತದೆ.
2.  ಇಲಾಖೆಯಡಿ ಈಗಾಗಲೇ ಚಾಲ್ತಿಯಲ್ಲಿರುವ ಕೇಂದ್ರ ಪುರಸ್ಕೃತ ಹಾಗೂ ರಾಜ್ಯ ವಲಯ ಯೋಜನೆಗಳಡಿ ಒಗ್ಗೂಡಿಸುವಿಕೆಗೆ ಕ್ರಮ ಕೈಗೊಳ್ಳಲು ಅವಕಾಶವಿರುತ್ತದೆ.
3.  ಸೆಕೆಂಡರಿ ಕೃಷಿ ಕುರಿತು ರಾಜ್ಯ ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳ ಮೂಲಕ ವ್ಯಾಪಕ ಪ್ರಚಾರ ನೀಡಲು ಜಂಟಿ ಕೃಷಿ ನಿರ್ದೇಶಕರು ಕ್ರಮ ಕೈಗೊಳ್ಳುವುದು(ಘಟಕವಾರು ವೆಚ್ಚವನ್ನು ಅನುಬಂಧ- 2 ರಲ್ಲಿ ನೀಡಿದೆ)
4.  ಇತರೆ ಇಲಾಖೆಯಲ್ಲಿ ಈಗಾಗಲೇ ಸಹಾಯಧನದ ಪುನರಾವರ್ತನೆ (Duplication) ಯಾಗದಂತೆ ಸಂಬಂಧಪಟ್ಟ ಇಲಾಖೆಗಳಿಂದ ನಿರಾಪೇಕ್ಷಣಾ ಪತ್ರ ಪಡೆಯುವುದು.
5.  ನೂತನ/ ನವೀನ ಪರಿಕಲ್ಪನೆಗಳನ್ನು, ಚಟುವಟಿಕೆಗಳನ್ನು ಸೂಕ್ತ ಯೋಜನಾ ವರದಿಯೊಂದಿಗೆ ಆದ್ಯತೆಯೊಂದಿಗೆ ಅನುಷ್ಠಾನ ಮಾಡುವುದು.
6.  ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆವಾರು ವಿಷಯತಜ್ಞರು ಹಾಗೂ ಪರಿಣಿತರೊಳಗೊಂಡಂತೆ, ಪ್ರತ್ಯೇಕ ಕಾರ್ಯಪಡೆ ರಚಿಸಲಾಗಿರುತ್ತದೆ. Website ನಲ್ಲಿ ಇಲಾಖಾವಾರು ಕಾರ್ಯಪಡೆಯ ಮಾಹಿತಿ ಲಭ್ಯವಿದ್ದು ಇವರನ್ನು ಸಂಪರ್ಕಿಸಿ ಮಾಹಿತಿ ಪಡೆಯುವುದು.
7.  ಜಿಲ್ಲಾ ಮಟ್ಟದಲ್ಲಿ:   ವೈಯಕ್ತಿಕ ಹಾಗೂ ಗುಂಪು ಆಧಾರಿತ ಚಟುವಟಿಕೆಗಳ ಸಹಾಯಧನದ ಪ್ರಸ್ತಾವನೆಗಳನ್ನು ಜಿಲ್ಲಾ ತಾಂತ್ರಿಕ ಸಮಿತಿಯಲ್ಲಿ ಪರಿಶೀಲಿಸಿ ಅರ್ಹ ಪ್ರಸ್ತಾವನೆಗಳನ್ನು ಜಿಲ್ಲಾ ಮಟ್ಟದಅನುಷ್ಠಾನ ಸಮಿತಿಯಲ್ಲಿ ಅನುಮೋದನೆ ನೀಡಿಅಂತಿಮಗೊಳಿಸುವುದು. ಹಾಗೆಯೇ ಸದರಿ ಅನುಮೋದಿತ ಚಟುವಟಿಕೆಗಳ ವಿವರವನ್ನು ಮಾಹಿತಿಗಾಗಿ ರಾಜ್ಯ ಮಟ್ಟದ ಸೆಕೆಂಡರಿ ಕೃಷಿ ನಿರ್ದೇಶನಾಲಯಕ್ಕೆ ವರದಿ ಸಲ್ಲಿಸುವುದು.  
8.  ರಾಜ್ಯ ಮಟ್ಟದಲ್ಲಿ: ರಾಜ್ಯ ಮಟ್ಟದ ಸೆಕೆಂಡರಿ ಕೃಷಿ ನಿರ್ದೇಶನಾಲಯವು ಜಿಲ್ಲೆಗಳಿಂದ ಬಂದಿರುವ ಸಮುದಾಯ ಸೆಕೆಂಡರಿ ಕೃಷಿ ಉದ್ದಿಮೆಗೆ ಸಂಬಂಧಿಸಿದ ಯಂತ್ರೋಪಕರಣಗಳ ಸ್ಥಾಪನಾಘಟಕಗಳ ಯೋಜನಾ ವರದಿ/Business plan ಗಳನ್ನು ಸಂಬಂಧಿತ ಇಲಾಖೆಗಳಿಂದ ನಿಯೋಜಿಸಲಾದ ಅಧಿಕಾರಿಗಳನ್ನೊಳಗೊಂಡ ತಾಂತ್ರಿಕ ಸಮಿತಿಯಲ್ಲಿ ನಿಯಮಾನುಸಾರ ಪರಿಶೀಲಿಸಿ ಅನುಮೋದನೆ ನೀಡುವುದು. ಅನುಮೋದನೆಗೊಂಡ ಯೋಜನಾ ವರದಿಗಳನ್ನು ರಾಜ್ಯಮಟ್ಟದ ಚಾಲನಾ ಸಮಿತಿ ಸಭೆಯ ಗಮನಕ್ಕೆ ಮಂಡಿಸುವುದು.ಅನುಮೋದಿತ ಸೆಕೆಂಡರಿ ಕೃಷಿ ಚಟುವಟಿಕೆಗಳನ್ನು ಆಯಾ ಜಿಲ್ಲೆಗಳಲ್ಲಿಅನುಷ್ಠಾನ ಮಾಡಲಾಗುವುದು.

   

 

ವಿಶೇಷ ಸೂಚನೆ: ಸ್ವೀಕೃತವಾಗುವ ಯೋಜನಾ ಪ್ರಸ್ತಾವನೆಗಳನ್ನು ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಯಲ್ಲಿ ಇಲಾಖಾಧಿಕಾರಿಗಳು ಅನುದಾನ ಲಭ್ಯತೆಯನ್ನು ಪರಿಗಣಿಸಿ, ಪರಿಶೀಲಿಸಿ ಅನುಮೋದನೆ ನೀಡುವುದು /ಶಿಫಾರಸ್ಸು ಮಾಡುವುದು.

 

 

 

5.9  ನೋಂದಣಿ ಮತ್ತು ಅರ್ಜಿ ಸಲ್ಲಿಸುವಿಕೆ:

(ಅ) ಸೆಕೆಂಡರಿ ಕೃಷಿ ಚಟುವಟಿಕೆಗಳಲ್ಲಿ ಆಸಕ್ತ ವೈಯಕ್ತಿಕ ಫಲಾನುಭವಿಗಳನ್ನು ಅಥವಾ ಗುಂಪು / ಸಮುದಾಯ ಆಧಾರಿತ ಚಟುವಟಿಕೆಗಳನ್ನು ಕೈಗೊಳ್ಳಲು ವ್ಯಾಪಕ ಪ್ರಚಾರ ನೀಡುವುದು.

(ಆ) ಆಸಕ್ತ ರೈತರು ನಿಗದಿತ ನಮೂನೆಲ್ಲಿ (ನಮೂನೆ-1 & 2) ಅವರವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಕ್ಕೆ/ ಸಹಾಯಕ ಕೃಷಿ ನಿರ್ದೇಶಕರ ಕಛೇರಿ/ ಜಂಟಿ ಕೃಷಿ ನಿರ್ದೇಶಕರ ಕಛೇರಿಗೆ ಅರ್ಜಿ ಸಲ್ಲಿಸುವುದು.

(ಇ) ಸಲ್ಲಿಸಕೆಯಾಅರ್ಜಿಗಳನ್ನು ಅರ್ಜಿಗಳನ್ನು ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಗೆ ಮಂಡಿಸಿ, ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ಅನುಮೋದನೆ ನಂತರ ಮಂಜೂರಾತಿ ನೀಡುವುದು.  

() ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಮಂಜೂರಾತಿ ನಂತರ ಅರ್ಜಿಯನ್ನು ಸಹಾಯಕ ಕೃಷಿ ನಿರ್ದೇಶಕರಿಗೆ ಕಳುಹಿಸುವುದು.  ಸಹಾಯಕ ಕೃಷಿ ನಿರ್ದೇಶಕರು ಈ ಮಂಜೂರಾತಿಯನ್ನು ಆಧರಿಸಿ ಸಂಬಂಧಪಟ್ಟ ಫಲಾನುಭವಿಗೆ ಕಾರ್ಯಾದೇಶ ಪತ್ರವನ್ನು ನೀಡುವುದು.

() ಫಲಾನುಭವಿಯು ಯೋಜನಾಪ್ರಸ್ತಾವನೆಯ ಅನುಸಾರಯಂತ್ರೋಪಕರಣಗಳೊಂದಿಗೆ ಸೆಕೆಂಡರಿ ಕೃಷಿ ಚಟುವಟಿಕೆಗಳಿಗಾಗಿ ಘಟಕವನ್ನು ಸ್ಥಾಪಿಸುವುದು.  ಘಟಕ ಸ್ಥಾಪನೆಯ ನಂತರ ಪತ್ರ ಮುಖೇನ ಸಹಾಯಧನಕ್ಕಾಗಿ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸುವುದು.

() ಕೃಷಿ ಅಧಿಕಾರಿಯು ಸದರಿ ಘಟಕಕ್ಕೆ ಭೇಟಿ ನೀಡಿ ಸದರಿ ಘಟಕಚಾಲ್ತಿ ಇರುವ ಕುರಿತು ಖಾತರಿಪಡಿಸಿಕಂಡು ಯಂತ್ರೋಪಕರಣಗಳಿರುವಜಿ.ಪಿ.ಎಸ್. ಫೋಟೋ ಹಾಗೂ ಇತರೆ ದಾಖಲಾತಿಗಳೊಂದಿಗೆ (Invoice, Electricity Bill, 5 ವರ್ಷದವೆರೆಗೆ ಮುಂದುವೆರೆಸುವುದಾಗಿ ಮತ್ತುಯಾರಿಗೂ ಮಾರಟ ಮಾಡದಿರುವ ಕುರಿತು ಮುಚ್ಚಳಿಕೆ ಪತ್ರ)ಸಹಾಯಧನ ಬಿಡುಗಡೆಗಾಗಿ ಸಹಾಯಕ ಕೃಷಿ ನಿರ್ದೇಶಕರಿಗೆಪ್ರಸ್ತಾವನೆಯನ್ನು ಸಲ್ಲಿಸುವುದು.

() ಸಹಾಯಕ ಕೃಷಿ ನಿರ್ದೇಶಕರು ಕೃಷಿ ಅಧಿಕಾರಿಯವರಿಂದ ಸ್ವೀಕರಿಸಿದ ಪ್ರಸ್ತಾವನೆಯನ್ನು ಪರಿಶೀಲಿಸಿದ ನಂತರ ಆರ್ಥಿಕ ಮಂಜೂರಾತಿ ನೀಡಿ , ಉಪ ಕೃಷಿ ನಿರ್ದೇಶಕರ ಮೇಲುಸಹಿಯೊಂದಿಗೆ ಸಹಾಯಧನಕ್ಕಾಗಿ ಬಿಲ್ಲನ್ನು ಖಜಾನೆಗೆ ಸಲ್ಲಿಸುವುದು.  ಖಜಾನೆಯಿಂದ ಸಹಾಯಧನ ಪಾವತಿಯಾದ ನಂತರ ಫಲಾನುಭವಿಯಿಂದ ಸಹಾಯಧನ ಪಡೆದಿದ್ದಕ್ಕೆ ಸ್ವೀಕೃತಿಯನ್ನು ಪಡೆಯುವುದು.

() ಸಮುದಾಯ ಆಧಾರಿತ ಪ್ರಸ್ತಾವನೆಗಳಿಗೆ ಜಂಟಿ ಕೃಷಿ ನಿರ್ದೇಶಕರ ಶಿಫಾರಸ್ಸಿನೊಂದಿಗೆ ನಿರ್ದೇಶಕರು, ಸೆಕೆಂಡರಿ ಕೃಷಿ ನಿರ್ದೇಶನಾಲಯಕ್ಕೆಸಲ್ಲಿಸುವುದು.  ಸ್ವೀಕರಿಸಿದ ಪ್ರಸ್ತಾವನೆಗಳನ್ನು ರಾಜ್ಯ ಮಟ್ಟದ ತಾಂತ್ರಿಕ ಸಮಿತಿಯಲ್ಲಿ ನಿಯಮಾನುಸಾರ ಪರಿಶೀಲಿಸಿ ಅನುಮೋದನೆ ನೀಡುವುದು.ಅನುಮೋದನೆಗೊಂಡ ಯೋಜನಾ ವರದಿಗಳನ್ನು ರಾಜ್ಯ ಮಟ್ಟದ ಚಾಲನಾಸಮಿತಿ ಸಭೆಯ ಗಮನಕ್ಕೆ ಮಂಡಿಸುವುದು. ಇಂತಹ ಪ್ರಸ್ತಾವನೆಗಳಿಗೆ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಕಾರ್ಯಾದೇಶ ಪತ್ರ ನೀಡುವುದು ಮತ್ತು ಕೃಷಿ ಅಧಿಕಾರಿ ಘಟಕ ಸ್ಥಾಪನೆ ನಂತರ ತಪಾಸಣೆ ಕೈಗೊಂಡು, ಜಿ.ಪಿ.ಎಸ್. ಪೋಟೋಗಳು ಹಾಗೂ ಇತರೆ ದಾಖಲಾತಿಗಳನ್ನು ಅಪ್ ಲೋಡ್ ಮಾಡಿ, ಸಹಾಯಕ ಕೃಷಿ ನಿರ್ದೇಶಕರಿಗೆ ಪ್ರಸ್ತಾವನೆಯನ್ನುಫಾರ್ವಡ್ ಮಾಡುವುದು. ಸಹಾಯಕ ಕೃಷಿ ನಿರ್ದೇಶಕರು ಸಹಾಯಧನ ಬಿಡುಗಡೆಗೆ ಖಜಾನೆಗೆ ಬಿಲ್ಲನ್ನು ಸಲ್ಲಿಸುವುದು.

I. ಸಹಾಯಧನ ನೀಡುವ ವಿಧಾನ:

ಅ) ಜಿಲ್ಲೆಗಳಿಗೆ ಖಜಾನೆ -2 ಮುಖಾಂತರ ರಾಜ್ಯ ಸೆಕೆಂಡರಿ ಕೃಷಿ ನಿರ್ದೇಶನಾಲಯದಿಂದ ಅನುದಾನ ಬಿಡುಗಡೆ ಮಾಡಲಾಗುವುದು.

ಆ) ವೈಯಕ್ತಿಕ/ ರೈತ್ಪಾದಕ ಸಂಸ್ಥೆಗಳು/ಸ್ವಸಹಾಯ ಗುಂಪು/ ಸಮುದಾಯ ಕೃಷಿ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಜಿಲ್ಲೆಗಳಿಂದ ಫಲಾನುಭವಿಗಳಿಗೆ ಸಹಾಯಧನ ವಿತರಿಸತಕ್ಕದ್ದು.

 

5.10: ವಿವಿಧ ಕಾರ್ಯಪಡೆಯ ಜವಾಬ್ದಾರಿಗಳು:

 

I. ಕೃಷಿ ಅಧಿಕಾರಿಗಳು:
1. ರೈತ ಸಂಪರ್ಕ ಕೇಂದ್ರದ ಕೃಷಿ ಆಧಿಕಾರಿಗಳು ಸಹಯೋಗ ಇಲಾಖೆಗಳಲ್ಲಿನ ಕ್ಷೇತ್ರ ಮಟ್ಟದ ಅಧಿಕಾರಿಗಳ ಸಹಯೋಗದೊಂದಿಗೆ ಸೆಕೆಂಡರಿ ಕೃಷಿ ಅನುಷ್ಠಾನ ಮಾಡಲು ಸೂಕ್ತ ಪ್ರಚಾರದ ಮೂಲಕ ರೈತರಿಗೆ/ ರೈತ ಉತ್ಪಾದಕ ಸಂಸ್ಥೆಗಳು/ಸ್ವಸಹಾಯ ಗುಂಪುಗಳಿಗೆಚಟುವಟಿಕೆ ಕೈಗೊಳ್ಳಲು ಪ್ರೇರೀಪಿಸುವುದು ಹಾಗೂ ಪಲಾನುಭವಿಗಳ ಅರ್ಜಿಗಳನ್ನು ನೊಂದಾಯಿಸಲು ಮಾರ್ಗದರ್ಶನ ನೀಡುವುದು.
2. ಹೋಬಳಿ ಮಟ್ಟದ ವಿವಿಧ ಇಲಾಖೆಗಳೊಂದಿಗೆ ಸೆಕೆಂಡರಿ ಕೃಷಿ ಅನುಷ್ಠಾನಮಾಡಲು ಸಮನ್ವಯ ಸಾಧಿಸುವುದು.
3. ಆಯ್ಕೆಯಾದ ಫಲಾನುಭವಿಗಳ ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವುದು (100%).

 

II. ಸಹಾಯಕ ಕೃಷಿ ನಿರ್ದೇಶಕರು:
1. ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೈತ ಉತ್ಪಾದಕ ಕೇಂದ್ರಗಳು/ಸ್ವಸಹಾಯ ಗುಂಪುಗಳಿಗೆ ಚಟುವಟಿಕೆ ಕೈಗೊಳ್ಳಲು ಪ್ರೇರೇಪಿಸುವುದು.
2. ತಾಲ್ಲೂಕಿನಲ್ಲಿ ಸೆಕೆಂಡರಿ ಕೃಷಿ ಅಳವಡಿಕೆಗೆ ಸಂಬಂಧಿಸಿದಂತೆ ವಿಸ್ತರಣಾ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲು ಕ್ರಮ ವಹಿಸುವುದು.
3. ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳೊಂದಿಗೆ ಸೆಕೆಂಡರಿಕೃಷಿ ಅನುಷ್ಠಾನ ಮಾಡಲು ಸಮನ್ವಯ ಸಾಧಿಸುವುದು.
4. ಆಯ್ಕೆಯಾದ ಫಲಾನುಭವಿಗಳ ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವುದು (25%).
5. ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ಮೂಲಕ ಆಯ್ಕೆಯಾದ ಫಲಾನುಭವಿಗಳಿಗೆ ಕಾರ್ಯಾದೇಶ ನೀಡುವುದು.

 

III. ಉಪ ಕೃಷಿ ನಿರ್ದೇಶಕರು:
1. ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೈತ ಉತ್ಪಾದಕ ಕೇಂದ್ರಗಳು/ಸ್ವಸಹಾಯ ಗುಂಪುಗಳಿಗೆ ಚಟುವಟಿಕೆ ಕೈಗೊಳ್ಳಲು ಪ್ರೇರೇಪಿಸುವುದು.
2. ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಮಯೋಚಿತವಾಗಿ ಯೋಜನೆಗಳ ಒಗ್ಗೂಡಿಸುವಿಕೆಗೆ ಕ್ರಮಕೈಗೊಳ್ಳುವುದು.
3. ಆಯ್ಕೆಯಾದ ಫಲಾನುಭವಿಗಳ ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವುದು (10%). ಅನುಮೋದನೆಗೊಂಡ ಚಟುವಟಿಕೆಗಳ ಬಿಲ್ಲುಗಳಿಗೆ ಮೇಲುಸಹಿಗೊಳಿಸಿ ಅನುದಾನ ಬಿಡುಗಡೆ  ಮಾಡುವುದು.

IV. ಜಂಟಿ ಕೃಷಿ ನಿರ್ದೇಶಕರು 

1. ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಸ್ಥಳೀಯ ಅವಶ್ಯಕತೆಗನುಗುಣವಾಗಿ ಜಿಲ್ಲಾ ಮಟ್ಟದ ಕ್ರಿಯಾ ಯೋಜನೆ ಸಿದ್ದಪಡಿಸಲು ಕ್ರಮವಹಿಸುವುದು.
2. ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎರಡುತಿಂಗಳಿಗೊಮ್ಮೆ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ಸಭೆ ನಡೆಸಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲಿಸಲು ಕ್ರಮಕೈಗೊಳ್ಳುವುದು.
3. ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಮಯೋಚಿತವಾಗಿ ಯೋಜನೆಗಳ ಒಗ್ಗೂಡಿಸುವಿಕೆಗೆ ಕ್ರಮಕೈಗೊಳ್ಳುವುದು.
4. ಜಿಲ್ಲಾವಾರು ಸೆಕೆಂಡರಿ ಕೃಷಿಗೆ ಸೂಕ್ತವಿರುವ ಚಟುವಟಿಕೆಗಳನ್ನು ಗುರುತಿಸಲು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸೂಕ್ತ ಸಂಸ್ಥೆಯನ್ನು ಆಯ್ಕೆ ಮಾಡಿ ಸದರಿ ಕಾರ್ಯವನ್ನು ಕೈಗೊಂಡು ವರದಿ ಸಲ್ಲಿಸುವುದು.
5. ಚಟುವಟಿಕೆಗಳ ಅನುಷ್ಠಾನದ ಮೌಲ್ಯಮಾಪನಕ್ಕಾಗಿ ಮೂರು ವರ್ಷದವರೆಗೆ ಆಯ್ಕೆಯಾದ ಫಲಾನುಭವಿಗಳ ಸ್ಥಳ ಪರಿಶೀಲನೆಯನ್ನು ಕೈಗೊಂಡು ವರದಿ ನೀಡುವುದು (5%).
6. ತಮ್ಮ ಅಧೀನ ಕಛೇರಿಗಳಿಗೆ ಅನುದಾನ ಬಿಡುಗಡೆ ಮಾಡುವುದಲ್ಲದೇ ಭೌತಿಕ ಗುರಿಗಳನ್ನು ನೀಡುವುದು.

 

v) ರಾಜ್ಯ ಮಟ್ಟದ ಸೆಕೆಂಡರಿ ಕೃಷಿ ನಿರ್ದೇಶನಾಲಯ:

1. ಸೆಕೆಂಡರಿ ಕೃಷಿ ವಲಯದಲ್ಲಿ ಸಾಧಿಸಬೇಕಾದ ವಿವಿಧ ಕಾರ್ಯಚಟುವಟಿಕೆಗಳನ್ನು ಗುರುತಿಸುವುದು
2. ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ, ಹುಲ್ಲುಗಾವಲು, ಅರಣ್ಯ ಮತ್ತು ಇತರೆ ಉಪವಲಯಗಳಲ್ಲಿ ಲಭ್ಯವಿರುವ ವಿವಿಧ ಉತ್ಪನ್ನಗಳ (ಪ್ರಾಥಮಿಕ ಹಾಗೂ ಉಪ ಉತ್ಪನ್ನ) ಪ್ರಮಾಣದ ಮೌಲ್ಯಮಾಪನ ಮಾಡುವುದು.
3. ಸೆಕೆಂಡರಿ ಕೃಷಿಗೆ ಸಂಬಂಧಿಸಿದ, ಕೃಷಿ ಮತ್ತು ಸಂಬಂಧಿತ ಇಲಾಖೆಗಳಡಿ ಚಾಲ್ತಿಯಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಒಗ್ಗೂಡಿಸುವಿಕೆಯಲ್ಲಿ ಅನುಷ್ಠಾನ ಮಾಡುವುದು.
4. ಪ್ರಾಥಮಿಕ ಮತ್ತು ಸೆಕೆಂಡರಿ ಸಂಸ್ಕರಣೆಯನ್ನು ಉತ್ತೇಜಿಸಲು ಅಗತ್ಯವಿರುವ ಕೌಶಲ್ಯಗಳನ್ನು ಗುರುತಿಸುವುದು ಮತ್ತು ಅವಶ್ಯಕತೆಗನುಗುಣವಾದ ತರಬೇತಿ, ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡುವುದು.
5. ಸೆಕೆಂಡರಿ ಉತ್ಪನ್ನಗಳಿಗೆ ಪ್ರತ್ಯೇಕ ಮಾರುಕಟ್ಟೆ/ ಸಂಪರ್ಕ ಕಲ್ಪಿಸಲು ಪರ್ಯಾಯ ಮಾರ್ಗಗಳನ್ನು ಗುರುತಿಸುವುದು.
6. ಉತ್ಪನ್ನಗಳ ಗುಣಮಟ್ಟವನ್ನು ಅಭಿವೃದ್ಧಿಪಡಿಸಲು ಮಾನದಂಡಗಳನ್ನು ನಿಗಧಿಪಡಿಸುವುದು, ಗುಣಮಟ್ಟ ನಿಯಂತ್ರಣ ಸೌಲಭ್ಯಗಳು, ಭೌಗೋಳಿಕ ಸೂಚ್ಯಂಕ ಉತ್ಪನ್ನಗಳ ಅಭಿವೃದ್ಧಿ ಇತ್ಯಾದಿ ಮೂಲಕ ಸೆಕೆಂಡರಿ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ವೇದಿಕೆ / ವ್ಯವಸ್ಥೆ ಕಲ್ಪಿಸುವುದು.
7. ಸೆಕೆಂಡರಿ ಕೃಷಿಗೆ ಸಂಬಂಧಿಸಿದಂತೆ ಜಿಲ್ಲಾವಾರು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಗೆ ಮಾರ್ಗದರ್ಶನ ನೀಡುವುದು.
8. ಸೆಕೆಂಡರಿ ಕೃಷಿಗೆ ಸಂಬಂಧಿಸಿದಂತೆ ಮೇಲಿನ ಎಲ್ಲಾ ಯೋಜನೆಗಳನ್ನು ಸಂಯೋಜಿಸಿ ರಾಜ್ಯಮಟ್ಟದ ಸಮಗ್ರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವುದು.
9. ಸಮಗ್ರ ಕ್ರಿಯಾ ಯೋಜನೆಯ ಪ್ರಗತಿಯ ಮೇಲ್ವಿಚಾರಣೆ ಮತ್ತು ಪ್ರಗತಿ ಪರಿಶೀಲನೆ ಮಾಡುವುದು. ಕ್ರಿಯಾ ಯೋಜನೆಯ ಮಧ್ಯಂತರ ತಿದ್ದುಪಡಿಮಾಡಲು ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಗೆ ಮಾರ್ಗದರ್ಶನ ನೀಡುವುದು.
10. ಸೆಕೆಂಡರಿ ಕೃಷಿಯ ಉದ್ದೇಶಗಳಿಗನುಗುಣವಾಗಿ ಹೊಸ ಕಾರ್ಯತಂತ್ರಗಳು, ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಸೂಚಿಸುವುದು.

 

Vi. ರಾಜ್ಯ ಮಟ್ಟದ ವಿವಿಧ ಇಲಾಖೆಗಳು:

1. ನಿರ್ದೇಶನಾಲಯದ ತಾಂತ್ರಿಕ ತಂಡಕ್ಕೆ ಪ್ರತಿ ಇಲಾಖೆಯಿಂದ ಒಬ್ಬ ನೋಡಲ್ ಅಧಿಕಾರಿಯನ್ನು ನಿಯೋಜಿಸುವುದು
2. ಜಿಲ್ಲಾವಾರು  ಸೆಕೆಂಡರಿ ಚಟುವಟಿಕೆಗಳನ್ನು ಗುರುತಿಸಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಸಹಯೋಗದೊಂದಿಗೆ ವರದಿ ತಯಾರಿಸಲು ಅನುವು ಮಾಡುವುದು ಹಾಗೂ ವ್ಯಾಪಕ ಪ್ರಚಾರ ನೀಡುವುದು.
3. ಇಲಾಖೆಯಲ್ಲಿ ಒಗ್ಗೂಡಿಸುವಿಕೆಯಡಿ ಕಾರ್ಯಕ್ರಮಗಳನ್ನು ಸೆಕೆಂಡರಿ ಕೃಷಿ ಜೊತೆ ಸಂಯೋಜಿಸುವುದು.

     

5.11 ಉಸ್ತುವಾರಿ ಮತ್ತು ಮೌಲ್ಯಮಾಪನ:

ಅ) ಜಿಲ್ಲಾ ಮಟ್ಟದ ಆಯಾ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮ ಅನುಷ್ಠಾನದ ಉಸ್ತುವಾರಿಯನ್ನು  ನಿಯತಕಾಲಿಕವಾಗಿ ಮಾಡಿ ಕ್ರೋಢಿಕೃತ ವರದಿಯನ್ನು ಸಲ್ಲಿಸುವುದು.    

   ಆ) ರಾಜ್ಯ ಸೆಕೆಂಡರಿ ಕೃಷಿ ನಿರ್ದೇಶನಾಲಯದಿಂದ  ಆಯಾ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮ ಅನುಷ್ಠಾನದ ಉಸ್ತುವಾರಿಯನ್ನು ನಿಯತಕಾಲಿಕವಾಗಿ ಮಾಡಿ ಕ್ರೋಡಿಕೃತ ವರದಿಯನ್ನು ಸಲ್ಲಿಸುವುದು .

ಇ) ಈ ಯೋಜನೆಯ ಮುಖ್ಯ ಉದ್ದೇಶವು ಲಿತಾಂಶ ಆಧಾರಿತವಾಗಿರುವುದರಿಂದ ಆರ್ಥಿಕ ವರ್ಷದ ಅಂತ್ಯದಲ್ಲಿ ಫಲಾನುಭವಿಗಳ ವಿವರ ಮತ್ತು ಯಶೋಗಾಥೆಯೊಂದಿಗೆ ಕಿರುಹೊತ್ತಿಗೆ (Compendium)ಯನ್ನು  ಹಾಗೂ Video Documentary ಯನ್ನು ಕಡ್ಡಾಯವಾಗಿ ಸಲ್ಲಿಸುವುದು.

 

(ಈ) ಯೋಜನಾ ಅನುಷ್ಠಾನದ ಒಂದು ವರ್ಷದಿಂದ ಮೂರು ವರ್ಷದವರೆಗೆ ಚಟುವಟಿಕೆಯ ಯಶಸ್ಸಿನ ಮೌಲ್ಯಮಾಪನವನ್ನು ಸಂಬಂಧಿತ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ವರ್ಷವಾರು ಕ್ಷೇತ್ರ ತಪಾಸಣೆಯನ್ನು ಕೈಗೊಂಡು, ದಾಖಲಾತಿಗಳನ್ನು ಪರಿಶೀಲಿಸಿ ವರದಿಯನ್ನು ನಿರ್ದೇಶನಾಲಯಕ್ಕೆ ಸಲ್ಲಿಸುವುದು

5.12 ಸೆಕೆಂಡರಿ ಕೃಷಿ ಗೆ ಸಂಬಂಧಿಸಿದಂತೆ ಇತರೆ ಮಾಹಿತಿಗಳು:

1. ಸೆಕೆಂಡರಿ ಕೃಷಿ ನಿರ್ದೇಶನಾಲಯದ ಸ್ಥಾಪನೆ, ಪ್ರಚಾರ ಮತ್ತು ವರದಿ ತಯಾರಿಕೆಗೆ ಆಡಳಿತ ವೆಚ್ಚದ ಅವಶ್ಯಕತೆ ಇರುತ್ತದೆ. ಅಲ್ಲದೇ, ಕೃಷಿ ನಿರ್ದೇಶಕರ ವೇತನ, ಕಛೇರಿ ವೆಚ್ಚ, ರಾಜ್ಯ ಮಟ್ಟದ ಕಾರ್ಯಾಗಾರ, ಇಂಧನ ವೆಚ್ಚ ಹಾಗೂ ಕಾರ್ಯಕ್ರಮದ ಪೂರಕ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.
2. ಸೆಕೆಂಡರಿ ಕೃಷಿಡಿಯಲ್ಲಿ ಫಲಾನುಭವಿಗಳು ಆದ್ಯತೆ ನೀಡಿ ಇಚ್ಚಿಸಿದ ಯಂತ್ರೋಪಕರಣ/ ಉಪಕರಣಗಳನ್ನು  ಖರೀದಿಸಲು ಪರಿಗಣಿಸುವುದು.

]]>
Mon, 02 Jun 2025 18:27:13 +0530 shivuagrico
Gruhalakshmi pending amount&ಈ ಪಟ್ಟಿಯಲ್ಲಿರುವವರಿಗೆ ವಾರದೆೊಳಗೆ ಜಮಾ ಆಗಲಿದೆ ಗೃಹಲಕ್ಷ್ಮಿ ಹಣ https://krushirushi.in/Gruhalakshmi-pending-amount-2138 https://krushirushi.in/Gruhalakshmi-pending-amount-2138 Gruhalakshmi pending amount-ಈ ಪಟ್ಟಿಯಲ್ಲಿರುವವರಿಗೆ ವಾರದೆೊಳಗೆ ಜಮಾ ಆಗಲಿದೆ ಗೃಹಲಕ್ಷ್ಮಿ ಹಣ

 ಕಳೆದ ಎರಡು ತಿಂಗಳಿಂದ ಗೃಹ ಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳಿಗೆ ನೀಡಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸದ್ಯದಲ್ಲೇ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಲಿದೆ ಎಂದು ಹೇಳಿದ್ದಾರೆ. ಈಗಾಗಲೇ ಜನವರಿ ಮತ್ತು ಫೆಬ್ರವರಿ ತಿಂಗಳ ಹಣ ನೀಡಲಾಗಿದ್ದು, ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ಹಣವನ್ನು ಕೂಡ ಈಗಾಗಲೇ ಬಿಲ್ ಮಾಡಲಾಗಿದೆ ಎಂದಿದ್ದಾರೆ. 


ಇನ್ನು ಮಹಿಳೆಯರಿಗೆ 2000/- ನೀಸುವ ಗೃಹಲಕ್ಷ್ಮಿ ಯೋಜನೆಯ ಹಣ ಎರಡು ತಿಂಗಳಿಂದ ಮಹಿಳೆಯರ ಖಾತೆಗೆ ಜಮೆಯಾಗಿಲ್ಲ ಎಂಬ ಮಾಹಿತಿಯಿದೆ. ಆದ್ರೆ ಮಾರ್ಚ್ ಆರ್ಥಿಕ ವರ್ಷದ ಕೊನೆಯಾಗಿರುವ ಕಾರಣ ಸ್ವಲ್ಪ ಹೆಚ್ಚು ಕಮ್ಮಿಯಾಗಿದೆ. ಆದ್ರೆ ಕೆಲವೇ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ಆದಷ್ಟು ಬೇಗ, ಬಹುತೇಕ ಇನ್ನೊಂದು ವಾರದಲ್ಲಿ ಮಹಿಳೆಯರಿಗೆ ಹಣ ಹಾಕಲಿದ್ದೇವೆ ಎಂದಿದ್ದಾರೆ.

ಅರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://ahara.kar.nic.in/Home/EServices

ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ e-Ration Card ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ show village list ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಜಿಲ್ಲೆ,ತಾಲೂಕು,ಗ್ರಾಮ ಪಂಚಾಯತಿ,ಗ್ರಾಮ select ಮಾಡಿ,Go ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನ ಪಟ್ಟಿಯಲ್ಲಿರುವ(Gruhalakshmi list)ಅರ್ಹ ಗೃಹಿಣಿಯರಿಗೆ ಮಾತ್ರ ಗೃಹಲಕ್ಷ್ಮಿ ಹಣ(Gruhalakshmi amount) ಜಮಾ(dbt) ಆಗಲಿದೆ.

Gruhalakshmi status-ಗೃಹಲಕ್ಷ್ಮಿ ಇಲ್ಲಿಯವರೆಗೂ ಎಷ್ಟು ಕಂತಿನ ಹಣ ಜಮಾ ಆಗಿದೆ ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application ಡೌನ್ಲೊಡ್ ಮಾಡಿ,install ಮಾಡಿಕೊಳ್ಳಿ

https://play.google.com/store/apps/details?id=com.dbtkarnataka

ನಂತರ ನಿಮ್ಮ ಆಧಾರ್ ನಂಬರ್ ಹಾಕಿ Get OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Varify OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ

ನಂತರ payment status ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಇಲ್ಲಿಯವರೆಗೆ ಎಷ್ಟು ಗೃಹಲಕ್ಷ್ಮಿ(Gruhalakahmi) ಕಂತಿನ ಹಣ ಜಮಾ ಆಗಿದೆ ಎಂದು ತೋರಿಸುತ್ತದೆ.

Hi

]]>
Mon, 02 Jun 2025 07:16:34 +0530 shivuagrico
Free Aadhar update last date&ಉಚಿತ ಆಧಾರ್ ಅಪ್ಡೇಟ್ ಗೆ ಕೊನೆಯ ದಿನಾಂಕ,ಇಲ್ಲದಿದ್ದರೆ ದಂಡ ಫಿಕ್ಸ್,ಹೀಗೆ ಮಾಡಿ ನಿಮ್ಮ ಆಧಾರ್ ಅಪ್ಡೇಟ್ https://krushirushi.in/Free-Aadhar-update-last-date-2137 https://krushirushi.in/Free-Aadhar-update-last-date-2137 Free Aadhar update last date-ಉಚಿತ ಆಧಾರ್ ಅಪ್ಡೇಟ್ ಗೆ ಕೊನೆಯ ದಿನಾಂಕ,ಇಲ್ಲದಿದ್ದರೆ ದಂಡ ಫಿಕ್ಸ್,ಹೀಗೆ ಮಾಡಿ ನಿಮ್ಮ ಆಧಾರ್ ಅಪ್ಡೇಟ್

ಈ ಮೊದಲು ಆಧಾರ್​ಗೆ ಸಂಬಂಧಿತ ಮಾಹಿತಿ ಅಪ್​ಲೋಡ್​ ಮಾಡಿಕೊಳ್ಳಲು ಈ ಮೊದಲು ಡಿಸೆಂಬರ್ 14 ಕೊನೆಯ ದಿನವಾಗಿತ್ತು, ಈಗ ಜೂನ್ 14ರವರೆಗೆ ಅವಧಿ ವಿಸ್ತರಿಸಲಾಗಿದ್ದು,ಆನ್​ಲೈನ್​ನಲ್ಲಿ ಉಚಿತವಾಗಿ ಆಧಾರ್​ ಅಪ್​ಡೇಟ್​ ಮಾಡಿಕೊಳ್ಳಿ

ನೀವು ಆಧಾರ್​ ಸಂಖ್ಯೆ ಪಡೆದು ಹತ್ತು ವರ್ಷಗಳಾಗಿದ್ದಲ್ಲಿ ಹಾಗೂ ಇದುವರೆಗೂ ಯಾವುದೇ ಮಾಹಿತಿ ಅಪ್​ಡೇಟ್ ಮಾಡಿಕೊಂಡಿರದಿದ್ದಲ್ಲಿ ಈ ಅವಕಾಶವನ್ನು ಉಚಿತವಾಗಿ ಬಳಸಿಕೊಳ್ಳಬಹುದು. ಅಂದಹಾಗೆ ಇದು ಡೆಮೊಗ್ರಫಿಕ್​ ಡೇಟಾಗಷ್ಟೇ ಸೀಮಿತವಾಗಿರಲಿದೆ ಎಂದು ಯುಐಡಿಎಐ ತಿಳಿಸಿದೆ.

ಈ ಅಪ್​ಡೇಟ್​ಗೆ ಆಧಾರ್​ ಗ್ರಾಹಕ ಸೇವಾ ಕೇಂದ್ರದಲ್ಲಿ 50 ರೂ. ಶುಲ್ಕ ವಿಧಿಸಲಾಗುತ್ತಿದೆ. ಆದರೆ ಆನ್​ಲೈನ್​ನಲ್ಲಿ ಉಚಿತವಾಗಿ ಮಾಡಿಕೊಳ್ಳಲು ಅವಕಾಶವಿದ್ದು,ಹತ್ತು ವರ್ಷಗಳ ಹಿಂದೆ ಆಧಾರ್​ ಪಡೆದವರು ತಮ್ಮ ಇತ್ತೀಚಿಗಿನ ಗುರುತು, ವಾಸದ ವಿಳಾಸ ಇತ್ಯಾದಿ ಮಾಹಿತಿಗಳನ್ನು ಜೂನ್ 14ರ ಒಳಗೆ ಉಚಿತವಾಗಿ ಅಪ್​​ಡೇಟ್ ಮಾಡಿಕೊಳ್ಳಬಹುದು.

ಅಲ್ಲದೆ ಡೆಮೊಗ್ರಫಿಕ್ ಡೇಟಾ ಅಂದರೆ, ಹೆಸರು, ವಿಳಾಸ, ಜನ್ಮದಿನಾಂಕ, ಲಿಂಗ, ಮೊಬೈಲ್​ಫೋನ್​ ನಂಬರ್, ಇ-ಮೇಲ್ ಐಡಿ ವಿವರಗಳನ್ನು ಅಪ್​ಡೇಟ್ ಮಾಡಿಕೊಳ್ಳಬಹುದು.

Free Aadhaar update-ಉಚಿತವಾಗಿ ಆಧಾರ್ ಅಪ್ಡೇಟ್ ಮಾಡುವ ಡೈರೆಕ್ಟ್ ಲಿಂಕ್

https://myaadhaar.uidai.gov.in/

ಮೊದಲು ಮುಖಪುಟದಲ್ಲಿರುವ login ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಆಧಾರ್ ನಂಬರ್ ಹಾಕಿ,Captcha type ಮಾಡಿ, send OTP ಮೇಲೆ ಕ್ಲಿಕ್ ಮಾಡಿ

ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Login ಮೇಲೆ ಕ್ಲಿಕ್ ಮಾಡಿ

ನಂತರ Document update ಮೇಲೆ ಕ್ಲಿಕ್ ಮಾಡಿ

ನಂತರ Next ಮೇಲೆ ಕ್ಲಿಕ್ ಮಾಡಿ

ನಂತರ ಮತ್ತೆ Next ಮೇಲೆ ಕ್ಲಿಕ್ ಮಾಡಿ

ನಂತರ ಮತ್ತೆ Next ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ POI ಅಂದರೆ ನಿಮ್ಮ ಗುರುತಿನ ಚೀಟಿಯಾಗಿ ಪ್ಯಾನ್ ಕಾರ್ಡ್ ಅಥವಾ ಯಾವುದಾದರು ಗುರುತಿನ ಚೀಟಿಯನ್ನು ಹಾಗೂ POA ಅಂದರೆ ನಿಮ್ಮ ವಿಳಾಸದ ಪುರಾವೆಯನ್ನು select ಮಾಡಿ ನಿಮ್ಮ passport ಅಥವಾ ಯಾವುದಾದರೂ ವಿಳಾಸದ ಪುರಾವೆಯ ಫೋಟೊವನ್ನು ಅಪ್ಲೋಡ್ ಮಾಡಿ,Next ಮೇಲೆ ಕ್ಲಿಕ್ ಮಾಡಿ

ಸೂಚನೆ:ನೀವು ಅಪ್ಲೋಡ್ ಮಾಡುವ ಫೋಟೊ 2MB ಗಿಂತ ಮೇಲೆ ಇರಬೇಕು.

ನಂತರ Okay ಮೇಲೆ ಕ್ಲಿಕ್ ಮಾಡಿ

ನಂತರ submit ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಆಧಾರ್ ಅಪ್ಡೇಟ್ ಆಗಿ,Success ಎಂದು ತೋರಿಸುತ್ತದೆ.

ನಂತರ Download acknowledgment ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ನಿಮಗೆ Acknowledgment ದೊರೆಯುತ್ತದೆ

]]>
Sun, 01 Jun 2025 13:36:06 +0530 shivuagrico
Unseasonal rains&ಅವಧಿ ಪೂರ್ವ ಅಕಾಲಿಕ ಮಳೆ,ಈಗ ಬಿಸಿಲು,ಮುಂದೇನು? https://krushirushi.in/Unseasonal-rains-2136 https://krushirushi.in/Unseasonal-rains-2136

Unseasonal rains-ಅವಧಿ ಪೂರ್ವ ಅಕಾಲಿಕ ಮಳೆ,ಈಗ ಬಿಸಿಲು,ಮುಂದೇನು?

ಮೇ ತಿಂಗಳು ಎಂದರೆ, ಸಾಮಾನ್ಯವಾಗಿ ವಿಪರೀತ ಬಿಸಿಲು ಇರುತ್ತದೆ. ಆದರೆ, ಕೆಲವು ವರ್ಷಗಳಿಂದ ಪರಿಸ್ಥಿತಿ ಬದಲಾಗಿದೆ. ಈ ವರ್ಷದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದಂತೆ ಕಾಣುತ್ತಿದ್ದು, ಆಗಿಂದಾಗ್ಗೆ ಭಾರಿ ಮಳೆ ಬೀಳುತ್ತಲೇ ಇದೆ. ಮಳೆಗಾಲದಲ್ಲೂ ಅಪರೂಪ ಎನ್ನುವಂಥ ಮಳೆ ಮುಂಗಾರು ಆಗಮನಕ್ಕೂ ಮುನ್ನವೇ ಸುರಿಯುತ್ತಿದೆ. ಮಳೆಗೆ ಪೂರ್ವಸಿದ್ಧತೆ ಇಲ್ಲದಿದ್ದಕ್ಕೆ ಮತ್ತು ಮೂಲಸೌಕರ್ಯಗಳ ಕೊರತೆಯ ಕಾರಣಕ್ಕೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಪ್ರದೇಶಗಳು ಹೊಳೆಯಂತಾಗಿವೆ.

ಮಳೆಗಾಲದಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಪ್ರವಾಹ ಉಂಟಾಗುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾದ ವಿದ್ಯಮಾನವಾಗಿತ್ತು. ಆದರೆ, ಈ ಬಾರಿ ಮುಂಗಾರುಪೂರ್ವದಲ್ಲೇ ಈ ಪರಿಸ್ಥಿತಿ ತಲೆದೋರಿದ್ದು, ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವಂತೆ ಮಾಡಿದೆ. ಕರ್ನಾಟಕ ಅಷ್ಟೇ ಅಲ್ಲದೇ, ದಖ್ಖನ್‌ ಪ್ರಸ್ಥಭೂಮಿ ವ್ಯಾಪ್ತಿಯ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ಅಕಾಲಿಕ ಮಳೆ ಸುರಿದು, ಸಮಸ್ಯೆಗಳು ಸೃಷ್ಟಿಯಾಗಿವೆ. ಉತ್ತರದ ದೆಹಲಿ, ಗುಜರಾತ್, ಉತ್ತರ ಪ್ರದೇಶ, ರಾಜಸ್ಥಾನ, ಜಾರ್ಖಂಡ್,  ಮುಂತಾದೆಡೆ ಕೂಡ ಇದೇ ಪರಿಸ್ಥಿತಿ ತಲೆದೋರಿದೆ.

ಮುಂಗಾರುಪೂರ್ವದಲ್ಲಿ ಆಗೀಗ ಮಳೆ ಸುರಿಯುವುದು ಹೊಸದೇನಲ್ಲ. ಬೇಸಿಗೆಯಲ್ಲಿ ಮಳೆಯಾಶ್ರಿತ ಕೃಷಿ ಚಟುವಟಿಕೆ ಆರಂಭಕ್ಕೆ ಮುಂಗಾರು ಪೂರ್ವ ಮಳೆಯೂ ಮುಖ್ಯ. ಆದರೆ, ನಿರಂತರವಾಗಿ ಸುರಿಯುವುದು, ಅದೂ ಮೇಘ ಸ್ಫೋಟವಾದಂತೆ ಭಾರಿ ಪ್ರಮಾಣದಲ್ಲಿ ಮಳೆಯಾಗುವುದು ಹೊಸ ವಿದ್ಯಮಾನವಾಗಿದೆ.

ಇದು ಮಳೆಯ ಕಥೆಯಾದರೆ, ಬಿಸಿಲಿನದ್ದು ಇನ್ನೊಂದು ಕಥೆ. ಸರಿಯಾಗಿ ವರ್ಷದ ಹಿಂದೆ, 2024ರ ಮೇನಲ್ಲಿ, ದೇಶದ 37 ನಗರಗಳಲ್ಲಿ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್ ಅನ್ನು ದಾಟಿತ್ತು. ರಾಜಸ್ಥಾನದ ಚುರು ಎಂಬಲ್ಲಿ 50.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಬಿಸಿಲಿನ ಹೊಡೆತಕ್ಕೆ ಜನ ತತ್ತರಿಸಿದ್ದಲ್ಲದೇ, ಜೀವನೋಪಾಯಕ್ಕೂ ಪೆಟ್ಟು ಬಿದ್ದಿತ್ತು. ಅನೇಕ ಭಾಗಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿತ್ತು. ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಬಿಸಿಗಾಳಿಯಿಂದಾಗಿ ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿತ್ತು. ಏಪ್ರಿಲ್‌ನಿಂದ ಜೂನ್‌ವರೆಗೆ ದೇಶದ ವಿವಿಧ ಭಾಗಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶದಲ್ಲಿ ವ್ಯತ್ಯಾಸವಾಗಲಿದ್ದು, ಬಿಸಿಗಾಳಿಯ ಅವಧಿ ಹೆಚ್ಚಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿತ್ತು. ಈ ಬಾರಿಯ ಹವಾಮಾನ ಇಲಾಖೆಯ ದೀರ್ಘಾವಧಿ ಮುನ್ಸೂಚನೆ (ಎಲ್‌ಆರ್‌ಎಫ್‌) ಪ್ರಕಾರ, ಇದೇ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ವಾಡಿಕೆಗಿಂತ ಹೆಚ್ಚು ಮಳೆ (ಶೇ 105ರಷ್ಟು) ಬೀಳಲಿದೆ. 

ಒಂದೆಡೆ, ಬಿಸಿಲು ತಾರಕಕ್ಕೇರಿ ವಿಪರೀತ ಎನ್ನುವಷ್ಟು ಬಿಸಿಗಾಳಿ ಬೀಸುವುದು. ಮತ್ತೊಂದೆಡೆ, ಪ್ರವಾಹ ಉಂಟಾಗುವಂತೆ ಅಕಾಲಿಕವಾಗಿ ಮಳೆ ಸುರಿಯುವುದು. ಕೆಲವೇ ಗಂಟೆಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿಯುವುದು... ಇವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿವೆ. ಪ್ರಕೃತಿ ವೈಪರೀತ್ಯಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ ಮತ್ತು ತೀವ್ರವಾಗುತ್ತಿವೆ. ಕೆಲವು ಪ್ರದೇಶಗಳಲ್ಲಿ ಬಿಸಿಲಿನ ಅವಧಿ ಹೆಚ್ಚಾಗಿರುತ್ತದೆ. ಕೆಲವು ಪ್ರದೇಶಗಳಲ್ಲಿ ಮುಂಗಾರಿಗೂ ಮುನ್ನವೇ ಮಳೆ ಸುರಿಯಲಾರಂಭಿಸುತ್ತದೆ. ವರ್ಷದಿಂದ ವರ್ಷಕ್ಕೆ ಹವಾಮಾನ ವ್ಯವಸ್ಥೆಯು ಸಂಕೀರ್ಣಗೊಳ್ಳುತ್ತಿದ್ದು, ಅದರ ಗತಿಯನ್ನು ಅರಿಯುವುದೇ ಕಷ್ಟವಾಗಿದೆ.   

ಜಾಗತಿಕ ತಾಪಮಾನ ಏರಿಕೆಯನ್ನು ಕೈಗಾರಿಕಾ ಪೂರ್ವ ಅವಧಿಯಲ್ಲಿ ಇದ್ದುದಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್ ಹೆಚ್ಚಳಕ್ಕೆ ಸೀಮಿತಗೊಳಿಸುವುದು ಪ್ಯಾರಿಸ್ ಒಪ್ಪಂದದ ಮುಖ್ಯ ನಿರ್ಣಯವಾಗಿತ್ತು. ಆದರೆ, 2024 ಜಾಗತಿಕವಾಗಿ ಅತಿ ತಾಪಮಾನದ ವರ್ಷವಾಗಿ ದಾಖಲೆ ಮಾಡಿದ್ದು ಅಷ್ಟೇ ಅಲ್ಲದೇ, 1.5 ಡಿಗ್ರಿ ಸೆಲ್ಸಿಯಸ್ ಮಿತಿಯನ್ನೂ ದಾಟಿತ್ತು. 

ಹವಾಮಾನ ಬದಲಾವಣೆ:

ತಾಪಮಾನದ ‌‌‌ಏರಿಕೆ, ಅಕಾಲಿಕ ಮಳೆ ಇವೆಲ್ಲವೂ ಹವಾಮಾನ ಬದಲಾವಣೆಯ ಪರಿಣಾಮಗಳು. 2025ರ ಫೆಬ್ರುವರಿ/ಮಾರ್ಚ್ ಆರಂಭದಲ್ಲೇ ಭಾರತದ ಕೆಲವು ಭಾಗಗಳಲ್ಲಿ ಬಿಸಿಗಾಳಿ ಬೀಸುವ ಮೂಲಕ ಹವಾಮಾನ ವೈಪರೀತ್ಯದ ಸುಳಿವು ನೀಡಿತ್ತು. ಬಿಸಿಲು ಮತ್ತು ಬಿಸಿಗಾಳಿ ದೀರ್ಘವಾಗುತ್ತಿರುವ ವಿದ್ಯಮಾನ ದೇಶದಲ್ಲಿ ಹೊಸದೇನಲ್ಲ. 20ನೇ ಶತಮಾನದ ನಂತರ ಸುಮಾರು 0.8 ಡಿಗ್ರಿ ಸೆಲ್ಸಿಯಸ್‌ನಷ್ಟು ಸರಾಸರಿ ತಾಪಮಾನ ಹೆಚ್ಚಾಗಿದೆ. ಮೇಲ್ಮೈ ಮತ್ತು ವಾಯುಮಂಡಲದ ಉಷ್ಣಾಂಶದಿಂದ ಬೇಸಿಗೆಯ ತಾಪ ಹೆಚ್ಚಾಗುತ್ತಿರುವುದಷ್ಟೇ ಅಲ್ಲ, ವಾಯುಮಂಡಲದ ತೇವಾಂಶ ಒಯ್ಯುವ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ. ವಾತಾವರಣದಲ್ಲಿನ ಹೆಚ್ಚಿನ ತೇವಾಂಶವು ತೀವ್ರ ಹಾಗೂ ಅಕಾಲಿಕ ಮಳೆ ಉಂಟುಮಾಡುತ್ತಿದೆ.

ದೇಶದಲ್ಲಿ ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶದಲ್ಲಿ ಹೆಚ್ಚಳವಾಗಿದೆ. ಕಳೆದ 50 ವರ್ಷದಲ್ಲಿ ದೇಶದಲ್ಲಿ ಹವಾಮಾನ ವೈಪರೀತ್ಯ ಹೆಚ್ಚಾಗಿದೆ. ಮುಂದಿನ 50 ವರ್ಷಗಳಲ್ಲಿ ಇದು ಮತ್ತಷ್ಟು ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಹಿಂದೆ, ಉತ್ತರದ ಕೆಲವು ರಾಜ್ಯಗಳಲ್ಲಿ ಮಾತ್ರ ಬಿಸಿಗಾಳಿ ಬೀಸುತ್ತಿತ್ತು. 20 ವರ್ಷಗಳಿಂದೀಚೆಗೆ, ಅದರ ವ್ಯಾಪ್ತಿ ವಿಸ್ತರಿಸಿದ್ದು, ಆಂಧ್ರ ಪ್ರದೇಶ, ತೆಲಂಗಾಣ, ಒಡಿಶಾ ರಾಜ್ಯಗಳೂ ಆ ಪಟ್ಟಿ ಸೇರಿವೆ. ಹಾಗೆಯೇ ಬಿಸಿಗಾಳಿಗೆ ಹೆಸರಾಗಿದ್ದ ಉತ್ತರದ ಹಲವು ರಾಜ್ಯಗಳಲ್ಲೂ ಪ್ರವಾಹಗಳು ಘಟಿಸುತ್ತಿವೆ. 

ಅಕಾಲಿಕ ಮಳೆ, ತಾಪಮಾನ ಹೆಚ್ಚಳ, ಪ್ರವಾಹ, ಬಿಸಿಗಾಳಿ, ಮೇಘ ಸ್ಫೋಟ ಎಲ್ಲಕ್ಕೂ ಹವಾಮಾನ ಬದಲಾವಣೆ ಕಾರಣವಾಗಿದ್ದು, ಅದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ, ಭವಿಷ್ಯದಲ್ಲಿ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. 

ವರ್ಷದಿಂದ ವರ್ಷಕ್ಕೆ ಹೆಚ್ಚು ವರ್ಷಧಾರೆ

ರಾಜ್ಯದಲ್ಲಿ ಮಾರ್ಚ್‌ 1ರಿಂದ ಮೇ 31ರ ನಡುವೆ ವಾಡಿಕೆಯಲ್ಲಿ 11.96 ಸೆಂ.ಮೀ. ಮಳೆಯಾಗುತ್ತದೆ. 2021ರಿಂದೀಚೆಗೆ ಪ್ರತಿ ವರ್ಷವೂ (2023 ಹೊರತು ಪಡಿಸಿ‌) ಹೆಚ್ಚು ಮಳೆಯಾಗುತ್ತಿದೆ. ಈ ವರ್ಷ ಮೇ ಮುಕ್ತಾಯವಾಗಲು ಇನ್ನೂ ಐದು ದಿನಗಳು ಬಾಕಿ ಇವೆ. ಈಗ ಮುಂಗಾರು ಕಾಲಿಡುತ್ತಿದೆ. ಆದರೆ, ಈಗಾಗಲೇ ವಾಡಿಕೆಗಿಂತಲೂ ಹೆಚ್ಚು ವರ್ಷಧಾರೆಯಾಗಿದೆ. ಮೇ 24ರವರೆಗೆ 19.4 ಸೆಂ.ಮೀನಷ್ಟು ಮಳೆ ಬಿದ್ದಿದೆ. ಮಾರ್ಚ್‌, ಏಪ್ರಿಲ್‌ಗೆ ಹೋಲಿಸಿದರೆ ಮೇ ತಿಂಗಳ ಎರಡನೇ ವಾರದ ನಂತರ ಭಾರಿ ಮಳೆ ಸುರಿದಿದೆ.     

ದಕ್ಷಿಣ ಒಳನಾಡು, ಉತ್ತರ ಒಳನಾಡು, ಮಲೆನಾಡು ಮತ್ತು ಕರಾವಳಿ ಪ್ರದೇಶ ಸೇರಿದಂತೆ ನಾಲ್ಕೂ ವಲಯಗಳಲ್ಲಿ ಮಳೆ ಜಾಸ್ತಿಯಾಗುತ್ತಿದೆ. ಈ ಬಾರಿ ಕರಾವಳಿಯಲ್ಲಿ ಶೇ 216ರಷ್ಟು ಹೆಚ್ಚು ಮಳೆಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ 33.91 ಸೆಂ.ಮೀನಷ್ಟು (ವಾಡಿಕೆ 10.74 ಸೆಂ.ಮೀ) ಮಳೆ ಸುರಿದಿದೆ. ಮಲೆನಾಡು ಭಾಗದಲ್ಲಿ 23.74 ಸೆಂ.ಮೀ ಮಳೆಯಾಗಿದೆ (ಶೇ 76ರಷ್ಟು ಹೆಚ್ಚು). ದಕ್ಷಿಣ ಒಳನಾಡಿನಲ್ಲಿ 20 ಸೆಂ.ಮೀ ಮತ್ತು ಉತ್ತರ ಒಳನಾಡು ಭಾಗದಲ್ಲಿ 14.75 ಸೆಂ.ಮೀ ಮಳೆ ಸುರಿದಿದೆ. ಇಲ್ಲಿ ಕ್ರಮವಾಗಿ ಶೇ 74 ಮತ್ತು ಶೇ 136ರಷ್ಟು ಹೆಚ್ಚು ವರ್ಷಧಾರೆಯಾಗಿದೆ. 

ಮುಂಗಾರು ಪೂರ್ವ ಅವಧಿಯಲ್ಲಿ ಅಕಾಲಿಕವಾಗಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದು ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಇಡೀ ದೇಶದಾದ್ಯಂತ ಈ ಪ್ರವೃತ್ತಿ ಕಂಡು ಬರುತ್ತಿದೆ. ಉತ್ತರದ ಲಡಾಖ್‌ನಿಂದ ದಕ್ಷಿಣದ ತಮಿಳುನಾಡಿನವರೆಗೆ ಪಶ್ಚಿಮದ ಗುಜರಾತ್‌ನಿಂದ ಪೂರ್ವದ ಪಶ್ಚಿಮ ಬಂಗಾಳದವರೆಗಿನ ಹಲವು ರಾಜ್ಯಗಳ ಬಹುತೇಕ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಮಳೆಯಾಗುತ್ತದೆ. ಮಿಜೋರಾಂ ಸೇರಿದಂತೆ ಈಶಾನ್ಯ ರಾಜ್ಯಗಳ ಹಲವು ಜಿಲ್ಲೆಗಳೂ ಹೆಚ್ಚಿನ ಪ್ರಮಾಣದ ಅಕಾಲಿಕ ಮಳೆಗೆ ಸಾಕ್ಷಿಯಾಗುತ್ತಿವೆ. 

ಭಾರತೀಯ ಹವಾಮಾನ ಇಲಾಖೆಯು ಮಾರ್ಚ್‌ 1ರಿಂದ ಮೇ 25ರವರೆಗೆ ದೇಶದಾದ್ಯಂತ ಜಿಲ್ಲೆಗಳಲ್ಲಿ ಆಗಿರುವ ಮಳೆಯ ಮಾಹಿತಿಯನ್ನು ಭಾರತದ ನಕ್ಷೆಯ ಮೂಲಕ ತೋರಿಸಿದ್ದು ದೇಶದ ಅರ್ಧಕ್ಕಿಂತಲೂ ಹೆಚ್ಚು ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ 60 ಮತ್ತು ಅದಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಮಳೆಯಾಗಿದೆ. 

ಆಧಾರ: ಪಿಟಿಐ, ಭಾರತೀಯ ಹವಾಮಾನ ಇಲಾಖೆ, ಕರ್ನಾಟಕ ವಿಪತ್ತು ನಿರ್ವಹಣಾ ಕೇಂದ್ರ, ಡೌನ್ ಟು ಅರ್ಥ್

]]>
Sun, 01 Jun 2025 08:14:32 +0530 shivuagrico
Mane hani parihara&ಮಳೆಯಿಂದಾದ ಮನೆಹಾನಿಗೆ 50,000 ದಿಂದ 1.20 ಲಕ್ಷ ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ https://krushirushi.in/Mane-hani-parihara-2135 https://krushirushi.in/Mane-hani-parihara-2135 Mane hani parihara-ಮಳೆಯಿಂದಾದ ಮನೆಹಾನಿಗೆ ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ

ರಾಜ್ಯ ಸರ್ಕಾರದಿಂದ ನೈರುತ್ಯ ಮುಂಗಾರು ಹಂಗಾಮು, ಈಶಾನ್ಯ ಮುಂಗಾರು ಹಂಗಾಮಿನಲ್ಲಿನ ಅತಿವೃಷ್ಟಿ, ಪ್ರವಾಹದಿಂದ ಹಾನಿಯಾಗುವ ಮನೆಗಳ ಪುನರ್ ನಿರ್ಮಾಣ, ದುರಸ್ಥಿ ಕಾರ್ಯ ಹಾಗೂ ಪ್ರವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡಿ ಆದೇಶಿಸಿದೆ.

ಈ ಸಂಬಂಧ ರಾಜ್ಯ ಸರ್ಕಾರದಿಂದ ನಡವಳಿಯನ್ನು ಹೊರಡಿಸಲಾಗಿದ್ದು, ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಹಾನಿಗಳಿಗೆ SDRF | NDRF ರಡಿ ನೀಡಬಹುದಾದ ಪರಿಹಾರಗಳ ಕುರಿತು ಭಾರತ ಸರ್ಕಾರದ ಗ್ರಹ ಮಂತ್ರಾಲಯವು ಮೇಲೆ ಓದಲಾದ (1) ರಂತೆ ಹೊರಡಿಸಿರುವ SDRF / NDRF Items and Norms of Assistance ರ ಮಾರ್ಗಸೂಚಿಗಳಲ್ಲಿ ನಿಗದಿಪಡಿಸಿರುವ ಪರಿಹಾರ ಮೊತ್ತದ ಜೊತೆಗೆ, 2024-25 ನೇ ಸಾಲಿನ ನೈಋತ್ಯ ಮುಂಗಾರು ಹಂಗಾಮಿನಲ್ಲಿ (01.06.2025 ರಿಂದ 30.09.2025) ಮತ್ತು ಈಶಾನ್ಯ ಮುಂಗಾರು ಹಂಗಾಮಿನಲ್ಲಿ (01.10.2025 ರಿಂದ 31.12.2025) ಅತಿವೃಷ್ಟಿ / ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ / ದುರಸ್ತಿ ಕಾರ್ಯ ಹಾಗೂ ಪುವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಹೆಚ್ಚುವರಿ ಮೊತ್ತವನ್ನು ನಿಗದಿಪಡಿಸಿ, ಸದರಿ ಪರಿಹಾರ ಮೊತ್ತವನ್ನು ಪಾವತಿಸಲು ಜಿಲ್ಲಾಧಿಕಾರಿಗಳು ಅನುಸರಿಸಬೇಕಾಗಿರುವ ಕ್ರಮಗಳ ಮತ್ತು ಷರತ್ತುಗಳ ಕುರಿತು ಮೇಲೆ ಓದಲಾದ (2), (3) ಮತ್ತು (4) ರ ಆದೇಶಗಳಲ್ಲಿ ಸೂಚನೆಗಳನ್ನು ನೀಡಲಾಗಿರುತ್ತದೆ.

ಪುಸ್ತುತ ಭಾರತೀಯ ಹವಾಮಾನ ಇಲಾಖೆಯು ನೈಋತ್ಯ ಮುಂಗಾರು (SouthWest) ಹಂಗಾಮು-2025 ರ ಮೊದಲ ಹಂತದ ಕಾರ್ಯಚರಣೆಯ ಧೀರ್ಘ ವ್ಯಾಪ್ತಿಯ ಮುನ್ಸೂಚನೆಯ (LRF) ಪುಕಾರ ಒಟ್ಟಾರೆಯಾಗಿ ದೇಶದಾದ್ಯಂತ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಮೇಲೆ ಓದಲಾದ (5) ರ ದಿನಾಂಕ: 15.05.2025 ರಂದು ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತದೆ. ಹಾಗಾಗಿ, ಪ್ರಸಕ್ತ ಸಾಲಿನಲ್ಲಿ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಮನೆ ಹಾನಿಗೆ ಪರಿಹಾರವನ್ನು ಪಾವತಿಸುವ ಬಗ್ಗೆ ಮಾರ್ಗಸೂಚಿಗಳನ್ನು ನೀಡುವುದು ಅವಶ್ಯಕವಾಗಿರುತ್ತದೆವಾದ್ದರಿಂದ, ಅತಿವೃಷ್ಟಿ | ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಪುನರ್ ನಿರ್ಮಾಣ / ದುರಸ್ತಿ ಕಾರ್ಯ ಹಾಗೂ ಪ್ರವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ 2024-25 ನೇ ಸಾಲಿನಲ್ಲಿ ಪಾವತಿಸಿರುವ ಪರಿಹಾರದಂತೆ 2025-26 ನೇ ಸಾಲಿನ ನೈಋತ್ಯ ಮುಂಗಾರು ಹಂಗಾಮಿನಲ್ಲಿ (01.06.2025 ರಿಂದ 30.09.2025) ಮತ್ತು ಈಶಾನ್ಯ ಮುಂಗಾರು ಹಂಗಾಮಿನಲ್ಲಿ (01.10.2025 ರಿಂದ 31.12.2025) ಹಾನಿಗೊಳಗಾಗುವ ಮನೆಗಳ ಪುನರ್ ನಿರ್ಮಾಣ / ದುರಸ್ತಿ ಕಾರ್ಯ ಹಾಗೂ ಪ್ರವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ನಿಯಾಮಾನುಸಾರ ಅರ್ಹತೆಯಂತೆ ಜಿಲ್ಲಾಧಿಕಾರಿರವರ ಹಂತದಲ್ಲಿಯೇ ಅವರ ಪಿ.ಡಿ. ಖಾತೆಯಲ್ಲಿ ಲಭ್ಯವಿರುವ ಅನುದಾನದಿಂದ ಪಾವತಿಸಲು ಸರ್ಕಾರವು ನಿರ್ಧರಿಸಿ ಕೆಳಕಂಡಂತೆ ಆದೇಶಿಸಿದೆ.

ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಅತಿವೃಷ್ಟಿ | ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಪುನರ್ ನಿರ್ಮಾಣ / ದುರಸ್ತಿ ಕಾರ್ಯ ಹಾಗೂ ಪ್ರವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ 2024-25 ನೇ ಸಾಲಿನಲ್ಲಿ ಪಾವತಿಸಿರುವ ಕೆಳಕಂಡ ಪರಿಹಾರದಂತೆ, 2025-26 ನೇ ಸಾಲಿನ ನೈಋತ್ಯ ಮುಂಗಾರು ಹಂಗಾಮಿನಲ್ಲಿ (01.06.2025 ರಿಂದ 30.09.2025) ಮತ್ತು ಈಶಾನ್ಯ ಮುಂಗಾರು ಹಂಗಾಮಿನಲ್ಲಿ (01.10.2025 ರಿಂದ 31.12.2025) ಹಾನಿಗೊಳಗಾಗುವ ಮನೆಗಳ ಪುನರ್ ನಿರ್ಮಾಣ / ದುರ ಕಾರ್ಯ ಹಾಗೂ ಪುವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ನಿಯಾಮಾನುಸಾರ ಅರ್ಹತೆಯಂತೆ ಪರಿಹಾರವನ್ನು ಮೇಲೆ ಓದಲಾದ (2), (3) ಮತ್ತು (4) ರ ಆದೇಶಗಳಲ್ಲಿ ವಿಧಿಸಿರುವ ಷರತ್ತುಗಳ ಪಾಲನೆಗೆ ಒಳಪಟ್ಟು, ಜಿಲ್ಲಾಧಿಕಾರಿರವರ ಹಂತದಲ್ಲಿಯೇ ಅವರ ಪಿ.ಡಿ. ಖಾತೆಯಲ್ಲಿ ಲಭ್ಯವಿರುವ ಅನುದಾನದಿಂದ ಪಾವತಿಸಲು ಸರ್ಕಾರದ ಮಂಜೂರಾತಿ ನೀಡಿ, ಆದೇಶಿಸಿದೆ.

ಪ್ರವಾಹದಿಂದ ಹಾನಿಗೊಳಗಾದ ಮನೆಗಳನ್ನು 02 ವರ್ಗಗಳಲ್ಲಿ (ಪೂರ್ಣ ಹಾನಿಯಾದ ಮನೆಗಳ ಮರು ನಿರ್ಮಾಣ ಮತ್ತು ಭಾಗಶ: ಹಾನಿಯಾದ ಮನೆಗಳ ದುರಸ್ತಿ) ವಿಂಗಡಿಸಿ ಪರಿಹಾರ ಪಾವತಿಸುವುದು.


ಪೂರ್ಣಹಾನಿಯಾದ ಮನೆಗಳಿಗೆ ಭಾರತ ಸರ್ಕಾರದ ಗೃಹ ಮಂತ್ರಾಲಯವು ದಿನಾಂಕ:11/07/2023ರಂದು ಹೊರಡಿಸಿರುವ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ / ರಾಜ್ಯ ವಿಪತ್ತು ಪರಿಹಾರ ನಿಧಿಯ Revised Items and Norms of Assistance ರ ಮಾರ್ಗಸೂಚಿಗಳನ್ವಯ ರೂ.1.20 ಲಕ್ಷಗಳ ಪರಿಹಾರದ ಜೊತೆಗೆ ಹೆಚ್ಚುವರಿಯಾಗಿ ವಸತಿ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ದೇವರಾಜ್ ಅರಸು ವಸತಿ ಯೋಜನೆಯಡಿ ಮನೆ ನೀಡುವುದು. ದೇವರಾಜ್ ಅರಸು ವಸತಿ ಯೋಜನೆಯಡಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾಮಾನ್ಯ ವರ್ಗಗಳಿಗೆ ಮಂಜೂರು ಮಾಡುವ ಮನೆಗೆ ರೂ.1.20 ಲಕ್ಷ ಮತ್ತು ಎಸ್ಸಿ/ಎಸ್‌ಟಿ ವರ್ಗಗಳಿಗೆ ಮಂಜೂರು ಮಾಡುವ ಮನೆಗೆ ರೂ.1.50 ಲಕ್ಷ ಮಂಜೂರು ಮಾಡುವುದು. ಈ ಮನೆಗಳನ್ನು ಜಿಲ್ಲಾಧಿಕಾರಿಗಳು ಅನುಮೋದನೆ ಮಾಡಿ ವಿವರಗಳೊಂದಿಗೆ ಫಲಾನುಭವಿಗಳ ಪಟ್ಟಿಯನ್ನು RGRHCL ಪರಿಹಾರ ತಂತ್ರಾಂಶದಲ್ಲಿ ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ವಿವರಗಳನ್ನು ದಾಖಲಿಸುವುದು.
ಅನಧಿಕೃತ ಜಮೀನಿನಲ್ಲಿ ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ ಒಂದು ಬಾರಿ ಪರಿಹಾರವಾಗಿ ರೂ.1.00 ಲಕ್ಷಗಳನ್ನು ಪಾವತಿಸುವುದು ಮತ್ತು ಯಾವುದೇ ಮನೆಯನ್ನು ಮಂಜೂರು ಮಾಡುವಂತಿಲ್ಲ.

ಭಾರತ ಸರ್ಕಾರದ ಗ್ರಹ ಮಂತ್ರಾಲಯವು ದಿನಾಂಕ:11/07/2023ರಂದು ಹೊರಡಿಸಿರುವ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ / ರಾಜ್ಯ ವಿಪತ್ತು ಪರಿಹಾರ ನಿಧಿಯ Revised Items and Norms of Assistance ರ ಮಾರ್ಗಸೂಚಿಗಳನ್ವಯ ಭಾಗಶಃ ಹಾನಿಗೊಳಗಾದ ಮನೆಗಳ ದುರಸ್ತಿಗೆ ಕನಿಷ್ಟ ರೂ.6,500/- ಗಳಿಂದ ಗರಿಷ್ಮ ರೂ.50,000/-ಗಳನ್ನು ಈ ಕೆಳಕಂಡಂತೆ ಪಾರದರ್ಶಕ ಮಾನದಂಡಗಳನ್ವಯ ಅರ್ಹತೆಯನುಸಾರ ಪಾವತಿಸುವುದು.

]]>
Sat, 31 May 2025 18:23:31 +0530 shivuagrico
Ineligible ration card&ರಾಜ್ಯದಲ್ಲಿ ಶೇಕಡಾ 74 ರಷ್ಟು ಅನರ್ಹ ಬಿಪಿಎಲ್ ಕಾರ್ಡ್&ರದ್ದು ಮಾಡಲು ಆದೇಶಿಸಿದ ಸಿದ್ದರಾಮಯ್ಯ https://krushirushi.in/Ineligible-ration-card-2134 https://krushirushi.in/Ineligible-ration-card-2134 Ineligible ration card-ರಾಜ್ಯದಲ್ಲಿ ಶೇಕಡಾ 74 ರಷ್ಟು ಅನರ್ಹ ಬಿಪಿಎಲ್ ಕಾರ್ಡ್-ರದ್ದು ಮಾಡಲು ಆದೇಶಿಸಿದ ಸಿದ್ದರಾಮಯ್ಯ

ಅನರ್ಹ ಪಡಿತರ ಚೀಟಿದಾರರಿಗೆ ಸಿಎಂ ಸಿದ್ದರಾಮಯ್ಯ ಬಿಗ್ ಶಾಕ್ ನೀಡಿದ್ದು, ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ ಸಿಇಒಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರೊಂದಿಗೆ ಆರೋಗ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ, ವಸತಿ ಸೇರಿದಂತೆ ವಿವಿಧ ಇಲಾಖೆಗಳ ಬಗ್ಗೆ ಸತತ 9 ಗಂಟೆಗಳ ಕಾಲ ಸುಧೀರ್ಘ ಸಭೆ ನಡೆಸಿದ್ದಾರೆ.
ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಆದರೆ ಇದರಲ್ಲಿ ನಿರೀಕ್ಷಿತ ಪ್ರಗತಿ ಯಾಕೆ ಸಾಧ್ಯವಾಗಿಲ್ಲ.

 ರಾಜ್ಯದಲ್ಲಿ ಸುಮಾರು ಶೇ. 74ರಷ್ಟು ಬಿಪಿಎಲ್ ಕಾರ್ಡುಗಳಿದ್ದು, ಅನರ್ಹರನ್ನು ಗುರುತಿಸಿ ತೆಗೆದು ಹಾಕುವ ಮೂಲಕ ಅರ್ಹರಿಗೆ ಸವಲತ್ತು ಒದಗಿಸುವ ಕಾರ್ಯ ನಡೆಯಬೇಕಿದೆ ಎಂದು ಸೂಚನೆ ನೀಡಿಯಾಗಿತ್ತು. ಆದರೂ ಇದರಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಆಗಿಲ್ಲ ಏಕೆ ಎಂದು ಪ್ರಶ್ನಿಸಿದರು.

ಅನರ್ಹ ಪಟ್ಚಿಯಲ್ಲಿ ನಿಮ್ಮ ಹೆಸರು ಹೀಗೆ ಚೆಕ್ ಮಾಡಿ

https://ahara.kar.nic.in/Home/EServices

ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ e-Ration Card ಮೇಲೆ ಕ್ಲಿಕ್ ಮಾಡಿ

ನಂತರ Show cancelled/suspended list ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಜಿಲ್ಲೆ,ತಾಲೂಕು,ತಿಂಗಳು,ವರ್ಷ select ಮಾಡಿ,Go ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಅನರ್ಹ ಪಟ್ಟಿ ಸಿಗಲಿದೆ,ಇದರಲ್ಲಿ ನಿಮ್ಮ ಹೆಸರಿದ್ದರೆ,ನಿಮಗೆ ಈ ತಿಂಗಳಿನಿಂದ ಅನ್ನಭಾಗ್ಯ ಹಾಗೂ ಗೃಹಲಕ್ಷ್ನಿ ಹಣ ಸಿಗುವುದಿಲ್ಲ

]]>
Sat, 31 May 2025 13:15:52 +0530 shivuagrico
Marriage incentive&ಮದುವೆ ಆಗುವವರಿಗೆ ಸಿಗಲಿದೆ 60,000 ರೂಪಾಯಿ ಸಹಾಯಧನ https://krushirushi.in/Marriage-incentive-2133 https://krushirushi.in/Marriage-incentive-2133 Marriage incentive-ಮದುವೆ ಆಗುವವರಿಗೆ ಸಿಗಲಿದೆ 60,000 ರೂಪಾಯಿ ಸಹಾಯಧನ

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣಡ ಮಂಡಳಿ ನೊಂದಾಯಿತ ಕಾರ್ಮಿಕರಿಗೆ ಸಿಹಿಸುದ್ದಿ ನೀಡಿದ್ದು, ಮಂಡಳಿಯು ನೋಂದಾಯಿತ ಕಾರ್ಮಿಕರ ಮದುವೆಗೆ ಅಥವಾ ಅವರ ಮಕ್ಕಳ ಮದುವೆಗೆ 60,000 ರೂ. ಸಹಾಯಧನವನ್ನು ನೀಡುತ್ತದೆ.

ನೋ೦ದಾಯಿತ ಕಾರ್ಮಿಕರ ಮದುವೆ ಅಥವಾ ಅವರ ಮಕ್ಕಳ ಮದುವೆಗೆ ಮ೦ಡಳಿಯು ಸಹಾಯಧನವನ್ನು ನೀಡುತ್ತದೆ

ಅರ್ಹತೆ ಮತ್ತು ಮಾನದಂಡಗಳು

ಮ೦ಡಳಿಯಲ್ಲಿ ನೋ೦ದಾಯಿತ ಸದಸ್ಯರಾಗಿರಬೇಕು

ನೋ೦ದಣಿ ದಿನಾ೦ಕದಿ೦ದ ಮದುವೆ ದಿನಾ೦ಕದವರೆಗೆ ಮ೦ಡಳಿಯಲ್ಲಿ ಕನಿಷ್ಠ ಒಂದು ವರ್ಷ ಸದಸ್ಯತ್ವವನ್ನು ಪೂರೈಸಿರಬೇಕು

ಒ೦ದು ಕುಟು೦ಬವು ಎರಡು ಬಾರಿ ಮಾತ್ರ ಸಹಾಯಧನ ಪಡೆಯಲು ಅವಕಾಶವಿರುತ್ತದೆ

ಸಹಾಯಧನವನ್ನು ಪಡೆಯಲು ವಿವಾಹ ನಿಯಮದಡಿ ಸೂಚಿಸಿರುವ ವಯಸ್ಸನ್ನು ತಲುಪಿರಬೇಕು

ಮದುವೆಯ ದಿನಾ೦ಕದಿಂದ 6 ತಿಂಗಳ ಒಳಗೆ ಅರ್ಜಿ ಸಲ್ಲಿಸಬೇಕು

ಈ ರೀತಿ ಅರ್ಜಿ ಸಲ್ಲಿಸಿ

1) ಅಧಿಕೃತ ವೆಬ್ ಸೈಟ್ https://karbwwb.karnataka.gov.in/kn  ಗೆ ಭೇಟಿ ನೀಡಿ
2) ಬಳಿಕ ಲಾಗಿನ್ ಆಗಬೇಕು
3) Registration ಮೇಲೆ ಕ್ಲಿಕ್ ಮಾಡಿ ಪೂರ್ಣಗೊಳಿಸಿ
4)ಬಳಿಕ ಅಲ್ಲಿ Schemes ಯೋಜನೆಗಳು ಮೇಲೆ ಕ್ಲಿಕ್ ಮಾಡಿ
5) ನಂತರ ಮದುವೆ ಸಹಾಯಧನ ಮೇಲೆ ಕ್ಲಿಕ್ ಮಾಡಿ
6) ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ದಾಖಲಾತಿಗಳನ್ನು ಅಪ್ ಲೋಡ್ ಮಾಡಿ
7) ಕೊನೆಗೆ submit ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ

Online marriage registration-ಮದುವೆಗಳು ನಿಶ್ಚಯವಾಗಲಿ ಸ್ವರ್ಗದಲ್ಲಿ,ನೊಂದಣೆಯಾಗಲಿ ಕಾವೇರಿ 2.0ರಲ್ಲಿ, ನೊಂದಣೆ ಮಾಡುವ ಡೈರೆಕ್ಟ್ ಲಿಂಕ್

ರಾಜ್ಯ ಸರ್ಕಾರದಿಂದ ವಿವಾಹ ನೋದಂಣಿಗಾಗಿ ಕಚೇರಿ ಅಲೆದಾಟಕ್ಕೆ ಬ್ರೇಕ್ ಹಾಕಲಾಗಿದೆ. ಇದರ ಬದಲಾಗಿ ಆನ್ ಲೈನ್ ಮೂಲಕ ನೋಂದಣಿ ಮಾಡೋದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸೋ ನಿಮಗೆ ವಿವಾಹ ನೋಂದಣಿ ಮಾಜಿಸಬೇಕು ಅಂದ್ರೆ ಜಸ್ಟ್ ಕುಳಿತಲ್ಲೇ ಆನ್ ಲೈನ್ ಮೂಲಕ ನೋಂದಣಿ ಮಾಡಬಹುದಾಗಿದೆ.

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ


https://kaveri.karnataka.gov.in  

ನಂತರ ಬಲಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ

ನಂತರ Register ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಿನಂತೆ ನಿಮ್ಮ ಮಾಹಿತಿಯನ್ನು ತುಂಬಿ register ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಇಮೇಲ್ ಗೆ ಬರುವ User Id ಮತ್ತು password ಹಾಕಿ ಪೋರ್ಟಲ್‌ಗೆ ಲಾಗಿನ್ ಮಾಡಿ

ವಿವಾಹ ನೋಂದಣಿ ಸೇವೆ ಆಯ್ಕೆಮಾಡಿ ಮತ್ತು ವಿವರ ನಮೂದಿಸಿ ಅರ್ಜಿ ಸಲ್ಲಿಸಿ


ಗಂಡ, ಹೆಂಡತಿ ಮತ್ತು ಮೂರು ಸಾಕ್ಷಿದಾರರ ಆಧಾ‌ರ್ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಿ
(ಇ-ನೋಂದಣಾಧಿಕಾರಿಯಿಂದ ಅರ್ಜಿ ಪರಿಶೀಲನೆ,ಆನ್‌ಲೈನ್ ಮೂಲಕ ಶುಲ್ಕ ಸಂದಾಯಕ್ಕೆ ಅವಕಾಶ)

ಕಾವೇರಿ ಪೋರ್ಟಲ್‌ನಲ್ಲಿ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿ

]]>
Sat, 31 May 2025 06:30:21 +0530 shivuagrico
Free mobile repair training&ಉಚಿತ ಊಟ ವಸತಿಯೊಂದಿಗೆ 1 ತಿಂಗಳ ಮೊಬೈಲ್ ರಿಪೇರಿ ತರಭೇತಿ https://krushirushi.in/Free-mobile-repair-training-2132 https://krushirushi.in/Free-mobile-repair-training-2132 Free mobile repair training-ಉಚಿತ ಊಟ ವಸತಿಯೊಂದಿಗೆ 1 ತಿಂಗಳ ಮೊಬೈಲ್ ರಿಪೇರಿ ತರಭೇತಿ

ಹಾವೇರಿ ಜಿಲ್ಲೆಯವರಿಗೆ ಮಾತ್ರ

ಉಚಿತ ಉಚಿತ ಉಚಿತ
*ಬ್ಯಾಂಕ್ ಆಫ್ ಬರೋಡ  ತರಬೇತಿ ಸಂಸ್ಥೆ ದೇವಗಿರಿ ಹಾವೇರಿಯಲ್ಲಿ *"    ಮೊಬೈಲ್ ರೀಪೆರ್* "ತರಬೇತಿ ಯನ್ನು *ಜುಲೈ ತಿಂಗಳಲ್ಲಿ* ಹಮ್ಮಿಕೊಳ್ಳಲಾಗಿದೆ

 *ತರಬೇತಿಯಲ್ಲಿ* 
1)ಕೀ ಪ್ಯಾಡ್  ಐಂಡ್ರಾಯಿಡ್ ಮೊಬೈಲ್ ರೀಪೆರ 
2)  ಫವರ್, ವೊಲ್ಟೇಜ್,ಚಾರ್ಜಿಂಗ್,ಕ್ಯಾಮರ್,ಬ್ಯಾಟರಿ,ಡಿಸ್ಪ್ಲೆ,ಹ್ಯಾಂಗಿಂಗ್ ಪ್ರಾಬ್ಲಮ್ ಸೋಲುಶನ್
3)ರೀಸೆಟ್,ಸಾಪ್ಟವೇರ್ಸ,GPRS,wifi,GSM,MMC ಇತ್ಯಾದಿಗಳನ್ನು ಉಚಿತವಾಗಿ ಕಲಿಸುತ್ತೇವೆ

ತಮ್ಮ ಹೆಸರನ್ನು ಫೋನ್ ಮೂಲಕ ನೋಂದಾಯಿಸಿಕೊಳ್ಳಲು *8660219375* ನಂಬರ್ ಗೆ ಕಾಲ್ ಮಾಡಿ.

Free CCTV Installation and repair training-ಉಚಿತ ಊಟ ವಸತಿಯೊಂದಿಗೆ ಸಿಸಿಟಿವಿ ಅಳವಡಿಕೆ ಮತ್ತು ರಿಪೇರಿ ತರಬೇತಿ

ಇದೇ ರೀತಿ ಬೇರೆ ಜಿಲ್ಲೆಗಳಲ್ಲೂ ಲೀಡ್ ಬ್ಯಾಂಕ್ ವತಿಯಿಂದ ತರಭೇತಿಗಳು ನಡೆಯುತ್ತವೆ,ಹೆಚ್ಚಿನ ಮಾಹಿತಿಗಾಗಿ ನಿಮ್ಮ ಜಿಲ್ಲೆಯ ಲೀಡ್ ಬ್ಯಾಂಕ್ ಸಂಪರ್ಕಿಸಿ


Free tailoring training-ಉಚಿತ ಊಟ ವಸತಿಯೊಂದಿಗೆ ಹೊಲಿಗೆ ಯಂತ್ರ ತರಭೇತಿ


ಉಚಿತ ಉಚಿತ ಉಚಿತ
*ಬ್ಯಾಂಕ್ ಆಫ್ ಬರೋಡ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ದೇವಗಿರಿ ಹಾವೇರಿಯಲ್ಲಿ ಮಹಿಳೆಯರ ಉಚಿತ ಹೊಲಿಗೆ ತರಬೇತಿಯನ್ನು ದಿನಾಂಕ 2.6.2025 ರಿಂದ 2.7.2025  ರ ವರೆಗೆ 31 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ* 

ಹಾವೇರಿ ಜಿಲ್ಲೆಯ  ಗ್ರಾಮೀಣ ಭಾಗದ BPL ರೇಷನ್ ಕಾರ್ಡ ಹೊಂದಿದ 18-45 ವಯಸ್ಸಿನ ನಿರುದ್ಯೋಗಿ ಯುವತಿಯರಿಗೆ ಅವಕಾಶವಿದೆ.
 *ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ.*
ತರಬೇತಿಯಲ್ಲಿ ಕಲಿಸುವ ವಿಷಯಗಳು 
ಕಟೋರಿ ಬ್ಲೌಸ್
ಪ್ರಿನ್ಸೆಸ್ ಕಟ್ ಬ್ಲೌಸ್ 
ಬೋಟ್ ನೆಕ್ ಬ್ಲೌಸ್ 
ಸಾದಾ ಬ್ಲೌಸ್
ಹೈ ನೆಕ್ ಬ್ಲೌಸ್
V ನೆಕ್ ಬ್ಲೌಸ್ 
ಫುಲ್ ಸ್ಲೀವ್ ಬ್ಲೌಸ್ ಹೊಲಿಯುವುದು 
ಚೂಡಿದಾರ್ ಹೊಲಿಯುವುದು 
ಸಣ್ಣ ಮಕ್ಕಳ ಬಟ್ಟೆ ಹೊಲಿಯುವುದು 
ಯೂನಿಫಾರ್ಮ್
ಲಾಂಗ್ ಗೌನ್ ಹೊಲಿಯುವುದು
ಕ್ರಾಪ್ ಟಾಪ್ ಹೊಲಿಯುವುದು
ನೈಟ್ ಡ್ರೆಸ್ ಹೊಲಿಯುವುದು
ಮುಂತಾದವುಗಳನ್ನು ಉಚಿತವಾಗಿ ಕಲಿಸುತ್ತೇವೆ..

ತಮ್ಮ ಹೆಸರನ್ನು ಫೋನ್ ಮೂಲಕ ನೋಂದಾಯಿಸಿಕೊಳ್ಳಲು *8660219375* ನಂಬರ್ ಗೆ ಕಾಲ್ ಮಾಡಿ.

]]>
Fri, 30 May 2025 13:16:51 +0530 shivuagrico
Bhagyalakshmi bond&ಭಾಗ್ಯಲಕ್ಷ್ಮಿ ಯೋಜನೆಯಡಿ 18 ವರ್ಷ ತುಂಬಿದ ಹೆಣ್ಣು ಮಕ್ಕಳ ಖಾತೆಗೆ 1 ಲಕ್ಷ ಹಣ ಜಮಾ ಪ್ರಾರಂಭ, ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ https://krushirushi.in/Bhagyalakshmi-bond-2131 https://krushirushi.in/Bhagyalakshmi-bond-2131 Bhagyalakshmi bond-ಭಾಗ್ಯಲಕ್ಷ್ಮಿ ಯೋಜನೆಯಡಿ 18 ವರ್ಷ ತುಂಬಿದ ಹೆಣ್ಣು ಮಕ್ಕಳ ಖಾತೆಗೆ 1 ಲಕ್ಷ ಹಣ ಜಮಾ ಪ್ರಾರಂಭ, ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 2006-07ನೇ ಸಾಲಿನಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಡಿ ಬಾಂಡ್ ಪಡೆದ ಫಲಾನುಭವಿಗಳಿಗೆ ಪರಿಪಕ್ವ ಮೊತ್ತ ಪಾವತಿಸಲು ಪ್ರಸ್ತಾವನೆ ಸಲ್ಲಿಸಬಹುದು.

ಮೂಲ ಭಾಗ್ಯಲಕ್ಷ್ಮಿ ಬಾಂಡ್, ಬ್ಯಾಂಕ್ ಖಾತೆಯ ಪಾಸ್ ಪುಸ್ತಕ, ಬಿಪಿಎಲ್ ರೇಷನ್ ಕಾರ್ಡ್, ವ್ಯಾಸಂಗ ಪ್ರಮಾಣ ಪತ್ರ, ತಂದೆ, ತಾಯಿ ಮಗುವಿನ ಆಧಾರ್ ಕಾರ್ಡ್ ಜನನ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ತಿಳಿಸಿದ್ದಾರೆ.

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

http://blakshmi.kar.nic.in:8080/First.jsp

ನಂತರ "Home" ಪಕ್ಕದಲ್ಲಿರುವ "Quick search" ಮೇಲೆ ಕ್ಲಿಕ್ ಮಾಡಿ 

ನಂತರ "Quick search" ಕೆಳಗಿರುವ "Multi search" ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಜಿಲ್ಲೆ,ತಾಲೂಕು Select ಮಾಡಿ

ನಂತರ ನಿಮ್ಮ ಹೆಣ್ಣು ಮಗುವಿನ ಹೆಸರು,ಜನ್ಮ ದಿನಾಂಕ ಹಾಗೂ ಭಾಗ್ಯಲಕ್ಷ್ಮಿ ಬಾಂಡ್ ನಲ್ಲಿರುವ ಮಗುವಿನ id numbe ಹಾಕಿ,captch code ಹಾಕಿ search ಮೇಲೆ ಕ್ಲಿಕ್ ಮಾಡಿದರೆ, ಪಟ್ಟಿ ದೊರೆಯಲಿದೆ

ಫಲಾನುಭವಿಗಳು ಚಾಲ್ತಿಯಲ್ಲಿನ ಬ್ಯಾಂಕ್‌ ಖಾತೆ ಸಂಖ್ಯೆ, ಐಎಸ್‌ಎಫ್‌ಸಿ ಕೋಡ್‌, ಆಧಾರ್‌ ಕಾರ್ಡ್‌ ಸಂಖ್ಯೆ, ಯೋಜನೆಯ ಒರಿಜಿನಲ್‌ ಬಾಂಡ್‌, ಮಗುವಿನ ಜನನ ಪ್ರಮಾಣ ಪತ್ರ, ತಂದೆ, ತಾಯಿ, ಮಗುವಿನ ಹೆಸರು ಬದಲಾವಣೆಯಾಗಿದ್ದರೆ ಸಂಬಂಧಿಸಿದ ಸಿಡಿಪಿಒ ಅವರಿಂದ ದೃಢೀಕರಣ ಪತ್ರ, ಬಾಂಡ್‌ ಕಳೆದಿದ್ದರೆ ಬಾಂಡ್‌ ನಕಲು ಪ್ರತಿ ಜತೆ ಎಫ್‌ಐಆರ್‌ ಪ್ರತಿ, ದತ್ತು ಮಕ್ಕಳಾಗಿದ್ದಲ್ಲಿಕಾನೂನಾತ್ಮಕವಾಗಿ ದತ್ತು ಪಡೆದ ಪೋಷಕರ ಹೆಸರನ್ನು ಸಿಡಿಪಿಒ ದೃಢೀಕರಿಸಬೇಕು. ತಾಲೂಕು ಕೋಡ್‌ ಬದಲಾವಣೆ ಇದ್ದಲ್ಲಿ ಸಿಡಿಪಿಒ ದೃಢೀಕರಿಸಿದ ನಂತರವೇ ಪರಿಪಕ್ವ ಹಣ ನೀಡಲಾಗುವುದು.



ಏನಿದು ಭಾಗ್ಯಲಕ್ಷ್ಮಿ ಯೋಜನೆ


ಹೆಣ್ಣು ಮಗುವಿನ ಸ್ಥಾನವನ್ನು ಮೊದಲು ಕುಟುಂಬದಲ್ಲಿ ನಂತರ ಸಮಾಜದಲ್ಲಿ ಹೆಚ್ಚಿಸಲು ಮತ್ತು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನ ಉತ್ತೇಜಿಸಲು 2006-07ನೇ ಸಾಲಿನಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ "ಭಾಗ್ಯಲಕ್ಷ್ಮಿ" ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಯಿತು.

 ಈ ಯೋಜನೆಯ ಆರ್ಥಿಕ ಸೌಲಭ್ಯವನ್ನು ಹೆಣ್ಣು ಮಗುವಿಗೆ ಅದರ ತಾಯಿ/ತಂದೆ/ಪೋಷಕರ ಮೂಲಕ ಕೆಲವು ನಿಬಂಧನೆಗಳನ್ನು ಪೂರೈಸಿದಲ್ಲಿ ನೀಡಲಾಗುವುದು.
← ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳಲ್ಲಿ 31.3.2006ರ ನಂತರ ಜನಿಸಿದ ಹೆಣ್ಣು ಮಕ್ಕಳು ಈ ಯೋಜನೆಯಡಿ ಫಲಾನುಭವಿಗಳಾಗಿ ನೋಂದಾಯಿಸಿಕೊಳ್ಳಲು ಆರ್ಹರಿರುತ್ತಾರೆ.


ಮಗು ಜನಿಸಿದ ಒಂದು ವರ್ಷದೊಳಗೆ ಜನನ ಪ್ರಮಾಣ ಪತ್ರವನ್ನು ಒದಗಿಸಿ ನೋಂದಾಯಿಸಲು ಅವಕಾಶವಿದೆ.


ಈ ಯೋಜನೆಯ ಸೌಲಭ್ಯಗಳನ್ನು ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬದ ಇಬ್ಬರು ಹೆಣ್ಣುಮಕ್ಕಳಿಗೆ ಸೀಮಿತಗೊಳಿಸಲಾಗಿದೆ.


ಫಲಾನುಭವಿ ಹೆಣ್ಣುಮಗುವಿನ ತಂದೆ ಅಥವಾ ತಾಯಿ ಶಾಶ್ವತ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡಿರತಕ್ಕದ್ದು ಮತ್ತು ಕುಟುಂಬದಲ್ಲಿ ಮಕ್ಕಳ ಸಂಖ್ಯೆ 2ಕ್ಕಿಂತ ಹೆಚ್ಚಿಗೆ ಇರಬಾರದು.


ನೋಂದಣಿ ನಂತರ ಹಾಗೂ ಪೂರ್ಣ ಪರಿಶೀಲನೆ ನಂತರ ದಿನಾಂಕ:31.07.2008ರವರೆಗೆ ಜನಿಸಿದ ಪ್ರತಿ ಫಲಾನುಭವಿಗೆ ರೂ.10,000/-ಗಳನ್ನು ಆಯ್ಕೆಯಾದ ಪಾಲುದಾರ ಹಣಕಾಸು ಸಂಸ್ಥೆಯಲ್ಲಿ ನಿಶ್ಚಿತ ಠೇವಣಿಯನ್ನು ಇಡಲಾಗಿದೆ.


ಪಾಲುದಾರ ಹಣಕಾಸು ಸಂಸ್ಥೆಯು ಹೆಣ್ಣುಮಗುವಿನ ಹೆಸರಿನಲ್ಲಿ ಇಟ್ಟ ರೂ.10,000/-ಗಳ ಠೇವಣಿಯ ಮೇಲಿನ ಆದಾಯವನ್ನು ಗರಿಷ್ಠಗೊಳಿಸಿ, ಠೇವಣಿ ಹಣವನ್ನು ಬಡ್ಡಿ ಸಮೇತವಾಗಿ ಫಲಾನುಭವಿಗಳಿಗೆ 18 ವರ್ಷಗಳು ಪೂರ್ಣಗೊಂಡನಂತರ ದೊರಕಿಸಿಕೊಡುತ್ತದೆ.


ಮೊದಲ ಮಗುವಿಗೆ ಪರಿಪಕ್ವ ಮೊತ್ತ ರೂ.34,751/-ನ್ನು ಮತ್ತು ಎರಡನೇ ಮಗುವಿಗೆ ರೂ.40,918/-ನ್ನು ನೀಡಲಾಗುತ್ತದೆ.


 ಫಲಾನುಭವಿಗೆ ವಿದ್ಯಾರ್ಥಿ ವೇತನ, ವಿಮೆ ಸೌಲಭ್ಯ ಮುಂತಾದ ಮಧ್ಯಂತರ ಸಂದಾಯಗಳನ್ನು ಯೋಜನೆಯಡಿ ತಿಳಿಸಲಾದ ಅರ್ಹತೆ ಮಾನದಂಡಗಳನ್ನು ಪೂರೈಸಿದಲ್ಲಿ ನೀಡಲಾಗುವುದು.


• ದಿನಾಂಕ:01.04.2006 ರಿಂದ 31.07.2008ರ ವರೆಗೆ ಜನಿಸಿ ಯೋಜನೆಯಡಿ ನೋಂದಣಿಯಾದ ಮಕ್ಕಳು ವಿದ್ಯಾರ್ಥಿ ವೇತನ ಪಡೆಯಲು ಪ್ರತಿ ತರಗತಿಯಲ್ಲಿಯೂ ವರ್ಷದಿಂದ ವರ್ಷಕ್ಕೆ ತೇರ್ಗಡೆ ಹೊಂದಬೇಕು.

ಈ ಯೋಜನೆಯನ್ನು ದಿನಾಂಕ:20.01.2009ರಂದು ಪರಿಷ್ಕರಿಸಲಾಗಿರುತ್ತದೆ. (ದಿನಾಂಕ: 01.08.2008 ರಿಂದ ಜನಿಸಿದ ಹೆಣ್ಣು ಮಕ್ಕಳಿಗೆ ಅನ್ವಯಿಸುತ್ತದೆ).


ಪರಿಷ್ಕರಿಸಲಾದ ಯೋಜನೆಯ ರೂಪುರೇಷೆಗಳು ಕೆಳಕಂಡಂತಿವೆ.
ಯೋಜನೆಯಡಿ ನೋಂದಣಿಯಾದ ಕುಟುಂಬದಲ್ಲಿನ ಮೊದಲನೇ ಹೆಣ್ಣು ಮಗುವಿನ ಹೆಸರಿನಲ್ಲಿ ರೂ. 19,300/- ಹಾಗೂ ಅದೇ ಕುಟುಂದಲ್ಲಿನ 2ನೇ ಹೆಣ್ಣು ಮಗುವಿನ ಹೆಸರಿನಲ್ಲಿ ರೂ. 18,350/- ಗಳನ್ನು ಪಾಲುದಾರ ಹಣಕಾಸು ಸಂಸ್ಥೆಯಲ್ಲಿ ಪ್ರಾರಂಭಿಕ ಠೇವಣಿ ಇಡಲಾಗುತ್ತದೆ.


18 ವರ್ಷ ಪೂರ್ಣಗೊಂಡ ನಂತರದಲ್ಲಿ ಹೆಣ್ಣು ಮಕ್ಕಳು ರೂ. 1,00,000/- ಪರಿಪಕ್ಷ ಮೊತ್ತ ಪಡೆಯಲು ಅರ್ಹರಿರುತ್ತಾರೆ.


ಯೋಜನೆಯ ಉದ್ದೇಶಗಳು:
ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನವನ್ನು ಉತ್ತೇಜಿಸುವುದು ಮತ್ತು ಆತ್ಮ ಧೈರ್ಯ ತುಂಬುವುದು.


ಬಾಲ ಕಾರ್ಮಿಕತೆ, ಹೆಣ್ಣು ಭ್ರೂಣಹತ್ಯೆ, ಬಾಲ್ಯ ವಿವಾಹ ಮತ್ತು ಹೆಣ್ಣು ಮಕ್ಕಳ ಮಾರಾಟ ಮುಂತಾದ ಸಾಮಾಜಿಕ ಪಿಡುಗುಗಳನ್ನು ತಡೆಗಟ್ಟುವುದು.


 ಆರೋಗ್ಯ, ಶಿಕ್ಷಣ, ಪೋಷಣೆ ಮತ್ತು ಪೌಷ್ಠಿಕ ಮಟ್ಟವನ್ನು ಉತ್ತಮ ಪಡಿಸುವುದರ ಮೂಲಕ ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯನ್ನು ಉತ್ತಮಪಡಿಸುದು.


 ಹೆಣ್ಣು ಮಗುವಿಗೆ ಆರ್ಥಿಕ ನೆರವು ನೀಡುವುದರ ಮೂಲಕ ಅವರನ್ನು ಸಮಾಜದಲ್ಲಿ ಸದೃಢರನ್ನಾಗಿ ಮಾಡುವುದು.
ಪ್ರಸ್ತುತ ಯೋಜನೆಯ ಸೌಲಭ್ಯ ಪಡೆಯಲು ಇರಬೇಕಾದ

ಅರ್ಹತೆಯ ಅಂಶಗಳು:
• ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಗುರುತಿಸಿ ಶಾಶ್ವತ ಬಿಪಿಎಲ್ ಕಾರ್ಡ್/ಆದ್ಯತಾ ಕುಟುಂಬ ಪಡಿತರ ಚೀಟಿ ಹೊಂದಿರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸಿದ ಎರಡು ಹೆಣ್ಣು ಮಕ್ಕಳು ಯೋಜನೆಯಡಿ ನೊಂದಣಿ ಮಾಡಲು ಅರ್ಹರಿರುತ್ತಾರೆ.


• ಕುಟುಂಬದಲ್ಲಿ ಮಕ್ಕಳ ಸಂಖ್ಯೆ ಎರಡನ್ನು ಮೀರಿರಬಾರದು. ಈ ಕುಟುಂಬವು ಮಗುವಿನ ತಂದೆ ಅಥವಾ ತಾಯಿ

ಯಾರದಾರೊಬ್ಬರು ಶಾಶ್ವತ ಕುಟುಂಬ ಯೋಜನೆಯ ಪದ್ಧತಿಯನ್ನು ಅಳವಡಿಸಿಕೊಂಡಿರಬೇಕು. ವಿಶೇಷ ಪ್ರಕರಣಗಳಲ್ಲಿ ಅಂದರೆ ಮೊದಲನೇ ಹೆರಿಗೆಯಲ್ಲಿ ಅವಳಿ ತ್ರಿವಳಿ ಹೆಣ್ಣು ಮಕ್ಕಳು ಜನಿಸಿದ್ದಲ್ಲಿ ಹಾಗು ಎರಡನೇ ಹೆರಿಗೆಯಲ್ಲಿ ಅವಳಿ/ತ್ರಿವಳಿ ಹೆಣ್ಣು ಮಕ್ಕಳು ಜನಿಸಿದ್ದಲ್ಲಿ ಈ ಎಲ್ಲಾ ಹೆಣ್ಣು ಮಕ್ಕಳಿಗೂ ಸೌಲಭ್ಯ ನೀಡುವುದು. ಈ ಸೌಲಭ್ಯವನ್ನು ಎರಡು ಹೆರಿಗೆಗೆ ಮಾತ್ರ ಮಿತಿಗೊಳಿಸುವುದು. ಇಂತಹ ಪ್ರಕರಣಗಳಲ್ಲಿ ಮಾತ್ರ ಕುಟುಂಬದ ಮಕ್ಕಳ ಸಂಖ್ಯೆ ಎರಡನ್ನು ಮೀರಿರಬಾರದು ಎಂಬ ನಿಯಮವನ್ನು ಸಡಿಲಿಸಲಾಗಿದೆ.

ಈ ಯೋಜನೆಯನ್ನು ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲೂ ಅನುಷ್ಟಾನಗೊಳಿಸಲಾಗುವುದು. ಅಂಗನವಾಡಿ ಕೇಂದ್ರಗಳು ಇಲ್ಲದೆ ಇರುವ ಪ್ರದೇಶಗಳಲ್ಲಿ ವಾಸಿಸುವ ಪೋಷಕರು ತಮ್ಮ ಸಮೀಪದ ಅಂಗನವಾಡಿ ಕೇಂದ್ರದಲ್ಲಿ ನೊಂದಣಿ ಮಾಡುವುದು. ಮಗುವಿನ ಜನನವನ್ನು ಕಡ್ಡಾಯವಾಗಿ ನೊಂದಾಯಿಸಿರಬೇಕು ಹಾಗೂ ಜನನ ಪ್ರಮಾಣ ಪತ್ರವನ್ನು ಹೊಂದಿರಬೇಕು.
ಪರಿಪಕ್ವ ಮೊತ್ತವನ್ನು ಪಡೆಯಲು ಫಲಾನುಭವಿ ಮಗು ಕನಿಷ್ಠ 8ನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಪಡೆದಿರಬೇಕು. ಆದರೆ ವಿಕಲಚೇತನ ಮಕ್ಕಳಿಗೆ ವಿನಾಯಿತಿ ನೀಡಲಾಗಿದ್ದು, ಸದರಿ ಮಕ್ಕಳು 1 ರಿಂದ 5ನೇ ತರಗತಿವರೆಗೆ ವ್ಯಾಸಂಗ ಮಾಡಿರಬೇಕು. ಒಂದು ವೇಳೆ ವಿಕಲಚೇತನ ಮಕ್ಕಳು ತೀವ್ರತರವಾದ ವಿಕಲತೆಯಿಂದ ಬಳಲುತ್ತಿದ್ದಲ್ಲಿ ಸಂಬಂಧಪಟ್ಟ ಜಿಲ್ಲಾ ಉಪ ನಿರ್ದೆಶಕರು ಪ್ರತಿ ಪ್ರಕರಣಗಳ ಸಾಧಕ ಬಾಧಕಗಳನ್ನು ಪರಿಶೀಲಿಸಿ ಈ ಷರತ್ತನ್ನು ಸಹ ಸಡಿಲಿಸಲು ಅಧಿಕಾರ ನೀಡಿ ಆದೇಶಿಸಿದೆ.


• 5ನೇ ಮತ್ತು 8ನೇತರಗತಿ ಉತ್ತೀರ್ಣರಾಗಿರುವ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರಿಂದ ದೃಢೀಕರಣ ಪಡೆದು ಸಲ್ಲಿಸುವುದು.


• ಬಾಲಕಾರ್ಮಿಕ ನಿಷೇಧ ಕಾಯ್ದೆ 1986ರಂತೆ ಬಾಲ ಕಾರ್ಮಿಕಳಾಗಿರತಕ್ಕದ್ದಲ್ಲ.


• 18 ವರ್ಷ ಪೂರೈಸುವ ಮೊದಲು ವಿವಾಹವಾಗತಕ್ಕದ್ದಲ್ಲ.
ಆಯ್ಕೆಯಾದ ಫಲಾನುಭವಿಯು ಮೇಲೆ ತಿಳಿಸಿದ ಅರ್ಹತೆಯ ಮಾನದಂಡಗಳಲ್ಲಿನ ಯಾವುದೇ ಒಂದು ಷರತ್ತುನ್ನು ಪೂರೈಸದಿದ್ದಲ್ಲಿಯೂ ಸಹ ಸೌಲಭ್ಯವನ್ನು ಮುಟ್ಟುಗೋಲು ಹಾಕಲಾಗುವುದು.

]]>
Fri, 30 May 2025 12:11:39 +0530 shivuagrico
Karnataka rain alert&ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ,ಯಾವ ಜಿಲ್ಲೆಗೆ ರೆಡ್,ಯೆಲ್ಲೊ ಅಲರ್ಟ್? https://krushirushi.in/karnataka-rain-alert-2130 https://krushirushi.in/karnataka-rain-alert-2130 Karnataka rain alert-ಇಂದಿನಿಂದ ಮುಂದಿನ 6 ದಿನಗಳ ಮಳೆ ಮಾಹಿತಿ,ಯಾವ ಜಿಲ್ಲೆಗೆ ರೆಡ್,ಯೆಲ್ಲೊ ಅಲರ್ಟ್?


ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದಲ್ಲಿ ಇಂದಿನಿಂದ 6 ದಿನ ಗುಡುಗು- ಮಿಂಚು ಸಹಿತ ಭಾರಿ ಮಳೆಯಾಗಲಿದ್ದು, ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. 



ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ವ್ಯಾಪಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಕೆಲವು ಜಿಲ್ಲೆಗಳಿಗೆ ರೆಡ್‌ ಅಲರ್ಟ್ ಘೋಷಣೆ ಮಾಡಲಾಗಿದೆ.ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಮೇ 29ರಂದು ರೆಡ್ ಅಲರ್ಟ್ ನೀಡಲಾಗಿದೆ.

ಉಡುಪಿ ಜಿಲ್ಲೆಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಧಾರವಾಡ, ಬೀದರ್, ಹಾವೇರಿ, ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. 

ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಮೇ 30ರಂದು ರೆಡ್ ಅಲರ್ಟ್ ನೀಡಲಾಗಿದೆ. ಉಡುಪಿ, ದಾವಣಗೆರೆ, ಮೈಸೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ತುಮಕೂರು, ಮಂಡ್ಯ, ಚಿತ್ರದುರ್ಗ, ಯಾದಗಿರಿ, ರಾಯಚೂರು, ಕಲಬುರಗಿ, ಬೀದರ್ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ಮೇ 31 ರಂದು ಕರಾವಳಿಯ ಎಲ್ಲಾ ಜಿಲ್ಲೆಗಳು ಕೊಡಗು, ಮೈಸೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಶಿವಮೊಗ್ಗ, ಮಂಡ್ಯ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಕರಾವಳಿ : ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 
ಈಗಿನಂತೆ ಮೇ 30ರ ತನಕ ಉತ್ತರ ಕನ್ನಡ ಸಾಮಾನ್ಯ ಹಾಗೂ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಉತ್ತಮ ಮಳೆ ಮುಂದುವರಿಯುವ ಮುನ್ಸೂಚೆನೆ ಇದೆ. ಮೇ 31ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ. ಜೂನ್ 1ರಿಂದ ಮಳೆ ಮತ್ತಷ್ಟು ಕ್ಷೀಣಿಸುವ ಸಾಧ್ಯತೆಗಳಿದ್ದು, ಜೂನ್ 4ರಿಂದ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಇರಬಹುದು. ಬೆಳೆಗಳಿಗೆ ಔಷಧಿ ಸಿಂಪಡಿಸಲು ಅವಕಾಶ ಸಿಗಬಹುದು. 

ಮಲೆನಾಡು : ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಶಿವಮೊಗ್ಗ ಜಿಲ್ಲೆಯ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಉತ್ತಮ ಹಾಗೂ ಉಳಿದ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 
ಈಗಿನಂತೆ ಮೇ 30ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಮುನ್ಸೂಚನೆ ಇದ್ದು, ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಮೇ 31ರಿಂದ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಬೆಳೆಗಳಿಗೆ ಔಷಧಿ ಸಿಂಪಡಿಸಲು ಅವಕಾಶ ಸಿಗಬಹುದು. 

ಒಳನಾಡು : ಉತ್ತರ ಒಳನಾಡಿನ ಧಾರವಾಡ, ಹಾವೇರಿ, ಗದಗ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚೆನೆ ಇದೆ. ವಿಜಯಪುರ, ಕಲಬುರ್ಗಿ, ಬೀದರ್ ಜಿಲ್ಲೆಗಳ ಮಹಾರಾಷ್ಟ್ರ ಗಡಿ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ. ಬೆಳಗಾವಿ, ಬಾಗಲಕೋಟೆ, ಕೊಪ್ಪಳ, ರಾಯಚೂರು, ಯಾದಗಿರಿ, ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 
ದಕ್ಷಿಣ ಒಳನಾಡಿನ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಉತ್ತಮ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 

ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಬಂಗ್ಲಾದೇಶದ ಕರಾವಳಿ ಮೂಲಕ ಭೂ ಪ್ರವೇಶಿಸಿದ್ದು, ಅಲ್ಲೇ ಶಿಥಿಲಗೊಳ್ಳುವ ಲಕ್ಷಣಗಳಿವೆ. 
ಇದರೊಂದಿಗೆ ಮುಂಗಾರು ಮಾರುತಗಳು ದುರ್ಬಲವಾಗುವ ಸಾಧ್ಯತೆ ಕಾಣಿಸುತ್ತಿದೆ. 
ಮುಂದಿನ 2 ದಿವಸಗಳಲ್ಲಿ ರಾಜ್ಯದ ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಬಹುತೇಕ ಭಾಗಗಳಲ್ಲಿ ಬಿಸಿಲಿನ ಜೊತೆಗೆ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.

]]>
Fri, 30 May 2025 00:13:27 +0530 shivuagrico
Akrama sakrama&ಕೃಷಿ ಪಂಪಸೆಟ್ ಅಕ್ರಮ ಸಕ್ರಮ ನಿರೀಕ್ಷೆಯಲ್ಲಿದ್ದ ರೈತರಿಗೆ ಸಿಹಿಸುದ್ದಿ ನೀಡಿದ ರಾಜ್ಯ ಸರ್ಕಾರ https://krushirushi.in/Akrama-sakrama-2129 https://krushirushi.in/Akrama-sakrama-2129 Akrama sakrama-ಕೃಷಿ ಪಂಪಸೆಟ್ ಅಕ್ರಮ ಸಕ್ರಮ ನಿರೀಕ್ಷೆಯಲ್ಲಿದ್ದ ರೈತರಿಗೆ ಸಿಹಿಸುದ್ದಿ ನೀಡಿದ ರಾಜ್ಯ ಸರ್ಕಾರ

ಅಕ್ರಮ ಕೃಷಿ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ನವೀಕೃತ ಶೀಘ್ರ ಸಂಪರ್ಕ ಯೋಜನೆ ಜಾರಿಗೆ ತಂದಿದ್ದು, ರೈತರು ಸ್ವಯಂ ಮೂಲ ಸೌಕರ್ಯ ಕಲ್ಪಿಸಿಕೊಂಡರೆ ಎಸ್ಕಾಂ ವತಿಯಿಂದ ಟ್ರಾನ್ಸ್ ಫಾರ್ಮರ್ ಒದಗಿಸಿ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆಯಜಾರ್ಜ್ ಹೇಳಿದ್ದಾರೆ.


ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನ ಪ್ರತಿನಿಧಿಗಳು ಮತ್ತು ಇಲಾಖೆಯ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, "2023ರ ಸೆ. 22ರ ಬಳಿಕ ಸ್ಥಾಪಿಸಿರುವ ಅಕ್ರಮ ಕೃಷಿ ಪಂಪ್ ಸೆಟ್ ಗಳಿಗೆ ರೈತರು ಸ್ವಂತ ವೆಚ್ಚದಲ್ಲಿ ಲೈನ್ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿಕೊಂಡರೆ ಎರಡು ಅಥವಾ ಅದಕ್ಕಿಂತ ಹೆಚ್ಚು ಪಂಪ್ ಸೆಟ್ ಗಳಿಗೆ ಎಸ್ಕಾಂಗಳ ವತಿಯಿಂದಲೇ ಟ್ರಾನ್ಸ್ ಫಾರ್ಮರ್ ಒದಗಿಸಿ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗುವುದು," ಎಂದರು.

"ರಾಜ್ಯದಲ್ಲಿ 2004ರಲ್ಲಿ ಕೃಷಿ ಪಂಪ್ ಸೆಟ್ ಗಳ ಅಕ್ರಮ-ಸಕ್ರಮ ಯೋಜನೆ ಜಾರಿಗೆ ಬಂದಿತ್ತಾದರೂ 2023ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ 4.5 ಲಕ್ಷ ಅಕ್ರಮ ಕೃಷಿ ಪಂಪ್ ಸೆಟ್ ಗಳು ಇದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ 2023ರ ಸೆ. 22ಕ್ಕೆ ಮುನ್ನ ಸಂಪರ್ಕ ಪಡೆದಿದ್ದ ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲು ನಿರ್ಧರಿಸಿ ಈವರೆಗೆ 2.5 ಲಕ್ಷ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಿದೆ. ಉಳಿದವುಗಳನ್ನು ಇನ್ನು ಒಂದು ವರ್ಷದೊಳಗೆ ಸಕ್ರಮಗೊಳಿಸಲಾಗುವುದು", ಎಂದು ತಿಳಿಸಿದರು.

"ಆದರೆ, 2023ರ ಸೆ. 22ರ ಬಳಿಕ ಸ್ಥಾಪಿಸಲಾದ ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲು ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಈ ಹಿನ್ನೆಲೆಯಲ್ಲಿ ನವೀಕೃತ ಶೀಘ್ರ ಸಂಪರ್ಕ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಅಕ್ರಮ ಪಂಪ್ ಸೆಟ್ ಹೊಂದಿರುವ ರೈತರು ಎಸ್ಕಾಂಗಳಿಗೆ ನಿಗದಿತ ಠೇವಣಿ ಪಾವತಿಸಿ ಅವರ ವೆಚ್ಚದಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು. ಅದಾದ ಬಳಿಕ 2 ಅಥವಾ ಅದಕ್ಕಿಂತ ಹೆಚ್ಚಿನ ಪಂಪ್ ಸೆಟ್ ಗಳಿಗೆ ಅವುಗಳ ಸಾಮರ್ಥ್ಯ ಆಧರಿಸಿ ಎಸ್ಕಾಂಗಳ ವತಿಯಿಂದ ಟ್ರಾನ್ಸ್ ಫಾರ್ಮರ್ ಒದಗಿಸಿ ಸಂಪರ್ಕ ಸಕ್ರಮಗೊಳಿಸಲಾಗುವುದು", ಎಂದು ಹೇಳಿದರು.

"ನವೀಕೃತ ಶೀಘ್ರ ಸಂಪರ್ಕ ಯೋಜನೆಯು ವಿದ್ಯುತ್ ಜಾಲದಿಂದ 500 ಮೀಟರ್ ಒಳಗಿರುವ ಎಲ್ಲಾ ಕೃಷಿ ಪಂಪ್ ಸೆಟ್ ಗಳಿಗೆ ಅನ್ವಯವಾಗುತ್ತದೆ. ವಿದ್ಯುತ್ ಜಾಲದಿಂದ 500 ಮೀಟರ್ ಗಿಂತ ದೂರ ಇರುವ ಪಂಪ್ ಸೆಟ್ ಗಳಿಗೆ ಸೋಲಾರ್ ಪಂಪ್ ಸೆಟ್ ಗಳನ್ನು ಕಡ್ಡಾಯವಾಗಿ ಅಳವಡಿಸಬೇಕಾಗುತ್ತದೆ. ಸೋಲಾರ್ ಪಂಪ್ ಸೆಟ್ ಗಳಿಗೆ ಕುಸುಮ್- ಬಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಶೇ. 30, ರಾಜ್ಯ ಸರ್ಕಾರದಿಂದ ಶೇ. 50ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಶೇ. 20ರಷ್ಟು ಮೊತ್ತವನ್ನು ಮಾತ್ರ ರೈತರು ಪಾವತಿಸಬೇಕು", ಎಂದು ತಿಳಿಸಿದರು.

ವಿದ್ಯುತ್ ಸಂಪರ್ಕಕ್ಕೆ ಒಸಿ ಸಮಸ್ಯೆ ಕುರಿತು ಸಂಪುಟದಲ್ಲಿ ನಿರ್ಣಯ:

"ಸ್ವಾಧೀನಾನುಭವ ಪತ್ರ (ಒಸಿ) ಹೊಂದಿಲ್ಲದ ಯಾವುದೇ ವಾಣಿಜ್ಯ, ವಸತಿ ಕಟ್ಟಡಗಳಿಗೂ ವಿದ್ಯುತ್‌ ಸಂಪರ್ಕ ನೀಡಬಾರದು ಎಂಬ ಇಂಧನ ಇಲಾಖೆ ನಿಯಮದಿಂದ ಸಾಕಷ್ಟು ಸಮಸ್ಯೆಗಳಾಗುತ್ತಿರುವ ಬಗ್ಗೆ ಸಭೆಯಲ್ಲಿ ಶಾಸಕರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಸಚಿವ ಕೆ.ಜೆ.ಜಾರ್ಜ್, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇಂಧನ ಇಲಾಖೆ ಈ ನೀತಿ ಜಾರಿಗೆ ತಂದಿದೆ. ಇದರಿಂದ ಸಮಸ್ಯೆಗಳಾಗುತ್ತಿರುವುದು ಸರ್ಕಾರದ ಗಮನದಲ್ಲಿದ್ದು, ಸಚಿವ ಸಂಪುಟ ಸಭೆಯಲ್ಲೂ ಚರ್ಚಿಸಿ ಇದಕ್ಕೆ ಪರಿಹಾರ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಧಿಕಾರಿಗಳು ಸೂಕ್ತ ಪರಿಹಾರ ಸಿದ್ಧಪಡಿಸಿದ ಬಳಿಕ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಜನರ ಸಮಸ್ಯೆ ಬಗೆಹರಿಸಲಾಗುವುದು", ಎಂದರು.

"ಮನೆಗಳಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವ ಪಿಎಂ ಸೂರ್ಯ ಘರ್ ಯೋಜನೆಯನ್ನು ಅಳವಡಿಸಿಕೊಳ್ಳುವಂತೆ ಮಾಸಿಕ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸುವ ಗ್ರಾಹಕರನ್ನು ಒಪ್ಪಿಸುವ ಕಾರ್ಯಕ್ಕೆ ಮುಂದಾಗಬೇಕು. ಆಯಾ ವಿಭಾಗದ ಜನಪ್ರತಿನಿಧಿಗಳ ಜತೆ ಆಗಾಗ್ಗೆ ಸಮಾಲೋಚಿಸಿ ಇಂಧನ ಇಲಾಖೆಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸಬೇಕು", ಎಂದು ಸಚಿವರು ಇದೇ ವೇಳೆ ಅಧಿಕಾರಿಗಳಿಗೆ ಸೂಚಿಸಿದರು.

ಜೂನ್ ಅಂತ್ಯದೊಳಗೆ ಲೈನ್ ಮೆನ್ ನೇಮಕ:

"ರಾಜ್ಯದಲ್ಲಿ 3000 ಲೈನ್ ಮೆನ್ ಗಳ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ದೈಹಿಕ ತರಬೇತಿ ನಡೆಯುತ್ತಿದೆ. ಜೂನ್ ಅಂತ್ಯದೊಳಗೆ ಎಲ್ಲರಿಗೂ ಸ್ಥಳ ನಿಯುಕ್ತಿ ಮಾಡಿ ನೇಮಕಾತಿ ಆದೇಶ ಹೊರಡಿಸಲಾಗುವುದು", ಎಂದು ಹೇಳಿದರು.

"ಮಳೆಗಾಲ ಈಗಾಗಲೇ ಆರಂಭವಾಗಿರುವುದರಿಂದ ಯಾವುದೇ ಸಮಸ್ಯೆ ಎದುರಾದರೂ ತಕ್ಷಣ ಬಗೆಹರಿಸಲು ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವುದರ ಜತೆಗೆ ಹೆಚ್ಚುವರಿ ಸಲಕರಣೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಈಗಾಗಲೇ ಸೂಚಿಸಲಾಗಿದೆ. ಜೂನ್ ಅಂತ್ಯದ ವೇಳೆ ಲೈನ್ ಮೆನ್ ಗಳ ನೇಮಕವೂ ಆಗುವುದರಿಂದ ಮಳೆ- ಗಾಳಿಯಿಂದ ಹೆಚ್ಚು ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸಹಾಯವಾಗಲಿದೆ", ಎಂದರು.

ಕುಸುಮ್-ಸಿ ಅಡಿ 117 ಮೆ.ವ್ಯಾ. ವಿದ್ಯುತ್:

"ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯಲ್ಲಿ ಕುಸುಮ್-ಸಿ ಯೋಜನೆಯಡಿ ಕೃಷಿ ಫೀಡರ್ ಗಳ ಸೋಲರೈಸೇಷನ್ ಮೂಲಕ 117 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 21 ಸ್ಥಳಗಳನ್ನು ಗುರುತಿಸಲಾಗಿದ್ದು, 156 ಕಡೆ ಈಗಾಗಲೇ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಸೂಕ್ತ ಭೂಮಿ ಸಿಗದಿದ್ದಲ್ಲಿ ಕೆರೆ ಅಂಗಳದಲ್ಲೂ ಕುಸುಮ್-ಸಿ ಯೋಜನೆಯಡಿ ಸೋಲಾರ್ ಫಲಕಗಳನ್ನು ಅಳವಡಿಸಲಾಗುವುದು", ಎಂದು ತಿಳಿಸಿದರು.

"ಜಿಲ್ಲೆಯ ಅರಣ್ಯ ಭಾಗಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ರಾತ್ರಿ ವೇಳೆ ವನ್ಯ ಜೀವಿಗಳ ಹಾವಳಿ ಎದುರಾಗುತ್ತದೆ. ಹೀಗಾಗಿ ರೈತರ ಪಂಪ್ ಸೆಟ್ ಗಳಿಗೆ ಹಗಲು ವೇಳೆ 7 ಗಂಟೆ ವಿದ್ಯುತ್ ಒದಗಿಸುವಂತೆ ಸ್ಥಳಿಯ ಶಾಸಕರು ಮನವಿ ಮಾಡಿಕೊಂಡಾಗ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಹಗಲು ವೇಳೆ 7 ಗಂಟೆ ವಿದ್ಯುತ್ ಒದಗಿಸಲು ಆದೇಶ ಹೊರಡಿಸಿದ್ದು, ಅದರಂತೆ ಕಾರ್ಯ ನಿರ್ವಹಣೆ ನಡೆಯುತ್ತಿದೆ. ತಾಂತ್ರಿಕ ಸಮಸ್ಯೆ ಇದ್ದರೆ ಮಾತ್ರ ಅಂತಹ ಪ್ರದೇಶಗಳಲ್ಲಿ ರಾತ್ರಿ ವೇಳೆ ವಿದ್ಯುತ್ ಒದಗಿಸಲಾಗುವುದು", ಎಂದರು.

ವಿಧಾನಸಭೆ ಸದಸ್ಯರಾದ ಎಚ್.ಎ. ಇಕ್ಬಾಲ್ ಹುಸೇನ್, ಎಚ್.ಸಿ.ಬಾಲಕೃಷ್ಣ, ಸಿ.ಪಿ.ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳು ಸಭೆಯಲ್ಲಿದ್ದರು.

]]>
Thu, 29 May 2025 17:13:02 +0530 shivuagrico
Bembala bele&ಭತ್ತ,ರಾಗಿ ಸೇರಿದಂತೆ 14 ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ, ಯಾವ ಬೆಳೆಗೆ ಎಷ್ಟು ಹೆಚ್ಚಳ? https://krushirushi.in/Bembala-bele-2128 https://krushirushi.in/Bembala-bele-2128 Bembala bele-ಭತ್ತ,ರಾಗಿ ಸೇರಿದಂತೆ 14 ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ(MSP)


2025-26ನೇ ಸಾಲಿನ ಮಾರುಕಟ್ಟೆ ಋತುವಿನಲ್ಲಿ 14 ಪ್ರಮುಖ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ರೈತರು ಬಿತ್ತನೆ ಮಾಡುವ ಮೊದಲು ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಸರ್ಕಾರ ಪ್ರತಿ ವರ್ಷ ಪರಿಷ್ಕರಿಸುತ್ತದೆ, ಇದರಿಂದಾಗಿ ಬೆಳೆಗಾರರಿಗೆ ಅವರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳು ದೊರೆಯುತ್ತವೆ.


ಈ ವರ್ಷ, ಹಿಂದಿನ ವರ್ಷಕ್ಕಿಂತ ಅತ್ಯಧಿಕ MSP ಹೆಚ್ಚಳವನ್ನು ನೈಜರ್ ಬೀಜ, ನಂತರ ರಾಗಿ, ಹತ್ತಿ ಮತ್ತು ಎಳ್ಳು ಶಿಫಾರಸು ಮಾಡಲಾಗಿದೆ.

ದ್ವಿದಳ ಧಾನ್ಯಗಳು ತೊಗರಿ ಮತ್ತು ಹೆಸರುಕಾಳುಗಳಿಗೆ ಕ್ರಮವಾಗಿ ರೂ 450 ಮತ್ತು ರೂ 86 ಹೆಚ್ಚಿಸಲಾಗಿದೆ. ಉದ್ದಿನ ಬೇಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು 400 ರೂ. ಹೆಚ್ಚಿಸಲಾಗಿದೆ.

ಎಣ್ಣೆ ಬೀಜಗಳ ವಿಷಯಕ್ಕೆ ಬಂದರೆ, ನೆಲಗಡಲೆ, ಸೂರ್ಯಕಾಂತಿ ಬೀಜ ಮತ್ತು ಸೋಯಾಬೀನ್‌ಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕ್ರಮವಾಗಿ 480 ರೂ., 441 ರೂ. ಮತ್ತು 436 ರೂ. ಹೆಚ್ಚಿಸಲಾಗಿದೆ.

ಹತ್ತಿಯ ವಿಷಯದಲ್ಲಿ, ಕನಿಷ್ಠ ಬೆಂಬಲ ಬೆಲೆಯನ್ನು 589 ರೂ. ಹೆಚ್ಚಿಸಲಾಗಿದೆ. ಭತ್ತಕ್ಕೆ ರೂ 69 ಹೆಚ್ಚಿಸಲಾಗಿದೆ.

2025-26 ರ ಮಾರುಕಟ್ಟೆ ಋತುವಿನಲ್ಲಿ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು 2018-19 ರ ಕೇಂದ್ರ ಬಜೆಟ್‌ನಲ್ಲಿ ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ನಿಗದಿಪಡಿಸುವ ಘೋಷಣೆಗೆ ಅನುಗುಣವಾಗಿದೆ.

]]>
Thu, 29 May 2025 14:13:32 +0530 shivuagrico
Bele sala baddi manna&ಬೆಳೆಸಾಲ ಪಡೆದ ರೈತರಿಗೆ ಬಡ್ಡಿಮನ್ನಾ ಘೋಷಿಸಿದ ಕೇಂದ್ರ ಸರ್ಕಾರ https://krushirushi.in/Bele-sala-baddi-manna-2126 https://krushirushi.in/Bele-sala-baddi-manna-2126 Bele sala baddi manna-ಬೆಳೆಸಾಲ ಪಡೆದ ರೈತರಿಗೆ  3% ಬಡ್ಡಿಮನ್ನಾ  ಘೋಷಿಸಿದ ಕೇಂದ್ರ ಸರ್ಕಾರ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು 2025-26ನೇ ಸಾಲಿಗೆ ಮಾರ್ಪಡಿಸಿದ ಬಡ್ಡಿ ಸಬ್ಸಿಡಿ ಯೋಜನೆಯ (MISS) ಮುಂದುವರಿಕೆಗೆ ಅನುಮೋದನೆ ನೀಡಿದೆ. ಈ ಯೋಜನೆಯು ಬಡ್ಡಿ ಸಬ್ಸಿಡಿ (IS) ಅಂಶವನ್ನು ಒಳಗೊಂಡಿದೆ, ಇದು 1.5% ರಷ್ಟು ಅಸ್ತಿತ್ವದಲ್ಲಿರುವ ದರದಲ್ಲಿ ಮುಂದುವರಿಯುತ್ತದೆ, ಕಿಸಾನ್ ಕ್ರೆಡಿಟ್ ಕಾರ್ಡ್ (KCC) ವ್ಯವಸ್ಥೆಯ ಮೂಲಕ ರೈತರಿಗೆ ಕೈಗೆಟುಕುವ ಅಲ್ಪಾವಧಿ ಸಾಲವನ್ನು ಖಚಿತಪಡಿಸುತ್ತದೆ.

 
ಮಾರ್ಪಡಿಸಿದ ಬಡ್ಡಿ ಸಬ್ಸಿಡಿ ಯೋಜನೆ (MISS) ಬಡ್ಡಿ ಪರಿಹಾರವನ್ನು ನೀಡುವ ಮೂಲಕ ರೈತರಿಗೆ ಅಲ್ಪಾವಧಿಯ ಸಾಂಸ್ಥಿಕ ಸಾಲವನ್ನು ಹೆಚ್ಚು ಪ್ರವೇಶಿಸುವಂತೆ ಮಾಡಲು ವಿನ್ಯಾಸಗೊಳಿಸಲಾದ ಕೇಂದ್ರ ವಲಯ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ:

ರೈತರು ₹3 ಲಕ್ಷದವರೆಗೆ ಅಲ್ಪಾವಧಿಯ KCC ಸಾಲಗಳನ್ನು 7% ಸಬ್ಸಿಡಿ ಬಡ್ಡಿ ದರದಲ್ಲಿ ಪಡೆಯಬಹುದು, ಅರ್ಹ ಸಾಲ ನೀಡುವ ಸಂಸ್ಥೆಗಳಿಗೆ 1.5% ಬಡ್ಡಿ ಸಬ್ಸಿಡಿಯನ್ನು ನೀಡಲಾಗುತ್ತದೆ.
ತಮ್ಮ ಸಾಲಗಳನ್ನು ಸಮಯಕ್ಕೆ ಮರುಪಾವತಿ ಮಾಡುವವರು 3% ವರೆಗೆ ಹೆಚ್ಚುವರಿ ಪ್ರಾಂಪ್ಟ್ ಮರುಪಾವತಿ ಪ್ರೋತ್ಸಾಹ (PRI) ಪಡೆಯಬಹುದು, ಇದು ಅವರ ಪರಿಣಾಮಕಾರಿ ಬಡ್ಡಿ ದರವನ್ನು 4% ಕ್ಕೆ ಇಳಿಸುತ್ತದೆ.
ಪಶುಸಂಗೋಪನೆ ಮತ್ತು ಮೀನುಗಾರಿಕೆಯಂತಹ ಸಂಬಂಧಿತ ಚಟುವಟಿಕೆಗಳಿಗೆ ಪ್ರತ್ಯೇಕವಾಗಿ ತೆಗೆದುಕೊಂಡ ಸಾಲಗಳಿಗೆ, ₹2 ಲಕ್ಷದವರೆಗಿನ ಸಾಲಗಳ ಮೇಲೆ ಬಡ್ಡಿ ಪ್ರಯೋಜನವು ಅನ್ವಯಿಸುತ್ತದೆ.
ಮುಂಬರುವ ಹಣಕಾಸು ವರ್ಷಕ್ಕೆ ಯೋಜನೆಯಲ್ಲಿ ಯಾವುದೇ ರಚನಾತ್ಮಕ ಬದಲಾವಣೆಗಳನ್ನು ಮಾಡಲಾಗಿಲ್ಲ.
ಪ್ರಸ್ತುತ, ದೇಶಾದ್ಯಂತ 7.75 ಕೋಟಿಗೂ ಹೆಚ್ಚು KCC ಖಾತೆಗಳಿವೆ. ಕೃಷಿಗೆ ಸಾಂಸ್ಥಿಕ ಸಾಲದ ಸ್ಥಿರ ಹರಿವನ್ನು ಖಚಿತಪಡಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುವುದರಿಂದ ಈ ಬೆಂಬಲವನ್ನು ಮುಂದುವರಿಸುವ ಮಹತ್ವವನ್ನು ಸಚಿವ ಸಂಪುಟವು ಒತ್ತಿ ಹೇಳಿದೆ. ಇದು ಕೃಷಿ ಉತ್ಪಾದಕತೆಯನ್ನು ಸುಧಾರಿಸಲು ಮತ್ತು ಸಣ್ಣ ಮತ್ತು ಅತಿಸಣ್ಣ ರೈತರಿಗೆ ಆರ್ಥಿಕ ಸೇರ್ಪಡೆಯನ್ನು ಖಚಿತಪಡಿಸಲು ಸಹಾಯ ಮಾಡುತ್ತದೆ.

ಕೃಷಿ ಸಾಲದಲ್ಲಿನ ಪ್ರಮುಖ ಸಾಧನೆಗಳು

KCC ಮೂಲಕ ಸಾಂಸ್ಥಿಕ ಸಾಲ ವಿತರಣೆಯು 2014 ರಲ್ಲಿ ₹4.26 ಲಕ್ಷ ಕೋಟಿಯಿಂದ ಡಿಸೆಂಬರ್ 2024 ರ ವೇಳೆಗೆ ₹10.05 ಲಕ್ಷ ಕೋಟಿಗೆ ಏರಿಕೆಯಾಗಿದೆ.
ಒಟ್ಟಾರೆ ಕೃಷಿ ಸಾಲದ ಹರಿವು ಹಣಕಾಸು ವರ್ಷ 2013-14 ರಲ್ಲಿ ₹7.3 ಲಕ್ಷ ಕೋಟಿಯಿಂದ ಹಣಕಾಸು ವರ್ಷ 2023-24 ರಲ್ಲಿ ₹25.49 ಲಕ್ಷ ಕೋಟಿಗೆ ಗಮನಾರ್ಹವಾಗಿ ಬೆಳೆದಿದೆ.
ಆಗಸ್ಟ್ 2023 ರಲ್ಲಿ ಕಿಸಾನ್ ರಿನ್ ಪೋರ್ಟಲ್ (KRP) ಅನ್ನು ಪ್ರಾರಂಭಿಸುವಂತಹ ಸುಧಾರಣೆಗಳು ಸಾಲ ಸಂಸ್ಕರಣೆ ಮತ್ತು ಹಕ್ಕುಗಳಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಿವೆ.
ಮಧ್ಯಮ MCLR ಮತ್ತು ರೆಪೊ ದರದ ಚಲನೆಗಳನ್ನು ಒಳಗೊಂಡಂತೆ ಪ್ರಸ್ತುತ ಬಡ್ಡಿ ದರದ ಪ್ರವೃತ್ತಿಗಳನ್ನು ಗಮನಿಸಿದರೆ, ಗ್ರಾಮೀಣ ಸಹಕಾರಿ ಬ್ಯಾಂಕ್‌ಗಳಿಗೆ ಮತ್ತು ಭಾರತದ ಕೃಷಿ ಸಮುದಾಯಕ್ಕೆ ಕಡಿಮೆ ವೆಚ್ಚದ ಸಾಲವನ್ನು ನೀಡುವುದನ್ನು ಮುಂದುವರಿಸಲು 1.5% ಬಡ್ಡಿ ಸಬ್ಸಿಡಿಯನ್ನು ಕಾಯ್ದುಕೊಳ್ಳುವುದು ಅತ್ಯಗತ್ಯವೆಂದು ಪರಿಗಣಿಸಲಾಗಿದೆ.

ರೈತರ ಆದಾಯವನ್ನು ದ್ವಿಗುಣಗೊಳಿಸುವ, ಸ್ಥಿತಿಸ್ಥಾಪಕ ಗ್ರಾಮೀಣ ಸಾಲ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಮತ್ತು ಕೈಗೆಟುಕುವ ಸಾಲ ಪ್ರವೇಶದ ಮೂಲಕ ಕೃಷಿ ಬೆಳವಣಿಗೆಯನ್ನು ಹೆಚ್ಚಿಸುವ ಸರ್ಕಾರದ ಬಲವಾದ ಬದ್ಧತೆಯನ್ನು ಈ ನಿರ್ಧಾರವು ಮತ್ತೊಮ್ಮೆ ದೃಢಪಡಿಸುತ್ತದೆ ಎಂದು ಸಚಿವ ಸಂಪುಟವು ಒತ್ತಿ ಹೇಳಿದೆ.

Bele sala baddi manna-ಈ ಯೋಜನೆಯಡಿ ಸಿಗಲಿದೆ ನಿಮ್ಮ ಸಾಲದ ಮೇಲೆ 3% ಬಡ್ಡಿ ಮನ್ನಾ,ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

 ಕೇಂದ್ರ ವಲಯದ ಯೋಜನೆ ಕೃಷಿ ಮೂಲಭೂತ ಸೌಕರ್ಯ ನಿಧಿ ಯೋಜನೆಯಡಿ ಸರ್ಕಾರವು ಹಣಕಾಸು ಸೌಲಭ್ಯಗಳನ್ನು ಒದಗಿಸುತ್ತಿದ್ದು, ರೂ. 2 ಕೋಟಿ ಸಾಲದ ಮೊತ್ತಕ್ಕೆ ವಾರ್ಷಿಕ ಶೇ. 3ರಂತೆ 7 ವರ್ಷದ ಅವಧಿಗೆ ಬಡ್ಡಿ ಸಹಾಯಧನ ಲಭ್ಯವಿರುತ್ತದೆ.


ಅರ್ಹ ಕೃಷಿ ಚಟುವಟಿಕೆಗಳು/ಯೋಜನೆಗಳು ಈ ಕೆಳಗಿನಂತಿವೆ

ಇ-ಮಾರುಕಟ್ಟೆ ವೇದಿಕೆ ಸೇರಿದಂತೆ ಸರಬರಾಜು ಸರಪಳಿ ಸೇವೆಗಳು ಗೋದಾಮುಗಳು ಮತ್ತು ಸೈಲೊಗಳು + ಪ್ಯಾಕ್ ಹೌಸ್‌ಗಳು ವಿಂಗಡಣೆ ಮತ್ತು ಶ್ರೇಣೀಕರಣ ಘಟಕಗಳು ಶೀತಲಗೃಹ ಸರಪಳಿಗಳು ಸಾಗಾಣಿಕೆ ಸೌಲಭ್ಯಗಳು ಪ್ರಾಥಮಿಕ ಸಂಸ್ಕರಣಾ ಕೇಂದ್ರಗಳು ಹಣ್ಣು ಮಾಗಿಸುವ ಘಟಕಗಳು

ಮೌಲ್ಯಮಾಪನ ಘಟಕಗಳು ಸಂಕುಚಿತ ಜೈವಿಕ ಅನಿಲ (CBG) ಸ್ಥಾವರ + ಸಾವಯವ ಪರಿಕರ ಉತ್ಪಾದನೆ + ಜೈವಿಕ ಉತ್ತೇಜಕ ಉತ್ಪಾದನಾ ಘಟಕಗಳು * ಸಸ್ಯ ನರ್ಸರಿ /ಅಂಗಾಂಶ ಕೃಷಿ ಬೀಜ ಸಂಸ್ಕರಣೆ + ಕೃಷಿ ಯಂತ್ರಧಾರೆ ಕೇಂದ್ರಗಳು ಸ್ಮಾರ್ಟ್ ಮತ್ತು ನಿಖರವಾದ ಕೃಷಿ ಸಂಯೋಜಿತ ಸ್ಪಿರುಲಿನಾ ಉತ್ಪಾದನೆ ಮತ್ತು ಸಂಸ್ಕರಣಾ ಘಟಕಗಳು ರೇಷ್ಮೆ ಕೃಷಿ ಸಂಸ್ಕರಣಾ ಘಟಕ • ಜೇನು ಸಂಸ್ಕರಣಾ ಘಟಕ ಪ್ಲಾಂಟ್ ಕ್ಯಾರಂಟೈನ್ ಘಟಕಗಳು ಮತ್ತು ಸಾಮೂಹಿಕ ಕೃಷಿ ಅಡಿ: ಜಲಕೃಷಿ, ವಾಯುಕೃಷಿ, ಹಸಿರುಮನೆ, ಬಹುಮಹಡಿ ಕೃಷಿ, ಅಣಬೆ ಬೇಸಾಯ

ಅರ್ಹ ಫಲಾನುಭವಿಗಳು

ರೈತರು/ ರೈತ ಉತ್ಪಾದಕ ಸಂಸ್ಥೆಗಳು, ಪ್ರಾಂತೀಯ ಸಹಕಾರ ಒಕ್ಕೂಟಗಳು ಕೃಷಿ ಉದ್ಯಮಿಗಳು / ನವೋದ್ಯಮಿಗಳು ಪ್ರಾಥಮಿಕ ಕೃಷಿ ಕ್ರೆಡಿಟ್ ಸಹಕಾರ ಸಂಘಗಳು + ವಿವಿಧೋದ್ದೇಶ ಸಹಕಾರ ಸಂಘಗಳು * ಸ್ವ-ಸಹಾಯ ಗುಂಪುಗಳು / ಜಂಟಿ ಬಾಧ್ಯತಾ ಗುಂಪುಗಳು / ಖಾಸಗಿ ಮಾಲೀಕತ್ವ ಸಂಸ್ಥೆಗಳು.
ಯೋಜನೆಯಲ್ಲಿ ಭಾಗವಹಿಸುವ ಹಣಕಾಸು ಸಂಸ್ಥೆಗಳು:
ರಾಷ್ಟ್ರೀಕೃತ ಬ್ಯಾಂಕುಗಳು + ಶೆಡ್ಯೂಲ್ಡ್ ಸಹಕಾರಿ ಬ್ಯಾಂಕ್ ಗಳು + ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ ಗಳು ಸಣ್ಣ ಹಣಕಾಸು ಬ್ಯಾಂಕುಗಳು + ಬ್ಯಾಂಕೇತರ ಹಣಕಾಸು ಸಂಸ್ಥೆಗಳು + ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ಎನ್ ಸಿಡಿಸಿ).

ಅರ್ಜಿ ಸಲ್ಲಿಕೆ ಪ್ರಕ್ರಿಯೆ


ಮೊದಲು ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://agriinfra.dac.gov.in/Home/Login

ನಂತರ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ

ನಂತರ Beneficiary ಮೇಲೆ ಕ್ಲಿಕ್ ಮಾಡಿ
ನಂತರ Benefit under other scheme ಮೇಲೆ ಕ್ಲಿಕ್ ಮಾಡಿ

ನಂತರ ನೀವು ಅರ್ಜಿ ಸಲ್ಲಿಸಲು ಬಯಸುವ ಯೋಜನೆಯ ಮೇಲೆ ಕ್ಲಿಕ್ ಮಾಡಿ
ಉದಾಹರಣೆಗೆ ಈಗಾಗಲೇ ನೀವು PMFME ಯೋಜನೆಯ ಫಲಾನುಭವಿಗಳಾಗಿದ್ದು,ನಿಮ್ಮ ಸಾಲದ ಮೇಲೆ 3% ಬಡ್ಡಿ ಸಬ್ಸಿಡಿ ಪಡೆಯಬಹುದು

ನಂತರ ನಿಮ್ಮ ಹೆಸರು, ಮೊಬೈಲ್ ನಂಬರ್, ಆಧಾರ್ ನಂಬರ್ ಹಾಕಿ Send OTP ಮೇಲೆ ಕ್ಲಿಕ್ ಮಾಡಿ,ಮೊಬೈಲ್ ಗೆ ಬರುವ OTP ಹಾಕಿ Register ಮಾಡಿ

ನಿಮ್ಮ ಮೊಬೈಲ್ ಗೆ ID ಮತ್ತು password ಬರುತ್ತದೆ,ಅದನ್ನು ಹಾಕಿ ಲಾಗಿನ್ ಮಾಡಿ

ನಂತರ setting icon ಮೇಲೆ ಕ್ಲಿಕ್ ಮಾಡಿ Apply for interest subvention under other scheme ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಮಾಹಿತಿ ತುಂಬಿ,ನಿಮ್ಮ ಬ್ಯಾಂಕ್ ನ ಲೋನ್ Saction letter ಹಾಗೂ ಯೋಜನಾ ವರದಿಯನ್ನು ಅಪ್ಲೌಡ್ ಮಾಡಿ,Submit ಮೇಲೆ ಕ್ಲಿಕ್ ಮಾಡಿ


CPMU, ಕೃಷಿ ಮತ್ತು ರೈ ಕಲ್ಯಾಣ ಮಂತ್ರಾಲಯದ ಮೂಲಕ ಪರಿಶೀಲಿಸಲಾದ ಅರ್ಜಿಯನ್ನು ಬ್ಯಾಂಕ್‌ ಶಾಖೆಗೆ ಆನ್‌ ಲೈನ್‌ ನಲ್ಲಿ ವರ್ಗಾಯಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕೃಷಿ/ತೋಟಗಾರಿಕೆ ಇಲಾಖೆ, ಜಿಲ್ಲಾ ನಬಾರ್ಡ್‌ ವ್ಯವಸ್ಥಾಪಕರು, ನಿಮ್ಮ ವ್ಯಾಪ್ತಿಯ ಬ್ಯಾಂಕ್/‌ ಹಣಕಾಸು ಸಂಸ್ಥೆಗಳನ್ನು ಸಂಪರ್ಕಿಸಬಹುದು.

]]>
Thu, 29 May 2025 11:42:46 +0530 shivuagrico
Subsidy seed rate list&ಕೃಷಿ ಇಲಾಖೆಯಲ್ಲಿ ಸಬ್ಸಿಡಿ ದರದಲ್ಲಿ ಸಿಗುವ ಬೀಜಗಳು ಹಾಗೂ ದರಪಟ್ಟಿ https://krushirushi.in/Subsidy-seed-rate-list-2125 https://krushirushi.in/Subsidy-seed-rate-list-2125 Subsidy seed rate list-ಕೃಷಿ ಇಲಾಖೆಯಲ್ಲಿ ಸಬ್ಸಿಡಿ ದರದಲ್ಲಿ ಸಿಗುವ ಬೀಜಗಳು ಹಾಗೂ ದರಪಟ್ಟಿ

ಸಸ್ಯಗಳ  ಬೆಳವಣೆಗೆ ಮತ್ತು ಅಭಿವೃದ್ಧಿಗೆ ಹದಿನೇಳು ಪೋಷಕಾಂಶಗಳ ಆಗತ್ಯವಿರುತ್ತದೆ. ಇವುಗಳಲ್ಲಿ ಇಂಗಾಲ, ಜಲಜನಕ ಮತ್ತು ಆಮ್ಲಜನಕವು ಸ್ವಾಭಾವಿಕವಾಗಿ ದೊರೆಯಲಿದ್ದು, ಗಾಳಿ ಮತ್ತು ನೀರಿನ ಮೂಲಕ ಸಸ್ಯಗಳಿಗೆ ಲಭ್ಯವಾಗುತ್ತದೆ. ಉಳಿದ ಹದಿನಾಲ್ಕು ಪೋಷಕಾಂಶಗಳಲ್ಲಿ ಸಾರಜನಕ, ರಂಜಕ, ಪೊಟ್ಯಾಷ್ ಹೆಚ್ಚಿನ ಪ್ರಮಾಣದಲ್ಲಿ ಬೇಕಿದ್ದು, ಇವುಗಳನ್ನು ಪ್ರಧಾನ ಪೋಷಕಾಂಶಗಳೆಂದು ಕ್ಯಾಲ್ಸಿಯಂ, ಮೆಗ್ನೆಷಿಯಂ, ಗಂಧಕ, ಕಬ್ಬಿಣ, ಜಿಂಕ್, ಬೋರಾನ್, ತಾಮ್ರ, ಮ್ಯಾಂಗನೀಸ್, ಮಾಲಬ್ಬಿನಂ, ಕ್ಲೋರಿನ್ ಮತ್ತು ನಿಕಲ್ ಕಡಿಮೆ ಪ್ರಮಾಣದಲ್ಲಿ ಬೇಕಿದ್ದು, ಇವುಗಳನ್ನು ಲಘು ಪೋಷಕಾಂಶದ ಕೊರತೆಯಾದರು ಸಸ್ಯಗಳ ಬೆಳವಣೆಗೆ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಿ ಇಳುವರಿ ಕುಂಠಿತವಾಗುತ್ತದೆ.

ಪ್ರಧಾನ ಪೋಷಕಾಂಶಗಳು ಮತ್ತು ಲಘು ಪೋಷಕಾಂಶಗಳಿಗೆ ಭೂಮಿಯೇ ಮುಖ್ಯ ಆಧಾರ, ಮಣ್ಣಿನಿಂದಲೇ ಎಲ್ಲಾ ಪೋಷಕಾಂಶಗಳು ಬೆಳೆಗಳಿಗೆ ಬೇಕಾದ ಪ್ರಮಾಣದಲ್ಲಿ ದೊರೆಯುದಿಲ್ಲವಾದ್ದರಿಂದ ಬಾಹ್ಯವಾಗಿ ನೀಡುವುದು ಆನಿವಾರ್ಯ. ಬೆಳೆಗಳಿಗೆ ಬೇಕಾಗುವ ಈ ಬಾಹ್ಯ ಪೋಷಕಾಂಶಗಳನ್ನು ಸಾವಯುವ (ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಹಿಂಡಿ ಇತ್ಯಾದಿ) ಮತ್ತು ರಸಗೊಬ್ಬರಗಳಿಂದ ಒದಗಿಸಬೇಕಾಗಿದ್ದು, ರಸಗೊಬ್ಬರಗಳಲ್ಲಿ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಮತ್ತು ನೇರೆವಾಗಿ ದೊರೆಯುವ ರೂಪದಲ್ಲಿದ್ದು ಅವುಗಳ ಬಳಕೆ ಅತ್ಯಗತ್ಯವಾಗಿರುತ್ತದೆ.
ರೈತರು ಕೇವಲ ಒಂದು ಅಥವಾ ಎರಡು ಪೋಷಕಾಂಶ ಒದಗಿಸುವ ಯೂರಿಯಾ ಹಾಗೂ ಡಿ.ಎ.ಪಿ. ಯನ್ನು ರೂಢಿಗತವಾಗಿ ಬಳಸುತ್ತಿದ್ದು, ಇವುಗಳಲ್ಲಿ ಸಾರಜನಕ ಮತ್ತು ರಂಜಕದ ಆಂಶ ಮಾತ್ರವಿರುತ್ತದೆ. ಆದರೆ ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅತ್ಯಂತ ಅವಶ್ಯಕವಾಗಿರುವ ಪೊಟ್ಯಾಷ್ ಲಭ್ಯವಿರುವುದಿಲ್ಲ. ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಯ (ಗ್ರೇಡ್) ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಯುಕ್ತ ಬಹಳಷ್ಟು ರಸಗೊಬ್ಬರಗಳು ಲಭ್ಯವಿದ್ದು, ಶಿಫಾರಸ್ಸಿನಂತೆ ವಿವಿಧ ರಸಗೊಬ್ಬರಗಳ ಲಭ್ಯವಿದ್ದು, ಶಿಫಾರಸ್ಸಿನಂತೆ ವಿವಿಧ ರಸಗೊಬ್ಬರಗಳ ಸಂಯೋಜನೆಯೊಂದಿಗೆ ಬಳಸಬಹುದಾಗಿದೆ.

ಶಿಫಾರಸ್ಸಿನಂತೆ ಬೆಳೆಗಳಿಗೆ ಸಾರಜನಕ, ರಂಜಕ, ಪೊಟ್ಯಾಷ್ ರಸಗೊಬ್ಬರಗಳನ್ನು 4:2:1 ರ ಅನುಪಾತದಲ್ಲಿ ಬಳಸಬೇಕಾಗಿರುತ್ತದೆ. ಆದರೆ ಪ್ರಸ್ತುತ ರೈತರು ಯಥೇಚ್ಛವಾಗಿ ಬಳಸುತ್ತಿರುವ ಈ ರಸಗೊಬ್ಬರಗಳ ಅನುಪಾತವು 5.08:2.89:1 ಆಗಿರುತ್ತದೆ. ಇದನ್ನು ಸಮತೋಲನಾತ್ಮಕ ರಸಗೊಬ್ಬರಗಳ ಬಳಕೆಯನ್ನು ಉತ್ತೇಜಿಸಿ, ಸಂಯುಕ್ತ ರಸಗೊಬ್ಬರಗಳನ್ನು ಬಳಸುವುದರಿಂದ ಸರಿದೂಗಿಸಬಹುದಾಗಿರುತ್ತದೆ.

ಅಲ್ಲದೇ, ರೈತರು ರಸಗೊಬ್ಬರವನ್ನು ಕೇವಲ ಒಂದೇ ಸಂಸ್ಥೆಯ ಆಥವಾ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೆ ಡಿ.ಎ.ಪಿ. ರಸಗೊಬ್ಬರಕ್ಕೆ ಪರ್ಯಾಯವಾಗಿ ಗಂಧಕ ಒದಗಿಸುವ 20:20:0:13 ಹಾಗೂ ಇತರೆ ಸಂಯುಕ್ತ ರಸಗೊಬ್ಬರಗಳಾದ 15:15:15, 10:26:26. 22:32:16, 14:35:14, 17:17:17, 14:28:14, 19:19:19, 20:10:10 ಇತ್ಯಾದಿ ಬಳಸಬಹುದಾಗಿದೆ. ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಜಂಟಿ ಕೃಷಿ ನಿರ್ದೇಶಕರು ಸಲಹೆ ನೀಡಿದೆ.

]]>
Wed, 28 May 2025 18:30:55 +0530 shivuagrico
Guarantee schemes&ಈ ಪಟ್ಟಿಯಲ್ಲಿರುವ ಅನರ್ಹರಿಗೆ ಜುಲೈ ತಿಂಗಳಿನಿಂದ ಗ್ಯಾರಂಟಿ ಯೋಜನೆಗಳು ಬಂದ್ https://krushirushi.in/Guarantee-schemes-2124 https://krushirushi.in/Guarantee-schemes-2124 Guarantee schemes-ಈ ಪಟ್ಟಿಯಲ್ಲಿರುವ ಅನರ್ಹರಿಗೆ ಜುಲೈ ತಿಂಗಳಿನಿಂದ ಗ್ಯಾರಂಟಿ ಯೋಜನೆಗಳು ಬಂದ್


ಜುಲೈ ತಿಂಗಳಿನಿಂದ ಅನರ್ಹರಿಗೆ ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.


ಕುಕನೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕುಕನೂರು, ಯಲಬುರ್ಗಾ ತಾಲೂಕಿನ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳಲ್ಲಿ ಅನರ್ಹ ಅನುಭವಿಗಳಿಗೂ ಯೋಜನೆಯ ಲಾಭ ಹೋಗುತ್ತಿದೆ. ಇದನ್ನು ತನಿಖೆ ನಡೆಸಿ ಕಡಿವಾಣ ಹಾಕುವ ಮೂಲಕ ಜುಲೈನಿಂದ ಲಾಭ ಸಿಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಒಂದು ವಿಧಾನಸಭಾ ಕ್ಷೇತ್ರಕ್ಕೆ ವರ್ಷಕ್ಕೆ ಗ್ಯಾರಂಟಿ ಯೋಜನೆಗಳಲ್ಲಿ ಅಂದಾಜು 250 ಕೋಟಿ ರೂಪಾಯಿ ನೀಡುತ್ತಿದ್ದು, ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿದೆ. ಆದರೆ, ಅರ್ಹರಲ್ಲದವರು ಸಹ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಈ ಬಗ್ಗೆ ರಾಜ್ಯಮಟ್ಟದಲ್ಲಿ ಅಧಿಕಾರಿಗಳ ತಂಡ ರಚಿಸಿದ ತನಿಖೆ ನಡೆಸಲು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಹೇಳುತ್ತೇನೆ ಎಂದು ತಿಳಿಸಿದ್ದಾರೆ.

ಮನೆ ಬಾಡಿಗೆ ನೀಡಿದ್ದರೂ ಸಹ ಅವರಿಗೆ ಉಚಿತ ಗೃಹ ಜ್ಯೋತಿ ಯೋಜನೆ ದೊರೆಯುತ್ತಿದೆ. ಗೃಹಲಕ್ಷ್ಮಿಯಲ್ಲಿ ತೆರಿಗೆ, ಜಿಎಸ್‌ಟಿ ಪಾವತಿಸುವ ಕುಟುಂಬ ಸದಸ್ಯರಿಗೆ ಹಣ ನೀಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಯಲಬುರ್ಗಾ ಕ್ಷೇತ್ರದಲ್ಲಿ ಪಡಿತರ ಚೀಟಿಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ. ಈ ಕುರಿತಂತೆ ರಾಜ್ಯಾದ್ಯಂತ ತನಿಖೆ ಮಾಡಿಸಿ ಜುಲೈನಿಂದ ಅನರ್ಹರಿಗೆ ಯೋಜನೆಯ ಲಾಭ ಸಿಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

20 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ರದ್ದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಫಾರಸ್ಸು-Canceled ration card list

“ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ಕೈಬಿಟ್ಟು ಅರ್ಹ ಫಲಾನುಭವಿಗಳಿಗೆ ಬಿಪಿಎಲ್‌ ಕಾರ್ಡ್‌ಗಳನ್ನು ಒದಗಿಸಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಜನರನ್ನು ಅನಗತ್ಯವಾಗಿ ಅಲೆದಾಡಿಸಬಾರದು. ಅವರ ಸಮಸ್ಯೆ, ದೂರುಗಳನ್ನು ಆಲಿಸಿ ಅಗತ್ಯ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ.”
ಸಿದ್ದರಾಮಯ್ಯ, ಮುಖ್ಯಮಂತ್ರಿಗಳು

ಕಳೆದ ಜುಲೈ 8ರಂದು ವಿಧಾನಸೌಧದಲ್ಲಿ ರಾಜ್ಯದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸುವಂತೆ ಖಡಕ್ ಸೂಚನೆ ನೀಡಿದ್ದರು.


ರಾಜ್ಯದಲ್ಲಿ ಶೇ 80ರಷ್ಟು (1.27) ಬಿಪಿಎಲ್ ಕುಟುಂಬಗಳಿದ್ದು, 4.37 ಕೋಟಿ ಜನರು ಬಿಪಿಎಲ್ ಕಾರ್ಡ್ ಸೌಲಭ್ಯ ಪಡೆಯುತ್ತಿದ್ದಾರೆ. ಹೊಸ ಕಾರ್ಡ್‌ಳಿಗೆ ಸಲ್ಲಿಕೆಯಾದ 2.95 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು, ಅನರ್ಹ ಕಾರ್ಡ್ ರದ್ದುಗೊಳಿಸಿ ಅವುಗಳ ಬದಲಾಗಿ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥ ಮಾಡುವಂತೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಜಿಲ್ಲಾಧಿಕಾರಿಗಳು ಕಳೆದ ಆರು ತಿಂಗಳಲ್ಲಿ ಒಮ್ಮೆಯೂ ಪಡಿತರ ಪಡೆಯದ ಕುಟುಂಬಗಳನ್ನು ಪತ್ತೆ ಹಚ್ಚುವಂತೆ ಆಹಾರ ಮತು ನಾಗರಿಕ ಪೂರೈಕೆ ಇಲಾಖೆಗೆ ನಿರ್ದೇಶನ ನೀಡಿದ್ದು,20 ಲಕ್ಷಕ್ಕೂ ಅಧಿಕ ಅನರ್ಹ ಬಿಪಿಎಲ್ ಕಾರ್ಡ್ ರದ್ದು ಮಾಡಲು ಮುಂದಾಗಿದೆ.

ಅನರ್ಹರು ಬಿಪಿಎಲ್‌ ಪಡಿತರ ಚೀಟಿ ಪಡೆಯುವುದನ್ನು ತಪ್ಪಿಸಲು ಪಹಣಿ, ವಾಹನ ನೋಂದಣಿ, ನೌಕರರ ವಿವರಗಳನ್ನು ಪಡಿತರ ಚೀಟಿ ದತ್ತಾಂಶಗಳ ಜತೆ ಬೆಸೆಯಬೇಕು' ಎಂದು ಆಡಳಿತ ಸುಧಾರಣಾ ಆಯೋಗ-2 ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಂಟನೇ ವರದಿಯನ್ನು ಗುರುವಾರ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಆಯೋಗ ಅಧ್ಯಕ್ಷ ಆರ್‌.ವಿ. ದೇಶಪಾಂಡೆ ಈ ಕುರಿತು ಮಾಹಿತಿ ನೀಡಿದರು.

ಮೂರು ಹೆಕ್ಟೇರ್‌ಗಿಂತ ಹೆಚ್ಚು ಕೃಷಿ ಭೂಮಿ ಹೊಂದಿದ್ದರೆ ಬಿಪಿಎಲ್‌ ಪಡಿತರ ಚೀಟಿ ಪಡೆಯುವಂತೆ ಇಲ್ಲ. ಕೃಷಿ ಭೂಮಿಯ ದತ್ತಾಂಶಗಳನ್ನು ಪಡಿತರ ಚೀಟಿಗಳ ದತ್ತಾಂಶಗಳ ಜತೆ ಸಮೀಕರಿಸಿದರೆ ಕೃಷಿ ಭೂಮಿ ಹೊಂದಿರುವವರ ವಿವರಗಳನ್ನು ಪರಿಶೀಲಿಸಲು ಸುಲಭವಾಗುತ್ತದೆ' ಎಂದು ಹೇಳಿದರು.

ಎಚ್‌ಆರ್‌ಎಂಎಸ್‌ ತಂತ್ರಾಂಶದಿಂದ ಸರ್ಕಾರಿ ನೌಕರರ ಮಾಹಿತಿ, ವಾಹನ ನೋಂದಣಿ ದತ್ತಾಂಶ, ಆಸ್ತಿ ನೋಂದಣಿ ವಿವರಗಳನ್ನು ಆಹಾರ ಇಲಾಖೆಯ ಪಡಿತರ ವ್ಯವಸ್ಥೆಗೆ ಜೋಡಿಸಬೇಕು. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ನಿಗದಿಪಡಿಸಿದ ಮಾನದಂಡ ಮತ್ತು ವಿಧಾನವನ್ನು ಸೂಕ್ತ ಮಾರ್ಪಾಡುಗಳೊಂದಿಗೆ ಪರಿಗಣಿಸಬೇಕು. ಗ್ರಾಮೀಣ, ನಗರ ಪ್ರದೇಶಗಳ ಗ್ರಾಮ ಅಥವಾ ವಾರ್ಡ್‌ ಸಭೆಗಳಲ್ಲೇ ಬಿಪಿಎಲ್‌ ಕುಟುಂಬಗಳನ್ನು ಗುರುತಿಸಿ, ಅಂತಿಮ ಅನುಮೋದನೆ ಪಡೆಯಬೇಕು ಎಂಬ ಶಿಫಾರಸು ಮಾಡಲಾಗಿದೆ ಎಂದರು.

ಆದಾಯ ಪ್ರಮಾಣಪತ್ರ ವಿತರಣೆಗೆ ಏಕರೂಪದ ವಿಧಾನ ಅನುಸರಿಸಬೇಕು. ಒಂದು ಕುಟುಂಬದ ಎಲ್ಲ ಸದಸ್ಯರಿಗೂ ಪ್ರತ್ಯೇಕ ಆದಾಯ ಪ್ರಮಾಣಪತ್ರ ನೀಡ ಬಾರದು ಎಂದು ಹೇಳಿದರು.

ಅನರ್ಹ ಪಟ್ಚಿಯಲ್ಲಿ ನಿಮ್ಮ ಹೆಸರು ಹೀಗೆ ಚೆಕ್ ಮಾಡಿ

https://ahara.kar.nic.in/Home/EServices

ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ e-Ration Card ಮೇಲೆ ಕ್ಲಿಕ್ ಮಾಡಿ

ನಂತರ Show cancelled/suspended list ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಜಿಲ್ಲೆ,ತಾಲೂಕು,ತಿಂಗಳು,ವರ್ಷ select ಮಾಡಿ,Go ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಅನರ್ಹ ಪಟ್ಟಿ ಸಿಗಲಿದೆ,ಇದರಲ್ಲಿ ನಿಮ್ಮ ಹೆಸರಿದ್ದರೆ,ನಿಮಗೆ ಈ ತಿಂಗಳಿನಿಂದ ಅನ್ನಭಾಗ್ಯ ಹಾಗೂ ಗೃಹಲಕ್ಷ್ನಿ ಹಣ ಸಿಗುವುದಿಲ್ಲ

]]>
Wed, 28 May 2025 18:24:06 +0530 shivuagrico
June month rain forecast&ಜೂನ್ ನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ,ವಿಶ್ವದಲ್ಲೇ ಮೊದಲ ಭಾರಿ ಕರಾರುವಕ್ಕಾದ ಹವಾಮಾನ ಮುನ್ಸೂಚನೆ ವ್ಯವಸ್ಥೆ ಅಭಿವೃದ್ದಿಪಡಿಸಿದ ಭಾರತ https://krushirushi.in/June-month-rain-forecast-2123 https://krushirushi.in/June-month-rain-forecast-2123 June month rain forecast-ಜೂನ್ ನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ,ವಿಶ್ವದಲ್ಲೇ ಮೊದಲ ಭಾರಿ ಕರಾರುವಕ್ಕಾದ ಹವಾಮಾನ ಮುನ್ಸೂಚನೆ ವ್ಯವಸ್ಥೆ ಅಭಿವೃದ್ದಿಪಡಿಸಿದ ಭಾರತ

 ದೇಶದ ಹಲವು ಭಾಗಗಳಲ್ಲಿ ಜೂನ್‌ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಯಲಿದ್ದು, ಇದು ಗರಿಷ್ಠ ತಾಪಮಾನ ದಾಖಲಾಗುವ ಪ್ರದೇಶಗಳಲ್ಲಿನ ಉಷ್ಣಾಂಶವನ್ನು ತಗ್ಗಿಸಲು ಸಹಕಾರಿಯಾಗಲಿದೆ' ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಂಗಳವಾರ ಹೇಳಿದೆ.
ಮಳೆ ಸುರಿಯಬೇಕು. ಆದರೆ ಈ ವರ್ಷ ಶೇ 108ರಷ್ಟು ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣದ ರಾಜ್ಯಗಳು, ಈಶಾನ್ಯ ಮತ್ತು ವಾಯವ್ಯ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಬೀಳುವ ಸಾಧ್ಯತೆ ಇದೆ' ಎಂದು ಹೇಳಿದ್ದಾರೆ.

ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ ಮೋಹಪಾತ್ರ ಅವರು ಮಾಹಿತಿ ನೀಡಿ, 'ಉತ್ತಮ ಮಳೆಯ ನಿರೀಕ್ಷೆ ಇರುವುದರಿಂದ, ದೇಶದ ಉತ್ತರದ ಹಲವು ಭಾಗಗಳಲ್ಲಿ ಜೂನ್‌ನಲ್ಲಿ ದಾಖಲಾಗುತ್ತಿದ್ದ ಗರಿಷ್ಠ ಉಷ್ಣಾಂಶವೂ ತಗ್ಗುವ ಸಾಧ್ಯತೆ ಇದೆ. ದೇಶದ ಮಧ್ಯ ಭಾಗದಲ್ಲಿ ಮೋಡ ಕವಿದ ವಾತಾವರಣ ಇರಲಿದೆ' ಎಂದಿದ್ದಾರೆ.

'ಜೂನ್‌ನಿಂದ ಸೆಪ್ಟೆಂಬರ್‌ವರೆಗೂ ಮಳೆಯ ಪ್ರಮಾಣ ಶೇ 106ರಷ್ಟು ಸುರಿಯಲಿದೆ. ಕಳೆದ 50 ವರ್ಷಗಳ ದಾಖಲೆಯ ಪ್ರಕಾರ ಈ ಅವಧಿಯಲ್ಲಿ (87 ಸೆಂ.ಮೀ.) ಶೇ 96ರಿಂದ ಶೇ 104ರಷ್ಟು ಮಳೆ ಸುರಿದಿದೆ. ವಾಯವ್ಯ ಭಾಗದಲ್ಲಿ ಸಾಮಾನ್ಯ ಮಳೆಯಾಗಲಿದೆ. ಈಶಾನ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ. ಕೇಂದ್ರ ಭಾಗ ಹಾಗೂ ದಕ್ಷಿಣದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ' ಎಂದು ಅವರು ತಿಳಿಸಿದ್ದಾರೆ.

'ವಾಡಿಕೆಗಿಂತ ಹೆಚ್ಚು ಮಳೆ ಸುರಿಯುವ ರಾಜ್ಯಗಳಲ್ಲಿ ಮಧ್ಯಪ್ರದೇಶ, ಛತ್ತೀಸಗಢ, ಮಹಾರಾಷ್ಟ್ರ, ಒಡಿಶಾ, ಹಿಮಾಚಲ ಪ್ರದೇಶ, ಬಿಹಾರ, ಜಾರ್ಖಂಡ್‌, ಪಶ್ಚಿಮ ಬಂಗಾಳ ಸೇರಿವೆ. ಪಂಜಾಬ್, ಹರಿಯಾಣ, ಕೇರಳ ಹಾಗೂ ತಮಿಳುನಾಡಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ' ಎಂದು ತಿಳಿಸಿದ್ದಾರೆ.

'2009ರಿಂದ ಈಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಾಡಿಕೆಗಿಂತ ಬೇಗ ಮುಂಗಾರು ಕೇರಳ ಪ್ರವೇಶಿಸಿದೆ. ಈ ಬಾರಿ ಮೇ 23ರಂದೇ ಮುಂಗಾರು ಪ್ರವೇಶಿಸಿತು. ಮುಂಬೈಗೆ 16 ದಿನ ಮುಂಚಿತವಾಗಿ ಮುಂಗಾರು ಪ್ರವೇಶಿಸಿದೆ. ಇಂಥ ವಿದ್ಯಮಾನ 1950ರಲ್ಲಿ ಆಗಿತ್ತು' ಎಂದು ಮೋಹಪಾತ್ರ ವಿವರಿಸಿದ್ದಾರೆ.

'2024ರಲ್ಲಿ ಭಾರತವು ಒಟ್ಟು 934.8 ಮಿ.ಮೀ. ಮಳೆಯನ್ನು ಕಂಡಿತ್ತು. ಕಳೆದ ಬಾರಿಗಿಂತ ಈ ವರ್ಷ ಶೇ 108ರಷ್ಟು ಮಳೆಯಾಗುವ ಸಾಧ್ಯತೆಗಳಿವೆ. 2023ರಲ್ಲಿ 820 ಮಿ.ಮೀ. (ಶೇ 94.4ರಷ್ಟು ಸರಾಸರಿ), 2022ರಲ್ಲಿ 925 ಮಿ.ಮೀ, 2021ರಲ್ಲಿ 870 ಮಿ.ಮೀ. ಹಾಗೂ 2020ರಲ್ಲಿ 958 ಮಿ.ಮೀ. ಮಳೆಯಾಗಿದೆ' ಎಂದು ಐಎಂಡಿ ಮಾಹಿತಿ ಹೇಳಿದೆ.

ಭಾರತದ ಕೃಷಿ ವಲಯವನ್ನೂ ಒಳಗೊಂಡು ದೇಶದ ಆರ್ಥಿಕತೆಯು ಮೇಲೆ ಮುಂಗಾರು ಭಾರಿ ಪ್ರಭಾವ ಹೊಂದಿದೆ. ಮಳೆಯಾಶ್ರಿತ ಬೆಳೆಗಳು, ಜಲಾಶಯ, ಕುಡಿಯುವ ನೀರು ಮತ್ತು ಜಲವಿದ್ಯುತ್‌ ಕ್ಷೇತ್ರವು ಮುಂಗಾರನ್ನೇ ಅವಲಂಬಿಸಿವೆ. ಕೃಷಿ ಕ್ಷೇತ್ರವನ್ನು ದೇಶದ 42ರಷ್ಟು ಜನಸಂಖ್ಯೆ ಅವಲಂಬಿಸಿದೆ ಹಾಗೂ ದೇಶದ ಜಿಡಿಪಿಯ ಶೇ 18.2ರಷ್ಟು ಗಾತ್ರವನ್ನು ಇದು ಹೊಂದಿದೆ

BFS-ವಿಶ್ವದಲ್ಲೇ ಮೊದಲ ಭಾರಿ ಕರಾರುವಕ್ಕಾದ ಹವಾಮಾನ ಮುನ್ಸೂಚನೆ ವ್ಯವಸ್ಥೆ ಅಭಿವೃದ್ದಿಪಡಿಸಿದ ಭಾರತ


 ಸಾಕಷ್ಟು ಹವಾಮಾನ ವೈಪರೀತ್ಯಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿರುವ ಭಾರತ ಇದೀಗ ಸಮರ್ಪಕ ರೀತಿಯಲ್ಲಿ ಹವಾಮಾನ ಮುನ್ಸೂಚನೆ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಿದೆ. ಪಾರ್ಥಸಾರಥಿ ಮುಖೋಪಾಧ್ಯಾಯ ಸೇರಿದಂತೆ ಸಂಶೋಧಕರ ತಂಡವೊಂದು ಭಾರತ್ ಫೋರ್​​ಕ್ಯಾಸ್ಟಿಂಗ್ ಸಿಸ್ಟಂ (ಬಿಎಫ್​​ಎಸ್) ಅನ್ನು ನಿರ್ಮಿಸಿವೆ.

ವಿಶ್ವದಲ್ಲೇ ಅತ್ಯಂತ ಕರಾರುವಾಕ್ ಹವಾಮಾನ ಮುನ್ಸೂಚನೆ ಮಾದರಿ (precise weather forecasting model) ಎಂದು ಕರೆಯಬಹುದಾದ ಈ ಬಿಎಫ್​​ಎಸ್ ಮಾಡಲ್ ಅನ್ನು ಸರ್ಕಾರ ಅನಾವರಣಗೊಳಿಸಿದೆ.

ಭಾರತ್ ಫೋರ್​​ಕ್ಯಾಸ್ಟಿಂಗ್ ಸಿಸ್ಟಂ ನೀಡುವ ಹವಾಮಾನ ಮುನ್ಸೂಚನೆ ಬಹಳ ಕರಾರುವಾಕ್ ಆಗಿರಲಿದೆ. ಆರ್ಕಾ ಎನ್ನುವ ಹೊಸ ಸೂಪರ್​​ಕಂಪ್ಯೂಟರ್​​ನ ಶಕ್ತಿಯು ಬಿಎಫ್​​ಎಸ್​​ಗೆ ಇದೆ. ಈ ಹಿಂದೆ ಇದ್ದ ಪ್ರತ್ಯುಶ್ ಎನ್ನುವ ಸೂಪರ್ ಕಂಪ್ಯೂಟರ್​ನಲ್ಲಿ ಮುನ್ಸೂಚನೆ ಮಾದರಿಯನ್ನು ಚಲಾಯಿಸಲು 10 ಗಂಟೆ ಬೇಕಾಗುತ್ತಿತ್ತು. ಈಗ ಆರ್ಕಾದಲ್ಲಿ ಡಾಟಾ ಅನಾಲಿಸಿಸ್ ಕೇವಲ ನಾಲ್ಕು ಗಂಟೆಯಲ್ಲಿ ಮುಗಿಯುತ್ತದೆ ಎಂದು ಭೂವಿಜ್ಞಾನ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದರೆಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿಯಾಗಿದೆ.

ಈ ಹಿಂದಿನ ವೆದರ್ ಸಿಸ್ಟಂ 12 ಕಿಮೀ ಗ್ರಿಡ್​​ನಲ್ಲಿ ಕಾರ್ಯಾಚರಿಸುತ್ತಿತ್ತು. ಈಗ ಬಿಎಫ್​​ಎಸ್ ಸಿಸ್ಟಂ 6 ಕಿಮೀ ಗ್ರಿಡ್​ನಲ್ಲಿ ಆಪರೇಟ್ ಮಾಡುತ್ತದೆ. ಪಂಚಾಯಿತಿ ಮಟ್ಟದಲ್ಲಿ ಇದು ಹವಾಮಾನ ಮುನ್ಸೂಚನೆಯನ್ನು ನಿಖರವಾಗಿ ನೀಡಬಲ್ಲುದು ಎಂದು ಹೇಳಲಾಗುತ್ತಿದೆ.

ಅಂದರೆ, ಪ್ರತೀ ಆರು ಚದರ ಕಿಮೀ ವ್ಯಾಪ್ತಿ ಪ್ರದೇಶಕ್ಕೆ ಸೀಮಿತವಾಗಿ ಹವಾಮಾನ ಮುನ್ಸೂಚನೆಯನ್ನು ಬಿಎಫ್​​ಎಸ್ ಪ್ರೆಡಿಕ್ಟ್ ಮಾಡಬಲ್ಲುದು. ದೇಶಾದ್ಯಂತ ಇರುವ 40 ಡಾಪ್ಲರ್ ವೆದರ್ ರಾಡಾರ್​​ಗಳ ನೆಟ್ವರ್ಕ್ ಅನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಂಡು ನಿಖರ ಹವಾಮಾನ ಮುನ್ಸೂಚನೆ ನೀಡಲಾಗುತ್ತದೆ.

ನಲವತ್ತು ಇರುವ ಈ ಡಾಪ್ಲರ್ ರಾಡಾರ್​​ಗಳ ಸಂಖ್ಯೆಯನ್ನು ಸದ್ಯದಲ್ಲೇ ನೂರಕ್ಕೆ ಏರಿಸಲಾಗುತ್ತಿದೆ. ಮುಂದಿನ ಎರಡು ಗಂಟೆಯಲ್ಲಿ ಯಾವ್ಯಾವ ಪ್ರದೇಶಗಳಲ್ಲಿ ಏನು ಹವಾಮಾನ ವೈಪರೀತ್ಯ ಸಂಭವಿಸಬಹುದು ಎಂಬ ಕಿರು ಅವಧಿ ಮುನ್ಸೂಚನೆಯನ್ನೂ ಇದು ನೀಡಬಲ್ಲುದು.

ಬ್ರಿಟನ್, ಅಮೆರಿಕ, ಐರೋಪ್ಯ ದೇಶಗಳಲ್ಲಿ ಇರುವ ಫೋರ್​​ಕ್ಯಾಸ್ಟ್ ಮಾಡಲ್​​ಗೊಳಿಗಿಂತ ಬಿಎಫ್​​ಎಸ್ ಹೆಚ್ಚು ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಇದರಿಂದ ಹವಾಮಾನ ವೈಪರೀತ್ಯ ಘಟನೆಯು ಹೆಚ್ಚು ಸ್ಪಷ್ಟವಾಗಿ ಗೋಚರವಾಗಬಹುದು.

ಭಾರತಕ್ಕೆ ಬಹಳ ಮುಖ್ಯ ಈ ಬಿಎಫ್​​ಎಸ್

ಭಾರತವು ಬಹಳಷ್ಟು ವೈಪರೀತ್ಯ ಹವಾಮಾನಗಳಿರುವ ಪ್ರದೇಶಗಳಿಂದ ಕೂಡಿದೆ. ಬರ, ಪ್ರವಾಹ ಪರಿಸ್ಥಿತಿ ಯಾವಾಗ ವಕ್ಕರಿಸುತ್ತದೆ ಎಂದು ಹೇಳುವುದು ಕಷ್ಟ. ರೈತರು ಎಚ್ಚೆತ್ತುಕೊಳ್ಳುವಷ್ಟರಲ್ಲಿ ಬೆಲೆಗಳು ಹಾಳಾಗಿಹೋಗಬಹುದು. ಕಳೆದ ಮೂರ್ನಾಲ್ಕು ವರ್ಷಗಳಿಂದ ಭಾರತದಲ್ಲಿ ಸಾಕಷ್ಟು ಬೆಳೆಗಳು ಬರ ಮತ್ತು ಪ್ರವಾಹಗಳಿಗೆ ಬಲಿಯಾಗಿವೆ.

]]>
Wed, 28 May 2025 06:46:11 +0530 shivuagrico
Bele sala&59.39 ಲಕ್ಷ ರೈತರಿಗೆ ಬೆಳೆಸಾಲ ವಿತರಣೆ, 63.47 ಲಕ್ಷ ರೈತರಿಗೆ ಬಡ್ಡಿ ಸಹಾಯಧನ https://krushirushi.in/Bele-sala-2122 https://krushirushi.in/Bele-sala-2122 Bele sala-59.39 ಲಕ್ಷ ರೈತರಿಗೆ ಬೆಳೆಸಾಲ ವಿತರಣೆ, 63.47 ಲಕ್ಷ ರೈತರಿಗೆ ಬಡ್ಡಿ ಸಹಾಯಧನ

ರೈತರು ತಮ್ಮ ಜಮೀನಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವ ಬ್ಯಾಂಕಿನಿಂದ ಎಷ್ಟು ಸಾಲ ಪಡೆಯಲಾಗಿದೆ ಎಂಬುದನ್ನು ಚೆಕ್ ಮಾಡಲು ಕೇವಲ ಸರ್ವೇ ನಂಬರ್(Survey number) ನಮೂದಿಸಿದರೆ ಸಾಕು ಎಲ್ಲಾ ಇತಿಹಾಸ ತಿಳಿದುಕೊಳ್ಳಬಹುದು.

 ಹೌದು ರೈತರು ಕೇವಲ ತಮ್ಮ ಸರ್ವೆ ನಂಬರ್ ನಮೂದಿಸಿದರೆ ಸಾಕು ಸರ್ವೆ ನಂಬರ್ ನಲ್ಲಿ ಬರುವ ಜಮೀನಿನ ಮೇಲೆ ಎಷ್ಟು ಸಾಲ(Bele sala) ಇದೆ ಎಂಬುದನ್ನು ಚೆಕ್ ಮಾಡಬಹುದು ಇದಕ್ಕಾಗಿ ರೈತರ ಬಳಿ ಸ್ಮಾರ್ಟ್ಫೋನ್ ಇದ್ದರೆ ಸಾಕು ದೇಶದ ಯಾವುದೇ ಭಾಗದಲ್ಲಿ ಕುಳಿತಲ್ಲಿಯೇ ಮಾಹಿತಿ ಪಡೆಯಬಹುದು.

 ಸಾಲ(crop loan status)ವಿವರ ಚೆಕ್ ಮಾಡುವುದು ಹೇಗೆ?

 ರೈತರು ತಮ್ಮ ಮೊಬೈಲ್ ನಲ್ಲಿ ಸರ್ವೆ ನಂಬರ್ ನಮೂದಿಸಿ ಸಾಲದ ವಿವರದ ಇತಿಹಾಸ ತಿಳಿದುಕೊಳ್ಳಲು 

https://landrecords.karnataka.gov.in/Service2/

 ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಈ ಕೆಳಗಿನಂತೆ ಭೂಮಿ ತಂತ್ರಾಂಶ ತೆರೆದುಕೊಳ್ಳುತ್ತದೆ. 

 ನಂತರ ನಿಮ್ಮ ಜಿಲ್ಲೆ,ತಾಲೂಕು, ಹೋಬಳಿ,ಗ್ರಾಮ select ಮಾಡಿ ಸರ್ವೆ ನಂಬರ್ ನಂಬರ್ ನಮೂದಿಸಿ Go ಮೇಲೆ ಕ್ಲಿಕ್ ಮಾಡಿ

  ನಂತರ Surnoc,hissa,period ಹಾಗೂ year ಆಯ್ಕೆ ಮಾಡಿ
Fetch details ಮೇಲೆ ಕ್ಲಿಕ್ ಮಾಡಿ

ನಂತರ view ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಪಹಣೆ ತೆರೆದುಕೊಳ್ಳುತ್ತದೆ

ಇದನ್ನೂ ಓದಿ

ಪ್ರಾಥಮಿಕ ಕೃಷಿ ಸಹಕಾರ ಸಂಘಗಳಲ್ಲಿರುವ 31 ಸಾವಿರ ರೈತರ 232 ಕೋಟಿ ಸಾಲಮನ್ನಾ, ಯಾವ ರೈತರ ಎಷ್ಟು ಸಾಲಮನ್ನಾ ಆಗಲಿದೆ ಹೀಗೆ ಚೆಕ್ ಮಾಡಿ-Bele sala manna list - https://krushirushi.in/Bele-sala-manna-list-1427 

 ಮುಟೇಶನ್ ಒಂದನೇ ಕಾಲಂನಲ್ಲಿ ಸರ್ವೆ ನಂಬರ್ ಹಿಸ್ಸಾ ನಂಬರ್ ನಲ್ಲಿರುವ ಮಾಲೀಕರ ಹೆಸರು ಇರುತ್ತದೆ. ಎರಡನೇ ಕಾಲದಲ್ಲಿ ಸರ್ವೆ ನಂಬರ್ ಗಳು ಕರಾಬು ಜಮೀನು ಕಂದಾಯ ವಿವರ ಹಾಗೂ ಜಮೀನಿನ ಮಣ್ಣಿನ ನಮೂನೆ ಹೇಗೆ ಎಂಬ ಮಾಹಿತಿ ಇರುತ್ತದೆ.

 ಸರ್ವೆ ನಂಬರಿನಲ್ಲಿ ಯಾವ ಮಾಲೀಕರಿಗೆ ಎಷ್ಟು ಎಕರೆ ಜಮೀನಿದೆ ಎಂಬ ಮಾಹಿತಿ ಕಾಣುತ್ತದೆ. ಸರ್ವೆ ನಂಬರ್ ಹಾಗೂ ಸ್ವಾಧೀನದಾರರ ಹೆಸರು ಮತ್ತು ವಿಸ್ತೀರ್ಣದ ಮಾಹಿತಿ ಇರುತ್ತದೆ.

  ಇದರೊಂದಿಗೆ 11ನೇ ಕಾಲಂನಲ್ಲಿ ಋಣಗಳು ಕಾಲಂ ಕೆಳಗಡೆ ಯಾವ ಬ್ಯಾಂಕಿನಿಂದಎಷ್ಟು ಸಾಲ ಪಡೆಯಲಾಗಿದೆ.  ಎಂಬ ಮಾಹಿತಿ ಇರುತ್ತದೆ.


 ಈ ಮಾಹಿತಿ ರೈತರಿಗೆ ತುಂಬಾ ಅನುಕೂಲವಾಗಿದೆ ಸರ್ವೇ ನಂಬರ್ ನಮೂದಿಸಿದರೆ ಸಾಕು ರೈತರು ದೇಶದ ಯಾವುದೇ ಮೂಲೆಯಿಂದಲೂ ಮಾಹಿತಿ ಪಡೆಯಬಹುದು. ಕೇವಲ ಸರ್ವೆ ನಂಬರ್ ನಮೂದಿಸಿದರೆ ಸಾಕು ಸರ್ವ ಮಾಹಿತಿ ಎಲ್ಲವೂ ರೈತರಿಗೆ ಸಿಗಲಿದೆ.

Bele sala baddi manna-ಈ ಯೋಜನೆಯಡಿ ಸಿಗಲಿದೆ ನಿಮ್ಮ ಸಾಲದ ಮೇಲೆ 3% ಬಡ್ಡಿ ಮನ್ನಾ,ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

 ಕೇಂದ್ರ ವಲಯದ ಯೋಜನೆ ಕೃಷಿ ಮೂಲಭೂತ ಸೌಕರ್ಯ ನಿಧಿ ಯೋಜನೆಯಡಿ ಸರ್ಕಾರವು ಹಣಕಾಸು ಸೌಲಭ್ಯಗಳನ್ನು ಒದಗಿಸುತ್ತಿದ್ದು, ರೂ. 2 ಕೋಟಿ ಸಾಲದ ಮೊತ್ತಕ್ಕೆ ವಾರ್ಷಿಕ ಶೇ. 3ರಂತೆ 7 ವರ್ಷದ ಅವಧಿಗೆ ಬಡ್ಡಿ ಸಹಾಯಧನ ಲಭ್ಯವಿರುತ್ತದೆ.


ಅರ್ಹ ಕೃಷಿ ಚಟುವಟಿಕೆಗಳು/ಯೋಜನೆಗಳು ಈ ಕೆಳಗಿನಂತಿವೆ

ಇ-ಮಾರುಕಟ್ಟೆ ವೇದಿಕೆ ಸೇರಿದಂತೆ ಸರಬರಾಜು ಸರಪಳಿ ಸೇವೆಗಳು ಗೋದಾಮುಗಳು ಮತ್ತು ಸೈಲೊಗಳು + ಪ್ಯಾಕ್ ಹೌಸ್‌ಗಳು ವಿಂಗಡಣೆ ಮತ್ತು ಶ್ರೇಣೀಕರಣ ಘಟಕಗಳು ಶೀತಲಗೃಹ ಸರಪಳಿಗಳು ಸಾಗಾಣಿಕೆ ಸೌಲಭ್ಯಗಳು ಪ್ರಾಥಮಿಕ ಸಂಸ್ಕರಣಾ ಕೇಂದ್ರಗಳು ಹಣ್ಣು ಮಾಗಿಸುವ ಘಟಕಗಳು

ಮೌಲ್ಯಮಾಪನ ಘಟಕಗಳು ಸಂಕುಚಿತ ಜೈವಿಕ ಅನಿಲ (CBG) ಸ್ಥಾವರ + ಸಾವಯವ ಪರಿಕರ ಉತ್ಪಾದನೆ + ಜೈವಿಕ ಉತ್ತೇಜಕ ಉತ್ಪಾದನಾ ಘಟಕಗಳು * ಸಸ್ಯ ನರ್ಸರಿ /ಅಂಗಾಂಶ ಕೃಷಿ ಬೀಜ ಸಂಸ್ಕರಣೆ + ಕೃಷಿ ಯಂತ್ರಧಾರೆ ಕೇಂದ್ರಗಳು ಸ್ಮಾರ್ಟ್ ಮತ್ತು ನಿಖರವಾದ ಕೃಷಿ ಸಂಯೋಜಿತ ಸ್ಪಿರುಲಿನಾ ಉತ್ಪಾದನೆ ಮತ್ತು ಸಂಸ್ಕರಣಾ ಘಟಕಗಳು ರೇಷ್ಮೆ ಕೃಷಿ ಸಂಸ್ಕರಣಾ ಘಟಕ • ಜೇನು ಸಂಸ್ಕರಣಾ ಘಟಕ ಪ್ಲಾಂಟ್ ಕ್ಯಾರಂಟೈನ್ ಘಟಕಗಳು ಮತ್ತು ಸಾಮೂಹಿಕ ಕೃಷಿ ಅಡಿ: ಜಲಕೃಷಿ, ವಾಯುಕೃಷಿ, ಹಸಿರುಮನೆ, ಬಹುಮಹಡಿ ಕೃಷಿ, ಅಣಬೆ ಬೇಸಾಯ

ಅರ್ಹ ಫಲಾನುಭವಿಗಳು

ರೈತರು/ ರೈತ ಉತ್ಪಾದಕ ಸಂಸ್ಥೆಗಳು, ಪ್ರಾಂತೀಯ ಸಹಕಾರ ಒಕ್ಕೂಟಗಳು ಕೃಷಿ ಉದ್ಯಮಿಗಳು / ನವೋದ್ಯಮಿಗಳು ಪ್ರಾಥಮಿಕ ಕೃಷಿ ಕ್ರೆಡಿಟ್ ಸಹಕಾರ ಸಂಘಗಳು + ವಿವಿಧೋದ್ದೇಶ ಸಹಕಾರ ಸಂಘಗಳು * ಸ್ವ-ಸಹಾಯ ಗುಂಪುಗಳು / ಜಂಟಿ ಬಾಧ್ಯತಾ ಗುಂಪುಗಳು / ಖಾಸಗಿ ಮಾಲೀಕತ್ವ ಸಂಸ್ಥೆಗಳು.
ಯೋಜನೆಯಲ್ಲಿ ಭಾಗವಹಿಸುವ ಹಣಕಾಸು ಸಂಸ್ಥೆಗಳು:
ರಾಷ್ಟ್ರೀಕೃತ ಬ್ಯಾಂಕುಗಳು + ಶೆಡ್ಯೂಲ್ಡ್ ಸಹಕಾರಿ ಬ್ಯಾಂಕ್ ಗಳು + ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ ಗಳು ಸಣ್ಣ ಹಣಕಾಸು ಬ್ಯಾಂಕುಗಳು + ಬ್ಯಾಂಕೇತರ ಹಣಕಾಸು ಸಂಸ್ಥೆಗಳು + ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ಎನ್ ಸಿಡಿಸಿ).

ಅರ್ಜಿ ಸಲ್ಲಿಕೆ ಪ್ರಕ್ರಿಯೆ


ಮೊದಲು ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://agriinfra.dac.gov.in/Home/Login

ನಂತರ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ

ನಂತರ Beneficiary ಮೇಲೆ ಕ್ಲಿಕ್ ಮಾಡಿ
ನಂತರ Benefit under other scheme ಮೇಲೆ ಕ್ಲಿಕ್ ಮಾಡಿ

ನಂತರ ನೀವು ಅರ್ಜಿ ಸಲ್ಲಿಸಲು ಬಯಸುವ ಯೋಜನೆಯ ಮೇಲೆ ಕ್ಲಿಕ್ ಮಾಡಿ
ಉದಾಹರಣೆಗೆ ಈಗಾಗಲೇ ನೀವು PMFME ಯೋಜನೆಯ ಫಲಾನುಭವಿಗಳಾಗಿದ್ದು,ನಿಮ್ಮ ಸಾಲದ ಮೇಲೆ 3% ಬಡ್ಡಿ ಸಬ್ಸಿಡಿ ಪಡೆಯಬಹುದು

ನಂತರ ನಿಮ್ಮ ಹೆಸರು, ಮೊಬೈಲ್ ನಂಬರ್, ಆಧಾರ್ ನಂಬರ್ ಹಾಕಿ Send OTP ಮೇಲೆ ಕ್ಲಿಕ್ ಮಾಡಿ,ಮೊಬೈಲ್ ಗೆ ಬರುವ OTP ಹಾಕಿ Register ಮಾಡಿ

ನಿಮ್ಮ ಮೊಬೈಲ್ ಗೆ ID ಮತ್ತು password ಬರುತ್ತದೆ,ಅದನ್ನು ಹಾಕಿ ಲಾಗಿನ್ ಮಾಡಿ

ನಂತರ setting icon ಮೇಲೆ ಕ್ಲಿಕ್ ಮಾಡಿ Apply for interest subvention under other scheme ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಮಾಹಿತಿ ತುಂಬಿ,ನಿಮ್ಮ ಬ್ಯಾಂಕ್ ನ ಲೋನ್ Saction letter ಹಾಗೂ ಯೋಜನಾ ವರದಿಯನ್ನು ಅಪ್ಲೌಡ್ ಮಾಡಿ,Submit ಮೇಲೆ ಕ್ಲಿಕ್ ಮಾಡಿ


CPMU, ಕೃಷಿ ಮತ್ತು ರೈ ಕಲ್ಯಾಣ ಮಂತ್ರಾಲಯದ ಮೂಲಕ ಪರಿಶೀಲಿಸಲಾದ ಅರ್ಜಿಯನ್ನು ಬ್ಯಾಂಕ್‌ ಶಾಖೆಗೆ ಆನ್‌ ಲೈನ್‌ ನಲ್ಲಿ ವರ್ಗಾಯಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕೃಷಿ/ತೋಟಗಾರಿಕೆ ಇಲಾಖೆ, ಜಿಲ್ಲಾ ನಬಾರ್ಡ್‌ ವ್ಯವಸ್ಥಾಪಕರು, ನಿಮ್ಮ ವ್ಯಾಪ್ತಿಯ ಬ್ಯಾಂಕ್/‌ ಹಣಕಾಸು ಸಂಸ್ಥೆಗಳನ್ನು ಸಂಪರ್ಕಿಸಬಹುದು.

]]>
Tue, 27 May 2025 19:00:56 +0530 shivuagrico
Corona guidelines&ಮತ್ತೆ ಕರೋನಾ ಉಲ್ಬಣ,ಶಾಲಾ ಕಾಲೇಜುಗಳಿಗೆ ರಜೆ,ಲಾಕ್ಡೌನ್ ಸೇರಿದಂತೆ ಸರ್ಕಾರದಿಂದ ಮಹತ್ವದ ಆದೇಶ https://krushirushi.in/Corona-guidelines-2121 https://krushirushi.in/Corona-guidelines-2121 Covid-19 guidelines-ಮತ್ತೆ ಕರೋನಾ ಉಲ್ಬಣ,ಶಾಲಾ ಕಾಲೇಜುಗಳಿಗೆ ರಜೆ,ಲಾಕ್ಡೌನ್ ಸೇರಿದಂತೆ ಸರ್ಕಾರದಿಂದ ಮಹತ್ವದ ಆದೇಶ

ರಾಜ್ಯದಲ್ಲಿ ಮತ್ತೆ ಕೊರೋನಾ ಉಲ್ಬಣಗೊಳ್ಳುವ ಆತಂಕ ಎದುರಾಗಿದ್ದು, ಪರಿಸ್ಥಿತಿಯನ್ನು ಅವಲೋಕಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಸಚಿವರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಸಭೆಯಲ್ಲಿ ಅಧಿಕಾರಿಗಳು, ತಜ್ಞರು ಮತ್ತು ಸಚಿವರುಗಳಿಂದ ಮಾಹಿತಿ ಪಡೆದ ಮುಖ್ಯಮಂತ್ರಿಗಳು ಹಲವು ಸೂಚನೆಗಳನ್ನು ನೀಡಿದ್ದಾರೆ.

ಕೊರೋನಾ ನಿಯಂತ್ರಣಕ್ಕೆ ಎಲ್ಲ ಸಿದ್ಧತೆಗಳನ್ನ ಮಾಡಿಕೊಳ್ಳಿ. ಕಳೆದ ಬಾರಿ ಆದಂತೆ ಈ ಬಾರಿ ಸಮಸ್ಯೆ ಆಗಬಾರದು. ಕೋವಿಡ್​ ಸಹಾಯವಾಣಿ​​ ತೆರೆಯಿರಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಿಎಂ ಮಹತ್ವದ ಸೂಚನೆ ನೀಡಿದರು. ಅಲ್ಲದೇ ಜ್ವರ, ನೆಗಡಿ ಇರುವ ಮಕ್ಕಳಿಗೆ ರಜೆ ನೀಡುವಂತೆ ಶಾಲೆಗಳಿಗೆ ಸೂಚಿಸಿದ್ದಾರೆ. ಪ್ರತಿ ವಾರ ಕೊವಿಡ್ ಟಾಸ್ಕ್ ಫೋರ್ಸ್ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಿಎಂ ನೀಡಿದ ಇತರೆ ಸೂಚನೆಗಳು

  • ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಆದರೆ, ಮುಂಚಿತವಾಗಿಯೇ ಮುಂದೆ ಸಂಭವಿಸಬಹುದಾದ ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯವಾದ ಎಲ್ಲಾ ಸವಲತ್ತು, ಸಲಕರಣೆಗಳನ್ನು ಸಜ್ಜುಗೊಳಿಸಿಟ್ಟುಕೊಳ್ಳಬೇಕು.

  • ಸದ್ಯಕ್ಕೆ ಆತಂಕ ಪಡುವ ಪರಿಸ್ಥಿತಿ ಬಂದಿಲ್ಲವಾದರೂ ವೆಂಟಿಲೇಟರ್, ಆಕ್ಸಿಜನ್, ಔಷಧ ಸೇರಿ ಇತ್ಯಾದಿ ಅಗತ್ಯಗಳನ್ನು ಸಿದ್ದಪಡಿಸಿಟ್ಟುಕೊಳ್ಳಿ.

  • ವಯಸ್ಸಾದವರು, ಗರ್ಭಿಣಿಯರು, ಹೃದಯ ಸಂಬಂಧಿ, ಶ್ವಾಸಕೋಶ ಸಮಸ್ಯೆ ಇರುವವರು ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸುವುದು ಒಳ್ಳೆಯದು. ಈ ಬಗ್ಗೆ ಅರಿವು ಮೂಡಿಸಬೇಕು.

  • ಪ್ರತೀ ವಾರ ಅಥವಾ ಅಗತ್ಯ ಬಿದ್ದರೆ ಮೂರು ದಿನಕ್ಕೊಮ್ಮೆ ಪರಿಸ್ಥಿತಿಯ ಪರಿಶೀಲನೆ ನಡೆಸುತ್ತಾ ತೀವ್ರ ನಿಗಾ ಇಡಬೇಕು.

  • ಗರ್ಭಿಣಿಯರಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದರೆ, ಅವರನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸುವುದನ್ನು ನಿಲ್ಲಿಸಿ, ಎಲ್ಲಾ ಆಸ್ಪತ್ರೆಗಳಲ್ಲೂ ಅಗತ್ಯ ವ್ಯವಸ್ಥೆ ಮಾಡಿಕೊಂಡಿರಬೇಕು.

  • ಶೀತ, ನೆಗಡಿ, ಜ್ವರ ಇರುವ ಮಕ್ಕಳನ್ನು ಪೋಷಕರು ಶಾಲೆಗೆ ಕಳುಹಿಸದಿರುವುದು ಆರೋಗ್ಯಕರ. ಶಾಲೆಗಳೂ ಈ ಬಗ್ಗೆ ಗಮನ ಹರಿಸಿ ಶೀತ, ನೆಗಡಿ ಇರುವ ಮಕ್ಕಳನ್ನು ವಾಪಾಸ್ ಪೋಷಕರ ಮೂಲಕ ಮನೆಗೆ ಕಳುಹಿಸಬೇಕು.

  • ಎಂತಹುದೇ ಪರಿಸ್ಥಿತಿ ಎದುರಿಸಲು ಸರ್ವ ಸನ್ನದ್ಧವಾಗಿರುವಂತೆ ಮುಖ್ಯಮಂತ್ರಿಗಳ ಸೂಚನೆ

  • ಕಳೆದ ಜನವರಿಯಿಂದಲೂ ಕೊರೊನಾ ಪ್ರಕರಣಗಳು ಅಲ್ಲಲ್ಲಿ ಒಂದೊ – ಎರಡು ಕಾಣಬರುತ್ತಿದ್ದು, ಮೇ ತಿಂಗಳಲ್ಲಿ ಉಲ್ಬಣವಾಗಿದ್ದು ಮೇ ತಿಂಗಳ ನಾಲ್ಕನೇ ವಾರಕ್ಕೆ 62 ಪ್ರಕರಣಗಳು ವರದಿಯಾಗಿವೆ. ಆದರೆ ಗಂಭೀರ ಎನ್ನುವಂತಹ ಪ್ರಕರಣಗಳ ಸಂಖ್ಯೆ ಒಂದು ಮಾತ್ರ ಇದೆ.

  • ಎಸ್‌ಎಆರ್‌ಐ ಪ್ರಕರಣಗಳಲ್ಲಿ ತಪಾಸಣೆ ಕಾರ್ಯ ಈಗಾಗಲೇ ನಡೆಯುತ್ತಿದೆ. ನೆರೆಯ ರಾಜ್ಯಗಳಾದ ಕೇರಳದಲ್ಲಿ 95, ತಮಿಳು ನಾಡಿನಲ್ಲಿ 66, ಮಹಾರಾಷ್ಟ್ರ ಗಳಲ್ಲಿ 56 ಪ್ರಕರಣಗಳು ವರದಿಯಾಗಿವೆ.

  • ರಾಜ್ಯದಲ್ಲಿ ಕೊರೋನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.

  • ಬಾಣಂತಿ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

  • ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೊರೋನಾ ಸಹಾಯವಾಣಿ ಪ್ರಾರಂಭಿಸಬೇಕು.

  • ಮುಂದಿನ ದಿನಗಳಲ್ಲಿ ಅವಶ್ಯಕತೆ ಕಂಡು ಬಂದರೆ ವಿಮಾನ ನಿಲ್ದಾಣಗಳಲ್ಲಿ ಹೊರಗಡೆಯಿಂದ ಬರುವ ಪ್ರಯಾಣಿಕರಿಗೆ ತಪಾಸಣಾ ಘಟಕಗಳನ್ನು ಪ್ರಾರಂಭಿಸಬೇಕು.

  • ಕೊರೋನಾ ವಿಷಯದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಧೋರಣೆ ಅನುಸರಿಸಬಾರದು. ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಆಸ್ಪತ್ರೆಗಳೂ ಸರ್ವ ಸನ್ನದ್ಧವಾಗಿ ಇರಬೇಕು.

  • ಆರೋಗ್ಯ ಇಲಾಖೆ ಸಿಬ್ಬಂದಿ ರಜಾ ಹಾಕಿ ತೆರಳದೆ ಕೇಂದ್ರ ಸ್ಥಾನದಲ್ಲಿಯೇ ಇದ್ದು ಕಾರ್ಯ ನಿರ್ವಹಿಸಬೇಕು.

]]>
Tue, 27 May 2025 06:20:50 +0530 shivuagrico
ರೈತರು ಬೀಜ ಗೊಬ್ಬರ ಖರೀದಿಸಬೇಕಾದ ಈ ಕೆಲಸ ಮಾಡಿ,ಇಲ್ಲದಿದ್ದರೆ ಸಿಗುವುದಿಲ್ಲ ಪರಿಹಾರ&Subsidy&rate&seeds&and&Fertliser https://krushirushi.in/Subsidy-rate-seeds-and-Fertliser-2120 https://krushirushi.in/Subsidy-rate-seeds-and-Fertliser-2120 Subsidy rate seeds and Fertliser-ರೈತರು ಬೀಜ ಗೊಬ್ಬರ ಖರೀದಿಸಬೇಕಾದ ಗಮನಿಸಬೇಕಾದ ಅಂಶಗಳು

ಮುಂಗಾರು ಹಂಗಾಮಿಗೆ ರೈತರು ಭೂಮಿಯ ಸಿದ್ಧತೆ ಮಾಡಿ ಕೊಳ್ಳುತ್ತಿದ್ದು, ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಸಮೃದ್ಧಿಯಾಗಿ ಸುರಿದು, ಮುಂಗಾರು ಮಳೆ ಉತ್ತಮವಾಗಿ ಆರಂಭವಾಗಿರುವುದರಿಂದ ರೈತರು ಬಿತ್ತನೆ ಬೀಜ, ಗೊಬ್ಬರ ಖರೀದಿ ಮಾಡಲು ಕೃಷಿ ಇಲಾಖೆ ಸಲಹೆ-ಸೂಚನೆಗಳನ್ನು ನೀಡಿದೆ.

ರೈತರು ರಸಗೊಬ್ಬರವನ್ನು ಖರೀದಿ ಮಾಡುವಾಗ ಯಾವೆಲ್ಲ ಅಂಶಗಳನ್ನು ಪ್ರಮುಖವಾಗಿ ಅನುಸರಿಸಬೇಕು? ಹಾಗೂ ಇದೇ ಮಾದರಿಯಲ್ಲಿ ಬಿತ್ತನೆ ಬೀಜ ಹಾಗೂ ಕೀಟನಾಶಕ ಗಳನ್ನು ಖರೀದಿ ಮಾಡುವಾಗ ಅನುಸರಿಸಬೇಕಾದ ಅಗತ್ಯ ಕ್ರಮಗಳ ಕುರಿತು ಸಹ ಒಂದಿಷ್ಟು ಅಗತ್ಯ ಹಾಗೂ ಬಹುಮುಖ್ಯ ಮಾಹಿತಿಯನ್ನು ಕೃಷಿ ಇಲಾಖೆ ಹಂಚಿಕೊಂಡಿದೆ.

ರೈತರು ಮಾರುಕಟ್ಟೆಯಲ್ಲಿ ಗೊಬ್ಬರ ಖರೀದಿ ಮಾಡುವಾಗ ಗಮನಿಸಬೇಕಾದ ಅಂಶಗಳು

* ರಸಗೊಬ್ಬರವನ್ನು ಯಾವಾಗಲೂ ಅಧಿಕೃತ ಮಾರಾಟಗಾರರಿಂದಲೇ ಖರೀದಿಸಬೇಕು

* ರಸಗೊಬ್ಬರ ಚೀಲದ ಬಾಯಿಯನ್ನು ಯಂತ್ರದಿಂದ ಹೊಲಿದಿರಬೇಕು. ಕೈಯಿಂದ ಚೀಲವನ್ನು ಹೊಲಿದಿದ್ದರೆ ಅದಕ್ಕೆ ಸೀಸದಿಂದ ಮೊಹರನ್ನು ಹಾಕಿರುವುದನ್ನು ಗಮನಿಸ ಬೇಕು

* ರಸಗೊಬ್ಬರದ ಚೀಲವು ಸರಿಯಾದ ತೂಕ ಇರಬೇಕು. ಅನುಮಾನವಿದ್ದಲ್ಲಿ ಚೀಲವನ್ನು ತೂಕ ಮಾಡಿ ಖರೀದಿಸಬೇಕು

* ರಸಗೊಬ್ಬರ ಚೀಲದ ಮೇಲೆ ನಮೂದಿಸಿರುವ ಗರಿಷ್ಟ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆ ನೀಡಬಾರದು

* ರಸಗೊಬ್ಬರ ಚೀಲದ ಮೇಲೆ ರಸಗೊಬ್ಬರದ ಹೆಸರು, ರಸಗೊಬ್ಬರದ ಬ್ರಾಂಡ್, ರಸಗೊಬ್ಬರ ತಯಾರಕರ ಹೆಸರು ಮತ್ತು ವಿಳಾಸ, ರಸಗೊಬ್ಬರದಲ್ಲಿರುವ ಕನಿಷ್ಠ ಶೇಕಡ ಪೋಷಕಾಂಶಗಳ ವಿವರ, ಗರಿಷ್ಟ ಮತ್ತು ನಿವ್ವಳ ತೂಕ (ಪ್ಯಾಕ್ ಮಾಡಿದಾಗ), ಗರಿಷ್ಟ ಮಾರಾಟ ಬೆಲೆ (ತೆರಿಗೆಗಳನ್ನು ಸೇರಿಸಿ), ತಯಾರಿಸಿದ ತಿಂಗಳು ಮತ್ತು ವರ್ಷ, ಮಿಶ್ರಣ, ವಿಶೇಷ ಮಿಶ್ರಣ ರಸಗೊಬ್ಬರಗಳು, ಲಘು ಪೋಷಕಾಂಶಗಳು ಮತ್ತು ಅವುಗಳ ಮಿಶ್ರಣ ಮತ್ತು ಸೂಪರ್ -ಸ್ಪೇಟ್ ಚೀಲಗಳ ಮೇಲೆ ಬ್ಯಾಚ್ ಸಂಖ್ಯೆ ಮತ್ತು ತಯಾರಿಕಾ ಕಂಪೆನಿಯ ಪರವಾನಗಿ ಪತ್ರ ಇರುವುದನ್ನು ಪರಿಶೀಲಿಸಿ ಖರೀದಿಸಬೇಕು.

* ರಸಗೊಬ್ಬರವನ್ನು ಖರೀದಿಸಿದ್ದಕ್ಕೆ ರಶೀದಿ ಪಡೆಯಬೇಕು. ರಶೀದಿಯಲ್ಲಿ ಖರೀದಿಸಿದ ರಸಗೊಬ್ಬರಗಳ ವಿವರಗಳನ್ನು ತುಂಬಿದ್ದು ರೈತರ ಸಹಿ ಮತ್ತು ಮಾರಾಟಗಾರರ ಸಹಿ ಇರಬೇಕು

* ಕೇಂದ್ರ ಸರ್ಕಾರ ನೀಡುವ ಸಹಾಯಧನದ ಮೊತ್ತವನ್ನು (ಅನ್ವಯವಾಗುವ ಕಡೆ) ಕಡ್ಡಾಯವಾಗಿ ನಮೂದಿಸಿರುವುದನ್ನು ಗಮನಿಸಬೇಕು

ಬಿತ್ತನೆ ಬೀಜವನ್ನು ಖರೀದಿಸುವಾಗ ಗಮನಿಸಬೇಕಾದ ಮುಖ್ಯ ಅಂಶಗಳು:

ರೈತರು ಮಾರುಕಟ್ಟೆಯಲ್ಲಿ ಗೊಬ್ಬರ ಖರೀದಿ ಮಾಡುವಾಗ ಗಮನಿಸಬೇಕಾದ ಅಂಶಗಳು

* ರಸಗೊಬ್ಬರವನ್ನು ಯಾವಾಗಲೂ ಅಧಿಕೃತ ಮಾರಾಟಗಾರರಿಂದಲೇ ಖರೀದಿಸಬೇಕು

* ರಸಗೊಬ್ಬರ ಚೀಲದ ಬಾಯಿಯನ್ನುಯಂತ್ರದಿಂದ ಹೊಲಿದಿರಬೇಕು. ಕೈಯಿಂದ ಚೀಲವನ್ನು ಹೊಲಿದಿದ್ದರೆ ಅದಕ್ಕೆ ಸೀಸದಿಂದ ಮೊಹರನ್ನು ಹಾಕಿರುವುದನ್ನು ಗಮನಿಸಬೇಕು

ಕೀಟನಾಶಕ ಖರೀದಿಸುವಾಗ ಗಮನಿಸಬೇಕಾದ ಅಂಶಗಳು:

* ಅಧಿಕೃತ ಬಿತ್ತನೆ ಬೀಜ ಮಾರಾಟಗಾರ ರಿಂದಲೇ ಬಿತ್ತನೆ ಬೀಜವನ್ನು ಖರೀದಿಸಿ

* ಬಿತ್ತನೆ ಬೀಜ ಖರೀದಿಸಿದಾಗ ತಪ್ಪದೇ ಅಧಿಕೃತ ರಶೀದಿ ಪಡೆಯಬೇಕು. ರಶೀದಿಯಲ್ಲಿ ಲಾಟ್‌ನಂಬರ್ ನಮೂದಿಸಿರಬೇಕು

* ಚೀಲದ ಮೇಲೆ ನಮೂದಿಸಿರುವಂತೆ ತೂಕ ಸರಿಯಾಗಿದೆಯೆ ಎಂದು ಖಚಿತಪಡಿಸಿಕೊಂಡು ಖರೀದಿಸಿ

* ಬಿತ್ತನೆ ಬೀಜದ ಉತ್ಪಾದಕರು ಹಾಗೂ ಮಾರಾಟಗಾರರ ವಿಳಾಸವನ್ನು ಗಮನಿಸಬೇಕು

* ಬಿತ್ತನೆ ಬೀಜವು ಸಂಬಂಧಪಟ್ಟ ಪ್ರಾಧಿಕಾರದಿಂದ ಪರೀಕ್ಷಿಸಲ್ಪಟ್ಟು ಗುಣಮಟ್ಟದ ಬಗ್ಗೆ ಧೃಡೀಕರಿಸಲಾಗಿದೆಯೆ? ಧೃಡೀಕರಣದ ಟ್ಯಾಗ್‌ಗಳನ್ನುಲಗತ್ತಿಸಲಾಗಿದೆಯೆ? ಎಂದು ಖಾತರಿಸಿಪಡಿಸಿಕೊಳ್ಳಿ

* ಬಿತ್ತನೆಗೆ ಮುಂಚೆ ಬೀಜ ಮೊಳೆಯುವಿಕೆ ಪ್ರಮಾಣವನ್ನು ಪರೀಕ್ಷಿಸಿಕೊಳ್ಳಬೇಕು

* ಬಿತ್ತನೆ ಬೀಜ, ದೃಢೀಕರಣದ ಬಗ್ಗೆ ಲಗತ್ತಿಸಿರುವ ಟ್ಯಾಗುಗಳನ್ನು ಬೆಳೆ ಕಟಾವು ಆಗುವವರೆಗೆ ಸುರಕ್ಷಿತವಾಗಿ ಕಾಯ್ದಿಟ್ಟುಕೊಳ್ಳಬೇಕು

* ನಮೂದಿಸಿರುವ ಉತ್ಪಾದನಾ ದಿನಾಂಕ ಮತ್ತು ವ್ಯಾಲಿಡಿಟಿ ಅವಧಿಯನ್ನು ಗಮನಿಸಬೇಕು

* ಕೀಟನಾಶಕದ ಉತ್ಪಾದನಾ ದಿನಾಂಕ ಹಾಗೂ ಅವಧಿ ಮೀರುವ ದಿನಾಂಕ, ಕೀಟನಾಶಕದ ಉತ್ಪಾದನಾ ದಿನಾಂಕ ಹಾಗೂ ಅವಧಿ ನಮೂದಿಸಲಾಗಿ ದೆಯೆ ಎಂದು ಗಮನಿಸಬೇಕು

  • ಕೀಟನಾಶಕದ ಗುಣಮಟ್ಟದ ಬಗ್ಗೆ ಅನುಮಾನವಿದ್ದಲ್ಲಿ ಸಮೀಪದ ಕೀಟನಾಶಕ ಪರಿವೀಕ್ಷಕರ ಪ್ರಯೋಗಾಲಯಕ್ಕೆ ಕಳುಹಿಸಿ ಗುಣಮಟ್ಟವನ್ನು ಖಾತ್ರಿ ಪಡಿಸಿಕೊಳ್ಳಬೇಕು

Subsidy seed rate list-ಕೃಷಿ ಇಲಾಖೆಯಲ್ಲಿ ಸಬ್ಸಿಡಿ ದರದಲ್ಲಿ ಸಿಗುವ ಬೀಜಗಳು ಹಾಗೂ ದರಪಟ್ಟಿ

ಸಸ್ಯಗಳ  ಬೆಳವಣೆಗೆ ಮತ್ತು ಅಭಿವೃದ್ಧಿಗೆ ಹದಿನೇಳು ಪೋಷಕಾಂಶಗಳ ಆಗತ್ಯವಿರುತ್ತದೆ. ಇವುಗಳಲ್ಲಿ ಇಂಗಾಲ, ಜಲಜನಕ ಮತ್ತು ಆಮ್ಲಜನಕವು ಸ್ವಾಭಾವಿಕವಾಗಿ ದೊರೆಯಲಿದ್ದು, ಗಾಳಿ ಮತ್ತು ನೀರಿನ ಮೂಲಕ ಸಸ್ಯಗಳಿಗೆ ಲಭ್ಯವಾಗುತ್ತದೆ. ಉಳಿದ ಹದಿನಾಲ್ಕು ಪೋಷಕಾಂಶಗಳಲ್ಲಿ ಸಾರಜನಕ, ರಂಜಕ, ಪೊಟ್ಯಾಷ್ ಹೆಚ್ಚಿನ ಪ್ರಮಾಣದಲ್ಲಿ ಬೇಕಿದ್ದು, ಇವುಗಳನ್ನು ಪ್ರಧಾನ ಪೋಷಕಾಂಶಗಳೆಂದು ಕ್ಯಾಲ್ಸಿಯಂ, ಮೆಗ್ನೆಷಿಯಂ, ಗಂಧಕ, ಕಬ್ಬಿಣ, ಜಿಂಕ್, ಬೋರಾನ್, ತಾಮ್ರ, ಮ್ಯಾಂಗನೀಸ್, ಮಾಲಬ್ಬಿನಂ, ಕ್ಲೋರಿನ್ ಮತ್ತು ನಿಕಲ್ ಕಡಿಮೆ ಪ್ರಮಾಣದಲ್ಲಿ ಬೇಕಿದ್ದು, ಇವುಗಳನ್ನು ಲಘು ಪೋಷಕಾಂಶದ ಕೊರತೆಯಾದರು ಸಸ್ಯಗಳ ಬೆಳವಣೆಗೆ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಿ ಇಳುವರಿ ಕುಂಠಿತವಾಗುತ್ತದೆ.

ಪ್ರಧಾನ ಪೋಷಕಾಂಶಗಳು ಮತ್ತು ಲಘು ಪೋಷಕಾಂಶಗಳಿಗೆ ಭೂಮಿಯೇ ಮುಖ್ಯ ಆಧಾರ, ಮಣ್ಣಿನಿಂದಲೇ ಎಲ್ಲಾ ಪೋಷಕಾಂಶಗಳು ಬೆಳೆಗಳಿಗೆ ಬೇಕಾದ ಪ್ರಮಾಣದಲ್ಲಿ ದೊರೆಯುದಿಲ್ಲವಾದ್ದರಿಂದ ಬಾಹ್ಯವಾಗಿ ನೀಡುವುದು ಆನಿವಾರ್ಯ. ಬೆಳೆಗಳಿಗೆ ಬೇಕಾಗುವ ಈ ಬಾಹ್ಯ ಪೋಷಕಾಂಶಗಳನ್ನು ಸಾವಯುವ (ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಹಿಂಡಿ ಇತ್ಯಾದಿ) ಮತ್ತು ರಸಗೊಬ್ಬರಗಳಿಂದ ಒದಗಿಸಬೇಕಾಗಿದ್ದು, ರಸಗೊಬ್ಬರಗಳಲ್ಲಿ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಮತ್ತು ನೇರೆವಾಗಿ ದೊರೆಯುವ ರೂಪದಲ್ಲಿದ್ದು ಅವುಗಳ ಬಳಕೆ ಅತ್ಯಗತ್ಯವಾಗಿರುತ್ತದೆ.
ರೈತರು ಕೇವಲ ಒಂದು ಅಥವಾ ಎರಡು ಪೋಷಕಾಂಶ ಒದಗಿಸುವ ಯೂರಿಯಾ ಹಾಗೂ ಡಿ.ಎ.ಪಿ. ಯನ್ನು ರೂಢಿಗತವಾಗಿ ಬಳಸುತ್ತಿದ್ದು, ಇವುಗಳಲ್ಲಿ ಸಾರಜನಕ ಮತ್ತು ರಂಜಕದ ಆಂಶ ಮಾತ್ರವಿರುತ್ತದೆ. ಆದರೆ ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅತ್ಯಂತ ಅವಶ್ಯಕವಾಗಿರುವ ಪೊಟ್ಯಾಷ್ ಲಭ್ಯವಿರುವುದಿಲ್ಲ. ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಯ (ಗ್ರೇಡ್) ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಯುಕ್ತ ಬಹಳಷ್ಟು ರಸಗೊಬ್ಬರಗಳು ಲಭ್ಯವಿದ್ದು, ಶಿಫಾರಸ್ಸಿನಂತೆ ವಿವಿಧ ರಸಗೊಬ್ಬರಗಳ ಲಭ್ಯವಿದ್ದು, ಶಿಫಾರಸ್ಸಿನಂತೆ ವಿವಿಧ ರಸಗೊಬ್ಬರಗಳ ಸಂಯೋಜನೆಯೊಂದಿಗೆ ಬಳಸಬಹುದಾಗಿದೆ.

ಶಿಫಾರಸ್ಸಿನಂತೆ ಬೆಳೆಗಳಿಗೆ ಸಾರಜನಕ, ರಂಜಕ, ಪೊಟ್ಯಾಷ್ ರಸಗೊಬ್ಬರಗಳನ್ನು 4:2:1 ರ ಅನುಪಾತದಲ್ಲಿ ಬಳಸಬೇಕಾಗಿರುತ್ತದೆ. ಆದರೆ ಪ್ರಸ್ತುತ ರೈತರು ಯಥೇಚ್ಛವಾಗಿ ಬಳಸುತ್ತಿರುವ ಈ ರಸಗೊಬ್ಬರಗಳ ಅನುಪಾತವು 5.08:2.89:1 ಆಗಿರುತ್ತದೆ. ಇದನ್ನು ಸಮತೋಲನಾತ್ಮಕ ರಸಗೊಬ್ಬರಗಳ ಬಳಕೆಯನ್ನು ಉತ್ತೇಜಿಸಿ, ಸಂಯುಕ್ತ ರಸಗೊಬ್ಬರಗಳನ್ನು ಬಳಸುವುದರಿಂದ ಸರಿದೂಗಿಸಬಹುದಾಗಿರುತ್ತದೆ.

ಅಲ್ಲದೇ, ರೈತರು ರಸಗೊಬ್ಬರವನ್ನು ಕೇವಲ ಒಂದೇ ಸಂಸ್ಥೆಯ ಆಥವಾ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೆ ಡಿ.ಎ.ಪಿ. ರಸಗೊಬ್ಬರಕ್ಕೆ ಪರ್ಯಾಯವಾಗಿ ಗಂಧಕ ಒದಗಿಸುವ 20:20:0:13 ಹಾಗೂ ಇತರೆ ಸಂಯುಕ್ತ ರಸಗೊಬ್ಬರಗಳಾದ 15:15:15, 10:26:26. 22:32:16, 14:35:14, 17:17:17, 14:28:14, 19:19:19, 20:10:10 ಇತ್ಯಾದಿ ಬಳಸಬಹುದಾಗಿದೆ. ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಜಂಟಿ ಕೃಷಿ ನಿರ್ದೇಶಕರು ಸಲಹೆ ನೀಡಿದೆ.

]]>
Mon, 26 May 2025 19:44:18 +0530 shivuagrico
Subsidy seed rate list&ಕೃಷಿ ಇಲಾಖೆಯಲ್ಲಿ ಸಬ್ಸಿಡಿ ದರದಲ್ಲಿ ಸಿಗುವ ಬೀಜಗಳು ಹಾಗೂ ದರಪಟ್ಟಿ https://krushirushi.in/Subsidy-seed-rate-list-2119 https://krushirushi.in/Subsidy-seed-rate-list-2119 Subsidy seed rate list-ಕೃಷಿ ಇಲಾಖೆಯಲ್ಲಿ ಸಬ್ಸಿಡಿ ದರದಲ್ಲಿ ಸಿಗುವ ಬೀಜಗಳು ಹಾಗೂ ದರಪಟ್ಟಿ

ಸಸ್ಯಗಳ  ಬೆಳವಣೆಗೆ ಮತ್ತು ಅಭಿವೃದ್ಧಿಗೆ ಹದಿನೇಳು ಪೋಷಕಾಂಶಗಳ ಆಗತ್ಯವಿರುತ್ತದೆ. ಇವುಗಳಲ್ಲಿ ಇಂಗಾಲ, ಜಲಜನಕ ಮತ್ತು ಆಮ್ಲಜನಕವು ಸ್ವಾಭಾವಿಕವಾಗಿ ದೊರೆಯಲಿದ್ದು, ಗಾಳಿ ಮತ್ತು ನೀರಿನ ಮೂಲಕ ಸಸ್ಯಗಳಿಗೆ ಲಭ್ಯವಾಗುತ್ತದೆ. ಉಳಿದ ಹದಿನಾಲ್ಕು ಪೋಷಕಾಂಶಗಳಲ್ಲಿ ಸಾರಜನಕ, ರಂಜಕ, ಪೊಟ್ಯಾಷ್ ಹೆಚ್ಚಿನ ಪ್ರಮಾಣದಲ್ಲಿ ಬೇಕಿದ್ದು, ಇವುಗಳನ್ನು ಪ್ರಧಾನ ಪೋಷಕಾಂಶಗಳೆಂದು ಕ್ಯಾಲ್ಸಿಯಂ, ಮೆಗ್ನೆಷಿಯಂ, ಗಂಧಕ, ಕಬ್ಬಿಣ, ಜಿಂಕ್, ಬೋರಾನ್, ತಾಮ್ರ, ಮ್ಯಾಂಗನೀಸ್, ಮಾಲಬ್ಬಿನಂ, ಕ್ಲೋರಿನ್ ಮತ್ತು ನಿಕಲ್ ಕಡಿಮೆ ಪ್ರಮಾಣದಲ್ಲಿ ಬೇಕಿದ್ದು, ಇವುಗಳನ್ನು ಲಘು ಪೋಷಕಾಂಶದ ಕೊರತೆಯಾದರು ಸಸ್ಯಗಳ ಬೆಳವಣೆಗೆ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಿ ಇಳುವರಿ ಕುಂಠಿತವಾಗುತ್ತದೆ.

ಪ್ರಧಾನ ಪೋಷಕಾಂಶಗಳು ಮತ್ತು ಲಘು ಪೋಷಕಾಂಶಗಳಿಗೆ ಭೂಮಿಯೇ ಮುಖ್ಯ ಆಧಾರ, ಮಣ್ಣಿನಿಂದಲೇ ಎಲ್ಲಾ ಪೋಷಕಾಂಶಗಳು ಬೆಳೆಗಳಿಗೆ ಬೇಕಾದ ಪ್ರಮಾಣದಲ್ಲಿ ದೊರೆಯುದಿಲ್ಲವಾದ್ದರಿಂದ ಬಾಹ್ಯವಾಗಿ ನೀಡುವುದು ಆನಿವಾರ್ಯ. ಬೆಳೆಗಳಿಗೆ ಬೇಕಾಗುವ ಈ ಬಾಹ್ಯ ಪೋಷಕಾಂಶಗಳನ್ನು ಸಾವಯುವ (ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಹಿಂಡಿ ಇತ್ಯಾದಿ) ಮತ್ತು ರಸಗೊಬ್ಬರಗಳಿಂದ ಒದಗಿಸಬೇಕಾಗಿದ್ದು, ರಸಗೊಬ್ಬರಗಳಲ್ಲಿ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಮತ್ತು ನೇರೆವಾಗಿ ದೊರೆಯುವ ರೂಪದಲ್ಲಿದ್ದು ಅವುಗಳ ಬಳಕೆ ಅತ್ಯಗತ್ಯವಾಗಿರುತ್ತದೆ.
ರೈತರು ಕೇವಲ ಒಂದು ಅಥವಾ ಎರಡು ಪೋಷಕಾಂಶ ಒದಗಿಸುವ ಯೂರಿಯಾ ಹಾಗೂ ಡಿ.ಎ.ಪಿ. ಯನ್ನು ರೂಢಿಗತವಾಗಿ ಬಳಸುತ್ತಿದ್ದು, ಇವುಗಳಲ್ಲಿ ಸಾರಜನಕ ಮತ್ತು ರಂಜಕದ ಆಂಶ ಮಾತ್ರವಿರುತ್ತದೆ. ಆದರೆ ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅತ್ಯಂತ ಅವಶ್ಯಕವಾಗಿರುವ ಪೊಟ್ಯಾಷ್ ಲಭ್ಯವಿರುವುದಿಲ್ಲ. ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಯ (ಗ್ರೇಡ್) ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಯುಕ್ತ ಬಹಳಷ್ಟು ರಸಗೊಬ್ಬರಗಳು ಲಭ್ಯವಿದ್ದು, ಶಿಫಾರಸ್ಸಿನಂತೆ ವಿವಿಧ ರಸಗೊಬ್ಬರಗಳ ಲಭ್ಯವಿದ್ದು, ಶಿಫಾರಸ್ಸಿನಂತೆ ವಿವಿಧ ರಸಗೊಬ್ಬರಗಳ ಸಂಯೋಜನೆಯೊಂದಿಗೆ ಬಳಸಬಹುದಾಗಿದೆ.

ಶಿಫಾರಸ್ಸಿನಂತೆ ಬೆಳೆಗಳಿಗೆ ಸಾರಜನಕ, ರಂಜಕ, ಪೊಟ್ಯಾಷ್ ರಸಗೊಬ್ಬರಗಳನ್ನು 4:2:1 ರ ಅನುಪಾತದಲ್ಲಿ ಬಳಸಬೇಕಾಗಿರುತ್ತದೆ. ಆದರೆ ಪ್ರಸ್ತುತ ರೈತರು ಯಥೇಚ್ಛವಾಗಿ ಬಳಸುತ್ತಿರುವ ಈ ರಸಗೊಬ್ಬರಗಳ ಅನುಪಾತವು 5.08:2.89:1 ಆಗಿರುತ್ತದೆ. ಇದನ್ನು ಸಮತೋಲನಾತ್ಮಕ ರಸಗೊಬ್ಬರಗಳ ಬಳಕೆಯನ್ನು ಉತ್ತೇಜಿಸಿ, ಸಂಯುಕ್ತ ರಸಗೊಬ್ಬರಗಳನ್ನು ಬಳಸುವುದರಿಂದ ಸರಿದೂಗಿಸಬಹುದಾಗಿರುತ್ತದೆ.

ಅಲ್ಲದೇ, ರೈತರು ರಸಗೊಬ್ಬರವನ್ನು ಕೇವಲ ಒಂದೇ ಸಂಸ್ಥೆಯ ಆಥವಾ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೆ ಡಿ.ಎ.ಪಿ. ರಸಗೊಬ್ಬರಕ್ಕೆ ಪರ್ಯಾಯವಾಗಿ ಗಂಧಕ ಒದಗಿಸುವ 20:20:0:13 ಹಾಗೂ ಇತರೆ ಸಂಯುಕ್ತ ರಸಗೊಬ್ಬರಗಳಾದ 15:15:15, 10:26:26. 22:32:16, 14:35:14, 17:17:17, 14:28:14, 19:19:19, 20:10:10 ಇತ್ಯಾದಿ ಬಳಸಬಹುದಾಗಿದೆ. ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಜಂಟಿ ಕೃಷಿ ನಿರ್ದೇಶಕರು ಸಲಹೆ ನೀಡಿದೆ.

]]>
Mon, 26 May 2025 06:29:36 +0530 shivuagrico
20 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ರದ್ದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಫಾರಸ್ಸು&Canceled ration card list https://krushirushi.in/Canceled-ration-card-list-2118 https://krushirushi.in/Canceled-ration-card-list-2118 20 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ರದ್ದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಫಾರಸ್ಸು-Canceled ration card list

“ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ಕೈಬಿಟ್ಟು ಅರ್ಹ ಫಲಾನುಭವಿಗಳಿಗೆ ಬಿಪಿಎಲ್‌ ಕಾರ್ಡ್‌ಗಳನ್ನು ಒದಗಿಸಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಜನರನ್ನು ಅನಗತ್ಯವಾಗಿ ಅಲೆದಾಡಿಸಬಾರದು. ಅವರ ಸಮಸ್ಯೆ, ದೂರುಗಳನ್ನು ಆಲಿಸಿ ಅಗತ್ಯ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ.”
ಸಿದ್ದರಾಮಯ್ಯ, ಮುಖ್ಯಮಂತ್ರಿಗಳು

ಕಳೆದ ಜುಲೈ 8ರಂದು ವಿಧಾನಸೌಧದಲ್ಲಿ ರಾಜ್ಯದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸುವಂತೆ ಖಡಕ್ ಸೂಚನೆ ನೀಡಿದ್ದರು.


ರಾಜ್ಯದಲ್ಲಿ ಶೇ 80ರಷ್ಟು (1.27) ಬಿಪಿಎಲ್ ಕುಟುಂಬಗಳಿದ್ದು, 4.37 ಕೋಟಿ ಜನರು ಬಿಪಿಎಲ್ ಕಾರ್ಡ್ ಸೌಲಭ್ಯ ಪಡೆಯುತ್ತಿದ್ದಾರೆ. ಹೊಸ ಕಾರ್ಡ್‌ಳಿಗೆ ಸಲ್ಲಿಕೆಯಾದ 2.95 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು, ಅನರ್ಹ ಕಾರ್ಡ್ ರದ್ದುಗೊಳಿಸಿ ಅವುಗಳ ಬದಲಾಗಿ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥ ಮಾಡುವಂತೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಜಿಲ್ಲಾಧಿಕಾರಿಗಳು ಕಳೆದ ಆರು ತಿಂಗಳಲ್ಲಿ ಒಮ್ಮೆಯೂ ಪಡಿತರ ಪಡೆಯದ ಕುಟುಂಬಗಳನ್ನು ಪತ್ತೆ ಹಚ್ಚುವಂತೆ ಆಹಾರ ಮತು ನಾಗರಿಕ ಪೂರೈಕೆ ಇಲಾಖೆಗೆ ನಿರ್ದೇಶನ ನೀಡಿದ್ದು,20 ಲಕ್ಷಕ್ಕೂ ಅಧಿಕ ಅನರ್ಹ ಬಿಪಿಎಲ್ ಕಾರ್ಡ್ ರದ್ದು ಮಾಡಲು ಮುಂದಾಗಿದೆ.

ಅನರ್ಹರು ಬಿಪಿಎಲ್‌ ಪಡಿತರ ಚೀಟಿ ಪಡೆಯುವುದನ್ನು ತಪ್ಪಿಸಲು ಪಹಣಿ, ವಾಹನ ನೋಂದಣಿ, ನೌಕರರ ವಿವರಗಳನ್ನು ಪಡಿತರ ಚೀಟಿ ದತ್ತಾಂಶಗಳ ಜತೆ ಬೆಸೆಯಬೇಕು' ಎಂದು ಆಡಳಿತ ಸುಧಾರಣಾ ಆಯೋಗ-2 ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಂಟನೇ ವರದಿಯನ್ನು ಗುರುವಾರ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಆಯೋಗ ಅಧ್ಯಕ್ಷ ಆರ್‌.ವಿ. ದೇಶಪಾಂಡೆ ಈ ಕುರಿತು ಮಾಹಿತಿ ನೀಡಿದರು.

ಮೂರು ಹೆಕ್ಟೇರ್‌ಗಿಂತ ಹೆಚ್ಚು ಕೃಷಿ ಭೂಮಿ ಹೊಂದಿದ್ದರೆ ಬಿಪಿಎಲ್‌ ಪಡಿತರ ಚೀಟಿ ಪಡೆಯುವಂತೆ ಇಲ್ಲ. ಕೃಷಿ ಭೂಮಿಯ ದತ್ತಾಂಶಗಳನ್ನು ಪಡಿತರ ಚೀಟಿಗಳ ದತ್ತಾಂಶಗಳ ಜತೆ ಸಮೀಕರಿಸಿದರೆ ಕೃಷಿ ಭೂಮಿ ಹೊಂದಿರುವವರ ವಿವರಗಳನ್ನು ಪರಿಶೀಲಿಸಲು ಸುಲಭವಾಗುತ್ತದೆ' ಎಂದು ಹೇಳಿದರು.

ಎಚ್‌ಆರ್‌ಎಂಎಸ್‌ ತಂತ್ರಾಂಶದಿಂದ ಸರ್ಕಾರಿ ನೌಕರರ ಮಾಹಿತಿ, ವಾಹನ ನೋಂದಣಿ ದತ್ತಾಂಶ, ಆಸ್ತಿ ನೋಂದಣಿ ವಿವರಗಳನ್ನು ಆಹಾರ ಇಲಾಖೆಯ ಪಡಿತರ ವ್ಯವಸ್ಥೆಗೆ ಜೋಡಿಸಬೇಕು. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ನಿಗದಿಪಡಿಸಿದ ಮಾನದಂಡ ಮತ್ತು ವಿಧಾನವನ್ನು ಸೂಕ್ತ ಮಾರ್ಪಾಡುಗಳೊಂದಿಗೆ ಪರಿಗಣಿಸಬೇಕು. ಗ್ರಾಮೀಣ, ನಗರ ಪ್ರದೇಶಗಳ ಗ್ರಾಮ ಅಥವಾ ವಾರ್ಡ್‌ ಸಭೆಗಳಲ್ಲೇ ಬಿಪಿಎಲ್‌ ಕುಟುಂಬಗಳನ್ನು ಗುರುತಿಸಿ, ಅಂತಿಮ ಅನುಮೋದನೆ ಪಡೆಯಬೇಕು ಎಂಬ ಶಿಫಾರಸು ಮಾಡಲಾಗಿದೆ ಎಂದರು.

ಆದಾಯ ಪ್ರಮಾಣಪತ್ರ ವಿತರಣೆಗೆ ಏಕರೂಪದ ವಿಧಾನ ಅನುಸರಿಸಬೇಕು. ಒಂದು ಕುಟುಂಬದ ಎಲ್ಲ ಸದಸ್ಯರಿಗೂ ಪ್ರತ್ಯೇಕ ಆದಾಯ ಪ್ರಮಾಣಪತ್ರ ನೀಡ ಬಾರದು ಎಂದು ಹೇಳಿದರು.

ಅನರ್ಹ ಪಟ್ಚಿಯಲ್ಲಿ ನಿಮ್ಮ ಹೆಸರು ಹೀಗೆ ಚೆಕ್ ಮಾಡಿ

https://ahara.kar.nic.in/Home/EServices

ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ e-Ration Card ಮೇಲೆ ಕ್ಲಿಕ್ ಮಾಡಿ

ನಂತರ Show cancelled/suspended list ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಜಿಲ್ಲೆ,ತಾಲೂಕು,ತಿಂಗಳು,ವರ್ಷ select ಮಾಡಿ,Go ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಅನರ್ಹ ಪಟ್ಟಿ ಸಿಗಲಿದೆ,ಇದರಲ್ಲಿ ನಿಮ್ಮ ಹೆಸರಿದ್ದರೆ,ನಿಮಗೆ ಈ ತಿಂಗಳಿನಿಂದ ಅನ್ನಭಾಗ್ಯ ಹಾಗೂ ಗೃಹಲಕ್ಷ್ನಿ ಹಣ ಸಿಗುವುದಿಲ್ಲ

]]>
Sun, 25 May 2025 20:52:20 +0530 shivuagrico
CET result 2025&ಸಿಇಟಿ ಫಲಿತಾಂಶ 2025 ಪ್ರಕಟ,ನಿಮ್ಮ ಫಲಿತಾಂಶ ಚೆಕ್ ಮಾಡುವ ಡೈರೆಕ್ಟ್ ಲಿಂಕ್ https://krushirushi.in/CET-result-2025 https://krushirushi.in/CET-result-2025 CET result 2025-ಸಿಇಟಿ ಫಲಿತಾಂಶ 2025 ಪ್ರಕಟ,ನಿಮ್ಮ ಫಲಿತಾಂಶ ಚೆಕ್ ಮಾಡುವ ಡೈರೆಕ್ಟ್ ಲಿಂಕ್

ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ಅವರು ಫಲಿತಾಂಶ ಪ್ರಕಟಿಸಿದ್ದಾರೆ.

ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ  (cetonline.Karnataka.gov.in ugcetrank2025/ checkresult.aspx ಹಾಗೂ www.karresults.nic.in   ಫಲಿತಾಂಶದ ವಿವರಗಳು ಲಭ್ಯವಾಗಲಿವೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಮಾಹಿತಿ ನೀಡಿದ್ದಾರೆ.

CETresult

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://cetonline.karnataka.gov.in/kea/

ನಂತರ 24-25 UCET ಫಲಿತಾಂಶಗಳ ಲಿಂಕ್1 24/05/2025 ಮೇಲೆ ಕ್ಲಿಕ್ ಮಾಡಿ

ನಂತರ candidate application number,Date of birth ಹಾಕಿ Submit ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಫಲಿತಾಂಶ ಸಿಗಲಿದೆ.

]]>
Sun, 25 May 2025 10:23:04 +0530 shivuagrico
Horticulture department subsidy schemes&ತೋಟಗಾರಿಕೆ ಇಲಾಖೆಯಿಂದ 50% ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನ https://krushirushi.in/Horticulture-department-subsidy-schemes-2116 https://krushirushi.in/Horticulture-department-subsidy-schemes-2116 Horticulture department subsidy schemes-ತೋಟಗಾರಿಕೆ ಇಲಾಖೆಯಿಂದ 50% ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನ


ರೈತರ ಆದಾಯವನ್ನು ಹೆಚ್ಚಿಸಲು ಮತ್ತು ತೋಟಗಾರಿಕಾ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸರ್ಕಾರವು ರಾಷ್ಟ್ರೀಯ ತೋಟಗಾರಿಕೆ ಮಂಡಳಿ (NHB) ಮೂಲಕ ಹಲವಾರು ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ರೈತರು ಶೇಡ್‌ ನೆಟ್(Shade net), ಹಸಿರು ಮನೆ(green house), ಪಾಲಿಹೌಸ್ ಕೃಷಿ(Poly house), ಶೀತಲೀಕರಣ ಘಟಕ(cold storage) ಮತ್ತು ಅಣಬೆ ಕೃಷಿ(Mushroom cultivation)ಸ್ಥಾಪನೆಗೆ ಶೇಕಡಾ 50 ರವರೆಗೆ ಸಬ್ಸಿಡಿ ಪಡೆಯಬಹುದು.

ಯಾವೆಲ್ಲಾ ಸೌಲಭ್ಯಗಳು ಲಭ್ಯವಿದೆ‌ ?

ಶೇಡ್‌ ನೆಟ್(Shade net), ಹಸಿರು ಮನೆ(Green House) ಮತ್ತು ಪಾಲಿಹೌಸ್ ಕೃಷಿ(Poly House): ಈ ರೀತಿಯ ಕೃಷಿಗೆ ಸರ್ಕಾರವು ಶೇಕಡಾ 50 ರವರೆಗೆ ಸಬ್ಸಿಡಿ ನೀಡುತ್ತಿದೆ.
ತೆರೆದ ಜಮೀನಿನಲ್ಲಿ ಹಣ್ಣಿನ ಕೃಷಿ: ನೆಲ್ಲಿಕಾಯಿ, ಮಾವು, ಪೇರಲದಂತಹ ಹಣ್ಣುಗಳನ್ನು ಬೆಳೆಯುವ ರೈತರಿಗೆ ಶೇಕಡಾ 40 ರವರೆಗೆ ಸಬ್ಸಿಡಿ ನೀಡಲಾಗುತ್ತಿದೆ.


ಶೀತಲೀಕರಣ ಘಟಕ ಮತ್ತು ಅಣಬೆ ಕೃಷಿ: ಶೀತಲೀಕರಣ ಘಟಕ ಸ್ಥಾಪನೆಗೆ ಶೇಕಡಾ 30 ರಿಂದ 50 ರವರೆಗೆ ಮತ್ತು ಅಣಬೆ ಕೃಷಿಗೆ ಶೇಕಡಾ 40 ರವರೆಗೆ ಸಬ್ಸಿಡಿ ನೀಡಲಾಗುತ್ತಿದೆ.
ಕೃಷಿ ಸಂಬಂಧಿತ ಉದ್ಯಮಿಗಳು, ಸ್ಟಾರ್ಟ್‌ಅಪ್‌ಗಳು ಮತ್ತು ರೈತರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ.
ಹಣ್ಣು ಮತ್ತು ಹೂವುಗಳ ಕೃಷಿಯ ಜೊತೆಗೆ ಸಂಬಾರ ಪದಾರ್ಥಗಳು, ಆರೊಮ್ಯಾಟಿಕ್ ಮತ್ತು ಔಷಧೀಯ ಸಸ್ಯಗಳ ಕೃಷಿಗೂ ಸಬ್ಸಿಡಿ ನೀಡಲಾಗುತ್ತಿದೆ.


ಅರ್ಜಿ ಸಲ್ಲಿಸುವುದು ಹೇಗೆ ?

ರೈತರು ರಾಷ್ಟ್ರೀಯ ತೋಟಗಾರಿಕೆ ಮಂಡಳಿಯ ಅಧಿಕೃತ ವೆಬ್‌ಸೈಟ್ www.nhb.gov.in  ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಯೋಜನೆಯ ವೆಚ್ಚಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.


ಬೇಕಾಗುವ ದಾಖಲೆಗಳು

ಪ್ಯಾನ್ ಕಾರ್ಡ್
ಮತದಾರರ ಗುರುತಿನ ಚೀಟಿ
ಆಧಾರ್ ಕಾರ್ಡ್
ಪಾಲುದಾರಿಕೆ ಸಂಸ್ಥೆಯ ನೋಂದಣಿ (ಅನ್ವಯಿಸಿದರೆ)
ಕಂಪನಿ, ಸೊಸೈಟಿ, ಟ್ರಸ್ಟ್ ಇತ್ಯಾದಿಗಳ ನೋಂದಣಿ (ಅನ್ವಯಿಸಿದರೆ)


ಹೆಚ್ಚಿನ ಮಾಹಿತಿ:

ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಹತ್ತಿರದ ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಿ.
ಅಥವಾ, ರಾಷ್ಟ್ರೀಯ ತೋಟಗಾರಿಕೆ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಈ ಯೋಜನೆಯು ರೈತರಿಗೆ ತೋಟಗಾರಿಕೆ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಮತ್ತು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.

ಟ್ರ್ಯಾಕ್ಟರ್ ಸೇರಿದಂತೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಗಳಿಗೆ ಅರ್ಜಿ ಆಹ್ವಾನ,ನಿಮ್ಮ ಅರ್ಜಿ ಹೀಗೆ ಸಲ್ಲಿಸಿ-Tractor subsidy scheme 2025

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಮುದಾಯ ಕೃಷಿಹೊಂಡ, ಕೃಷಿಹೊಂಡ, ಪ್ಯಾಕ್‌ಹೌಸ್, ಟ್ರ್ಯಾಕ್ಟರ್(Tractor) 20 ಪಿಟಿಒ ಎಚ್‌ಪಿ ಒಳಗಿನ ಪ್ರಾಥಮಿಕ ಸಂಸ್ಕರಣಾ ಘಟಕ ಮತ್ತು ಎಸ್.ಎಂ.ಎ.ಎಂ. ಯೋಜನೆಯಡಿಯಲ್ಲಿ ಅಡಿಕೆ ಸಿಪ್ಪೆ ಸುಲಿಯುವ ಯಂತ್ರ ಹಾಗೆ ಫೈಬರ್ ದೋಟಿ(ಅಡಿಕೆ ಕಟಾವು ಮಾಡಲು) ಪ್ರಸಕ್ತ ಆರ್ಥಿಕ ಸಾಲಿನಲ್ಲಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.


 ತಾಲ್ಲೂಕಿನ ಆಸಕ್ತ ರೈತರು ಅರ್ಜಿಯೊಂದಿಗೆ ತಮ್ಮ ಜಮೀನಿನ ಪಹಣಿ, ಆಧಾ‌ರ್ ಕಾರ್ಡ್ ಬ್ಯಾಂಕ್ ಖಾತೆ ಪುಸ್ತಕದ ಜೆರಾಕ್ಸ್ ಪ್ರತಿ, ಜಾತಿ ಪ್ರಮಾಣ ಪತ್ರದೊಂದಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಲ್ಲಾ ಪಂಚಾಯಿತಿ) ಕಚೇರಿಯಲ್ಲಿ ಹಾಗೂ ಹೋಬಳಿವಾರು ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

Horticulture department schemes-ತೋಟಗಾರಿಕೆ ಇಲಾಖೆಯಲ್ಲಿರುವ ವಿವಿಧ ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನ

ತೋಟಗಾರಿಕೆ ಇಲಾಖೆ(Horticulture department)ವತಿಯಿಂದ ತೋಟಗಾರಿಕೆ ಬೆಳೆ ಬೆಳೆಯುವ ರೈತ ಫಲಾನುಭವಿಗಳಿಗೆ 2024-25ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ,ತೋಟಗಾರಿಕೆ ಇಲಾಖೆಯಲ್ಲಿರುವ ಸಬ್ಸಿಡಿ ಯೋಜನೆಗಳನ್ನು ಚೆಕ್ ಮಾಡಿ

https://horticulturedir.karnataka.gov.in/info-2/Facilities+available+to+farmers/kn

ವಿವಿಧ ಯೋಜನೆಗಳು:

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣಾ ಉದ್ಯೋಗ ಖಾತರಿ ಯೋಜನೆ:

ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ (ಬಾಳೆ, ಅಂಜೂರ, ದಾಳಿಂಬೆ, ನುಗ್ಗೆ, ಪೇರಲ, ಪಪ್ಪಾಯ, ತೆಂಗು, ಡ್ರಾಗನ್ ಫ್ರೂಟ್, ನೇರಳೆ, ಸಪೆÇೀಟ, ಮಾವು, ಸೀತಾಫಲ್, ಹುಣಸೆ, ಕರಿಬೇವು, ಮತ್ತು ಗುಲಾಬಿ ಹಾಗೂ ಇತರೆ) ಬೆಳೆಗಳಿಗೆ ಮತ್ತು ಬದುಗಳಲ್ಲಿ ತೆಂಗು ಸಸಿ ನಾಟಿ, ಕೃಷಿ ಹೊಂಡ, ಬದುಗಳ ನಿರ್ಮಾಣ, ಕೊಳವೆ ಬಾವಿ ಮರುಪೂರಣ ಘಟಕ ಇತ್ಯಾದಿ ಅನುಷ್ಠಾನಗೊಳಿಸಲಾಗುವುದು.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ:
ಹೊಸ ಪ್ರದೇಶ ವಿಸ್ತರಣೆ, ಕೃಷಿಹೊಂಡ, ಈರುಳ್ಳಿ ಶೇಖರಣ ಘಟಕ, ನೆರಳು ಪರದೆ, ಪ್ಯಾಕ್‍ಹೌಸ್ ಮತ್ತು ತಳ್ಳುವ ಗಾಡಿ ವಿವಿಧ ಘಟಕಗಳಿಗೆ ಎಲ್ಲಾ ವರ್ಗದ ರೈತರಿಗೆ ಶೇ.50 ರಷ್ಟು ಲಭ್ಯತೆಯ ಮೇರೆಗೆ ಸಹಾಯಧನ ನೀಡಲಾಗುತ್ತದೆ.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ-ಹನಿ ನೀರಾವರಿ:
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ-ಹನಿ ನೀರಾವರಿ ಕಾರ್ಯಕ್ರಮದಡಿ ಸಹಾಯಧನ ನೀಡಲಾಗುತ್ತದೆ. ಸಾಮಾನ್ಯ ವರ್ಗದ ರೈತರಿಗೆ ಹೊಸದಾಗಿ ಅಳವಡಿಸುವ ಫಲಾನುಭವಿಗಳಿಗೆ ಮಾತ್ರ ಶೇ.75 ರಂತೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಶೇ.90 ರಂತೆ ಸಹಾಯಧನ ವಿತರಿಸಲಾಗುವುದು.

ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿ:

ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಕುರುಗೋಡು, ಕಂಪ್ಲಿ, ಸಂಡೂರು, ಸಿರುಗುಪ್ಪ ತಾಲ್ಲೂಕುಗಳಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯ ಮೇಗಾ ಮೈಕ್ರೊ ಆಗ್ರಿ-ಹಾರ್ಟಿ ಸಿಸ್ಟಮ್ ಕಾರ್ಯಕ್ರಮದಡಿ ಅನುಷ್ಠಾನಗೊಳಿಸಲಾಗುತ್ತಿರುವ ತೋಟಗಾರಿಕೆ ಬೆಳೆಗಳಾದ ಮಾವು, ಸೀತಾಫಲ, ಸೀಬೆ, ಗೇರು, ಹುಣಸೆ, ನೇರಳೆ ಮತ್ತು ಎಳೆನೀರು ತೆಂಗಿನಕಾಯಿ ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮ ಮತ್ತು ಬೈಯೋಡೈಜಿಸ್ಟರ್ ಮತ್ತು ಅರಣ್ಯ ಬೆಳೆಗಳಾದ ಸಾಗುವಾನಿ, ಮಹಾಗನಿ ಮತ್ತು ಶ್ರೀಗಂಧ ಬೆಳೆಯಲು ಸಹ ಅರ್ಜಿ ಆಹ್ವಾನಿಸಲಾಗಿದೆ.

ಮೇಲ್ಕಂಡ ಎಲ್ಲಾ ಯೋಜನೆಗಳಡಿ ಅಲ್ಪಸಂಖ್ಯಾತರಿಗೆ ಶೇ.15, ವಿಕಲಾಂಗಚೇತನರಿಗೆ ಶೇ.5 ಮತ್ತು ರೈತ ಮಹಿಳೆಯರಿಗೆ ಶೇ.33 ರಷ್ಟು ಈ ಯೋಜನೆಗಳಡಿ ಅನುದಾನ ಮೀಸಲಿರಿಸಲಾಗಿದ್ದು, ಆಸಕ್ತ ರೈತ ಫಲಾನುಭವಿಗಳು ಈ ಯೋಜನೆಗಳ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಲಾಗಿದೆ. ಆಸಕ್ತ ತೋಟಗಾರಿಕೆ ರೈತ ಫಲಾನುಭವಿಗಳು ಆಯಾ ತಾಲ್ಲೂಕು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದು.

]]>
Sat, 24 May 2025 22:51:54 +0530 shivuagrico
Mansoon rains&ಮುಂದಿನ 24 ಗಂಟೆಯೊಳಗೆ ಮುಂಗಾರು ಪ್ರವೇಶ,ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೊಷಣೆ https://krushirushi.in/Manaoon-rains-2115 https://krushirushi.in/Manaoon-rains-2115 Mansoon rains-ಮುಂದಿನ 24 ಗಂಟೆಯೊಳಗೆ ಮುಂಗಾರು ಪ್ರವೇಶ,ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೊಷಣೆ

ಮಾಮೂಲಿಗಿಂತ ಮೊದಲೇ ಈ ಬಾರಿ ಮುಂಗಾರು ಪ್ರವೇಶ ಆಗಲಿದೆ. ಮುಂದಿನ 24 ಗಂಟೆಯೊಳಗೆ ಕೇರಳಕ್ಕೆ ಮುಂಗಾರು ಪ್ರವೇಶವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. ಕಳೆದ 16 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಕೇರಳದಲ್ಲಿ ಅವಧಿಗಿಂತ ಮೊದಲೇ ಮಾನ್ಸೂನ್‌ ಪ್ರವೇಶಿಸಲಿದೆ.

ಮಾನ್ಸೂನ್ ಆರಂಭಕ್ಕೆ ಎಲ್ಲಾ ಅನುಕೂಲಕರ ಪರಿಸ್ಥಿತಿಗಳು ರಾಜ್ಯದಲ್ಲಿ ಅಭಿವೃದ್ಧಿಗೊಂಡಿದ್ದು, ಕಳೆದ ಎರಡು ದಿನಗಳಿಂದ ಕಡಿಮೆ ಒತ್ತಡದ ಪ್ರದೇಶ ಮತ್ತು ಮುಂದುವರಿಯುತ್ತಿರುವ ಮಾನ್ಸೂನ್ ವ್ಯವಸ್ಥೆಯ ಸಂಯೋಜನೆಯಿಂದಾಗಿ ಕೇರಳದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗಿದೆ.

2001 ಮತ್ತು 2009ರಲ್ಲಿ ಮೇ ಅಂತ್ಯದೊಳಗೆ ಕೇರಳಕ್ಕೆ ಮುಂಗಾರು ಪ್ರವೇಶವಾಗಿತ್ತು. ಆಗ ಮೇ 23ರಂದು ಮುಂಗಾರು ಮಳೆ ಆರಂಭವಾಗಿತ್ತು.

ಸಾಮಾನ್ಯವಾಗಿ ಜೂನ್‌ 1ರಂದು ಕೇರಳಕ್ಕೆ ಮಾನ್ಸೂನ್‌ ಆಗಮನವಾಗುತ್ತದೆ. 1918ರಲ್ಲಿ ಅಂದರೆ ಶತಮಾನಕ್ಕೆ ಮೊದಲೊಮ್ಮೆ ಮೇ 11ರಂದೇ ಮುಂಗಾರು ಪ್ರವೇಶವಾಗಿತ್ತು. ಮತ್ತೊಂದೆಡೆ, ತಡವಾಗಿ ಆರಂಭವಾದ ಮಳೆಯ ದಾಖಲೆ 1972 ರಲ್ಲಿತ್ತು, ಆಗ ಜೂನ್ 18 ರ ಹೊತ್ತಿಗೆ ಮಾನ್ಸೂನ್ ಮಳೆ ಪ್ರಾರಂಭವಾಗಿತ್ತು.

ಕಳೆದ 25 ವರ್ಷಗಳಲ್ಲಿ ಅತ್ಯಂತ ತಡವಾಗಿ ಆರಂಭವಾದ ಮುಂಗಾರು ಎಂದರೆ ಅದು 2016ರಲ್ಲಿ. ಆಗ ಜೂನ್‌ 9ರಂದು ಮುಂಗಾರು ಮಳೆ ಶುರುವಾಗಿತ್ತು.

ದಕ್ಷಿಣ ರಾಜ್ಯಗಳಲ್ಲಿ, ಭಾರತ ಹವಾಮಾನ ಇಲಾಖೆ (ಐಎಂಡಿ) ಶನಿವಾರ (ಮೇ 24) ಕೇರಳ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ಕೊಂಕಣ ಮತ್ತು ಗೋವಾದಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ.

ರಳಕ್ಕೆ ಇಂದು ಮುಂಗಾರು ಪ್ರವೇಶವಾಗಿದೆ. ಇದರ ನಡುವೆ ಕರ್ನಾಟಕ ಮತ್ತು ಕೇರಳ ಸೇರಿದಂತೆ ಹಲವಾರು ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆಯು ಭಾರೀ ಮಳೆಯ ಎಚ್ಚರಿಕೆ ನೀಡಿದೆ.

ರಳಕ್ಕೆ ಇಂದು ಮುಂಗಾರು ಪ್ರವೇಶವಾಗಿದೆ. ಇದರ ನಡುವೆ ಕರ್ನಾಟಕ ಮತ್ತು ಕೇರಳ ಸೇರಿದಂತೆ ಹಲವಾರು ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆಯು ಭಾರೀ ಮಳೆಯ ಎಚ್ಚರಿಕೆ ನೀಡಿದೆ.

ಕಳೆದ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ ರಾಜ್ಯದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಇಂದು ಮತ್ತು ನಾಳೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಮಳೆ ಹೆಚ್ಚಾಗಿದೆ. ಮಲೆನಾಡು ರಾಜ್ಯಗಳಲ್ಲೂ ಗುಡುಗು, ಮಿಂಚು ಸಹಿತ ಮಳೆಯಾಗಿದೆ.

ಮುಂಬೈನಲ್ಲಿ ಮೇ 25ರಿಂದ 27ರವರೆಗೆ 3 ದಿನಗಳವರೆಗೆ ಭಾರೀ ಮಳೆಯಾಗಲಿದೆ.

ನೈಋತ್ಯ ಮಾನ್ಸೂನ್ ಇಂದು ಅಧಿಕೃತವಾಗಿ ಕೇರಳಕ್ಕೆ ಆಗಮಿಸಿದ್ದು, ತಿರುವನಂತಪುರಂ, ಕೊಲ್ಲಂ, ಕೊಟ್ಟಾಯಂ, ಆಲಪ್ಪುಳ, ತ್ರಿಶೂರ್, ಇಡುಕ್ಕಿ ಮತ್ತು ಮಲಪ್ಪುರಂ ಜಿಲ್ಲೆಗಳಿಗೆ ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ.

ಕರ್ನಾಟಕದ ಕರಾವಳಿಯಲ್ಲಿ ರೆಡ್ ಅಲರ್ಟ್‌;
ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಕಡಿಮೆ ಒತ್ತಡದ ಪ್ರದೇಶದಿಂದಾಗಿ ಕರ್ನಾಟಕದಾದ್ಯಂತ ಅದರಲ್ಲೂ ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಐಎಂಡಿ (ಹವಾಮಾನ ಇಲಾಖೆ) ನೀಡಿದೆ. ದಕ್ಷಿಣ ಕನ್ನಡದ ಕೆಲವು ಭಾಗಗಳಲ್ಲಿ ಮೇ 27ರವರೆಗೆ ಬಿರುಗಾಳಿ ಸಹಿತ ಅತ್ಯಂತ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಆದರೆ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಕೊಂಚ ನಿಯಂತ್ರಣಕ್ಕೆ ಬರಲಿದೆ.

ಬೆಳಗಾವಿ ಮತ್ತು ಧಾರವಾಡದಲ್ಲಿ ಕೂಡ ಅಲರ್ಟ್ ಘೋಷಿಸಿದ್ದು, ಬಳ್ಳಾರಿ, ಬೆಂಗಳೂರು (ಗ್ರಾಮೀಣ ಮತ್ತು ನಗರ), ಚಿಕ್ಕಬಳ್ಳಾಪುರ, ಚಾಮರಾಜನಗರ, ತುಮಕೂರು ಮತ್ತು ಇತರ ಒಳನಾಡಿನ ಜಿಲ್ಲೆಗಳಲ್ಲಿ ಮಧ್ಯಮ ಮಳೆಯಾಗುವ ಮುನ್ಸೂಚನೆ ಇದೆ. ಮೇ 25ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ.ಹವಾಮಾನ ಇಲಾಖೆಯ ಮುನ್ಸೂಚನೆಯ ಅವಧಿಯಲ್ಲಿ ಮಳೆಯೊಂದಿಗೆ ಬಿರುಗಾಳಿ ಬೀಸಲಿದ್ದು, ಹಲವಾರು ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಲಾಗಿದೆ.

]]>
Sat, 24 May 2025 20:39:26 +0530 shivuagrico
Bele parihara&2.8 ಲಕ್ಷ ರೈತರ ಖಾತೆಗೆ 223 ಕೋಟಿ ಬೆಳೆಹಾನಿ ಪರಿಹಾರ ಜಮಾ,ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ https://krushirushi.in/Bele-parihara-2114 https://krushirushi.in/Bele-parihara-2114 Input subsidy for croploss-ರಾಜ್ಯ ಸರ್ಕಾರದಿಂದ ಬೆಳೆ ಪರಿಹಾರ ಚೆಕ್ ಮಾಡುವ ಆ್ಯಪ್ ಬಿಡುಗಡೆ

2024- 25 ನೇ ಸಾಲಿನ ಮುಂಗಾರು ಹಂಗಾಮಿ(Kharif)ನಲ್ಲಿ ಭಾರಿ ಮಳೆಯಿಂದಾಗಿ ಬೆಳೆ ಹಾನಿ(bele hani)ಗೊಳಗಾದ ರೈತರಿಗೆ ಪರಿಹಾರದ ಮೊತ್ತ(parihara payment)ಮಂಜೂರಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.


ಮುಂಗಾರು ಹಂಗಾಮಿನಲ್ಲಿ ಮಳೆಯಿಂದ ಹಾನಿಗೊಳಗಾದ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯ ಮೊದಲ ಕಂತಿನ ಪರಿಹಾರವಾಗಿ 13.2 ಕೋಟಿ ರೂ.ಇನ್ಸುಟ್‌ ಸಬ್ಸಿಡಿ(input subsidy for croploss) ಮಂಜೂರಾಗಿದೆ.


ಹಾನಿಯಾದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವಿವರಗಳನ್ನು ಗ್ರಾಮ ಆಡಳಿತ ಅಧಿಕಾರಿಗಳು ತಂತ್ರಾಂಶದಲ್ಲಿ ನಮೂದಿಸಿ ಅನುಮೋದಿಸಿದ್ದಾರೆ. ಮೊದಲ ಹಂತದಲ್ಲಿ ಒಟ್ಟು 33,718 ರೈತರಿಗೆ 13.2 ಕೋಟಿ ರೂ.ಗಳನ್ನು ಎನ್.ಡಿ.ಆ‌ರ್.ಎಫ್.(NDRF)ಎಸ್.ಡಿ.ಆ‌ರ್.ಎಫ್.(SDRF) ಮಾರ್ಗಸೂಚಿ ಅನ್ವಯ ಹಣ ಮಂಜೂರಾತಿ ನೀಡಲಾಗಿದೆ. ನೇರವಾಗಿ ಆಧಾ‌ರ್ ಸಂಖ್ಯೆ(Aadhaar number linked bank account) ಜೋಡಣೆಯಾಗಿರುವ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರದ ಮೊತ್ತ ಜಮಾ ಮಾಡಲು ಅನುಮೋದನೆ ನೀಡಲಾಗಿದೆ.


ಇನ್ನು ಮೂರ್ನಾಲ್ಕು ದಿನಗಳೊಳಗೆ ಇನ್ಸುಟ್‌ ಸಬ್ಸಿಡಿ ರೈತರ ಬ್ಯಾಂಕ್‌ ಖಾತೆಗೆ ಜಮೆಯಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಳೆ ಪರಿಹಾರ ಚೆಕ್ ಮಾಡುವ DBT Karnataka application ಬಿಡುಗಡೆ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application ಡೌನ್ಲೊಡ್ ಮಾಡಿ,install ಮಾಡಿಕೊಳ್ಳಿ

https://play.google.com/store/apps/details?id=com.dbtkarnataka

ನಂತರ ನಿಮ್ಮ ಆಧಾರ್ ನಂಬರ್(Aadhaar number) ಹಾಕಿ Get OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Varify OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ

ನಂತರ payment status ಮೇಲೆ ಕ್ಲಿಕ್ ಮಾಡಿ

ನಂತರ input subsidy for croploss ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಇಲ್ಲಿಯವರೆಗೂ ಜಮಾ ಆದ ಬೆಳೆಹಾನಿ ಪರಿಹಾರ(Bele parihara)ಮಾಹಿತಿ ಸಿಗಲಿದೆ.

]]>
Sat, 24 May 2025 14:45:33 +0530 shivuagrico
Pmkisan eligibility&ಪಿಎಂ ಕಿಸಾನ್ ಅರ್ಹತೆಗೆ ಮೇ 31 ಕೊನೆಯ ದಿನಾಂಕ, ಪಿಎಂ ಕಿಸಾನ್ 20ನೇ ಕಂತಿಗೆ ನಿಮ್ಮ ಅರ್ಹತೆ ಚೆಕ್ ಮಾಡಿ https://krushirushi.in/Pmkisan-eligibility-2113 https://krushirushi.in/Pmkisan-eligibility-2113 Pmkisan-ಪಿಎಂ ಕಿಸಾನ್ ಅರ್ಹತೆಗೆ ಮೇ 31 ಕೊನೆಯ ದಿನಾಂಕ, ಪಿಎಂ ಕಿಸಾನ್ 20ನೇ ಕಂತಿಗೆ ನಿಮ್ಮ ಅರ್ಹತೆ ಚೆಕ್ ಮಾಡಿ


PM Kisan Samman Nidhi Yojana: ರೈತರಿಗೆ ಕೃಷಿಗೆ ಸಹಾಯವಾಗಲು ಸರ್ಕಾರ ಪಿಎಂ ಕಿಸಾನ್ ಯೋಜನೆಯನ್ನು 2019ರಲ್ಲಿ ಆರಂಭಿಸಿದೆ. ವರ್ಷಕ್ಕೆ ಮೂರು ಬಾರಿ ರೈತರಿಗೆ 2,000 ರೂ ಹಣವನ್ನು ಸರ್ಕಾರ ನೀಡುತ್ತದೆ. ಇಲ್ಲಿಯವರೆಗೆ 19 ಕಂತುಗಳನ್ನು ಬಿಡುಗಡೆ ಮಾಡಲಾಗಿದೆ. ಸುಮಾರು 10 ಕೋಟಿಯಷ್ಟು ಫಲಾನುಭವಿ ರೈತರಿದ್ದಾರೆ. ಯೋಜನೆಗೆ ಅರ್ಹರಾಗಿರುವ ಯಾವ ರೈತರನ್ನೂ ಕೈಬಿಡದಂತೆ ಸರ್ಕಾರ ಮೇ 31ರವರೆಗೂ ಅಭಿಯಾನ ನಡೆಸಿದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು (PM Kisan Samman Nidhi Yojana) ಎಲ್ಲಾ ಅರ್ಹ ರೈತರಿಗೂ (farmer) ತಲುಪಿಸಲು ಸರ್ಕಾರ ರಾಷ್ಟ್ರವ್ಯಾಪಿ ಅಭಿಯಾನ ಹಮ್ಮಿಕೊಂಡಿದೆ. ಯೋಜನೆಗೆ ಅರ್ಹರಿರುವ ಯಾವ ವ್ಯಕ್ತಿಯೂ ಹೊರಗುಳಿಯಬಾರದು ಎಂಬುದು ಸರ್ಕಾರದ ಗುರಿ. ಈ ಸ್ಯಾಚುರೇಶನ್ ಡ್ರೈವ್ ಮೇ 1ರಂದು ಆರಂಭವಾಗಿದ್ದು, ಮೇ 31ರವರೆಗೆ ಇರಲಿದೆ.

2019ರಲ್ಲಿ ಆರಂಭವಾದ ಈ ಯೋಜನೆಯಲ್ಲಿ 11 ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ. ರೈತರ ವ್ಯವಸಾಯಕ್ಕೆ ನೆರವಾಗಲು ಸರ್ಕಾರ ಈ ಸ್ಕೀಮ್ ಆರಂಭಿಸಿದೆ. ವರ್ಷಕ್ಕೆ 6,000 ರೂ ಹಣವನ್ನು ರೈತರಿಗೆ ನೀಡಲಾಗುತ್ತದೆ. ವರ್ಷಕ್ಕೆ ಮೂರು ಬಾರಿ, ಅಂದರೆ, ನಾಲ್ಕು ತಿಂಗಳಿಗೊಮ್ಮೆ ತಲಾ 2,000 ರೂ ಹಣವನ್ನು ನೇರವಾಗಿ ರೈತರ ಖಾತೆಗಳಿಗೆ ಹಣ ಹಾಕಲಾಗುತ್ತದೆ.

ಇಲ್ಲಿಯವರೆಗೆ 19 ಕಂತುಗಳನ್ನು ಸರ್ಕಾರ ನೀಡಿದೆ. ಫೆಬ್ರುವರಿ 24ರಂದು 9.8 ಕೋಟಿ ಫಲಾನುಭವಿ ರೈತರ ಖಾತೆಗಳಿಗೆ 19ನೇ ಕಂತಿನ ಹಣ ಬಿಡುಗಡೆ ಮಾಡಲಾಗಿತ್ತು. ಈ 9.8 ಕೋಟಿ ರೈತರಲ್ಲಿ 2.41 ಕೋಟಿ ಮಹಿಳೆಯರೇ ಇದ್ದಾರೆ.

Pmkisan eligibility-ತುಂಡು ಕೃಷಿ ಭೂಮಿ ಹೊಂದಿರುವ ಎಲ್ಲಾ ಅರ್ಹ ರೈತರಿಗೂ ಪಿಎಂ ಕಿಸಾನ್ ಹಣ-ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್


ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ(Pradan mantri kisan samman yojane) 
ಅಡಿ ಅರ್ಹ ಎಲ್ಲ ರೈತರಿಗೆ ಸೌಲಭ್ಯ ನೀಡಲು ಕೇಂದ್ರ ಸರ್ಕಾರ ಸಿದ್ದವಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ ಹೇಳಿದರು.


ಲೋಕಸಭೆಯಲ್ಲಿ ಮಂಗಳವಾರ ಪ್ರಶೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಭೂ ರಹಿತರಿಗೆ ಈ ಸೌಲಭ್ಯ ನೀಡುವುದಿಲ್ಲ. ಆದರೆ, ತುಂಡು ಕೃಷಿ ಭೂಮಿಯನ್ನಾದರೂ ಹೊಂದಿರಬೇಕು ಎಂದು ವಿವರಿಸಿದರು. 


'ಈ ಯೋಜನೆಯಡಿ ಕೇಂದ್ರ ಸರ್ಕಾರವು ಈವರೆಗೆ 19 ಕಂತುಗಳಲ್ಲಿ ₹3.68 ಲಕ್ಷ ಕೋಟಿ ಮೊತ್ತವನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದೆ' ಎಂದರು. 


ಯೋಜನೆಯ ಭಾಗವಾಗಿಲ್ಲದ ಎಲ್ಲ ಅರ್ಹ ರೈತರಿಗೆ ವಾರ್ಷಿಕ ₹6,000 ನಗದು ಪ್ರಯೋಜನ ನೀಡಲು ಸರ್ಕಾರ ಸಿದ್ಧವಾಗಿದೆ. ಅಂತಹ ರೈತರಿಗೆ ಹಿಂದಿನ ಕಂತುಗಳನ್ನು ನೀಡಲು ಸಿದ್ಧರಿದ್ದೇವೆ. ಅಂತಹ ರೈತರನ್ನು ಗುರುತಿಸಿ ಯೋಜನೆಯಲ್ಲಿ ಸೇರಿಸಲು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಅವರು ಕೋರಿದರು.

ಪಿಎಂ ಕಿಸಾನ್(kisan samman) ಅರ್ಹತೆಯ ಮಾನದಂಡಗಳೇನು?
ಎಲ್ಲ ಅರ್ಹ ಫಲಾನುಭವಿಗಳು ಕನಿಷ್ಠ ಪ್ರಮಾಣದ ಭೂಮಿ ಹೊಂದಿರಬೇಕು. ಇ-ಕೆವೈಸಿ ಮಾಡಿಸಿಕೊಳ್ಳಬೇಕು ಮತ್ತು ಪಿಎಂ-ಕಿಸಾನ್ ಪೋರ್ಟಲ್‌ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕು ಎಂದು ಸಚಿವರು ಹೇಳಿದರು. 
ನಿಧಿಯನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ಮೂರು ಸಮಾನ ಕಂತುಗಳಲ್ಲಿ ವರ್ಗಾಯಿಸಲಾಗುತ್ತದೆ ಎಂದು ಅವರು ಹೇಳಿದರು.

ಇಲ್ಲಿಯವರೆಗೂ 19 ಕಂತುಗಳಲ್ಲಿ 3.68 ಲಕ್ಷ ಕೋಟಿ ಪಿಎಂ ಕಿಸಾನ್ ಹಣ ರೈತರ ಖಾತೆಗೆ


ಇದುವರೆಗೆ 3.68 ಲಕ್ಷ ಕೋಟಿ ರೂಪಾಯಿಗಳನ್ನು 19 ಕಂತುಗಳಲ್ಲಿ ದೇಶದಾದ್ಯಂತದ ರೈತರಿಗೆ ವಿತರಿಸಲಾಗಿದೆ

ನಿಮಗೇಷ್ಟು ಜಮಾ ಹೀಗೆ ಚೆಕ್ ಮಾಡಿ-Pmkisan beneficiary status 

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://pmkisan.gov.in/

ಮೊದಲು know your status ಮೇಲೆ ಕ್ಲಿಕ್ ಮಾಡಿ

ನಂತರ know your register number ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ನಂಬರ್ ಅಥವಾ ಆಧಾರ್ ನಂಬರ್ ಹಾಕಿ,Captcha type ಮಾಡಿ, Get mobile OTP ಮೇಲೆ ಕ್ಲಿಕ್ ಮಾಡಿ,ನಿಮ್ಮ ಮೊಬೈಲ್ ಗೆ ಬರುವ OTP ಹಾಕಿದರೆ ಈ ಕೆಳಗಿನಂತೆ ನಿಮ್ಮ Registration number ತಿಳಿಯಲಿದೆ

ನಂತರ Back ಮೇಲೆ ಕ್ಲಿಕ್ ಮಾಡಿ, ನಿಮ್ಮ Registration number ಹಾಕಿ,Captcha type ಮಾಡಿ,Get OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಗೆ ಬರುವ 4 ಸಂಖ್ಯೆಯ OTP ಹಾಕಿ Get data ಮೇಲೆ ಕ್ಲಿಕ್ ಮಾಡಿ

ಈ ಕೆಳಗಿನಂತೆ ನಿಮಗೆ ಇಲ್ಲಿಯವರೆಗೂ ಜಮಾ ಆದ 19 ಕಂತುಗಳ ಮಾಹಿತಿ ದೊರೆಯಲಿದೆ.

ಪಿಎಂ ಕಿಸಾನ್ ಇಕೆವೈಸಿ ಚೆಕ್ ಮಾಡಲು ಹೀಗೆ ಮಾಡಿ

ನಂತರ update your details ಮೇಲೆ ಕ್ಲಿಕ್ ಮಾಡಿ

ನಂತರ ಮತ್ತೆ ಹಿಂದಕ್ಕೆ ಬಂದು,Eligibility status ಮೇಲೆ ಕ್ಲಿಕ್ ಮಾಡಿ

 Land seeding,Aadhaar bank account seeding status ಹಾಗೂ ಇಕೆವೈಸಿ ಆಗಿದ್ದರೆ, ಅವುಗಳ ಮುಂದೆ ಹಸಿರು ಬಣ್ಣದ YES right mark ಇರುತ್ತದೆ,ಈ ರೀತಿ 3 status ಮುಂದೆ yes ಎಂದು ಇದ್ದರೆ ನಿಮಗೆ 19ನೇ ಕಂತು ಸಿಗಲಿದೆ.

ಲ್ಯಾಂಡ್ ಸಿಡಿಂಗ್ No ಎಂದು ತೋರಿಸುತ್ತಿದ್ದರೆ,ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ,ನಿಮ್ಮ ಲ್ಯಾಂಡ್ ಸಿಡಿಂಗ್ ಮಾಡಿಸಿ

Ineligibility reason ಮೇಲೆ ಕ್ಲಿಕ್ ಮಾಡಿದರೆ ಈ ಕೆಳಗಿನಂತೆ ನಿಮಗೆ ಹಣ ಜಮಾ ಆಗದೇ ಇರುವುದಕ್ಕೆ ಕಾರಣ ಮತ್ತು ಪರಿಹಾರ ಸಿಗಲಿದೆ.

FTO Processed NO ಎಂದು ತೋರಿಸುತ್ತಿದ್ದರೆ ಇಲ್ಲಿದೆ  ಕಾರಣ ಮತ್ತು ಪರಿಹಾರ

ಪಿ.ಎಂ.ಕಿಸಾನ್ ಯೋಜನೆಯಡಿ ಜಿಲ್ಲೆಗಳಿಂದ ಬರುವ ಸಾಮಾನ್ಯ ಅಹವಾಲುಗಳು

ಕ್ರಮ ಸಂಖ್ಯೆ

ಸಮಸ್ಯೆಗಳು

ಕಾರಣಗಳು

ಪರಿಹರಿಸುವ ಸಂಬಂಧಪಟ್ಟ ಕಛೇರಿ ಮತ್ತು ವಿಧಾನ

fruitspmk.gov.in ಪೋರ್ಟಲ್ ನಲ್ಲಿ

1

ಭೂಮಿಯ ಜೊತೆ ದೊರೆತ ಸಂಶಯಾತ್ಮಕ ಪ್ರಕರಣಗಳೆಂದು ತಡೆಹಿಡಿಯಲಾಗಿದೆ

ಅ)ಅರ್ಜಿದಾರನ ಹೆಸರು ಮತ್ತು ಭೂಮಾಲಿಕನ ಹೆಸರು ತಾಳೆಯಾಗದಿರುವುದು                                                                     ಆ) bhoomi ತಂತ್ರಾಂಶದಲ್ಲಿ ಪೋಡುಗಳು ಬದಲಿಯಾಗುವುದು, ಹಿಸ್ಸಾ ಬದಲಾವಣೆಯಾಗುವುದು

ಭೂಮಿ ಮಾನಿಟರಿಂಗ್ ಸೆಲ್ (BMC) ಮತ್ತು ಎನ್.ಐ.ಸಿ  (NIC)                     ಅ)bhoomi ತಂತ್ರಾಂಶದಿಂದ fruitspmk ತಂತ್ರಾಂಶಕ್ಕೆ realtime ಮಾಹಿತಿ ಒದಗಿಸದೇ ಇರುವುದರಿಂದ ಸಮಸ್ಯೆಯಿರುತ್ತದೆ.            ಆ) ಸಮಸ್ಯಾತ್ಮಕ  ಸರ್ವೆ ನಂಬರ್ ಗಳ ವಿವರಗಳನ್ನು BMC ಗೆ ಸಲ್ಲಿಸಿ ಮಾಹಿತಿ ಪಡೆಯಲಾಗುತ್ತಿದೆ.

2

ಅನರ್ಹ ಪ್ರಕರಣಗಳೆಂದು ತಡೆಹಿಡಿದಿರುವ ಪ್ರಕರಣಗಳಲ್ಲಿ ಅರ್ಹ ಪ್ರಕರಣಗಳು

ಒಂದೇ ಕುಟುಂಬಕ್ಕೆ ಸೇರಿದ ಕಾರಣ ಮಹಿಳಾ ಸದಸ್ಯರನ್ನು VA ವರದಿ ಪ್ರಕಾರ AAO ಲಾಗಿನ್ನಲ್ಲಿ ಅನರ್ಹಗೊಳಿಸಲಾಗಿರುತ್ತದೆ

ಜಿಲ್ಲೆಗಳಿಂದ ವರದಿ ನೀಡಿದ್ದಲ್ಲಿ ಕೇಂದ್ರ ಕಛೇರಿ    ADMIN ಲಾಗಿನ್ನಿಂದ ಅಂತಹ ಅರ್ಹ ಪ್ರಕರಣಗಳನ್ನು XML ರಚಿಸಲು ಕಳುಹಿಸಲಾಗುತ್ತದೆ

3

ತಹಶೀಲ್ದಾರ್ ಲಾಗಿನ್ನಗೆ OPERATOR ಗಳಿಂದ ತಪ್ಪಾಗಿ ಸೇರಿರುವ ಅರ್ಹ ಪ್ರಕರಣಗಳು

 ಅರ್ಜಿದಾರನ ಹೆಸರಿನಲ್ಲೇ ಕೃಷಿ ಜಮೀನು ಇದ್ದರೂ OPERATOR ಗಳ ತಪ್ಪಿನಿಂದ ಪೌತಿ ಪ್ರಕರಣಗಳಲ್ಲದಿದ್ದರೂ ತಹಶೀಲ್ದಾರ್ ಲಾಗಿನ್ ಗೆ FORWARD ಮಾಡಲಾಗಿರುತ್ತದೆ

ಜಿಲ್ಲಾಧಿಕಾರಿಗಳಿಂದ ಧೃಢೀಕೃತಗೊಂಡ ವರದಿ ಸಲ್ಲಿಸಿದ ನಂತರ ಕೇಂದ್ರ ಕಛೇರಿಯ   ADMIN ಲಾಗಿನ್ನಿಂದ ಅಂತಹ ಅರ್ಹ ಪ್ರಕರಣಗಳನ್ನು AAO ಲಾಗಿನ್ ಗೆ ಪರಿಶೀಲನೆಗೆ ಕಳುಹಿಸಲಾಗುತ್ತದೆ

4

ಸ್ಥಿತಿ ಪರಿಶೀಲನೆಯಲ್ಲಿ ಆಧಾರ್ ಸಂಖ್ಯೆ ನಮೂದಿಸಿದಾಗ ರೈತರ ವಿವರ ಅಲಭ್ಯತೆ

ಅರ್ಜಿ ನೊಂದಣಿ ಸಮಯದಲ್ಲಿ OPERATOR ಗಳು ರೈತರ ವಿವರಗಳನ್ನು ನಮೂದಿಸಿದ್ದು DECLARATION ಮಾಡಿ AAO ಗೆ FORWARD ಮಾಡಿರುವುದಿಲ್ಲ

OPERATOR ಲಾಗಿನ್ (RSK, ADA office, JDA office)  OPERATOR ಲಾಗಿನ್ನಲ್ಲಿ ಘೋಷಣೆಗೆ ಬಾಕಿಯಿರುವ ರೈತರ ಪಟ್ಟಿಯಲ್ಲಿ ಆಧಾರ್ ಸಂಖ್ಯೆಯನ್ನು ಪಡೆದು ರೈತ ಘೋಷಣೆಯಡಿ ಆಧಾರ್ ಸಂಖ್ಯೆಯನ್ನು ನಮೂದಿಸಿ ರೈತನ ವಿವರಗಳನ್ನು ಪರಿಶೀಲಿಸಿ ಘೋಷಿಸುವುದು

5

01.02.2019 ನಂತರ ಮಾಲೀಕತ್ವ ಹೊಂದಿರುವ ಜಮೀನುಗಳ ರೈತರೆಂದು ತಡೆಹಿಡಿಯಲಾಗಿದೆ

ಕೇಂದ್ರ ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯನ್ವಯ 31.01.2019ಭೂ ಒಡೆತನ ನಿರ್ಧಿರಿಸಲು ಕೊನೆಯ ದಿನಾಂಕವಾಗಿರುತ್ತದೆ

ಇಂತಹ ಪ್ರಕರಣಗಳು ಯೋಜನೆಗೆ ಅನರ್ಹವಾಗಿರುತ್ತದೆ (ಸರಿಪಡಿಸಲಾಗುವುದಿಲ್ಲ)

6

Absentee land lord ಯೆಂದು ಈಗಾಗಲೇ ಗುರುತಿಸಿರುವ ಭೂಮಿಯನ್ನು ಸರಿಪಡಿಸುವ ಕುರಿತು

ಜಿಲ್ಲೆಗಳಲ್ಲಿ  OPERATOR ಗಳು ಕೆಲ ಜಮೀನುಗಳನ್ನು Absentee land lord ಯೆಂದು ನಮೂದು ಮಾಡಿರುತ್ತಾರೆ

AAO ಲಾಗಿನ್  (RSK, ADA office, JDA office)  AAO ಲಾಗಿನ್ನಲ್ಲಿ  ಅನರ್ಹ ಭೂಮಿಯನ್ನು ಹಿಂದುರುಗಿಸಿ ಬಿಲ್ಲೆಯಡಿ ಅಂತಹ ಸರ್ವೆ ನಂಬರ್ ಗಳನ್ನು ವಾಪಾಸ್ ಮಾಡಿ,  ನೊಂದಣಿಗೆ ಅವಕಾಶ ಕಲ್ಪಿಸಬಹುದಾಗಿರುತ್ತದೆ

ಪಿ.ಎಂ.ಕಿಸಾನ್ ಯೋಜನೆಯಡಿ ಜಿಲ್ಲೆಗಳಿಂದ ಬರುವ ಸಾಮಾನ್ಯ ಅಹವಾಲುಗಳು

ಕ್ರಮ ಸಂಖ್ಯೆ

ಸಮಸ್ಯೆಗಳು

ಕಾರಣಗಳು

ಪರಿಹರಿಸುವ ಸಂಬಂಧಪಟ್ಟ ಕಛೇರಿ ಮತ್ತು ವಿಧಾನ

 

pmkisan.gov.in ಪೋರ್ಟಲ್ ನಲ್ಲಿ

7

ಆಧಾರ್ ಸಂಖ್ಯೆಯನ್ನು ನಮೂದಿಸಿದಾಗ 'either details not exist or rejected due to wrong details‘ ಎಂದು ತೋರಿಸುತ್ತದೆ

ರಾಜ್ಯದಿಂದ ಇಂತಹ ರೈತರ ವಿವರಗಳು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿರುವುದಿಲ್ಲ ( ಆದ್ದರಿಂದ fruitspmk.gov.in ಪೋರ್ಟಲ್ ನಲ್ಲಿ ಮೊದಲು ಅರ್ಜಿ ಸ್ಥಿತಿ ಪರಿಶೀಲಿಸಬೇಕಾಗಿರುತ್ತದೆ)

AAO ಲಾಗಿನ್ (RSK, ADA office) ಮತ್ತು ಕೇಂದ್ರ ಕಚೇರಿAAO ಲಾಗಿನ್ನಿಂದ XML ರಚನೆಗೆ FORWARD ಮಾಡಬೇಕಾಗಿರುತ್ತದೆ. ಕೇಂದ್ರ ಕಚೇರಿಯಿಂದ XML ರಚಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾಗಿರುತ್ತದೆ.

8

PFMS rejected

Aadhaar Number is not seeded in NPCI

ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಬೇಕಾಗಿರುತ್ತದೆ. ಜಿಲ್ಲೆಗಳಿಗೆ ರೈತರ ವಿವರಗಳನ್ನು ನೀಡಲಾಗಿದೆ

Bank Name And IFSC Code are not related to each other

ಕೇಂದ್ರ ಸರ್ಕಾರಕ್ಕೆ ಸಹಕಾರಿ ಬ್ಯಾಂಕ್ ಗಳ ವಿವರಗಳನ್ನು ಸಲ್ಲಿಸಲಾಗಿದೆ

Bank Name is not as per PFMS Bank Master.

Beneficiary is rejected as Account Type is other than SB / SBA / JD

ಜಿಲ್ಲೆಗಳಿಗೆ ಮಾಹಿತಿಯನ್ನುಸರಿಪಡಿಸಿ ಸಲ್ಲಿಸಲು email ಕಳುಹಿಸಲಾಗಿರುತ್ತದೆ (23.11.2019 ರಂದು) ಇಲ್ಲಿಯವರೆಗೂ ಜಿಲ್ಲೆಗಳಿಂದ ಮಾಹಿತಿ ಬಂದಿರುವುದಿಲ್ಲ ( ಉಡುಪಿ ಜಿಲ್ಲೆ ಹೊರತುಪಡಿಸಿ)

Duplicate Beneficiary Name , Bank Account No and Bank Name not allowed for same scheme

ಕೇಂದ್ರ ಸರ್ಕಾರಕ್ಕೆ ಮರುಪರಿಶೀಲನೆಗೆ ಸಲ್ಲಿಸಲಾಗಿದೆ

IFSC Code  either not present or currently inactive in tbl BankBranch

ಕೇಂದ್ರ ಸರ್ಕಾರಕ್ಕೆ ಮರುಪರಿಶೀಲನೆಗೆ ಸಲ್ಲಿಸಲಾಗಿದೆ

Incorrect Aadhaar Number

ಕೇಂದ್ರ ಸರ್ಕಾರಕ್ಕೆ ಮರುಪರಿಶೀಲನೆಗೆ ಸಲ್ಲಿಸಲಾಗಿದೆ

One or more mandatory tags values are missing.

ಜಿಲ್ಲೆಗಳಿಗೆ ಮಾಹಿತಿಯನ್ನುಸರಿಪಡಿಸಿ ಸಲ್ಲಿಸಲು email ಕಳುಹಿಸಲಾಗಿರುತ್ತದೆ

Rejected by Bank, Account No does not exist in Bank/INVALID/CLOSED

ಜಿಲ್ಲೆಗಳಿಗೆ ಮಾಹಿತಿಯನ್ನುಸರಿಪಡಿಸಿ ಸಲ್ಲಿಸಲು email ಕಳುಹಿಸಲಾಗಿರುತ್ತದೆ

ಪಿ.ಎಂ.ಕಿಸಾನ್ ಯೋಜನೆಯಡಿ ಜಿಲ್ಲೆಗಳಿಂದ ಬರುವ ಸಾಮಾನ್ಯ ಅಹವಾಲುಗಳು

ಕ್ರಮ ಸಂಖ್ಯೆ

ಸಮಸ್ಯೆಗಳು

ಕಾರಣಗಳು

ಪರಿಹರಿಸುವ ಸಂಬಂಧಪಟ್ಟ ಕಛೇರಿ ಮತ್ತು ವಿಧಾನ

 

pmkisan.gov.in ಪೋರ್ಟಲ್ ನಲ್ಲಿ

9

Amount credited to Account Number-NA

Aadhaar number based payment by GoI

ಕೇಂದ್ರ ಕಚೇರಿಯಲ್ಲಿ STATE NODAL OFFICER ಲಾಗಿನ್ನಲ್ಲಿ ಬ್ಯಾಂಕ್ ವಿವರ ಪಡೆಯಬಹುದಾಗಿದೆ.

10

PAYMENT STOPPED BY STATE

 XML ರಚನೆಯಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ನಂತರ ಒಂದೇ ಕುಟುಂಬದ ಸದಸ್ಯರೆಂದು fruitspmk.gov.inಪೋರ್ಟಲ್ ನಲ್ಲಿ ಅನರ್ಹಗೊಳಿಸಿದ ಕಾರಣ FTO ಪರಿಶೀಲನೆ ಸಮಯದಲ್ಲಿ stop payment ಮಾಡಲಾಗುತ್ತದೆ

ಕೇಂದ್ರ ಸರ್ಕಾರ                                               ಜಿಲ್ಲೆಗಳಿಂದ ಇಂತಹ ಪ್ರಕರಣಗಳಲ್ಲಿ ಅರ್ಹ ಪ್ರಕರಣಗಳಿದ್ದರೆ ಕೇಂದ್ರ ಕಚೇರಿ ಮಾಹಿತಿ ಸಲ್ಲಿಸಿದರೆ, ಅದನ್ನು ಸರಿಪಡಿಸಲಾಗುವುದು

11

Transaction failed

ಹಣ ವರ್ಗಾವಣೆ ಪ್ರಕ್ರಿಯೆಯ ಅಂತಿಮ ಹಂತದಲ್ಲಿ ಬ್ಯಾಂಕ್ ಗಳಿಂದ ವಹಿವಾಟು ಅಸಫಲವಾದಾಗ

ಕೇಂದ್ರ ಕಚೇರಿಯಲ್ಲಿ STATE NODAL OFFICER ಲಾಗಿನ್ನಲ್ಲಿ ಬ್ಯಾಂಕ್ ವಿವರ ಸರಿಪಡಿಸಬಹುದಾಗಿದೆ.

12

ಇನ್ನೊಬ್ಬರ ಬ್ಯಾಂಕ್ ಖಾತೆಗೆ ಹಣ ಜಮೆಗೊಂಡಿದ್ದರೆ

OPERATOR ಲಾಗಿನ್ನಲ್ಲಿ ನೊಂದಣಿ ಹಂತದಲ್ಲಿ ತಪ್ಪಾಗಿ ಬ್ಯಾಂಕ್ ಖಾತೆ ನಮೂದಾಗಿರುತ್ತದೆ

ಕೇಂದ್ರ ಸರ್ಕಾರ                                               ಜಿಲ್ಲೆಗಳಿಂದ ಇಂತಹ ಪ್ರಕರಣಗಳ   ಮಾಹಿತಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸಿದರೆ, ಅದನ್ನು ಸರಿಪಡಿಸಲಾಗುವುದು

13

ಆಧಾರ್ ಹೆಸರು ತಿದ್ದುಪಡಿ ಮಾಡುವ ಕುರಿತು

ನೊಂದಣಿ ಹಂತದಲ್ಲಿ name scoring ಗೆ ಗರಿಷ್ಟ ಶೇ.60 ರಷ್ಟಿದ್ದ ಕಾರಣ ಹೆಸರುಗಳಲ್ಲಿ ಲೋಪಗಳುಂಟಾಗಿರುತ್ತದೆ.

ಕೇಂದ್ರ ಸರ್ಕಾರ ದ   pmkisan.gov.in ಪೋರ್ಟಲ್ ನಲ್ಲಿ ಅದನ್ನು ಸರಿಪಡಿಸಲು ಅವಕಾಶ ನೀಡಲಾಗಿದೆ.

]]>
Fri, 23 May 2025 22:13:05 +0530 shivuagrico
Agriculture university seeds&ಕೃಷಿ ವಿಶ್ವವಿದ್ಯಾಲಯದಲ್ಲಿ ದೊರೆಯುವ ಬೀಜಗಳ ಪಟ್ಟಿ https://krushirushi.in/Agriculture-university-seeds https://krushirushi.in/Agriculture-university-seeds

Agriculture university seeds-ಕೃಷಿ ವಿಶ್ವವಿದ್ಯಾಲಯದಲ್ಲಿ ದೊರೆಯುವ ಬೀಜಗಳ ಪಟ್ಟಿ

ಗುಣಮಟ್ಟದ ತೊಗರಿ, ಸೋಯಾ, ನವಣೆ, ಕಡಲೆ ಬೀಜ ಖರೀದಿಸಲು ಕಲಬುರಗಿ, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಗಳ ರೈತರು ತಂಡಗಳಲ್ಲಿ ಬಂದು ಬೀಜ ಖರೀದಿಸಲು ಆರಂಭಿಸಿದ್ದಾರೆ.

ವಿಶ್ವವಿದ್ಯಾಲಯವೇ 170 ನೋಂದಾಯಿತ ರೈತರ ಹೊಲಗಳಲ್ಲಿ ಪ್ರಮಾಣಿತ ಬೀಜಗಳ ಉತ್ಪಾದನೆ ಮಾಡಿ ರೈತರಿಂದ ಖರೀದಿಸಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿರುವ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ), ಕೃಷಿ ಸಂಶೋಧನಾ ಕೇಂದ್ರ (ಎಆರ್‌ಎಸ್‌) ಹಾಗೂ ಕೃಷಿ ಶಿಕ್ಷಣ ವಿಸ್ತರಣಾ ಕೇಂದ್ರದಲ್ಲಿ (ಎಇಇಸಿ) ಬೀಜ ವಿತರಣಾ ಕೇಂದ್ರಗಳನ್ನು ತೆರೆದು ವಿತರಿಸುತ್ತಿದೆ. ರೈತರಿಗೆ ಅನುಕೂಲ ಮಾಡಿಕೊಡಲು ಪ್ರತಿ ಜಿಲ್ಲೆಗೆ ಒಬ್ಬರು ಸಂಯೋಜಕರನ್ನೂ ನೇಮಕ ಮಾಡಿದೆ.

ಒಂದು ಎಕರೆಗೆ ಒಂದು ಕೆ.ಜಿಯ ಒಂದು ಪ್ಯಾಕೆಟ್‌ ಬೀಜ ಕೊಡಲಾಗುತ್ತಿದೆ. ಮುಂಗಾರು ಹಂಗಾಮು ಆರಂಭವಾಗುವ ಮೊದಲೇ ರೈತರು ಬೀಜ ಖರೀದಿಸಿಟ್ಟುಕೊಂಡು ಬಿತ್ತನೆಗೆ ಸಿದ್ಧತೆಯನ್ನೂ ಆರಂಭಿಸಿದ್ದಾರೆ. ಕೃಷಿ ವಿಜ್ಞಾನಿಗಳ ಮೇಲ್ವಿಚಾರಣೆಯಲ್ಲೇ ಬೀಜ ಉತ್ಪಾದನೆಯಾಗುತ್ತಿರುವ ಕಾರಣ ಗುಣಮಟ್ಟದ ಬೀಜದ ಬಗ್ಗೆ ರೈತರಲ್ಲಿ ವಿಶ್ವಾಸರ್ಹತೆ ಹೆಚ್ಚಿದೆ.

‘ಕೃಷಿ ವಿಶ್ವವಿದ್ಯಾಲಯದಿಂದ 10 ವರ್ಷಗಳಿಂದ ಬೀಜ ಒಯ್ಯುತ್ತಿರುವೆ. ಕಳೆದ ವರ್ಷ 110 ಎಕರೆ ಪ್ರದೇಶದಲ್ಲಿ 542 ಕ್ವಿಂಟಲ್ ತೊಗರಿ ಬಂದಿದೆ. ಈ ವರ್ಷ ಆರು ಕ್ವಿಂಟಲ್‌ ಬೀಜ ಖರೀದಿಸಿರುವೆ‘ ಎಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾದ ರೈತ ದೊಡ್ಡನಗೌಡ ಸರನಗೌಡ ಹೇಳಿದರು.

‘ವಿಶ್ವವಿದ್ಯಾಲಯದ ಮೇಲೆ ವಿಶ್ವಾಸವಿಟ್ಟು ಕಳೆದ ವರ್ಷ ಬೀಜ ಖರೀದಿಸಿದ್ದೆ. ಮೂರು ಎಕರೆಯಲ್ಲಿ 16 ಪ್ಯಾಕೆಟ್‌ ತೊಗರಿ ಬಂದಿದೆ. ₹1.13 ಲಕ್ಷ ಆದಾಯ ಬಂದಿದೆ. ಈ ವರ್ಷವೂ ತೊಗರಿ ಬೀಜ ಖರೀದಿ ಮಾಡಿರುವೆ’ ಎಂದು ಲಿಂಗಸುಗೂರು ತಾಲ್ಲೂಕಿನ ಮುದಗಲ್‌ನ ಮೌಲಾಸಾಬ ತಿಳಿಸಿದರು.

‘ವಿಶ್ವವಿದ್ಯಾಲಯವು ನೋಂದಾಯಿತ ರೈತರ ಹೊಲದಲ್ಲಿ ಪ್ರಮಾಣಿತ ಬೀಜ ಬೆಳೆಯುತ್ತಿದೆ. ತೊಗರಿ, ಸೋಯಾ, ನವಣೆ ಹಾಗೂ ಕಡಲೆಗೆ ಬೇಡಿಕೆ ಇದೆ. ವಿಶ್ವವಿದ್ಯಾಲಯದ ವೀಕ್ಷಣಾ ತಂಡವು ಬಿತ್ತನೆ ಸಂದರ್ಭ, ಬೆಳೆಯುವ, ಹೂವು ಬಿಡುವ, ಕಾಳು ಕಟ್ಟುವ ಹಾಗೂ ಕಟಾವು ಸಂದರ್ಭದಲ್ಲಿ ವಿಜ್ಞಾನಿಗಳ ವೀಕ್ಷಣಾ ತಂಡ ಭೇಟಿ ನೀಡಿ ಪರಿಶೀಲಿಸುತ್ತದೆ‘ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀಜ ಘಟಕದ ವಿಶೇಷ ಅಧಿಕಾರಿ ಅರುಣಕುಮಾರ ಹೊಸಮನಿ ಹೇಳಿದರು.

‘ವೀಕ್ಷಣಾ ತಂಡದಲ್ಲಿ ರಾಜ್ಯ ಬೀಜ ನಿಗಮ, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ, ರಾಷ್ಟ್ರೀಯ ಬೀಜ ನಿಗಮ, ಕೃಷಿ ಇಲಾಖೆ, ಕರ್ನಾಟಕ ಸಹಕಾರ ಎಣ್ಣೆಬೀಜಗಳ ಬೆಳೆಗಾರರ ​​ಒಕ್ಕೂಟದ ಸದಸ್ಯರೂ ಇದ್ದಾರೆ. ನಾಲ್ಕು ಹಂತಗಳಲ್ಲಿ ಪರಿಶೀಲನೆ ನಡೆದ ನಂತರವೇ ವಿಶ್ವವಿದ್ಯಾಲಯದ ಬ್ರ್ಯಾಂಡ್‌ನ ಅಡಿಯಲ್ಲೇ ಗುಣಮಟ್ಟದ ಬೀಜ ಮಾರಾಟಕ್ಕೆ ಬಿಡುಗಡೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ಒಣ ಬೇಸಾಯಕ್ಕೆ ಸೂಕ್ತವಾದ ತಳಿಗಳನ್ನು ವಿಶ್ವವಿದ್ಯಾಲಯವೇ ಅಭಿವೃದ್ಧಿಪಡಿಸಿ ಮಾರಾಟ ಮಾಡುತ್ತಿದೆ. ಟಿಎಸ್‌–3ಆರ್ ತೊಗರಿಗೆ ಹೆಚ್ಚಿನ ಬೇಡಿಕೆ ಇದೆ. ಮೊದಲು ಬಂದವರಿಗೆ ಆದ್ಯತೆ ಮೇಲೆ ಬೀಜ ಕೊಡುತ್ತಿದ್ದೇವೆ. ಕೃಷಿ ವಿಶ್ವವಿದ್ಯಾಲಯದ ಬೀಜೋತ್ಪಾದನೆ ಕಾರ್ಯಕ್ರಮ ಪರಿಗಣಿಸಿ ಐಸಿಎಆರ್– ಭಾರತೀಯ ಬೀಜ ವಿಜ್ಞಾನ ಸಂಸ್ಥೆಯು 2017–2018ರಲ್ಲಿ ಅತ್ಯುತ್ತಮ ಬೀಜೋತ್ಪಾದನಾ ಕೇಂದ್ರದ ಪ್ರಶಸ್ತಿಯನ್ನೂ ಪ್ರದಾನ ಮಾಡಿದೆ’ ಎಂದು ಖುಷಿ ಹಂಚಿಕೊಂಡರು.

ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಬೀಜ

* ತೊಗರಿ–ಟಿಎಸ್‌–3ಆರ್

* ತೊಗರಿ–ಜೆಆರ್‌ಜಿ811

* ತೊಗರಿ– ಜೆಆರ್‌ಜಿ152

* ನವಣೆ–ಎಚ್‌ಎನ್‌–46

* ಸೋಯಾ ಅವರೆ–ಡಿಎಸ್‌ಬಿ21

* ಮೇವಿನ ಬೀಜ–ಸಿಒಎಸ್‌ಎಫ್–31

* ಸೆಣಬು–ಲೋಕಲ್

ಹೈಬ್ರಿಡ್‌ ಸೂರ್ಯಕಾಂತಿ– ಆರ್‌ಎಸ್‌ಎಫ್‌ಎಚ್700

ಅದೇ ರೀತಿ ಬೆಂಗಳೂರು,ಧಾರವಾಡ ವಿಶ್ವವಿದ್ಯಾಲಯಗಳಲ್ಲೂ ರೈತರಿಗೆ ಬೇಕಾದ ಬೀಜಗಳು ದೊರೆಯುತ್ತವೆ.

]]>
Fri, 23 May 2025 17:36:58 +0530 shivuagrico
Bele vime&ರಾಜ್ಯದ 5.58 ಲಕ್ಷ ರೈತರ ಖಾತೆಗೆ 1248 ಕೋಟಿ ಬಾಕಿ ಬೆಳೆವಿಮೆ ಹಣ ಜಮಾ https://krushirushi.in/Bele-vime-2111 https://krushirushi.in/Bele-vime-2111 Bele vime-ರಾಜ್ಯದ 5.58 ಲಕ್ಷ ರೈತರ ಖಾತೆಗೆ 1248 ಕೋಟಿ ಬಾಕಿ ಬೆಳೆವಿಮೆ ಹಣ ಜಮಾ

2023-24 ನೇ ಸಾಲಿನ ರಾಜ್ಯದ 5.58 ಲಕ್ಷ ರೈತರ ಖಾತೆಗೆ 1248 ಕೋಟಿ ಬಾಕಿ ಬೆಳೆವಿಮೆ ಹಣ ಜಮಾ 

ಅದೇ ರೀತಿ ಹವಾಮಾನ ಆಧರಿತ ಬೆಳೆ ವಿಮೆಯಿಂದ(WBCIS) ವಂಚಿತಗೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ರೈತ ಫಲಾನುಭವಿಗಳಿಗೆ ಖುಷಿ ಸುದ್ದಿಯೊಂದನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಿಸಿದ್ದಾರೆ. 


ಜಿಲ್ಲೆಯ ಕೆಲ ಪಂಚಾಯ್ ವ್ಯಾಪ್ತಿಯ ರೈತರಿಗಷ್ಟೇ ಸುಮಾರು 10 ಕೋಟಿ ಅಷ್ಟು ಬೆಳೆ ವಿಮೆ(Belevime) ಬಂದಿದ್ದು, ಉಳಿದ ಬಹುಪಾಲು ಫಲಾನುಭವಿ ರೈತರಿಗೆ ತಾಂತ್ರಿಕ ಕಾರಣ ನೆಪವೊಡ್ಡಿ ವಿಮಾ ಕಂಪನಿ ವಿಮಾ ಪರಿಹಾರ ಮೊತ್ತ ಜಮಾ ಮಾಡಿರಲಿಲ್ಲ. ಕೇಂದ್ರ ಸರಕಾರದ ಬಳಿ ಜಿಲ್ಲೆಯ ರೈತರ ಸಮಸ್ಯೆ ಪ್ರಸ್ತಾಪಿಸಿದ್ದೆ. ಕಾಲಮಿತಿಯ ಗಡುವು ನೀಡಿ ಕೇಂದ್ರ ಸರಕಾರವೂ 3 ಸಲ ವಿಮಾ ಕಂಪನಿಗೆ ಆದೇಶ ಮಾಡಿತ್ತು. ಆದರೆ ವಿಮಾ ಪಾವತಿಗೆ ರಾಜ್ಯ ಸರಕಾರದಿಂದ ಮಾಹಿತಿ ಸಮರ್ಪಕವಾಗಿ ಸಿಕ್ಕಿಲ್ಲ ಎಂದು ವಿಮಾ ಕಂಪನಿ ಪುನಃ ದೂರುತ್ತಲೇ ಇತ್ತು. ಕೇಂದ್ರದ ಆದೇಶಕ್ಕೆ ಅಂತೂ ಮಣಿದ ವಿಮಾ ಕಂಪನಿ  ಜಿಲ್ಲೆಯ ರೈತರಿಗೆ ವಿಮಾ ಪರಿಹಾರ(Crop insurance) ಮೊತ್ತ ಪಾವತಿಸಲು ಆರಂಭಿಸಿದೆ ಎಂದು ಸಂಸದ ಕಾಗೇರಿ ವಿವರಿಸಿದ್ದಾರೆ. 


ರಾಜ್ಯ ಸರಕಾರ ಮಳೆ ಮಾಪನ ಕೇಂದ್ರ ಸಹಿತ ಹಲವು ಸಂಗತಿಗಳ ನಿರ್ವಹಣೆ ಸರಿಯಾಗಿ ಮಾಡದ ಪರಿಣಾಮ ಪರಿಹಾರಕ್ಕೆ ಕೇಂದ್ರ ಸರಕಾರ ಮಧ್ಯ ಪ್ರವೇಶಿಸುವಂತೆ ಆಗಿತ್ತು. ಇನ್ನು 3-4 ದಿನದಲ್ಲಿ ಹಣ ಬಂದು ರೈತರ ಖಾತೆಗೆ ಜಮಾ ಆಗಲಿದೆ ಎಂದಿದ್ದಾರೆ. 
ರೈತರಿಗೆ ನ್ಯಾಯ ಕೊಡಿಸಲು ನೆರವಾದ ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್, ಕೇಂದ್ರದ ಅಧಿಕಾರಿಗಳನ್ನು ಹಾಗೂ ತಡವಾದರೂ ರೈತರಿಗೆ ನ್ಯಾಯ ಕೊಡಿಸಲು ಸಹಕಾರ ನೀಡಿದ ರಾಜ್ಯ ಸರಕಾರದ ಅಧಿಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಮತ್ತು ಮರಳಿ ಈ ಸಮಸ್ಯೆ ಆಗದಂತೆ ರಾಜ್ಯ ಸರಕಾರ ತಕ್ಷಣ ಕ್ರಮವಹಿಸಿ ಮಳೆ ಮಾಪನ ಕೇಂದ್ರ ಸರಿಯಾಗಿ ನಿರ್ವಹಣೆ ಮಾಡಬೇಕು ಎಂದೂ ಸಂಸದ ಕಾಗೇರಿ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ. 

Bele vime-ಈ ಜಿಲ್ಲೆಯ 71,177 ರೈತರಿಗೆ 156.14 ಲಕ್ಷ ಬೆಳೆ ವಿಮೆ ಬಿಡುಗಡೆ,ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ

ತೋಟಗಾರಿಕೆ ಬೆಳೆಗಳಿಗೆ 2023-24ನೇ ಸಾಲಿನಲ್ಲಿ ಹವಾಮಾನ ವೈಪರೀತ್ಯದಿಂದ ಉಂಟಾದ ಬೆಳೆ ನಷ್ಟಕ್ಕೆ 156.14 ಲಕ್ಷ ರೂ. ಬೆಳೆ ವಿಮೆ (crop Insurance) ಪರಿಹಾರ ಬಿಡುಗಡೆಯಾಗಿದೆ. ಡಿ.2ರಂದು ರೈತರ ಖಾತೆಗಳಿಗೆ ವಿಮೆ ಹಣ ಜಮಾ ಆಗಲಿದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಡಿಕೆ, ಮಾವು, ಮೆಣಸು ಮತ್ತು ಶುಂಠಿ ಬೆಳೆಗಳಿಗೆ 73,271 ರೈತರು ವಿಮೆ ಪಾವತಿಸಿದ್ದರು. ಅದರಲ್ಲಿ 71,177 ರೈತರಿಗೆ ವಿಮೆ ಪರಿಹಾರ ಬಂದಿದೆ. ಅಡಿಕೆ ವಿಮೆ ಮಾಡಿಸಿದ 68,951 ರೈತರಿಗೆ ಸೋಮವಾರದಿಂದ ಅವರ ಖಾತೆಗಳಿಗೆ ನೇರವಾಗಿ ಹಣ ಬಿಡುಗಡೆಯಾಗುತ್ತದೆ. ಮಾವು, ಮೆಣಸು ಮತ್ತು ಶುಂಠಿ ಬೆಳೆದ 2226 ರೈತರ ಖಾತೆಗೆ ಈಗಾಗಲೇ ಬೆಳೆ ವಿಮೆ ಪರಿಹಾರ ಜಮೆ ಆಗಿದೆ. ಹಿಂದಿನ 2 ವರ್ಷಗಳಿಗಿಂತ ಈ ವರ್ಷ ಅಧಿಕವಾಗಿ ಬೆಳೆ ವಿಮೆ(bele vime) ಮೊತ್ತವು ರೈತರ ಖಾತೆಗೆ ಜಮೆ ಆಗುತ್ತಿದೆ.

ಹಾಗಾಗರೆ ನಿಮ್ಮ ಜಮಾ (Belevime hana jama)ಸ್ಟೇಟಸ್ ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

 https://samrakshane.karnataka.gov.in/ 

ನಂತರ ವರ್ಷದ ಆಯ್ಕೆ "2023-24" ಮತ್ತು ಋುತು "Kharif

" ಎಂದು select ಮಾಡಿ, "ಮುಂದೆ/Go" ಮೇಲೆ click ಮಾಡಿ

Farmer ಕಾಲಂನಲ್ಲಿ "Check status." ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಆಧಾರ್ ನಂಬರ್(Aadhaar number) ಅಥವಾ Proposal number ಅಥವಾ Mobile number ಮೇಲೆ ಕ್ಲಿಕ್ ಮಾಡಿ, ನೀವು ಬೆಳೆವಿಮೆ(Cropinsurance) ಕಟ್ಟಿದ Acknowledgment number ಅಥವಾ Mobile number ಹಾಕಿ,Captcha type ಮಾಡಿ,Search ಮೇಲೆ ಕ್ಲಿಕ್ ಮಾಡಿ

(ಸೂಚನೆ-ಬೆಳೆವಿಮೆ/cropinsurance ಕಟ್ಟಿದ ರಶೀದಿ ಕಳೆದಿದ್ದರೆ ಅಥವಾ Acknowledgment number ಗೊತ್ತಿಲ್ಲದಿದ್ದರೆ,ಮೊಬೈಲ್ ನಂಬರ್ select ಮಾಡಿ,ಮೊಬೈಲ್ ನಂಬರ್ ಹಾಕಿ ಚೆಕ್ ಮಾಡಬಹುದು)

ಈ ಕೆಳಗಿನಂತೆ ಬೆಳೆವಿಮೆ(crop insurance) ಜಮಾ ಮಾಹಿತಿ ದೊರೆಯಲಿದೆ.

]]>
Thu, 22 May 2025 23:54:13 +0530 shivuagrico
Mungaru 2025&ಮೇ 27 ಅಲ್ಲ,ಅದಕ್ಕಿಂತಲೂ ಮೊದಲೇ ಮುಂಗಾರು ಪ್ರವೇಶ https://krushirushi.in/Mungaru-2025 https://krushirushi.in/Mungaru-2025 Mungaru 2025-ಮೇ 27 ಅಲ್ಲ,ಅದಕ್ಕಿಂತಲೂ ಮೊದಲೇ ಮುಂಗಾರು ಪ್ರವೇಶ

ನೈಋತ್ಯ ಮಾನ್ಸೂನ್ (Monsoon 2025) ಮುಂದಿನ 4ರಿಂದ 5 ದಿನಗಳಲ್ಲಿ ಕೇರಳಕ್ಕೆ ಆಗಮಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಪ್ರತಿ ವರ್ಷ ಜೂನ್ ತಿಂಗಳ ಆರಂಭದಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶವಾಗುತ್ತಿತ್ತು.

ಆದರೆ ಈ ವರ್ಷ ಬಹಳ ಮುಂಚೆಯೇ ಆಗಬಹುದು. ಐಎಂಡಿ ಈ ಹಿಂದೆ ಮೇ 27ರ ವೇಳೆಗೆ ಮಾನ್ಸೂನ್ ಕೇರಳವನ್ನು ತಲುಪುತ್ತದೆ ಎಂದು ನಿರೀಕ್ಷಿಸಿತ್ತು. ಆದರೆ, ಅದಕ್ಕೂ 2-3 ದಿನಗಳು ಮುಂಚಿತವಾಗಿಯೇ ಮಾನ್ಸೂನ್ಆಗಮನವಾಗುವ ಸಾಧ್ಯತೆಯಿದೆ. ಮುಂಚಿತವಾಗಿ ಮಳೆಯಾಗುವುದರಿಂದ ಬಿಸಿಲಿನ ಬೇಗೆ ಕಡಿಮೆಯಾಗುವುದಲ್ಲದೆ, ಭತ್ತ, ಜೋಳ, ಹತ್ತಿ, ಸೋಯಾಬೀನ್ ಮತ್ತು ಇತರ ಎಣ್ಣೆಬೀಜಗಳಂತಹ ಬಂಪರ್ ಬೆಳೆಗಳ ಬಿತ್ತನೆಯೂ ಹೆಚ್ಚಾಗುತ್ತದೆ.

“ಪ್ರಸ್ತುತ ಇರುವ ವೇಗದಲ್ಲಿಯೇ ಮಳೆ ಮುಂದುವರೆದರೆ ಮತ್ತು ಇತರ ಪರಿಸ್ಥಿತಿಗಳು ಅನುಕೂಲಕರವಾಗಿದ್ದರೆ ಮುಂದಿನ 4-5 ದಿನಗಳಲ್ಲಿ ಕೇರಳದಲ್ಲಿ ಮಾನ್ಸೂನ್ ಆರಂಭಕ್ಕೆ ಪರಿಸ್ಥಿತಿಗಳು ಅನುಕೂಲಕರವಾಗುವ ಸಾಧ್ಯತೆಯಿದೆ” ಎಂದು ಐಎಂಡಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ವರ್ಷ, ಮಾನ್ಸೂನ್ ಮೇ 30ರಂದು ಕೇರಳದ ಕರಾವಳಿಯನ್ನು ತಲುಪಿತು. ಇದಕ್ಕೂ ಮೊದಲು ಜೂನ್ 8 (2023), ಮೇ 29 (2022), ಜೂನ್ 3 (2021) ಮತ್ತು ಜೂನ್ 1 (2020)ರಂದು ಕೇರಳದಲ್ಲಿ ಮುಂಗಾರು ಪ್ರವೇಶವಾಗಿತ್ತು.

ನೈಋತ್ಯ ಮಾನ್ಸೂನ್ ಭಾರತದ ಕೃಷಿ ಆರ್ಥಿಕತೆಗೆ ಅತ್ಯಗತ್ಯವಾಗಿದ್ದು, ವಾರ್ಷಿಕ ಮಳೆಯ ಸುಮಾರು 70%ರಷ್ಟು ಭಾಗವನ್ನು ಹೊಂದಿದೆ. ಇದು ದೇಶದ ನಿವ್ವಳ ಬಿತ್ತನೆ ಪ್ರದೇಶದ ಸುಮಾರು 51% ಅನ್ನು ಬೆಂಬಲಿಸುತ್ತದೆ.

ಮೇ 13ರಂದು ದಕ್ಷಿಣ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ದಕ್ಷಿಣ ಅಂಡಮಾನ್ ಸಮುದ್ರ, ನಿಕೋಬಾರ್ ದ್ವೀಪಗಳು ಮತ್ತು ಉತ್ತರ ಅಂಡಮಾನ್ ಸಮುದ್ರದ ಕೆಲವು ಭಾಗಗಳಿಗೆ ಮಾನ್ಸೂನ್ ನಿಗದಿತ ಸಮಯಕ್ಕಿಂತ 2 ದಿನ ಮುಂಚಿತವಾಗಿ ಪ್ರವೇಶಿಸಿತ್ತು. ದಕ್ಷಿಣ ಅರೇಬಿಯನ್ ಸಮುದ್ರ, ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶದ ಹೆಚ್ಚಿನ ಭಾಗಗಳು ಅದರಲ್ಲೂ ಲಕ್ಷದ್ವೀಪದ ಕೆಲವು ಭಾಗಗಳು, ಕೇರಳ, ತಮಿಳುನಾಡು, ಕರ್ನಾಟಕ, ದಕ್ಷಿಣ ಮತ್ತು ಮಧ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ಈಶಾನ್ಯ ಬಂಗಾಳ ಕೊಲ್ಲಿಯ ಮತ್ತು ಈಶಾನ್ಯ ರಾಜ್ಯಗಳ ಕೆಲವು ಭಾಗಗಳಲ್ಲಿ ನೈಋತ್ಯ ಮಾನ್ಸೂನ್ ಮತ್ತಷ್ಟು ಮುನ್ನಡೆಯಲು ಪರಿಸ್ಥಿತಿಗಳು ಅನುಕೂಲಕರವಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.

ಈ ವರ್ಷ ದೇಶಾದ್ಯಂತ ನೈಋತ್ಯ ಮಾನ್ಸೂನ್ ಋತುಮಾನದ ಮಳೆ ಸಾಮಾನ್ಯಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ. ಮೇ 22ರವರೆಗೆ ಕರ್ನಾಟಕದ ಕರಾವಳಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ಉಂಟಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶಗಳು ರೆಡ್ ಅಲರ್ಟ್‌ನಲ್ಲಿವೆ. ಕೇರಳ, ತಮಿಳುನಾಡು, ಪುದುಚೇರಿ, ಕಾರೈಕಲ್, ಕೊಂಕಣ, ಗೋವಾ, ಮಧ್ಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರದಲ್ಲಿ ಮೇ 24ರವರೆಗೆ ಭಾರೀ ಮಳೆಯಾಗುವ ಬಗ್ಗೆ ಐಎಂಡಿ ಎಚ್ಚರಿಕೆ ನೀಡಿದೆ.

SACHET-ಹವಾಮಾನ ಮುನ್ಸೂಚನೆಗೆ ಹೊಸ ಆ್ಯಪ್ ಬಿಡುಗಡೆ ಮಾಡಿದ ಪ್ರಧಾನಿ ಮೋದಿ,ನಿಮ್ಮ ಮೊಬೈಲ್ ನಲ್ಲೇ ಹೀಗೆ ತಿಳಿದುಕೊಳ್ಳಿ ಹವಾಮಾನ ಮುನ್ಸೂಚನೆ


ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಮನ್ ಕಿ ಬಾತ್‌ನಲ್ಲಿ (Mann Ki Baat)ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA)ದ CAP ಆಧಾರಿತ ಇಂಟಿಗ್ರೇಟೆಡ್ ಅಲರ್ಟ್ ಸಿಸ್ಟಮ್ ಸ್ಯಾಚೆಟ್ ಆಪ್‌ ಬಗ್ಗೆ ಉಲ್ಲೇಖಿಸಿದ್ದಾರೆ. ಈ ವ್ಯವಸ್ಥೆಯು ಭಾರತದಾದ್ಯಂತ ಲಭ್ಯವಿದ್ದು, ಅದರ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದಂತೆ ಭೂ ಗುಪ್ತಚರವನ್ನು ಬಳಕೆ ಮಾಡಿಕೊಂಡು ಬಹು ತಂತ್ರಜ್ಞಾನದ ಮೂಲಕ ಮುಂಚಿನ ಎಚ್ಚರಿಕೆಯ ನೈಜ-ಸಮಯದ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ.

ಸಚೇತ್‌ನ ವೆಬ್‌ಸೈಟ್ ಪ್ರಕಾರ,"XX-NDMAEW ಹೆಡರ್‌ನಿಂದ ಎಸ್‌ಎಂಎಸ್‌ ಮೂಲಕ ವಿಪತ್ತು ಎಚ್ಚರಿಕೆಗಳನ್ನು ಸ್ವೀಕರಿಸಿಕೊಳ್ಳಬಹುದಾಗಿದ್ದು, ಬಳಕೆದಾರರು ಜಾಗರೂಕರಾಗಿರಬಹುದಾಗಿದೆ. ಆಯಪ್ ಅನ್ನು ಪ್ರತ್ಯೇಕವಾಗಿ "ಹವಾಮಾನ ಮುನ್ಸೂಚನೆ ಮಾಹಿತಿಗಾಗಿ ಮತ್ತು ಬಹು ಸ್ಥಳಗಳ ಚಂದಾದಾರಿಕೆ ಸೌಲಭ್ಯದೊಂದಿಗೆ ವಿಪತ್ತು ಎಚ್ಚರಿಕೆಗಳನ್ನು ಸ್ವೀಕರಿಸಲು ಬಳಸಬಹುದು". ಎಂದು ಮೋದಿ ತಿಳಿಸಿದ್ದಾರೆ.

ಬಳಕೆದಾರರು ತಮ್ಮ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಬ್ರೌಸರ್‌ಗಳಲ್ಲಿ ಬ್ರೌಸರ್ ನೋಟಿಫಿಕೇಶ್‌ ಅನ್ನು ಪಡೆಯುತ್ತಾರೆ. ಬಳಕೆದಾರರು ವಿಪತ್ತು ಸಂಬಂಧಿತ ಮಾಹಿತಿಯ ಅಧಿಸೂಚನೆಯನ್ನು ತತ್‌ ಕ್ಷಣವೇ ಪಡೆಯಬಹುದು ಎಂದು ವೆಬ್‌ಸೈಟ್ ನಲ್ಲಿ ಉಲ್ಲೇಖ ಮಾಡಿದೆ.

ಆರ್‌ಎಸ್‌ಎಸ್ ಫೀಡ್‌ನಲ್ಲಿಯೂ ಎಚ್ಚರಿಕೆಯನ್ನು ಪ್ರಕಟಿಸಲಾಗುತ್ತದೆ. ಅಲ್ಲದೆ ಸುದ್ದಿ ಸಂಸ್ಥೆಗಳು ಇದಕ್ಕೆ ಚಂದಾದಾರರಾಗಿದ್ದರೆ ಮುಂಚಿತವಾಗಿ ಈ ಬಗ್ಗೆ ಮಾಹಿತಿ ಪ್ರಕಟ ಮಾಡಬಹುದಾಗಿದೆ. ಈ ಮೂಲಕ ಮುಂದೆ ಆಗುವ ದೊಡ್ಡ ಮಟ್ಟದ ಅನಾಹುತಗಳನ್ನು ತಪ್ಪಿಸಬಹುದಾಗಿದೆ.

ವೆಬ್‌ಸೈಟ್‌ನಲ್ಲಿ ಪ್ರಕಟವಾದ ಮಾಹಿತಿಯ ಪ್ರಕಾರ, ಆಪ್‌ ಅನ್ನು ಉತ್ತರ ಪ್ರದೇಶದಲ್ಲಿ ಸುಮಾರು 5.4 ಕೋಟಿ ಜನರು, ರಾಷ್ಟ್ರ ರಾಜಧಾನಿಯಲ್ಲಿ 4.6 ಕೋಟಿ ಜನರು, ಮಹಾರಾಷ್ಟ್ರದಲ್ಲಿ 1.1 ಕೋಟಿ ಜನರು ಡೌನ್‌ಲೋಡ್ ಮಾಡಿದ್ದಾರೆ.

ನೀವೂ ಆ್ಯಪ್ ಮೂಲಕ ಮಳೆ ಮುನ್ಸೂಚನೆ ತಿಳಿಯಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://play.google.com/store/apps/details?id=com.cdotindia.capsachet

ನಂತರ ಆ್ಯಪ್ ಡೌನಲ್ಲೋಡ್ ಮಾಡಿಕೊಳ್ಳಿ

ನಂತರ ಮುಂದೆ ಮೇಲೆ ಕ್ಲಿಕ್ ಮಾಡಿ

ನಂತರ ಮತ್ತೆ ಮುಂದೆ ಮೇಲೆ ಕ್ಲಿಕ್ ಮಾಡಿ

ನಂತರ /(Yes) ಮಾರ್ಕ್ ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯನ್ನು ನಮೂದಿಸಿ,ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ

ನಂತರ ಈ ಕೆಳಗಿನಂತೆ ನಿಮಗೆ ಹವಾಮಾನ ಮಾಹಿತಿ ಸಿಗಲಿದೆ

]]>
Wed, 21 May 2025 20:58:17 +0530 shivuagrico
ಕೊನೆಗೂ ಜಮಾ ಆಯ್ತು 3 ತಿಂಗಳ ಪೇಂಡಿಗ್ 6000 ರೂಪಾಯಿ ಗೃಹಲಕ್ಷ್ಮಿ ಹಣ&Gruhalakshmi pending amount https://krushirushi.in/Gruhalakshmi-pending-amount-2109 https://krushirushi.in/Gruhalakshmi-pending-amount-2109 ಕೊನೆಗೂ ಜಮಾ ಆಯ್ತು 3 ತಿಂಗಳ ಪೇಂಡಿಗ್ 6000 ರೂಪಾಯಿ ಗೃಹಲಕ್ಷ್ಮಿ ಹಣ-Gruhalakshmi pending amount

ಬಾಕಿ ಉಳಿದಿರುವ ಮೂರು ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಒಟ್ಟಿಗೆ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜನವರಿ, ಫೆಬ್ರವರಿ, ಮಾರ್ಚ್ ಈ ಮೂರು ತಿಂಗಳ ಗೃಹಲಕ್ಷ್ಮಿ ಹಣವನ್ನು ಮೇ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.

ಮೂರು ತಿಂಗಳ ಹಣ ಬಿಡುಗಡೆಗೆ ಹಣಕಾಸು ಇಲಾಖೆಯಿಂದ ಅನುಮೋದನೆ ಸಿಕ್ಕಿದ್ದು, ಒಂದು ವಾರ ಒಂದು ತಿಂಗಳ ಹಣ, ಮತ್ತೊಂದು ವಾರ ಮತ್ತೊಂದು ತಿಂಗಳ ಹಣವನ್ನು ಗೃಹಲಕ್ಷ್ಮಿಯರ ಬ್ಯಾಂಕ್‌ ಖಾತೆಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. 

 

ಅರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://ahara.kar.nic.in/Home/EServices

ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ e-Ration Card ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ show village list ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಜಿಲ್ಲೆ,ತಾಲೂಕು,ಗ್ರಾಮ ಪಂಚಾಯತಿ,ಗ್ರಾಮ select ಮಾಡಿ,Go ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನ ಪಟ್ಟಿಯಲ್ಲಿರುವ(Gruhalakshmi list)ಅರ್ಹ ಗೃಹಿಣಿಯರಿಗೆ ಮಾತ್ರ ಗೃಹಲಕ್ಷ್ಮಿ ಹಣ(Gruhalakshmi amount) ಜಮಾ(dbt) ಆಗಲಿದೆ.

Gruhalakshmi status-ಗೃಹಲಕ್ಷ್ಮಿ ಇಲ್ಲಿಯವರೆಗೂ ಎಷ್ಟು ಕಂತಿನ ಹಣ ಜಮಾ ಆಗಿದೆ ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application ಡೌನ್ಲೊಡ್ ಮಾಡಿ,install ಮಾಡಿಕೊಳ್ಳಿ

https://play.google.com/store/apps/details?id=com.dbtkarnataka

ನಂತರ ನಿಮ್ಮ ಆಧಾರ್ ನಂಬರ್ ಹಾಕಿ Get OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Varify OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ

ನಂತರ payment status ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಇಲ್ಲಿಯವರೆಗೆ ಎಷ್ಟು ಗೃಹಲಕ್ಷ್ಮಿ(Gruhalakahmi) ಕಂತಿನ ಹಣ ಜಮಾ ಆಗಿದೆ ಎಂದು ತೋರಿಸುತ್ತದೆ.

Hi

]]>
Wed, 21 May 2025 20:10:24 +0530 shivuagrico
ರಾಜ್ಯದ 6 ಲಕ್ಷ ರೈತರಿಗಿಲ್ಲ ಪಿಎಂ ಕಿಸಾನ್ ಹಣ,ಅನರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಚೆಕ್ ಮಾಡಿ&pmkisan 20th instalment ineligible list https://krushirushi.in/Pmkisan-20th-instalment-ineligible-list-2108 https://krushirushi.in/Pmkisan-20th-instalment-ineligible-list-2108 ರಾಜ್ಯದ 6 ಲಕ್ಷ ರೈತರಿಗಿಲ್ಲ ಪಿಎಂ ಕಿಸಾನ್ ಹಣ,ಅನರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಚೆಕ್ ಮಾಡಿ-pmkisan 20th instalment ineligible list


ವರ್ಷದಲ್ಲಿ ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯ (ಪಿಎಂ-ಕಿಸಾನ್) ಫಲಾನುಭವಿಗಳ ಸಂಖ್ಯೆ(pmkisan 20th instalment ineligible list) ಐದು ಲಕ್ಷದಿಂದ ಆರು ಲಕ್ಷದಷ್ಟು ಕುಸಿತವಾಗಿದೆ.


ಲೋಕಸಭೆಯಲ್ಲಿ ಮೈಸೂರು ಸಂಸದ ಯದುವೀ‌ರ್ ಒಡೆಯ‌ರ್ ಮಂಗಳವಾರ ಕೇಳಿದ ಪ್ರಶ್ನೆಗೆ ಕೃಷಿ ಖಾತೆ ರಾಜ್ಯ ಸಚಿವ ರಾಮನಾಥ್ ಠಾಕೂರ್ ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ.


13ನೇ ಕಂತಿನವರೆಗೆ (2023ರ ಮಾರ್ಚ್) ರಾಜ್ಯದ ಫಲಾನುಭವಿಗಳ ಸಂಖ್ಯೆ 49 ಲಕ್ಷದಷ್ಟು ಇತ್ತು. 14ನೇ ಕಂತಿನಲ್ಲೂ ಫಲಾನುಭವಿಗಳ ಸಂಖ್ಯೆ 49.34 ಲಕ್ಷ ಆಗಿತ್ತು. 15ನೇ ಕಂತಿನಲ್ಲಿ ಈ ಸಂಖ್ಯೆ 43.78 ಲಕ್ಷಕ್ಕೆ ಕುಸಿಯಿತು. ಆ ಬಳಿಕ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗಿಲ್ಲ.


ಪಿಎಂ- ಕಿಸಾನ್ ಯೋಜನೆಯಡಿ ಕೃಷಿಕರಿಗೆ ವಾರ್ಷಿಕ ₹6 ಸಾವಿರ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ. ಈ ಮೊತ್ತವನ್ನು ₹8 ಸಾವಿರ ಅಥವಾ ₹12 ಸಾವಿರಕ್ಕೆ ಏರಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

Pmkisan 19th instalment ineligible list-ಪಿಎಂ ಕಿಸಾನ್ 19ನೇ ಕಂತಿನ ಅನರ್ಹ ಪಟ್ಟಿ ಬಿಡುಗಡೆ,ಅನರ್ಹ ಪಟ್ಟಿ ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://pmkisan.gov.in/VillageDashboard_Portal.aspx

ನಂತರ ನಿಮ್ಮ ರಾಜ್ಯ,ಜಿಲ್ಲೆ,ತಾಲೂಕು,ಗ್ರಾಮ select ಮಾಡಿ,Submit ಮೇಲೆ ಕ್ಲಿಕ್ ಮಾಡಿ

ನಂತರ Aadhaar authentication status ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ನಿಮ್ಮ ಗ್ರಾಮದಲ್ಲಿರುವ ಪಿಎಂಕಿಸಾನ್ ಅನರ್ಹ ರೈತರ ಪಟ್ಟಿ ದೊರೆಯಲಿದೆ

ಇದನ್ನೂ ಓದಿ

 ಪಿಎಂ ಕಿಸಾನ್ ಸಮ್ಮಾನ ನಿಧಿ 12,000 ಕ್ಕೆ ಏರಿಕೆಗೆ ಪ್ರಸ್ತಾವನೆ, ಯಾರಿಗೆಲ್ಲಾ ಸಿಗಲಿದೆ 19ನೇ ಕಂತು ಹೀಗೆ ಚೆಕ್ ಮಾಡಿ-Pmkisan 19th instalment - https://krushirushi.in/Pmkisan-19th-instalment-1731 

]]>
Wed, 21 May 2025 06:13:48 +0530 shivuagrico
ರಾಜ್ಯ ಸರ್ಕಾರದಿಂದ ಬೆಳೆ ಪರಿಹಾರ ಚೆಕ್ ಮಾಡುವ ಆ್ಯಪ್ ಬಿಡುಗಡೆ,ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ&Input subsidy for croploss https://krushirushi.in/Input-subsidy-for-crop-loss-2107 https://krushirushi.in/Input-subsidy-for-crop-loss-2107 Input subsidy for croploss-ರಾಜ್ಯ ಸರ್ಕಾರದಿಂದ ಬೆಳೆ ಪರಿಹಾರ ಚೆಕ್ ಮಾಡುವ ಆ್ಯಪ್ ಬಿಡುಗಡೆ

2024- 25 ನೇ ಸಾಲಿನ ಮುಂಗಾರು ಹಂಗಾಮಿ(Kharif)ನಲ್ಲಿ ಭಾರಿ ಮಳೆಯಿಂದಾಗಿ ಬೆಳೆ ಹಾನಿ(bele hani)ಗೊಳಗಾದ ರೈತರಿಗೆ ಪರಿಹಾರದ ಮೊತ್ತ(parihara payment)ಮಂಜೂರಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.


ಮುಂಗಾರು ಹಂಗಾಮಿನಲ್ಲಿ ಮಳೆಯಿಂದ ಹಾನಿಗೊಳಗಾದ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯ ಮೊದಲ ಕಂತಿನ ಪರಿಹಾರವಾಗಿ 13.2 ಕೋಟಿ ರೂ.ಇನ್ಸುಟ್‌ ಸಬ್ಸಿಡಿ(input subsidy for croploss) ಮಂಜೂರಾಗಿದೆ.


ಹಾನಿಯಾದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವಿವರಗಳನ್ನು ಗ್ರಾಮ ಆಡಳಿತ ಅಧಿಕಾರಿಗಳು ತಂತ್ರಾಂಶದಲ್ಲಿ ನಮೂದಿಸಿ ಅನುಮೋದಿಸಿದ್ದಾರೆ. ಮೊದಲ ಹಂತದಲ್ಲಿ ಒಟ್ಟು 33,718 ರೈತರಿಗೆ 13.2 ಕೋಟಿ ರೂ.ಗಳನ್ನು ಎನ್.ಡಿ.ಆ‌ರ್.ಎಫ್.(NDRF)ಎಸ್.ಡಿ.ಆ‌ರ್.ಎಫ್.(SDRF) ಮಾರ್ಗಸೂಚಿ ಅನ್ವಯ ಹಣ ಮಂಜೂರಾತಿ ನೀಡಲಾಗಿದೆ. ನೇರವಾಗಿ ಆಧಾ‌ರ್ ಸಂಖ್ಯೆ(Aadhaar number linked bank account) ಜೋಡಣೆಯಾಗಿರುವ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರದ ಮೊತ್ತ ಜಮಾ ಮಾಡಲು ಅನುಮೋದನೆ ನೀಡಲಾಗಿದೆ.


ಇನ್ನು ಮೂರ್ನಾಲ್ಕು ದಿನಗಳೊಳಗೆ ಇನ್ಸುಟ್‌ ಸಬ್ಸಿಡಿ ರೈತರ ಬ್ಯಾಂಕ್‌ ಖಾತೆಗೆ ಜಮೆಯಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಳೆ ಪರಿಹಾರ ಚೆಕ್ ಮಾಡುವ DBT Karnataka application ಬಿಡುಗಡೆ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application ಡೌನ್ಲೊಡ್ ಮಾಡಿ,install ಮಾಡಿಕೊಳ್ಳಿ

https://play.google.com/store/apps/details?id=com.dbtkarnataka

ನಂತರ ನಿಮ್ಮ ಆಧಾರ್ ನಂಬರ್(Aadhaar number) ಹಾಕಿ Get OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Varify OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ

ನಂತರ payment status ಮೇಲೆ ಕ್ಲಿಕ್ ಮಾಡಿ

ನಂತರ input subsidy for croploss ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಇಲ್ಲಿಯವರೆಗೂ ಜಮಾ ಆದ ಬೆಳೆಹಾನಿ ಪರಿಹಾರ(Bele parihara)ಮಾಹಿತಿ ಸಿಗಲಿದೆ.

]]>
Tue, 20 May 2025 19:47:41 +0530 shivuagrico
Karnataka rains&ಬೇಸಿಗೆಯಲ್ಲಿ ಮಳೆಗಾಲದ ರೀತಿಯ ಮಳೆ ಯಾಕಾಗ್ತಿದೆ? 6 ಜಿಲ್ಲೆಗಳಿಗೆ ರೆಡ್ ಅಲರ್ಟ್ https://krushirushi.in/Karnataka-rains-2106 https://krushirushi.in/Karnataka-rains-2106 Karnataka rains-ಬೇಸಿಗೆಯಲ್ಲಿ ಮಳೆಗಾಲದ ರೀತಿಯ ಮಳೆ ಯಾಕಾಗ್ತಿದೆ? 6 ಜಿಲ್ಲೆಗಳಿಗೆ ರೆಡ್ ಅಲರ್ಟ್


ಬೇಸಿಗೆ ಋತು ಉತ್ತುಂಗದಲ್ಲಿರು ವಾಗಲೇ ರಾಜ್ಯದ ಅನೇಕ ಕಡೆ ಕೆಲ ದಿನ ಗಳಿಂದ ನಿರಂತರ ಮಳೆಯಾಗುತ್ತಿದೆ. ತಾಪ ಮಾನ ತಗ್ಗಿ ಬಿಸಿಲೂರಿನ ಜಿಲ್ಲೆಗಳ ಜನ ನಿಟ್ಟುಸಿರು ಬಿಟ್ಟಿದ್ದರೆ, ಹಲ ವೆಡೆ ರೈತರು ಮುಂಗಾರು ಆರಂಭ ಮುನ್ನವೇ ಕೃಷಿ “ಆರಂಭ’ಕ್ಕೆ ತೊಡಗಿದ್ದಾರೆ.

ಕೆಲವೆಡೆ ವಾಣಿಜ್ಯ ಬೆಳೆಗಳಿಗೆ ಅಕಾಲಿಕ ಮಳೆಯಿಂದ ಹಾನಿಯಾಗಿದೆ. ಬೇಸಿಗೆಯಲ್ಲಿ ಈ ಪರಿ ಮಳೆ ಯಾಕಾಗುತ್ತಿದೆ? ಈ ಪ್ರಶ್ನೆಗೆ ಹವಾಮಾನ ಇಲಾಖೆ ನೀಡುತ್ತಿರುವ ಕಾರಣ, ಸಮುದ್ರ, ಭೂಮಿ ಮೇಲ್ಮೈ ನ ವಾಯುಭಾರ ಕುಸಿತ, ದೊಡ್ಡ ಗಾತ್ರದ ವಾಯುಭಾರ ಕುಸಿತ ಪ್ರದೇಶಗಳ ಸೃಷ್ಟಿ.

ತಮಿಳುನಾಡು ಸಮೀಪ ಪೂರ್ವ ಕರಾವಳಿಯ ಬಂಗಾಳಕೊಲ್ಲಿಯಲ್ಲಿ 1.5 ಕಿಮೀ ಅಗಲ ಹಾಗೂ 5.8 ಕಿ.ಮೀ. ಎತ್ತರದಷ್ಟು ಗಾತ್ರದ ವಾಯುಭಾರ ಕುಸಿತ ಉಂಟಾಗಿದ್ದು, ಕರ್ನಾಟಕದ ಒಳನಾಡಿನ ಮೇಲ್ಮೆ„ಯಲ್ಲೂ ಈ ರೀತಿಯ ವಾತಾವರಣವಿದೆ.

ಇದರಿಂದ ನಿರಂತರವಾಗಿ ಮಳೆಯಾಗುತ್ತಿದೆ. ಈ ಮಧ್ಯೆ, ಪಶ್ಚಿಮ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಮೇ 22ರಂದು ವಾಯುಭಾರ ಕುಸಿತ ಉಂಟಾಗುವ ನಿರೀಕ್ಷೆ ಇದ್ದು, ಇದರ ಪೂರ್ವ ಪರಿಣಾಮವಾಗಿ ಮೇ 19ರಿಂದ ರಾಜ್ಯದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಬೆಂಗಳೂರಲ್ಲಿ 2-3 ದಿನ ಮಳೆ: ಬೆಂಗಳೂರಿನಲ್ಲಿ ಮೇ 21ರ ವರೆಗೆ ಗುಡುಗು, ಮಿಂಚು ಸಮೇತವಾಗಿ ಸಾಧಾರಣ ಮಳೆಯಾಗುವ ಹೆಚ್ಚಿನ ಸಾಧ್ಯತೆಗಳಿವೆ. ಮೇ 19, 20ರಂದು ಹಳದಿ ಅಲರ್ಟ್‌ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಮೋಡಕವಿದ ವಾತಾವರಣ ಇರಲಿದೆ. ಜೊತೆಗೆ 50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 30 ಹಾಗೂ 20 ಡಿ.ಸೆ ಇರಲಿದೆ.

ಹಾವೇರಿ: ಗರಿಷ್ಠ 13 ಸೆಂಮೀ ಮಳೆ
ಕರಾವಳಿ ಕರ್ನಾಟಕ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಭಾನುವಾರ ಮಳೆಯಾಗಿದೆ. ಹಾವೇರಿ 13, ಯಾದಗಿರಿ 10, ರಾಯಚೂರು 9, ಬೆಂಗಳೂರು 3, ಚಿತ್ರದುರ್ಗ, ಉತ್ತರ ಕನ್ನಡ ಜಿಲ್ಲೆ 5, ದಕ್ಷಿಣ ಕನ್ನಡದ ಪುತ್ತೂರಿನಲ್ಲಿ 2 ಸೆಂ.ಮೀ ಮಳೆಯಾಗಿದೆ. ಉಳಿದ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.

ಚಿತ್ರದುರ್ಗಕ್ಕೆ ರೆಡ್‌ ಅಲರ್ಟ್‌
ಬೆಳಗಾವಿ, ಧಾರವಾಡ, ಹಾವೇರಿ ಗದಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಮೇ 19 ರಿಂದ 22ರ ವರೆಗೆ ಆರೆಂಜ್‌ ಅಲರ್ಟ್‌ ಅನ್ನು ಘೋಷಿಸಲಾಗಿದೆ. ಮೇ 19 ಹಾಗೂ 20ರಂದು ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಿಗೆ ಹಳದಿ ಅಲರ್ಟ್‌ ಘೋಷಿಸಲಾಗಿದೆ. ಇನ್ನು ಚಿತ್ರದುರ್ಗ ಜಿಲ್ಲೆಗೆ ಮೇ 19ರಂದು ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳವರೆಗೆ ಭಾರಿ ಹಾಗೂ ಅತೀ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಮಳೆಯ ಜೊತೆಗೆ ಗಾಳಿಯ ವೇಗವು ಪ್ರತಿ ಘಂಟೆಗೆ 50 ಕಿ.ಮೀ ಇರಲಿದೆ. ಜನ ಸಮಾನ್ಯರು ಮಳೆಯ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡರೆ ಉತ್ತಮ.
●ಸಿ.ಎಸ್‌.ಪಾಟೀಲ್‌, ನಿರ್ದೇಶಕ, ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗ

]]>
Tue, 20 May 2025 05:47:20 +0530 shivuagrico
Gruhalakshmi amount&ಈ ಜಿಲ್ಲೆಗಳ ಗೃಹಿಣಿಯರಿಗೆ 1,095 ಕೋಟಿ ಗೃಹಲಕ್ಷ್ಮಿ ಹಣ ಬಿಡುಗಡೆ, ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ https://krushirushi.in/Gruhalakshmi-amount-2105 https://krushirushi.in/Gruhalakshmi-amount-2105 Gruhalakshmi pending payment-ಈ ಪಟ್ಟಿಯಲ್ಲಿರುವವರಿಗೆ ಪ್ರತಿ ವಾರ ಒಂದು ಕಂತಿನಂತೆ ಮುಂದಿನ 3 ವಾರ 3 ಕಂತಿನ ಗೃಹಲಕ್ಷ್ಮಿ ಹಣ ಜಮಾ

ಉಡುಪಿ ಜಿಲ್ಲಾ ಪಂಚಾಯತ್‌, ಕೃಷಿ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಕುಂದಾಪುರ ರೈತ ಸಂಪರ್ಕ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳು ಹಣ ಬಾಕಿ ಉಳಿದಿದೆ. ಈ ಬಾಕಿ ಉಳಿದ ಹಣವನ್ನ ಹಂತ ಹಂತವಾಗಿ ಮೇ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದು, ಆದಷ್ಟು ಶೀಘ್ರದಲ್ಲಿ ಹಣ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. 

ಬಾಕಿ ಇರುವ ಮೂರು ತಿಂಗಳ-ಜನವರಿ, ಫೆಬ್ರವರಿ ಮತ್ತು ಮಾರ್ಚ್-ಕಂತಿನ ಮೊತ್ತವನ್ನು ಮೇ ತಿಂಗಳಲ್ಲಿ ಹಂತಹಂತವಾಗಿ ಬಿಡುಗಡೆ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಈ ಕಂತುಗಳಿಗೆ ಹಣಕಾಸು ಇಲಾಖೆಯಿಂದ ಈಗಾಗಲೇ ಅನುಮೋದನೆ ಲಭಿಸಿದೆ. ಮೊದಲ ಕಂತು ಒಂದು ವಾರದಲ್ಲಿ, ಎರಡನೇ ಕಂತು ಮುಂದಿನ ವಾರದಲ್ಲಿ ಹಾಗೂ ಮೂರನೇ ಕಂತು ತಿಂಗಳ ಅಂತ್ಯದೊಳಗೆ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ' ಎಂಬ ಭರವಸೆಯನ್ನು ನೀಡಿದ್ದಾರೆ. 

 

ಅರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://ahara.kar.nic.in/Home/EServices

ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ e-Ration Card ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ show village list ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಜಿಲ್ಲೆ,ತಾಲೂಕು,ಗ್ರಾಮ ಪಂಚಾಯತಿ,ಗ್ರಾಮ select ಮಾಡಿ,Go ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನ ಪಟ್ಟಿಯಲ್ಲಿರುವ(Gruhalakshmi list)ಅರ್ಹ ಗೃಹಿಣಿಯರಿಗೆ ಮಾತ್ರ ಗೃಹಲಕ್ಷ್ಮಿ ಹಣ(Gruhalakshmi amount) ಜಮಾ(dbt) ಆಗಲಿದೆ.

Gruhalakshmi status-ಗೃಹಲಕ್ಷ್ಮಿ ಇಲ್ಲಿಯವರೆಗೂ ಎಷ್ಟು ಕಂತಿನ ಹಣ ಜಮಾ ಆಗಿದೆ ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application ಡೌನ್ಲೊಡ್ ಮಾಡಿ,install ಮಾಡಿಕೊಳ್ಳಿ

https://play.google.com/store/apps/details?id=com.dbtkarnataka

ನಂತರ ನಿಮ್ಮ ಆಧಾರ್ ನಂಬರ್ ಹಾಕಿ Get OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Varify OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ

ನಂತರ payment status ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಇಲ್ಲಿಯವರೆಗೆ ಎಷ್ಟು ಗೃಹಲಕ್ಷ್ಮಿ(Gruhalakahmi) ಕಂತಿನ ಹಣ ಜಮಾ ಆಗಿದೆ ಎಂದು ತೋರಿಸುತ್ತದೆ.

Hi

]]>
Mon, 19 May 2025 18:22:13 +0530 shivuagrico
2019&20 ರಿಂದ 2023&24ರವರೆಗೆ ಬೆಳೆ ವಿಮೆ ಬಾಕಿ ಪಾವತಿ ವಿಫಲ ಪ್ರಕರಣಗಳ ಪಟ್ಟಿ ಬಿಡುಗಡೆ,ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಸರಿಪಡಿಸಿಕೊಂಡರೆ ಜಮಾ ಆಗಲಿದೆ ಹಣ&Belevime payment pending failed cases https://krushirushi.in/Belevime-pending-payment-failed-cases-2104 https://krushirushi.in/Belevime-pending-payment-failed-cases-2104 2019-20 ರಿಂದ 2023-24ರವರೆಗೆ ಬೆಳೆ ವಿಮೆ ಬಾಕಿ ಪಾವತಿ ವಿಫಲ ಪ್ರಕರಣಗಳ ಪಟ್ಟಿ ಬಿಡುಗಡೆ,ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಸರಿಪಡಿಸಿಕೊಂಡರೆ ಜಮಾ ಆಗಲಿದೆ ಹಣ-Belevime payment pending failed cases

ಹಾಗಾದರೆ ಆಧಾರ್ ಲಿಂಕ್ ಆಗದ ಪಟ್ಟಿಯಲ್ಲಿ(Aadhaar not linked farmers list) ನಿಮ್ಮ ಹೆಸರು ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://fruitspmk.karnataka.gov.in/MISReport/AadharNotSeededReport.aspx

ನಂತರ ನಿಮ್ಮ ಜಿಲ್ಲೆಯ ಹೆಸರಿನ ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ತಾಲೂಕಿನ ಹೆಸರಿನ ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಹೊಬಳಿ ಹೆಸರಿನ ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಗ್ರಾಮದ ಹೆಸರಿನ ಮೇಲೆ ಕ್ಲಿಕ್ ಮಾಡಿ

ಅದೇ ರೀತಿ ಎಲ್ಲಾ ಜಿಲ್ಲೆಗಳಲ್ಲೂ ಕೃಷಿ ಇಲಾಖೆಯಲ್ಲಿ ರೈತರ ಪಟ್ಟಿ ಲಭ್ಯವಿದೆ,ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಕೂಡಲೇ ಸಂಬಂಧಪಟ್ಟ ಬ್ಯಾಂಕ್ ಗಳಿಗೆ ಬೇಟಿ ಕೊಟ್ಟು ಆಧಾರ್ ಲಿಂಕ್ ಮಾಡಿಸಿದರೆ,ನಿಮ್ಮ ಖಾತೆಗೆ ಹಣ ಜಮಾ ಆಗಲಿದೆ

ಈ ಕೆಳಗಿನ pdf ಡೌನ್ಲೊಡ್ ಮಾಡಿಕೊಂಡು ನಿಮ್ಮ ಹೆಸರು ಚೆಕ್ ಮಾಡಿ

]]>
Mon, 19 May 2025 12:42:30 +0530 shivuagrico
Karnataka rain report&ಮುಂದಿನ 3 ದಿನ ಭಾರಿ ಮಳೆ, ಈ 14 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ https://krushirushi.in/Karnataka-rain-report https://krushirushi.in/Karnataka-rain-report Karnataka rain report-ಮುಂದಿನ 3 ದಿನ ಭಾರಿ ಮಳೆ, ಈ 14 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, 14 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.


ಇಂದು ಮತ್ತು ನಾಳೆ ತುಮಕೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಮೇ. 20, 21 ರಂದು ಬಾಗಲಕೋಟೆ, ಬೀದರ್, ಧಾರಾವಾಡ, ಗದಗ, ಹಾವೇರಿ ಹಾಗೂ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಿದೆ.

ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಕೊಪ್ಪಳ, ವಿಜಯಪುರ, ರಾಯಚೂರು ಜಿಲ್ಲೆಗಳಿಗೆ ಮುಂದಿನ ಎರಡೂರು ದಿನಕ್ಕೆ, ಕರಾವಳಿ ಜಿಲ್ಲೆಗಳಿಗೆ ಇಡೀ ವಾರಕ್ಕೆ ಯೆಲ್ಲೋ ಅಲರ್ಟ್‌ ಎಚ್ಚರಿಕೆ ನೀಡಲಾಗಿದೆ. ರಾಜ್ಯದಲ್ಲಿಮೇ23ರಿಂದಮಳೆ ಪ್ರಮಾಣಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಮೈಸೂರು, ಹಾಸನ, ಕೊಡಗು, ಬೆಳಗಾವಿ, ಬೀದರ್, ರಾಯಚೂರು, ಯಾದಗಿರಿ, ದಾವಣಗೆರೆ ಮತ್ತು ಚಿತ್ರದುರ್ಗ ಮುಂತಾದ ಸ್ಥಳಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ.

ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿರುವ ಇತ್ತೀಚಿನ ವರದಿ ಪ್ರಕಾರ, ರಾಜ್ಯದಲ್ಲಿ ಮೇ.22 ರವರೆಗೂ ಭಾರೀ ಮಳೆ ಸುರಿಯಲಿದೆ. ಶುಕ್ರವಾರ (ಮೇ.17) ಸಂಜೆಯ ನಂತರದಿಂದ ಮೇ.22ರ ತನಕ ಬಿರುಸಿನ ಮಳೆ ಹಲವೆಡೆ ಸುರಿಯಲಿದೆ ಎಂದು ತಿಳಿಸಲಾಗಿದೆ. ರಾಜ್ಯದ ಹಲವು ಜಿಲ್ಲೆಗಳಿಗೆ ವರುಣಾರ್ಭಟದ ಮುನ್ಸೂಚನೆಯನ್ನು ಇಲಾಖೆ ನೀಡಿದೆ.


ದಕ್ಷಿಣ ಕರ್ನಾಟದಲ್ಲಿ ಗುಡುಗು, ಸಿಡಿಲು ಸಹಿತ ಭಾರೀ ಗಾಳಿ ಮಳೆ ಸಂಭವಿಸಲಿದೆ ಎಂದು ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಈ ಜಿಲ್ಲೆಗಳಿಗೆ ಯೆ ಲೆಅಲರ್ಟ್ ಘೋಷಿಸಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಮೈಸೂರು, ಹಾಸನ, ಕೊಡಗು, ಬೆಳಗಾವಿ, ಬೀದ‌ರ್, ರಾಯಚೂರು ಯಾದಗಿರಿ, ದಾವಣಗೆರೆ, ಚಿತ್ರದುರ್ಗ ಮತ್ತು ಗಡಿಪ್ರದೇಶಗಳು ಯೆ ಅಲರ್ಟ್ ಗೆ ಒಳಪಟ್ಟಿವೆ.

]]>
Mon, 19 May 2025 06:25:49 +0530 shivuagrico
Ration card 2025&ಪಡಿತರ ಚೀಟಿದಾರರಿಗೆ ಮೇ 21ರಿಂದ ಹೊಸ ನಿಯಮ ಜಾರಿ,ರದ್ದಾಗಲಿವೆ ಇಂತವರ ಕಾರ್ಡಗಳು https://krushirushi.in/Ration-card-2025 https://krushirushi.in/Ration-card-2025 Ration card-ಪಡಿತರ ಚೀಟಿದಾರರಿಗೆ ಮೇ 21ರಿಂದ ಹೊಸ ನಿಯಮ ಜಾರಿ,ರದ್ದಾಗಲಿವೆ ಇಂತವರ ಕಾರ್ಡಗಳು


2025 ರಲ್ಲಿ ಭಾರತ ಸರ್ಕಾರ ಪಡಿತರ ಚೀಟಿಗೆ ಸಂಬಂಧಿಸಿದ ನಿಯಮಗಳಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಈ ಬಾರಿ ಸರ್ಕಾರದ ಮುಖ್ಯ ಉದ್ದೇಶವೆಂದರೆ ಉಚಿತ ಪಡಿತರವನ್ನು ನಿಜವಾಗಿಯೂ ಪಡೆಯಲು ಅರ್ಹರಾಗಿರುವ ಜನರಿಗೆ ಮಾತ್ರ ನೀಡಬೇಕು. ಕಳೆದ ಕೆಲವು ವರ್ಷಗಳಲ್ಲಿ, ಆರ್ಥಿಕ ಸ್ಥಿತಿ ಸದೃಢವಾಗಿರುವ ಅನೇಕ ಜನರು ಸಹ ಈ ಯೋಜನೆಯ ಲಾಭ ಪಡೆಯುತ್ತಿರುವುದು ಕಂಡುಬಂದಿದೆ.

ಈ ಕಾರಣಕ್ಕಾಗಿ, ಸರ್ಕಾರವು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಇದು ಮೇ 21, 2025 ರಿಂದ ಇಡೀ ದೇಶದಲ್ಲಿ ಜಾರಿಗೆ ಬರಲಿದೆ.

ಈ ಬದಲಾವಣೆಗಳ ನಂತರ, ಅನೇಕ ಜನರಿಗೆ ಉಚಿತ ಪಡಿತರ ಸೌಲಭ್ಯವನ್ನು ನಿಲ್ಲಿಸಬಹುದು. ವಿಶೇಷವಾಗಿ ಸರ್ಕಾರ ನಿಗದಿಪಡಿಸಿದ ಮಾನದಂಡಗಳಿಗಿಂತ ಹೆಚ್ಚಿನ ಆದಾಯ ಅಥವಾ ಆಸ್ತಿ ಹೊಂದಿರುವ ಜನರು. ಈ ನಿಯಮಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ (ಪಿಡಿಎಸ್) ಪಾರದರ್ಶಕತೆಯನ್ನು ತರುತ್ತವೆ ಮತ್ತು ಪ್ರಯೋಜನಗಳು ಸರಿಯಾದ ಜನರನ್ನು ತಲುಪುತ್ತವೆ ಎಂದು ಸರ್ಕಾರ ಹೇಳುತ್ತದೆ.

ಪ್ರಮುಖ ಬದಲಾವಣೆಗಳು

ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮಗಳು ಉಚಿತ ಪಡಿತರ ಪ್ರಯೋಜನಗಳು ಅಗತ್ಯವಿರುವವರಿಗೆ ಮಾತ್ರ ತಲುಪುವಂತೆ ನೋಡಿಕೊಳ್ಳುವ ಗುರಿಯನ್ನು ಹೊಂದಿವೆ. ಈ ಯೋಜನೆಯಿಂದ ಯಾವ ಜನರನ್ನು ಹೊರಗಿಡಲಾಗುತ್ತಿದೆ ಎಂಬುದನ್ನು ಕೆಳಗೆ ನೀಡಲಾದ ಅಂಶಗಳಲ್ಲಿ ತಿಳಿಯಿರಿ:

ಮಾಸಿಕ ಆದಾಯ 10,000 ರೂ.ಗಿಂತ ಹೆಚ್ಚಿರುವವರಿಗೆ ಇನ್ನು ಮುಂದೆ ಉಚಿತ ಪಡಿತರ ಸಿಗುವುದಿಲ್ಲ.
5 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವವರ ಹೆಸರನ್ನು ಫಲಾನುಭವಿ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ.
ನಗರ ಪ್ರದೇಶಗಳಲ್ಲಿ 1,000 ಚದರ ಅಡಿಗಿಂತ ದೊಡ್ಡ ಮನೆಗಳನ್ನು ಹೊಂದಿರುವವರಿಗೂ ಈ ಸೌಲಭ್ಯ ಸಿಗುವುದಿಲ್ಲ.
ಸರ್ಕಾರಿ ನೌಕರರನ್ನು ಹೊಂದಿರುವ ಕುಟುಂಬಗಳು ಇನ್ನು ಮುಂದೆ ಉಚಿತ ಪಡಿತರಕ್ಕೆ ಅರ್ಹರಾಗಿರುವುದಿಲ್ಲ.
ವಾರ್ಷಿಕ ಆದಾಯ 1.5 ಲಕ್ಷ ರೂ.ಗಿಂತ ಹೆಚ್ಚಿರುವವರು ಈಗ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಹೊಸ ನಿಯಮಗಳ ಉದ್ದೇಶ ಮತ್ತು ಪ್ರಯೋಜನಗಳು

ಸರ್ಕಾರ ಈ ಬದಲಾವಣೆಗಳನ್ನು ಏಕೆ ಮಾಡಿತು? ಇದಕ್ಕೆ ಪ್ರಮುಖ ಕಾರಣವೆಂದರೆ ಉಚಿತ ಪಡಿತರ ಪ್ರಯೋಜನಗಳು ಸರಿಯಾದ ಜನರನ್ನು ತಲುಪುತ್ತವೆ. ಇದನ್ನು ಹೊರತುಪಡಿಸಿ:

ಸಬ್ಸಿಡಿಯ ಸರಿಯಾದ ವಿತರಣೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.
ವಂಚನೆ ಮತ್ತು ಸುಳ್ಳು ಹಕ್ಕು ಸ್ಥಾಪನೆಗಳನ್ನು ನಿಷೇಧಿಸಬೇಕು.
ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿರುವವರು ಸ್ವಾವಲಂಬಿಗಳಾಗಬೇಕು.
ಸರ್ಕಾರಿ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು.
ಯೋಜನೆಯ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಹೆಚ್ಚಾಗಬೇಕು.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಫಲಾನುಭವಿಗಳನ್ನು ಸರಿಯಾಗಿ ಗುರುತಿಸಬೇಕು.

ಇವರ ಪಡಿತರ ಚೀಟಿ ರದ್ದು

ಯಾರ ಮಾಸಿಕ ಆದಾಯ ರೂ 10,000 ಕ್ಕಿಂತ ಹೆಚ್ಚು.
5 ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವವರು.
ಪಕ್ಕಾ ಮನೆ ಅಥವಾ 1,000 ಚದರ ಅಡಿಗಿಂತ ದೊಡ್ಡ ಮನೆ ಹೊಂದಿರುವವರು.
ಸರ್ಕಾರಿ ನೌಕರರಿರುವ ಕುಟುಂಬಗಳು.
ವಾರ್ಷಿಕ ಆದಾಯ 1.5 ಲಕ್ಷ ರೂ.ಗಿಂತ ಹೆಚ್ಚಿದ್ದರೆ.
2 ಹೆಕ್ಟೇರ್‌ಗಿಂತ ಹೆಚ್ಚು ನೀರಾವರಿ ಭೂಮಿ ಹೊಂದಿರುವವರು.

ಉಚಿತ ಪಡಿತರ ಯೋಜನೆಯ ಲಾಭ ಪಡೆಯುವುದು ಹೇಗೆ?
ಮೊದಲು, ನಿಮ್ಮ ಪಡಿತರ ಚೀಟಿಯ ಸಿಂಧುತ್ವವನ್ನು ಪರಿಶೀಲಿಸಿ.
ನಿಮ್ಮ ಎಲ್ಲಾ ದಾಖಲೆಗಳನ್ನು ನವೀಕರಿಸಿ - ಆಧಾರ್, ಆದಾಯ ಪ್ರಮಾಣಪತ್ರ, ಭೂ ಪತ್ರಗಳು ಮುಂತಾದವು.
ಅರ್ಹತೆ ಇದ್ದರೆ, ಹತ್ತಿರದ ಪಿಡಿಎಸ್ ಕೇಂದ್ರಕ್ಕೆ ಹೋಗಿ ಪಡಿತರ ಪಡೆಯಿರಿ.
ಪ್ರತಿ ವರ್ಷ ನಿಮ್ಮ ಮಾಹಿತಿಯನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಪರಿಶೀಲಿಸಿ.
ಅನರ್ಹರಾಗಿದ್ದರೆ, ಪ್ರಯೋಜನಗಳು ಸ್ವಯಂಚಾಲಿತವಾಗಿ ನಿಲ್ಲುತ್ತವೆ.

ಅರ್ಜಿ ಪ್ರಕ್ರಿಯೆಯ ಬದಲಾವಣೆಗಳು
2025 ರಿಂದ ಅರ್ಜಿ ಪ್ರಕ್ರಿಯೆಯು ಸಂಪೂರ್ಣವಾಗಿ ಡಿಜಿಟಲ್ ಆಗಿರುತ್ತದೆ:
ಹೊಸ ಪಡಿತರ ಚೀಟಿ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
ಎಲ್ಲಾ ದಾಖಲೆಗಳನ್ನು ಡಿಜಿಟಲ್ ಸ್ವರೂಪದಲ್ಲಿ ಅಪ್‌ಲೋಡ್ ಮಾಡಬೇಕು.
ಆಧಾರ್ ಆಧಾರಿತ ಪರಿಶೀಲನೆ ಅಗತ್ಯವಾಗುತ್ತದೆ.
ಅರ್ಜಿಯ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಬಹುದು.
ರಾಜ್ಯ ಬದಲಾದರೂ ಪಡಿತರ ಚೀಟಿ ವರ್ಗಾವಣೆ ಆನ್‌ಲೈನ್‌ನಲ್ಲಿಯೇ ನಡೆಯಲಿದೆ.
ಅನರ್ಹವೆಂದು ಕಂಡುಬಂದರೆ, ಕಾರ್ಡ್ ಸ್ವಯಂಚಾಲಿತವಾಗಿ ಅಳಿಸಲ್ಪಡುತ್ತದೆ.
ಉಚಿತ ಪಡಿತರ ಯೋಜನೆಯ ವಿತರಣಾ ಪ್ರಕ್ರಿಯೆ

ಪಡಿತರವನ್ನು ಪಿಡಿಎಸ್ ಕೇಂದ್ರದ ಮೂಲಕ ವಿತರಿಸಲಾಗುವುದು.

ಪ್ರತಿ ತಿಂಗಳು ಗೋಧಿ, ಅಕ್ಕಿ, ಬೇಳೆಕಾಳುಗಳು ಇತ್ಯಾದಿಗಳನ್ನು ನಿಗದಿತ ಪ್ರಮಾಣದಲ್ಲಿ ನೀಡಲಾಗುವುದು.
ಫಲಾನುಭವಿಯು ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ತೋರಿಸುವುದು ಕಡ್ಡಾಯವಾಗಿದೆ.
ವಿತರಣೆಯನ್ನು ಸಂಪೂರ್ಣವಾಗಿ ಡಿಜಿಟಲ್ ದಾಖಲೆಗಳೊಂದಿಗೆ ಮಾಡಲಾಗುತ್ತದೆ.

ಗ್ಯಾರಂಟಿ ಯೋಜನೆ ಫಲಾನುಭವಿಗಳನ್ನು ಕಡಿಮೆ ಮಾಡಲು 20 ಲಕ್ಷ ರೇಷನ್ ಕಾರ್ಡ್ ರದ್ದು,ಅನರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ-Cancelled suspended ration card list 

“ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ಕೈಬಿಟ್ಟು ಅರ್ಹ ಫಲಾನುಭವಿಗಳಿಗೆ ಬಿಪಿಎಲ್‌ ಕಾರ್ಡ್‌ಗಳನ್ನು ಒದಗಿಸಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಜನರನ್ನು ಅನಗತ್ಯವಾಗಿ ಅಲೆದಾಡಿಸಬಾರದು. ಅವರ ಸಮಸ್ಯೆ, ದೂರುಗಳನ್ನು ಆಲಿಸಿ ಅಗತ್ಯ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ.”
ಸಿದ್ದರಾಮಯ್ಯ, ಮುಖ್ಯಮಂತ್ರಿಗಳು

ಕಳೆದ ಜುಲೈ 8ರಂದು ವಿಧಾನಸೌಧದಲ್ಲಿ ರಾಜ್ಯದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸುವಂತೆ ಖಡಕ್ ಸೂಚನೆ ನೀಡಿದ್ದರು.


ರಾಜ್ಯದಲ್ಲಿ ಶೇ 80ರಷ್ಟು (1.27) ಬಿಪಿಎಲ್ ಕುಟುಂಬಗಳಿದ್ದು, 4.37 ಕೋಟಿ ಜನರು ಬಿಪಿಎಲ್ ಕಾರ್ಡ್ ಸೌಲಭ್ಯ ಪಡೆಯುತ್ತಿದ್ದಾರೆ. ಹೊಸ ಕಾರ್ಡ್‌ಳಿಗೆ ಸಲ್ಲಿಕೆಯಾದ 2.95 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು, ಅನರ್ಹ ಕಾರ್ಡ್ ರದ್ದುಗೊಳಿಸಿ ಅವುಗಳ ಬದಲಾಗಿ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥ ಮಾಡುವಂತೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಜಿಲ್ಲಾಧಿಕಾರಿಗಳು ಕಳೆದ ಆರು ತಿಂಗಳಲ್ಲಿ ಒಮ್ಮೆಯೂ ಪಡಿತರ ಪಡೆಯದ ಕುಟುಂಬಗಳನ್ನು ಪತ್ತೆ ಹಚ್ಚುವಂತೆ ಆಹಾರ ಮತು ನಾಗರಿಕ ಪೂರೈಕೆ ಇಲಾಖೆಗೆ ನಿರ್ದೇಶನ ನೀಡಿದ್ದು,20 ಲಕ್ಷಕ್ಕೂ ಅಧಿಕ ಅನರ್ಹ ಬಿಪಿಎಲ್ ಕಾರ್ಡ್ ರದ್ದು ಮಾಡಲು ಮುಂದಾಗಿದೆ.

ಅನರ್ಹ ಪಟ್ಚಿಯಲ್ಲಿ ನಿಮ್ಮ ಹೆಸರು ಹೀಗೆ ಚೆಕ್ ಮಾಡಿ

https://ahara.kar.nic.in/Home/EServices

ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ e-Ration Card ಮೇಲೆ ಕ್ಲಿಕ್ ಮಾಡಿ

ನಂತರ Show cancelled/suspended list ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಜಿಲ್ಲೆ,ತಾಲೂಕು,ತಿಂಗಳು,ವರ್ಷ select ಮಾಡಿ,Go ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಅನರ್ಹ ಪಟ್ಟಿ ಸಿಗಲಿದೆ,ಇದರಲ್ಲಿ ನಿಮ್ಮ ಹೆಸರಿದ್ದರೆ,ನಿಮಗೆ ಈ ತಿಂಗಳಿನಿಂದ ಅನ್ನಭಾಗ್ಯ ಹಾಗೂ ಗೃಹಲಕ್ಷ್ನಿ ಹಣ ಸಿಗುವುದಿಲ್ಲ

]]>
Sun, 18 May 2025 17:41:11 +0530 shivuagrico
Gruhajyothi&ಗೃಹಜ್ಯೋತಿ ಫಲಾನುಭವಿಗಳಿಗೆ ಸಿಹಿಸುದ್ದಿ,ಶೇಕಡಾ 10ರಷ್ಟು ಹೆಚ್ಚುವರಿ ಉಚಿತ ವಿದ್ಯುತ್ ಬಳಕೆಗೆ ಸರ್ಕಾರ ಆದೇಶ https://krushirushi.in/Gruhajyothi-2101 https://krushirushi.in/Gruhajyothi-2101 Gruhajyothi-ಗೃಹಜ್ಯೋತಿ ಫಲಾನುಭವಿಗಳಿಗೆ ಸಿಹಿಸುದ್ದಿ,ಶೇಕಡಾ 10ರಷ್ಟು ಹೆಚ್ಚುವರಿ ಉಚಿತ ವಿದ್ಯುತ್ ಬಳಕೆಗೆ ಸರ್ಕಾರ ಆದೇಶ

ಗೃ ಹಜ್ಯೋತಿ ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗೆ ಬಳಕೆಯ ಮಿತಿಯಲ್ಲಿ ಪ್ರತಿ ಗೃಹಬಳಕೆ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ(ಆರ್ಥಿಕ ವರ್ಷ 2022-23 ರ ಬಳಕೆಯ ಆಧಾರದನ್ವಯ) ಯೂನಿಟ್‌ಗಳ ಮೇಲೆ ಶೇ.10 ರಷ್ಟು ಹೆಚ್ಚಿನ ಬಳಕೆಯ ಮಿತಿಗೆ ಅನುಮತಿಸಿ, ಅದಕ್ಕನುಗುಣವಾಗಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ಒದಗಿಸಲು ಹಾಗೂ 200 ಯೂನಿಟ್‌ಗಳ ಬಳಕೆ ಮೀರಿದ ಗ್ರಾಹಕರು ಪೂರ್ಣ ವಿದ್ಯುತ್‌ ಬಿಲ್ಲನ್ನು ಪಾವತಿಸಲು ಸರ್ಕಾರ ಆದೇಶಿಸಿದೆ. 


ಈ ಯೋಜನೆಯಡಿ ಗ್ರಾಹಕರು https://sevasindhugs.Karnataka.gov.in/ ನೋಂದಾಯಿಸಿಕೊಳ್ಳಬೇಕು. 200 ಯೂನಿಟ್‌ಗಳ ಬಳಕೆಯನ್ನು ಮೀರಿದ ಗ್ರಾಹಕರು ಸಂಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಬೇಕು.ಉದಾಹರಣೆ: 20 ಯೂನಿಟ್ ವಿದ್ಯುತ್ ಬಳಕೆ ಮಾಡುವ ಗ್ರಾಹಕರು ಮಂಜೂರಾದ ಲೋಡ್‌ಗಿಂತ ಅಧಿಕ ವಿದ್ಯುತ್‌ ಬಳಕೆ ಮಾಡಿದಲ್ಲಿ ಜೆಸ್ಕಾಂನಿಂದ ನಿಯಮಾನುಸಾರ ದಂಡ ವಿಧಿಸಲಾಗುವುದು. 


ಆದ್ದರಿಂದ ಗ್ರಾಹಕರು ಹೆಚ್ಚಿನ ಲೋಡ್ ಅನ್ನು ಸಕ್ರಮಗೊಳಿಸಲು ಸಂಬಂಧಪಟ್ಟ ಜೆಸ್ಕಾಂ ಉಪ ವಿಭಾಗ ಕಚೇರಿಗಳಲ್ಲಿ ನೋಂದಾಯಿಸಿಕೊಳ್ಳಬೇಕು.

ಇದನ್ನೂ ಓದಿ

Gruhajyothi delink-ಮನೆ ಬದಲಾವಣೆ ಮಾಡಿದರೆ ಹಳೆ ಆರ್ ಆರ್ ನಂಬರ್ ಡಿಲಿಂಕ್ ಮಾಡಿ ಹೊಸ ಗೃಹಜ್ಯೋತಿ ಅರ್ಜಿ ಹಾಕುವ ಡೈರೆಕ್ಟ್ ಲಿಂಕ್ - https://krushirushi.in/Gruhajyothi-delink-1898 

Free electricity:ಕಳೆದ 12 ತಿಂಗಳ ಬಳಸಿದ ವಿದ್ಯುತ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್

https://hescom.karnataka.gov.in/ 

ಮುಖಪುಟದಲ್ಲಿರುವ ಆನ್ಲೈನ್ ಸೇವೆಗಳು ಕೆಳಗಡೆ ಆನ್ಲೈನ್ ವಿದ್ಯುತ್ ಬಿಲ್ ಪಾವತಿ ಮೇಲೆ ಕ್ಲಿಕ್ ಮಾಡಿ

ನಂತರ ಪಟ್ಟಣದ ಗ್ರಾಹಕರಾಗಿದ್ದರೆ ಆನ್ಲೈನ್ ವಿದ್ಯುತ್ ಬಿಲ್ ಪಾವತಿಗಾಗಿ ಇಲ್ಲಿ ಕ್ಲಿಕ್ ಮಾಡಿ(RAPDRP ಪಟ್ಟಣಗಳು) Select ಮಾಡಿ

ಗ್ರಾಮಾಂತರ ಗ್ರಾಹಕರಾಗಿದ್ದರೆ Non RAPDRP ಪಟ್ಟಣಗಳು ಮೇಲೆ ಕ್ಲಿಕ್ ಮಾಡಿ

ನಂತರ ಮೊದಲ ಬಾರಿ Register ಮಾಡುತ್ತಿದ್ದರೆ,click here to register ಮೇಲೆ ಕ್ಲಿಕ್ ಮಾಡಿ, ನಿಮ್ಮ ಇಮೇಲ್ ಐಡಿ, ಮೊಬೈಲ್ ನಂಬರ್ ಹಾಕಿ

ನಂತರ Use E-Mail address as user ID ಮೇಲೆ ಕ್ಲಿಕ್ ಮಾಡಿ, ನಿಮಗೆ ಬೇಕಾದ password create ಮಾಡಿ,Confirm password ಹಾಕಿ

ನಂತರ ನಿಮ್ಮ ಪಿನ್ ಕೊಡ್,ಜನ್ಮ ದಿನಾಂಕ,Security question select ಮಾಡಿ ಉತ್ತರವನ್ನು ಹಾಕಿ

ನಂತರ "I have read and agree to the terms and conditions" select ಮಾಡಿ,Register ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ "You have successfully registered" ಎಂಬ ಸಂದೇಶ ಕಾಣೆಸುತ್ತದೆ

ನಂತರ ನಿಮ್ಮ ಇ-ಮೇಲ್ ಐಡಿ ಹಾಗೂ create ಮಾಡಿದ password ಹಾಕಿ login ಮಾಡಿ

ನಂತರ My account ಕೆಳಗಡೆ Consumption calculator  ಮೇಲೆ ಕ್ಲಿಕ್ ಮಾಡಿ, From July-222 ರಿಂದ June-2023 ರವರೆಗೆ Select ಮಾಡಿ,Calculate usage ಮೇಲೆ ಕ್ಲಿಕ್ ಮಾಡಿ

 ನಂತರ Print view data ಮೇಲೆ ಕ್ಲಿಕ್ ಮಾಡಿದರೆ ನೀವು ಇಲ್ಲಿಯವರೆಗೂ ಬಳಸಿದ ವಿದ್ಯುತ್ ಹಾಗೂ ಕಟ್ಟಿದ ವಿದ್ಯುತ್ ಬಿಲ್ ನ ಮಾಹಿತಿ ದೊರೆಯಲಿದೆ.

ಸೂಚನೆ- ಇದರಲ್ಲಿ ಕಳೆದ 12 ತಿಂಗಳ (ಅಂದರೆ ಜುಲೈ-2022 ರಿಂದ ಜೂನ್-2023) ಬಿಲ್ ನ ಸರಾಸರಿ ಬಿಲ್ ಮೊತ್ತದ ಮೇಲೆ ಹೆಚ್ಚುವರಿ 10 ಯುನಿಟ್ ಉಚಿತವಾಗಿ ನೀಡಲಾಗುತ್ತದೆ.

]]>
Sun, 18 May 2025 05:54:05 +0530 shivuagrico
Karnataka rains&ಶನಿವಾರ,ಭಾನುವಾರ,ಸೋಮವಾರ ಈ 3 ದಿನ ಈ ಜಿಲ್ಲೆಗಳಲ್ಲಿ ಸುರಿಯಲಿದೆ ಭಾರಿ ಮಳೆ https://krushirushi.in/Karnataka-rains-2100 https://krushirushi.in/Karnataka-rains-2100 Karnataka rains-ಶನಿವಾರ,ಭಾನುವಾರ,ಸೋಮವಾರ ಈ 3 ದಿನ ಈ ಜಿಲ್ಲೆಗಳಲ್ಲಿ ಸುರಿಯಲಿದೆ ಭಾರಿ ಮಳೆ

ಹಲವೆಡೆ ಭಾರಿ ಮಳೆ ಸಾಧ್ಯತೆ 
ಬೆಂಗಳೂರು: ರಾಜ್ಯದಾದ್ಯಂತ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದ್ದು, ಭಾರಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ನಾಲ್ಕು ದಿನ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೊ ಅಲರ್ಟ್ ಘೋಷಿಸಿದೆ. 

ಬೀದರ್, ಕಲಬುರ್ಗಿ, ರಾಯಚೂರು, ವಿಜಯಪುರ, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಯ ಹಲವೆಡೆ ಶನಿವಾರ, ಬಿರುಗಾಳಿ, ಗುಡುಗು ಸಹಿತ ಮಳೆಯಾಗುವ ಸಂಭವ ಇದೆ ಎಂದು ಇಲಾಖೆ ತಿಳಿಸಿದೆ. 

ಬೆಂಗಳೂರು ನಗರ ಮತ್ತು ಗ್ರಾಮೀಣ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಬಳ್ಳಾರಿ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಭಾರಿ ಗಾಳಿಯೊಂದಿಗೆ (40-50 ಕಿ.ಮೀ ) ಗುಡುಗು ಸಹಿತ ಮಳೆಯಾಗುವ ಸಂಭವ ಇದೆ.

ಕರಾವಳಿ : ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂಜಾನೆಯಿಂದಲೇ ತೀರ ಭಾಗಗಳಲ್ಲಿ ಅಲ್ಲಲ್ಲಿ ಮುಂಗಾರು ರೀತಿಯ ಮಳೆಯಾಗುತ್ತಿದ್ದು, ಮಧ್ಯಾಹ್ನ ನಂತರ, ಸಂಜೆ, ರಾತ್ರಿ ವೇಳೆ ಇತರ ಭಾಗಗಳಲ್ಲಿಯೂ ಗುಡುಗು ಸಹಿತ ಅಲ್ಲಲ್ಲಿ ಮಳೆ ಮುಂದುವರಿಯುವ ಮುನ್ಸೂಚೆನೆ ಇದೆ. 

ಈಗಿನಂತೆ ಮುಂಗಾರು ರೀತಿಯ ಮಳೆ ಮುಂದುವರಿಯುವ ಲಕ್ಷಣಗಳಿವೆ. 

ಮಲೆನಾಡು : ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಮಧ್ಯಾಹ್ನ ನಂತರ, ಸಂಜೆ ಹಾಗೂ ರಾತ್ರಿ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. 
ಈಗಿನಂತೆ ಮುಂದಿನ 10 ದಿನಗಳವರೆಗೂ ಮಳೆ ಮುಂದುವರಿಯುವ ಲಕ್ಷಣಗಳಿವೆ. 

ಒಳನಾಡು : ಉತ್ತರ ಹಾಗೂ ದಕ್ಷಿಣ ಒಳನಾಡು ಬಹುತೇಕ ಭಾಗಗಳಲ್ಲಿಅ ಸಂಜೆ, ರಾತ್ರಿ ಗುಡುಗು, ಸಿಡಿಲು ಸಹಿತ ಮಳೆಯ ಮುನ್ಸೂಚೆನೆ ಇದೆ. ದಕ್ಷಿಣ ಒಳನಾಡು ಕೆಲವು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದೆ. 
ಈಗಿನಂತೆ ಮೇ 17ರಂದು ಸ್ವಲ್ಪ ಮಟ್ಟಿಗೆ ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾದರೂ ಮೇ 19ರಿಂದ ಉತ್ತಮ ಮಳೆಯ ನಿರೀಕ್ಷೆ ಇದೆ. 

 *ಮೇ 20ರ ಸುಮಾರಿಗೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಲಕ್ಷಣಗಳಿದ್ದು ಇದರಿಂದ ಮುಂಗಾರು ಆಗಮನ ವೇಗ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಮೇ 19ರಿಂದ ಕರಾವಳಿ ಜಿಲ್ಲೆಗಳಾದ್ಯಂತ ಉತ್ತಮ ಮಳೆಯ ನಿರೀಕ್ಷೆ ಇದೆ.*

ರಾಜ್ಯದಲ್ಲಿ ಐದು ದಿನಗಳವರೆಗಿನ ಮಳೆ ಮುನ್ಸೂಚನೆಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ ಡಿಎಂಸಿ) ಬಿಡುಗಡೆ ಮಾಡಿದೆ. ಹವಾಮಾನ ಇಲಾಖೆಯು ನೀಡಿರುವ ಮಾಹಿತಿಯಡಿ ಸಿದ್ಧಪಡಿಸಲಾಗಿರುವ ಈ ಪ್ರಕಟಣೆಯಲ್ಲಿ ಮಾ. 15ರಿಂದ 19ರವರೆಗಿನ ಅವಧಿಯಲ್ಲಿ ಕರ್ನಾಟಕದ ಯಾವ ಭಾಗದಲ್ಲಿ ಮಳೆಯಾಗಲಿದೆ ಎಂಬುದರ ಸಂಕ್ಷಿಪ್ತ ವಿವರಣೆಯನ್ನು ನೀಡಲಾಗಿದೆ.

ಪ್ರಕಟಣೆಯಲ್ಲಿ, “ರಾಜ್ಯದಾದ್ಯಂತ ಒಣ ಹವೆಯಿರುವ ಸಾದ್ಯತೆಯಿದ್ದು, ಮಾರ್ಚ್ 16 ಮತ್ತು 17 ರಂದು ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಅಲ್ಲಲ್ಲಿ ಸಾಧಾರಣ ಮಳೆ, ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರ ಪರಿಸ್ಥಿತಿಗಳು ಹೆಚ್ಚಾಗಿರೋ ಸಾಧ್ಯತೆಯಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆಯುವ ಸಾಧ್ಯತೆಯಿದೆ’’ ಎಂದು ತಿಳಿಸಲಾಗಿದೆ.

ಹಾಗಾದರೆ ಎಲ್ಲೆಲ್ಲಿ ಮಳೆ?

ಪ್ರಕಟಣೆಯೊಂದಿಗೆ, ಮಳೆ ಬೀಳಬಹುದಾದ ಪ್ರದೇಶಗಳ ಜಿಲ್ಲಾವಾರು ಮ್ಯಾಪ್ ಬಿಡುಗಡೆ ಮಾಡಿರುವ ಕೆಎಸ್ಎನ್ ಡಿಎಂಸಿ, ಎಲ್ಲೆಲ್ಲಿ ಮಳೆ ಬೀಳಬಹುದು, ಉಷ್ಣಾಂಶ ಎಷ್ಟಿರಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದೆ. ಅದರಲ್ಲಿರುವಂತೆ, ಮಾ. 15 - 16ರ ನಡುವೆ, ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಸುಮಾರು 2.5 ಮಿ.ಮೀ.ನಿಂದ 7.5 ಮಿ.ಮೀ.ವರೆಗೆ ಮಳೆ ಸುರಿಯುವ ಸಾಧ್ಯತೆಗಳಿವೆ. ಇನ್ನು, ಹಾಸನ ಜಿಲ್ಲೆಯ ಪಶ್ಚಿಮ ಭಾಗ, ದಕ್ಷಿಣ ಕನ್ನಡ ಜಿಲ್ಲೆಯ ಪೂರ್ವ ಭಾಗ, ಚಿಕ್ಕಮಗಳೂರು ಜಿಲ್ಲೆಯ ದಕ್ಷಿಣ ಭಾಗಗಳಲ್ಲಿ ಶಿವಮೊಗ್ಗ ಜಿಲ್ಲೆಯ ಪೂರ್ವ, ಮಧ್ಯ ಹಾಗೂ ದಕ್ಷಿಣ ಭಾಗಗಳಲ್ಲಿ ಮಳೆಯಾಗಲಿದೆ. ಸೆ. 17-18ರಂದು ಹಾಸನದ ನೈಋತ್ಯ ದಿಕ್ಕಿನಲ್ಲಿ, ಹಾಸನ - ದಕ್ಷಿಣ ಕನ್ನಡದ ಗಡಿಭಾಗದ ಕೆಲವು ಹಳ್ಳಿಗಳಲ್ಲಿ ಮಳೆಯಾಗುತ್ತದೆ. ಅಲ್ಲಿ ಬಿಟ್ಟರೆ ಮತ್ತೆಲ್ಲೂ ಮಳೆಯಾಗುವುದಿಲ್ಲ. ಮಾ. 18-19ರವರೆಗೂ ಎಲ್ಲೂ ಮಳೆಯಾಗುವುದಿಲ್ಲ.

ಉಷ್ಣಾಂಶ ಹೇಗೆ?

ಮಾ. 15 - 16ರಂದು ರಾಜ್ಯಾದ್ಯಂತ ಉಷ್ಣಾಂಶ ಸಾಧಾರಣ ಮಟ್ಟದಲ್ಲಿರುತ್ತದೆ. ಕರಾವಳಿಯಲ್ಲಿ 32ರಿಂದ 34 ಡಿಗ್ರಿ ವರೆಗೆ ಬಿಸಿ ಏರಬಹುದು. ಉತ್ತರ ಕರ್ನಾಟಕದ ಅದರಲ್ಲೂ ವಿಶೇಷವಾಗಿ ಹೈದರಾಬಾದ್ ಕರ್ನಾಟಕದಲ್ಲಿ 36 ಡಿಗ್ರಿಯಿಂದ 40 ಡಿಗ್ರಿ ತಾಪಮಾನ ಇರಲಿದೆ. ಮಧ್ಯ ಕರ್ನಾಟಕದಲ್ಲಿ ಉತ್ತರದ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ವಿಜಯನಗರ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ, 34ರಿಂದ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡಗು, ಹಾಸನ, ಮೈಸೂರು, ಬೆಂಗಳೂರು, ಬೆಂಗೆಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯದಲ್ಲಿ 34ರಿಂದ 36 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹೇಳಲಾಗಿದೆ. ಚಾಮರಾಜನಗರದಲ್ಲಿ 32ರಿಂದ 34 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ತಿಳಿಸಲಾಗಿದೆ.

]]>
Sat, 17 May 2025 19:45:36 +0530 shivuagrico
FID&ಸರ್ಕಾರದ ಸಬ್ಸಿಡಿ ಸವಲತ್ತು,ಬೆಳೆಸಾಲ ಹಾಗೂ ಬೆಳೆವಿಮೆಗೆ ಎಫ್ ಐಡಿ ಕಡ್ಡಾಯ,ಆಧಾರ್ ನಂಬರ್ ಹಾಕಿ ನಿಮ್ಮ FID  ತಿಳಿದುಕೊಳ್ಳಿ https://krushirushi.in/FID-2099 https://krushirushi.in/FID-2099 FID-ಸರ್ಕಾರದ ಸಬ್ಸಿಡಿ ಸವಲತ್ತು,ಬೆಳೆಸಾಲ ಹಾಗೂ ಬೆಳೆವಿಮೆಗೆ ಎಫ್ ಐಡಿ ಕಡ್ಡಾಯ,ಆಧಾರ್ ನಂಬರ್ ಹಾಕಿ ನಿಮ್ಮ FID  ತಿಳಿದುಕೊಳ್ಳಿ

ಬೆಳೆ ಸಾಲ ಪಡೆಯುವ ಸಮಯ ಇದು ಈ ಸಲ ಬೆಳೆ ಸಾಲ ಪಡೆಯಲು ಫ್ರೂಟ್ಸ್ ನಲ್ಲಿ ನೋಂದಣಿ ಮಾಡಿಸಿಕೊಂಡಿರುವುದು ಕಡ್ಡಾಯವಾಗಿದೆ. ಫ್ರೂಟ್ಸ್ (FID)ಎಂದರೆ ಫಾರ್ಮರ್ ರಿಜಿಸ್ಟ್ರೇಷನ್ ಅಂಡ್ ಯೂನಿಫೈಡ್ ಬೆನಿಫಿಷಿಯರಿ ಇನ್ಫಾರ್ಮಶನ್ ಸಿಸ್ಟಮ್. ಇದು ಕೃಷಿ ಇಲಾಖೆಗೆ ಸಂಬಂಧಿಸಿದ ಕೃಷಿಕರ ಮಾಹಿತಿಗಳನ್ನು ಒಂದೇ ಸೂರಿನಡಿ ಹಿಡಿದಿಟ್ಟುಕೊಳ್ಳುವ ಪೋರ್ಟಲ್. ಇದರ ಮೂಲಕ ಕೃಷಿಕರು ಹಲವು ಪ್ರಯೋಜನ ಪಡೆಯಬಹುದಾಗಿದೆ ರಾಜ್ಯ ಸರ್ಕಾರದ ಆದೇಶದಂತೆ ಈ ವೆಬ್ ಪೋರ್ಟಲ್ ನಲ್ಲಿ ಎಲ್ಲ ತರಹದ ವಾಣಿಜ್ಯ ಬೆಳೆ ಆಹಾರ ಬೆಳೆಯನ್ನು ಒಳಗೊಂಡ ಎಲ್ಲ ವರ್ಗದ ಕೃಷಿಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯ.

 ಏನಿದು ಫ್ರೂಟ್ಸ್ ನಂಬರ್


 ಕೃಷಿಕ ತಮ್ಮ ಕೃಷಿ ಜಮೀನಿನ ಮಾಹಿತಿಯನ್ನು ಈ ಪೋರ್ಟಲ್ ನಲ್ಲಿ ನೋಂದಾಯಿಸಿದಾಗ ಆತನಿಗೆ FID( ಫಾರ್ಮರ್ ಐಡೆಂಟಿಟಿ) ನಂಬರ್ ದೊರೆಯುತ್ತದೆ. ಹೇಗೆ ಒಬ್ಬ ವ್ಯಕ್ತಿಗೆ ಆಧಾರ್ ಗುರುತಿನ ಚೀಟಿಯಾಗಿದೆಯೋ ಅಂತೆಯೇ ಕೃಷಿಕನಿಗೆ FID ಗುರುತಿನ ಚೀಟಿ ಇದ್ದಂತೆ. ಇದು ಕೃಷಿಕನ ಜಾಗದ ವಿವರ ಹಾಗೂ ತಾನು ಬೆಳೆದ ಬೆಳೆಗಳ ವಿವರವನ್ನು ಒಳಗೊಂಡ ಪೋರ್ಟಲ್ ಆಗಿದೆ. ಸರ್ಕಾರದಿಂದ ದೊರೆಯುವ ಕೃಷಿ ಸೌಲಭ್ಯ ಪಡೆದುಕೊಳ್ಳಲು ಕೃಷಿಕ ಇಲ್ಲಿ ಮಾಹಿತಿ ನೋಂದಾಯಿಸಿಕೊಳ್ಳಬೇಕಿದೆ.



ನಿಮ್ಮ FID ತಿಳಿದುಕೊಳ್ಳಲು ಮೊದಲು ಈ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ

https://fruitspmk.karnataka.gov.in/MISReport/GetDetailsByAadhaar.aspx 

ನಂತರ ನಿಮ್ಮ ಆಧಾರ್ ನಂಬರ್ ಹಾಕಿ,search ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ನಿಮ್ಮ FID ದೊರೆಯಲಿದೆ.

FID-ನಿಮ್ಮ ಮೊಬೈಲ್ ನಲ್ಲೇ FID ನೊಂದಣೆ ಮಾಡುವುದು ಹೇಗೆ?

 ಸಮೀಪದ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ರೇಷ್ಮೆ ಇಲಾಖೆ, ಪಶುಸಂಗೋಪನ ಇಲಾಖೆ,ಕಂದಾಯ ಇಲಾಖೆಗಳ ಪೈಕಿ ಯಾವುದಾದರೂ ಒಂದು ಇಲಾಖೆಗೆ ಭೇಟಿ ನೀಡಿ ಕೃಷಿಕನ RTC ಉತಾರ, ಆಧಾರ್ ಕಾರ್ಡ, ರಾಷ್ಟೀಕೃತ ಬ್ಯಾಂಕ್‍ನ ಪಾಸ್ ಬುಕ್ ಪ್ರತಿ, ಪಾಸ್ ಪೋರ್ಟ್ ಅಳತೆಯ ಫೋಟೋ,ಮೊಬೈಲ್ ನಂಬರ್ ನೀಡಿದರೆ 24 ಗಂಟೆಯೊಳಗೆ ನಿಮ್ಮ ಹೆಸರು ಪೋರ್ಟಲ್ ನಲ್ಲಿ ಸೇರ್ಪಡೆಗೊಳ್ಳುತ್ತದೆ.

 ಏಕೆ ನೋಂದಾಯಿಸಬೇಕು?


 ಸರ್ಕಾರದ ಆದೇಶದಂತೆ ಈ ಪೋರ್ಟಲ್ಲಿ ಕೃಷಿಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳದೆ ಇದ್ದರೆ ಆತನಿಗೆ ಬೆಳೆ ಸಾಲ, ಬೆಳೆ ವಿಮೆ,ಕೃಷಿಕನ ಮಕ್ಕಳಿಗೆ ಸಿಗುವ ವಿದ್ಯಾನಿಧಿ, ಕೃಷಿಗೆ ಪೂರಕವಾದ ಇತರೆ ಸೌಲಭ್ಯಗಳು ದೊರೆಯುವುದಿಲ್ಲ. ಈಗಾಗಲೇ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಘೋಷಿಸಿದಂತೆ ರೈತ ಶಕ್ತಿ ಯೋಜನೆ ಅಡಿ ಪ್ರತಿಯೊಬ್ಬ ಕೃಷಿಕನಿಗೆ ಒಂದು ಎಕರೆಗೆ 250 ನಂತೆ ಗರಿಷ್ಠ 5 ಎಕರೆಗೆ 1,250 ಇಂಧನ ವೆಚ್ಚ ಕೃಷಿಕನ ಖಾತೆಗೆ ನೇರ ಜಮೆಗೊಳ್ಳಲಿದೆ. ಎಲ್ಲಾ ದಾಖಲೆಗಳಿದ್ದರೂ ಫ್ರೂಟ್ಸ್ ಪೋರ್ಟಲ್  ನಲ್ಲಿ ಹೆಸರು ನಮೂದಿಸದಿದ್ದರೆ ಸರ್ಕಾರದಿಂದ ಪಡೆಯುವ ಎಲ್ಲಾ ಸೌಲಭ್ಯಗಳಿಂದ ವಂಚಿತನಾಗುತ್ತಾನೆ.ಅದಕ್ಕಾಗಿ ಕೂಡಲೇ ಫ್ರೂಟ್ಸ್ ಪೋರ್ಟಲ್ ನಲ್ಲಿ ನಿಮ್ಮ ಹೆಸರು ನೊಂದಾಯಿಸಿಕೊಂಡು,ನಿಮ್ಮ FID ಪಡೆದುಕೊಳ್ಳಿ ಹಾಗೂ ಅದನ್ನು ಸರ್ಕಾರದ ಸೌಲತ್ತು ಪಡೆಯಲು ಬಳಸಿ


ನಿಮ್ಮ ಮೊಬೈಲ್ ನಲ್ಲೇ FID ನೊಂದಣೆ ಮಾಡುವುದು ಹೇಗೆ?

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://fruits.karnataka.gov.in/OnlineUserLogin.aspx 

ನಂತರ ಈ ಕೆಳಗಿನಂತೆ ಪೇಜ್ ತೆರೆದುಕೊಳ್ಳುತ್ತದೆ."Citizen Registration" ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಆಧಾರ ಕಾರ್ಡ್ ನಲ್ಲಿರುವಂತೆ ಹೆಸರು,ಆಧಾರ್ ನಂಬರ್ ಹಾಕಿ,I agree ಮೇಲೆ ಟಿಕ್ ಮಾಡಿ Submit ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ನಂಬರ್, ಇಮೆಲ್ ಐಡಿ ಹಾಕಿ,Proceed ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Submit ಮೇಲೆ ಕ್ಲಿಕ್ ಮಾಡಿ

ನಂತರ Password create ಮಾಡಿ,ಲಾಗಿನ್ ಆಗಿ ಅಗತ್ಯ ಮಾಹಿತಿ ಭರ್ತಿ ಮಾಡಿದರೆ ನಿಮ್ಮ FID ಸಿಗಲಿದೆ.

ಹೀಗೆ ಸೃಜಿಸಲಾದ FID ಯನ್ನು ಕೃಷಿ ಇಲಾಖೆ,ರೇಷ್ಮೆ ಇಲಾಖೆ,ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪರೀಶಿಲಿಸಿ Approve ಕೊಡಬೇಕು.

ಈ FID ಯನ್ನು ಪಿಎಂಕಿಸಾನ್,ಬೆಳೆಸಾಲ,ಬೆಳೆವಿಮೆ ಹಾಗೂ ಸರ್ಕಾರದ ಸವಲತ್ತು ಪಡೆಯಲು ಬಳಸಬಹುದು

]]>
Sat, 17 May 2025 06:13:51 +0530 shivuagrico
Kruthika male nakshatra&ಮೇ 24 ರವರೆಗೆ ಕೃತಿಕಾ ಮಳೆ,ಕೃತಿಕಾ ಮಳೆ ಕಿರುಬನ ಹಿಡಿದಂತೆ https://krushirushi.in/Kruthika-male-nakshatra-2098 https://krushirushi.in/Kruthika-male-nakshatra-2098 Male nakshatragalu-2025ನೇ ಸಾಲಿನ ಮಳೆ ನಕ್ಷತ್ರಗಳು,ಮಳೆ ದಿನಾಂಕ ಹಾಗೂ ಗಾದೆಮಾತುಗಳು


2025 ನೇ ಸಾಲಿನ ಮಳೆ ನಕ್ಷತ್ರಗಳು(Male nakshatragalu)

1.ಅಶ್ವಿನಿ-

ದಿನಾಂಕ-14-4-2025

ಸಾಮಾನ್ಯ ಮಳೆ

ಗಾದೆ-ಅಶ್ವಿನಿ ಮಳೆ ಬಿದ್ದರೆ ಅರಿಶಿಣಕ್ಕೆ ಮೇಲು, ಅಶ್ವೀನಿ ಸನ್ಯಾಸಿನೀ,

2.ಭರಣಿ

ದಿನಾಂಕ-28-4-2025

ಸಾಮಾನ್ಯ ಮಳೆ

ಗಾದೆ-ಭರಣಿಯಲ್ಲಿ ಮಳೆಯಾದರೆ ಧರಣಿಯೆಲ್ಲಾ ಬೆಳೆ,ಭರಣಿ ಸುರಿದರೆ ಧರಣಿ ಬದುಕೀತು

3.ಕೃತಿಕಾ

Kruthika male nakshatra-ಮೇ 24 ರವರೆಗೆ ಕೃತಿಕಾ ಮಳೆ,ಕೃತಿಕಾ ಮಳೆ ಕಿರುಬನ ಹಿಡಿದಂತೆ

ದಿನಾಂಕ-11-5-2025 ರಿಂದ 24.05.2025

ಸಾಮಾನ್ಯ ಮಳೆ

ಗಾದೆ-ಕೃತಿಕ ನಕ್ಷತ್ರ ಕಾದರೆ ಗದ್ದೆಗೆ ಒಳ್ಳೆಯದು

4.ರೋಹಿಣಿ-

ದಿನಾಂಕ-25-5-2025

ಉತ್ತಮ ಮಳೆ

 ಗಾದೆ-ರೋಹಿಣಿ ಮಳೆ ಓಣಿಯೆಲ್ಲಾ ಕೆಸರು

5.ಮೃಗಶಿರ

ದಿನಾಂಕ-ಜೂನ್ 8 ರಿಂದ ಜೂನ್ 21ರವರೆಗೆ

ಉತ್ತಮ ಮಳೆ

ಗಾದೆ-ಮೃಗಶಿರೆಯಲ್ಲಿ ಮಿಸುಕಾಡದೆ ನೆರೆ ಬಂತು

6.ಆರಿದ್ರಾ

ದಿನಾಂಕ(ಜೂನ್ 22 ರಿಂದ ಜುಲೈ 4ರವರೆಗೆ)

ಉತ್ತಮ ಮಳೆ

ಗಾದೆ-ಆರಿದ್ರಾ ಮಳೆ ಆಗದೆ ಗುಡುಗಿದರೆ ಆರು ಮಳೆ ಆಗಲ್ಲ, ಆರಿದ್ರಾ ಮಳೆ ಆರದೆ ಹುಯ್ಯುತ್ತೇ, ಆರಿದ್ರಾ ಇಲ್ಲದಿದ್ದರೆ ದರಿದ್ರ ಖಂಡಿತ, ಅಮ್ಮನ ಮನಸ್ಸು ಬೆಲ್ಲದ ಹಾಗೆ, ಆರಿದ್ರಾ ಹನಿ ಕಲ್ಲಿನ ಹಾಗೆ.

7.ಪುನರ್ವಸು

ದಿನಾಂಕ-6-7-2025

ಉತ್ತಮ ಮಳೆ

ಗಾದೆ: ಪುನವ೯ಸು ಮಳೆ ಬಂದು ಪಂಚಾಂಗ ಓದಾಯ್ತು, ಎಳೆ ಕರು ರಾಸಾಯ್ತು. 

8.ಪುಷ್ಯ

ದಿನಾಂಕ-20-7-2025

ಉತ್ತಮ ಮಳೆ

ಗಾದೆ: ಪುಷ್ಯ ಮಳೆ ಭಾಷೆ ಕೂಟ್ಟ ಮಳೆ (ತಪ್ಪಿಸುವುದಿಲ್ಲ)  ಪುಷ್ಯದಲಿ ನೆಟ್ಟ ಗಿಡ ಪುಟುಗೋಸಿ ಆದೀತು.

9.ಆಶ್ಲೇಷ

ದಿನಾಂಕ-ಆಗಸ್ಟ್ 3 ರಿಂದ ಆಗಸ್ಟ್ 15ರವರೆಗೆ

ಗಾದೆ-ಆಶ್ಲೆ ಮಳೆ ಭೂಮಿ ಹಸ್ರುಗಟ್ಟಂಗೆ ಹುಯ್ತದೆ, ಅಸಲೆ ಮಳೆ ಕೈತುಂಬಾ ಬೆಳೆ, ಅಸಲೆ ಮಳೆ ಬಿದ್ದು ಸಸಿಲೆ(ಸಣ್ಣ ಮೀನು) ಬೆಟ್ಟಕ್ಕೇರಿತು

10.ಮಘ

ದಿನಾಂಕ-ಆಗಸ್ಟ್ 17 ರಿಂದ ಆಗಸ್ಟ್ 29ರವರೆಗೆ

ಉತ್ತಮ ಮಳೆ

ಗಾದೆ-ಬಂದರೆ ಮಗೆ ಹೋದರೆ ಹೊಗೆ, ಬಂದರೆ ಮಘೆ ಇಲ್ಲದಿದ್ದರೆ ಧಗೆ, ಮಘೆ ಮಳೆ ಬಂದಷ್ಟು ಒಳ್ಳೇದು, ಮನೆಮಗ ಉಂಡಷ್ಟು ಒಳ್ಳೇದು.

11.ಹುಬ್ಬ

ದಿನಾಂಕ-31-8-2025

ಉತ್ತಮ ಮಳೆ

ಗಾದೆ-ಹುಬ್ಬೆ ಮಳೇಲಿ ಹುಬ್ಬೆತ್ತಕ್ಕೂ ಆಗಲ್ಲ.  ಹುಬ್ಬೆ ಮಳೆ ಅಬ್ಬೇ ಹಾಲು ಉಂಡಂತೆ

12.ಉತ್ತರ

ದಿನಾಂಕ-13-09-2025

ಉತ್ತಮ ಮಳೆ

ಗಾದೆ-ಉತ್ತರಿ ಮಳೆ ಹುಯ್ದರೆ ಹೆತ್ತಮ್ಮನೂ ಆಗೋಲ್ಲ. ಉತ್ತರ ಎದುರುತ್ತರದ ಮಳೆ

13.ಹಸ್ತ

ದಿನಾಂಕ-27-9-2025

ಉತ್ತಮ ಮಳೆ

14.ಚಿತ್ತ

ದಿನಾಂಕ-11-10-2025

ಉತ್ತಮ ಮಳೆ

ಗಾದೆ-ಕುರುಡು ಚಿತ್ತೆ ಎರಚಿದತ್ತ ಬೆಳೆ.

15.ಸ್ವಾತಿ

ದಿನಾಂಕ-24-10-2025

ಉತ್ತಮ ಮಳೆ

ಗಾದೆ-ಸ್ವಾತಿ ಮಳೆ ಮುತ್ತಿನ ಬೆಳೆ.

16.ವಿಶಾಖ

ದಿನಾಂಕ-6-11-2025

ಉತ್ತಮ ಮಳೆ

ಗಾದೆ-ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ.

ಎಲ್ಲ ರೈತಬಾಂದವರಿಗೂ ನಮಸ್ಕಾರ
ರೈತರಿಗೆ ಕೃಷಿ ಸಂಬಂದಿತ ಮಾಹಿತಿಯನ್ನು ವೀಡಿಯೋ ಮೂಲಕ ತಿಳಿಸಲು Krushi Rushi ಎಂಬ ಯೂಟೂಬ್ ಚಾನೆಲ್ https://youtu.be/vVbsb6q_eqs  ಪ್ರಾರಂಭಿಸಿದ್ದು,ಚಾನಲ್ subscribe ಮಾಡಿ ಮತ್ತು ಕೃಷಿ ಸಂಬಂದಿತ ಲೇಖನಗಳ ಮೂಲಕ ತಿಳಿಸಲು www.krushirushi.in  website ಪ್ರಾರಂಬಿಸಿದ್ದು, ರೈತರು ಅದರ ಪ್ರಯೋಜನ ಪಡೆಯಲು  ಈ ಕೆಳಗಿನ ಲಿಂಕ್ ಮೂಲಕ Whats app ನಲ್ಲಿ ಜಿಲ್ಲಾವಾರು Krushi Rushi group ಸೇರಬೆಕೆಂದು ಈ ಮೂಲಕ ವಿನಂತಿಸುಕೊಳ್ಳುತ್ತೇನೆ.     

https://krushirushi.in/contact-us


ಇಂತಿ ನಿಮ್ಮ  

ಶಿವನಗೌಡ ಪಾಟೀಲ  

M.Sc(ಕೃಷಿ), ಕೀಟಶಾಸ್ತ್ರ

]]>
Fri, 16 May 2025 20:02:54 +0530 shivuagrico
Karnataka rains&ಮೇ 21 ರವರೆಗಿನ ಜಿಲ್ಲಾವಾರು ಮಳೆ ಮಾಹಿತಿ https://krushirushi.in/Karnataka-rains-2097 https://krushirushi.in/Karnataka-rains-2097 Karnataka rains-ಮೇ 21 ರವರೆಗಿನ ಜಿಲ್ಲಾವಾರು ಮಳೆ ಮಾಹಿತಿ

ಮೇ 16ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ (Karnataka Rains) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ 3 ದಿನಗಳ ಕಾಲ ಕರಾವಳಿ ಕರ್ನಾಟಕದಾದ್ಯಂತ ಮಳೆ ಹೆಚ್ಚಾಗಲಿದ್ದು, ಒಳನಾಡಿನ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 5 ದಿನಗಳವರೆಗೆ ಕರ್ನಾಟಕದಾದ್ಯಂತ ಗರಿಷ್ಠ ತಾಪಮಾನದಲ್ಲಿ ಇಳಿಕೆಯ ಪ್ರವೃತ್ತಿಯೊಂದಿಗೆ ದೊಡ್ಡ ಬದಲಾವಣೆಗಳಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಂಜೆ ವೇಳೆಗೆ ಮೋಡ ಕವಿದ ವಾತಾವರಣವಿರುತ್ತದೆ. ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 31°C ಮತ್ತು 20°C ಇರುವ ಸಾಧ್ಯತೆ ಇದೆ.

ಮೇ 17ರಂದು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಯಲ್ಲಿ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಗಾಳಿ ಬೀಸುವ ಸಾಧ್ಯತೆ ಇದೆ.

ಮೇ 18ರಂದು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ವಿಜಯಪುರ ಜಿಲ್ಲೆ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಗಾಳಿ ಬೀಸುವ ಸಾಧ್ಯತೆ ಇದೆ.

ಮೇ 19ರಂದು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಉತ್ತರ ಒಳನಾಡಿನ ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಬೀದರ್‌, ಕಲಬುರಗಿ, ರಾಯಚೂರು, ವಿಜಯಪುರ ಹಾಗೂ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಮೇ 20 ಮತ್ತು 21ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಉತ್ತರ ಒಳನಾಡಿನ ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಬಹುತೇಕ ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

]]>
Fri, 16 May 2025 05:51:25 +0530 shivuagrico
ಉಚಿತ ಊಟ ವಸತಿಯೊಂದಿಗೆ 13 ದಿನಗಳ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ತರಬೇತಿ&Free dairy and vermicompost training https://krushirushi.in/Free-dairy-and-vermicompost-training-2096 https://krushirushi.in/Free-dairy-and-vermicompost-training-2096 ಉಚಿತ ಊಟ ವಸತಿಯೊಂದಿಗೆ 13 ದಿನಗಳ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ತರಬೇತಿ-Free dairy and vermicompost training

ತರಭೇತಿ ಸ್ಥಳ

ರುಡ್‌ಸೆಟ್ ಸಂಸ್ಥೆ, ಧಾರವಾಡ 
Rural Development & Self Employment Training Institute, (RUDSET Institute) 
ಗಾಂಧಿನಗರ, ಧಾರವಾಡ-580 004 
Sponsors: SDME Trust & Canara Bank 
Phone: 9008448518 
ಉಚಿತ 13 ದಿನಗಳ 
ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ತರಬೇತಿ 


ಡಾ. ಡಿ. ವೀರೇಂದ್ರ ಹೆಗ್ಗಡೆ 
ಅಧ್ಯಕ್ಷರು, ರುಡ್‌ಸೆಟ್ ಸಂಸ್ಥೆಗಳು, ಧರ್ಮಸ್ಥಳ 

ತರಭೇತಿ ದಿನಾಂಕ
25-05-2025 80 06.06.2025 


ತರಬೇತಿಗೆ ಸೇರಬಯಸುವವರು 
1. ಅಭ್ಯರ್ಥಿಯು ಗ್ರಾಮೀಣ ಭಾಗದ ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ ಹೊಂದಿರಬೇಕು ಅಥವಾ ಎನ್‌ಆರ್‌ಇಜಿ ಕಾರ್ಡ ಹೊಂದಿರಬೇಕು. 
2. 19 ರಿಂದ 45 ವಯಸ್ಸಿನ ಒಳಗಿರಬೇಕು. 
3. ಈ ತರಬೇತಿ ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದೆ. 
ಹೆಸರು ನೋಂದಾಯಿಸಲು ಈ ಮೋಬೈಲ್ ನಂಬರ್ ಗೆ ಫೋನ್ ಮಾಡಿ 
9008448518 & 9743186978 
ಫೋನ್ ಮಾಡುವ ಸಮಯ ಮುಂಜಾನೆ 10 ರಿಂದ ಸಂಜೆ 6 ರ ವರೆಗೆ

ತರಬೇತಿಯಲ್ಲಿ ಕಲಿಸುವ ವಿಷಯಗಳು:: 
1. ಹೈನುರಾಸುಗಳ ತಳಿಗಳು (Dairy breeds)
2. ರೋಗಗಳು ಮತ್ತು ಅದರ ಲಕ್ಷಣಗಳು(Disease and their symptoms)
3. ರೋಗಗಳನ್ನು ತಡೆಗಟ್ಟುವ ಕ್ರಮಗಳು(controlling measures)
4. ಕೃತಕ ಗರ್ಭಧಾರಣೆ (Artificial Insemination)
5. ಮೇವಿನ ವಿಷಯಗಳು(Fodder)
6. ಎರೆಹುಳು ಗೊಬ್ಬರ ತಯಾರಿಕೆ (Vermicompost)
7. ಎರೆಹುಳು ನಿರ್ವಹಣೆ(Vermicompost management)
8. ಸಾವಯುವ ಕೃಷಿ ಪದ್ಧತಿಯ ಅರಿವು (Importantance of organic farming)
9. ಸಮಯದ ನಿರ್ವಹಣೆ, ಸ್ವ ಉದ್ಯೋಗದ ಮಹತ್ವ, ಸಂವಹನ ಕೌಶಲ್ಯ, ಬ್ಯಾಂಕಿಂಗ್ ವಿಷಯ ಮತ್ತು ಇನ್ನೂ ಇತರೆ ವಿಷಯಗಳ ಬಗ್ಗೆ ತಿಳುವಳಿಕೆ ನೀಡಲಾಗುವುದು.(Bank and subsidy schemes) ಇನ್ನು ಇತರೆ ವಿಷಯಗಳ ಕುರಿತು ತರಬೇತಿಯನ್ನು ನೀಡಲಾಗುವುದು 

Free bike repair training-ಉಚಿತ ಊಟ ವಸತಿಯೊಂದಿಗೆ ಬೈಕ್ ರಿಪೇರಿ ತರಬೇತಿ

Free CCTV Installation and repair training-ಉಚಿತ ಊಟ ವಸತಿಯೊಂದಿಗೆ ಸಿಸಿಟಿವಿ ಅಳವಡಿಕೆ ಮತ್ತು ರಿಪೇರಿ ತರಬೇತಿ

Free mobile repair training-ಉಚಿತ ಊಟ ವಸತಿಯೊಂದಿಗೆ 1 ತಿಂಗಳ ಮೊಬೈಲ್ ರಿಪೇರಿ ತರಭೇತಿ

ಇದೇ ರೀತಿ ಬೇರೆ ಜಿಲ್ಲೆಗಳಲ್ಲೂ ಲೀಡ್ ಬ್ಯಾಂಕ್ ವತಿಯಿಂದ ತರಭೇತಿಗಳು ನಡೆಯುತ್ತವೆ,ಹೆಚ್ಚಿನ ಮಾಹಿತಿಗಾಗಿ ನಿಮ್ಮ ಜಿಲ್ಲೆಯ ಲೀಡ್ ಬ್ಯಾಂಕ್ ಸಂಪರ್ಕಿಸಿ


Free tailoring training-ಉಚಿತ ಊಟ ವಸತಿಯೊಂದಿಗೆ ಹೊಲಿಗೆ ಯಂತ್ರ ತರಭೇತಿ


ಉಚಿತ ಉಚಿತ ಉಚಿತ
*ಬ್ಯಾಂಕ್ ಆಫ್ ಬರೋಡ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ದೇವಗಿರಿ ಹಾವೇರಿಯಲ್ಲಿ ಮಹಿಳೆಯರ ಉಚಿತ ಹೊಲಿಗೆ ತರಬೇತಿಯನ್ನು ದಿನಾಂಕ 2.6.2025 ರಿಂದ 2.7.2025  ರ ವರೆಗೆ 31 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ* 

ಹಾವೇರಿ ಜಿಲ್ಲೆಯ  ಗ್ರಾಮೀಣ ಭಾಗದ BPL ರೇಷನ್ ಕಾರ್ಡ ಹೊಂದಿದ 18-45 ವಯಸ್ಸಿನ ನಿರುದ್ಯೋಗಿ ಯುವತಿಯರಿಗೆ ಅವಕಾಶವಿದೆ.
 *ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ.*
ತರಬೇತಿಯಲ್ಲಿ ಕಲಿಸುವ ವಿಷಯಗಳು 
ಕಟೋರಿ ಬ್ಲೌಸ್
ಪ್ರಿನ್ಸೆಸ್ ಕಟ್ ಬ್ಲೌಸ್ 
ಬೋಟ್ ನೆಕ್ ಬ್ಲೌಸ್ 
ಸಾದಾ ಬ್ಲೌಸ್
ಹೈ ನೆಕ್ ಬ್ಲೌಸ್
V ನೆಕ್ ಬ್ಲೌಸ್ 
ಫುಲ್ ಸ್ಲೀವ್ ಬ್ಲೌಸ್ ಹೊಲಿಯುವುದು 
ಚೂಡಿದಾರ್ ಹೊಲಿಯುವುದು 
ಸಣ್ಣ ಮಕ್ಕಳ ಬಟ್ಟೆ ಹೊಲಿಯುವುದು 
ಯೂನಿಫಾರ್ಮ್
ಲಾಂಗ್ ಗೌನ್ ಹೊಲಿಯುವುದು
ಕ್ರಾಪ್ ಟಾಪ್ ಹೊಲಿಯುವುದು
ನೈಟ್ ಡ್ರೆಸ್ ಹೊಲಿಯುವುದು
ಮುಂತಾದವುಗಳನ್ನು ಉಚಿತವಾಗಿ ಕಲಿಸುತ್ತೇವೆ..

ತಮ್ಮ ಹೆಸರನ್ನು ಫೋನ್ ಮೂಲಕ ನೋಂದಾಯಿಸಿಕೊಳ್ಳಲು *8660219375* ನಂಬರ್ ಗೆ ಕಾಲ್ ಮಾಡಿ.

]]>
Thu, 15 May 2025 12:24:11 +0530 shivuagrico
ಹಿಂಗಾರು ಮಳೆಯಿಂದಾದ ಬೆಳೆ ಹಾನಿಗೆ ಪರಿಹಾರ, ಈ ಪಟ್ಟಿಯಲ್ಲಿರುವವರಿಗೆ ಮಾತ್ರ ಬೆಳೆಪರಿಹಾರ&Bele parihara list https://krushirushi.in/Bele-parihara-list-2095 https://krushirushi.in/Bele-parihara-list-2095 ಹಿಂಗಾರು ಮಳೆಯಿಂದಾದ ಬೆಳೆ ಹಾನಿಗೆ ವಾರದೊಳಗೆ ಪರಿಹಾರ, ಈ ಪಟ್ಟಿಯಲ್ಲಿರುವವರಿಗೆ ಮಾತ್ರ ಬೆಳೆಪರಿಹಾರ-Bele parihara list

ರಾಜ್ಯದಲ್ಲಿ ಹಿಂಗಾರು ಮಳೆ ಅವಧಿಯಲ್ಲಿ 1.58 ಲಕ್ಷ ಹೆಕ್ಟೇ‌ರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ₹120 ಕೋಟಿವರೆಗೆ ನಷ್ಟ ಆಗಿರಬಹುದು ಎ೦ದು ಅ೦ದಾಜಿಸಲಾಗಿದೆ. ಬೆಳೆ ಹಾನಿಯಾದ ರೈತರ ಬ್ಯಾಂಕ್‌ ಖಾತೆಗಳಿಗೆ ವಾರದೊಳಗೆ ಪರಿಹಾರ ಹಣ ಜಮೆಯಾಗಲಿದೆ''


ಬೆಳೆಹಾನಿ ಪರಿಹಾರ ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service87/

ನಂತರ ನಿಮ್ಮ ಜಿಲ್ಲೆ, ತಾಲೂಕು, ಹೊಬಳಿ, ಗ್ರಾಮ, ವರ್ಷ, ಹಂಗಾಮು  ಹಾಗೂ ಬೆಳೆಹಾನಿ ಕಾರಣ select ಮಾಡಿ,Get report ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ನಿಮಗೆ ಇಲ್ಲಿಯವರೆಗೂ ಜಮಾ ಆದ ಬೆಳೆಹಾನಿ ಪರಿಹಾರ(bele hani parihara) ಜಮಾ ಮಾಹಿತಿ ದೊರೆಯಲಿದೆ


ನಂತರ view status ಮೇಲೆ ಕ್ಲಿಕ್ ಮಾಡಿದರೆ ಈ ಕೆಳಗಿನಂತೆ ಮಾಹಿತಿ ದೊರೆಯಲಿದೆ



Input subsidy for croploss-ರಾಜ್ಯ ಸರ್ಕಾರದಿಂದ ಬೆಳೆ ಪರಿಹಾರ ಚೆಕ್ ಮಾಡುವ ಆ್ಯಪ್ ಬಿಡುಗಡೆ

2024- 25 ನೇ ಸಾಲಿನ ಮುಂಗಾರು ಹಂಗಾಮಿ(Kharif)ನಲ್ಲಿ ಭಾರಿ ಮಳೆಯಿಂದಾಗಿ ಬೆಳೆ ಹಾನಿ(bele hani)ಗೊಳಗಾದ ರೈತರಿಗೆ ಪರಿಹಾರದ ಮೊತ್ತ(parihara payment)ಮಂಜೂರಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.


ಮುಂಗಾರು ಹಂಗಾಮಿನಲ್ಲಿ ಮಳೆಯಿಂದ ಹಾನಿಗೊಳಗಾದ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯ ಮೊದಲ ಕಂತಿನ ಪರಿಹಾರವಾಗಿ 13.2 ಕೋಟಿ ರೂ.ಇನ್ಸುಟ್‌ ಸಬ್ಸಿಡಿ(input subsidy for croploss) ಮಂಜೂರಾಗಿದೆ.


ಹಾನಿಯಾದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವಿವರಗಳನ್ನು ಗ್ರಾಮ ಆಡಳಿತ ಅಧಿಕಾರಿಗಳು ತಂತ್ರಾಂಶದಲ್ಲಿ ನಮೂದಿಸಿ ಅನುಮೋದಿಸಿದ್ದಾರೆ. ಮೊದಲ ಹಂತದಲ್ಲಿ ಒಟ್ಟು 33,718 ರೈತರಿಗೆ 13.2 ಕೋಟಿ ರೂ.ಗಳನ್ನು ಎನ್.ಡಿ.ಆ‌ರ್.ಎಫ್.(NDRF)ಎಸ್.ಡಿ.ಆ‌ರ್.ಎಫ್.(SDRF) ಮಾರ್ಗಸೂಚಿ ಅನ್ವಯ ಹಣ ಮಂಜೂರಾತಿ ನೀಡಲಾಗಿದೆ. ನೇರವಾಗಿ ಆಧಾ‌ರ್ ಸಂಖ್ಯೆ(Aadhaar number linked bank account) ಜೋಡಣೆಯಾಗಿರುವ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರದ ಮೊತ್ತ ಜಮಾ ಮಾಡಲು ಅನುಮೋದನೆ ನೀಡಲಾಗಿದೆ.


ಇನ್ನು ಮೂರ್ನಾಲ್ಕು ದಿನಗಳೊಳಗೆ ಇನ್ಸುಟ್‌ ಸಬ್ಸಿಡಿ ರೈತರ ಬ್ಯಾಂಕ್‌ ಖಾತೆಗೆ ಜಮೆಯಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಳೆ ಪರಿಹಾರ ಚೆಕ್ ಮಾಡುವ DBT Karnataka application ಬಿಡುಗಡೆ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application ಡೌನ್ಲೊಡ್ ಮಾಡಿ,install ಮಾಡಿಕೊಳ್ಳಿ

https://play.google.com/store/apps/details?id=com.dbtkarnataka

ನಂತರ ನಿಮ್ಮ ಆಧಾರ್ ನಂಬರ್(Aadhaar number) ಹಾಕಿ Get OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Varify OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ

ನಂತರ payment status ಮೇಲೆ ಕ್ಲಿಕ್ ಮಾಡಿ

ನಂತರ input subsidy for croploss ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಇಲ್ಲಿಯವರೆಗೂ ಜಮಾ ಆದ ಬೆಳೆಹಾನಿ ಪರಿಹಾರ(Bele parihara)ಮಾಹಿತಿ ಸಿಗಲಿದೆ.

ಈ ಲೇಖನದ ಕೊನೆಯಲ್ಲಿ ಪಟ್ಟಿಯನ್ನು ಲಗತ್ತಿಸಲಾಗಿದೆ ಇದೇ ರೀತಿ ಎಲ್ಲಾ ಗ್ರಾಮ ಪಂಚಾಯತಿ,ರೈತ ಸಂಪರ್ಕ ಕೇಂದ್ರಗಳಲ್ಲಿ FID ಮಾಡಿಸದ ಪಟ್ಟಿಯನ್ನು ಲಗತ್ತಿಸಲಾಗಿದ್ದು,ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಕೂಡಲೇ FID ಮಾಡಿಸಿಕೊಳ್ಳಿ

]]>
Thu, 15 May 2025 06:33:17 +0530 shivuagrico
Karnataka weather report&ಇಂದಿನಿಂದ 7 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು,ಮಿಂಚು ಸಹಿತ ಮಳೆ https://krushirushi.in/Karnataka-weather-report-2094 https://krushirushi.in/Karnataka-weather-report-2094 Karnataka weather report-ಇಂದಿನಿಂದ 7 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು,ಮಿಂಚು ಸಹಿತ ಮಳೆ

ಭಾರತ ಹವಾಮಾನ ಇಲಾಖೆ ಪ್ರಕಾರ, ಅವಧಿಗೂ ಮುನ್ನ ಅಂದರೆ, ಮೇ 14ರಿಂದ ಅಧಿಕೃತವಾಗಿ ನೈಋತ್ಯ ಮಾನ್ಸೂನ್ ಆರಂಭವಾಗಿದೆ. ಮತ್ತೊಂದೆಡೆ ಅಂಡಮಾನ್, ನಿಕೋಬಾರ್‌ ಹಾಗೂ ಬಂಗಾಳಕೊಲ್ಲಿಯಲ್ಲಿ ಶಕ್ತಿ ಚಂಡಮಾರುತ ಉಂಟಾಗಿದ್ದು, ಪರಿಣಾಮ ದೇಶದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಪ್ರವಾಹದಂತಹ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

ಹವಾಮಾನ ಇಲಾಖೆ ತಜ್ಞರು ಚಂಡಮಾರುತದ ಅಲೆಗಳು ತೀವ್ರಗೊಂಡು ಕರ್ನಾಟ ಸೇರಿದಂತೆ ದೇಶದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಮೇ 16ರಿಂದ 26ರ ವರೆಗೂ ಈ ಚಂಡಮಾರುತದ ಪ್ರಭಾವ ಇರಲಿದ ಎಂದು ಮುನ್ನೆಚ್ಚರಿಕೆಯನ್ನು ಸಹ ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಯೆಲ್ಲೋ ಅಲರ್ಟ್ ಘೋಷಣೆ: ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆ, ಕರ್ನಾಟಕದ ಹಲವು ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಮೇ 16ರ ವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ತುಮಕೂರು, ಬಾಗಲಕೋಟೆ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.

ಕರಾವಳಿ : ಕಾಸರಗೋಡು ಜಿಲ್ಲೆಯ ಅಲ್ಲಲ್ಲಿ, ಕೇರಳ - ದಕ್ಷಿಣ ಕನ್ನಡ ಗಡಿ ಭಾಗಗಳ ಅಲ್ಲಲ್ಲಿ, ಉಡುಪಿ, ದಕ್ಷಿಣ ಕನ್ನಡ ಘಟ್ಟದ ಕೆಳಗಿನ ಪ್ರದೇಶಗಳ ಅಲ್ಲಲ್ಲಿ, ಉತ್ತರ ಕನ್ನಡ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ಮುಂಗಾರು ಪ್ರವೇಶದ ಪೂರ್ವ ಅಂದರೆ ಮುಂಗಾರು ಪ್ರಭಾವದಿಂದ ಮೇ18ರಿಂದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ಲಕ್ಷಣಗಳಿವೆ. ಅಲ್ಲಿಯವರೆಗೆ ಅಲ್ಲಲ್ಲಿ ಸಾಮಾನ್ಯ ಮಳೆ ಮುಂದುವರಿಯಬಹುದು.

ಮಲೆನಾಡು : ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ಮೇ 15ರಿಂದ ಮಳೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದ್ದು, ಅಲ್ಲಲ್ಲಿ ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣಗಳಿವೆ. 

ಒಳನಾಡು : ಉತ್ತರ ಒಳನಾಡಿನ ಬಳ್ಳಾರಿ, ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಗಳಲ್ಲಿ ಸಂಜೆ ಅಥವಾ ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ ಇದ್ದು, ಹಾವೇರಿ, ಧಾರವಾಡ, ಬೆಳಗಾವಿ, ದಾವಣಗೆರೆ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು, ತುಮಕೂರು (ಪಾವಗಢ ಸಹಿತ) ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಒಂದೆರಡು ಕಡೆ ಸಾಮಾನ್ಯ ಮಳೆಯ ಸಾಧ್ಯತೆ ಇದೆ.
ಈಗಿನಂತೆ ಮೇ 21ರ ತನಕವೂ ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆ ಮುಂದುವರಿಯುವ ಸೂಚನೆಗಳಿವೆ.

ಮೇಲಿನ ವಿಡಿಯೋ ನಕ್ಷೆಯಲ್ಲಿ ಕಾಣುವಂತೆ ಗಾಳಿಯ ಯದ್ವಾತದ್ವಾ ಚಲನೆಯ ಕಾರಣದಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ ಅಂತ ಹೇಳಲು ಸಾಧ್ಯವಿಲ್ಲ. 

ಮುಂಗಾರು ಅವಧಿ ಪೂರ್ವ ಆಗಮನದ ನಿರೀಕ್ಷೆ ಇದ್ದು, ಈಗಾಗಲೇ ಅಂಡಮಾನ್ ಪ್ರವೇಶಿಸಿದ ಮುಂಗಾರು ಮೇ 25, 27ರಂದು ಕೇರಳ ಹಾಗೂ ಅದೇ ಸಮಯದಲ್ಲಿ ರಾಜ್ಯಕ್ಕೂ ಪ್ರವೇಶಿಸುವ ವರದಿಗಳಿವೆ.

]]>
Wed, 14 May 2025 19:21:14 +0530 shivuagrico
Free bike repair training&ಉಚಿತ ಊಟ ವಸತಿಯೊಂದಿಗೆ ಬೈಕ್ ರಿಪೇರಿ ತರಬೇತಿ https://krushirushi.in/Free-bike-repair-training-2093 https://krushirushi.in/Free-bike-repair-training-2093 Free bike repair training-ಉಚಿತ ಊಟ ವಸತಿಯೊಂದಿಗೆ ಬೈಕ್ ರಿಪೇರಿ ತರಬೇತಿ

Free CCTV Installation and repair training-ಉಚಿತ ಊಟ ವಸತಿಯೊಂದಿಗೆ ಸಿಸಿಟಿವಿ ಅಳವಡಿಕೆ ಮತ್ತು ರಿಪೇರಿ ತರಬೇತಿ

Free mobile repair training-ಉಚಿತ ಊಟ ವಸತಿಯೊಂದಿಗೆ 1 ತಿಂಗಳ ಮೊಬೈಲ್ ರಿಪೇರಿ ತರಭೇತಿ

ಇದೇ ರೀತಿ ಬೇರೆ ಜಿಲ್ಲೆಗಳಲ್ಲೂ ಲೀಡ್ ಬ್ಯಾಂಕ್ ವತಿಯಿಂದ ತರಭೇತಿಗಳು ನಡೆಯುತ್ತವೆ,ಹೆಚ್ಚಿನ ಮಾಹಿತಿಗಾಗಿ ನಿಮ್ಮ ಜಿಲ್ಲೆಯ ಲೀಡ್ ಬ್ಯಾಂಕ್ ಸಂಪರ್ಕಿಸಿ


Free tailoring training-ಉಚಿತ ಊಟ ವಸತಿಯೊಂದಿಗೆ ಹೊಲಿಗೆ ಯಂತ್ರ ತರಭೇತಿ


ಉಚಿತ ಉಚಿತ ಉಚಿತ
*ಬ್ಯಾಂಕ್ ಆಫ್ ಬರೋಡ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ದೇವಗಿರಿ ಹಾವೇರಿಯಲ್ಲಿ ಮಹಿಳೆಯರ ಉಚಿತ ಹೊಲಿಗೆ ತರಬೇತಿಯನ್ನು ದಿನಾಂಕ 2.6.2025 ರಿಂದ 2.7.2025  ರ ವರೆಗೆ 31 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ* 

ಹಾವೇರಿ ಜಿಲ್ಲೆಯ  ಗ್ರಾಮೀಣ ಭಾಗದ BPL ರೇಷನ್ ಕಾರ್ಡ ಹೊಂದಿದ 18-45 ವಯಸ್ಸಿನ ನಿರುದ್ಯೋಗಿ ಯುವತಿಯರಿಗೆ ಅವಕಾಶವಿದೆ.
 *ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ.*
ತರಬೇತಿಯಲ್ಲಿ ಕಲಿಸುವ ವಿಷಯಗಳು 
ಕಟೋರಿ ಬ್ಲೌಸ್
ಪ್ರಿನ್ಸೆಸ್ ಕಟ್ ಬ್ಲೌಸ್ 
ಬೋಟ್ ನೆಕ್ ಬ್ಲೌಸ್ 
ಸಾದಾ ಬ್ಲೌಸ್
ಹೈ ನೆಕ್ ಬ್ಲೌಸ್
V ನೆಕ್ ಬ್ಲೌಸ್ 
ಫುಲ್ ಸ್ಲೀವ್ ಬ್ಲೌಸ್ ಹೊಲಿಯುವುದು 
ಚೂಡಿದಾರ್ ಹೊಲಿಯುವುದು 
ಸಣ್ಣ ಮಕ್ಕಳ ಬಟ್ಟೆ ಹೊಲಿಯುವುದು 
ಯೂನಿಫಾರ್ಮ್
ಲಾಂಗ್ ಗೌನ್ ಹೊಲಿಯುವುದು
ಕ್ರಾಪ್ ಟಾಪ್ ಹೊಲಿಯುವುದು
ನೈಟ್ ಡ್ರೆಸ್ ಹೊಲಿಯುವುದು
ಮುಂತಾದವುಗಳನ್ನು ಉಚಿತವಾಗಿ ಕಲಿಸುತ್ತೇವೆ..

ತಮ್ಮ ಹೆಸರನ್ನು ಫೋನ್ ಮೂಲಕ ನೋಂದಾಯಿಸಿಕೊಳ್ಳಲು *8660219375* ನಂಬರ್ ಗೆ ಕಾಲ್ ಮಾಡಿ.

]]>
Wed, 14 May 2025 12:56:28 +0530 shivuagrico