Krushi Rushi News Website & Latest Posts https://krushirushi.in/rss/latest-posts Krushi Rushi News Website & Latest Posts en Copyright 2025 Krushi Rushi & All Rights Reserved Pmkisan pending payment&ರಾಜ್ಯದ 22 ಸಾವಿರ ರೈತರಿಗೆ ಪಿಎಂ ಕಿಸಾನ್ ಬಾಕಿ ಹಣ ಬಿಡುಗಡೆ https://krushirushi.in/Pmkisan-pending-payment-2419 https://krushirushi.in/Pmkisan-pending-payment-2419 Pmkisan pending payment-ರಾಜ್ಯದ 22 ಸಾವಿರ ರೈತರಿಗೆ ಪಿಎಂ ಕಿಸಾನ್ ಬಾಕಿ ಹಣ ಬಿಡುಗಡೆ


ಹಲವು ಕಾರಣಗಳಿಂದ ಪಿಎಂ-ಕಿಸಾನ್‌ ಯೋಜನೆಯ (PM-KISAN scheme) ಹಣವನ್ನು ರಾಜ್ಯದ ಹಲವಾರು ರೈತರಿಗೆ ಪಾವತಿ ಮಾಡಿರಲಿಲ್ಲ. ಆದರೆ ಕೃಷಿ ಸಚಿವ ಚಲುವ ರಾಯಸ್ವಾಮಿಅವರು ಕೇಂದ್ರಕ್ಕೆ ಈ ಸಂಬಂಧ ಮನವಿ ಮಾಡಿಕೊಂಡಿದ್ದರ ಪರಿಣಾಮ ಈಗ ಇಪ್ಪತ್ತ ಎರಡು ಸಾವಿರ ರೈತರಿಗೆ ಹಣ ಜಮೆ ಮಾಡಲು ಮುಂದಾಗಿದೆ.
ತಾಂತ್ರಿಕ ಕಾರಣಗಳಿಂದ ಪಿಎಂ ಕಿಸಾನ್‌ ಯೋಜನೆಯ ಹಣ ಹಾಕಿರಲಿಲ್ಲ. ಆದರೆ ಈಗ ಎಲ್ಲರಿಗೂ ಹಣ ಬಿಡುಗಡೆ ಮಾಡಲಾಗುತ್ತಿದೆ. 2025 ರ ಡಿಸೆಂಬರ್‌ 17 ರಂದು ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಸಚಿವ ಚಲುವರಾಯಸ್ವಾಮಿ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು.ಸುಮಾರು ಮೂವತ್ತು ಸಾವಿರಕ್ಕೂ ಅಧಿಕ ರೈತರಿಗೆ ಹಣ ಬಂದಿಲ್ಲ ಎಂದು ಹೇಳಿದ್ದರು.

ಇದಿಷ್ಟು ಮಾತ್ರವಲ್ಲದೆ ಕಳೆದ ವಾರ ನಡೆದ ಅಂತರಾಷ್ಟ್ರೀಯ ವಾಣಿಜ್ಯ ಮೇಳದಲ್ಲೂ ಸಹ ಕೇಂದ್ರ ಸಚಿವರಿಗೆ ಈ ಬಗ್ಗೆ ನೆನಪಿಸಿದ್ದರು. ಇದಕ್ಕೆ ಸ್ಪಂಧಿಸಿರುವ ಕೇಂದ್ರ 22 ಸಾವಿರಕ್ಕೂ ಹೆಚ್ಚು ಫಲಾನುಭವಿಗಳನ್ನು 22 ನೇ ಕಂತಿನ ಪಾವತಿ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಶೀಘ್ರದಲ್ಲೇ ಅವರಿಗೆ ಹಣ ಬಿಡುಗಡೆಯಾಗಲಿದೆ ಎಂದಿದ್ದಾರೆ.

ಫೆಬ್ರವರಿ ತಿಂಗಳಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ರೈತರ ಖಾತೆಗಳಿಗೆ ಜಮಾ ಮಾಡುವ ಸಾಧ್ಯತೆಯಿದೆ ಎಂದು ಕೇಳಿಬರುತ್ತಿದೆ. ಪ್ರತಿ ವರ್ಷ, ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿಯಲ್ಲಿ ರೈತರ ಖಾತೆಗಳಿಗೆ ತಲಾ 2,000 ರೂ.ಗಳ ಮೂರು ಕಂತುಗಳಲ್ಲಿ ಒಟ್ಟು 6,000 ರೂ.ಗಳನ್ನು ಜಮಾ ಮಾಡುತ್ತದೆ.

ಈ ಹಣವನ್ನು ನೇರವಾಗಿ ಫಲಾನುಭವಿಗಳಿಗೆ ವರ್ಗಾವಣೆ (DBT) ವಿಧಾನದ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ರೈತರು ಈ ಹಣವನ್ನು ಅವರು ಬಯಸಿದಂತೆ ಖರ್ಚು ಮಾಡಬಹುದು. ಈ ಹಣವನ್ನು ಕೃಷಿ ವೆಚ್ಚಗಳಿಗೆ ಅಥವಾ ಬೆಳೆ ಕೃಷಿ ವೆಚ್ಚಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಬಳಸಬಹುದು.

ರೈತರ ಆದಾಯವನ್ನು ಹೆಚ್ಚಿಸಲು ಕೇಂದ್ರದ ಮೋದಿ ಸರ್ಕಾರ ಈ ಯೋಜನೆಯನ್ನು ಲಭ್ಯಗೊಳಿಸಿದೆ. ಇಲ್ಲಿಯವರೆಗೆ, ಪಿಎಂ ಕಿಸಾನ್ ಯೋಜನೆಯಡಿಯಲ್ಲಿ, 2000 ರೂಪಾಯಿಗಳನ್ನು ರೈತರ ಖಾತೆಗಳಿಗೆ 22 ಕಂತುಗಳಲ್ಲಿ ಜಮಾ ಮಾಡಲಾಗಿದೆ, ಇದರಲ್ಲಿ ಪ್ರತಿ ಕಂತು 2000 ರೂಪಾಯಿಗಳು. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿಯಲ್ಲಿ ಒಟ್ಟು 10 ಕೋಟಿ ರೈತರು ಈ ಹಣವನ್ನು ಪಡೆಯುತ್ತಿದ್ದಾರೆ. ಮಹಿಳೆಯರು ಸಹ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಾಗಿರುವುದನ್ನು ಕಾಣಬಹುದು.

Pmkisan 21st instalment-ನನ್ನ ಖಾತೆಗೆ ಪಿಎಂ ಕಿಸಾನ್ 21ನೇ ಕಂತಿನ ಹಣ ಜಮಾ, ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://pmkisan.gov.in/

ಮೊದಲು know your status ಮೇಲೆ ಕ್ಲಿಕ್ ಮಾಡಿ

ನಂತರ know your register number ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ನಂಬರ್ ಅಥವಾ ಆಧಾರ್ ನಂಬರ್ ಹಾಕಿ,Captcha type ಮಾಡಿ, Get mobile OTP ಮೇಲೆ ಕ್ಲಿಕ್ ಮಾಡಿ,ನಿಮ್ಮ ಮೊಬೈಲ್ ಗೆ ಬರುವ OTP ಹಾಕಿದರೆ ಈ ಕೆಳಗಿನಂತೆ ನಿಮ್ಮ Registration number ತಿಳಿಯಲಿದೆ

ನಂತರ Back ಮೇಲೆ ಕ್ಲಿಕ್ ಮಾಡಿ, ನಿಮ್ಮ Registration number ಹಾಕಿ,Captcha type ಮಾಡಿ,Get OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಗೆ ಬರುವ 4 ಸಂಖ್ಯೆಯ OTP ಹಾಕಿ Get data ಮೇಲೆ ಕ್ಲಿಕ್ ಮಾಡಿ

ಈ ಕೆಳಗಿನಂತೆ ನಿಮಗೆ ಇಲ್ಲಿಯವರೆಗೂ ಜಮಾ ಆದ 19 ಕಂತುಗಳ ಮಾಹಿತಿ ದೊರೆಯಲಿದೆ.

ಪಿಎಂ ಕಿಸಾನ್ ಇಕೆವೈಸಿ ಚೆಕ್ ಮಾಡಲು ಹೀಗೆ ಮಾಡಿ

ನಂತರ update your details ಮೇಲೆ ಕ್ಲಿಕ್ ಮಾಡಿ

ನಂತರ ಮತ್ತೆ ಹಿಂದಕ್ಕೆ ಬಂದು,Eligibility status ಮೇಲೆ ಕ್ಲಿಕ್ ಮಾಡಿ

 Land seeding,Aadhaar bank account seeding status ಹಾಗೂ ಇಕೆವೈಸಿ ಆಗಿದ್ದರೆ, ಅವುಗಳ ಮುಂದೆ ಹಸಿರು ಬಣ್ಣದ YES right mark ಇರುತ್ತದೆ,ಈ ರೀತಿ 3 status ಮುಂದೆ yes ಎಂದು ಇದ್ದರೆ ನಿಮಗೆ 19ನೇ ಕಂತು ಸಿಗಲಿದೆ.

ಲ್ಯಾಂಡ್ ಸಿಡಿಂಗ್ No ಎಂದು ತೋರಿಸುತ್ತಿದ್ದರೆ,ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ,ನಿಮ್ಮ ಲ್ಯಾಂಡ್ ಸಿಡಿಂಗ್ ಮಾಡಿಸಿ

Ineligibility reason ಮೇಲೆ ಕ್ಲಿಕ್ ಮಾಡಿದರೆ ಈ ಕೆಳಗಿನಂತೆ ನಿಮಗೆ ಹಣ ಜಮಾ ಆಗದೇ ಇರುವುದಕ್ಕೆ ಕಾರಣ ಮತ್ತು ಪರಿಹಾರ ಸಿಗಲಿದೆ.

FTO Processed NO ಎಂದು ತೋರಿಸುತ್ತಿದ್ದರೆ ಇಲ್ಲಿದೆ  ಕಾರಣ ಮತ್ತು ಪರಿಹಾರ

ಪಿ.ಎಂ.ಕಿಸಾನ್ ಯೋಜನೆಯಡಿ ಜಿಲ್ಲೆಗಳಿಂದ ಬರುವ ಸಾಮಾನ್ಯ ಅಹವಾಲುಗಳು

ಕ್ರಮ ಸಂಖ್ಯೆ

ಸಮಸ್ಯೆಗಳು

ಕಾರಣಗಳು

ಪರಿಹರಿಸುವ ಸಂಬಂಧಪಟ್ಟ ಕಛೇರಿ ಮತ್ತು ವಿಧಾನ

fruitspmk.gov.in ಪೋರ್ಟಲ್ ನಲ್ಲಿ

1

ಭೂಮಿಯ ಜೊತೆ ದೊರೆತ ಸಂಶಯಾತ್ಮಕ ಪ್ರಕರಣಗಳೆಂದು ತಡೆಹಿಡಿಯಲಾಗಿದೆ

ಅ)ಅರ್ಜಿದಾರನ ಹೆಸರು ಮತ್ತು ಭೂಮಾಲಿಕನ ಹೆಸರು ತಾಳೆಯಾಗದಿರುವುದು                                                                     ಆ) bhoomi ತಂತ್ರಾಂಶದಲ್ಲಿ ಪೋಡುಗಳು ಬದಲಿಯಾಗುವುದು, ಹಿಸ್ಸಾ ಬದಲಾವಣೆಯಾಗುವುದು

ಭೂಮಿ ಮಾನಿಟರಿಂಗ್ ಸೆಲ್ (BMC) ಮತ್ತು ಎನ್.ಐ.ಸಿ  (NIC)                     ಅ)bhoomi ತಂತ್ರಾಂಶದಿಂದ fruitspmk ತಂತ್ರಾಂಶಕ್ಕೆ realtime ಮಾಹಿತಿ ಒದಗಿಸದೇ ಇರುವುದರಿಂದ ಸಮಸ್ಯೆಯಿರುತ್ತದೆ.            ಆ) ಸಮಸ್ಯಾತ್ಮಕ  ಸರ್ವೆ ನಂಬರ್ ಗಳ ವಿವರಗಳನ್ನು BMC ಗೆ ಸಲ್ಲಿಸಿ ಮಾಹಿತಿ ಪಡೆಯಲಾಗುತ್ತಿದೆ.

2

ಅನರ್ಹ ಪ್ರಕರಣಗಳೆಂದು ತಡೆಹಿಡಿದಿರುವ ಪ್ರಕರಣಗಳಲ್ಲಿ ಅರ್ಹ ಪ್ರಕರಣಗಳು

ಒಂದೇ ಕುಟುಂಬಕ್ಕೆ ಸೇರಿದ ಕಾರಣ ಮಹಿಳಾ ಸದಸ್ಯರನ್ನು VA ವರದಿ ಪ್ರಕಾರ AAO ಲಾಗಿನ್ನಲ್ಲಿ ಅನರ್ಹಗೊಳಿಸಲಾಗಿರುತ್ತದೆ

ಜಿಲ್ಲೆಗಳಿಂದ ವರದಿ ನೀಡಿದ್ದಲ್ಲಿ ಕೇಂದ್ರ ಕಛೇರಿ    ADMIN ಲಾಗಿನ್ನಿಂದ ಅಂತಹ ಅರ್ಹ ಪ್ರಕರಣಗಳನ್ನು XML ರಚಿಸಲು ಕಳುಹಿಸಲಾಗುತ್ತದೆ

3

ತಹಶೀಲ್ದಾರ್ ಲಾಗಿನ್ನಗೆ OPERATOR ಗಳಿಂದ ತಪ್ಪಾಗಿ ಸೇರಿರುವ ಅರ್ಹ ಪ್ರಕರಣಗಳು

 ಅರ್ಜಿದಾರನ ಹೆಸರಿನಲ್ಲೇ ಕೃಷಿ ಜಮೀನು ಇದ್ದರೂ OPERATOR ಗಳ ತಪ್ಪಿನಿಂದ ಪೌತಿ ಪ್ರಕರಣಗಳಲ್ಲದಿದ್ದರೂ ತಹಶೀಲ್ದಾರ್ ಲಾಗಿನ್ ಗೆ FORWARD ಮಾಡಲಾಗಿರುತ್ತದೆ

ಜಿಲ್ಲಾಧಿಕಾರಿಗಳಿಂದ ಧೃಢೀಕೃತಗೊಂಡ ವರದಿ ಸಲ್ಲಿಸಿದ ನಂತರ ಕೇಂದ್ರ ಕಛೇರಿಯ   ADMIN ಲಾಗಿನ್ನಿಂದ ಅಂತಹ ಅರ್ಹ ಪ್ರಕರಣಗಳನ್ನು AAO ಲಾಗಿನ್ ಗೆ ಪರಿಶೀಲನೆಗೆ ಕಳುಹಿಸಲಾಗುತ್ತದೆ

4

ಸ್ಥಿತಿ ಪರಿಶೀಲನೆಯಲ್ಲಿ ಆಧಾರ್ ಸಂಖ್ಯೆ ನಮೂದಿಸಿದಾಗ ರೈತರ ವಿವರ ಅಲಭ್ಯತೆ

ಅರ್ಜಿ ನೊಂದಣಿ ಸಮಯದಲ್ಲಿ OPERATOR ಗಳು ರೈತರ ವಿವರಗಳನ್ನು ನಮೂದಿಸಿದ್ದು DECLARATION ಮಾಡಿ AAO ಗೆ FORWARD ಮಾಡಿರುವುದಿಲ್ಲ

OPERATOR ಲಾಗಿನ್ (RSK, ADA office, JDA office)  OPERATOR ಲಾಗಿನ್ನಲ್ಲಿ ಘೋಷಣೆಗೆ ಬಾಕಿಯಿರುವ ರೈತರ ಪಟ್ಟಿಯಲ್ಲಿ ಆಧಾರ್ ಸಂಖ್ಯೆಯನ್ನು ಪಡೆದು ರೈತ ಘೋಷಣೆಯಡಿ ಆಧಾರ್ ಸಂಖ್ಯೆಯನ್ನು ನಮೂದಿಸಿ ರೈತನ ವಿವರಗಳನ್ನು ಪರಿಶೀಲಿಸಿ ಘೋಷಿಸುವುದು

5

01.02.2019 ನಂತರ ಮಾಲೀಕತ್ವ ಹೊಂದಿರುವ ಜಮೀನುಗಳ ರೈತರೆಂದು ತಡೆಹಿಡಿಯಲಾಗಿದೆ

ಕೇಂದ್ರ ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯನ್ವಯ 31.01.2019ಭೂ ಒಡೆತನ ನಿರ್ಧಿರಿಸಲು ಕೊನೆಯ ದಿನಾಂಕವಾಗಿರುತ್ತದೆ

ಇಂತಹ ಪ್ರಕರಣಗಳು ಯೋಜನೆಗೆ ಅನರ್ಹವಾಗಿರುತ್ತದೆ (ಸರಿಪಡಿಸಲಾಗುವುದಿಲ್ಲ)

6

Absentee land lord ಯೆಂದು ಈಗಾಗಲೇ ಗುರುತಿಸಿರುವ ಭೂಮಿಯನ್ನು ಸರಿಪಡಿಸುವ ಕುರಿತು

ಜಿಲ್ಲೆಗಳಲ್ಲಿ  OPERATOR ಗಳು ಕೆಲ ಜಮೀನುಗಳನ್ನು Absentee land lord ಯೆಂದು ನಮೂದು ಮಾಡಿರುತ್ತಾರೆ

AAO ಲಾಗಿನ್  (RSK, ADA office, JDA office)  AAO ಲಾಗಿನ್ನಲ್ಲಿ  ಅನರ್ಹ ಭೂಮಿಯನ್ನು ಹಿಂದುರುಗಿಸಿ ಬಿಲ್ಲೆಯಡಿ ಅಂತಹ ಸರ್ವೆ ನಂಬರ್ ಗಳನ್ನು ವಾಪಾಸ್ ಮಾಡಿ,  ನೊಂದಣಿಗೆ ಅವಕಾಶ ಕಲ್ಪಿಸಬಹುದಾಗಿರುತ್ತದೆ

ಪಿ.ಎಂ.ಕಿಸಾನ್ ಯೋಜನೆಯಡಿ ಜಿಲ್ಲೆಗಳಿಂದ ಬರುವ ಸಾಮಾನ್ಯ ಅಹವಾಲುಗಳು

ಕ್ರಮ ಸಂಖ್ಯೆ

ಸಮಸ್ಯೆಗಳು

ಕಾರಣಗಳು

ಪರಿಹರಿಸುವ ಸಂಬಂಧಪಟ್ಟ ಕಛೇರಿ ಮತ್ತು ವಿಧಾನ

 

pmkisan.gov.in ಪೋರ್ಟಲ್ ನಲ್ಲಿ

7

ಆಧಾರ್ ಸಂಖ್ಯೆಯನ್ನು ನಮೂದಿಸಿದಾಗ 'either details not exist or rejected due to wrong details‘ ಎಂದು ತೋರಿಸುತ್ತದೆ

ರಾಜ್ಯದಿಂದ ಇಂತಹ ರೈತರ ವಿವರಗಳು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿರುವುದಿಲ್ಲ ( ಆದ್ದರಿಂದ fruitspmk.gov.in ಪೋರ್ಟಲ್ ನಲ್ಲಿ ಮೊದಲು ಅರ್ಜಿ ಸ್ಥಿತಿ ಪರಿಶೀಲಿಸಬೇಕಾಗಿರುತ್ತದೆ)

AAO ಲಾಗಿನ್ (RSK, ADA office) ಮತ್ತು ಕೇಂದ್ರ ಕಚೇರಿAAO ಲಾಗಿನ್ನಿಂದ XML ರಚನೆಗೆ FORWARD ಮಾಡಬೇಕಾಗಿರುತ್ತದೆ. ಕೇಂದ್ರ ಕಚೇರಿಯಿಂದ XML ರಚಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾಗಿರುತ್ತದೆ.

8

PFMS rejected

Aadhaar Number is not seeded in NPCI

ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಬೇಕಾಗಿರುತ್ತದೆ. ಜಿಲ್ಲೆಗಳಿಗೆ ರೈತರ ವಿವರಗಳನ್ನು ನೀಡಲಾಗಿದೆ

Bank Name And IFSC Code are not related to each other

ಕೇಂದ್ರ ಸರ್ಕಾರಕ್ಕೆ ಸಹಕಾರಿ ಬ್ಯಾಂಕ್ ಗಳ ವಿವರಗಳನ್ನು ಸಲ್ಲಿಸಲಾಗಿದೆ

Bank Name is not as per PFMS Bank Master.

Beneficiary is rejected as Account Type is other than SB / SBA / JD

ಜಿಲ್ಲೆಗಳಿಗೆ ಮಾಹಿತಿಯನ್ನುಸರಿಪಡಿಸಿ ಸಲ್ಲಿಸಲು email ಕಳುಹಿಸಲಾಗಿರುತ್ತದೆ (23.11.2019 ರಂದು) ಇಲ್ಲಿಯವರೆಗೂ ಜಿಲ್ಲೆಗಳಿಂದ ಮಾಹಿತಿ ಬಂದಿರುವುದಿಲ್ಲ ( ಉಡುಪಿ ಜಿಲ್ಲೆ ಹೊರತುಪಡಿಸಿ)

Duplicate Beneficiary Name , Bank Account No and Bank Name not allowed for same scheme

ಕೇಂದ್ರ ಸರ್ಕಾರಕ್ಕೆ ಮರುಪರಿಶೀಲನೆಗೆ ಸಲ್ಲಿಸಲಾಗಿದೆ

IFSC Code  either not present or currently inactive in tbl BankBranch

ಕೇಂದ್ರ ಸರ್ಕಾರಕ್ಕೆ ಮರುಪರಿಶೀಲನೆಗೆ ಸಲ್ಲಿಸಲಾಗಿದೆ

Incorrect Aadhaar Number

ಕೇಂದ್ರ ಸರ್ಕಾರಕ್ಕೆ ಮರುಪರಿಶೀಲನೆಗೆ ಸಲ್ಲಿಸಲಾಗಿದೆ

One or more mandatory tags values are missing.

ಜಿಲ್ಲೆಗಳಿಗೆ ಮಾಹಿತಿಯನ್ನುಸರಿಪಡಿಸಿ ಸಲ್ಲಿಸಲು email ಕಳುಹಿಸಲಾಗಿರುತ್ತದೆ

Rejected by Bank, Account No does not exist in Bank/INVALID/CLOSED

ಜಿಲ್ಲೆಗಳಿಗೆ ಮಾಹಿತಿಯನ್ನುಸರಿಪಡಿಸಿ ಸಲ್ಲಿಸಲು email ಕಳುಹಿಸಲಾಗಿರುತ್ತದೆ

ಪಿ.ಎಂ.ಕಿಸಾನ್ ಯೋಜನೆಯಡಿ ಜಿಲ್ಲೆಗಳಿಂದ ಬರುವ ಸಾಮಾನ್ಯ ಅಹವಾಲುಗಳು

ಕ್ರಮ ಸಂಖ್ಯೆ

ಸಮಸ್ಯೆಗಳು

ಕಾರಣಗಳು

ಪರಿಹರಿಸುವ ಸಂಬಂಧಪಟ್ಟ ಕಛೇರಿ ಮತ್ತು ವಿಧಾನ

 

pmkisan.gov.in ಪೋರ್ಟಲ್ ನಲ್ಲಿ

9

Amount credited to Account Number-NA

Aadhaar number based payment by GoI

ಕೇಂದ್ರ ಕಚೇರಿಯಲ್ಲಿ STATE NODAL OFFICER ಲಾಗಿನ್ನಲ್ಲಿ ಬ್ಯಾಂಕ್ ವಿವರ ಪಡೆಯಬಹುದಾಗಿದೆ.

10

PAYMENT STOPPED BY STATE

 XML ರಚನೆಯಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ನಂತರ ಒಂದೇ ಕುಟುಂಬದ ಸದಸ್ಯರೆಂದು fruitspmk.gov.inಪೋರ್ಟಲ್ ನಲ್ಲಿ ಅನರ್ಹಗೊಳಿಸಿದ ಕಾರಣ FTO ಪರಿಶೀಲನೆ ಸಮಯದಲ್ಲಿ stop payment ಮಾಡಲಾಗುತ್ತದೆ

ಕೇಂದ್ರ ಸರ್ಕಾರ                                               ಜಿಲ್ಲೆಗಳಿಂದ ಇಂತಹ ಪ್ರಕರಣಗಳಲ್ಲಿ ಅರ್ಹ ಪ್ರಕರಣಗಳಿದ್ದರೆ ಕೇಂದ್ರ ಕಚೇರಿ ಮಾಹಿತಿ ಸಲ್ಲಿಸಿದರೆ, ಅದನ್ನು ಸರಿಪಡಿಸಲಾಗುವುದು

11

Transaction failed

ಹಣ ವರ್ಗಾವಣೆ ಪ್ರಕ್ರಿಯೆಯ ಅಂತಿಮ ಹಂತದಲ್ಲಿ ಬ್ಯಾಂಕ್ ಗಳಿಂದ ವಹಿವಾಟು ಅಸಫಲವಾದಾಗ

ಕೇಂದ್ರ ಕಚೇರಿಯಲ್ಲಿ STATE NODAL OFFICER ಲಾಗಿನ್ನಲ್ಲಿ ಬ್ಯಾಂಕ್ ವಿವರ ಸರಿಪಡಿಸಬಹುದಾಗಿದೆ.

12

ಇನ್ನೊಬ್ಬರ ಬ್ಯಾಂಕ್ ಖಾತೆಗೆ ಹಣ ಜಮೆಗೊಂಡಿದ್ದರೆ

OPERATOR ಲಾಗಿನ್ನಲ್ಲಿ ನೊಂದಣಿ ಹಂತದಲ್ಲಿ ತಪ್ಪಾಗಿ ಬ್ಯಾಂಕ್ ಖಾತೆ ನಮೂದಾಗಿರುತ್ತದೆ

ಕೇಂದ್ರ ಸರ್ಕಾರ                                               ಜಿಲ್ಲೆಗಳಿಂದ ಇಂತಹ ಪ್ರಕರಣಗಳ   ಮಾಹಿತಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸಿದರೆ, ಅದನ್ನು ಸರಿಪಡಿಸಲಾಗುವುದು

13

ಆಧಾರ್ ಹೆಸರು ತಿದ್ದುಪಡಿ ಮಾಡುವ ಕುರಿತು

ನೊಂದಣಿ ಹಂತದಲ್ಲಿ name scoring ಗೆ ಗರಿಷ್ಟ ಶೇ.60 ರಷ್ಟಿದ್ದ ಕಾರಣ ಹೆಸರುಗಳಲ್ಲಿ ಲೋಪಗಳುಂಟಾಗಿರುತ್ತದೆ.

ಕೇಂದ್ರ ಸರ್ಕಾರ ದ   pmkisan.gov.in ಪೋರ್ಟಲ್ ನಲ್ಲಿ ಅದನ್ನು ಸರಿಪಡಿಸಲು ಅವಕಾಶ ನೀಡಲಾಗಿದೆ.

]]>
Mon, 16 Feb 2026 07:57:32 +0530 shivuagrico
Maize DBT&ಮೆಕ್ಕೆಜೋಳ ಬೆಳೆಗಾರರಿಗೆ 250 ರೂಪಾಯಿ ಆರ್ಥಿಕ ನೆರವು ಜಮಾ ಪ್ರಾರಂಭ,ನಿಮ್ಮ ಜಮಾ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ https://krushirushi.in/Maize-DBT-250 https://krushirushi.in/Maize-DBT-250 Maize support price-ಮೆಕ್ಕೆಜೋಳ ಬೆಳೆಗಾರರಿಗಾಗಿ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ; ಬೆಲೆ ಕುಸಿತಕ್ಕೆ ಬ್ರೇಕ್

ಕರ್ನಾಟಕ ಸರ್ಕಾರವು 2025-26ನೇ ಸಾಲಿನ ಖಾರಿಫ್ ಹಂಗಾಮಿನ ಮೆಕ್ಕೆಜೋಳ ಬೆಳೆಗಾರರಿಗಾಗಿ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯನ್ನು ಜಾರಿಗೆ ತಂದಿದೆ. ದಾಖಲೆ ಪ್ರಮಾಣದ ಉತ್ಪಾದನೆಯಿಂದ ಬೆಲೆ ಕುಸಿತ ಎದುರಿಸುತ್ತಿರುವ ರೈತರಿಗೆ ಪ್ರತಿ ಕ್ವಿಂಟಾಲ್‌ಗೆ 2,150 ರೂ. ನಿಗದಿತ ದರ ನಿಗದಿಪಡಿಸಲಾಗಿದೆ. ಮಾರುಕಟ್ಟೆ ದರ 1,900 ರೂ.ಗಿಂತ ಕಡಿಮೆಯಾದರೆ 250 ರೂ.ವರೆಗೆ ಬೆಲೆ ವ್ಯತ್ಯಾಸ ಪರಿಹಾರ ಧನ ದೊರೆಯಲಿದೆ. ಈ ಯೋಜನೆಯಿಂದ 10 ಲಕ್ಷಕ್ಕೂ ಹೆಚ್ಚು ರೈತರು ಪ್ರಯೋಜನ ಪಡೆಯಲಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.

ಕರ್ನಾಟಕ ಸರ್ಕಾರವು 2025-26ನೇ ಸಾಲಿನ ಖಾರಿಫ್ ಹಂಗಾಮಿನ ಮೆಕ್ಕೆಜೋಳ ಬೆಳೆಗಾರರಿಗೆ ನೆರವಾಗಲು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯನ್ನು ಜಾರಿಗೊಳಿಸಿದೆ. ರಾಜ್ಯದಲ್ಲಿ ಈ ಬಾರಿ ದಾಖಲೆ ಪ್ರಮಾಣದ ಮೆಕ್ಕೆಜೋಳ ಉತ್ಪಾದನೆಯಾಗಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರಿಗೆ ಈ ಯೋಜನೆ ಆಸರೆಯಾಗಲಿದೆ. ಈ ಯೋಜನೆಯಿಂದ ರಾಜ್ಯದಲ್ಲಿನ 10 ಲಕ್ಷಕ್ಕೂ ಹೆಚ್ಚಿನ ಮೆಕ್ಕೆಜೋಳ ಬೆಳೆಗಾರರಿಗೆ ಅನುಕೂಲವಾಗಲಿದೆ. ರಾಜ್ಯದ ಮೆಕ್ಕೆಜೋಳ ಬೆಳೆಗಾರರು ಎದುರಿಸುತ್ತಿರುವ 'ಬೆಲೆ ಕುಸಿತ' ಮತ್ತು 'ಸಂಕಷ್ಟದ ಮಾರಾಟ'ವನ್ನು ತಡೆಯಲು ಸರ್ಕಾರವು ಪ್ರತಿ ಕ್ವಿಂಟಾಲ್‌ಗೆ ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆಯನ್ನು ನಿಗದಿಪಡಿಸಿದೆ.

ಏನಿದು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ?

ಕರ್ನಾಟಕ ಸರ್ಕಾರವು 2025-26ನೇ ಸಾಲಿನ ಖಾರಿಫ್ ಹಂಗಾಮಿನ ಮೆಕ್ಕೆಜೋಳ ಬೆಳೆಗಾರರಿಗೆ ನೆರವಾಗಲು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ ಜಾರಿಗೆ ತಂದಿದ್ದು, ಪ್ರತಿ ಕ್ವಿಂಟಾಲ್‌ಗೆ 2,150 ರೂ. ನಿಗದಿತ ದರ ನಿಗದಿಪಡಿಸಿದೆ. ಮಾರುಕಟ್ಟೆ ದರವು 1,900 ರೂ. ಅಥವಾ ಅದಕ್ಕಿಂತ ಕಡಿಮೆಯಾದಲ್ಲಿ ರೈತರಿಗೆ ಪ್ರತಿ ಕ್ವಿಂಟಾಲ್‌ಗೆ 250 ರೂ.ವರೆಗೆ ಬೆಲೆ ವ್ಯತ್ಯಾಸದ ಪರಿಹಾರ ಧನ ದೊರೆಯಲಿದೆ. ಮಾರುಕಟ್ಟೆ ಬೆಲೆ ಏರಿಕೆಯಾದಂತೆ ಈ ಪರಿಹಾರದ ಮೊತ್ತವು ಕಡಿಮೆಯಾಗುತ್ತಾ ಹೋಗುತ್ತದೆ ಮತ್ತು ನಿಗದಿತ ಬೆಲೆಯನ್ನು ತಲುಪಿದಾಗ ಸ್ಥಗಿತಗೊಳ್ಳುತ್ತದೆ. ಆದರೆ ರಾಜ್ಯದ ಸಾಮಾನ್ಯ ಸಂಗ್ರಹಣೆ ಯೋಜನೆಯಡಿ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಾಲ್‌ಗೆ 2,400 ರೂ.ಕನಿಷ್ಠ ಬೆಂಬಲ ಬೆಲೆ ಲಭ್ಯವಿರುತ್ತದೆ. ಈ ಯೋಜನೆಯು ನಿಯೋಜಿತ ಎಪಿಎಂಸಿ ಮತ್ತು ಉಪ-ಮಾರುಕಟ್ಟೆ ಯಾರ್ಡ್‌ಗಳಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ ಮೂಲಕ ಮಾರಾಟವಾಗುವ ಗರಿಷ್ಠ ನಾಲ್ಕು ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಒಳಗೊಳ್ಳಲಿದ್ದು, ಪ್ರತಿ ರೈತರಿಗೆ ಗರಿಷ್ಠ 50 ಕ್ವಿಂಟಾಲ್ ಅಥವಾ ಪ್ರತಿ ಎಕರೆಗೆ ಗರಿಷ್ಠ 12 ಕ್ವಿಂಟಾಲ್ ಮಿತಿಯವರೆಗೆ ಮಾತ್ರ ಸೌಲಭ್ಯ ಸಿಗಲಿದೆ. ಕಡ್ಡಾಯ ಗುಣಮಟ್ಟದ ತಪಾಸಣೆ ಮತ್ತು ದಾಖಲೆಗಳ ಪರಿಶೀಲನೆಯ ನಂತರ ಪರಿಹಾರದ ಮೊತ್ತವನ್ನು ನೇರ ನಗದು ವರ್ಗಾವಣೆ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.

 

ಬೆಲೆ ಮತ್ತು ಪರಿಹಾರದ ವಿವರಗಳು

  • ಪ್ರಸ್ತುತ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆಯು ಪ್ರತಿ ಕ್ವಿಂಟಾಲ್‌ಗೆ 1,600 ರೂ. ದಿಂದ 2,000 ರೂ. ರಷ್ಟಿದ್ದು, ಇದು ರೈತರಿಗೆ ಆರ್ಥಿಕ ನಷ್ಟ ಉಂಟುಮಾಡುತ್ತಿದೆ.
  • ಈ ನಷ್ಟವನ್ನು ಸರಿದೂಗಿಸಲು ಸರ್ಕಾರವು ಪ್ರತಿ ಕ್ವಿಂಟಾಲ್ ಮೆಕ್ಕೆಜೋಳಕ್ಕೆ ₹2,150 ರಂತೆ ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆಯನ್ನು ನಿಗದಿಪಡಿಸಿದೆ.
  • ಮಾರುಕಟ್ಟೆಯ ಸರಾಸರಿ ಮಾದರಿ ಬೆಲೆಯು 1,900 ರೂ. ಅಥವಾ ಅದಕ್ಕಿಂತ ಕಡಿಮೆ ಇದ್ದಾಗ, ರೈತರಿಗೆ ಪ್ರತಿ ಕ್ವಿಂಟಾಲ್‌ಗೆ ಗರಿಷ್ಠ 250 ರೂ. ವರೆಗೆ ಬೆಲೆ ವ್ಯತ್ಯಾಸದ ಪರಿಹಾರವನ್ನು ನೀಡಲಾಗುತ್ತದೆ.
  • ಮಾರುಕಟ್ಟೆ ಬೆಲೆಯು 1,900 ರೂ. ಕ್ಕಿಂತ ಹೆಚ್ಚಾದಂತೆ ಪರಿಹಾರದ ಮೊತ್ತವು ಹಂತ-ಹಂತವಾಗಿ ಕಡಿಮೆಯಾಗುತ್ತಾ ಹೋಗುತ್ತದೆ.
  • ಒಂದು ವೇಳೆ ಮಾರುಕಟ್ಟೆ ಬೆಲೆಯು ನಿಗದಿತ ದರವಾದ 2,150 ರೂ. ಅಥವಾ ಅದಕ್ಕಿಂತ ಹೆಚ್ಚಿದ್ದರೆ, ಈ ಯೋಜನೆಯಡಿ ಯಾವುದೇ ಪರಿಹಾರ ಅನ್ವಯಿಸುವುದಿಲ್ಲ.
  • ಅರ್ಹ ರೈತರಿಗೆ ಸಿಗಬೇಕಾದ ಈ ಬೆಲೆ ವ್ಯತ್ಯಾಸದ ಮೊತ್ತವನ್ನು ನೇರ ನಗದು ವರ್ಗಾವಣೆ ಮೂಲಕ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.

ಪ್ರಸ್ತುತ ಮಾರುಕಟ್ಟೆ ಸ್ಥಿತಿಗತಿ ಏನು?

  • ಕರ್ನಾಟಕ ರಾಜ್ಯದಲ್ಲಿ ಈ ಬಾರಿ ದಾಖಲೆ ಪ್ರಮಾಣದಲ್ಲಿ ಮೆಕ್ಕೆಜೋಳದ ಉತ್ಪಾದನೆಯಾಗಿದ್ದು, ಒಟ್ಟು 17.64 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈ ಬೆಳೆಯನ್ನು ಬೆಳೆಯಲಾಗಿದೆ.
  • ಪ್ರಸಕ್ತ ಸಾಲಿನಲ್ಲಿ ಒಟ್ಟು ಮೆಕ್ಕೆಜೋಳದ ಉತ್ಪಾದನೆಯು 53.80 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಆಗಬಹುದು ಎಂದು ಅಂದಾಜಿಸಲಾಗಿದೆ.
  • 2025ರ ಆಗಸ್ಟ್‌ನಿಂದ ಡಿಸೆಂಬರ್ ತಿಂಗಳ ಅವಧಿಯಲ್ಲಿಯೇ ಸುಮಾರು 20.50 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಮೆಕ್ಕೆಜೋಳವು ವಿವಿಧ ಎಪಿಎಂಸಿ ಮಾರುಕಟ್ಟೆಗಳಿಗೆ ಬಂದಿದೆ.
  • ಈ ಅವಧಿಯಲ್ಲಿ ಮಾರುಕಟ್ಟೆಗೆ ಬಂದಿರುವ ಮೆಕ್ಕೆಜೋಳದ ಪ್ರಮಾಣವು ರಾಜ್ಯದ ಒಟ್ಟು ಅಂದಾಜು ಉತ್ಪಾದನೆಯ ಶೇಕಡಾ 38ಕ್ಕಿಂತಲೂ ಅಧಿಕವಾಗಿದೆ.
  • ಉತ್ಪಾದನೆಯಲ್ಲಿನ ಈ ಭಾರಿ ಏರಿಕೆಯೇ ಮಾರುಕಟ್ಟೆಯಲ್ಲಿ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದ್ದು, ರೈತರು ಸಂಕಷ್ಟ ಎದುರಿಸುವಂತಾಗಿದೆ.
  • ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮೆಕ್ಕೆಜೋಳವನ್ನು ಬೆಳೆಯಲಾಗುತ್ತದೆಯಾದರೂ, ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಇದರ ಸಾಂದ್ರತೆ ಹೆಚ್ಚಾಗಿದೆ.
  • ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಮೆಕ್ಕೆಜೋಳ ಬೆಳೆಯುವ ಪ್ರಮುಖ ಕೇಂದ್ರಗಳಾಗಿವೆ.
  • ಮಧ್ಯ ಮತ್ತು ದಕ್ಷಿಣ ಕರ್ನಾಟಕ ಭಾಗದಲ್ಲಿ ದಾವಣಗೆರೆ, ಹಾವೇರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಈ ಬೆಳೆಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ.
  • ಅದರಲ್ಲೂ ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳು ರಾಜ್ಯದ ಪ್ರಮುಖ ಮೆಕ್ಕೆಜೋಳದ ಮಾರುಕಟ್ಟೆ ಕೇಂದ್ರಗಳಾಗಿ ಗುರುತಿಸಿಕೊಂಡಿವೆ.

ಯೋಜನೆಯ ಅರ್ಹತೆ ಮತ್ತು ಮಿತಿಗಳು

  • ಒಬ್ಬ ರೈತರು ಈ ಯೋಜನೆಯ ಮೂಲಕ ಗರಿಷ್ಠ 50 ಕ್ವಿಂಟಾಲ್‌ ಮೆಕ್ಕೆಜೋಳಕ್ಕೆ ಮಾತ್ರ ಬೆಲೆ ವ್ಯತ್ಯಾಸದ ಪರಿಹಾರವನ್ನು ಪಡೆಯಲು ಅವಕಾಶವಿದೆ.
  • ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ, ಪ್ರತಿ ಎಕರೆಗೆ ಗರಿಷ್ಠ 12 ಕ್ವಿಂಟಾಲ್‌ ಮೆಕ್ಕೆಜೋಳವನ್ನು ಮಾತ್ರ ಯೋಜನೆಯಡಿ ಪರಿಗಣಿಸಲಾಗುತ್ತದೆ.
  • ರಾಜ್ಯಾದ್ಯಂತ ಒಟ್ಟಾರೆಯಾಗಿ ಗರಿಷ್ಠ 4 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳದ ವಹಿವಾಟಿಗೆ ಮಾತ್ರ ಈ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯ ಲಾಭ ಸಿಗಲಿದೆ.
  • ಈ ಮಿತಿಗಳನ್ನು ವಿಧಿಸುವ ಮೂಲಕ ಸರ್ಕಾರವು ಹೆಚ್ಚಿನ ಸಂಖ್ಯೆಯ ಸಣ್ಣ ರೈತರಿಗೆ ಯೋಜನೆಯ ಪ್ರಯೋಜನ ತಲುಪುವಂತೆ ಗುರಿ ಹೊಂದಿದೆ.
  • ಅರ್ಹ ಫಲಾನುಭವಿಗಳನ್ನು ಗುರುತಿಸಲು ರೈತರ ಭೂ ದಾಖಲೆಗಳನ್ನು ಫ್ರೂಟ್ಸ್‌ ತಂತ್ರಾಂಶದ ಮೂಲಕ ಕಡ್ಡಾಯವಾಗಿ ಪರಿಶೀಲಿಸಲಾಗುತ್ತದೆ.

ಯಾರಿಗೆ ಈ ಯೋಜನೆ ಅನ್ವಯಿಸುವುದಿಲ್ಲ?

  • ಎಥೆನಾಲ್ ಉತ್ಪಾದನಾ ಘಟಕಗಳಿಗೆ ಮೆಕ್ಕೆಜೋಳವನ್ನು ಪೂರೈಕೆ ಮಾಡಿದ ರೈತರಿಗೆ ಈ ಯೋಜನೆಯಡಿ ಪರಿಹಾರ ಧನ ಅನ್ವಯಿಸುವುದಿಲ್ಲ.
  • ಕೋಳಿ ಆಹಾರ ಅಥವಾ ಜಾನುವಾರು ಆಹಾರ ತಯಾರಿಕಾ ಘಟಕಗಳಿಗೆ ನೇರವಾಗಿ ಮೆಕ್ಕೆಜೋಳವನ್ನು ಮಾರಾಟ ಮಾಡಿದ ರೈತರನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ.
  • ಕರ್ನಾಟಕ ಹಾಲು ಮಹಾಮಂಡಳಿ ಅಥವಾ ಅದರ ಒಕ್ಕೂಟಗಳಿಗೆ ಮೆಕ್ಕೆಜೋಳ ಪೂರೈಸಿದ ರೈತರು ಕೂಡ ಈ ಸೌಲಭ್ಯ ಪಡೆಯಲು ಅರ್ಹರಲ್ಲ.
  • ಈ ಮೇಲಿನ ಸಂಸ್ಥೆಗಳಿಗೆ ಈಗಾಗಲೇ ಪೂರೈಕೆ ಮಾಡಿರುವ ರೈತರಿಗೆ ಸರ್ಕಾರದ ಈ ಬೆಲೆ ವ್ಯತ್ಯಾಸದ ಪರಿಹಾರ ಧನ ದೊರೆಯುವುದಿಲ್ಲ ಎಂದು ಅಧಿಕೃತವಾಗಿ ತಿಳಿಸಲಾಗಿದೆ.

ಅನುಷ್ಠಾನ ಪ್ರಕ್ರಿಯೆ ಮತ್ತು ನೋಂದಣಿ ಹೇಗೆ?

  • ಈ ಯೋಜನೆಯನ್ನು ಸಂಪೂರ್ಣವಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ವತಿಯಿಂದ ಜಾರಿಗೊಳಿಸಲಾಗುತ್ತದೆ.
  • ನೋಂದಣಿಗಾಗಿ ಮೊದಲಿಗೆ, ರೈತರು ಕರ್ನಾಟಕ ಸರ್ಕಾರದ ಅಧಿಕೃತ ಕರ್ನಾಟಕ ಕಿಸಾನ್ ಪೋರ್ಟಲ್‌ kkisan.karnataka.gov.in/ ಗೆ ಭೇಟಿ ನೀಡಬೇಕು.
  • ಪೋರ್ಟಲ್‌ನಲ್ಲಿ ಲಭ್ಯವಿರುವ "ರೈತರ ನೋಂದಣಿ" ಅಥವಾ ಸಂಬಂಧಿತ ಯೋಜನೆಯ ಲಿಂಕ್ ಅನ್ನು ಹುಡುಕಿ ಅದರ ಮೇಲೆ ಕ್ಲಿಕ್ ಮಾಡಬೇಕು.
  • ನಂತರ, NeML ವೇದಿಕೆಯ ಮೂಲಕ ನಿಮ್ಮ ಆಧಾರ್ ಕಾರ್ಡ್ ಬಳಸಿ ಬಯೋಮೆಟ್ರಿಕ್ ದೃಢೀಕರಣ ಅಥವಾ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
  • ನಿಮ್ಮ ಜಮೀನಿನ ಮಾಹಿತಿ ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಲು, FRUITS ತಂತ್ರಾಂಶದಲ್ಲಿ ದಾಖಲಾಗಿರುವ ಭೂ ದಾಖಲೆಗಳನ್ನು ನಿಮ್ಮ ಕಿಸಾನ್‌ ಪ್ರೊಫೈಲ್‌ಗೆ ಲಿಂಕ್ ಮಾಡಲಾಗಿದೆಯೇ ಎಂದು ಪರಿಶೀಲಿಸಿಕೊಳ್ಳಿ.
  • ಮಾರುಕಟ್ಟೆಗೆ ತರುವ ಮೆಕ್ಕೆಜೋಳದ ಗುಣಮಟ್ಟವನ್ನು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ನೇಮಿಸಿದ ತಾಂತ್ರಿಕ ಅಧಿಕಾರಿಗಳು ಕಡ್ಡಾಯವಾಗಿ ತಪಾಸಣೆ ಮಾಡುತ್ತಾರೆ.
  • ಈ ಪ್ರಕ್ರಿಯೆಯು ಪಾರದರ್ಶಕತೆಯಿಂದ ಕೂಡಿರಲು ಭೂ ದಾಖಲೆ ಮತ್ತು ಬೆಳೆ ಸಮೀಕ್ಷೆಯ ದತ್ತಾಂಶಗಳ ತಾಳೆ ನೋಡುವುದು ಅತ್ಯಂತ ಅವಶ್ಯಕವಾಗಿದೆ.
  • ಅಂತಿಮವಾಗಿ, ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು; ತದನಂತರ ಅಧಿಕಾರಿಗಳು ಭೂ ದಾಖಲೆಗಳು, ಆಧಾರ್ ಮತ್ತು ಬೆಳೆ ಸಮೀಕ್ಷೆಯ ದತ್ತಾಂಶಗಳನ್ನು ಆಧರಿಸಿ ನಿಮ್ಮ ಅರ್ಜಿಯನ್ನು ಪರಿಶೀಲಿಸುತ್ತಾರೆ.
  • ರೈತರಿಗೆ ಸಿಗಬೇಕಾದ ಪರಿಹಾರದ ಮೊತ್ತವನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗುತ್ತದೆ.



ಆಡಳಿತಾತ್ಮಕ ಮೇಲ್ವಿಚಾರಣೆ

ಜಿಲ್ಲಾಧಿಕಾರಿಗಳು ಈ ಯೋಜನೆಯ ಸಂಪೂರ್ಣ ಉಸ್ತುವಾರಿ ವಹಿಸಲಿದ್ದು, ಮಾರುಕಟ್ಟೆಗೆ ಬರುವ ಮೆಕ್ಕೆಜೋಳದ ದೈನಂದಿನ ವರದಿ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸುತ್ತಾರೆ. ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಮೊದಲ ವಹಿವಾಟು ನಡೆದ ದಿನದಿಂದ ಒಂದು ತಿಂಗಳ ಕಾಲ ಈ ಯೋಜನೆ ಚಾಲ್ತಿಯಲ್ಲಿರುತ್ತದೆ. ಯೋಜನೆ ಮುಗಿದ ಎರಡು ತಿಂಗಳೊಳಗೆ ಸಮಗ್ರ ಲೆಕ್ಕಪರಿಶೋಧನೆ ನಡೆಸಲಾಗುವುದು.

Maize DBT-ಮೆಕ್ಕೆಜೋಳ ಬೆಳೆಗಾರರಿಗೆ 250 ರೂಪಾಯಿ ಆರ್ಥಿಕ ನೆರವು ಜಮಾ ಪ್ರಾರಂಭ,ನಿಮ್ಮ ಜಮಾ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application ಡೌನ್ಲೊಡ್ ಮಾಡಿ,install ಮಾಡಿಕೊಳ್ಳಿ

https://play.google.com/store/apps/details?id=com.dbtkarnataka

ನಂತರ ನಿಮ್ಮ ಆಧಾರ್ ನಂಬರ್ ಹಾಕಿ Get OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Varify OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ

ನಂತರ payment status ಮೇಲೆ ಕ್ಲಿಕ್ ಮಾಡಿ

ನಂತರ ಮೆಕ್ಕೆಜೋಳ ಬೆಳೆಗಾರರಿಗೆ ಆರ್ಥಿಕ ನೆರವು ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಇಲ್ಲಿಯವರೆಗೆ ಯಾವ ಯೋಜನೆಯಡಿ ಎಷ್ಟು ಹಣ ಜಮಾ ಆಗಿದೆ ಎಂದು ತೋರಿಸುತ್ತದೆ.

Hi

]]>
Wed, 11 Feb 2026 08:32:08 +0530 shivuagrico
Bele vime&ಈ ಜಿಲ್ಲೆಯ 7880 ರೈತರಿಗೆ 12.40 ಕೋಟಿ ರೂ. ಬೆಳೆ ವಿಮಾ ಪರಿಹಾರ ಬಿಡುಗಡೆ https://krushirushi.in/Bele-vime-2026 https://krushirushi.in/Bele-vime-2026 Bele vime-ಈ ಜಿಲ್ಲೆಯ 7880 ರೈತರಿಗೆ 12.40 ಕೋಟಿ ರೂ. ಬೆಳೆ ವಿಮಾ ಪರಿಹಾರ ಬಿಡುಗಡೆ 

ಚಿತ್ರದುರ್ಗ (Chitradurga) ಜಿಲ್ಲೆಯ ರೈತರು 2025ರ ಖರೀಫ್ ಹಂಗಾಮಿನಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿಗೊಳಗಾಗಿದ್ದರು. ಈ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ (Pradhan Mantri Fasal Bima Yojana) ಅಡಿಯಲ್ಲಿ ಸುಮಾರು 7,880 ರೈತರಿಗೆ ಒಟ್ಟು 12.40 ಕೋಟಿ ರೂ. ಮೊತ್ತದ ಬೆಳೆ ವಿಮಾ ಪರಿಹಾರವನ್ನು (Crop Insurance Compensation) ಬಿಡುಗಡೆ ಮಾಡಲಾಗಿದೆ.

ಸಂಸದ ಗೋವಿಂದ ಕಾರಜೋಳ (Govinda Karajola) ಅವರು ಲೋಕಸಭೆಯಲ್ಲಿ ಕೇಳಿದ ಚುಕ್ಕೆರಹಿತ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವ ಆರ್.ಎನ್.ಕೆ. ಠಾಕೂರ್ ಅವರು ಲಿಖಿತ ಉತ್ತರ ನೀಡಿದ್ದಾರೆ. ಈ ಉತ್ತರದಲ್ಲಿ 2016ರಿಂದ ಕರ್ನಾಟಕದಲ್ಲಿ ಯಶಸ್ವಿಯಾಗಿ ಜಾರಿಯಲ್ಲಿದ್ದು, ಇದುವರೆಗೆ ರಾಜ್ಯದ 1.34 ಕೋಟಿ ಅರ್ಜಿಗಳಿಗೆ ಒಟ್ಟು 18,783 ಕೋಟಿ ರೂ. ಮೊತ್ತದ ಬೆಳೆ ವಿಮಾ ಪರಿಹಾರವನ್ನು ರೈತರಿಗೆ ಪಾವತಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಬಿಡುಗಡೆಯಾದ 12.40 ಕೋಟಿ ರೂ. ಪರಿಹಾರವು ಸಂಕಷ್ಟದಲ್ಲಿರುವ ರೈತ ಕುಟುಂಬಗಳಿಗೆ ಮಹತ್ವದ ಆರ್ಥಿಕ ನೆರವಾಗಿದ್ದು, ಅವರ ಜೀವನೋಪಾಯಕ್ಕೆ ಹೊಸ ಭರವಸೆ ನೀಡಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.

ಅದೇ ರೀತಿ ನಿಮ್ಮ ಜಿಲ್ಲೆಯಲ್ಲಿ ನಿಮಗೇಷ್ಟು ಬೆಳೆವಿಮೆ ಜಮಾ ಆಗಿದೆ ಚೆಕ್ ಮಾಡಿ

 ನಿಮ್ಮ ಜಮಾ (Belevime hana jama)ಸ್ಟೇಟಸ್ ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

 https://samrakshane.karnataka.gov.in/ 

ನಂತರ ವರ್ಷದ ಆಯ್ಕೆ "2025-26" ಮತ್ತು ಋುತು "Kharif

" ಎಂದು select ಮಾಡಿ, "ಮುಂದೆ/Go" ಮೇಲೆ click ಮಾಡಿ

Farmer ಕಾಲಂನಲ್ಲಿ "Check status." ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಆಧಾರ್ ನಂಬರ್(Aadhaar number) ಅಥವಾ Proposal number ಅಥವಾ Mobile number ಮೇಲೆ ಕ್ಲಿಕ್ ಮಾಡಿ, ನೀವು ಬೆಳೆವಿಮೆ(Cropinsurance) ಕಟ್ಟಿದ Acknowledgment number ಅಥವಾ Mobile number ಹಾಕಿ,Captcha type ಮಾಡಿ,Search ಮೇಲೆ ಕ್ಲಿಕ್ ಮಾಡಿ

(ಸೂಚನೆ-ಬೆಳೆವಿಮೆ/cropinsurance ಕಟ್ಟಿದ ರಶೀದಿ ಕಳೆದಿದ್ದರೆ ಅಥವಾ Acknowledgment number ಗೊತ್ತಿಲ್ಲದಿದ್ದರೆ,ಮೊಬೈಲ್ ನಂಬರ್ select ಮಾಡಿ,ಮೊಬೈಲ್ ನಂಬರ್ ಹಾಕಿ ಚೆಕ್ ಮಾಡಬಹುದು)

ಈ ಕೆಳಗಿನಂತೆ ಬೆಳೆವಿಮೆ(crop insurance) ಜಮಾ ಮಾಹಿತಿ ದೊರೆಯಲಿದೆ.

]]>
Wed, 04 Feb 2026 20:25:01 +0530 shivuagrico
SSLC exams&2026 ಎಸ್‌ಎಸ್‌ಎಲ್‌ಸಿ ಟಾಪರ್‌ಗಳಿಗೆ ಸಿಗಲಿದೆ 50,000 ರೂ. ನಗದು ಬಹುಮಾನ https://krushirushi.in/SSLC-exams-2026 https://krushirushi.in/SSLC-exams-2026 SSLC exams-2026 ಎಸ್‌ಎಸ್‌ಎಲ್‌ಸಿ ಟಾಪರ್‌ಗಳಿಗೆ ಸಿಗಲಿದೆ 50,000 ರೂ. ನಗದು ಬಹುಮಾನ

ರಾಜ್ಯದ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ನೀಡಲು ಲ್ಯಾಪ್‌ಟಾಪ್‌ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದ ಕರ್ನಾಟಕ ಸರ್ಕಾರವು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರೋತ್ಸಾಹದಾಯಕ ಕ್ರಮಗಳಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಲ್ಯಾಪ್‌ಟಾಪ್ ಬದಲಿಗೆ ಈಗ ನೇರವಾಗಿ 50,000 ರೂ. ನಗದು ಬಹುಮಾನ ನೀಡಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಯಲ್ಲಿ ಆಗಿರುವ ಬದಲಾವಣೆಗಳು ಏನು? ಈ ಯೋಜನೆಗೆ ಯಾರೆಲ್ಲಾ ಅರ್ಹರು? ಇತ್ಯಾದಿ ಮಾಹಿತಿಗಳು ಇಲ್ಲಿವೆ.

ಲ್ಯಾಪ್‌ಟಾಪ್‌ ಬದಲು ನಗದು ಬಹುಮಾನ ಯೋಜನೆ ಜಾರಿ ಏಕೆ?

ಕರ್ನಾಟಕ ಸರ್ಕಾರವು ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಲು ಮತ್ತು ತಂತ್ರಜ್ಞಾನದ ಅರಿವು ಮೂಡಿಸಲು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲಾ ಹಾಗೂ ಬ್ಲಾಕ್ ಮಟ್ಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತಲಾ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸುವ ಮಹತ್ತರ ಯೋಜನೆಯನ್ನು ಜಾರಿಗೆ ತಂದಿತ್ತು. ಕರ್ನಾಟಕ ಸರ್ಕಾರವು ಸರ್ಕಾರಿ ಶಾಲಾ ಎಸ್‌ಎಸ್‌ಎಲ್‌ಸಿ ಟಾಪರ್‌ಗಳಿಗೆ ನೀಡುತ್ತಿದ್ದ ಪ್ರೋತ್ಸಾಹಕ ಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಈ ಹಿಂದೆ ನೀಡಲಾಗುತ್ತಿದ್ದ ಲ್ಯಾಪ್‌ಟಾಪ್‌ಗಳ ಬದಲಿಗೆ ಈಗ 50,000 ರೂ. ನಗದು ಬಹುಮಾನವನ್ನು ನೀಡಲು ನಿರ್ಧರಿಸಿದೆ. ಈ ಹೊಸ ನಿಯಮದಂತೆ, ಪ್ರತಿ ಶೈಕ್ಷಣಿಕ ಜಿಲ್ಲೆಯ ಮೊದಲ ಮೂರು ಸ್ಥಾನ ಪಡೆದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಲ್ಯಾಪ್‌ಟಾಪ್‌ಗಳ ಖರೀದಿ ಮತ್ತು ವಿತರಣೆಯಲ್ಲಿನ ವಿಳಂಬ ಹಾಗೂ ತಾಂತ್ರಿಕ ಸವಾಲುಗಳನ್ನು ನಿವಾರಿಸಲು ಈ ಕ್ರಮ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ಈ ಹಣವನ್ನು ತಮ್ಮ ಇಚ್ಛೆಯಂತೆ ಮುಂದಿನ ಶಿಕ್ಷಣದ ಶುಲ್ಕ, ಪುಸ್ತಕಗಳು ಅಥವಾ ಅವರಿಗೆ ಬೇಕಾದ ಕಂಪನಿಯ ಎಲೆಕ್ಟ್ರಾನಿಕ್ ಸಾಧನಗಳನ್ನು ಖರೀದಿಸಲು ಬಳಸುವ ಮೂಲಕ ಹೆಚ್ಚಿನ ಶೈಕ್ಷಣಿಕ ಸ್ವಾತಂತ್ರ್ಯವನ್ನು ಪಡೆಯಲಿದ್ದಾರೆ. ಈ ಸಬಂಧ ಜ.22 ರಂದು ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.

 

ಬದಲಾವಣೆಗೆ ಕಾರಣಗಳೇನು?

  • ಅರ್ಹತೆ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಗೂ ತಲಾ 50,000 ರೂ. ನಗದು ಬಹುಮಾನವನ್ನು ನೀಡಲಾಗುತ್ತದೆ.
  • ಜಿಲ್ಲಾ ಮಟ್ಟದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಮೊದಲ ಮೂರು ಸ್ಥಾನಗಳನ್ನು ಪಡೆದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಮಾತ್ರ ಈ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ.
  • ಈ ಯೋಜನೆಯಲ್ಲಿ ಪಾರದರ್ಶಕತೆ ಕಾಪಾಡಲು, ಬಹುಮಾನದ ಮೊತ್ತವನ್ನು ವಿದ್ಯಾರ್ಥಿಗಳ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗುತ್ತದೆ.
  • ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ರಾಜ್ಯಾದ್ಯಂತ ಒಟ್ಟು 758 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಪ್ರಯೋಜನಕ್ಕಾಗಿ ಗುರುತಿಸಲಾಗಿದೆ.
  • ಲ್ಯಾಪ್‌ಟಾಪ್ ಬದಲಿಗೆ ನಗದು ನೀಡುವ ಈ ನಿರ್ಧಾರವು ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣದ ಅಗತ್ಯಗಳಿಗೆ ತಕ್ಕಂತೆ ಹಣವನ್ನು ಬಳಸಿಕೊಳ್ಳಲು ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುತ್ತದೆ.

ಅರ್ಹತಾ ಮಾನದಂಡಗಳೇನು?

  • ಈ ಯೋಜನೆಯು ಕೇವಲ ಸರ್ಕಾರಿ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಖಾಸಗಿ ಅಥವಾ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಇದು ಅನ್ವಯಿಸುವುದಿಲ್ಲ.
  • ಅಭ್ಯರ್ಥಿಯು ಜಿಲ್ಲಾ ಮಟ್ಟದಲ್ಲಿ ಎಸ್‌ಎಸ್‌ಎಲ್‌ಸಿ (SSLC) ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಮೊದಲ ಮೂರು ಸ್ಥಾನಗಳಲ್ಲಿ ಒಬ್ಬರಾಗಿರಬೇಕು.
  • ವಿದ್ಯಾರ್ಥಿಯ ಸಂಪೂರ್ಣ ಶೈಕ್ಷಣಿಕ ಮಾಹಿತಿಯು ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಕಡ್ಡಾಯವಾಗಿ ದಾಖಲಾಗಿರಬೇಕು.
  • ಅರ್ಹ ವಿದ್ಯಾರ್ಥಿಯ ಹೆಸರಿನಲ್ಲಿಯೇ ಬ್ಯಾಂಕ್ ಖಾತೆ ಇರಬೇಕು ಮತ್ತು ಆ ಖಾತೆಯು ಕಡ್ಡಾಯವಾಗಿ ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಆಗಿರಬೇಕು

ನಗದು ಬಹುಮಾನ ನೀಡಿಕೆ ಹೇಗೆ?

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಅರ್ಹ ಫಲಾನುಭವಿಗಳನ್ನು ಶಿಕ್ಷಣ ಇಲಾಖೆಯ ಕಛೇರಿಯಿಂದಲೇ ನೇರವಾಗಿ ಗುರುತಿಸಲಾಗುತ್ತದೆ. ಹೀಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆಯಾ ಜಿಲ್ಲೆಯ ಉಪನಿರ್ದೇಶಕರು (ಆಡಳಿತ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರ ಸೌಲಭ್ಯವನ್ನು ವಿತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದರೊಂದಿಗೆ, ಪ್ರತಿಭಾವಂತ ವಿದ್ಯಾರ್ಥಿಗಳು ಈ ಸೌಲಭ್ಯಕ್ಕಾಗಿ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿಯೂ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ಸರ್ಕಾರವು ಈ ಯೋಜನೆಗಾಗಿ ಪ್ರತ್ಯೇಕ ಆನ್‌ಲೈನ್ ಅರ್ಜಿ ನಮೂನೆಯನ್ನು ತನ್ನ ಅಧಿಕೃತ ವೆಬ್‌ಸೈಟ್ dce.karnataka.gov.in ನಲ್ಲಿ ಲಭ್ಯವಾಗುವಂತೆ ಮಾಡಿದೆ. ಉನ್ನತ ಶಿಕ್ಷಣದ ಉದ್ದೇಶಕ್ಕಾಗಿ ಈ ಸೌಲಭ್ಯವನ್ನು ಬಯಸುವ ಯಾವುದೇ ಅರ್ಹ ವಿದ್ಯಾರ್ಥಿಯು ಈ ಜಾಲತಾಣದ ಮೂಲಕ ಸುಲಭವಾಗಿ ನೋಂದಾಯಿಸಿಕೊಳ್ಳಬಹುದು.

]]>
Mon, 02 Feb 2026 12:49:08 +0530 shivuagrico
Gruhalakshmi list&ಕೊನೆಗೂ ಈ ಪಟ್ಟಿಯಲ್ಲಿರುವವರಿಗೆ ಒಟ್ಟಿಗೆ ಜಮಾ ಆಗಲಿದೆ 2 ತಿಂಗಳ ಗೃಹಲಕ್ಷ್ಮಿ ಹಣ https://krushirushi.in/Gruhalakshmi-list-2415 https://krushirushi.in/Gruhalakshmi-list-2415 Gruhalakshmi list-ಕೊನೆಗೂ ಈ ಪಟ್ಟಿಯಲ್ಲಿರುವವರಿಗೆ ಒಟ್ಟಿಗೆ ಜಮಾ ಆಯ್ತು 2 ತಿಂಗಳ ಗೃಹಲಕ್ಷ್ಮಿ ಹಣ

ರಾಜ್ಯ ಸರ್ಕಾರವು ಗೃಹಲಕ್ಷ್ಮೀ ಫಲಾನುಭವಿಗಳಿಗೆ ಸಿಹಿಸುದ್ದಿ ನೀಡಿದ್ದು, ಗೃಹಲಕ್ಷ್ಮಿ ಯೋಜನೆಯ ಎರಡು ಕಂತಿನ ಹಣ ಬಿಡುಗಡೆ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಳ‌ರ್, ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೆ 24 ಕಂತಿನ ಹಣ ಬಿಡುಗಡೆ ಮಾಡಲಾಗಿದೆ

ಇದೀಗ ಮತ್ತೆ ಎರಡು ಕಂತು ಹಣ ಬಿಡುಗಡೆ ಮಾಡುತ್ತಿದ್ದೇವೆ ಈ ಮೂಲಕ ಗೃಹಲಕ್ಷ್ಮಿಯೋಜನೆಯಡಿ ಒಟ್ಟು 26 ಕಂತಿನಲ್ಲಿ 52 ಸಾವಿರ ರೂಪಾಯಿ ಫಲಾನುಭವಿಗಳಿಗೆ ನೀಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.

ಅರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://ahara.kar.nic.in/Home/EServices

ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ e-Ration Card ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ show village list ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಜಿಲ್ಲೆ,ತಾಲೂಕು,ಗ್ರಾಮ ಪಂಚಾಯತಿ,ಗ್ರಾಮ select ಮಾಡಿ,Go ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನ ಪಟ್ಟಿಯಲ್ಲಿರುವ(Gruhalakshmi list)ಅರ್ಹ ಗೃಹಿಣಿಯರಿಗೆ ಮಾತ್ರ ಗೃಹಲಕ್ಷ್ಮಿ ಹಣ(Gruhalakshmi amount) ಜಮಾ(dbt) ಆಗಲಿದೆ.

Gruhalakshmi status-ಗೃಹಲಕ್ಷ್ಮಿ ಇಲ್ಲಿಯವರೆಗೂ ಎಷ್ಟು ಕಂತಿನ ಹಣ ಜಮಾ ಆಗಿದೆ ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application ಡೌನ್ಲೊಡ್ ಮಾಡಿ,install ಮಾಡಿಕೊಳ್ಳಿ

https://play.google.com/store/apps/details?id=com.dbtkarnataka

ನಂತರ ನಿಮ್ಮ ಆಧಾರ್ ನಂಬರ್ ಹಾಕಿ Get OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Varify OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ

ನಂತರ payment status ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಇಲ್ಲಿಯವರೆಗೆ ಎಷ್ಟು ಗೃಹಲಕ್ಷ್ಮಿ(Gruhalakahmi) ಕಂತಿನ ಹಣ ಜಮಾ ಆಗಿದೆ ಎಂದು ತೋರಿಸುತ್ತದೆ.

]]>
Mon, 02 Feb 2026 07:26:53 +0530 shivuagrico
Samudaya bhavana&ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಸಿಗಲಿದೆ 20 ಲಕ್ಷ ರೂ.ಅನುದಾನ https://krushirushi.in/Samudaya-bhavana-2414 https://krushirushi.in/Samudaya-bhavana-2414 Samudaya bhavana-ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಸಿಗಲಿದೆ 20 ಲಕ್ಷ ರೂ.ಅನುದಾನ

ಸಾಮಾಜಿಕ ಹಾಗೂ ಸಾಂಸ್ಕೃತಿಕ ಏಳಿಗೆಗಾಗಿ ಕರ್ನಾಟಕ ಸರ್ಕಾರವು ಒಂದು ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಶುಭ ಸಮಾರಂಭಗಳು, ಸಭೆಗಳು ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲು ಸುಸಜ್ಜಿತ ಕಟ್ಟಡಗಳ ಕೊರತೆಯನ್ನು ನೀಗಿಸಲು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆರ್ಥಿಕ ನೆರವು ನೀಡಲಾಗುತ್ತಿದೆ. ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ಅವರ ಹೆಸರಿನಲ್ಲಿ ಈ ಭವನಗಳನ್ನು ನಿರ್ಮಿಸಲು ಅವಕಾಶವಿದೆ. ಇದು ಸಮುದಾಯದ ಏಳಿಗೆಯ ಜೊತೆಗೆ ಗ್ರಾಮೀಣ ಭಾಗದ ಹಲವು ಅಗತ್ಯತೆಗಳನ್ನು ಪೂರೈಸುತ್ತದೆ. ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಏನು? ಅರ್ಜಿ ಸಲ್ಲಿಸುವುದು ಹೇಗೆ ಇತ್ಯಾದಿ ಮಾಹಿತಿಗಳನ್ನು ತಿಳಿಯೋಣ.

ಏನಿದು ಸಮುದಾಯ ಭವನ ನಿರ್ಮಾಣ ಯೋಜನೆ ?

ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಈ ಯೋಜನೆಯು ಮುಖ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಗತ್ಯಗಳನ್ನು ಪೂರೈಸಲು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಡಾ. ಬಿ.ಆರ್. ಅಂಬೇಡ್ಕರ್ ಅಥವಾ ಡಾ. ಬಾಬು ಜಗಜೀವನ್ ರಾಮ್ ಅವರ ಹೆಸರಿನಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲು 20 ಲಕ್ಷ ರೂ.ದಿಂದ 4 ಕೋಟಿ ರೂ.ವರೆಗೆ ಬೃಹತ್ ಮೊತ್ತದ ಆರ್ಥಿಕ ಸಹಾಯಧನವನ್ನು ನೀಡಲಾಗುತ್ತದೆ. ನೋಂದಾಯಿತ ಸಂಸ್ಥೆಗಳು ತಮ್ಮ ಸ್ವಂತ ಜಾಗ ಅಥವಾ ಸರ್ಕಾರಿ ಮಂಜೂರಾದ ಜಾಗದಲ್ಲಿ ಈ ಭವನಗಳನ್ನು ನಿರ್ಮಿಸಿಕೊಳ್ಳಲು ಅವಕಾಶವಿದ್ದು, ಇದರಿಂದ ಬಡ ವರ್ಗದ ಜನರು ಮದುವೆ, ಸಭೆ-ಸಮಾರಂಭಗಳನ್ನು ಅತ್ಯಂತ ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ನಡೆಸಲು ಸಾಧ್ಯವಾಗುತ್ತದೆ. ಆ ಮೂಲಕ ಖಾಸಗಿ ಕಲ್ಯಾಣ ಮಂಟಪಗಳ ದುಬಾರಿ ವೆಚ್ಚದಿಂದ ಮುಕ್ತಿ ಪಡೆಯಬಹುದು.

 

ಯೋಜನೆಯ ಉದ್ದೇಶವೇನು?

ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಖಾಸಗಿ ಕಲ್ಯಾಣ ಮಂಟಪಗಳ ದುಬಾರಿ ಬಾಡಿಗೆಯನ್ನು ಭರಿಸುವುದು ಕಷ್ಟಕರವಾಗಿದೆ. ಈ ಸಮಸ್ಯೆಗೆ ಪರಿಹಾರವಾಗಿ, ಸರ್ಕಾರವು ಸ್ಥಳೀಯ ಮಟ್ಟದಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಿ, ಅತ್ಯಂತ ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ಸಾರ್ವಜನಿಕ ಬಳಕೆಗೆ ಒದಗಿಸುವ ಉದ್ದೇಶವನ್ನು ಹೊಂದಿದೆ.

ಪ್ರದೇಶವಾರು ಮಂಜೂರಾಗುವ ಅನುದಾನದ ವಿವರ

  • ಗ್ರಾಮ ಮಟ್ಟ: ಹಳ್ಳಿಯ ಮಟ್ಟದಲ್ಲಿ ಸಣ್ಣ ಪ್ರಮಾಣದ ಸಭೆ-ಸಮಾರಂಭಗಳಿಗಾಗಿ ಸಮುದಾಯ ಭವನ ನಿರ್ಮಿಸಲು ಸರ್ಕಾರವು 20 ಲಕ್ಷ ರೂ.ಗಳ ಆರ್ಥಿಕ ನೆರವು ನೀಡುತ್ತದೆ.
  • ಹೋಬಳಿ ಮಟ್ಟ: ಹೋಬಳಿ ಕೇಂದ್ರಗಳಲ್ಲಿ ಭವನ ನಿರ್ಮಾಣ ಮಾಡಲು ಉದ್ದೇಶಿಸಿದರೆ, ಸರ್ಕಾರದಿಂದ 75 ಲಕ್ಷ ರೂ.ಗಳವರೆಗೆ ಅನುದಾನ ಲಭ್ಯವಿರುತ್ತದೆ.
  • ತಾಲ್ಲೂಕು ಮಟ್ಟ: ತಾಲ್ಲೂಕು ಕೇಂದ್ರಗಳಲ್ಲಿ ದೊಡ್ಡ ಮಟ್ಟದ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗಾಗಿ ಭವನ ನಿರ್ಮಿಸಲು 2 ಕೋಟಿ ರೂ.ಗಳ ಬೃಹತ್ ಮೊತ್ತವನ್ನು ಮಂಜೂರು ಮಾಡಲಾಗುತ್ತದೆ.
  • ಜಿಲ್ಲಾ ಮಟ್ಟ: ಜಿಲ್ಲಾ ಕೇಂದ್ರಗಳಲ್ಲಿ ಅತ್ಯಂತ ಸುಸಜ್ಜಿತ ಮತ್ತು ವಿಶಾಲವಾದ ಸಮುದಾಯ ಭವನಗಳ ನಿರ್ಮಾಣಕ್ಕಾಗಿ ಗರಿಷ್ಠ 4 ಕೋಟಿ ರೂ.ಗಳವರೆಗೆ ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತದೆ.

ಅರ್ಹತಾ ಮಾನದಂಡಗಳು ಏನು?

  • ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವ ಯಾವುದೇ ಸಂಘ ಅಥವಾ ಸಂಸ್ಥೆಯು ಕರ್ನಾಟಕ ಸರ್ಕಾರದ ನಿಯಮಗಳ ಅಡಿಯಲ್ಲಿ ಅಧಿಕೃತವಾಗಿ ನೋಂದಾಯಿತವಾಗಿರಬೇಕು. ನೋಂದಾಯಿಸದ ಸಂಸ್ಥೆಗಳಿಗೆ ಈ ಯೋಜನೆಯಡಿ ಅನುದಾನ ಸಿಗುವುದಿಲ್ಲ.
  • ಭವನವನ್ನು ಎಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆಯೋ ಆ ಜಾಗವು ಕಡ್ಡಾಯವಾಗಿ ಸಂಸ್ಥೆಯ ಹೆಸರಿನಲ್ಲಿಯೇ ಇರಬೇಕು. ಒಂದು ವೇಳೆ ಅದು ಸರ್ಕಾರ ನೀಡಿದ ಜಾಗವಾಗಿದ್ದರೆ, ಸರ್ಕಾರದಿಂದ ಅಧಿಕೃತವಾಗಿ ನೀಡಲಾದ ಮಂಜೂರಾತಿ ಪತ್ರ ಅಥವಾ ಹಂಚಿಕೆ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
  • ಈ ಯೋಜನೆಯ ಮುಖ್ಯ ಉದ್ದೇಶ ಹಿಂದುಳಿದವರ ಏಳಿಗೆಯಾಗಿರುವುದರಿಂದ, ಯಾವ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಜನಸಂಖ್ಯೆ ಹೆಚ್ಚಿದೆಯೋ ಅಂತಹ ಪ್ರದೇಶಗಳಲ್ಲಿ ಭವನ ನಿರ್ಮಿಸಲು ಸರ್ಕಾರ ಮೊದಲ ಆದ್ಯತೆ ನೀಡುತ್ತದೆ.
  • ಕಟ್ಟಡದ ಕೆಲಸ ಶುರು ಮಾಡುವ ಮುನ್ನ ಸ್ಥಳೀಯ ನಗರಸಭೆ ಅಥವಾ ಗ್ರಾಮ ಪಂಚಾಯತ್‌ನಂತಹ ಸಮರ್ಥ ಪ್ರಾಧಿಕಾರದಿಂದ ಕಟ್ಟಡದ ನೀಲನಕ್ಷೆ ಮತ್ತು ನಿರ್ಮಾಣ ಪರವಾನಗಿಯನ್ನು ಕಡ್ಡಾಯವಾಗಿ ಪಡೆದಿರಬೇಕು. ಈ ನೀಲನಕ್ಷೆಯು ಎಂಜಿನಿಯರ್‌ಗಳಿಂದ ದೃಢೀಕರಿಸಲ್ಪಟ್ಟಿರಬೇಕು.

ಸಮುದಾಯ ಭವನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲನೆಯದಾಗಿ, ನೀವು ವಾಸಿಸುವ ವ್ಯಾಪ್ತಿಯ ತಾಲ್ಲೂಕು ಅಥವಾ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ ನೇರವಾಗಿ ಭೇಟಿ ನೀಡಿ, ಸಮುದಾಯ ಭವನ ನಿರ್ಮಾಣದ ಸಹಾಯಧನಕ್ಕಾಗಿ ಮೀಸಲಿಟ್ಟಿರುವ ನಿಗದಿತ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು.
  • ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿದ ನಂತರ, ಅದಕ್ಕೆ ಸಂಸ್ಥೆಯ ನೋಂದಣಿ ಪತ್ರ, ಜಮೀನಿನ ಪಹಣಿ ಮತ್ತು ಕಟ್ಟಡದ ನೀಲನಕ್ಷೆಯಂತಹ ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅದೇ ಕಚೇರಿಯಲ್ಲಿ ಸಲ್ಲಿಸಬೇಕು.
  • ನೀವು ಅರ್ಜಿಯನ್ನು ಸಲ್ಲಿಸಿದ ಬಳಿಕ, ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಭವನ ನಿರ್ಮಿಸಲು ಉದ್ದೇಶಿಸಿರುವ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡುತ್ತಾರೆ. ಅವರು ಜಾಗದ ಲಭ್ಯತೆ ಮತ್ತು ಅರ್ಹತೆಯನ್ನು ಪರಿಶೀಲಿಸಿ ವರದಿ ಸಿದ್ಧಪಡಿಸುತ್ತಾರೆ.
  • ಅಧಿಕಾರಿಗಳು ನೀಡಿದ ಸ್ಥಳ ಪರಿಶೀಲನಾ ವರದಿಯ ಆಧಾರದ ಮೇಲೆ, ನಿಮ್ಮ ಪ್ರಸ್ತಾವನೆಯನ್ನು ಅಂತಿಮ ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತದೆ.
  • ಸರ್ಕಾರದ ಮಟ್ಟದಲ್ಲಿ ಅನುಮೋದನೆ ದೊರೆತ ನಂತರ, ಒಟ್ಟಾರೆ ಮೊತ್ತವನ್ನು ಒಮ್ಮೆಗೆ ನೀಡದೆ ಕಟ್ಟಡದ ಕಾಮಗಾರಿಯ ಪ್ರಗತಿಗೆ ಅನುಗುಣವಾಗಿ ಹಂತ-ಹಂತವಾಗಿ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.

ಅಗತ್ಯವಿರುವ ದಾಖಲೆಗಳು

  • ಸಂಘಟನೆಯ ನೋಂದಣಿ ಪ್ರಮಾಣಪತ್ರ
  • ಪಹಣಿ, ಕ್ರಯ ಪತ್ರ ಅಥವಾ ಸರ್ಕಾರಿ ಜಾಗದ ಮಂಜೂರಾತಿ ಪತ್ರ.
  • ಕಟ್ಟಡದ ನೀಲನಕ್ಷೆ ಮತ್ತು ಅನುಮೋದಿತ ಅಂದಾಜು ವೆಚ್ಚದ ಪಟ್ಟಿ.
  • ಸ್ಥಳೀಯ ಗ್ರಾಮ ಪಂಚಾಯತ್ ಅಥವಾ ನಗರಸಭೆಯಿಂದ ಪಡೆದ ಅನುಮತಿ ಪತ್ರ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಈ ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಅಥವಾ ಗೊಂದಲಗಳಿದ್ದಲ್ಲಿ ರಾಜ್ಯ ಸರ್ಕಾರದ 24x7 ಸಹಾಯವಾಣಿ: 94823 00400 ಅಥವಾ ನಿಮ್ಮ ಹತ್ತಿರದ ತಾಲ್ಲೂಕು/ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯನ್ನು ಸಂಪರ್ಕಿಸಿ.

 

]]>
Sat, 31 Jan 2026 08:06:09 +0530 shivuagrico
Remarriage incentive&ವಿಧವಾ ಮರು ವಿವಾಹ ಪ್ರೋತ್ಸಾಹಧನ ಯೋಜನೆ: ಮರು ವಿವಾಹವಾದರೆ ಸಿಗಲಿದೆ 3 ಲಕ್ಷ ರೂ. ಪ್ರೋತ್ಸಾಹಧನ! https://krushirushi.in/Remarriage-incentive-2412 https://krushirushi.in/Remarriage-incentive-2412 Remarriage incentive-ವಿಧವಾ ಮರು ವಿವಾಹ ಪ್ರೋತ್ಸಾಹಧನ ಯೋಜನೆ: ಮರು ವಿವಾಹವಾದರೆ ಸಿಗಲಿದೆ 3 ಲಕ್ಷ ರೂ. ಪ್ರೋತ್ಸಾಹಧನ!

ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿಯ ವಿಧವೆಯರ ಪುನರ್ವಿವಾಹಕ್ಕೆ 3 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡುತ್ತಿದೆ. ಈ ಯೋಜನೆಯು ಮಹಿಳೆಯರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸುವ ಗುರಿ ಹೊಂದಿದೆ. ಮದುವೆಯಾದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಬೇಕು. ಯಾವುದೇ ಆದಾಯ ಮಿತಿ ಇಲ್ಲ. ಅರ್ಹತೆ ಮತ್ತು ಅಗತ್ಯ ದಾಖಲೆಗಳ ವಿವರಗಳನ್ನು ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಲಭ್ಯವಿದೆ.

ಇಂದಿನ ಸಮಾಜ ಎಷ್ಟೇ ಮುಂದುವರಿದಿದ್ದರೂ ಪತಿಯನ್ನು ಕಳೆದುಕೊಂಡ ಮಹಿಳೆಯರನ್ನು ನೋಡುವ ರೀತಿಯೇ ಬೇರೆ. ಅವರಿಗೆ ಇಂದಿಗೂ ಸಮಾನ ಗೌರವಗಳು ಸಿಗುತ್ತಿಲ್ಲ. ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡವರಿಗೆ ಮರು ವಿವಾಹ ಆಗವ ಅವಕಾಶಗಳು ಸಿಗುವುದು ಕಡಿಮೆ. ಹೀಗಾಗಿ ವಿಧವೆಯರ ಮರು ವಿವಾಹಕ್ಕೆ ಸರ್ಕಾರವೇ ಸಂಪೂರ್ಣ ಆರ್ಥಿಕ ಖರ್ಚು ವೆಚ್ಚಗಳನ್ನು ಭರಸುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿಯ ವಿಧವೆಯರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಒಂದು ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಪತಿಯನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಮಹಿಳೆಯರು ಹೊಸ ಬದುಕನ್ನು ಕಟ್ಟಿಕೊಳ್ಳಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಏನಿದು ವಿಧವಾ ಮರು ವಿವಾಹ ಪ್ರೋತ್ಸಾಹಧನ ಯೋಜನೆ? ಈ ಯೋಜನೆಯಡಿ ದೊರೆಯುವ ಆರ್ಥಿಕ ನೆರವು ಎಷ್ಟು? ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.

ಏನಿದು ವಿಧವಾ ಮರು ವಿವಾಹ ಪ್ರೋತ್ಸಾಹಧನ ಯೋಜನೆ?

ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿಯ ವಿಧವೆಯರ ಮರುಬಾಳಿಗೆ ಆಸರೆಯಾಗಲು 3 ಲಕ್ಷ ರೂಪಾಯಿಗಳ ಆರ್ಥಿಕ ಪ್ರೋತ್ಸಾಹಧನ ಯೋಜನೆಯನ್ನು ಜಾರಿಗೆ ತಂದಿದೆ. ಸಾಮಾಜಿಕ ಬದಲಾವಣೆ ಮತ್ತು ವಿಧವೆಯರ ಪುನರ್ವಸತಿಯನ್ನು ಮುಖ್ಯ ಉದ್ದೇಶವಾಗಿಟ್ಟುಕೊಂಡಿರುವ ಈ ಯೋಜನೆಗೆ ಯಾವುದೇ ಆದಾಯದ ಮಿತಿ ಇರುವುದಿಲ್ಲ. ಪರಿಶಿಷ್ಟ ಜಾತಿಗೆ ಸೇರಿದ ವಿಧವೆಯು ಯಾವುದೇ ಧರ್ಮ ಅಥವಾ ಜಾತಿಯ ಪುರುಷನನ್ನು ಮರು ವಿವಾಹವಾದಲ್ಲಿ ಈ ಸೌಲಭ್ಯಕ್ಕೆ ಅರ್ಹರಾಗಿದ್ದು, ಮದುವೆಯಾದ ಒಂದು ವರ್ಷದ ಒಳಗಾಗಿ ಅಧಿಕೃತ ಜಾಲತಾಣದ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಈಗಾಗಲೇ ಸರಳ ವಿವಾಹ ಯೋಜನೆಯಡಿ ಸೌಲಭ್ಯ ಪಡೆದಿದ್ದಲ್ಲಿ 2.50 ಲಕ್ಷ ರೂಪಾಯಿಗಳ ಪ್ರೋತ್ಸಾಹಧನ ಲಭ್ಯವಿರುತ್ತದೆ.

 

ಯೋಜನೆಯ ಮುಖ್ಯ ಉದ್ದೇಶಗಳು

  • ವಿಧವೆಯರ ಮರು ವಿವಾಹವನ್ನು ಉತ್ತೇಜಿಸುವುದು ಮತ್ತು ಅವರಿಗೆ ಸಮಾಜದಲ್ಲಿ ಗೌರವಯುತವಾದ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.
  • ಮರು ವಿವಾಹದ ಮೂಲಕ ಮಹಿಳೆಯರಲ್ಲಿ ಕಳೆದುಹೋದ ಆತ್ಮವಿಶ್ವಾಸವನ್ನು ಮರಳಿ ತಂದು, ಅವರಲ್ಲಿ ಹೊಸ ಬದುಕಿನ ಭರವಸೆ ಮೂಡಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ.
  • ಮರು ವಿವಾಹದ ನಂತರ ಎದುರಾಗಬಹುದಾದ ಆರ್ಥಿಕ ಅಡಚಣೆಗಳನ್ನು ನಿವಾರಿಸಿ, ದಂಪತಿಗಳು ಸ್ವಾವಲಂಬಿಯಾಗಿ ಗೌರವಯುತ ಜೀವನ ನಡೆಸಲು ಆರ್ಥಿಕ ನೆರವು ನೀಡುವುದು ಇದರ ಉದ್ದೇಶವಾಗಿದೆ.
  • ವಿಧವೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮೂಲಕ ಅವರ ಜೀವನದಲ್ಲಿ ಸಕಾರಾತ್ಮಕ ಸಾಮಾಜಿಕ ಬದಲಾವಣೆಯನ್ನು ತರಲು ಈ ಯೋಜನೆ ಸಹಕಾರಿಯಾಗಿದೆ.
  • ಪರಿಶಿಷ್ಟ ಜಾತಿಯ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಮೂಲಕ ಅವರ ಪುನರ್ವಸತಿ ಮತ್ತು ಸುರಕ್ಷಿತ ಭವಿಷ್ಯವನ್ನು ಖಚಿತಪಡಿಸುವುದು ಸರ್ಕಾರದ ಆಶಯವಾಗಿದೆ.

ಪ್ರೋತ್ಸಾಹಧನದ ವಿವರಗಳು

  • ಪರಿಶಿಷ್ಟ ಜಾತಿಯ ವಿಧವೆಯು ಯಾವುದೇ ಧರ್ಮ ಅಥವಾ ಜಾತಿಯ ಪುರುಷನನ್ನು ಮರು ಮದುವೆಯಾದ ಸಂದರ್ಭದಲ್ಲಿ ಸರ್ಕಾರವು ಅವರಿಗೆ 3,00,000 ರೂ. (ಮೂರು ಲಕ್ಷ ರೂಪಾಯಿ) ಗಳ ಪ್ರೋತ್ಸಾಹಧನವನ್ನು ನೀಡುತ್ತದೆ.
  • ಫಲಾನುಭವಿಯು ಈ ಹಿಂದೆ ಸರ್ಕಾರದ 'ಸರಳ ವಿವಾಹ' ಯೋಜನೆಯಡಿ ಈಗಾಗಲೇ ಪ್ರೋತ್ಸಾಹಧನವನ್ನು ಪಡೆದಿದ್ದರೆ, ಅಂತಹವರಿಗೆ ಈ ಯೋಜನೆಯ ಅಡಿಯಲ್ಲಿ 2,50,000 ರೂ. (ಎರಡು ಲಕ್ಷದ ಐವತ್ತು ಸಾವಿರ ರೂಪಾಯಿ) ಗಳ ಸಹಾಯಧನ ಲಭ್ಯವಿರುತ್ತದೆ.
  • ಈ ಧನಸಹಾಯವನ್ನು ಪಡೆಯಲು ಯಾವುದೇ ಆದಾಯದ ಮಿತಿ ಇರುವುದಿಲ್ಲ, ಇದು ಎಲ್ಲಾ ಆರ್ಥಿಕ ಸ್ತರದ ಪರಿಶಿಷ್ಟ ಜಾತಿಯ ವಿಧವೆಯರಿಗೆ ಅನ್ವಯಿಸುತ್ತದೆ.
  • ಅರ್ಜಿದಾರರು ಸಲ್ಲಿಸಿದ ದಾಖಲೆಗಳು ಮತ್ತು ಸ್ಥಳ ಪರಿಶೀಲನೆ ಯಶಸ್ವಿಯಾದ ನಂತರ, ಈ ಮೊತ್ತವನ್ನು ನೇರವಾಗಿ ವಿಧವೆಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
  • ಮದುವೆಯಾದ ಒಂದು ವರ್ಷದ ಒಳಗಾಗಿ ಅರ್ಜಿ ಸಲ್ಲಿಸುವವರಿಗೆ ಮಾತ್ರ ಈ ಹಣಕಾಸಿನ ಸೌಲಭ್ಯವನ್ನು ಒದಗಿಸಲಾಗುತ್ತದೆ.

ಅರ್ಹತಾ ಮಾನದಂಡಗಳೇನು?

  • ಅರ್ಜಿಯನ್ನು ಸಲ್ಲಿಸುವ ಮಹಿಳೆಯು ಕಡ್ಡಾಯವಾಗಿ ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದವರಾಗಿರಬೇಕು.
  • ಮರು ವಿವಾಹವಾಗುವ ದಂಪತಿಗಳು ಕಡ್ಡಾಯವಾಗಿ ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು.
  • ಈ ಯೋಜನೆಯ ವಿಶೇಷತೆಯೆಂದರೆ ಸೌಲಭ್ಯ ಪಡೆಯಲು ಯಾವುದೇ ರೀತಿಯ ಆದಾಯದ ಮಿತಿ ಇರುವುದಿಲ್ಲ.
  • ಮರು ವಿವಾಹವಾದ ಒಂದು ವರ್ಷದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
  • ವಿವಾಹವು ಸರ್ಕಾರದ ನಿಯಮಗಳಂತೆ ಕಡ್ಡಾಯವಾಗಿ ಅಧಿಕೃತವಾಗಿ ನೋಂದಣಿಯಾಗಿರಬೇಕು ಮತ್ತು ಅದರ ಪ್ರಮಾಣಪತ್ರ ಹೊಂದಿರಬೇಕು.
  • ಮದುವೆಯಾಗುವ ಪುರುಷನು (ಸಂಗಾತಿ) ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೇರಿದವರಾಗಿದ್ದರೂ ಈ ಯೋಜನೆಗೆ ಅರ್ಹರಾಗಿರುತ್ತಾರೆ, ಇಲ್ಲಿ ಯಾವುದೇ ಜಾತಿಯ ನಿರ್ಬಂಧವಿಲ್ಲ.

    ವಿಧವಾ ಮರು ವಿವಾಹ ಯೋಜನೆ ಜಾಲತಾಣ
    • ಮೊದಲು ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ಪೋರ್ಟಲ್ swdservices.karnataka.gov.in ಗೆ ಲಾಗಿನ್ ಆಗಿ.
    • ನಿಮ್ಮ ಆಧಾರ್ ಸಂಖ್ಯೆಯನ್ನು ಬಳಸಿ ನೋಂದಣಿ ಮಾಡಿಕೊಳ್ಳಿ.
    • ದಂಪತಿಗಳ ಹೆಸರು, ವಿಳಾಸ ಮತ್ತು ಮದುವೆಯ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
    • ಮೇಲೆ ತಿಳಿಸಿದ ಎಲ್ಲಾ ಅಗತ್ಯ ದಾಖಲೆಗಳನ್ನು ನಿಗದಿಪಡಿಸಿದ ಗಾತ್ರದಲ್ಲಿ ಅಪ್‌ಲೋಡ್ ಮಾಡಿ.
    • ಮಾಹಿತಿಯನ್ನು ಪರಿಶೀಲಿಸಿ 'Submit' ಬಟನ್ ಒತ್ತಿ. ನಂತರ ಬರುವ ರಸೀದಿಯಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ.
    • ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ನಂತರ, ಅನುಮೋದನೆ ದೊರೆತರೆ ಹಣವು ನೇರವಾಗಿ ವಿಧವೆಯ ಬ್ಯಾಂಕ್ ಖಾತೆಗೆ ಹಣವನ್ನು ನೇರವಾಗಿ ಜಮೆಯಾಗುತ್ತದೆ.

    ಅಗತ್ಯವಿರುವ ದಾಖಲೆಗಳು

    • ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿ (400KB ಒಳಗೆ) ಅಪ್‌ಲೋಡ್ ಮಾಡಬೇಕಾಗುತ್ತದೆ.
    • ವಧು ಮತ್ತು ವರನ ಆಧಾರ್ ಕಾರ್ಡ್.
    • ವಧುವಿನ ಜಾತಿ ಪ್ರಮಾಣ ಪತ್ರ (15 ಅಂಕಿಗಳ RD ಸಂಖ್ಯೆ).
    • ಮರು ವಿವಾಹದ ನೋಂದಣಿ ಪ್ರಮಾಣ ಪತ್ರ
    • ಮದುವೆಯ ಜಂಟಿ ಭಾವಚಿತ್ರ
    • ವಧು ಮತ್ತು ವರನ ವಯಸ್ಸಿನ ಪುರಾವೆ (SSLC ಅಂಕಪಟ್ಟಿ ಅಥವಾ ಜನನ ಪ್ರಮಾಣ ಪತ್ರ).
    • ಮೊದಲ ಪತಿಯ ಮರಣ ಪ್ರಮಾಣ ಪತ್ರ
    • ಮೊದಲ ಪತಿಯ ವಿಳಾಸದ ಪುರಾವೆ (ಯಾವುದಾದರೊಂದು).
    • ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ.

    ಸಹಾಯವಾಣಿ

    • ಹೆಚ್ಚಿನ ಮಾಹಿತಿಗಾಗಿ ಅಥವಾ ತಾಂತ್ರಿಕ ತೊಂದರೆಗಳಿದ್ದಲ್ಲಿ ದೂರವಾಣಿ: 080-22340956 / 080-22634300 ಗೆ ಸಂಪರ್ಕಿಸಬಹುದಾಗಿದೆ.
    • ಮೊಬೈಲ್: 09008400078 / 09480843005


]]>
Fri, 30 Jan 2026 12:19:14 +0530 shivuagrico
Tengu belevime&ತೆಂಗಿಗೆ ಹೆಚ್ಚಿದ ಬೇಡಿಕೆ,3250 ರೂಪಾಯಿ ಬೆಳೆವಿಮೆ ಕಟ್ಟಿ 65,000 ರೂಪಾಯಿ ಬೆಳೆವಿಮೆ ಪಡೆಯಿರಿ https://krushirushi.in/Tengu-belevime-2413 https://krushirushi.in/Tengu-belevime-2413 Tengu belevime-ತೆಂಗಿಗೆ ಹೆಚ್ಚಿದ ಬೇಡಿಕೆ,3250 ರೂಪಾಯಿ ಬೆಳೆವಿಮೆ ಕಟ್ಟಿ 65,000 ರೂಪಾಯಿ ಬೆಳೆವಿಮೆ ಪಡೆಯಿರಿ

ಕರ್ನಾಟಕದ ಲಕ್ಷಾಂತರ ರೈತರ ದಶಕಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ಸಿಕ್ಕಿದೆ. ತೆಂಗು ರಾಜ್ಯದ ಪ್ರಮುಖ ಬೆಳೆಯಾಗಿದ್ದರೂ ವಿಮಾ ವ್ಯಾಪ್ತಿಗೆ ಒಳಪಟ್ಟಿರಲಿಲ್ಲ. ತೆಂಗಿಗೆ ಭಾದಿಸುತ್ತಿರುವ ರೋಗಳು ಹಾಗೂ ಬರಗಾಲದಿಂದಾಗಿ ತೆಂಗು ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಅಡಿಕೆ ಮತ್ತು ಕಾಳುಮೆಣಸಿನಂತೆಯೇ ತೆಂಗು ಬೆಳೆಯನ್ನೂ 'ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ'ಯಡಿ ತರಲು ತೋಟಗಾರಿಕಾ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಈ ಕುರಿತಾದ ಪ್ರಸ್ತಾವನೆಯು ಸರ್ಕಾರದ ಅಂತಿಮ ಅನುಮೋದನೆಯ ಹಂತದಲ್ಲಿದ್ದು, ಜೂನ್ ತಿಂಗಳಿನಿಂದ ಜಾರಿಗೆ ಬರುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಏನಿದು ತೆಂಗು ವಿಮೆ ಯೋಜನೆ? ರೈತರಿಗೆ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.

ಏನಿದು ತೆಂಗು ಬೆಳೆ ವಿಮೆ ಯೋಜನೆ ?

ತೆಂಗು ಬೆಳೆ ವಿಮಾ ಯೋಜನೆಯು ಪ್ರಕೃತಿ ವಿಕೋಪ, ಕೀಟಬಾಧೆ ಅಥವಾ ಹವಾಮಾನ ಏರುಪೇರಿನಿಂದ ನಷ್ಟ ಅನುಭವಿಸುವ ತೆಂಗು ಬೆಳೆಗಾರರಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶ ಹೊಂದಿರುವ ಯೋಜನೆಯಾಗಿದೆ. ಈ ಯೋಜನೆಯಡಿ ಪ್ರತಿ ಹೆಕ್ಟೇರ್‌ಗೆ 65,000 ರೂ. ವಿಮಾ ಮೊತ್ತವನ್ನು ನಿಗದಿಪಡಿಸಲಾಗಿದ್ದು, ರೈತರು ಇದರ ಕೇವಲ 5% (ಅಂದಾಜು 3,250 ರೂ.) ಪ್ರೀಮಿಯಂ ಮೊತ್ತವನ್ನು ಪಾವತಿಸುವ ಮೂಲಕ ನೋಂದಾಯಿಸಿಕೊಳ್ಳಬಹುದು. ಬರಗಾಲ, ಅನಿರೀಕ್ಷಿತ ಮಳೆ ಅಥವಾ ರೋಗಬಾಧೆಯಿಂದ ಇಳುವರಿ ಕಡಿಮೆಯಾದಲ್ಲಿ, ಹೋಬಳಿ ಮಟ್ಟದ ಹವಾಮಾನ ದತ್ತಾಂಶಗಳನ್ನು ಆಧರಿಸಿ ವಿಮಾ ಕಂಪನಿಗಳು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಪರಿಹಾರ ಮೊತ್ತವನ್ನು ಪಾವತಿಸುತ್ತವೆ. ಈ ಯೋಜನೆಯು ಪ್ರಸ್ತುತ ಸರ್ಕಾರದ ಅಂತಿಮ ಅನುಮೋದನೆಯ ಹಂತದಲ್ಲಿದ್ದು, ಮುಂಬರುವ ಜೂನ್ ತಿಂಗಳಿನಿಂದ ಜಾರಿಗೆ ಬರುವ ನಿರೀಕ್ಷೆಯಿದೆ.

ಯೋಜನೆಯ ಪ್ರಮುಖ ಅಂಶಗಳು

  • ವಿಮಾ ಮೊತ್ತ: ಈ ಯೋಜನೆಯ ಅಡಿಯಲ್ಲಿ ಪ್ರತಿ ಹೆಕ್ಟೇರ್ ತೆಂಗು ಬೆಳೆಗೆ ಗರಿಷ್ಠ 65,000 ರೂ.ಮೊತ್ತದ ವಿಮಾ ರಕ್ಷಣೆಯನ್ನು ನಿಗದಿಪಡಿಸಲಾಗಿದೆ.
  • ರೈತರ ಪ್ರೀಮಿಯಂ ಪಾಲು: ಬೆಳೆಗಾರರು ವಿಮಾ ಮೊತ್ತದ ಕೇವಲ ಶೇ. 5 ರಷ್ಟು ಅಂದರೆ ಅಂದಾಜು 3,250 ರೂ. ಹಣವನ್ನು ಮಾತ್ರ ಪ್ರೀಮಿಯಂ ಆಗಿ ಪಾವತಿಸಬೇಕಾಗುತ್ತದೆ.
  • ಯೋಜನೆಯ ಜಾರಿ: ಸರ್ಕಾರದ ಅಂತಿಮ ಅನುಮೋದನೆ ಮತ್ತು ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ, ಮುಂಬರುವ ಜೂನ್ ತಿಂಗಳಿನಿಂದ ಈ ಯೋಜನೆ ಅಧಿಕೃತವಾಗಿ ಜಾರಿಗೆ ಬರಲಿದೆ.
  • ಪರಿಹಾರದ ಲೆಕ್ಕಾಚಾರ: ಹೋಬಳಿ ಮಟ್ಟದ ಹವಾಮಾನ ಕೇಂದ್ರ ಹಾಗೂ ಗ್ರಾಮ ಪಂಚಾಯತ್ ಮಟ್ಟದ ಮಳೆ ಮಾಪನ ಕೇಂದ್ರಗಳಿಂದ ಸಿಗುವ ದತ್ತಾಂಶಗಳ ಆಧಾರದ ಮೇಲೆ ಬೆಳೆ ನಷ್ಟವನ್ನು ಅಂದಾಜಿಸಿ ರೈತರಿಗೆ ಪರಿಹಾರ ನೀಡಲಾಗುತ್ತದೆ.

ಪ್ರಮುಖ ಬೆಳೆ ವಿಮೆ ದರಗಳ ಹೋಲಿಕೆ

  • ತೆಂಗು ಬೆಳೆ: ತೆಂಗಿನ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 65,000 ರೂ. ವಿಮಾ ಮೊತ್ತವನ್ನು ನಿಗದಿಪಡಿಸಲಾಗಿದ್ದು, ರೈತರು ಇದರ 5% ಅಂದರೆ ಸುಮಾರು 3,250 ರೂ. ಹಣವನ್ನು ಪ್ರೀಮಿಯಂ ಆಗಿ ಪಾವತಿಸಬೇಕಾಗುತ್ತದೆ.
  • ಅಡಿಕೆ ಬೆಳೆ: ಅಡಿಕೆ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 1,28,000 ರೂ. ರಷ್ಟು ಹೆಚ್ಚಿನ ವಿಮಾ ಮೊತ್ತದ ರಕ್ಷಣೆ ಲಭ್ಯವಿದ್ದು, ಇದಕ್ಕೆ ಸರ್ಕಾರ ನಿಗದಿಪಡಿಸಿದ ದರದಂತೆ ಪ್ರೀಮಿಯಂ ಪಾವತಿಸಬೇಕು.
  • ಕಾಳು ಮೆಣಸು: ಕಾಳು ಮೆಣಸು ಬೆಳೆಗೆ ಪ್ರತಿ ಹೆಕ್ಟೇರ್‌ಗೆ 47,000 ರೂ. ವಿಮಾ ಮೊತ್ತವನ್ನು ನಿಗದಿಪಡಿಸಲಾಗಿದ್ದು, ಇದಕ್ಕೂ ಸಹ ಇಲಾಖೆ ಸೂಚಿಸಿದ ನಿಗದಿತ ದರದಂತೆ ವಿಮಾ ಕಂತನ್ನು ಕಟ್ಟಬೇಕಾಗುತ್ತದೆ.

ತೆಂಗಿನ ಮರ ಹತ್ತುವವರಿಗೆ 'ಕೇರಾ' ಸುರಕ್ಷಾ ಯೋಜನೆಯಡಿ 7 ಲಕ್ಷ ರೂ. ವಿಮೆ

ತೆಂಗಿನ ಮರ ಏರುವ ಕಾರ್ಮಿಕರ ಜೀವಕ್ಕೆ ರಕ್ಷಣೆ ನೀಡಲು ಕೇಂದ್ರ ಸರ್ಕಾರವು 'ಕೇರಾ' ಸುರಕ್ಷಾ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ. ತೆಂಗು ಅಭಿವೃದ್ಧಿ ಮಂಡಳಿ ಮತ್ತು ದಿ ನ್ಯೂ ಇಂಡಿಯಾ ಅಶೂರೆನ್ಸ್ ಕಂಪನಿಯ ಸಹಯೋಗದಲ್ಲಿ ಇದು ಕಾರ್ಯನಿರ್ವಹಿಸುತ್ತದೆ.

ಯಾರಿಗೆಲ್ಲಾ ಅನ್ವಯಿಸುತ್ತದೆ?

  • ಮರ ಹತ್ತಿ ಎಳನೀರು ಅಥವಾ ತೆಂಗಿನಕಾಯಿ ಕೀಳುವ ಕೆಲಸಗಾರರು ಹಾಗೂ ನೀರಾ ಇಳಿಸುವ ತಂತ್ರಜ್ಞರಿಗೆ ಈ ಯೋಜನೆಯಡಿ ಪೂರ್ಣ ವಿಮಾ ರಕ್ಷಣೆ ದೊರೆಯುತ್ತದೆ.
  • ತೆಂಗಿನ ತಳಿಗಳ ಸಂಕರೀಕರಣ ಪ್ರಕ್ರಿಯೆಯಲ್ಲಿ ತೊಡಗಿರುವ ನುರಿತ ಕೆಲಸಗಾರರು ಈ ವಿಮೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ.
  • ತೆಂಗು ಅಭಿವೃದ್ಧಿ ಮಂಡಳಿಯ ವತಿಯಿಂದ 'ಫ್ರೆಂಡ್ಸ್ ಆಫ್ ಕೋಕೋನಟ್ ಟ್ರೀ' ಎಂಬ ಕೌಶಲ ತರಬೇತಿ ಪಡೆದು ವೃತ್ತಿ ಮಾಡುತ್ತಿರುವ ಎಲ್ಲಾ ಕಾರ್ಮಿಕರು ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ.

ವಿಮಾ ಕಂತು ಮತ್ತು ಪರಿಹಾರದ ವಿವರ

  • ಈ ಯೋಜನೆಯ ಒಟ್ಟು ವಾರ್ಷಿಕ ಪ್ರೀಮಿಯಂ ಮೊತ್ತ 956 ರೂ. ಆಗಿದ್ದು, ಇದರಲ್ಲಿ ರೈತರು ಅಥವಾ ಕಾರ್ಮಿಕರು ಕೇವಲ 239 ರೂ. ಪಾವತಿಸಬೇಕಾಗುತ್ತದೆ. ಉಳಿದ 717 ರೂ.ಮೊತ್ತವನ್ನು ತೆಂಗು ಅಭಿವೃದ್ಧಿ ಮಂಡಳಿಯೇ ಭರಿಸುತ್ತದೆ.
  • ಕೆಲಸದ ಸಮಯದಲ್ಲಿ ಆಕಸ್ಮಿಕವಾಗಿ ಮರಣ ಹೊಂದಿದರೆ ಅಥವಾ ಶಾಶ್ವತವಾಗಿ ಅಂಗವೈಕಲ್ಯಕ್ಕೆ ತುತ್ತಾದರೆ ಕುಟುಂಬಕ್ಕೆ 7 ಲಕ್ಷ ರೂ.ಪರಿಹಾರ ಧನ ಸಿಗಲಿದೆ.
  • ಅಪಘಾತದಿಂದಾಗಿ ಭಾಗಶಃ ಅಂಗವೈಕಲ್ಯ ಸಂಭವಿಸಿದಲ್ಲಿ ಕಾರ್ಮಿಕರಿಗೆ 3.50 ಲಕ್ಷ ರೂ. ವರೆಗೆ ವಿಮಾ ಹಣ ದೊರೆಯುತ್ತದೆ.
  • ಚಿಕಿತ್ಸೆಯ ಅಗತ್ಯವಿದ್ದಲ್ಲಿ ಆಸ್ಪತ್ರೆಯ ವೆಚ್ಚಕ್ಕಾಗಿ ಗರಿಷ್ಠ 2 ಲಕ್ಷ ರೂ.ದವರೆಗೆ ಮರುಪಾವತಿ ಪಡೆಯಲು ಅವಕಾಶವಿದೆ.
  • ಯೋಜನೆಯಡಿ ಆಂಬುಲೆನ್ಸ್ ಶುಲ್ಕಕ್ಕಾಗಿ 3,500 ರೂ.ಮತ್ತು ಅಂತ್ಯಕ್ರಿಯೆಯ ಕಾರ್ಯಗಳಿಗಾಗಿ 5,500 ರೂ. ಹೆಚ್ಚುವರಿ ಧನಸಹಾಯ ಲಭ್ಯವಿರುತ್ತದೆ. ( ಕಾರ್ಮಿಕರ ಪಿಂಚಣಿ ಯೋಜನೆ )


ತೆಂಗು ಬೆಳೆಗೆ ವಿಮೆ ಏಕಿರಬೇಕು?

ವಿಶ್ವದ ಒಟ್ಟು ತೆಂಗು ಉತ್ಪಾದನೆಯಲ್ಲಿ ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ರಾಷ್ಟ್ರಗಳ ಜೊತೆಗೂಡಿ ಭಾರತವು ಶೇ. 73 ರಷ್ಟು ದೊಡ್ಡ ಪಾಲನ್ನು ಹೊಂದಿದ್ದರೂ ಸಹ, ಇಲ್ಲಿನ ಬೆಳೆಗಾರರು ನಿರಂತರವಾಗಿ ಹಲವು ಗಂಭೀರ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಮುಖ್ಯವಾಗಿ ಕಪ್ಪು ತಲೆ ಕೀಟ ಮತ್ತು ನುಸಿ ರೋಗದಂತಹ ಭೀಕರ ರೋಗಬಾಧೆಗಳಿಂದ ಇಳುವರಿ ಗಣನೀಯವಾಗಿ ಕುಸಿಯುತ್ತಿದ್ದರೆ, ಮತ್ತೊಂದೆಡೆ ತೀವ್ರ ಬರಗಾಲ ಅಥವಾ ಅತಿಯಾದ ಮಳೆಯಂತಹ ಹವಾಮಾನ ವೈಪರೀತ್ಯಗಳಿಂದ ತೆಂಗಿನ ಮರಗಳು ಒಣಗಿ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಇದರ ಜೊತೆಗೆ, ತೆಂಗಿನ ಮರ ಏರುವಾಗ ಸಂಭವಿಸಬಹುದಾದ ಆಕಸ್ಮಿಕ ಅಪಘಾತಗಳ ಭೀತಿಯು ಕಾರ್ಮಿಕರ ಮತ್ತು ಅವರ ಕುಟುಂಬಗಳ ಜೀವನವನ್ನು ಅತಂತ್ರ ಸ್ಥಿತಿಗೆ ತಳ್ಳುತ್ತಿದ್ದು, ಇಂತಹ ಸವಾಲುಗಳನ್ನು ಎದುರಿಸಲು ಈಗ ಸರ್ಕಾರ ಜಾರಿಗೆ ತರುತ್ತಿರುವ ವಿಮಾ ಯೋಜನೆಗಳು ಅತ್ಯಗತ್ಯವಾಗಿವೆ.

ಅರ್ಜಿ ಸಲ್ಲಿಸುವುದು ಹೇಗೆ?

  • ಆಸಕ್ತ ರೈತರು ಮತ್ತು ಕಾರ್ಮಿಕರು ತಮ್ಮ ವ್ಯಾಪ್ತಿಯ ಹತ್ತಿರದ ತೋಟಗಾರಿಕಾ ಇಲಾಖೆಯ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಸಂಪರ್ಕಿಸಬೇಕು.
  • ಇಲಾಖೆಯಲ್ಲಿ ಲಭ್ಯವಿರುವ ನಿಗದಿತ ಅರ್ಜಿ ನಮೂನೆಯನ್ನು ಪಡೆದು, ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ.
  • ಅರ್ಜಿಯ ಜೊತೆಗೆ ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್‌ಬುಕ್ ಪ್ರತಿ, ಪಹಣಿ (RTC) ಮತ್ತು ಸಕ್ರಿಯ ಮೊಬೈಲ್ ಸಂಖ್ಯೆಯನ್ನು ಒದಗಿಸುವುದು ಕಡ್ಡಾಯವಾಗಿದೆ.
  • ಯೋಜನೆಯಡಿ ನಿಗದಿಪಡಿಸಿದ ರೈತರ ಪಾಲಿನ ಪ್ರೀಮಿಯಂ ಮೊತ್ತವನ್ನು (ತೆಂಗು ವಿಮೆಗೆ ಅಂದಾಜು 3,250 ರೂ. ಅಥವಾ ಕೇರಾ ಸುರಕ್ಷಾ ಯೋಜನೆಗೆ 239ರೂ. ) ಬ್ಯಾಂಕ್ ಅಥವಾ ಇಲಾಖೆ ಸೂಚಿಸಿದ ಕೇಂದ್ರಗಳಲ್ಲಿ ಪಾವತಿಸಬೇಕು.
  • 'ಕೇರಾ' ಸುರಕ್ಷಾ ವಿಮಾ ಯೋಜನೆಗೆ ನೋಂದಾಯಿಸಿಕೊಳ್ಳಲು ಮಾರ್ಚ್ ಅಂತ್ಯದವರೆಗೆ ಮಾತ್ರ ಅವಕಾಶವಿದ್ದು, ರೈತರು ಶೀಘ್ರವಾಗಿ ಅರ್ಜಿ ಸಲ್ಲಿಸುವುದು ಸೂಕ್ತ.

ಹೆಚ್ಚಿನ ಮಾಹಿತಿಗಾಗಿ

ಹೆಚ್ಚಿನ ಮಾಹಿತಿಗಾಗಿ ಅಥವಾ ಗೊಂದಲಗಳಿದ್ದಲ್ಲಿ ತೋಟಗಾರಿಕಾ ಇಲಾಖೆಯ ಜಿಲ್ಲಾ ಅಥವಾ ತಾಲ್ಲೂಕು ಮಟ್ಟದ ಉಪ ನಿರ್ದೇಶಕರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.

]]>
Fri, 30 Jan 2026 07:49:30 +0530 shivuagrico
Crop insurance&ಇಲ್ಲಿಯವರೆಗೆ 43 ಲಕ್ಷ ರೈತರಿಗೆ 5534 ಕೋಟಿ ಬೆಳೆವಿಮೆ ಹಣ ಬಿಡುಗಡೆ&ಕೃಷಿ ಸಚಿವ ಚೆಲುವರಾಯಸ್ವಾಮಿ https://krushirushi.in/crop-insurance-2411 https://krushirushi.in/crop-insurance-2411 Bele vime-ಇಲ್ಲಿಯವರೆಗೆ 43 ಲಕ್ಷ ರೈತರಿಗೆ 5534 ಕೋಟಿ ಬೆಳೆವಿಮೆ ಹಣ ಬಿಡುಗಡೆ-ಕೃಷಿ ಸಚಿವ ಚೆಲುವರಾಯಸ್ವಾಮಿ


 ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2022-23 ರಿಂದ 2024-25ನೇ ಸಾಲಿನವರೆಗೆ ಒಟ್ಟು 13,728 ರೈತರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೊಂದಾಯಿಸಿಕೊಂಡಿದ್ದಾರೆ. ಈ ಪೈಕಿ 945 ರೈತರಿಗೆ ವಿವಿಧ ಕಾರಣಗಳಿಂದ ಬೆಳೆ ವಿಮೆ ಪರಿಹಾರ ಜಮೆಯಾಗಿರುವುದಿಲ್ಲ.

ಸಮಸ್ಯೆಗಳನ್ನು ಪರಿಹರಿಸಿ ಸರ್ಕಾರ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಬುಧವಾರ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಬೆಳೆವಿಮೆ ಪರಿಹಾರ ಬಾಕಿ ಇರುವ 945 ರೈತರ ಪೈಕಿ ಎನ್.ಪಿ.ಸಿ.ಐ ಸೀಡಿಂಗ್, ಆಧಾರ್ ಕಾರ್ಡ್ ನಿಷ್ಕ್ರೀಯತೆ, ಅಮಾನ್ಯವಾದ ಬ್ಯಾಂಕ್ ಖಾತೆ ಸೇರಿದಂತೆ ತಾಂತ್ರಿಕ ಕಾರಣಗಳಿಂದಾಗಿ ಒಟ್ಟು 133 ರೈತರಿಗೆ ರೂ.40.09 ಲಕ್ಷ ಪರಿಹಾರ ಹಣ ಜಮೆಯಾಗದೆ ಹಿಂದಿರುಗಿದೆ.

ಬೆಳೆ ಕಟಾವು ಇಳುವರಿ ಪ್ರಯೋಗ ವ್ಯತ್ಯಾಸದ ಹಿನ್ನಲೆಯಲ್ಲಿ 798 ಬೆಳೆ ಹೊಂದಾಣಿಕೆಯಾಗದೇ ಹಾಗೂ ಮಾರ್ಗಸೂಚಿಯನುಸಾರ ಬೆಳೆ ಕಟಾವು ಪ್ರಯೋಗಗಳ ಇಳುವರಿ ಲಭ್ಯವಿಲ್ಲದ ಕಾರಣ 14 ರೈತರಿಗೆ ಪರಿಹಾರ ಪಾವತಿ ಬಾಕಿಯಿದೆ. 2025-26ರ ಮುಂಗಾರು ಹಂಗಾಮಿನಲ್ಲಿ ಮಿಮೆ ಮಾಡಿಸುವ ರೈತರ ಸಂಖ್ಯೆ ಹೆಚ್ಚಾಗಿದ್ದು, ಕಲಬುರ್ಗಿ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 10,054 ರೈತರು ನೋಂದಾಯಿಸಿಕೊಂಡಿದ್ದಾರೆ. ಮಧ್ಯಂತರ ಬೆಳೆ ವಿಮೆ ನಷ್ಟ ಪರಿಹಾರದಡಿ ಒಟ್ಟು 9861 ರೈತರಿಗೆ ರೂ.906.32 ಲಕ್ಷಗಳ ಬೆಳೆ ವಿಮೆ ಪರಿಹಾರ ಲೆಕ್ಕಾಚಾರ ಮಾಡಲಾಗಿದ್ದು, ವಿಮಾ ಸಂಸ್ಥೆಯವರಿಂದ ಪರಿಹಾರ ಇತ್ಯರ್ಥ ಪ್ರಕ್ರಿಯೆಯಲ್ಲಿದೆ.

ಕಲಬುರಗಿ ಜಿಲ್ಲೆಗೆ ಮಧ್ಯಂತರ ಬೆಳೆ ವಿಮೆ ನಷ್ಟ ಪರಿಹಾರದಡಿ ರೂ.990 ಕೋಟಿ ಪರಿಹಾರವನ್ನು ನೀಡಲಾಗಿದೆ. ರಾಜ್ಯದ ಎಲ್ಲಾ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ರೈತರಿಗೆ ಬೆಳೆಮಿಮೆ ನೊಂದಣಿಗೆ ಪ್ರೋತ್ಸಾಹಿಸಬೇಕು. ಇದರಿಂದ ರೈತರಿಗೆ ಯಾವುದೇ ನಷ್ಟವಿಲ್ಲ. ವಿಮೆ ಮೊತ್ತ ಶೇ.2 ರಷ್ಟು ಮಾತ್ರ ರೈತರು ಪಾವತಿಸಬೇಕು. ಉಳಿದ ಬೆಳೆ ವಿಮೆ ಮೊತ್ತವನ್ನು ಸರ್ಕಾರ ಪಾವತಿಸುತ್ತದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರ ನೋಂದಣಿಯಿಂದ ಪ್ರಾರಂಭವಾಗಿ ಪರಿಹಾರ ವಿತರಣೆಯವರೆಗೆ ಸಂಪೂರ್ಣ ಪ್ರಕ್ರಿಯೆಯನ್ನು ಸಂರಕ್ಷಣೆ ಪೋರ್ಟಲ್ ಮೂಲಕವೇ ನಿರ್ವಹಿಸಲಾಗುತ್ತದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ವಿಶೇಷವಾಗಿ ಕಪ್ & ಕ್ಯಾಪ್ ಮಾದರಿಯಲ್ಲಿ ವಿಮೆ ಪರಿಹಾರವನ್ನು ನಿರ್ಧರಿಸಲು ಕ್ತಮ ಕೈಕೊಂಡಿರುವುದರಿಂದ ವಿಮೆ ಪರಿಹಾರ ವಿತರಣೆಯಲ್ಲಿ ಸುಧಾರಣೆಯನ್ನು ತರಲಾಗಿದೆ. ಈ ಕುರಿತು ವಿಮಾ ಕಂಪನಿ ಅಧಿಕಾರಿಗಳೊಂದಿಗೆ ಹಲವು ಬಾರಿ ಸಭೆ ನಡೆಸಿರುವುದಲ್ಲದೇ, ಕ್ರಾಪ್ ಕಟಿಂಗ್ ಎಕ್ಸಪರಿಮೇಟ್ ಸರಿಯಾಗಿ ಹಾಗೂ ವೈಜ್ಞಾನಿಕವಾಗಿ ನಡೆಸಬೇಕೆಂದು ಸೂಚನೆ ನೀಡಲಾಗಿದ್ದರ ಪರಿಣಾಮ ರಾಜ್ಯದಲ್ಲಿ ಬೆಳೆ ವಿಮೆ ಯೋಜನೆಯನ್ನು ಅತ್ಯಂತ ಯಶ್ವಸಿಯಾಗಿ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು..

ಈ ಮೂರು ವರ್ಷಗಳಲ್ಲಿ ಎಲ್ಲಾ ಹಂಗಾಮುಗಳಲ್ಲಿ ರಾಜ್ಯದಲ್ಲಿ ಒಟ್ಟು 73 ಲಕ್ಷ ರೈತರು ವಿಮೆ ಹಣ ಪಾವತಿಸಿ ನೊಂದಾಯಿಸಿಕೊಂಡವರ ಪೈಕಿ ಶೇ ಅಂದಾಜು 60% ರಷ್ಟು ರೈತರು, 43 ಲಕ್ಷ ನೊಂದಾಯಿಸಿಕೊಂಡ ರೈತರಿಗೆ ಒಟ್ಟು 5534 ಕೋಟಿ ರೂಪಾಯಿಗಳ ವಿಮೆ ಪರಹಾರವನ್ನು ನೀಡಿ ರೈತರ ಸಂಕಷ್ಟದ ಸಮಯದಲ್ಲಿ ನಮ್ಮ ಸರ್ಕಾರ ರೈತರಿಗೆ ವಿಮೆ ಪರಿಹಾರ ನೀಡುವಲ್ಲಿ ಇತಿಹಾಸ ನಿರ್ಮಿಸಿದೆ ಎಂದು ಚಲುವರಾಯಸ್ವಾಮಿಯವರು ತಿಳಿಸಿದರು..

ಇನ್ನೂ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ, ಕಲಬುರ್ಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2022- 23 ನೇ ಸಾಲಿನಿಂದ 2025-26 ನೇ ಸಾಲಿನ ಮುಂಗಾರು ಹಂಗಾಮಿನವರೆಗೆ ಒಟ್ಟು 23782 ರೈತರು 31338.13 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆ ವಿಮೆಗೆ ನೊಂದಾಯಿಸಿಕೊಂಡಿದ್ದು, ಇಲ್ಲಿಯವರೆಗೆ 5 ಲಕ್ಷದ 5 ಸಾವಿರ ರೈತರಿಗೆ 990 ಕೋಟಿ ರೂಪಾಯಿ ಬೆಳೆ ವಿಮಾ ಪರಿಹಾರ ಹಣ ನೀಡಲಾಗಿದೆ ಎಂದು ಕೃಷಿ ಸಚಿವರು ತಿಳಿಸಿದರು.

ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ

 ನಿಮ್ಮ ಜಮಾ (Belevime hana jama)ಸ್ಟೇಟಸ್ ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

 https://samrakshane.karnataka.gov.in/ 

ನಂತರ ವರ್ಷದ ಆಯ್ಕೆ "2023-24" ಮತ್ತು ಋುತು "Kharif

" ಎಂದು select ಮಾಡಿ, "ಮುಂದೆ/Go" ಮೇಲೆ click ಮಾಡಿ

Farmer ಕಾಲಂನಲ್ಲಿ "Check status." ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಆಧಾರ್ ನಂಬರ್(Aadhaar number) ಅಥವಾ Proposal number ಅಥವಾ Mobile number ಮೇಲೆ ಕ್ಲಿಕ್ ಮಾಡಿ, ನೀವು ಬೆಳೆವಿಮೆ(Cropinsurance) ಕಟ್ಟಿದ Acknowledgment number ಅಥವಾ Mobile number ಹಾಕಿ,Captcha type ಮಾಡಿ,Search ಮೇಲೆ ಕ್ಲಿಕ್ ಮಾಡಿ

(ಸೂಚನೆ-ಬೆಳೆವಿಮೆ/cropinsurance ಕಟ್ಟಿದ ರಶೀದಿ ಕಳೆದಿದ್ದರೆ ಅಥವಾ Acknowledgment number ಗೊತ್ತಿಲ್ಲದಿದ್ದರೆ,ಮೊಬೈಲ್ ನಂಬರ್ select ಮಾಡಿ,ಮೊಬೈಲ್ ನಂಬರ್ ಹಾಕಿ ಚೆಕ್ ಮಾಡಬಹುದು)

ಈ ಕೆಳಗಿನಂತೆ ಬೆಳೆವಿಮೆ(crop insurance) ಜಮಾ ಮಾಹಿತಿ ದೊರೆಯಲಿದೆ.

]]>
Thu, 29 Jan 2026 07:44:26 +0530 shivuagrico
Karnataka weather report&ಕರ್ನಾಟಕದ ಈ ಜಿಲ್ಲೆಗಳಲ್ಲಿ ಒಂದು ಕಡೆ ಮಳೆ ಇನ್ನೊಂದು ಕಡೆ ವಿಪರೀತ ಚಳಿ https://krushirushi.in/Karnataka-weather-report-2410 https://krushirushi.in/Karnataka-weather-report-2410 Karnataka weather report-ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ರಾಜ್ಯದ ಒಳನಾಡಿನಲ್ಲಿ ಚಳಿ ತಿವ್ರತೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ, ದಕ್ಷಿಣ ಕರ್ನಾಟಕದಲ್ಲಿ ಚಳಿ ಅಲ್ಪ ಪ್ರಮಾಣದಲ್ಲಿ ಕಡಿಮೆ ಆಗಲಿದೆ. ಹಲವೆಡೆ ಮಳೆ ಮುನ್ಸೂಚನೆ ಸಿಕ್ಕಿದೆ.


ಜನವರಿ 26 ಸೋಮವಾರದಂದು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಬಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉಳಿದಂತೆ ಬಳ್ಳಾರಿ, ಬೆಂಗಳೂರು ನಗರ- ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಇದಲ್ಲದೆ ಜನವರಿ 27 ರಿಂದ ಜನವರಿ 31 ರವರೆಗೂ ಒಣಹವೆ ಇರಲಿದೆ.

ಬೆಂಗಳೂರು ಹವಾಮಾನ
ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡಕವಿದ ವಾತಾವರಣ ಇರಲಿದೆ. ಬೆಳಗ್ಗೆ ಮಂಜು ಕವಿದ ವಾತಾವರಣ ಹಾಗೂ ತೀವ್ರ ಚಳಿ ಇರಲಿದೆ. ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 26 ಡಿಗ್ರಿ ಸೆಲ್ಸಿಯಸ್ ವಾತಾವರಣ ಇರಲಿದೆ.

ಹವಾಮಾನ ಸ್ಥಿತಿ:

ತಮಿಳುನಾಡು- ಶ್ರೀಲಂಕಾದ ಪಕ್ಕದ ಬಂಗಾಳಕೊಲ್ಲಿಯಲ್ಲಿ ಉಷ್ಣವಲಯ ಹರಡಿದೆ.

ರಾಜ್ಯದ ವಾತಾವರಣ ಮುನ್ಸೂಚನೆ

ಕರ್ನಾಟಕದ ಒಳನಾಡಲ್ಲಿ ಕನಿಷ್ಠ ತಾಪಮಾನ ಮತ್ತಷ್ಟು ಕುಸಿಯಲಿದೆ. ದಕ್ಷಿಣ ಕರ್ನಾಟಕದಲ್ಲಿ 3 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಾಗಲಿದೆ. ಆದರೆ ಒಟ್ಟಾರೆ ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ : ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣದೊಂದಿಗೆ ಸಂಜೆ ರಾತ್ರಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. 

ಈಗಿನಂತೆ ಜನವರಿ 26ರಂದು ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ.
28ರಿಂದ ಬಿಸಿಲು ಹಾಗೂ ಒಣ ಹವೆ ಮುಂದುವರಿಯಬಹುದು. 

ಮಲೆನಾಡು : ರಾಜ್ಯದ ಮಲೆನಾಡು ಜಿಲ್ಲೆಗಳಾದ ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಸಂಜೆ ಅಥವಾ ರಾತ್ರಿ ಮೋಡದ ವಾತಾವರಣದ ಮುನ್ಸೂಚನೆ ಇದ್ದು, ಜನವರಿ 26ರಂದು ಸಂಜೆ ಗುಡುಗು ಸಹಿತ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. 28ರಿಂದ ಒಣ ಹವೆ ಮುಂದುವರಿಯಲಿದೆ. 

ಉತ್ತರ ಕನ್ನಡ : ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ. 
ಈಗಿನಂತೆ ಜನವರಿ 26ರಂದು ಅಲ್ಲಲ್ಲಿ ಮೋಡದ ವಾತಾವರಣ ಇರಬಹುದು. 

ದಕ್ಷಿಣ ಒಳನಾಡು : ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಾದ ಚಾಮರಾಜನಗರ. ಹಾಗೂ ಮೈಸೂರು ಜಿಲ್ಲೆಗಳಲ್ಲಿ ರಾತ್ರಿ ಅಥವಾ ಮುಂಜಾನೆ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ರಾತ್ರಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. 
ಈಗಿನಂತೆ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಜನವರಿ 26, 27ರಂದು ಅಲ್ಲಲ್ಲಿ ಮೋಡ ಹಾಗೂ ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆ ಇದೆ. 

ಬಂಗಾಳಕೊಲ್ಲಿಯ ಉಷ್ಣ ಮಾರುತ ಪರಿಚಲನೆ ಮುಂದುವರಿದಿದ್ದರ ಪರಿಣಾಮದಿಂದ ತಮಿಳುನಾಡು ಕಡೆಯಿಂದ ತೇವಾಂಶ ಭರಿತ ಗಾಳಿಯು ಬೀಸುತ್ತಿರುವುದರಿಂದ ಈ ಮಳೆಯ ವಾತಾವರಣವು ಸೃಷ್ಟಿಯಾಗಿದೆ. ಜೊತೆಗೆ ಛಳಿಯ ಪ್ರಮಾಣವು ಕಡಿಮೆಯಾಗಿದೆ. 

ಉತ್ತರ ಭಾರತದಲ್ಲಿ ಈ ತಿಂಗಳ ಅಂತ್ಯದವರಗೂ ಅಲ್ಲಲ್ಲಿ ಮಳೆ ಮುಂದುವರಿಯುವ ಲಕ್ಷಣಗಳಿವೆ.

]]>
Mon, 26 Jan 2026 08:09:11 +0530 shivuagrico
Yashsvini yojane 2026&ಯಶಸ್ವಿನಿ ಯೋಜನೆಯಡಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆ,ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ನಿಗದಿ https://krushirushi.in/Yashsvini-yojane-2409 https://krushirushi.in/Yashsvini-yojane-2409 Yashsvini yojane 2026-ಯಶಸ್ವಿನಿ ಯೋಜನೆಯಡಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆ,ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ನಿಗಧಿ

ಕರ್ನಾಟಕ ಸರ್ಕಾರವು ಸಹಕಾರ ಸಂಘಗಳ ಸದಸ್ಯರಿಗಾಗಿ ಜಾರಿಗೆ ತಂದಿರುವ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯು ಗ್ರಾಮೀಣ ಮತ್ತು ನಗರ ಪ್ರದೇಶದ ಸಹಕಾರಿ ಸದಸ್ಯರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವ ಯೋಜನೆಯಾಗಿದೆ. ಯಶಸ್ವಿನಿ ಯೋಜನೆಯು ಸಹಕಾರಿ ಕುಟುಂಬಗಳಿಗೆ ಆಪತ್ಕಾಲದ ಮಿತ್ರನಿದ್ದಂತೆ. ಈ ಯೋಜನೆಯಡಿ 2025-26ನೇ ಸಾಲಿನ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಸಹಕಾರ ಸಂಘಗಳ ಸದಸ್ಯರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಮರುಜಾರಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಏನಿದು ಯಶಸ್ವಿನಿ ಆರೋಗ್ಯ ವಿಮೆ ಯೋಜನೆ? ಪ್ರಯೋಜನಗಳೇನು? ನೋಂದಣಿ ಮಾಡುವುದು ಹೇಗೆ? ಇತ್ಯಾದಿ ಮಾಹಿತಿಗಳು ಇಲ್ಲಿವೆ.

ಏನಿದು ಯಶಸ್ವಿನಿ ಆರೋಗ್ಯ ಯೋಜನೆ?

ಯಶಸ್ವಿನಿ ಆರೋಗ್ಯ ಯೋಜನೆಯು ಕರ್ನಾಟಕ ಸರ್ಕಾರದ ಒಂದು ಮಹತ್ವಾಕಾಂಕ್ಷೆಯ ನಗದು ರಹಿತ ಚಿಕಿತ್ಸಾ ಯೋಜನೆಯಾಗಿದೆ. ಇದು ರಾಜ್ಯದ ಸಹಕಾರ ಸಂಘಗಳ ಸದಸ್ಯರು ಮತ್ತು ಅವರ ಕುಟುಂಬದವರಿಗೆ ಅಲ್ಪ ಮೊತ್ತದ ವಾರ್ಷಿಕ ವಂತಿಗೆಯೊಂದಿಗೆ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತದೆ. ಈ ಯೋಜನೆಯಡಿ ನೋಂದಾಯಿತ ಫಲಾನುಭವಿಗಳು ರಾಜ್ಯಾದ್ಯಂತ ಇರುವ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ವರ್ಷಕ್ಕೆ ಗರಿಷ್ಠ 5 ಲಕ್ಷ ರೂ.ದವರೆಗೆ ಸುಮಾರು 2,128 ಕ್ಕೂ ಹೆಚ್ಚು ವಿವಿಧ ರೀತಿಯ ಶಸ್ತ್ರಚಿಕಿತ್ಸೆ ಮತ್ತು ICU ಚಿಕಿತ್ಸೆಗಳನ್ನು ಪಡೆಯಬಹುದು. ರಾಜ್ಯದ ಎಲ್ಲಾ ಸಹಕಾರಿಗಳ ಮತ್ತು ರೈತರ ನಿರಂತರ ಒತ್ತಾಯ ಹಾಗೂ ಬೇಡಿಕೆ ಪರಿಗಣಿಸಿ ಈ ಹಿಂದೆ 2018ರಲ್ಲಿ ಸ್ಥಗಿತಗೊಳಿಸಿದ್ದ ಯಶಸ್ವಿನಿ ಯೋಜನೆಯನ್ನು ಪುನರ್ ಜಾರಿಗೊಳಿಸಲು ರಾಜ್ಯ ಸರ್ಕಾರವು ತೀರ್ಮಾನಿಸಿ, 2022-23ನೇ ಸಾಲಿನ ಆಯವ್ಯಯದಲ್ಲಿ ಪರಿಷ್ಕೃತ ಯಶಸ್ವಿನಿ ಯೋಜನೆಯನ್ನು ಘೋಷಣೆ ಮಾಡಿದೆ. ಯೋಜನೆ ಜಾರಿಗಾಗಿ “ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್”ಅನ್ನು ರಚಿಸಿದ್ದು, ಇದಕ್ಕೆ ಮಾನ್ಯ ಮುಖ್ಯಮಂತ್ರಿಗಳು ಮಹಾ ಪೋಷಕರಾಗಿ, ಸಹಕಾರ ಸಚಿವರು ಪೋಷಕರಾಗಿ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಸಹಕಾರ ಇಲಾಖೆ ಇವರು ಟ್ರಸ್ಟ್‌ನ ಅಧ್ಯಕ್ಷರಾಗಿರುತ್ತಾರೆ.

ಯೋಜನೆಯ ಪ್ರಮುಖ ಸೌಲಭ್ಯಗಳು

  • ನಗದು ರಹಿತ ಚಿಕಿತ್ಸೆ: ಯಶಸ್ವಿನಿ ಯೋಜನೆಯಡಿ ಫಲಾನುಭವಿಗಳು ಆಸ್ಪತ್ರೆಗೆ ದಾಖಲಾದಾಗ ಯಾವುದೇ ಹಣ ಪಾವತಿಸುವ ಅಗತ್ಯವಿರುವುದಿಲ್ಲ; ಕೇವಲ ಯಶಸ್ವಿನಿ ಕಾರ್ಡ್ ತೋರಿಸುವ ಮೂಲಕ ನೇರವಾಗಿ ನಗದು ರಹಿತ ಚಿಕಿತ್ಸೆ ಪಡೆಯಬಹುದು.
  • ವಾರ್ಷಿಕ ಚಿಕಿತ್ಸಾ ಮಿತಿ: ಈ ಯೋಜನೆಯಡಿ ನೋಂದಾಯಿತ ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ ಗರಿಷ್ಠ 5 ಲಕ್ಷ ರೂಪಾಯಿಗಳವರೆಗೆ ಆಗುವ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.
  • ಚಿಕಿತ್ಸೆಗಳ ಲಭ್ಯತೆ: ಯೋಜನೆಯಲ್ಲಿ ಸುಮಾರು 1,650 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳು ಮತ್ತು ಐಸಿಯು (ICU) ಸೇರಿದಂತೆ ಒಟ್ಟು 2,128 ವಿವಿಧ ರೀತಿಯ ವೈದ್ಯಕೀಯ ಚಿಕಿತ್ಸೆಗಳು ಲಭ್ಯವಿವೆ.
  • ಆಸ್ಪತ್ರೆಗಳ ಜಾಲ: ಈ ಸೌಲಭ್ಯವು ರಾಜ್ಯಾದ್ಯಂತ ಇರುವ ನೂರಾರು ನೋಂದಾಯಿತ ಸರ್ಕಾರಿ ಮತ್ತು ಖಾಸಗಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಮಾತ್ರ ದೊರೆಯಲಿದ್ದು, ಸದಸ್ಯರು ಚಿಕಿತ್ಸೆಗೂ ಮುನ್ನ ಆಸ್ಪತ್ರೆಯು ಈ ಯೋಜನೆಗೆ ಒಳಪಟ್ಟಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು.

ಸದಸ್ಯತ್ವ ಪಡೆಯಲು ಅರ್ಹತೆಗಳು

  • ಕರ್ನಾಟಕ ರಾಜ್ಯದ ಯಾವುದೇ ನೋಂದಾಯಿತ ಸಹಕಾರ ಸಂಘದಲ್ಲಿ ಕನಿಷ್ಠ 3 ತಿಂಗಳಿಂದ ಸದಸ್ಯರಾಗಿರುವವರು ಈ ಯೋಜನೆಗೆ ಅರ್ಹರು; ಆದರೆ ಹೊಸದಾಗಿ ಅಸ್ತಿತ್ವಕ್ಕೆ ಬಂದ ಸಂಘಗಳ ಸದಸ್ಯರಿಗೆ ಕೇವಲ 1 ತಿಂಗಳ ಸದಸ್ಯತ್ವವಿದ್ದರೂ ಅರ್ಜಿ ಸಲ್ಲಿಸಲು ಅವಕಾಶವಿದೆ.
  • ಸಹಕಾರ ಸಂಘಗಳಲ್ಲಿ ಕನಿಷ್ಠ 3 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿರುವ ಮತ್ತು ಮಾಸಿಕ 30,000 ರೂಪಾಯಿಗಳಿಗಿಂತ ಕಡಿಮೆ ಒಟ್ಟು ವೇತನ ಪಡೆಯುತ್ತಿರುವ ನೌಕರರು ಈ ಯೋಜನೆಯ ಲಾಭ ಪಡೆಯಬಹುದು.
  • ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿದಾರರಿಗೆ ಗರಿಷ್ಠ 75 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
  • ಈ ಯೋಜನೆಯ ಪ್ರಯೋಜನವು ಕೇವಲ ಮೂಲ ಸದಸ್ಯರಿಗೆ ಮಾತ್ರವಲ್ಲದೆ ಅವರ ಕುಟುಂಬದ ಸದಸ್ಯರಾದ ಪತಿ ಅಥವಾ ಪತ್ನಿ, ಮಕ್ಕಳು ಮತ್ತು ಆಶ್ರಿತ ಪೋಷಕರಿಗೂ ದೊರೆಯುತ್ತದೆ.

ಯಾರು ಅರ್ಹರಲ್ಲ?

ಸರ್ಕಾರಿ ನೌಕರರು, ಖಾಸಗಿ ಕಂಪನಿಯಲ್ಲಿ 30,000 ರೂ.ಕ್ಕಿಂತ ಹೆಚ್ಚು ವೇತನ ಪಡೆಯುವವರು ಮತ್ತು ಈಗಾಗಲೇ ಬೇರೆ ಆರೋಗ್ಯ ವಿಮೆ ಹೊಂದಿರುವವರು ಈ ಯೋಜನೆಗೆ ಅರ್ಹರಲ್ಲ.

ವಂತಿಗೆ ಮೊತ್ತ ಎಷ್ಟು?

  • ಗ್ರಾಮೀಣ ಭಾಗದ ಸಹಕಾರ ಸಂಘಗಳ ಸದಸ್ಯರ ಗರಿಷ್ಠ ನಾಲ್ಕು ಜನರ ಕುಟುಂಬಕ್ಕೆ ವರ್ಷಕ್ಕೆ 500 ರೂ. ವಂತಿಗೆ ನಿಗದಿಪಡಿಸಲಾಗಿದೆ. ಒಂದು ವೇಳೆ ಕುಟುಂಬದಲ್ಲಿ ನಾಲ್ಕಕ್ಕಿಂತ ಹೆಚ್ಚು ಸದಸ್ಯರಿದ್ದರೆ, ಪ್ರತಿ ಹೆಚ್ಚುವರಿ ಸದಸ್ಯರಿಗೆ ತಲಾ 100 ರೂ. ಪಾವತಿಸಬೇಕಾಗುತ್ತದೆ.
  • ನಗರ ಪ್ರದೇಶದ ಸಹಕಾರ ಸಂಘಗಳ ಸದಸ್ಯರ ಗರಿಷ್ಠ ನಾಲ್ಕು ಜನರ ಕುಟುಂಬಕ್ಕೆ ವಾರ್ಷಿಕ 1,000 ರೂ. ವಂತಿಗೆ ಇರುತ್ತದೆ. ಈ ಕುಟುಂಬಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಸದಸ್ಯರಿದ್ದಲ್ಲಿ, ಪ್ರತಿ ಹೆಚ್ಚುವರಿ ಸದಸ್ಯರಿಗೆ ತಲಾ 200 ರೂ.ರಂತೆ ಹೆಚ್ಚಿನ ಹಣ ಪಾವತಿಸಬೇಕು.
  • SC ಮತ್ತು ST ಸಮುದಾಯದ ಸಹಕಾರಿ ಸದಸ್ಯರಿಗೆ ಈ ಯೋಜನೆಯು ಸಂಪೂರ್ಣ ಉಚಿತವಾಗಿದ್ದು, ಅವರ ವಂತಿಗೆ ಮೊತ್ತವನ್ನು ಸರ್ಕಾರವೇ ಭರಿಸುತ್ತದೆ.
  • ಪರಿಶಿಷ್ಟ ಜಾತಿ ಅಥವಾ ಪಂಗಡದ ಸದಸ್ಯರು ಈ ಸೌಲಭ್ಯ ಪಡೆಯಲು ತಮ್ಮ ಜಾತಿ ಪ್ರಮಾಣ ಪತ್ರದಲ್ಲಿರುವ ಆರ್.ಡಿ (R.D) ಸಂಖ್ಯೆಯನ್ನು ಅರ್ಜಿಯೊಂದಿಗೆ ಕಡ್ಡಾಯವಾಗಿ ನಮೂದಿಸಬೇಕು.

ನಿಯಮಗಳು ಮತ್ತು ನಿಬಂಧನೆಗಳು

  • ಯೋಜನೆಯ ನಿಯಮದಂತೆ ಫಲಾನುಭವಿಗಳು ಆಸ್ಪತ್ರೆಯ ಜನರಲ್ ವಾರ್ಡ್‌ನಲ್ಲಿ ಮಾತ್ರ ಚಿಕಿತ್ಸೆ ಪಡೆಯಲು ಅರ್ಹರಾಗಿರುತ್ತಾರೆ. ಒಂದು ವೇಳೆ ಸದಸ್ಯರು ತಮ್ಮ ಇಚ್ಛೆಯಂತೆ ಸ್ಪೆಷಲ್ ವಾರ್ಡ್ ಅಥವಾ ಸೆಮಿ-ಸ್ಪೆಷಲ್ ವಾರ್ಡ್ ಬಯಸಿದಲ್ಲಿ, ಅದರ ಹೆಚ್ಚುವರಿ ವೆಚ್ಚವನ್ನು ಅವರೇ ಪಾವತಿಸಬೇಕಾಗುತ್ತದೆ.
  • ಮೊಣಕಾಲು ಚಿಪ್ಪು ಬದಲಾವಣೆ ಅಥವಾ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ಲೆನ್ಸ್‌ಗಳಂತಹ ಇಂಪ್ಲಾಂಟ್ಸ್‌ಗಳ ಮೂಲ ದರವು ಯೋಜನೆಯ ಪ್ಯಾಕೇಜ್‌ನಲ್ಲಿ ಸೇರಿರುತ್ತದೆ. ಆದರೆ ಸದಸ್ಯರು ಉನ್ನತ ದರ್ಜೆಯ ಅಥವಾ ಹೆಚ್ಚಿನ ಬೆಲೆಯ ಇಂಪ್ಲಾಂಟ್ಸ್‌ಗಳನ್ನು ಬಳಸಲು ಬಯಸಿದರೆ, ಪ್ಯಾಕೇಜ್ ದರಕ್ಕಿಂತ ಹೆಚ್ಚಿನದಾದ ವ್ಯತ್ಯಾಸದ ಮೊತ್ತವನ್ನು ಸ್ವತಃ ಭರಿಸಬೇಕು.
  • ಈ ಯೋಜನೆಯಡಿ ಹೆರಿಗೆ ಸೌಲಭ್ಯವು ಕೇವಲ ಎರಡು ಜೀವಂತ ಮಕ್ಕಳಿಗೆ ಅಥವಾ ಗರಿಷ್ಠ ಎರಡು ಹೆರಿಗೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
  • ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆಯುವಾಗ (ಮೂರು ತಿಂಗಳ ಅವಧಿಗೆ) ಗರಿಷ್ಠ 200 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಈ ಪೈಕಿ 100 ರೂ. ಗಳನ್ನು ಯಶಸ್ವಿನಿ ಟ್ರಸ್ಟ್ ಭರಿಸುತ್ತದೆ.

    ಯಾವೆಲ್ಲಾ ಚಿಕಿತ್ಸೆಗಳು ಲಭ್ಯ?

    • ಹೃದಯ ಮತ್ತು ಸಾಮಾನ್ಯ ರೋಗಗಳು: ಹೃದಯ ಸಂಬಂಧಿ ಕಾಯಿಲೆಗಳು, ಸಾಮಾನ್ಯ ಶಾರೀರಿಕ ಕಾಯಿಲೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳು.
    • ಮೂಳೆ ಮತ್ತು ನರ ರೋಗಗಳು: ಮೂಳೆ ರೋಗಗಳು, ನರವೈಜ್ಞಾನಿಕ ಶಸ್ತ್ರಚಿಕಿತ್ಸೆ ಮತ್ತು ನರ ಸಂಬಂಧಿತ ಕಾಯಿಲೆಗಳು.
    • ಕ್ಯಾನ್ಸರ್ ಮತ್ತು ನಾಳೀಯ ಚಿಕಿತ್ಸೆ: ಶಸ್ತ್ರಚಿಕಿತ್ಸಾ ಆಂಕೊಲಾಜಿ ಮತ್ತು ನಾಳೀಯ ಶಸ್ತ್ರಚಿಕಿತ್ಸೆ .
    • ವಿಶೇಷ ವಿಭಾಗಗಳು: ಕಿವಿ, ಮೂಗು ಮತ್ತು ಗಂಟಲು ರೋಗಗಳು ಹಾಗೂ ಕಣ್ಣಿನ ಕಾಯಿಲೆಗಳ ಚಿಕಿತ್ಸೆ.
    • ಮಹಿಳೆ ಮತ್ತು ಮಕ್ಕಳ ಚಿಕಿತ್ಸೆ: ಪ್ರಸೂತಿ ಮತ್ತು ಸ್ತ್ರೀರೋಗಗಳು, ಯುರೋಲಜಿ, ಹಾಗೂ ನವಜಾತ ಶಿಶು ಮತ್ತು ಮಕ್ಕಳ ಚಿಕಿತ್ಸೆ.
    • ತುರ್ತು ಮತ್ತು ಅಪಘಾತ ಪ್ರಕರಣಗಳು: ನಾಯಿ ಕಡಿತ ಮತ್ತು ಹಾವು ಕಡಿತಕ್ಕೆ ಚಿಕಿತ್ಸೆ. ಕೃಷಿ ಉಪಕರಣಗಳನ್ನು ಬಳಸುವಾಗ ಸಂಭವಿಸುವ ಅಪಘಾತಗಳು. ಕೆಲವು ನಿರ್ದಿಷ್ಟ ರೀತಿಯ ಸುಟ್ಟಗಾಯಗಳು. ಇತರ ಸಾಮಾನ್ಯ ತುರ್ತು ವೈದ್ಯಕೀಯ ಪರಿಸ್ಥಿತಿಗಳು ಇತ್ಯಾದಿ.

    ನೋಂದಣಿಗೆ ಕೊನೆಯ ದಿನಾಂಕ ಎಂದು?

    ಈ ಯೋಜನೆಯಡಿ 2026ರ ಜನವರಿ 03ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 31, 2026 ಕೊನೆಯ ದಿನಾಂಕವಾಗಿದೆ. ನೋಂದಾಯಿತ ಸದಸ್ಯರಿಗೆ ಮಾರ್ಚ್ 01, 2026ರಿಂದ ಯಶಸ್ವಿನಿ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಲಾಗುವುದು ಮತ್ತು ಈ ಕಾರ್ಡ್ ಬಳಸಿ ಚಿಕಿತ್ಸೆ ಪಡೆಯುವ ಅವಧಿಯು ಏಪ್ರಿಲ್ 01, 2026 ರಿಂದ ಮಾರ್ಚ್ 31, 2027 ರವರೆಗೆ ಇರುತ್ತದೆ. ಆದ್ದರಿಂದ ಅರ್ಹ ಸದಸ್ಯರು ತಡಮಾಡದೆ ತಮ್ಮ ಹತ್ತಿರದ ಸಹಕಾರ ಸಂಘಗಳಲ್ಲಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.

ಯೋಜನೆಗೆ ನೋಂದಣಿ ಮಾಡುವುದು ಹೇಗೆ?

  • ನೀವು ಸದಸ್ಯರಾಗಿರುವ ಅಥವಾ ಷೇರು ಹೊಂದಿರುವ ನಿಮ್ಮ ಹತ್ತಿರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸಹಕಾರಿ ಬ್ಯಾಂಕ್ ಅಥವಾ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಭೇಟಿ ನೀಡಿ.
  • ಸಂಘದ ಕಚೇರಿಯಲ್ಲಿ ಲಭ್ಯವಿರುವ 'ಯಶಸ್ವಿನಿ ನೋಂದಣಿ ಅರ್ಜಿ'ಯನ್ನು ಪಡೆದು, ಕುಟುಂಬದ ಎಲ್ಲಾ ಸದಸ್ಯರ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.
  • ಅರ್ಜಿಯೊಂದಿಗೆ ಕುಟುಂಬದ ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್ ಪ್ರತಿ, ರೇಷನ್ ಕಾರ್ಡ್ ಪ್ರತಿ ಮತ್ತು ತಲಾ 2 ಇತ್ತೀಚಿನ ಭಾವಚಿತ್ರಗಳನ್ನು (Photos) ನೀಡಿ.
  • ತಮ್ಮ ಕುಟುಂಬದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ (ಗ್ರಾಮೀಣ ಭಾಗದವರಿಗೆ 500 ರೂ., ನಗರ ಭಾಗದವರಿಗೆ 1,000 ರೂ. ನಿಗದಿತ ವಂತಿಗೆ ಮೊತ್ತವನ್ನು ಸಂಘದ ಕಚೇರಿಯಲ್ಲಿ ಪಾವತಿಸಿ ರಸೀದಿ ಪಡೆಯಿರಿ.
  • ಅರ್ಜಿಯನ್ನು ಸಲ್ಲಿಸಿದ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ನೋಂದಣಿಯ ಬಗ್ಗೆ ಸಂದೇಶ ಬರಲಿದೆ. ಮಾರ್ಚ್ 1ರ ನಂತರ ನಿಮ್ಮ ಸಹಕಾರ ಸಂಘದ ಮೂಲಕವೇ ಪ್ಲಾಸ್ಟಿಕ್ ಯಶಸ್ವಿನಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬಹುದು. ಕಾರ್ಡ್ ಕಳೆದುಕೊಂಡರೆ 250 ರೂ. ಪಾವತಿಸಿ ಡೂಪ್ಲಿಕೇಟ್ ಕಾರ್ಡ್ ಪಡೆಯಬಹುದು.



ಅಗತ್ಯ ವಿರುವ ದಾಖಲೆಗಳು

  • ಆಧಾರ್ ಕಾರ್ಡ್
  • ಪಡಿತರ ಚೀಟಿ
  • ಸಹಕಾರ ಸಂಘದ ಸದಸ್ಯತ್ವ ಪುರಾವೆ
  • ಕುಟುಂಬದ ಪ್ರತಿಯೊಬ್ಬ ಸದಸ್ಯರ 2 ಭಾವಚಿತ್ರಗಳು
  • ಸದಸ್ಯರ ಮೊಬೈಲ್ ಸಂಖ್ಯೆ
]]>
Sun, 25 Jan 2026 09:27:02 +0530 shivuagrico
Bele sala&ಸಾಲ ತೀರಿಸಿದರೂ ಪಹಣಿಯಲ್ಲಿ ಸಾಲ ತೋರಿಸುತ್ತಿದೆಯೇ? ಮೊಬೈಲ್‌ನಲ್ಲೇ ಚೆಕ್ ಮಾಡಿ ಹಾಗೂ ಹೀಗೆ ಮಾಡಿ https://krushirushi.in/Bele-sala-2408 https://krushirushi.in/Bele-sala-2408 Bele sala-ಸಾಲ ತೀರಿಸಿದರೂ ಪಹಣಿಯಲ್ಲಿ ಸಾಲ ತೋರಿಸುತ್ತಿದೆಯೇ? ಮೊಬೈಲ್‌ನಲ್ಲೇ ಚೆಕ್ ಮಾಡಿ ಹಾಗೂ ಹೀಗೆ ಮಾಡಿ

ಮೊದದೆಲ್ಲಾ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲವಿದೆ ಎಂದು ತಿಳಿಯಲು ಬ್ಯಾಂಕ್‌ಗಳಿಗೂ ಅಥವಾ ಕಂದಾಯ ಕಚೇರಿಗಳಿಗೂ ಅಲೆಯಬೇಕಿತ್ತು. ಆದರೆ ಈಗ ನಿಮ್ಮ ಕೈಯಲ್ಲಿರುವ ಮೊಬೈಲ್ ಮತ್ತು ಇಂಟರ್ನೆಟ್ ಸೌಲಭ್ಯವಿದ್ದರೆ ಸಾಕು, ಕೇವಲ 2 ನಿಮಿಷದಲ್ಲಿ ನಿಮ್ಮ ಜಮೀನಿನ ವಿವರವನ್ನು ನೀವೇ ನೋಡಬಹುದು.

ನಿಮ್ಮ ಆಸ್ತಿಯ ದಾಖಲೆಗಳು 'ಕ್ಲೀನ್' ಆಗಿದ್ದಾಗ ಮಾತ್ರ ನೆಮ್ಮದಿಯಿಂದ ಇರಲು ಸಾಧ್ಯ. ಆದರೆ ತಾಂತ್ರಿಕ ದೋಷ ಅಥವಾ ಮಾಹಿತಿ ಕೊರತೆಯಿಂದಾಗಿ ಪಹಣಿ (RTC) ಪತ್ರದಲ್ಲಿ ಸಾಲದ ವಿವರಗಳು ತಪ್ಪಾಗಿ ನಮೂದಾಗಿರುವ ಸಾಧ್ಯತೆಗಳಿರುತ್ತವೆ. ಇಂತಹ ಗೊಂದಲಗಳನ್ನು ಬಗೆಹರಿಸಿಕೊಳ್ಳಲು ಈಗ ನೀವು ಸರ್ಕಾರಿ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ

ಡಿಜಿಟಲ್ ಕ್ರಾಂತಿಯ ಈ ಕಾಲದಲ್ಲಿ, ನಿಮ್ಮ ಜಮೀನಿನ ಮೇಲೆ ಯಾವ ಬ್ಯಾಂಕಿನಿಂದ ಎಷ್ಟು ಬೆಳೆ ಸಾಲ (Crop Loan) ಪಡೆಯಲಾಗಿದೆ ಎಂಬ ಸಂಪೂರ್ಣ ವಿವರವನ್ನು ನಿಮ್ಮ ಕೈಯಲ್ಲಿರುವ ಮೊಬೈಲ್ ಮೂಲಕವೇ ಕೇವಲ 2 ನಿಮಿಷದಲ್ಲಿ ಪರಿಶೀಲಿಸಬಹುದು.

ಏಕೆ ಈ ಪರಿಶೀಲನೆ ಮುಖ್ಯ?

ನೀವು ಬ್ಯಾಂಕ್‌ಗೆ ಸಾಲ ಮರುಪಾವತಿಸಿದ ನಂತರವೂ ಪಹಣಿಯಲ್ಲಿ 'ಋಣಭಾರ' (Encumbrance) ತೋರಿಸುತ್ತಿದ್ದರೆ ಅದನ್ನು ತಕ್ಷಣ ಸರಿಪಡಿಸಿಕೊಳ್ಳಬಹುದು.

ಕೆಲವು ಪ್ರಕರಣಗಳಲ್ಲಿ ರೈತರಿಗೆ ತಿಳಿಯದೆಯೇ ಅವರ ದಾಖಲೆ ಬಳಸಿ ಬೇರೆಯವರು ಸಾಲ ಪಡೆದ ಉದಾಹರಣೆಗಳಿವೆ. ಇದನ್ನು ಪತ್ತೆ ಹಚ್ಚಲು ಇದು ಸುಲಭ ದಾರಿ.

ಕರ್ನಾಟಕ ಸರ್ಕಾರದ ಭೂಮಿ (Bhoomi) ಪೋರ್ಟಲ್ ಮೂಲಕ ನಿಮ್ಮ ಜಮೀನಿನ ಹಕ್ಕು ಮತ್ತು ಹೊಣೆಗಾರಿಕೆಗಳ ಬಗ್ಗೆ ನಿಖರ ಮಾಹಿತಿ ಪಡೆಯಬಹುದು.

ಮೊಬೈಲ್‌ನಲ್ಲಿ ಸಾಲದ ವಿವರ ಚೆಕ್ ಮಾಡುವುದು ಹೇಗೆ? (Step-by-Step)

ನಿಮ್ಮ ಜಮೀನಿನ ಹಕ್ಕು ಮತ್ತು ಹೊಣೆಗಾರಿಕೆಗಳನ್ನು ತಿಳಿಯಲು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ:

ಮೊದಲು ನಿಮ್ಮ ಮೊಬೈಲ್ ಬ್ರೌಸರ್‌ನಲ್ಲಿ ಕರ್ನಾಟಕ ಸರ್ಕಾರದ ಅಧಿಕೃತ Bhoomi Online ಪೋರ್ಟಲ್‌ಗೆ ಭೇಟಿ ನೀಡಿ.

ಮುಖಪುಟದಲ್ಲಿ ನಿಮ್ಮ ಜಿಲ್ಲೆ (District), ತಾಲೂಕು (Taluk), ಹೋಬಳಿ (Hobli) ಮತ್ತು ಗ್ರಾಮ (Village) ಅನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಿ.

ನಿಮ್ಮ ಜಮೀನಿನ ಸರ್ವೆ ನಂಬರ್ (Survey Number) ಟೈಪ್ ಮಾಡಿ 'Go' ಬಟನ್ ಒತ್ತಿ. ನಂತರ ಕಾಣಿಸುವ ಪಟ್ಟಿಯಲ್ಲಿ Surnoc ಮತ್ತು ಹಿಸ್ಸಾ ನಂಬರ್ (Hissa Number) ಆಯ್ಕೆ ಮಾಡಿ.

ಈಗ 'Fetch Details' ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಹೆಸರು ಕಾಣಿಸುತ್ತದೆ, ಅದನ್ನು ಆಯ್ಕೆ ಮಾಡಿ.

ಕೊನೆಯದಾಗಿ 'View RTC' ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಪಹಣಿ ಪರದೆಯ ಮೇಲೆ ಕಾಣಿಸುತ್ತದೆ.

ಪಹಣಿಯಲ್ಲಿನ ಕಾಲಂ 9 ಮತ್ತು 11 (Column 9 & 11) ಅನ್ನು ಗಮನಿಸಿ. ಇಲ್ಲಿ ನಿಮ್ಮ ಸಾಲದ ಮೊತ್ತ ಮತ್ತು ಬ್ಯಾಂಕಿನ ಹೆಸರು ನಮೂದಾಗಿರುತ್ತದೆ.

ಸಾಲ ತೀರಿಸಿದರೂ ಪಹಣಿಯಲ್ಲಿ ಸಾಲ ತೋರಿಸುತ್ತಿದ್ದರೆ ಏನು ಮಾಡಬೇಕು?

ನೀವು ಬ್ಯಾಂಕ್‌ಗೆ ಪೂರ್ತಿ ಸಾಲ ಕಟ್ಟಿದ್ದರೂ ದಾಖಲೆಗಳಲ್ಲಿ ಇನ್ನೂ ಸಾಲ ಕಾಣಿಸುತ್ತಿದ್ದರೆ, ಅದನ್ನು ಸರಿಪಡಿಸಲು ಈ ಕ್ರಮಗಳನ್ನು ಅನುಸರಿಸಿ:

ನೀವು ಸಾಲ ಪಡೆದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಮ್ಯಾನೇಜರ್ ಅವರನ್ನು ಭೇಟಿ ಮಾಡಿ.

ನೀವು ಸಾಲ ತೀರಿಸಿದ ರಶೀದಿ ಅಥವಾ 'ಸಾಲ ಮುಕ್ತ ಪತ್ರ' (No Due Certificate) ಅನ್ನು ತೋರಿಸಿ.

ಪಹಣಿಯಲ್ಲಿನ ಸಾಲದ ಎಂಟ್ರಿ ತೆಗೆದುಹಾಕಲು 'Bank Release Order' ನೀಡುವಂತೆ ಬ್ಯಾಂಕಿಗೆ ಮನವಿ ಮಾಡಿ.

ಬ್ಯಾಂಕಿನವರು ಆನ್‌ಲೈನ್ ಮೂಲಕ ಕಂದಾಯ ಇಲಾಖೆಗೆ ಈ ಮಾಹಿತಿ ರವಾನಿಸಿದ ನಂತರ, ನಿಮ್ಮ ಪಹಣಿಯಲ್ಲಿನ ಸಾಲದ ವಿವರ ತಾನಾಗಿಯೇ ಅಳಿಸಿ ಹೋಗುತ್ತದೆ.

Bele sala status-ಸರ್ವೇ ನಂಬರ್ ಹಾಕಿ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಎಂದು ಮೊಬೈಲ್ ನಲ್ಲೇ ಚೆಕ್ ಮಾಡಿ-crop loan status 

ರೈತರು ತಮ್ಮ ಜಮೀನಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವ ಬ್ಯಾಂಕಿನಿಂದ ಎಷ್ಟು ಸಾಲ ಪಡೆಯಲಾಗಿದೆ ಎಂಬುದನ್ನು ಚೆಕ್ ಮಾಡಲು ಕೇವಲ ಸರ್ವೇ ನಂಬರ್(Survey number) ನಮೂದಿಸಿದರೆ ಸಾಕು ಎಲ್ಲಾ ಇತಿಹಾಸ ತಿಳಿದುಕೊಳ್ಳಬಹುದು.

 ಹೌದು ರೈತರು ಕೇವಲ ತಮ್ಮ ಸರ್ವೆ ನಂಬರ್ ನಮೂದಿಸಿದರೆ ಸಾಕು ಸರ್ವೆ ನಂಬರ್ ನಲ್ಲಿ ಬರುವ ಜಮೀನಿನ ಮೇಲೆ ಎಷ್ಟು ಸಾಲ(Bele sala) ಇದೆ ಎಂಬುದನ್ನು ಚೆಕ್ ಮಾಡಬಹುದು ಇದಕ್ಕಾಗಿ ರೈತರ ಬಳಿ ಸ್ಮಾರ್ಟ್ಫೋನ್ ಇದ್ದರೆ ಸಾಕು ದೇಶದ ಯಾವುದೇ ಭಾಗದಲ್ಲಿ ಕುಳಿತಲ್ಲಿಯೇ ಮಾಹಿತಿ ಪಡೆಯಬಹುದು.

 ಸಾಲ(crop loan status)ವಿವರ ಚೆಕ್ ಮಾಡುವುದು ಹೇಗೆ?

 ರೈತರು ತಮ್ಮ ಮೊಬೈಲ್ ನಲ್ಲಿ ಸರ್ವೆ ನಂಬರ್ ನಮೂದಿಸಿ ಸಾಲದ ವಿವರದ ಇತಿಹಾಸ ತಿಳಿದುಕೊಳ್ಳಲು 

https://landrecords.karnataka.gov.in/Service2/

 ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಈ ಕೆಳಗಿನಂತೆ ಭೂಮಿ ತಂತ್ರಾಂಶ ತೆರೆದುಕೊಳ್ಳುತ್ತದೆ. 

 ನಂತರ ನಿಮ್ಮ ಜಿಲ್ಲೆ,ತಾಲೂಕು, ಹೋಬಳಿ,ಗ್ರಾಮ select ಮಾಡಿ ಸರ್ವೆ ನಂಬರ್ ನಂಬರ್ ನಮೂದಿಸಿ Go ಮೇಲೆ ಕ್ಲಿಕ್ ಮಾಡಿ

  ನಂತರ Surnoc,hissa,period ಹಾಗೂ year ಆಯ್ಕೆ ಮಾಡಿ
Fetch details ಮೇಲೆ ಕ್ಲಿಕ್ ಮಾಡಿ

ನಂತರ view ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಪಹಣೆ ತೆರೆದುಕೊಳ್ಳುತ್ತದೆ

ಇದನ್ನೂ ಓದಿ

ಪ್ರಾಥಮಿಕ ಕೃಷಿ ಸಹಕಾರ ಸಂಘಗಳಲ್ಲಿರುವ 31 ಸಾವಿರ ರೈತರ 232 ಕೋಟಿ ಸಾಲಮನ್ನಾ, ಯಾವ ರೈತರ ಎಷ್ಟು ಸಾಲಮನ್ನಾ ಆಗಲಿದೆ ಹೀಗೆ ಚೆಕ್ ಮಾಡಿ-Bele sala manna list - https://krushirushi.in/Bele-sala-manna-list-1427 

 ಮುಟೇಶನ್ ಒಂದನೇ ಕಾಲಂನಲ್ಲಿ ಸರ್ವೆ ನಂಬರ್ ಹಿಸ್ಸಾ ನಂಬರ್ ನಲ್ಲಿರುವ ಮಾಲೀಕರ ಹೆಸರು ಇರುತ್ತದೆ. ಎರಡನೇ ಕಾಲದಲ್ಲಿ ಸರ್ವೆ ನಂಬರ್ ಗಳು ಕರಾಬು ಜಮೀನು ಕಂದಾಯ ವಿವರ ಹಾಗೂ ಜಮೀನಿನ ಮಣ್ಣಿನ ನಮೂನೆ ಹೇಗೆ ಎಂಬ ಮಾಹಿತಿ ಇರುತ್ತದೆ.

 ಸರ್ವೆ ನಂಬರಿನಲ್ಲಿ ಯಾವ ಮಾಲೀಕರಿಗೆ ಎಷ್ಟು ಎಕರೆ ಜಮೀನಿದೆ ಎಂಬ ಮಾಹಿತಿ ಕಾಣುತ್ತದೆ. ಸರ್ವೆ ನಂಬರ್ ಹಾಗೂ ಸ್ವಾಧೀನದಾರರ ಹೆಸರು ಮತ್ತು ವಿಸ್ತೀರ್ಣದ ಮಾಹಿತಿ ಇರುತ್ತದೆ.

  ಇದರೊಂದಿಗೆ 11ನೇ ಕಾಲಂನಲ್ಲಿ ಋಣಗಳು ಕಾಲಂ ಕೆಳಗಡೆ ಯಾವ ಬ್ಯಾಂಕಿನಿಂದಎಷ್ಟು ಸಾಲ ಪಡೆಯಲಾಗಿದೆ.  ಎಂಬ ಮಾಹಿತಿ ಇರುತ್ತದೆ.


 ಈ ಮಾಹಿತಿ ರೈತರಿಗೆ ತುಂಬಾ ಅನುಕೂಲವಾಗಿದೆ ಸರ್ವೇ ನಂಬರ್ ನಮೂದಿಸಿದರೆ ಸಾಕು ರೈತರು ದೇಶದ ಯಾವುದೇ ಮೂಲೆಯಿಂದಲೂ ಮಾಹಿತಿ ಪಡೆಯಬಹುದು. ಕೇವಲ ಸರ್ವೆ ನಂಬರ್ ನಮೂದಿಸಿದರೆ ಸಾಕು ಸರ್ವ ಮಾಹಿತಿ ಎಲ್ಲವೂ ರೈತರಿಗೆ ಸಿಗಲಿದೆ.

]]>
Sun, 25 Jan 2026 09:24:51 +0530 shivuagrico
One district one product&ನಿಮ್ಮ ರೈಲ್ವೆ ನಿಲ್ದಾಣಗಳಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ ಮಳಿಗೆ ತೆರೆಯುವುದು ಹೇಗೆ? https://krushirushi.in/One-district-one-product-2026 https://krushirushi.in/One-district-one-product-2026 One district one product-ನಿಮ್ಮ ರೈಲ್ವೆ ನಿಲ್ದಾಣಗಳಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ ಮಳಿಗೆ ತೆರೆಯುವುದು ಹೇಗೆ?

ಸ್ಥಳೀಯ ಉತ್ಪನ್ನಗಳಿಗೆ ಸ್ಥಳೀಯವಾಗಿ ಮಾರುಕಟ್ಟೆ ಒದಗಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಭಾರತೀಯ ರೈಲ್ವೆಯ 'ಒಂದು ನಿಲ್ದಾಣ ಒಂದು ಉತ್ಪನ್ನ' ಎಂಬ ವಿನೂತನ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು 'ವೋಕಲ್ ಫಾರ್ ಲೋಕಲ್' (ಸ್ಥಳೀಯತೆಗೆ ಧ್ವನಿ) ಆಶಯದಡಿ ದೇಶದ ಸ್ಥಳೀಯ ಕಲೆ ಮತ್ತು ಕುಶಲಕರ್ಮಿಗಳನ್ನು ಉತ್ತೇಜಿಸುವ ಒಂದು ಕ್ರಾಂತಿಕಾರಿ ಉಪಕ್ರಮವಾಗಿ ಹೊರಹೊಮ್ಮಿದೆ. ಈ ಯೋಜನೆಯು ದೇಶಾದ್ಯಂತ 2,002 ರೈಲ್ವೆ ನಿಲ್ದಾಣಗಳಿಗೆ ವಿಸ್ತರಿಸಲ್ಪಟ್ಟು, 2,326 ಮಳಿಗೆಗಳ ಮೂಲಕ ಸುಮಾರು 1.32 ಲಕ್ಷಕ್ಕೂ ಅಧಿಕ ಕುಶಲಕರ್ಮಿಗಳು, ನೇಕಾರರು ಮತ್ತು ಸಣ್ಣ ಉತ್ಪಾದಕರಿಗೆ ಸುಸ್ಥಿರ ಜೀವನೋಪಾಯವನ್ನು ಕಲ್ಪಿಸಿಕೊಟ್ಟಿದೆ. ರೈಲ್ವೆ ನಿಲ್ದಾಣಗಳನ್ನು ಸ್ಥಳೀಯ ಉದ್ಯಮ ಕೇಂದ್ರಗಳನ್ನಾಗಿ ಪರಿವರ್ತಿಸಿರುವ ಈ ಯೋಜನೆಯು, ಬಿದಿರಿನ ಕಲೆ ಮತ್ತು ಮಣ್ಣಿನ ಪಾತ್ರೆಗಳಿಂದ ಹಿಡಿದು ವಿವಿಧ ಪ್ರಾಂತ್ಯಗಳ ಸಾಂಬಾರ ಪದಾರ್ಥಗಳು, ಕೈಮಗ್ಗದ ಬಟ್ಟೆಗಳು ಮತ್ತು ಸಾಂಪ್ರದಾಯಿಕ ಸಿಹಿತಿಂಡಿಗಳವರೆಗೆ ವೈವಿಧ್ಯಮಯ ಪ್ರಾದೇಶಿಕ ಉತ್ಪನ್ನಗಳಿಗೆ ಲಕ್ಷಾಂತರ ಪ್ರಯಾಣಿಕರ ನೇರ ಮಾರುಕಟ್ಟೆಯನ್ನು ಒದಗಿಸುತ್ತಿದೆ.

ಏನಿದು ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆ?

ಭಾರತ ಸರ್ಕಾರದ ರೈಲ್ವೆ ಸಚಿವಾಲಯವು 2022 ರಲ್ಲಿ ಪ್ರಾರಂಭಿಸಿದ 'ಒಂದು ನಿಲ್ದಾಣ ಒಂದು ಉತ್ಪನ್ನ' ಯೋಜನೆಯು 'ವೋಕಲ್ ಫಾರ್ ಲೋಕಲ್' (ಸ್ಥಳೀಯ ಉತ್ಪನ್ನಗಳಿಗೆ ಧ್ವನಿಯಾಗಿ) ಎಂಬ ದೂರದೃಷ್ಟಿಯಡಿ ರೂಪಿಸಲಾದ ಒಂದು ಪ್ರಮುಖ ಉಪಕ್ರಮವಾಗಿದೆ. ಈ ಯೋಜನೆಯು ರೈಲ್ವೆ ನಿಲ್ದಾಣಗಳನ್ನು ಕೇವಲ ಸಾರಿಗೆ ಕೇಂದ್ರಗಳಾಗಿ ಉಳಿಸದೆ, ಅವುಗಳನ್ನು ಸ್ಥಳೀಯ ಕಲೆ ಮತ್ತು ದೇಶೀಯ ಉತ್ಪನ್ನಗಳ ಪ್ರಚಾರದ ಕೇಂದ್ರಗಳನ್ನಾಗಿ ಪರಿವರ್ತಿಸುವ ಉದ್ದೇಶವನ್ನು ಹೊಂದಿದೆ. ಆ ಮೂಲಕ ಸ್ಥಳೀಯ ಕುಶಲಕರ್ಮಿಗಳು, ನೇಕಾರರು ಮತ್ತು ಸಣ್ಣ ಉತ್ಪಾದಕರಿಗೆ ನೇರ ಮಾರುಕಟ್ಟೆ ಅವಕಾಶವನ್ನು ಕಲ್ಪಿಸಿಕೊಟ್ಟು, ಅವರ ಜೀವನೋಪಾಯಕ್ಕೆ ಸುಸ್ಥಿರವಾದ ಆರ್ಥಿಕ ಆಧಾರವನ್ನು ಒದಗಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.

ಯೋಜನೆಯ ಮುಖ್ಯ ಉದ್ದೇಶಗಳು

  • ಸ್ಥಳೀಯ ಕುಶಲಕರ್ಮಿಗಳ ಸಬಲೀಕರಣ: ಈ ಯೋಜನೆಯು ಸಮಾಜದ ಹಿಂದುಳಿದ ವರ್ಗದ ಕುಶಲಕರ್ಮಿಗಳು, ಸ್ವಸಹಾಯ ಸಂಘಗಳು ಮತ್ತು ಸಣ್ಣ ಉತ್ಪಾದಕರಿಗೆ ನೇರ ಮಾರುಕಟ್ಟೆ ಸೌಲಭ್ಯವನ್ನು ಒದಗಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸಬಲಗೊಳಿಸುತ್ತದೆ.
  • ಸಂಸ್ಕೃತಿಯ ಸಂರಕ್ಷಣೆ: ಅಳಿವಿನ ಅಂಚಿನಲ್ಲಿರುವ ಭಾರತದ ಸಾಂಪ್ರದಾಯಿಕ ಕಲೆಗಳು ಮತ್ತು ಪ್ರಾದೇಶಿಕ ವಿಶೇಷತೆಗಳನ್ನು ಮರುಪರಿಚಯಿಸುವ ಮೂಲಕ ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಇದು ಸಹಕಾರಿಯಾಗಿದೆ.
  • ಮಧ್ಯವರ್ತಿಗಳಿಲ್ಲದ ವ್ಯಾಪಾರ: ಉತ್ಪಾದಕರು ನೇರವಾಗಿ ರೈಲ್ವೆ ಪ್ರಯಾಣಿಕರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ, ಮಧ್ಯವರ್ತಿಗಳ ಹಾವಳಿ ತಪ್ಪಿ ಕುಶಲಕರ್ಮಿಗಳಿಗೆ ಹೆಚ್ಚಿನ ಲಾಭ ಮತ್ತು ಉತ್ತಮ ಆದಾಯ ದೊರೆಯುತ್ತದೆ.

ಯಾವೆಲ್ಲಾ ಉತ್ಪನ್ನಗಳನ್ನು ಮಾರಾಟ ಮಾಡಬಹುದು?

  • ಪ್ರತಿಯೊಂದು ಪ್ರದೇಶದ ವಿಶಿಷ್ಟತೆಯನ್ನು ಎತ್ತಿ ತೋರಿಸುವ ಭೌಗೋಳಿಕ ಗುರುತು ಹೊಂದಿರುವ ಉತ್ಪನ್ನಗಳಿಗೆ ಅಥವಾ ಆಯಾ ಸ್ಥಳದಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ವಸ್ತುಗಳಿಗೆ ಈ ಮಳಿಗೆಗಳಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ.
  • ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ಮಣ್ಣಿನ ಪಾತ್ರೆಗಳು, ಆಕರ್ಷಕ ಬಿದಿರಿನ ಕಲಾಕೃತಿಗಳು ಮತ್ತು ಅತ್ಯಂತ ನೈಪುಣ್ಯತೆಯಿಂದ ಕೂಡಿದ ಮರದ ಕೆತ್ತನೆಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ; ಉದಾಹರಣೆಗೆ ಕರ್ನಾಟಕದ ಹೆಮ್ಮೆಯ ಚನ್ನಪಟ್ಟಣದ ಬೊಂಬೆಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿವೆ.
  • ಸಾಂಪ್ರದಾಯಿಕ ಕೈಮಗ್ಗದ ಸೀರೆಗಳಾದ ಇಳಕಲ್ ಮತ್ತು ಕಾಂಚೀಪುರಂ ರೇಷ್ಮೆ ಸೀರೆಗಳ ಜೊತೆಗೆ ಪರಿಸರ ಸ್ನೇಹಿ ಖಾದಿ ಉತ್ಪನ್ನಗಳಿಗೆ ಈ ಯೋಜನೆಯು ವಿಶಾಲವಾದ ಮಾರುಕಟ್ಟೆಯನ್ನು ಒದಗಿಸುತ್ತಿದೆ.
  • ರೈತರು ಮತ್ತು ಸಣ್ಣ ಉತ್ಪಾದಕರು ಬೆಳೆದ ಸ್ಥಳೀಯ ಸಾಂಬಾರ ಪದಾರ್ಥಗಳು, ಚಹಾ, ಕಾಫಿ, ಶುದ್ಧ ಜೇನುತುಪ್ಪ ಮತ್ತು ಪೌಷ್ಟಿಕಾಂಶಯುಕ್ತ ಸಿರಿಧಾನ್ಯಗಳನ್ನು ಪ್ರಯಾಣಿಕರು ನೇರವಾಗಿ ಖರೀದಿಸಲು ಅವಕಾಶವಿದೆ.
  • ಪ್ರತಿ ಪ್ರಾಂತ್ಯದ ವಿಶಿಷ್ಟ ರುಚಿಯನ್ನು ಹೊಂದಿರುವ ಸಾಂಪ್ರದಾಯಿಕ ಸಿಹಿತಿಂಡಿಗಳು ಮತ್ತು ಸ್ಥಳೀಯವಾಗಿ ಸಂಸ್ಕರಿಸಿದ ವಿವಿಧ ಆಹಾರ ಪದಾರ್ಥಗಳು ಈ ಮಳಿಗೆಗಳಲ್ಲಿ ಲಭ್ಯವಿರುತ್ತವೆ.

ಪ್ರಯೋಜನಗಳೇನು?

  • ಈ ಯೋಜನೆಯು ಸ್ಥಳೀಯ ಕುಶಲಕರ್ಮಿಗಳು ಮತ್ತು ನೇಕಾರರಿಗೆ ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ, ಪ್ರತಿದಿನ ರೈಲ್ವೆಯಲ್ಲಿ ಪ್ರಯಾಣಿಸುವ ಲಕ್ಷಾಂತರ ಪ್ರಯಾಣಿಕರನ್ನು ನೇರವಾಗಿ ತಲುಪಲು ಅವಕಾಶ ಮಾಡಿಕೊಡುತ್ತದೆ.
  • ಪ್ರಾದೇಶಿಕ ವಿಶಿಷ್ಟತೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸುವ ಮೂಲಕ, ಈ ಉಪಕ್ರಮವು ಸರ್ಕಾರದ 'ವೋಕಲ್ ಫಾರ್ ಲೋಕಲ್' ಮತ್ತು 'ಆತ್ಮನಿರ್ಭರ ಭಾರತ' ಕನಸಿಗೆ ನೇರ ಬೆಂಬಲ ನೀಡುತ್ತಿದೆ.
  • ಸಣ್ಣ ಉದ್ಯಮಿಗಳು ಕೇವಲ 1,000 ರೂ. ನಾಮಮಾತ್ರದ ಶುಲ್ಕದಲ್ಲಿ ಮಳಿಗೆಯನ್ನು ಪಡೆದು, ಅತ್ಯಂತ ಕಡಿಮೆ ಅಪಾಯದೊಂದಿಗೆ ತಮ್ಮ ಉತ್ಪನ್ನಗಳ ಮಾರುಕಟ್ಟೆ ಸಾಮರ್ಥ್ಯವನ್ನು ಪರೀಕ್ಷಿಸಬಹುದು.
  • ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿಯೇ ಆಯಾ ಪ್ರಾಂತ್ಯದ ಅಪ್ಪಟ ಸಾಂಬಾರ ಪದಾರ್ಥಗಳು, ಚಹಾ, ಸಾಂಪ್ರದಾಯಿಕ ಉಡುಪುಗಳು ಮತ್ತು ಕಲಾಕೃತಿಗಳನ್ನು ಖರೀದಿಸುವ ವಿಶಿಷ್ಟ ಅನುಭವವನ್ನು ಪಡೆಯುತ್ತಾರೆ.
  • ಈ ಮಳಿಗೆಗಳಲ್ಲಿ ಹೆಚ್ಚಿನವು ಮಹಿಳಾ ಉದ್ಯಮಿಗಳು ಮತ್ತು ಸ್ವಸಹಾಯ ಸಂಘಗಳಿಂದ ನಡೆಸಲ್ಪಡುತ್ತಿದ್ದು, ಇದು ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿದೆ.
  • ಆಯ್ಕೆಯಾದ ಫಲಾನುಭವಿಗಳಿಗೆ ರಾಷ್ಟ್ರೀಯ ವಿನ್ಯಾಸ ಸಂಸ್ಥೆಯು ವಿನ್ಯಾಸಗೊಳಿಸಿದ ಆಕರ್ಷಕ ಮತ್ತು ಸುಸಜ್ಜಿತವಾದ ಕಿಯೋಸ್ಕ್ ಅಥವಾ ಮೊಬೈಲ್ ಸ್ಟಾಲ್‌ಗಳನ್ನು ರೈಲ್ವೆ ಇಲಾಖೆಯ ವತಿಯಿಂದಲೇ ಒದಗಿಸಲಾಗುತ್ತದೆ.

ಮಳಿಗೆ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

  • ಆಸಕ್ತರು ತಾವು ಮಳಿಗೆ ತೆರೆಯಲು ಇಚ್ಛಿಸುವ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಅಥವಾ ಸ್ಟೇಷನ್ ಮ್ಯಾನೇಜರ್ ಕಚೇರಿಯನ್ನು ಸಂಪರ್ಕಿಸಿ, ನಿಗದಿತ ಅರ್ಜಿ ಫಾರಂ ಅನ್ನು ಭರ್ತಿ ಮಾಡಿ ಸಲ್ಲಿಸಬೇಕು.
  • ಇದು ಅತ್ಯಂತ ಕಡಿಮೆ ವೆಚ್ಚದ ಯೋಜನೆಯಾಗಿದ್ದು, ಸಾಮಾನ್ಯವಾಗಿ 15 ದಿನಗಳ ಕಾಲ ಮಳಿಗೆ ನಡೆಸಲು ಕೇವಲ 1,000 ರೂ.ನಾಮಮಾತ್ರದ ನೋಂದಣಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
  • ಒಂದೇ ನಿಲ್ದಾಣಕ್ಕೆ ಒಂದಕ್ಕಿಂತ ಹೆಚ್ಚು ಅರ್ಜಿಗಳು ಬಂದ ಸಂದರ್ಭದಲ್ಲಿ, ಯಾವುದೇ ತಾರತಮ್ಯವಿಲ್ಲದೆ ಪಾರದರ್ಶಕವಾಗಿ 'ಲಾಟರಿ' ಅಥವಾ ಆದ್ಯತೆಯ ಪಟ್ಟಿಯ ಆಧಾರದ ಮೇಲೆ ಮಳಿಗೆಗಳನ್ನು ಹಂಚಿಕೆ ಮಾಡಲಾಗುತ್ತದೆ.

ಮಳಿಗೆ ತೆರೆಯಲು ಯಾರೆಲ್ಲಾ ಅರ್ಹರು?

  • ಸರ್ಕಾರಿ ಪ್ರಾಧಿಕಾರಗಳಿಂದ (ಹ್ಯಾಂಡಿಕ್ರಾಫ್ಟ್ಸ್ ಅಥವಾ ಹ್ಯಾಂಡ್ಲೂಮ್) ಮಾನ್ಯತೆ ಪಡೆದ ಗುರುತಿನ ಚೀಟಿ ಹೊಂದಿರುವವರು ಅಥವಾ ಬುಡಕಟ್ಟು ಸಹಕಾರ ಮಾರುಕಟ್ಟೆ ಅಭಿವೃದ್ದಿ ಸಂಘಟನೆ (TRIFED), ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮ (NHDC) ಮತ್ತು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ (KVIC) ನಂತಹ ಸಂಸ್ಥೆಗಳಲ್ಲಿ ನೋಂದಾಯಿಸಿಕೊಂಡಿರುವ ಕುಶಲಕರ್ಮಿಗಳಿಗೆ ಆದ್ಯತೆ ನೀಡಲಾಗುತ್ತದೆ.
  • ಕೇಂದ್ರ ಸರ್ಕಾರದ ಪಿಎಂಇಜಿಪಿ ನಂತಹ ಪ್ರಮುಖ ಯೋಜನೆಗಳ ಅಡಿಯಲ್ಲಿ ನೋಂದಾಯಿಸಲ್ಪಟ್ಟಿರುವ ಸ್ವಸಹಾಯ ಸಂಘಗಳು ಈ ಸೌಲಭ್ಯವನ್ನು ಪಡೆಯಲು ಅರ್ಹವಾಗಿರುತ್ತವೆ.
  • ಸಮಾಜದ ಆರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದ ಜನರಿಗೆ ಸ್ವಾವಲಂಬಿ ಜೀವನ ನಡೆಸಲು ಈ ಯೋಜನೆಯಲ್ಲಿ ವಿಶೇಷ ಅವಕಾಶ ಕಲ್ಪಿಸಲಾಗಿದೆ.
  • ರಾಜ್ಯ ಸರ್ಕಾರದ ವಿವಿಧ ಸಂಸ್ಥೆಗಳೊಂದಿಗೆ ಗುರುತಿಸಿಕೊಂಡಿರುವ ವೈಯಕ್ತಿಕ ಉತ್ಪಾದಕರು, ಕುಶಲಕರ್ಮಿಗಳು ಅಥವಾ ಕರಕುಶಲ ಕೆಲಸಗಾರರು ಈ ಯೋಜನೆಯ ಲಾಭ ಪಡೆಯಬಹುದು.

 

ಅಗತ್ಯವಿರುವ ದಾಖಲೆಗಳು

  • ಗುರುತಿನ ಚೀಟಿ
  • ಅರ್ಹತಾ ಪ್ರಮಾಣಪತ್ರ
  • ನೋಂದಣಿ ದಾಖಲೆ
  • ಸ್ಥಳೀಯ ನಿವಾಸಿ ದೃಢೀಕರಣ
  • ಬ್ಯಾಂಕ್ ವಿವರ
  • ಸ್ವಯಂ ಘೋಷಣಾ ಪತ್ರ

]]>
Sat, 24 Jan 2026 08:48:29 +0530 shivuagrico
Thayi lakshmi bond yojane&ತಾಯಿ ಲಕ್ಮಿ ಬಾಂಡ್ ಯೋಜನೆಯಡಿ 50,000 ರೂ.ವರೆಗೆ ಹೆರಿಗೆ ಸಹಾಯಧನ https://krushirushi.in/Thayi-lakshmi-bond-yojane-2026 https://krushirushi.in/Thayi-lakshmi-bond-yojane-2026 Thayi lakshmi bond yojane-ತಾಯಿ ಲಕ್ಮಿ ಬಾಂಡ್ ಯೋಜನೆಯಡಿ 50,000 ರೂ.ವರೆಗೆ ಹೆರಿಗೆ ಸಹಾಯಧನ

ನೀವೆಲ್ಲರೂ ಭಾಗ್ಯಲಕ್ಷ್ಮಿ ಬಾಂಡ್‌ ಬಗ್ಗೆ ಕೇಳಿರುತ್ತೀರಿ. ಅದೇ ರೀತಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ನೋಂದಾಯಿತ ಮಹಿಳಾ ಕಾರ್ಮಿಕರಿಗೆ ಹೆರಿಗೆಯ ಸಮಯದಲ್ಲಿ ಆರ್ಥಿಕ ಭದ್ರತೆ ನೀಡಲು ತಾಯಿ ಲಕ್ಷ್ಮೀ ಬಾಂಡ್ ಎಂಬ ವಿಶಿಷ್ಟ ಯೋಜನೆಯನ್ನು ಜಾರಿಗೆ ತಂದಿದೆ. 2022ರ ಮಂಡಳಿಯ ತಿದ್ದುಪಡಿ ನಿಯಮಗಳ ಪ್ರಕಾರ, ಮಹಿಳಾ ಕಾರ್ಮಿಕರ ಹೆಣ್ಣು ಹಾಗೂ ಗಂಡು ಮಗುವಿನ ಜನನಕ್ಕೆ ಸಹಾಯಧನವನ್ನು ಹೆಚ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಏನಿದು ಯೋಜನೆ? ಸಹಾಯಧನ ಪಡೆಯುವುದು ಹೇಗೆ? ಎಂಬುದನ್ನು ತಿಳಿಯೋಣ.

ಏನಿದು ತಾಯಿ ಲಕ್ಷ್ಮೀ ಬಾಂಡ್ ಯೋಜನೆ?

ತಾಯಿ ಲಕ್ಷ್ಮೀ ಬಾಂಡ್ (ಹೆರಿಗೆ ಸಹಾಯಧನ) ಯೋಜನೆ ಎನ್ನುವುದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ನೋಂದಾಯಿತ ಮಹಿಳಾ ಕಾರ್ಮಿಕರಿಗೆ ನೀಡಲಾಗುವ ಒಂದು ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಈ ಯೋಜನೆಯಡಿ, ಮಹಿಳಾ ಕಾರ್ಮಿಕರ ಮೊದಲ ಎರಡು ಹೆರಿಗೆಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದ್ದು, ಹೆಣ್ಣು ಮಗುವಿನ ಜನನಕ್ಕೆ 30,000 ರೂ. ಮತ್ತು ಗಂಡು ಮಗುವಿನ ಜನನಕ್ಕೆ 20,000 ರೂ. ವರೆಗೆ ಸಹಾಯಧನವನ್ನು ಬಾಂಡ್ ಅಥವಾ ನೇರ ನಗದು ವರ್ಗಾವಣೆ ಮೂಲಕ ಒದಗಿಸಲಾಗುತ್ತದೆ (ಇತ್ತೀಚಿನ ನಿಯಮ 43 ರಂತೆ ಇದು ಒಟ್ಟಾರೆ 50,000 ವರೆಗೂ ಇರಬಹುದು).

ಯೋಜನೆಯ ಪ್ರಮುಖ ಸೌಲಭ್ಯಗಳು

  • ಒಂದು ವೇಳೆ ಹೆಣ್ಣು ಮಗು ಜನಿಸಿದರೆ 30,000 ರೂ. ವರೆಗೆ ಸಹಾಯಧನವನ್ನು ನೀಡಲಾಗುತ್ತದೆ.
  • ಒಂದು ವೇಳೆ ಗಂಡು ಮಗು ಜನಿಸಿದರೆ ರೂ. 20,000 ವರೆಗೆ ಸಹಾಯಧನವನ್ನು ನೀಡಲಾಗುತ್ತದೆ.
  • ಈ ಧನಸಹಾಯವನ್ನು ಸರ್ಕಾರವು ಈ ಹಿಂದೆ ಬಾಂಡ್ ರೂಪದಲ್ಲಿ ನೀಡುತ್ತಿತ್ತು, ಆದರೆ ಈಗ ನಗದು ರೂಪದಲ್ಲಿಯೂ ಪಡೆಯುವ ಅವಕಾಶವಿದೆ.
  • ಸರ್ಕಾರದ ಇತ್ತೀಚಿನ ನಿಯಮ 43ರ ಆದೇಶದಂತೆ, ಅರ್ಹ ಮಹಿಳಾ ಕಾರ್ಮಿಕರಿಗೆ ಗರಿಷ್ಠ 50,000 ರೂ. ವರೆಗೆ ಸಹಾಯಧನವನ್ನು ಮಂಜೂರು ಮಾಡಬಹುದಾಗಿದೆ.
  • ಈ ಮೊತ್ತವು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಡಿ.ಬಿ.ಟಿ (DBT) ಮೂಲಕ ಜಮಾ ಆಗುತ್ತದೆ.

    ಸಹಾಯಧನ ಪಡೆಯಲು ನಿಯಮಗಳೇನು?

    • ನೋಂದಾಯಿತ ಮಹಿಳಾ ಕಾರ್ಮಿಕರು ಮೊದಲ ಎರಡು ಜೀವಂತ ಮಕ್ಕಳಿಗೆ ಮಾತ್ರ ಸಹಾಯ ಧನವನ್ನು ಪಡೆಯಲು ಅರ್ಹರಾಗಿರುತ್ತಾರೆ (ಎರಡನೇ ಹಕ್ಕು ಸಾಧನೆ ಸಹಾಯ ಧನ ಅರ್ಜಿಯು ಎರಡನೇ ಮಗುವಿನ ಹೆರಿಗೆ ಎಂದು ಹೇಳುವ ಅಫೀಡೆವಿಟ್ ಅನ್ನು ಒಳಗೊಂಡಿರಬೇಕು).
    • ಒಂದು ವೇಳೆ ಈಗಾಗಲೇ ನೋಂದಾಯಿತ ಮಹಿಳಾ ಕಾರ್ಮಿಕರಿಗೆ ಎರಡು ಮಕ್ಕಳಿದ್ದರೆ, ಅವಳು ಈ ಸೌಲಭ್ಯವನ್ನು ಪಡೆಯಲು ಅರ್ಹರಾಗುವುದಿಲ್ಲ.
    • ಜನನ ಮತ್ತು ಮರಣದ ನೋಂದಾಣಾ ಅಧಿಕಾರಿಯಿಂದ ಜನನದ ಪ್ರಮಾಣ ಪತ್ರವನ್ನು ಪಡೆಯಬೇಕು. ಅಥವಾ ಸರ್ಕಾರಿ ಆಸ್ಪತ್ರೆ, ಕರ್ನಾಟಕ ರಾಜ್ಯದಲ್ಲಿ ನೋಂದಾಯಿತ ಅಂಗೀಕೃತ ಆಸ್ಪತ್ರೆಗಳಲ್ಲಿ ದಾಖಲಾಗಿ ಆ ಸಂಸ್ಥೆಯ ಮುಖ್ಯಸ್ಥರಿಂದ ಸಹಿ ಮಾಡಿದ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

    ಅರ್ಹತಾ ಮಾನದಂಡಗಳು

    ಅರ್ಜಿದಾರರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತರಾಗಿರಬೇಕು ಮತ್ತು ಚಾಲ್ತಿಯಲ್ಲಿರುವ ಲೇಬರ್ ಕಾರ್ಡ್ ಹೊಂದಿರಬೇಕು.
  • ಮಹಿಳಾ ಕಾರ್ಮಿಕರಿಗೆ ಕನಿಷ್ಠ 18 ವರ್ಷ ತುಂಬಿರಬೇಕು.
  • ನೋಂದಣಿ ಮಾಡುವ ಮೊದಲು ಅಥವಾ ಸಹಾಯಧನಕ್ಕೆ ಅರ್ಜಿ ಸಲ್ಲಿಸುವ ಹಿಂದಿನ 12 ತಿಂಗಳಲ್ಲಿ ಕನಿಷ್ಠ 90 ದಿನಗಳ ಕಾಲ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡಿರಬೇಕು.
  • ಈ ಸೌಲಭ್ಯವು ಮೊದಲ ಎರಡು ಹೆರಿಗೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

  • ಅರ್ಹ ಫಲಾನುಭವಿಗಳು ಈ ಯೋಜನೆಗೆ ಆನ್‌ಲೈನ್ ಅಥವಾ ಆಫ್‌ಲೈನ್ ಈ ಎರಡು ವಿಧಾನಗಳ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ.
  • ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಚ್ಛಿಸುವವರು ಕರ್ನಾಟಕ ಸರ್ಕಾರದ ಅಧಿಕೃತ ಸೇವಾ ಸಿಂಧು ಪೋರ್ಟಲ್‌ sevasindhu.karnataka.gov.in/ ಗೆ ಭೇಟಿ ನೀಡಬೇಕು.
  • ಪೋರ್ಟಲ್‌ನಲ್ಲಿ "Maternity Assistance (ತಾಯಿ ಲಕ್ಷ್ಮೀ ಬಾಂಡ್‌ )" ಅಥವಾ "ಹೆರಿಗೆ ಸಹಾಯಧನ" ಎಂಬ ಸೇವೆಯನ್ನು ಹುಡುಕಿ ಆಯ್ಕೆ ಮಾಡಿಕೊಳ್ಳಬೇಕು.
  • ಅರ್ಜಿಯ ಜೊತೆಗೆ ಕೇಳಲಾದ ಅಗತ್ಯ ದಾಖಲೆಗಳನ್ನು ಸ್ಪಷ್ಟವಾಗಿ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುವ ಮೂಲಕ ಅರ್ಜಿಯನ್ನು ಪೂರ್ಣಗೊಳಿಸಬಹುದು.
  • ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸುವವರು ನಿಮ್ಮ ಹತ್ತಿರದ ಅಥವಾ ಸ್ಥಳೀಯ ಕಾರ್ಮಿಕ ಇಲಾಖೆಯ ಕಚೇರಿಗೆ (ಕಾರ್ಮಿಕ ಭವನ) ಭೇಟಿ ನೀಡಿ ನಿಗದಿತ ನಮೂನೆಯ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು.
  • ಈ ಯೋಜನೆಯ ಸೌಲಭ್ಯ ಪಡೆಯಲು ಮಗು ಜನಿಸಿದ 6 ತಿಂಗಳ ಒಳಗಾಗಿ ಅರ್ಜಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ, ವಿಳಂಬವಾದರೆ ಅರ್ಜಿ ತಿರಸ್ಕೃತಗೊಳ್ಳುವ ಸಾಧ್ಯತೆ ಇರುತ್ತದೆ.
  • ಅಗತ್ಯವಿರುವ ದಾಖಲೆಗಳು

    • ಮಂಡಳಿ ನೀಡಿರುವ ಅಸಲಿ ಗುರುತಿನ ಚೀಟಿ
    • ಮಗುವಿನ ಜನನ ಪ್ರಮಾಣ ಪತ್ರ
    • ತಾಯಿಯ ಆಧಾರ್ ಕಾರ್ಡ್ (ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು).
    • ಬ್ಯಾಂಕ್ ಪಾಸ್‌ಬುಕ್ ಪ್ರತಿ
    • ತಾಯಿ ಕಾರ್ಡ್‌
    • ಕೆಲಸದ ದೃಢೀಕರಣ ಪತ್ರ (ಉದ್ಯೋಗ ದೃಢೀಕರಣ).
    • ಆಸ್ಪತ್ರೆಯ ಡಿಸ್ಚಾರ್ಜ್ ಸಾರಾಂಶ
    • ಇದು ಎರಡನೇ ಮಗುವಾಗಿದ್ದಲ್ಲಿ, ಅಫಿಡವಿಟ್ ಸಲ್ಲಿಸುವುದು ಕಡ್ಡಾಯ.


    ಇತರೆ ಸಂಬಂಧಿತ ಯೋಜನೆಗಳು

    • ತಾಯಿ ಮಗು ಸಹಾಯ ಹಸ್ತ ಯೋಜನೆಯಡಿ, ಮೂರು ವರ್ಷದೊಳಗಿನ ಮಕ್ಕಳ ಪೌಷ್ಟಿಕಾಂಶ ಮತ್ತು ಆರೋಗ್ಯದ ಆರೈಕೆಗಾಗಿ ಪ್ರತಿ ತಿಂಗಳು 500 ರೂ. ಸಹಾಯಧನವನ್ನು ನೀಡಲಾಗುತ್ತದೆ.
    • ಈ ಯೋಜನೆಯ ಮೂಲಕ ಒಂದು ಮಗುವಿಗೆ ವರ್ಷಕ್ಕೆ ಒಟ್ಟು 6,000 ರೂ.ವರೆಗೆ ಆರ್ಥಿಕ ನೆರವು ಲಭ್ಯವಾಗುತ್ತದೆ.
    • ಶೈಕ್ಷಣಿಕ ಧನಸಹಾಯ (ಕಲಿಕೆ ಭಾಗ್ಯ) ಯೋಜನೆಯಡಿ, ಕಾರ್ಮಿಕರ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಲು ವಾರ್ಷಿಕ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
    • ವಿದ್ಯಾರ್ಥಿ ಓದುತ್ತಿರುವ ತರಗತಿ ಅಥವಾ ಕೋರ್ಸ್‌ಗೆ ಅನುಗುಣವಾಗಿ ವರ್ಷಕ್ಕೆ 2,000 ರೂ.ದಿಂದ 30,000 ರೂ.ಕ್ಕೂ ಹೆಚ್ಚು ಹಣವನ್ನು ಶಿಕ್ಷಣಕ್ಕಾಗಿ ಪಡೆಯಬಹುದು.
    • ಈ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅಥವಾ ಯಾವುದೇ ಸಮಸ್ಯೆಗಳಿದ್ದಲ್ಲಿ ನಿಮ್ಮ ವ್ಯಾಪ್ತಿಯ ಕಾರ್ಮಿಕ ನಿರೀಕ್ಷಕರ ಕಚೇರಿಯನ್ನು ಸಂಪರ್ಕಿಸಬಹುದು.
]]>
Fri, 23 Jan 2026 18:43:45 +0530 shivuagrico
Atal Pension yojane&ತಿಂಗಳಿಗೆ 210 ರೂಪಾಯಿ ಕಟ್ಟಿ 5,000 ರೂ. ಪಿಂಚಣಿ ಪಡೆಯಿರಿ https://krushirushi.in/Atal-Pension-yojane-2026 https://krushirushi.in/Atal-Pension-yojane-2026 Atal Pension yojane-ತಿಂಗಳಿಗೆ 210 ರೂಪಾಯಿ ಕಟ್ಟಿ 5,000 ರೂ. ಪಿಂಚಣಿ ಪಡೆಯಿರಿ

ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಜನಸಾಮಾನ್ಯರಿಗೆ ವೃದ್ಧಾಪ್ಯದ ಸಮಯದಲ್ಲಿ ಪ್ರತಿ ತಿಂಗಳು ನಿಗದಿತ ಹಣವನ್ನು ನೀಡುವ ಮಹತ್ವಕಾಂಕ್ಷಿ ಅಟಲ್‌ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಮುಂದಿನ 5 ವರ್ಷಗಳ ಅವಧಿಗೆ ವಿಸ್ತರಿಸಿದೆ. ಕೇಂದ್ರ ಸಚಿವ ಸಂಪುಟವು ಇತ್ತೀಚೆಗೆ ಅಟಲ್ ಪೆನ್ಷನ್ ಯೋಜನೆ ಅನ್ನು 2030-31ರವರೆಗೆ ವಿಸ್ತರಿಸಲು ಅನುಮೋದನೆ ನೀಡಿದೆ. ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಯ ಕುರಿತ ಇಣುಕುನೋಟ ಇಲ್ಲಿದೆ.

ಏನಿದು ಅಟಲ್‌ ಪಿಂಚಣಿ ಯೋಜನೆ?
ಅಟಲ್ ಪಿಂಚಣಿ ಯೋಜನೆಯು ಭಾರತ ಸರ್ಕಾರವು ಪ್ರಾರಂಭಿಸಿದ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಇದು ಭಾರತದ ಎಲ್ಲಾ ನಾಗರಿಕರಿಗೆ 60 ವರ್ಷದ ನಂತರ ಸ್ಥಿರವಾದ ಆದಾಯವನ್ನು ಒದಗಿಸುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕೆಲಸಗಾರರು, ವಿತರಣಾ ಕಾರ್ಮಿಕರು, ತೋಟಗಾರರು ಮುಂತಾದವರ ಮೇಲೆ ಕೇಂದ್ರೀಕರಿಸಿದ ಪಿಂಚಣಿ ಯೋಜನೆಯಾಗಿದೆ. ಅಟಲ್‌ ಪಿಂಚಣಿ ಯೋಜನೆ ಅಡಿಯಲ್ಲಿ, ಚಂದಾದಾರರ ಕೊಡುಗೆಗಳನ್ನು ಅವಲಂಬಿಸಿ 60 ವರ್ಷ ವಯಸ್ಸಿನಲ್ಲಿ ಮಾಸಿಕ ರೂ. 1,000/- ಅಥವಾ 2,000/- ಅಥವಾ 3,000/- ಅಥವಾ 4,000 ಅಥವಾ 5,000/- ಗಳ ಖಾತರಿಪಡಿಸಿದ ಕನಿಷ್ಠ ಪಿಂಚಣಿಯನ್ನು ನೀಡಲಾಗುತ್ತದೆ. ಭಾರತದ ಯಾವುದೇ ನಾಗರಿಕರು ಅಟಲ್‌ ಪಿಂಚಣಿ ಯೋಜನೆ ಯೋಜನೆಗೆ ಸೇರಬಹುದು.

ಅಟಲ್‌ ಪಿಂಚಣಿ ಯೋಜನೆಯ ಪ್ರಯೋಜನಗಳು
ಅಟಲ್ ಪಿಂಚಣಿ ಯೋಜನೆಯಡಿ ಕನಿಷ್ಠ ಪಿಂಚಣಿಯ ಪ್ರಯೋಜನವನ್ನು ಸರ್ಕಾರವು ಖಾತರಿಪಡಿಸುತ್ತದೆ, ಅಂದರೆ ಪಿಂಚಣಿ ಕೊಡುಗೆಗಳ ಮೇಲಿನ ನಿಜವಾದ ಆದಾಯವು ಕನಿಷ್ಠ ಖಾತರಿಪಡಿಸಿದ ಪಿಂಚಣಿಗಾಗಿ ಊಹಿಸಲಾದ ಆದಾಯಕ್ಕಿಂತ ಕಡಿಮೆಯಿದ್ದರೆ, ಅಂತಹ ಕೊರತೆಯನ್ನು ಸರ್ಕಾರವು ಭರಿಸುತ್ತದೆ.
ಅಟಲ್ ಪಿಂಚಣಿ ಯೋಜನೆಯಡಿ, ತಿಂಗಳಿಗೆ ಕೇವಲ 210 ರೂಪಾಯಿಗಳನ್ನು ಪಾವತಿಸುವ ಮೂಲಕ ತಿಂಗಳಿಗೆ 5000 ರೂಪಾಯಿ ಪಿಂಚಣಿ ಪಡೆಯಬಹುದು.
ಈ ಯೋಜನೆಯಲ್ಲಿ ಖಾತೆಯನ್ನು ತೆರೆಯುವ ಮೂಲಕ, ನೀವು 60 ವರ್ಷದ ನಂತರ ಪ್ರತಿ ತಿಂಗಳು 1000 ರಿಂದ 5000 ರೂಪಾಯಿಗಳ ಪಿಂಚಣಿಯನ್ನು ಪಡೆಯಬಹುದು.

ಅಟಲ್‌ ಪಿಂಚಣಿ ಯೋಜನೆ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ಸಂಗತಿಗಳು
  • ನೀವು ನಿಯತಕಾಲಿಕವಾಗಿ ಕೊಡುಗೆಗಳನ್ನು ನೀಡುತ್ತಿರುವುದರಿಂದ, ಮೊತ್ತವನ್ನು ನಿಮ್ಮ ಖಾತೆಯಿಂದ ಸ್ವಯಂಚಾಲಿತವಾಗಿ ಡೆಬಿಟ್ ಮಾಡಲಾಗುತ್ತದೆ. ಪ್ರತಿ ಡೆಬಿಟ್‌ಗೂ ಮೊದಲು ನಿಮ್ಮ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇದೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು.
  • ನಿಮ್ಮ ಇಚ್ಛೆಯಂತೆ ನೀವು ನಿಮ್ಮ ಪ್ರೀಮಿಯಂ ಅನ್ನು ಹೆಚ್ಚಿಸಬಹುದು. ನೀವು ನಿಮ್ಮ ಬ್ಯಾಂಕ್‌ಗೆ ಭೇಟಿ ನೀಡಿ ನಿಮ್ಮ ವ್ಯವಸ್ಥಾಪಕರೊಂದಿಗೆ ಮಾತನಾಡಿ ಅಗತ್ಯ ಬದಲಾವಣೆಗಳನ್ನು ಮಾಡಬೇಕು.
  • ನಿಮ್ಮ ಪಾವತಿಗಳನ್ನು ತಪ್ಪಿಸಿದರೆ, ದಂಡ ವಿಧಿಸಲಾಗುತ್ತದೆ. ಪ್ರತಿ ರೂ. 100 ಅಥವಾ ಅದರ ಭಾಗದ ಕೊಡುಗೆಗೆ ತಿಂಗಳಿಗೆ 1 ರೂ. ದಂಡ ವಿಧಿಸಲಾಗುತ್ತದೆ.
  • ನೀವು 6 ತಿಂಗಳವರೆಗೆ ನಿಮ್ಮ ಪಾವತಿಯನ್ನು ತಪ್ಪಿಸಿದರೆ, ನಿಮ್ಮ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ ಮತ್ತು ತಪ್ಪಿಸುವಿಕೆ 12 ತಿಂಗಳವರೆಗೆ ಮುಂದುವರಿದರೆ, ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಮತ್ತು ನೀವು 24 ತಿಂಗಳವರೆಗೆ ಪಾವತಿಗಳನ್ನು ಮಾಡಲು ವಿಫಲವಾದರೆ ನಿಮ್ಮ ಖಾತೆಯನ್ನು ಮುಚ್ಚಲಾಗುತ್ತದೆ ಮತ್ತು ಉಳಿದ ಮೊತ್ತವನ್ನು ಚಂದಾದಾರರಿಗೆ ಪಾವತಿಸಲಾಗುತ್ತದೆ.
  • ಅವಧಿಗೆ ಮುಂಚಿತವಾಗಿ ಹಿಂಪಡೆಯುವಿಕೆಯನ್ನು ಪರಿಗಣಿಸಲಾಗುವುದಿಲ್ಲ. ಸಾವು ಅಥವಾ ಮಾರಕ ಕಾಯಿಲೆಯಂತಹ ಸಂದರ್ಭಗಳಲ್ಲಿ ಮಾತ್ರ, ಚಂದಾದಾರರು ಅಥವಾ ಅವರ/ಅವಳ ನಾಮಿನಿ ಸಂಪೂರ್ಣ ಮೊತ್ತವನ್ನು ಮರಳಿ ಪಡೆಯುತ್ತಾರೆ.
  • ನೀವು 60 ವರ್ಷಕ್ಕಿಂತ ಮೊದಲು ಬೇರೆ ಯಾವುದೇ ಕಾರಣಕ್ಕಾಗಿ ಯೋಜನೆಯನ್ನು ಮುಚ್ಚಿದರೆ, ನಿಮ್ಮ ಕೊಡುಗೆ ಮತ್ತು ಗಳಿಸಿದ ಬಡ್ಡಿಯನ್ನು ಮಾತ್ರ ಹಿಂತಿರುಗಿಸಲಾಗುತ್ತದೆ. ನೀವು ಸರ್ಕಾರದ ಸಹ-ಕೊಡುಗೆ ಅಥವಾ ಆ ಮೊತ್ತದ ಮೇಲೆ ಗಳಿಸಿದ ಬಡ್ಡಿಯನ್ನು ಪಡೆಯಲು ಅರ್ಹರಾಗಿರುವುದಿಲ್ಲ.

ವಯಸ್ಸಿನ ನಿರ್ಬಂಧಗಳು:
18 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳು ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ನಿರ್ಧರಿಸಬಹುದು. ಆದ್ದರಿಂದ, ಕಾಲೇಜು ವಿದ್ಯಾರ್ಥಿಗಳು ತಮ್ಮ ವೃದ್ಧಾಪ್ಯಕ್ಕಾಗಿ ನಿಧಿಯನ್ನು ರಚಿಸಲು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಗೆ ಪ್ರವೇಶ ಪಡೆಯಲು ಗರಿಷ್ಠ ಮಿತಿಯನ್ನು 40 ವರ್ಷಗಳಾಗಿ ನಿಗದಿಪಡಿಸಲಾಗಿದೆ, ಏಕೆಂದರೆ ಈ ಯೋಜನೆಗೆ ಕೊಡುಗೆಗಳನ್ನು ಕನಿಷ್ಠ 20 ವರ್ಷಗಳವರೆಗೆ ನೀಡಬೇಕು.

ಅಟಲ್ ಪಿಂಚಣಿ ಯೋಜನೆಯ ಅರ್ಹತೆಗಳು ಏನು?
ಅಟಲ್ ಪಿಂಚಣಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು, ನೀವು ಈ ಕೆಳಗಿನ ಅವಶ್ಯಕತೆಗಳನ್ನು ಪೂರೈಸಬೇಕು:
  • ಭಾರತದ ನಾಗರಿಕರಾಗಿರಬೇಕು.
  • 18-40 ವರ್ಷ ವಯಸ್ಸಿನವರಾಗಿರಬೇಕು
  • ಕನಿಷ್ಠ 20 ವರ್ಷಗಳವರೆಗೆ ಕೊಡುಗೆಗಳನ್ನು ನೀಡಬೇಕು.
  • ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು
  • ಮಾನ್ಯವಾದ ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು

ಅಟಲ್‌ ಪಿಂಚಣಿ ಯೋಜನೆ ಖಾತೆಯನ್ನು ತೆರೆಯುವ ವಿಧಾನ
  • ವ್ಯಕ್ತಿಯ ಉಳಿತಾಯ ಬ್ಯಾಂಕ್ ಖಾತೆ ಇರುವ ಬ್ಯಾಂಕ್ ಶಾಖೆ/ಅಂಚೆ ಕಚೇರಿಯನ್ನು ಸಂಪರ್ಕಿಸಿ ಅಥವಾ ಚಂದಾದಾರರು ಉಳಿತಾಯ ಖಾತೆಯನ್ನು ಹೊಂದಿಲ್ಲದಿದ್ದರೆ ಅದನ್ನು ತೆರೆಯಿರಿ.
  • ಬ್ಯಾಂಕ್ ಖಾತೆ ಸಂಖ್ಯೆ/ಅಂಚೆ ಕಚೇರಿ ಉಳಿತಾಯ ಬ್ಯಾಂಕ್ ಖಾತೆ ಸಂಖ್ಯೆಯನ್ನು ಒದಗಿಸಿ ಮತ್ತು ಬ್ಯಾಂಕ್ ಸಿಬ್ಬಂದಿಯ ಸಹಾಯದಿಂದ, ಅಟಲ್‌ ಪಿಂಚಣಿ ಯೋಜನೆ ನೋಂದಣಿ ಅರ್ಜಿ ನಮೂನೆಯನ್ನು ಅನ್ನು ಭರ್ತಿ ಮಾಡಿ.
  • ಆಧಾರ್/ಮೊಬೈಲ್ ಸಂಖ್ಯೆಯನ್ನು ಒದಗಿಸಿ. ಇದು ಕಡ್ಡಾಯವಲ್ಲ, ಆದರೆ ಕೊಡುಗೆಗೆ ಸಂಬಂಧಿಸಿದಂತೆ ಸಂವಹನವನ್ನು ಸುಲಭಗೊಳಿಸಲು ಒದಗಿಸಬಹುದು.
  • ಮಾಸಿಕ/ತ್ರೈಮಾಸಿಕ/ಅರ್ಧವಾರ್ಷಿಕ ಕೊಡುಗೆಯನ್ನು ವರ್ಗಾಯಿಸಲು ಉಳಿತಾಯ ಬ್ಯಾಂಕ್ ಖಾತೆ/ಅಂಚೆ ಕಚೇರಿ ಉಳಿತಾಯ ಬ್ಯಾಂಕ್ ಖಾತೆಯಲ್ಲಿ ಅಗತ್ಯವಿರುವ ಬಾಕಿಯನ್ನು ಇಟ್ಟುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ.

ಅಟಲ್‌ ಪಿಂಚಣಿ ಯೋಜನೆಯಿಂದ ಹಣ ಹಿಂತೆಗೆದುಕೊಳ್ಳುವುದು ಹೇಗೆ?
60 ವರ್ಷಕ್ಕಿಂತ ಮೊದಲು: ನಿಗದಿತ ಅವಧಿಗಿಂತ ಮೊದಲು ಅಟಲ್‌ ಪಿಂಚಣಿ ಯೋಜನೆ ಯೋಜನೆಯಿಂದ ಹಣ ಹಿಂತೆಗೆದುಕೊಳ್ಳಲು ಅನುಮತಿ ಇಲ್ಲ, ಆದರೆ ಫಲಾನುಭವಿಯ ಸಾವು ಅಥವಾ ಮಾರಣಾಂತಿಕ ಕಾಯಿಲೆಯಂತಹ ಅಸಾಧಾರಣ ಸಂದರ್ಭಗಳಲ್ಲಿ ನಿರ್ಗಮನವನ್ನು ಅನುಮತಿಸಬಹುದು.

60 ವರ್ಷಗಳನ್ನು ತಲುಪುವುದು: ಫಲಾನುಭವಿಗಳು 60 ವರ್ಷ ವಯಸ್ಸನ್ನು ತಲುಪಿದ್ದರೆ, ಅವರು ಸಂಪೂರ್ಣ ಕಾರ್ಪಸ್ ಮೊತ್ತವನ್ನು ವರ್ಷಾಶನ ಮಾಡಲು ಅರ್ಹರಾಗಿರುತ್ತಾರೆ, ಅಂದರೆ ಆಯಾ ಬ್ಯಾಂಕಿನಲ್ಲಿ ಯೋಜನೆಯನ್ನು ಮುಕ್ತಾಯಗೊಳಿಸಿದ ನಂತರ ಮಾಸಿಕ ಪಿಂಚಣಿಗಳನ್ನು ಪಡೆಯುತ್ತಾರೆ.

ಚಂದಾದಾರರ ಮರಣ: ಸಂಗಾತಿಗೆ ಪಿಂಚಣಿ ಲಭ್ಯವಿರುತ್ತದೆ ಮತ್ತು ಸಂಗಾತಿಯ ಮರಣದ ನಂತರ, ಪಿಂಚಣಿ ನಿಧಿಯನ್ನು ನಾಮನಿರ್ದೇಶಿತರಿಗೆ ಹಿಂತಿರುಗಿಸಲಾಗುತ್ತದೆ

ಪಿಂಚಣಿ ಲೆಕ್ಕಾಚಾರ ಹೇಗೆ?
ಉದಾಹರಣೆ-1: 18 ವರ್ಷದಲ್ಲಿ ರೂ. 5,000 ಪಿಂಚಣಿಗೆ ಸೇರುವುದು: 42 ವರ್ಷಗಳ ಕಾಲ ತಿಂಗಳಿಗೆ ರೂ. 210 ಪಾವತಿಸಿ (ಒಟ್ಟು 1.06 ಲಕ್ಷ ರೂ. ಕೊಡುಗೆ), 60 ವರ್ಷದಿಂದ ತಿಂಗಳಿಗೆ ರೂ. 5,000 ಪಿಂಚಣಿ ಪಡೆಯಿರಿ, ಮತ್ತು ಗೊತ್ತುಪಡಿಸಿದವರಿಗೆ ರೂ. 8.5 ಲಕ್ಷ ಮೊತ್ತ ಮರಳಿ ಬರುತ್ತದೆ (ಸಂಗಾತಿ ಮತ್ತು ಗ್ರಾಹಕ ಇಬ್ಬರೂ ಮರಣ ಹೊಂದಿದ ನಂತರ).

ಉದಾಹರಣೆ-2: 40 ವರ್ಷದಲ್ಲಿ ರೂ. 1,000 ಪಿಂಚಣಿಗೆ ಸೇರುವುದು: 20 ವರ್ಷಗಳ ಕಾಲ ತಿಂಗಳಿಗೆ ರೂ. 291 ಪಾವತಿಸಿ (ಒಟ್ಟು 69,840 ರೂ. ಕೊಡುಗೆ), 60 ವರ್ಷದಿಂದ ತಿಂಗಳಿಗೆ ರೂ. 1,000 ಪಿಂಚಣಿ ಪಡೆಯಿರಿ, ಮತ್ತು ಗೊತ್ತುಪಡಿಸಿದವರಿಗೆ ರೂ. 1.7 ಲಕ್ಷ ಮೊತ್ತ ಮರಳಿ ಬರುತ್ತದೆ.

ಉದಾಹರಣೆಗೆ ಈ ಕೋಷ್ಟಕವನ್ನು ಗಮನಿಸಿ:

ಸೇರುವ ವಯಸ್ಸು (ವರ್ಷಗಳು) ರೂ. 1,000 ಪಿಂಚಣಿ ರೂ. 2,000 ಪಿಂಚಣಿ ರೂ. 3,000 ಪಿಂಚಣಿ ರೂ. 4,000 ಪಿಂಚಣಿ ರೂ. 5,000 ಪಿಂಚಣಿ
18 42 ರೂ. 84 ರೂ. 126 ರೂ. 168 ರೂ. 210 ರೂ.
20 50 ರೂ. 100 ರೂ. 150 ರೂ. 198 ರೂ. 248 ರೂ.
25 76 ರೂ. 151 ರೂ. 226 ರೂ. 301 ರೂ. 376 ರೂ.
30 116 ರೂ. 231 ರೂ. 347 ರೂ. 462 ರೂ. 577 ರೂ.
35 181 ರೂ. 362 ರೂ. 543 ರೂ. 722 ರೂ. 902 ರೂ.
40 291 ರೂ. 582 ರೂ. 873 ರೂ. 1,164 ರೂ. 1,454 ರೂ.


ಕಂತು ಪಾವತಿ ತಪ್ಪಿಸುವಿಕೆಯ ಮೇಲಿನ ದಂಡ
ನಿಮ್ಮ ಪಾವತಿಗಳನ್ನು ತಪ್ಪಿಸಿದರೆ ನಿಮ್ಮ ಬ್ಯಾಂಕ್ ಈ ಕೆಳಗಿನಂತೆ ಕೆಲವು ಹೆಚ್ಚುವರಿ ಮೊತ್ತಗಳನ್ನು ಸಂಗ್ರಹಿಸುತ್ತದೆ:

  • 100 ರೂ. ವರೆಗಿನ ಮಾಸಿಕ ಕೊಡುಗೆಗಳಿಗೆ 1 ರೂ
  • 101 ರೂ. ವರೆಗಿನ ಒಳಗೆ ಮಾಸಿಕ ಕೊಡುಗೆಗಳಿಗೆ 2.5 ರೂ..
  • 501 ದಿಂದ 1000 ರೂ. ವರೆಗಿನ ಮಾಸಿಕ ಕೊಡುಗೆಗಳಿಗೆ 5 ರೂ.
  • 1001 ರೂ. ಮತ್ತು ಅದಕ್ಕಿಂತ ಹೆಚ್ಚಿನ ಮಾಸಿಕ ಕೊಡುಗೆಗಳಿಗೆ 10 ರೂ.

ಅಟಲ್ ಪಿಂಚಣಿ ಯೋಜನೆಗೆ 7.65 ಕೋಟಿ ಚಂದಾದಾರರುಅಸಂಘಟಿತ ವಲಯಕ್ಕೆ ಭಾರತದ ಪ್ರಮುಖ ನಿವೃತ್ತಿ ಉಳಿತಾಯ ಯೋಜನೆಯಾದ ಅಟಲ್ ಪಿಂಚಣಿ ಯೋಜನೆ ಏಪ್ರಿಲ್ 2025 ರ ವೇಳೆಗೆ 7.65 ಕೋಟಿಗೂ ಹೆಚ್ಚು ಚಂದಾದಾರರನ್ನು ಮತ್ತು ಒಟ್ಟು 45,974.67 ಕೋಟಿ ರೂ.ಗಳ ನಿಧಿಯೊಂದಿಗೆ ಪ್ರಮುಖ ಮೈಲಿಗಲ್ಲನ್ನು ದಾಟಿದೆ. ಈ ಯೋಜನೆಯು ಮಹಿಳೆಯರ ಭಾಗವಹಿಸುವಿಕೆಯಲ್ಲಿ ಸ್ಥಿರವಾದ ಹೆಚ್ಚಳವನ್ನು ಕಂಡಿದೆ, ಈಗ ಒಟ್ಟು ಚಂದಾದಾರರ ಸಂಖ್ಯೆಯಲ್ಲಿ ಮಹಿಳೆಯರೇ ಸರಿಸುಮಾರು 48% ರಷ್ಟಿದ್ದಾರೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.

ಇತರ ಪ್ರಮುಖ ಸಂಗತಿಗಳು

  • ಅಟಲ್‌ ಪಿಂಚಣಿ ಯೋಜನೆ ಖಾತೆಯಲ್ಲಿ ನಾಮಿನಿ ವಿವರಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಚಂದಾದಾರರು ವಿವಾಹಿತರಾಗಿದ್ದರೆ, ಸಂಗಾತಿಯು ಕಡ್ಡಾಯ ನಾಮಿನಿಯಾಗಿರುತ್ತಾರೆ. ಅವಿವಾಹಿತ ಚಂದಾದಾರರು ಬೇರೆ ಯಾವುದೇ ವ್ಯಕ್ತಿಯನ್ನು ನಾಮಿನಿಯಾಗಿ ನಾಮನಿರ್ದೇಶನ ಮಾಡಬಹುದು ಮತ್ತು ಮದುವೆಯ ನಂತರ ಅವರು ಸಂಗಾತಿಯ ವಿವರಗಳನ್ನು ಒದಗಿಸಬೇಕು. ಸಂಗಾತಿ ಮತ್ತು ನಾಮಿನಿಯರ ಆಧಾರ್ ವಿವರಗಳನ್ನು ಒದಗಿಸಬಹುದು.
  • ಒಬ್ಬ ಚಂದಾದಾರನು ಒಂದು ಅಟಲ್‌ ಪಿಂಚಣಿ ಯೋಜನೆ ಖಾತೆಯನ್ನು ಮಾತ್ರ ತೆರೆಯಬಹುದು ಮತ್ತು ಅದು ವಿಶಿಷ್ಟವಾಗಿದೆ. ಬಹು ಖಾತೆಗಳನ್ನು ಅನುಮತಿಸಲಾಗುವುದಿಲ್ಲ.
  • ಚಂದಾದಾರರು ಸಂಚಯ ಹಂತದಲ್ಲಿ ವರ್ಷಕ್ಕೊಮ್ಮೆ ಪಿಂಚಣಿ ಮೊತ್ತವನ್ನು ಕಡಿಮೆ ಮಾಡಲು ಅಥವಾ ಹೆಚ್ಚಿಸಲು ಆಯ್ಕೆ ಮಾಡಬಹುದು.
  • PRAN ಸಕ್ರಿಯಗೊಳಿಸುವಿಕೆ, ಖಾತೆಯಲ್ಲಿನ ಬಾಕಿ, ಕೊಡುಗೆ ಕ್ರೆಡಿಟ್‌ಗಳು ಇತ್ಯಾದಿಗಳ ಕುರಿತು ಚಂದಾದಾರರಿಗೆ ನಿಯತಕಾಲಿಕ ಮಾಹಿತಿಯನ್ನು SMS ಎಚ್ಚರಿಕೆಗಳ ಮೂಲಕ ತಿಳಿಸಲಾಗುತ್ತದೆ. ಚಂದಾದಾರರು ವರ್ಷಕ್ಕೊಮ್ಮೆ ಖಾತೆಯ ಭೌತಿಕ ಹೇಳಿಕೆಯನ್ನು ಸಹ ಸ್ವೀಕರಿಸುತ್ತಾರೆ.
  • ಅಟಲ್‌ ಪಿಂಚಣಿ ಯೋಜನೆಯ ಭೌತಿಕ ಹೇಳಿಕೆಯನ್ನು ವಾರ್ಷಿಕವಾಗಿ ಚಂದಾದಾರರಿಗೆ ಒದಗಿಸಲಾಗುತ್ತದೆ.
  • ನಿವಾಸ / ಸ್ಥಳ ಬದಲಾವಣೆಯ ಸಂದರ್ಭದಲ್ಲಿಯೂ ಸಹ ಕೊಡುಗೆಯನ್ನು ಸ್ವಯಂ ಡೆಬಿಟ್ ಮೂಲಕ ಅಡೆತಡೆಯಿಲ್ಲದೆ ರವಾನಿಸಬಹುದು.
  • ಈ ಯೋಜನೆ ಭಾರತೀಯ ನಾಗರಿಕರಿಗೆ ಮಾತ್ರ ತೆರೆದಿರುತ್ತದೆ.
  • ಚಂದಾದಾರರು ವರ್ಷಕ್ಕೊಮ್ಮೆ ಏಪ್ರಿಲ್ ತಿಂಗಳಲ್ಲಿ ಆಟೋ ಡೆಬಿಟ್ ಸೌಲಭ್ಯದ ವಿಧಾನವನ್ನು (ಮಾಸಿಕ/ತ್ರೈಮಾಸಿಕ/ಅರ್ಧ ವಾರ್ಷಿಕ) ಬದಲಾಯಿಸಬಹುದು.

ಅಟಲ್‌ ಪಿಂಚಣಿ ಯೋಜನೆಯ ಗುಣಲಕ್ಷಣಗಳು

ಗುಣಲಕ್ಷಣಗಳು ವಿವರಣೆ
ಯೋಜನೆಯ ಹೆಸರು ಅಟಲ್ ಪಿಂಚಣಿ ಯೋಜನೆ (APY)
ಪ್ರಾರಂಭ ದಿನಾಂಕ ಮೇ 9, 2015
ಗುರಿ ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ನಿವೃತ್ತಿ ನಂತರ ಆರ್ಥಿಕ ಭದ್ರತೆ ಒದಗಿಸುವುದು
ಆಡಳಿತ ಸಂಸ್ಥೆ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA)
ಪಿಂಚಣಿ ಮೊತ್ತ ರೂ. 1,000, ರೂ. 2,000, ರೂ. 3,000, ರೂ. 4,000, ಅಥವಾ ರೂ. 5,000 ಪ್ರತಿ ತಿಂಗಳು (60 ವರ್ಷದಿಂದ ಆರಂಭ)
ಸೇರುವ ವಯಸ್ಸು 18 ರಿಂದ 40 ವರ್ಷಗಳು
ಕೊಡುಗೆ ಅವಧಿ ಕನಿಷ್ಠ 20 ವರ್ಷಗಳು (60 ವರ್ಷ ತಲುಪುವವರೆಗೆ)
ಅರ್ಹತೆ ಭಾರತೀಯ ನಾಗರಿಕ, ಉಳಿತಾಯ ಖಾತೆ ಹೊಂದಿರುವವರು, ಆದಾಯ ತೆರಿಗೆದಾರರಲ್ಲದವರು (1 ಅಕ್ಟೋಬರ್ 2022 ರಿಂದ
ಕೊಡುಗೆ ವಿಧಾನ ಮಾಸಿಕ, ತ್ರೈಮಾಸಿಕ, ಅಥವಾ ಅರ್ಧವಾರ್ಷಿಕವಾಗಿ ಆಟೋ-ಡೆಬಿಟ್ ಮೂಲಕ
ಸರ್ಕಾರಿ ಖಾತರಿ ಹೂಡಿಕೆ ಲಾಭ ಕಡಿಮೆಯಾದರೆ ಸರ್ಕಾರವು ಕನಿಷ್ಠ ಪಿಂಚಣಿ ಭರವಸೆ ನೀಡುತ್ತದೆ
ಪೂರ್ವಭಾವಿ ನಿರ್ಗಮನ ಗಂಭೀರ ರೋಗ ಅಥವಾ ಮರಣದ ಸಂದರ್ಭದಲ್ಲಿ ಮಾತ್ರ; ಕೊಡುಗೆ ಮತ್ತು ಬಡ್ಡಿ ಮರಳಿ ನೀಡಲಾಗುತ್ತದೆ.

ಪ್ರಶ್ನೋತ್ತರಗಳು

  1. ಅಟಲ್ ಪಿಂಚಣಿ ಯೋಜನೆ ಎಂದರೇನು?
    ಇದು ಭಾರತ ಸರ್ಕಾರದಿಂದ ಪ್ರಾರಂಭಿಸಲಾದ ಪಿಂಚಣಿ ಯೋಜನೆಯಾಗಿದ್ದು, ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ 60 ವರ್ಷದ ನಂತರ ಸ್ಥಿರ ಆದಾಯ ಒದಗಿಸುವ ಗುರಿಯನ್ನು ಹೊಂದಿದೆ.
  2. ಯಾರು ಈ ಯೋಜನೆಗೆ ಸೇರಬಹುದು?
    18 ರಿಂದ 40 ವರ್ಷ ವಯಸ್ಸಿನ ಭಾರತೀಯ ನಾಗರಿಕರು, ಉಳಿತಾಯ ಖಾತೆ ಹೊಂದಿರುವವರು ಮತ್ತು ಆದಾಯ ತೆರಿಗೆ ಪಾವತಿಸದವರು ಸೇರಬಹುದು.
  3. ಪಿಂಚಣಿ ಮೊತ್ತ ಎಷ್ಟು ಪಡೆಯಬಹುದು?
    ನೀವು ತಿಂಗಳಿಗೆ 1,000 ರೂ. , 2,000 ರೂ. , 3,000 ರೂ. , 4,000 ರೂ. ಅಥವಾ 5,000 ರೂ. ಪಿಂಚಣಿಯನ್ನು ಆಯ್ಕೆ ಮಾಡಬಹುದು, ಇದು 60 ವರ್ಷದಿಂದ ಆರಂಭವಾಗುತ್ತದೆ.
  4. ಮಾಸಿಕ ಕೊಡುಗೆ ಎಷ್ಟು ತುಂಬಬೇಕು?
    ಇದು ನೀವು ಸೇರುವ ವಯಸ್ಸು ಮತ್ತು ಆಯ್ಕೆ ಮಾಡಿದ ಪಿಂಚಣಿ ಮೊತ್ತದ ಮೇಲೆ ಅವಲಂಬಿತವಾಗಿದೆ. ಉದಾಹರಣೆಗೆ, 18 ವರ್ಷದಲ್ಲಿ ರೂ. 1,000 ಪಿಂಚಣಿಗೆ ರೂ. 42, ಆದರೆ 40 ವರ್ಷದಲ್ಲಿ 291 ರೂ. ಆಗಿರಲಿದೆ.
  5. ಕೊಡುಗೆ ಎಷ್ಟು ಕಾಲ ತುಂಬಬೇಕು?
    ಕನಿಷ್ಠ 20 ವರ್ಷಗಳಿಂದ (40 ವರ್ಷದಲ್ಲಿ ಸೇರಿದರೆ) 42 ವರ್ಷಗಳವರೆಗೆ (18 ವರ್ಷದಲ್ಲಿ ಸೇರಿದರೆ), ಅಂದರೆ 60 ವರ್ಷ ತಲುಪುವವರೆಗೆ.
  6. ಹಣವನ್ನು ಹೇಗೆ ಪಾವತಿಸುವುದು?
    ಮಾಸಿಕ, ತ್ರೈಮಾಸಿಕ ಅಥವಾ ಅರ್ಧವಾರ್ಷಿಕವಾಗಿ ಆಟೋ-ಡೆಬಿಟ್ ಮೂಲಕ ನಿಮ್ಮ ಬ್ಯಾಂಕ್ ಖಾತೆಯಿಂದ ಪಾವತಿಸಬಹುದು.
  7. ನಾನು ಮರಣ ಹೊಂದಿದರೆ ಏನಾಗುತ್ತದೆ?
    60 ವರ್ಷದ ಮೊದಲು ಮರಣವಾದರೆ, ಸಂಗಾತಿ ಕೊಡುಗೆ ಮುಂದುವರಿಸಬಹುದು ಅಥವಾ ಮೊತ್ತವನ್ನು ತೆಗೆದುಕೊಳ್ಳಬಹುದು. 60 ರ ನಂತರ ಸಂಗಾತಿಗೆ ಪಿಂಚಣಿ ಮುಂದುವರಿಯುತ್ತದೆ. ಬಳಿಕ ಗೊತ್ತುಪಡಿಸಿದವರಿಗೆ ಮೊತ್ತ (ರೂ. 1.7 ಲಕ್ಷದಿಂದ ರೂ. 8.5 ಲಕ್ಷ) ಸಿಗುತ್ತದೆ.
  8. ತೆರಿಗೆ ಪ್ರಯೋಜನಗಳು ಇವೆಯೇ?
    ಹೌದು, ಸೆಕ್ಷನ್ 80CCD(1) ಅಡಿ ರೂ. 1.5 ಲಕ್ಷ ಮತ್ತು 80CCD(1B) ಅಡಿ ರೂ. 50,000 ತೆರಿಗೆ ವಿನಾಯಿತಿ ಲಭ್ಯವಿದೆ (ತೆರಿಗೆ ವಿಧಾನಕ್ಕೆ ಒಳಪಟ್ಟು).
  9. ಈ ಯೋಜನೆಗೆ ಹೇಗೆ ಸೇರಬೇಕು?
    ನಿಮ್ಮ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಭೇಟಿ ನೀಡಿ, ಅಟಲ್‌ ಪಿಂಚಣಿ ಯೋಜನೆ ಅರ್ಜಿ ಭರ್ತಿ ಮಾಡಿ, ಖಾತೆ ವಿವರಗಳನ್ನು ನೀಡಿ, ಮತ್ತು ಮೊದಲ ಕೊಡುಗೆ ತುಂಬಿ.
  10. ಸರ್ಕಾರದಿಂದ ಯಾವುದೇ ಸಹಾಯವಿದೆಯೇ?
    ಈ ಹಿಂದೆ (2015-16 ರಿಂದ 2019-20) ಸರ್ಕಾರಿ ಸಹ-ಕೊಡುಗೆ ಇತ್ತು (ರೂ. 1,000 ಅಥವಾ 50%), ಆದರೆ ಈಗ ಹೊಸ ಸೇರುವವರಿಗೆ ಇಲ್ಲ. ಆದರೆ ಪಿಂಚಣಿ ಖಾತರಿಗೆ ಸರ್ಕಾರ ಬೆಂಬಲ ನೀಡುತ್ತದೆ.
]]>
Fri, 23 Jan 2026 10:54:04 +0530 shivuagrico
Prothsahadana yojane 2026&SSLC ಪಾಸಾದ ವಿದ್ಯಾರ್ಥಿಗಳಿಗೆ ಸಿಗಲಿದೆ 50,000 ರೂ.ವರೆಗೆ ಸಹಾಯಧನ! https://krushirushi.in/Prothsahadana-yojane-2026 https://krushirushi.in/Prothsahadana-yojane-2026 Prothsahadana yojane 2026-ಪ್ರೋತ್ಸಾಹ ಧನ ಯೋಜನೆ, ಪಾಸಾದ ವಿದ್ಯಾರ್ಥಿಗಳಿಗೆ ಸಿಗಲಿದೆ 50,000 ರೂ.ವರೆಗೆ ಸಹಾಯಧನ!

ಪರಿಶಿಷ್ಟ ಪಂಗಡದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರವು ಒಂದು ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಅದೇ ಪ್ರೋತ್ಸಾಹ ಧನ ಯೋಜನೆ ಅಥವಾ 'ಪ್ರೈಸ್ ಮನಿ ಸ್ಕಾಲರ್‌ಶಿಪ್'. ಶಿಕ್ಷಣದ ವಿವಿಧ ಹಂತಗಳಲ್ಲಿ ಪ್ರಥಮ ಪ್ರಯತ್ನದಲ್ಲೇ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಆರ್ಥಿಕ ನೆರವು ನೀಡಲಾಗುತ್ತದೆ. ಹಣದ ಕೊರತೆಯಿಂದಾಗಿ ಯಾವುದೇ ವಿದ್ಯಾರ್ಥಿ ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಯೋಜನೆಯಡಿ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಏನಿದು ಪ್ರೋತ್ಸಾಹ ಧನ ಯೋಜನೆ?

ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ 'ಪ್ರೋತ್ಸಾಹ ಧನ ಯೋಜನೆ' ಯೋಜನೆಯು, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದತ್ತ ಪ್ರೇರೇಪಿಸುವ ಒಂದು ಮಹತ್ವದ ಕಾರ್ಯಕ್ರಮವಾಗಿದೆ. ಈ ಯೋಜನೆಯಡಿ SSLC, PUC, ಪದವಿ, ಸ್ನಾತಕೋತ್ತರ ಪದವಿ ಹಾಗೂ ವೃತ್ತಿಪರ ಕೋರ್ಸ್‌ಗಳನ್ನು ಪ್ರಥಮ ಪ್ರಯತ್ನದಲ್ಲೇ ಪ್ರಥಮ ದರ್ಜೆಯಲ್ಲಿ (60% ಕ್ಕಿಂತ ಹೆಚ್ಚು ಅಂಕ) ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಹಂತಕ್ಕೆ ಅನುಗುಣವಾಗಿ 7,500 ರೂಪಾಯಿಗಳಿಂದ ಗರಿಷ್ಠ 50,000 ರೂಪಾಯಿಗಳವರೆಗೆ ಏಕಕಾಲದ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತಿದ್ದು, ಪ್ರತಿಭೆಯನ್ನು ಗೌರವಿಸಿ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ಬೆಂಬಲ ನೀಡುವುದು ಈ ಯೋಜನೆಯ ಮುಖ್ಯ ಆಶಯವಾಗಿದೆ.

ಯೋಜನೆಯ ಪ್ರಮುಖ ಅಂಶಗಳು

  • ನೇರ ನಗದು ವರ್ಗಾವಣೆ: ಈ ಯೋಜನೆಯಡಿ ಸಿಗುವ ಪ್ರೋತ್ಸಾಹಧನವು ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ, ಪಾರದರ್ಶಕವಾಗಿ ನೇರವಾಗಿ ಅರ್ಹ ವಿದ್ಯಾರ್ಥಿಯ ಆಧಾರ್ ಸಂಯೋಜಿತ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.
  • ಅಂಕಗಳ ಆಧಾರಿತ ನೆರವು: ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಹಂತದಲ್ಲಿ (SSLC ಯಿಂದ ಸ್ನಾತಕೋತ್ತರ ಪದವಿಯವರೆಗೆ) ಗಳಿಸಿದ ಶೈಕ್ಷಣಿಕ ಸಾಧನೆ ಮತ್ತು ಅಂಕಗಳ ಶೇಕಡಾವಾರು ಪ್ರಮಾಣವನ್ನು ಆಧರಿಸಿ ಆರ್ಥಿಕ ಸಹಾಯದ ಮೊತ್ತವನ್ನು ನಿಗದಿಪಡಿಸಲಾಗಿದೆ.
  • ಶೈಕ್ಷಣಿಕ ಪ್ರೋತ್ಸಾಹ: ಪ್ರತಿಭಾವಂತ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಗೌರವಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವುದು ಮತ್ತು ಹಣಕಾಸಿನ ಅಡಚಣೆಯಿಲ್ಲದೆ ಉನ್ನತ ವ್ಯಾಸಂಗವನ್ನು ಮುಂದುವರಿಸಲು ಅವರಿಗೆ ಬೆಂಬಲ ನೀಡುವುದು ಈ ಯೋಜನೆಯ ಆಶಯವಾಗಿದೆ.
  • ಪ್ರಥಮ ಪ್ರಯತ್ನದ ಸಾಧನೆ: ಅಭ್ಯರ್ಥಿಗಳು ತಮ್ಮ ಪರೀಕ್ಷೆಗಳನ್ನು ಮೊದಲ ಪ್ರಯತ್ನದಲ್ಲೇ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದುವುದನ್ನು ಇದು ಕಡ್ಡಾಯಗೊಳಿಸುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತದೆ.

ಯಾವ ಕೋರ್ಸ್‌ಗೆ ಎಷ್ಟು ಪ್ರೋತ್ಸಾಹಧನ ಸಿಗಲಿದೆ?

  • ಹತ್ತನೇ ತರಗತಿಯಲ್ಲಿ ಶೇ. 60 ರಿಂದ ಶೇ. 75 ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 7,500 ರೂಪಾಯಿ ಹಾಗೂ ಶೇ. 75 ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ 15,000 ರೂಪಾಯಿ ನೀಡಲಾಗುತ್ತದೆ.
  • ದ್ವಿತೀಯ ಪಿಯುಸಿ ಅಥವಾ ಡಿಪ್ಲೋಮಾ ಕೋರ್ಸ್‌ಗಳನ್ನು ಪ್ರಥಮ ಪ್ರಯತ್ನದಲ್ಲೇ ಪ್ರಥಮ ದರ್ಜೆಯಲ್ಲಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ 20,000 ರೂಪಾಯಿ ಧನಸಹಾಯ ಸಿಗಲಿದೆ.
  • ಬಿ.ಎ, ಬಿ.ಎಸ್ಸಿ, ಬಿ.ಕಾಂ ನಂತಹ ಯಾವುದೇ ಸಾಮಾನ್ಯ ಪದವಿಗಳನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಿಗೆ ಸರ್ಕಾರದಿಂದ 25,000 ರೂಪಾಯಿ ಪ್ರೋತ್ಸಾಹಧನ ದೊರೆಯುತ್ತದೆ.
  • ಎಂ.ಎ, ಎಂ.ಎಸ್ಸಿ ಅಥವಾ ಎಂ.ಕಾಂ ನಂತಹ ಸ್ನಾತಕೋತ್ತರ ಪದವಿಗಳನ್ನು ಯಶಸ್ವಿಯಾಗಿ ಮುಗಿಸಿದ ಅಭ್ಯರ್ಥಿಗಳಿಗೆ 30,000 ರೂಪಾಯಿ ನೀಡಲಾಗುತ್ತದೆ.
  • ಎಂಜಿನಿಯರಿಂಗ್, ವೈದ್ಯಕೀಯ, ಕೃಷಿ ವಿಜ್ಞಾನ ಅಥವಾ ಪಶು ವೈದ್ಯಕೀಯದಂತಹ ಉನ್ನತ ವೃತ್ತಿಪರ ಪದವಿಗಳನ್ನು ಪೂರ್ಣಗೊಳಿಸಿದವರಿಗೆ 35,000 ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ.
  • ಸ್ನಾತಕೋತ್ತರ ಪದವಿಯಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ 1 ರಿಂದ 5ನೇ ರ್ಯಾಂಕ್ ಪಡೆದ ಸಾಧಕರಿಗೆ ವಿಶೇಷವಾಗಿ 50,000 ರೂಪಾಯಿ ಭಾರಿ ಮೊತ್ತದ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು

  • ಅಭ್ಯರ್ಥಿಯು ಕಡ್ಡಾಯವಾಗಿ ಕರ್ನಾಟಕದವರಾಗಿರಬೇಕು ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರಬೇಕು.
  • ಅಭ್ಯರ್ಥಿಯು ಕೋರ್ಸ್ ಅನ್ನು ಪ್ರಥಮ ಪ್ರಯತ್ನದಲ್ಲೇ ಪೂರ್ಣಗೊಳಿಸಿರಬೇಕು.
  • ಕನಿಷ್ಠ ಶೇ. 60 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.
  • ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಸೀಡಿಂಗ್ ಆಗಿರಬೇಕು.
  • ಏಪ್ರಿಲ್-2025ರ SSLC ಪರೀಕ್ಷೆಯಲ್ಲಿ ಶೇ. 60 ಕ್ಕೂ ಹೆಚ್ಚು ಅಂಕ ಪಡೆದು ಆಧಾರ್ ಸೀಡ್ ಆಗಿರುವ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳ ಪಟ್ಟಿ ಈಗಾಗಲೇ ಸಿದ್ಧವಿರುತ್ತದೆ, ಅಂತಹ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು

  • ಅಭ್ಯರ್ಥಿಯು ಕಡ್ಡಾಯವಾಗಿ ಕರ್ನಾಟಕದವರಾಗಿರಬೇಕು ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರಬೇಕು.
  • ಅಭ್ಯರ್ಥಿಯು ಕೋರ್ಸ್ ಅನ್ನು ಪ್ರಥಮ ಪ್ರಯತ್ನದಲ್ಲೇ ಪೂರ್ಣಗೊಳಿಸಿರಬೇಕು.
  • ಕನಿಷ್ಠ ಶೇ. 60 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.
  • ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಸೀಡಿಂಗ್ ಆಗಿರಬೇಕು.
  • ಏಪ್ರಿಲ್-2025ರ SSLC ಪರೀಕ್ಷೆಯಲ್ಲಿ ಶೇ. 60 ಕ್ಕೂ ಹೆಚ್ಚು ಅಂಕ ಪಡೆದು ಆಧಾರ್ ಸೀಡ್ ಆಗಿರುವ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳ ಪಟ್ಟಿ ಈಗಾಗಲೇ ಸಿದ್ಧವಿರುತ್ತದೆ, ಅಂತಹ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು

  • ಅಭ್ಯರ್ಥಿಯು ಕಡ್ಡಾಯವಾಗಿ ಕರ್ನಾಟಕದವರಾಗಿರಬೇಕು ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರಬೇಕು.
  • ಅಭ್ಯರ್ಥಿಯು ಕೋರ್ಸ್ ಅನ್ನು ಪ್ರಥಮ ಪ್ರಯತ್ನದಲ್ಲೇ ಪೂರ್ಣಗೊಳಿಸಿರಬೇಕು.
  • ಕನಿಷ್ಠ ಶೇ. 60 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.
  • ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಸೀಡಿಂಗ್ ಆಗಿರಬೇಕು.
  • ಏಪ್ರಿಲ್-2025ರ SSLC ಪರೀಕ್ಷೆಯಲ್ಲಿ ಶೇ. 60 ಕ್ಕೂ ಹೆಚ್ಚು ಅಂಕ ಪಡೆದು ಆಧಾರ್ ಸೀಡ್ ಆಗಿರುವ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳ ಪಟ್ಟಿ ಈಗಾಗಲೇ ಸಿದ್ಧವಿರುತ್ತದೆ, ಅಂತಹ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

  • ಅಂಕಪಟ್ಟಿ
  • ಉತ್ತೀರ್ಣ ಪ್ರಮಾಣಪತ್ರ
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್‌ಬುಕ್ ಪ್ರತಿ.
  • ವಿದ್ಯಾರ್ಥಿಯ ಇತ್ತೀಚಿನ ಫೋಟೋ

ಅರ್ಜಿ ಸಲ್ಲಿಕೆ ಹೇಗೆ?

  • ಮೊದಲು ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್ swdservices.karnataka.gov.in/ ಗೆ ಭೇಟಿ ನೀಡಬೇಕು.
  • ವೆಬ್‌ಸೈಟ್‌ನಲ್ಲಿ ನೀಡಲಾದ 'Prize Money Scholarship' ಲಿಂಕ್ swdservices.karnataka.gov.in/PrizeMoneyClientApp/ ಮೇಲೆ ಕ್ಲಿಕ್ ಮಾಡಿ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ವೈಯಕ್ತಿಕ ವಿವರಗಳನ್ನು ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು.
  • ನಿಮ್ಮ ಶೈಕ್ಷಣಿಕ ವಿವರಗಳಾದ ಎಸ್.ಎಸ್.ಎಲ್.ಸಿ ನೋಂದಣಿ ಸಂಖ್ಯೆ, ಉತ್ತೀರ್ಣರಾದ ವರ್ಷ, ಪಡೆದ ಅಂಕಗಳು ಮತ್ತು ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಮಾಹಿತಿಯನ್ನು ನಿಖರವಾಗಿ ಭರ್ತಿ ಮಾಡಬೇಕು.
  • ಕೇಳಲಾದ ಅಗತ್ಯ ದಾಖಲೆಗಳಾದ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ ಹಾಗೂ ಬ್ಯಾಂಕ್ ಪಾಸ್‌ಬುಕ್‌ನ ಸ್ಕ್ಯಾನ್ ಪ್ರತಿಗಳನ್ನು ಸರಿಯಾದ ಗಾತ್ರದಲ್ಲಿ ಅಪ್‌ಲೋಡ್ ಮಾಡಬೇಕು.
  • ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಪರೀಕ್ಷಿಸಿದ ನಂತರ, ಅರ್ಜಿಯನ್ನು ಸಬ್‌ಮಿಟ್ ಮಾಡಿ. ಅರ್ಜಿ ಸಲ್ಲಿಕೆಯಾದ ನಂತರ ಸಿಗುವ 'ಅಕ್ನಾಲೆಜ್‌ಮೆಂಟ್' ಪ್ರತಿಯನ್ನು ಪ್ರಿಂಟ್ ತೆಗೆದಿಟ್ಟುಕೊಳ್ಳಿ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಂದು?

ಪರಿಶಿಷ್ಟ ಪಂಗಡದ ಅರ್ಹ ವಿದ್ಯಾರ್ಥಿಗಳು ಪ್ರೈಸ್ ಮನಿ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು 2026ರ ಜನವರಿ 31 ಕೊನೆಯ ದಿನಾಂಕವಾಗಿದೆ. ವಿದ್ಯಾರ್ಥಿಗಳು ನಿಗದಿತ ಸಮಯದೊಳಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಪೂರ್ಣಗೊಳಿಸಬೇಕೆಂದು ಸೂಚಿಸಲಾಗಿದೆ. ಕೊನೆಯ ಕ್ಷಣದ ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು ಅಭ್ಯರ್ಥಿಗಳು ಅಂತಿಮ ದಿನಾಂಕಕ್ಕಿಂತ ಮೊದಲೇ ತಮ್ಮ ಅಂಕಪಟ್ಟಿ, ಆಧಾರ್ ಮತ್ತು ಬ್ಯಾಂಕ್ ವಿವರಗಳೊಂದಿಗೆ ನೋಂದಣಿ ಮಾಡಿಕೊಳ್ಳುವುದು ಸೂಕ್ತ.

ಪ್ರಶ್ನೋತ್ತರಗಳು

  1. ಖಾಸಗಿ ಕಾಲೇಜಿನಲ್ಲಿ ಓದಿದವರಿಗೆ ಈ ಸೌಲಭ್ಯ ಸಿಗುತ್ತದೆಯೇ?

ಹೌದು, ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಖಾಸಗಿ ವಿಶ್ವವಿದ್ಯಾಲಯ ಅಥವಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

  1. ಹಣ ಜಮೆಯಾಗದಿದ್ದರೆ ಯಾರನ್ನು ಸಂಪರ್ಕಿಸಬೇಕು?

    ಅರ್ಜಿ ಸಲ್ಲಿಸಿದ ನಂತರವೂ ಹಣ ಬರದಿದ್ದರೆ, ನಿಮ್ಮ ಹತ್ತಿರದ ತಾಲ್ಲೂಕು ಅಥವಾ ಜಿಲ್ಲಾ ಮಟ್ಟದ ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ದಾಖಲೆಗಳನ್ನು ಪರಿಶೀಲಿಸಿಕೊಳ್ಳಿ.
  2. ದೂರಶಿಕ್ಷಣ ಪಡೆದವರಿಗೆ ಇದು ಅನ್ವಯಿಸುತ್ತದೆಯೇ?

    ಸಾಮಾನ್ಯವಾಗಿ ರೆಗ್ಯುಲರ್ ವಿದ್ಯಾರ್ಥಿಗಳಿಗೆ ಆದ್ಯತೆ ಇರುತ್ತದೆ. ಆದರೂ ಮಾನ್ಯತೆ ಪಡೆದ ವಿವಿಗಳಿಂದ ಪದವಿ ಪಡೆದವರು ಇಲಾಖೆಯ ನಿಯಮಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಬಹುದು.
]]>
Fri, 23 Jan 2026 07:10:29 +0530 shivuagrico
Deepika scholarship&ದೀಪಿಕಾ ವಿದ್ಯಾರ್ಥಿವೇತನಯೋಜನೆಯಡಿ 30,000 ರೂಪಾಯಿ ವಿದ್ಯಾರ್ಥಿವೇತನ https://krushirushi.in/Deepika-scholarship-2026 https://krushirushi.in/Deepika-scholarship-2026 Deepika scholarship-ದೀಪಿಕಾ ವಿದ್ಯಾರ್ಥಿವೇತನಯೋಜನೆಯಡಿ 30,000 ರೂಪಾಯಿ ವಿದ್ಯಾರ್ಥಿವೇತನ

ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಆರ್ಥಿಕ ಪ್ರೋತ್ಸಾಹ ನೀಡಿ ಬೆಂಬಲಿಸುವ ಉದ್ದೇಶದಿಂದ ದೀಪಿಕಾ ವಿದ್ಯಾರ್ಥಿವೇತನ ಯೋಜನೆ ಜಾರಿಯಾಗಿದೆ. ಕರ್ನಾಟಕ ಸರ್ಕಾರ ಮತ್ತು ಅಜೀಂ ಪ್ರೇಮ್‌ಜೀ ಫೌಂಡೇಶನ್ ಜಂಟಿಯಾಗಿ ಹಮ್ಮಿಕೊಂಡಿರುವ 'ದೀಪಿಕಾ ವಿದ್ಯಾರ್ಥಿವೇತನ' ಯೋಜನೆಗೆ ರಾಜ್ಯಾದ್ಯಂತ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಇದೀಗ ವಿದ್ಯಾರ್ಥಿಗಳಿಂದ ಎರಡನೇ ಹಂತದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸೆಪ್ಟೆಂಬರ್ 2025 ರಲ್ಲಿ ಆರಂಭವಾದ ಈ ಯೋಜನೆಯಡಿ ಈಗಾಗಲೇ ಹಲವಾರು ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ. ರಾಜ್ಯದ ಹೆಣ್ಣುಮಕ್ಕಳ ಉನ್ನತ ಶಿಕ್ಷಣದ ಹಾದಿಯನ್ನು ಸುಗಮಗೊಳಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಏನಿದು ದೀಪಿಕಾ ವಿದ್ಯಾರ್ಥಿವೇತನ ಯೋಜನೆ? ಅರ್ಜಿ ಸಲ್ಲಿಸುವುದು ಹೇಗೆ? ಏನೆಲ್ಲಾ ಪ್ರಯೋಜನಗಳು ಲಭ್ಯ ಇತ್ಯಾದಿ ಮಾಹಿತಿಗಳು ಇಲ್ಲಿವೆ.

ಏನಿದು ದೀಪಿಕಾ ವಿದ್ಯಾರ್ಥಿವೇತನ ಯೋಜನೆ?

ಕರ್ನಾಟಕ ಸರ್ಕಾರ ಮತ್ತು ಅಜೀಂ ಪ್ರೇಮ್‌ಜೀ ಫೌಂಡೇಶನ್ ಸಹಯೋಗದಲ್ಲಿ ಆರಂಭಿಸಲಾದ 'ದೀಪಿಕಾ ವಿದ್ಯಾರ್ಥಿವೇತನ' ಯೋಜನೆಯು ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ 10ನೇ ತರಗತಿ ಹಾಗೂ ಪಿಯುಸಿ ಪೂರೈಸಿ, ಪ್ರಸ್ತುತ ಪದವಿ ಅಥವಾ ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ವಾರ್ಷಿಕ 30,000 ರೂ. ಆರ್ಥಿಕ ನೆರವು ನೀಡುತ್ತದೆ. ಹೆಣ್ಣುಮಕ್ಕಳ ಉನ್ನತ ಶಿಕ್ಷಣವನ್ನು ಉತ್ತೇಜಿಸುವ ಮತ್ತು ಆರ್ಥಿಕ ಅಡೆತಡೆಗಳನ್ನು ನಿವಾರಿಸುವ ಉದ್ದೇಶ ಹೊಂದಿರುವ ಈ ಯೋಜನೆಯಡಿ, ವಿದ್ಯಾರ್ಥಿನಿಯರು ತಮ್ಮ ಇಡೀ ಕೋರ್ಸ್ ಅವಧಿಯವರೆಗೆ ಈ ಸೌಲಭ್ಯವನ್ನು ಪಡೆಯಬಹುದು. ಆದರೆ ವ್ಯಾಸಂಗದ ಅವಧಿಯಲ್ಲಿ ಯಾವುದೇ ವಿಷಯಗಳಲ್ಲಿ ಅನುತ್ತೀರ್ಣರಾಗದೆ ಯಶಸ್ವಿಯಾಗಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ.

ದೀಪಿಕಾ ವಿದ್ಯಾರ್ಥಿವೇತನದ ಉದ್ದೇಶಗಳೇನು?

ಅಜೀಂ ಪ್ರೇಮ್‌ಜೀ ವಿದ್ಯಾರ್ಥಿವೇತನದ ಮುಖ್ಯ ಉದ್ದೇಶವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿನಿಯರು ತಮ್ಮ ಕಾಲೇಜು ಶಿಕ್ಷಣವನ್ನು ಮುಂದುವರಿಸಲು ಬೆಂಬಲ ನೀಡುವುದಾಗಿದೆ. ಭಾರತದಲ್ಲಿ ಶಿಕ್ಷಣದ ಗುಣಮಟ್ಟ ಮತ್ತು ಸಮಾನತೆಯನ್ನು ಸುಧಾರಿಸುವಲ್ಲಿ ಅಜೀಂ ಪ್ರೇಮ್‌ಜೀ ಫೌಂಡೇಶನ್ ಹೊಂದಿರುವ ಬದ್ಧತೆಯ ಭಾಗವಾಗಿ ಈ ಮಹತ್ವದ ಉಪಕ್ರಮವನ್ನು ಕೈಗೊಳ್ಳಲಾಗಿದೆ.

ಯೋಜನೆಯ ಪ್ರಮುಖ ವೈಶಿಷ್ಟ್ಯಗಳು

  • ಈ ಯೋಜನೆಯಡಿ ಆಯ್ಕೆಯಾದ ಅರ್ಹ ವಿದ್ಯಾರ್ಥಿನಿಯರಿಗೆ ವಾರ್ಷಿಕವಾಗಿ 30,000 ರೂ. ಶಿಷ್ಯವೇತನವನ್ನು ನೀಡಲಾಗುತ್ತದೆ.
  • ಈ ಧನಸಹಾಯವು ವಿದ್ಯಾರ್ಥಿನಿಯು ಆಯ್ದುಕೊಂಡ ಇಡೀ ಕೋರ್ಸ್ ಅವಧಿಯವರೆಗೆ ಮುಂದುವರಿಯುತ್ತದೆ.
  • ನಾಲ್ಕು ವರ್ಷಗಳ ಪದವಿ ಕೋರ್ಸ್‌ (ಉದಾಹರಣೆಗೆ ಎಂಜಿನಿಯರಿಂಗ್) ಓದುತ್ತಿರುವ ವಿದ್ಯಾರ್ಥಿನಿಯರು ಒಟ್ಟು 1,20,000 ರೂ. ಸಹಾಯಧನ ಪಡೆಯುತ್ತಾರೆ.
  • ಮೂರು ವರ್ಷಗಳ ಸಾಮಾನ್ಯ ಪದವಿ ಕೋರ್ಸ್‌ಗಳನ್ನು ವ್ಯಾಸಂಗ ಮಾಡುತ್ತಿರುವವರು ಒಟ್ಟು 90,000 ರೂ. ಪ್ರೋತ್ಸಾಹಧನವನ್ನು ಪಡೆಯಲಿದ್ದಾರೆ.
  • ಇನ್ನು ಎರಡು ವರ್ಷಗಳ ಡಿಪ್ಲೊಮಾ ಕೋರ್ಸ್‌ಗಳನ್ನು ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಒಟ್ಟು 60,000 ರೂ. ಆರ್ಥಿಕ ನೆರವು ದೊರೆಯಲಿದೆ.

ಅರ್ಹತಾ ಮಾನದಂಡಗಳೇನು?

  • ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಕೇವಲ ಹೆಣ್ಣುಮಕ್ಕಳಿಗೆ ಮಾತ್ರ ಅವಕಾಶವಿದ್ದು, ಮಹಿಳಾ ಸಬಲೀಕರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.
  • ಅರ್ಜಿದಾರರು ತಮ್ಮ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಎರಡನ್ನೂ ಕಡ್ಡಾಯವಾಗಿ ಕರ್ನಾಟಕದ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಕಾಲೇಜುಗಳಲ್ಲಿಯೇ ಪೂರೈಸಿರಬೇಕು.
  • ಅಭ್ಯರ್ಥಿಗಳು 2025-26ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ವರ್ಷದ ಸಾಮಾನ್ಯ ಪದವಿ, ವೃತ್ತಿಪರ ಪದವಿ ಅಥವಾ ಕನಿಷ್ಠ 3 ವರ್ಷಗಳ ಡಿಪ್ಲೊಮಾ ಕೋರ್ಸ್‌ಗೆ ದಾಖಲಾಗಿರಬೇಕು.
  • ವಿದ್ಯಾರ್ಥಿನಿಯರು ತಮ್ಮ ಉನ್ನತ ಶಿಕ್ಷಣದ ಪ್ರತಿ ಸೆಮಿಸ್ಟರ್ ಅಥವಾ ವಾರ್ಷಿಕ ಪರೀಕ್ಷೆಗಳಲ್ಲಿ ಯಾವುದೇ ವಿಷಯವನ್ನು ಬಾಕಿ ಉಳಿಸಿಕೊಳ್ಳದೆ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ.
  • ಒಂದು ವೇಳೆ ವಿದ್ಯಾರ್ಥಿನಿಯು ಯಾವುದಾದರೂ ವಿಷಯದಲ್ಲಿ ಅನುತ್ತೀರ್ಣರಾದರೆ ಅಥವಾ ಬ್ಯಾಕ್‌ಲಾಗ್ ಹೊಂದಿದ್ದರೆ, ಅಂತಹವರಿಗೆ ಮುಂದಿನ ಹಂತದ ವಿದ್ಯಾರ್ಥಿವೇತನವನ್ನು ತಕ್ಷಣವೇ ಸ್ಥಗಿತಗೊಳಿಸಲಾಗುತ್ತದೆ.

ಎರಡನೇ ಹಂತದ ಅರ್ಜಿ ಸಲ್ಲಿಕೆ ಆರಂಭ

ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾದ ಮಂಜುಶ್ರೀ ಎನ್. ಅವರ ಪ್ರಕಾರ, ಮೊದಲ ಹಂತದ ಅರ್ಜಿ ಸಲ್ಲಿಕೆಯು ಇತ್ತೀಚೆಗೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಜನವರಿ 1, 2026 ರಿಂದ ಎರಡನೇ ಹಂತದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜನವರಿ 31ರವರೆಗೆ ಕಾಲಾವಕಾಶ ನೀಡಲಾಗಿದೆ. ಮುಖ್ಯವಾಗಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ ಈ ಎರಡನೇ ಹಂತವನ್ನು ತೆರೆಯಲಾಗಿದೆ. ಸುಮಾರು 37,000 ವಿದ್ಯಾರ್ಥಿನಿಯರನ್ನು ಗುರಿಯಾಗಿಟ್ಟುಕೊಂಡು ಈ ಯೋಜನೆ ಆರಂಭಿಸಲಾಗಿತ್ತು. ಆದರೆ, ಒಂದು ವೇಳೆ ಅರ್ಹ ಅಭ್ಯರ್ಥಿಗಳ ಸಂಖ್ಯೆ 40,000 ದಾಟಿದರೂ ಸರ್ಕಾರವೇ ಅವರ ಶಿಕ್ಷಣದ ವೆಚ್ಚವನ್ನು ಭರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.

ಅರ್ಜಿ ಸಲ್ಲಿಸುವುದು ಹೇಗೆ?

  • ಅರ್ಜಿ ಸಲ್ಲಿಸಲು ಅಜೀಂ ಪ್ರೇಮ್‌ಜೀ ಫೌಂಡೇಶನ್‌ನ ಅಧಿಕೃತ ವೆಬ್‌ಸೈಟ್ azimpremjifoundation.org/what-we-do/education/azim-premji-scholarship/ ಗೆ ಭೇಟಿ ನೀಡಬೇಕು.
  • ಮೊದಲು ನಿಮ್ಮ ಹೆಸರನ್ನು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಅಥವಾ ಈಗಾಗಲೇ ಖಾತೆ ಹೊಂದಿದ್ದರೆ ಲಾಗಿನ್ ವಿವರಗಳನ್ನು ಬಳಸಿ ಪ್ರವೇಶಿಸಬೇಕು.
  • ನಿಮ್ಮ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ವಿವರಗಳು ಮತ್ತು ಬ್ಯಾಂಕ್ ಖಾತೆಯ ಮಾಹಿತಿಯನ್ನು ಅರ್ಜಿಯಲ್ಲಿ ನಿಖರವಾಗಿ ನಮೂದಿಸಬೇಕು.
  • ಆಧಾರ್ ಕಾರ್ಡ್, ಅಂಕಪಟ್ಟಿಗಳು, ಕಾಲೇಜಿನ ಬೋನಫೈಡ್ ಪ್ರಮಾಣಪತ್ರ ಮತ್ತು ಬ್ಯಾಂಕ್ ಪಾಸ್‌ಬುಕ್‌ನ ಸ್ಪಷ್ಟವಾದ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಬೇಕು.
  • ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ, ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಅರ್ಜಿಯನ್ನು ಅಂತಿಮವಾಗಿ ಸಲ್ಲಿಕೆ ಮಾಡಬೇಕು.

ನೋಂದಣಿ ಆಗುವುದು ಹೇಗೆ?

  • ಮೊದಲು ಅಜೀಂ ಪ್ರೇಮ್‌ಜೀ ಫೌಂಡೇಶನ್‌ನ ಅಧಿಕೃತ ಪೋರ್ಟಲ್ ಅಥವಾ ಕರ್ನಾಟಕ ಕಾಲೇಜು ಶಿಕ್ಷಣ ಇಲಾಖೆಯ ವೆಬ್‌ಸೈಟ್‌ azimpremjifoundation.org/ ಗೆ ಭೇಟಿ ನೀಡಬೇಕು.
  • ವೆಬ್‌ಸೈಟ್‌ನಲ್ಲಿರುವ 'Register' ಅಥವಾ 'Apply Now' ಬಟನ್ ಮೇಲೆ ಕ್ಲಿಕ್ ಮಾಡಿ, ನಿಮ್ಮ ಹೆಸರು, ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿ ಹೊಸ ಖಾತೆಯನ್ನು ತೆರೆಯಬೇಕು.
  • ನೋಂದಣಿ ಯಶಸ್ವಿಯಾದ ನಂತರ ನಿಮ್ಮ ಮೊಬೈಲ್‌ಗೆ ಬರುವ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಪೋರ್ಟಲ್‌ಗೆ ಲಾಗಿನ್ ಆಗಬೇಕು.
  • ಲಾಗಿನ್ ಆದ ನಂತರ ತೆರೆಯುವ ಫಾರ್ಮ್‌ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ, ಆಧಾರ್ ವಿವರಗಳು ಮತ್ತು ಪೋಷಕರ ಮಾಹಿತಿಯನ್ನು ಭರ್ತಿ ಮಾಡಬೇಕು.
  • ನಿಮ್ಮ 10ನೇ ತರಗತಿ (SSLC) ಮತ್ತು ಪಿಯುಸಿ ಅಂಕಗಳು ಹಾಗೂ ಪ್ರಸ್ತುತ ದಾಖಲಾಗಿರುವ ಕಾಲೇಜಿನ ವಿವರಗಳನ್ನು ಸರಿಯಾಗಿ ನಮೂದಿಸಬೇಕು.
  • ವಿದ್ಯಾರ್ಥಿವೇತನದ ಹಣ ನೇರವಾಗಿ ಜಮೆಯಾಗಲು ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ (IFSC) ಕೋಡ್ ಅನ್ನು ನಿಖರವಾಗಿ ನೀಡಬೇಕು.
  • ಕೇಳಲಾದ ಎಲ್ಲಾ ಅಗತ್ಯ ದಾಖಲೆಗಳ (ಅಂಕಪಟ್ಟಿ, ಆಧಾರ್, ಫೋಟೋ) ಸ್ಕ್ಯಾನ್ ಪ್ರತಿಗಳನ್ನು ನಿಗದಿತ ಗಾತ್ರದಲ್ಲಿ ಅಪ್‌ಲೋಡ್ ಮಾಡಬೇಕು.
  • ಕೊನೆಯಲ್ಲಿ ಎಲ್ಲಾ ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿ 'Submit' ಬಟನ್ ಒತ್ತಬೇಕು ಮತ್ತು ಮುಂದಿನ ಉಲ್ಲೇಖಕ್ಕಾಗಿ ಅರ್ಜಿಯ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

ದೀಪಿಕಾ ವಿದ್ಯಾರ್ಥಿವೇತನ ಯೋಜನೆ ಜಾಲತಾಣ

ಕರ್ನಾಟಕ ಸರ್ಕಾರ ಮತ್ತು ಅಜೀಂ ಪ್ರೇಮ್‌ಜೀ ಫೌಂಡೇಶನ್ ಸೆಪ್ಟೆಂಬರ್ 2025 ರಲ್ಲಿ ಜಂಟಿಯಾಗಿ ಆರಂಭಿಸಿದ 'ದೀಪಿಕಾ ವಿದ್ಯಾರ್ಥಿವೇತನ' ಯೋಜನೆಗೆ ಇದೀಗ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಂದ ಒಂದು ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. 2025ರ ಸಾಲಿನ ದೀಪಿಕಾ ವಿದ್ಯಾರ್ಥಿವೇತನದ ಎರಡನೇ ಹಂತದ ನೋಂದಣಿ ಪ್ರಕ್ರಿಯೆಯು ಈಗ ಆರಂಭವಾಗಿದೆ. ಇದರೊಂದಿಗೆ 2024ರ ಸಾಲಿನ ವಿದ್ಯಾರ್ಥಿವೇತನ ನವೀಕರಣದ ಕೊನೆಯ ದಿನಾಂಕವನ್ನು ಜನವರಿ 31, 2026ರವರೆಗೆ ವಿಸ್ತರಿಸಲಾಗಿದೆ. ಅಂದರೆ, ಜನವರಿ 31, 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.ಅರ್ಹ ವಿದ್ಯಾರ್ಥಿನಿಯರು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಬೆಂಬಲಕ್ಕಾಗಿ ಕೆಲಸದ ದಿನಗಳಲ್ಲಿ (ಸೋಮವಾರದಿಂದ ಶುಕ್ರವಾರ, ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ) 9019960536 ಸಂಖ್ಯೆಗೆ ವಾಟ್ಸಾಪ್ ಮೂಲಕ ಸಂಪರ್ಕಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

  • ಆಧಾರ್ ಕಾರ್ಡ್
  • 10ನೇ ತರಗತಿ ಮತ್ತು ಪಿಯುಸಿ ಅಂಕಪಟ್ಟಿಗಳು.
  • ಕಾಲೇಜಿನ ಪ್ರವೇಶ ಪತ್ರ ಅಥವಾ ಬೋನಫೈಡ್ ಪ್ರಮಾಣಪತ್ರ
  • ಬ್ಯಾಂಕ್ ಪಾಸ್‌ಬುಕ್ ಪ್ರತಿ
  • ಪಾಸ್‌ಪೋರ್ಟ್ ಅಳತೆಯ ಫೋಟೋ ಮತ್ತು ಸಹಿ

 

]]>
Thu, 22 Jan 2026 22:06:25 +0530 shivuagrico
NMNF yojaneಯಡಿ 1,35,733 ರೈತರ ಖಾತೆಗೆ ಎಕರೆಗೆ 2000 ರೂಪಾಯಿ ಜಮಾ https://krushirushi.in/NMNF-Yojane-2026 https://krushirushi.in/NMNF-Yojane-2026 NMNF yojaneಯಡಿ 1,35,733 ರೈತರ ಖಾತೆಗೆ ಎಕರೆಗೆ 2000 ರೂಪಾಯಿ ಜಮಾ


ವಿಕಸಿತ ಭಾರತ 2047'ರ ಗುರಿಯೊಂದಿಗೆ ಸುಸ್ಥಿರ ಮತ್ತು ಹವಾಮಾನ ವೈಪರೀತ್ಯಕ್ಕೆ ಪೂರಕವಾದ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಕರ್ನಾಟಕ ಸರ್ಕಾರವು ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ ಅಡಿಯಲ್ಲಿ ಮಹತ್ವದ ಹೆಜ್ಜೆಗಳನ್ನು ಇರಿಸಿದೆ.

ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟವಾದ 'ಸಂಜೀವಿನಿ-KSRLM' ಮೂಲಕ ನೈಸರ್ಗಿಕ ಕೃಷಿಯನ್ನು ಒಂದು ಜೀವನೋಪಾಯದ ಮಾರ್ಗವನ್ನಾಗಿ ರಾಜ್ಯವು ರೂಪಿಸುತ್ತಿದೆ ಎಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ (Dr Shalini Rajneesh) ಅವರು ತಿಳಿಸಿದರು.

ರಾಷ್ಟ್ರ ಮಟ್ಟದ ಮಹಿಳಾ ಸ್ವಸಹಾಯ ಸಂಘಗಳ ನೈಸರ್ಗಿಕ ಕೃಷಿ ಮತ್ತು ಲಕ್ಪತಿ ದೀದಿಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನೈಸರ್ಗಿಕ ಕೃಷಿಯ ಪ್ರಗತಿಯ ವೇಗ ಆಶದಾಯಕವಾಗಿದ್ದು, ರಾಜ್ಯದ ವಿವಿಧ ಕೃಷಿ ಹವಾಮಾನ ವಲಯಗಳಿಗೆ ಅನುಗುಣವಾಗಿ ನೈಸರ್ಗಿಕ ಕೃಷಿಯನ್ನು ವಿಸ್ತರಿಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 990 ಕ್ಲಸ್ಟರ್ಗಳನ್ನು ಆಯ್ಕೆ ಮಾಡಲಾಗಿದ್ದು, 49,500 ಹೆಕ್ಟೇರ್ ಪ್ರದೇಶದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.

ರೈತರ ಖಾತೆಗೆ ನೇರವಾಗಿ ಜಮೆ:

ನೈಸರ್ಗಿಕ ಕೃಷಿಯಲ್ಲಿ ರಾಜ್ಯದಲ್ಲಿ ರೈತರ ಪಾಲ್ಗೊಳ್ಳುವಿಕೆ ಆಶಾದಾಯಕವಾಗಿದ್ದು ಸರಿಸುಮಾರು 1,35,733 ರೈತರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ರೈತರಿಗೆ ಪ್ರೋತ್ಸಾಹಧನವಾಗಿ ಪ್ರತಿ ಎಕರೆಗೆ 2,000 ರೂ.ಗಳಂತೆ ಒಟ್ಟು 22.90 ಕೋಟಿ ರೂ. ಮೊತ್ತವನ್ನು ಮೊದಲ ಕಂತಿನ ರೂಪದಲ್ಲಿ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ.

ರಾಜ್ಯದಲ್ಲಿ ನೈಸರ್ಗಿಕ ಕೃಷಿ ಮೂಲಸೌಕರ್ಯ ಪರಿಕರಗಳಿಗಾಗಿ 189 ಜೈವಿಕ ಇನ್ಪುಟ್ ಸಂಪನ್ಮೂಲ ಕೇಂದ್ರಗಳನ್ನು (Bio-input Resource Centres) ಸ್ಥಾಪಿಸಲಾಗಿದೆ. ಮಹಿಳೆಯರು ಕೇವಲ ಫಲಾನುಭವಿಗಳಾಗಿ ಉಳಿಯದೆ, ನೈಸರ್ಗಿಕ ಕೃಷಿಯ ಸಂಶೋಧಕರು ಮತ್ತು ತರಬೇತುದಾರರಾಗಿ ಹೊರಹೊಮ್ಮುವ ಮೂಲಕ ಲಕ್ಷ್ಮಿಪುತ್ರಿಯರನ್ನಾಗಿಸುವ (Lakhpati Didis) ಕನಸು ನನಸಾಗುವತ್ತ ಹೆಜ್ಜೆ ಇಡುತ್ತಿದ್ದಾರೆ.

ನೈಸರ್ಗಿಕ ಕೃಷಿ ಯೋಜನೆಯಡಿ 1,980 ಕೃಷಿ ಸಖಿಯರನ್ನು ಗುರುತಿಸಲಾಗಿದ್ದು, ಇವರು ಗ್ರಾಮ ಮಟ್ಟದಲ್ಲಿ ತಾಂತ್ರಿಕ ನೆರವು ಮತ್ತು ತರಬೇತಿ ನೀಡುತ್ತಿದ್ದಾರೆ. ರಾಸಾಯನಿಕ ಗೊಬ್ಬರಗಳ ಮೇಲಿನ ಖರ್ಚು ಕಡಿಮೆ ಮಾಡುವ ಮೂಲಕ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆಯ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸಿ, 'ಲಖ್ಪತಿ ದೀದಿ' ಯೋಜನೆಯನ್ನು ಸಾಕಾರಗೊಳಿಸಲಾಗುತ್ತಿದೆ.

ನೈಸರ್ಗಿಕ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯಲು ನಂಬಿಕಸ್ಥ ಪ್ರಮಾಣೀಕರಣ ವ್ಯವಸ್ಥೆಯನ್ನು ರಾಜ್ಯವು ಜಾರಿಗೆ ತರುತ್ತಿದೆ. ಸಣ್ಣ ರೈತರಿಗೆ ಹೊರೆಯಾಗದಂತೆ ಗುಂಪು ಪ್ರಮಾಣೀಕರಣ ಮತ್ತು ಭಾಗಿತ್ವದ ಖಾತರಿ ವ್ಯವಸ್ಥೆಯನ್ನು ಪಿ.ಜಿ.ಎಸ್ ಮಾದರಿಯನ್ನು (Participatory Guarantee System) ಉತ್ತೇಜಿಸಲಾಗುತ್ತಿದೆ.

ರಾಜ್ಯದ ನೈಸರ್ಗಿಕ ಕೃಷಿಕರ ಬೆಳೆಗಳ ಕುರಿತು ಗ್ರಾಹಕರಲ್ಲಿ ವಿಶ್ವಾಸ ಮೂಡಿಸಲು ಡಿಜಿಟಲ್ ಪ್ಲಾಟ್ಫಾರ್ಮ್ಗಳ ಮೂಲಕ ಉತ್ಪನ್ನಗಳ ಮೂಲವನ್ನು ಪತ್ತೆಹಚ್ಚುವ (Traceability) ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ.

ನೈಸರ್ಗಿಕ ಕೃಷಿಯು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವುದಲ್ಲದೆ, ವಿಷಮುಕ್ತ ಆಹಾರದ ಮೂಲಕ ಸಾರ್ವಜನಿಕರ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಮಣ್ಣಿನ ಸಾವಯವ ಇಂಗಾಲದ ಹೆಚ್ಚಳ ಮತ್ತು ಅಂತರ್ಜಲ ಸಂರಕ್ಷಣೆಗೆ ಇದು ಪೂರಕವಾಗಿದೆ. ಕರ್ನಾಟಕವು ನೈಸರ್ಗಿಕ ಕೃಷಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿರಲು ಬದ್ಧವಾಗಿದ್ದು, ಮಹಿಳಾ ನೇತೃತ್ವದ ಈ ಅಭಿಯಾನವು ಸುಸ್ಥಿರ ಅಭಿವೃದ್ಧಿಯ ಮೈಲಿಗಲ್ಲಾಗಲಿದೆ ಎಂದು ಹೇಳಿದರು.

ನೈಸರ್ಗಿಕ ಕೃಷಿ ಎಂದರೇನು?ಕೇಂದ್ರ ಕೃಷಿ ಸಚಿವಾಲಯದ ವ್ಯಾಖ್ಯಾನದ ಪ್ರಕಾರ ನೈಸರ್ಗಿಕ ಕೃಷಿ ಎಂದರೆ "ರಾಸಾಯನಿಕ-ಮುಕ್ತ" ಕೃಷಿ ಪದ್ಧತಿಯಾಗಿದೆ. ಇದು ಕೇವಲ ಜಾನುವಾರು ಮತ್ತು ಸಸ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ತಯಾರಿಸಿದ ಕೃಷಿ ಗೊಬ್ಬರಗಳನ್ನು ಮಾತ್ರ ಬಳಸುತ್ತದೆ. ಇದು ಪ್ರಕೃತಿಯ ನಿಯಮಗಳನ್ನು ಕೃಷಿ ಪದ್ಧತಿಗಳಿಗೆ ಅನ್ವಯಿಸುವ ವ್ಯವಸ್ಥೆಯಾಗಿದೆ. ಪ್ರತಿ ಕೃಷಿ ಪ್ರದೇಶದ ನೈಸರ್ಗಿಕ ಜೀವವೈವಿಧ್ಯತೆಯೊಂದಿಗೆ ಇದು ಕಾರ್ಯನಿರ್ವಹಿಸುತ್ತದೆ.

ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ ಎಂದರೇನು?ಕೇಂದ್ರ ಪ್ರಾಯೋಜಿತ ಯೋಜನೆಯಾದ ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ ಅನ್ನು, ಸಾಂಪ್ರದಾಯಿಕ ಜ್ಞಾನದಲ್ಲಿ ಬೇರೂರಿರುವ ರಾಸಾಯನಿಕ-ಮುಕ್ತ, ಸುಸ್ಥಿರ ಕೃಷಿಯನ್ನು ಉತ್ತೇಜಿಸಲು ಪ್ರಾರಂಭಿಸಲಾಗಿದೆ. ಈ ಯೋಜನೆಯು ರೈತರಿಗೆ ತರಬೇತಿ ನೀಡುವ ಮೂಲಕ, ಆರ್ಥಿಕ ಪ್ರೋತ್ಸಾಹಕಗಳನ್ನು ಒದಗಿಸುವ ಮೂಲಕ ಮತ್ತು ಜೈವಿಕ ಸಂಪನ್ಮೂಲ ಕೇಂದ್ರಗಳಂತಹ ಮೂಲಸೌಕರ್ಯಗಳನ್ನು ಸ್ಥಾಪಿಸುವ ಮೂಲಕ ಮಣ್ಣಿನ ಆರೋಗ್ಯವನ್ನು ಸುಧಾರಿಸುವ, ರೈತರ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಮತ್ತು ಹವಾಮಾನ ಸ್ಥಿತಿಸ್ಥಾಪಕ ಪರಿಸರ ವ್ಯವಸ್ಥೆಗಳನ್ನು ರಚಿಸುವ ಗುರಿಯನ್ನು ಹೊಂದಿದೆ. ಅಲ್ಲದೆ, ಇದು ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳಂತಹ ಬಾಹ್ಯ ರಾಸಾಯನಿಕಗಳನ್ನು ಅವಲಂಬಿಸುವ ಬದಲು, ಸ್ಥಳೀಯ ಸಂಪನ್ಮೂಲಗಳಾದ ನಾಟಿ ಹಸುಗಳ ಸಗಣಿ ಮತ್ತು ಗಂಜಲವನ್ನು ಆಧರಿಸಿದ ವ್ಯವಸ್ಥೆಗೆ ಸಾಂಪ್ರದಾಯಿಕ ಕೃಷಿಯಿಂದ ಬದಲಾವಣೆ ಮಾಡಲು ಪ್ರಯತ್ನಿಸುತ್ತದೆ. ಭಾರತದ ಕೃಷಿ ಪದ್ಧತಿಗಳನ್ನು ಸುಸ್ಥಿರತೆ, ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಸುರಕ್ಷಿತ ಆಹಾರದ ಕಡೆಗೆ ವೈಜ್ಞಾನಿಕವಾಗಿ ಬೆಂಬಲಿತ ವಿಧಾನಗಳೊಂದಿಗೆ ಬಲಪಡಿಸುವ ದೃಷ್ಟಿಯಿಂದ, ಕೇಂದ್ರ ಸಚಿವ ಸಂಪುಟವು ನವೆಂಬರ್ 25, 2024 ರಂದು ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್‌ಗೆ ಅನುಮೋದನೆ ನೀಡಿದೆ.

ಯೋಜನೆಯ ಪ್ರಮುಖ ಗುರಿಗಳು

  1. ವಿಸ್ತರಣೆ: 7.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನೈಸರ್ಗಿಕ ಕೃಷಿ ಆರಂಭಿಸುವುದು.
  2. ಕ್ಲಸ್ಟರ್‌ಗಳು: 15,000 ಕ್ಲಸ್ಟರ್‌ಗಳನ್ನು ಸ್ಥಾಪಿಸುವುದು.
  3. ರೈತರಿಗೆ ತಲುಪುವಿಕೆ: 1 ಕೋಟಿ ರೈತರಲ್ಲಿ ನೈಸರ್ಗಿಕ ಕೃಷಿ ಬಗ್ಗೆ ಜಾಗೃತಿ ಮೂಡಿಸುವುದು.
  4. ಜೈವಿಕ ಸಂಪನ್ಮೂಲ ಕೇಂದ್ರಗಳು: 10,000 ಕೇಂದ್ರಗಳನ್ನು ಸ್ಥಾಪಿಸಿ ಸುಲಭವಾಗಿ ಸೌಲಭ್ಯಗಳನ್ನು ಒದಗಿಸುವುದು.
  5. ಬೆಂಬಲ: ಸರಳ ಪ್ರಮಾಣೀಕರಣ ವ್ಯವಸ್ಥೆ ಮತ್ತು ರಾಸಾಯನಿಕ ಮುಕ್ತ ಉತ್ಪನ್ನಗಳಿಗೆ ರಾಷ್ಟ್ರೀಯ ಬ್ರ್ಯಾಂಡ್ ರಚಿಸುವುದು.


ರೈತರಿಗೆ ಹಣಕಾಸಿನ ನೆರವು ಮತ್ತು ಪ್ರಯೋಜನಗಳುರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್‌ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವ ರೈತರಿಗೆ ಉತ್ಪಾದನೆ-ಆಧಾರಿತ ಆರ್ಥಿಕ ಪ್ರೋತ್ಸಾಹವನ್ನು ನೀಡುತ್ತದೆ.
1. ನೇರ ಆರ್ಥಿಕ ಪ್ರಯೋಜನಗಳು
ಪ್ರೋತ್ಸಾಹಧನ: ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅನುಸರಿಸಲು ಮತ್ತು ಜಾನುವಾರುಗಳನ್ನು ನಿರ್ವಹಿಸಲು ರೈತರಿಗೆ ಎರಡು ವರ್ಷಗಳವರೆಗೆ ಪ್ರತಿ ವರ್ಷ ಎಕರೆಗೆ 4,000 ರೂ. ಪ್ರೋತ್ಸಾಹಧನ ನೀಡಲಾಗುತ್ತದೆ.
ವೆಚ್ಚ ಕಡಿತ: ರಾಸಾಯನಿಕ ಆಧಾರಿತ ಬಳಕೆಯನ್ನು ಸಂಪೂರ್ಣವಾಗಿ ತೆಗೆದುಹಾಕುವುದರಿಂದ ಕೃಷಿ ವೆಚ್ಚವು ಗಣನೀಯವಾಗಿ ಕಡಿಮೆಯಾಗುತ್ತದೆ.
2. ಕೃಷಿ ಮತ್ತು ಪರಿಸರ ವ್ಯವಸ್ಥೆಯ ಪ್ರಯೋಜನಗಳು
ಮಣ್ಣಿನ ಆರೋಗ್ಯ: ನೈಸರ್ಗಿಕ ಕೃಷಿಯು ಮಣ್ಣಿನ ಜೈವಿಕತೆಯನ್ನು ಹೆಚ್ಚಿಸಿ, ಮಣ್ಣನ್ನು ಆರೋಗ್ಯಕರ ಮತ್ತು ಹೆಚ್ಚು ಸ್ಥಿತಿಸ್ಥಾಪಕವನ್ನಾಗಿ ಮಾಡುತ್ತದೆ.

  • ಆದಾಯ ಹೆಚ್ಚಳ: ಕಡಿಮೆ ವೆಚ್ಚ ಮತ್ತು ಉತ್ತಮ ಇಳುವರಿಯಿಂದಾಗಿ ರೈತರು ಹೆಚ್ಚಿನ ನಿವ್ವಳ ಆದಾಯವನ್ನು ಪಡೆಯುತ್ತಾರೆ.
  • ಹವಾಮಾನ ಸ್ಥಿತಿಸ್ಥಾಪಕತ್ವ: ಜೈವಿಕ ವೈವಿಧ್ಯತೆ ಮತ್ತು ಮಣ್ಣಿನ ಆರೋಗ್ಯ ವೃದ್ಧಿಸುವುದರಿಂದ ಬರಗಾಲ ಮತ್ತು ಪ್ರವಾಹದಂತಹ ತೀವ್ರ ಹವಾಮಾನ ಘಟನೆಗಳನ್ನು ಎದುರಿಸಲು ಕೃಷಿಭೂಮಿ ಹೆಚ್ಚು ಸಮರ್ಥವಾಗುತ್ತದೆ.
  • ಜೈವಿಕ ಸಂಪನ್ಮೂಲ ಕೇಂದ್ರಗಳು: ಜೀವಾಮೃತ ಮತ್ತು ಬೀಜಾಮೃತದಂತಹ ನೈಸರ್ಗಿಕ ಪೋಷಕಾಂಶಗಳನ್ನು ಸುಲಭವಾಗಿ ಲಭ್ಯವಾಗುವಂತೆ ಜೈವಿಕ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.


ರೈತರಿಗೆ ಯೋಜನೆಯ ಪ್ರಯೋಜನಗಳು

  • ನೈಸರ್ಗಿಕ ಕೃಷಿ ಪದ್ಧತಿಗಳು ರೈತರಿಗೆ ಕೃಷಿ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಹೊರಗಿನಿಂದ ಖರೀದಿಸಿದ ಕೃಷಿ ರಸಗೊಬ್ಬರಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ.
  • ಇದರ ಜೊತೆಗೆ, ಇದು ಮಣ್ಣಿನ ಆರೋಗ್ಯ, ಫಲವತ್ತತೆ ಮತ್ತು ಗುಣಮಟ್ಟವನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ಜಲಾವೃತ, ಪ್ರವಾಹ, ಬರಗಾಲ ಇತ್ಯಾದಿ ಹವಾಮಾನ ಅಪಾಯಗಳಿಗೆ ಒಗ್ಗಿಕೊಳ್ಳಲು ನೆರವಾಗಲಿದೆ.
  • ಈ ಪದ್ಧತಿಗಳು ರಸಗೊಬ್ಬರಗಳು, ಕೀಟನಾಶಕಗಳು ಇತ್ಯಾದಿಗಳಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಆರೋಗ್ಯದ ಅಪಾಯಗಳನ್ನು ಕಡಿಮೆ ಮಾಡುತ್ತವೆ ಮತ್ತು ರೈತರ ಕುಟುಂಬಕ್ಕೆ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಒದಗಿಸುತ್ತವೆ.

ಮಿಷನ್‌ನ ಅನುಷ್ಠಾನ ಹೇಗೆ?

  • ನೈಸರ್ಗಿಕ ಕೃಷಿಯು ಜ್ಞಾನ-ಆಧಾರಿತ ಪದ್ಧತಿಯಾಗಿರುವುದರಿಂದ, ಮಿಷನ್ ರೈತರಿಗೆ ನಿರಂತರ ಬೆಂಬಲವನ್ನು ಒದಗಿಸುತ್ತದೆ. ನೈಸರ್ಗಿಕ ಕೃಷಿ ಮಾಡುವ ರೈತರ ಕ್ಷೇತ್ರಗಳಿಂದ ವೈಜ್ಞಾನಿಕವಾಗಿ ಪಡೆದ ಜ್ಞಾನದ ಮೇಲೆ ಮಿಷನ್ ಗಮನಹರಿಸುತ್ತದೆ ಮತ್ತು ನಿರಂತರವಾದ ಪ್ರಾಯೋಗಿಕ ಬೆಂಬಲ ನೀಡುತ್ತದೆ.
  • ತರಬೇತಿ ಮತ್ತು ಪ್ರಾತ್ಯಕ್ಷಿಕೆ: 2,000 ಮಾದರಿ ಪ್ರಾತ್ಯಕ್ಷಿಕೆ ಫಾರ್ಮ್‌ಗಳನ್ನು ಕೃಷಿ ವಿಜ್ಞಾನ ಕೇಂದ್ರಗಳು (KVKs) ಮತ್ತು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಲಾಗುವುದು. 18.75 ಲಕ್ಷ ರೈತರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ.
  • ಸಮುದಾಯದ ಪಾಲ್ಗೊಳ್ಳುವಿಕೆ: ಜಾಗೃತಿ ಮತ್ತು ಸಹಾಯಕ್ಕಾಗಿ 30,000 ಕೃಷಿ ಸಖಿ/ಸಮುದಾಯ ಸಂಪನ್ಮೂಲ ವ್ಯಕ್ತಿಗಳನ್ನು ನಿಯೋಜಿಸಲಾಗುತ್ತದೆ.
  • ಪ್ರಮಾಣೀಕರಣ ಮತ್ತು ಬ್ರ್ಯಾಂಡಿಂಗ್: ರಾಸಾಯನಿಕ ಮುಕ್ತ ಉತ್ಪನ್ನಗಳಿಗೆ ಸರಳವಾದ ಪ್ರಮಾಣೀಕರಣ ಪ್ರಕ್ರಿಯೆ ಮತ್ತು ಏಕೈಕ ರಾಷ್ಟ್ರೀಯ ಬ್ರ್ಯಾಂಡ್ ಅನ್ನು ರಚಿಸುವ ಮೂಲಕ ಮಾರುಕಟ್ಟೆ ಪ್ರವೇಶವನ್ನು ಸುಲಭಗೊಳಿಸಲಾಗುತ್ತದೆ.


ಅರ್ಹತಾ ಮಾನದಂಡಗಳು ಏನು?

  • ಭಾರತದಾದ್ಯಂತ ಇರುವ ಎಲ್ಲಾ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
  • ಸಣ್ಣ, ಅತಿ ಸಣ್ಣ, ಮಧ್ಯಮ ಮತ್ತು ದೊಡ್ಡ ರೈತರು ಸಹ ಭಾಗವಹಿಸಬಹುದು.
  • ನಿರ್ದಿಷ್ಟ ಬೆಂಬಲ ಮತ್ತು ಪ್ರೋತ್ಸಾಹಧನವನ್ನು ಪಡೆಯಲು, ರೈತರು ಗರಿಷ್ಠ ಒಂದು ಎಕರೆ ಪ್ರದೇಶದಲ್ಲಿ ಈ ಪದ್ಧತಿಯನ್ನು ಪ್ರಾರಂಭಿಸಬಹುದು.
  • ಈ ಯೋಜನೆಗೆ ಸೇರಲು ಯಾವುದೇ ನಿರ್ದಿಷ್ಟ ಶೈಕ್ಷಣಿಕ ಅರ್ಹತೆಯ ಅಗತ್ಯವಿರುವುದಿಲ್ಲ.
  • ಸಂಶೋಧನಾ ಸಂಸ್ಥೆಗಳು, ಎನ್‌ಜಿಒಗಳು, ಸಮುದಾಯ ಸಂಘಟನೆಗಳು, ಗ್ರಾಮೀಣ ಕೃಷಿ ಉದ್ಯಮಿಗಳು ಸಹ ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ.

ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ?ಯೋಜನೆಯ ಪ್ರಯೋಜನಗಳನ್ನು ಪಡೆಯಲು ರೈತರು ಆಫ್‌ಲೈನ್ ಅಥವಾ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಆಫ್‌ಲೈನ್ ಪ್ರಕ್ರಿಯೆ

  • ಯೋಜನೆಗೆ ನಿಮ್ಮ ಆಸಕ್ತಿಯನ್ನು ವ್ಯಕ್ತಪಡಿಸಲು ನಿಮ್ಮ ಸ್ಥಳೀಯ ಜಿಲ್ಲಾ ಪಂಚಾಯತಿಯ ಅಧಿಕಾರಿಯನ್ನು ಸಂಪರ್ಕಿಸಿ.
  • ಅಧಿಕಾರಿ ನಿಮ್ಮ ವಿವರಗಳನ್ನು ಮತ್ತು ಯೋಜನಾ ವರದಿಯನ್ನು ರಾಜ್ಯ ಕೃಷಿ ಇಲಾಖೆಗೆ ಸಲ್ಲಿಸುತ್ತಾರೆ.
  • ರಾಜ್ಯ ಕೃಷಿ ಇಲಾಖೆ ವಾರ್ಷಿಕ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುತ್ತದೆ.
  • ರಾಜ್ಯದ ಯೋಜನೆಗೆ ಅನುಮೋದನೆ ದೊರೆತು ಹಣ ಬಿಡುಗಡೆಯಾದ ನಂತರ ನಿಮಗೆ ಆರ್ಥಿಕ ನೆರವು ಸಿಗುತ್ತದೆ.

ಆನ್‌ಲೈನ್ ಪ್ರಕ್ರಿಯೆ

  • ರಾಷ್ಟ್ರೀಯ ನೈಸರ್ಗಿಕ ಕೃಷಿ ವೆಬ್‌ಸೈಟ್‌ನ ನೋಂದಣಿ ಪುಟ naturalfarming.dac.gov.in ಕ್ಕೆ ಭೇಟಿ ನೀಡಿ.
  • ವೈಯಕ್ತಿಕ ಮತ್ತು ಕೃಷಿ ವಿವರಗಳೊಂದಿಗೆ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ನಿಮ್ಮ ಮಾಹಿತಿಯನ್ನು ಪರಿಶೀಲಿಸಿ ಮತ್ತು ಅದನ್ನು ಸಲ್ಲಿಸಿ.

ಅಗತ್ಯ ದಾಖಲೆಗಳು

  • ಆಧಾರ್ ಸಂಖ್ಯೆ
  • ಭೂಮಿ ದಾಖಲೆಗಳು
  • ಬ್ಯಾಂಕ್ ವಿವರಗಳು
  • ಛಾಯಾಚಿತ್ರಗಳು
  • ಜಾತಿ ಪ್ರಮಾಣಪತ್ರ (ಎಸ್ಸಿ/ಎಸ್ಟಿ ಅರ್ಜಿದಾರರಿಗೆ ಮಾತ್ರ)

]]>
Thu, 22 Jan 2026 08:36:23 +0530 shivuagrico
Pradan mantri awas yojane 2026&ಜನೇವರಿ 24 ರಂದು 42,345 ಮನೆ ಹಂಚಿಕೆ,ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಚೆಕ್ ಮಾಡಿ https://krushirushi.in/Pradan-mantri-awas-yojane-2026 https://krushirushi.in/Pradan-mantri-awas-yojane-2026 Pradan mantri awas yojane 2026-ಜನೇವರಿ 24 ರಂದು 42,345 ಮನೆ ಹಂಚಿಕೆ,ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಚೆಕ್ ಮಾಡಿ

ಆರ್ಥಿಕವಾಗಿ ಹಿಂದುಳಿದ ಮತ್ತು ಮಧ್ಯಮ ವರ್ಗದ ಜನರ ಸ್ವಂತ ಮನೆಯ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಅಡಿಯಲ್ಲಿ ನಿರ್ಮಿಸಲಾದ 42,345 ಮನೆಗಳ ಲೋಕಾರ್ಪಣೆ ಮತ್ತು ಹಕ್ಕುಪತ್ರ ವಿತರಣಾ ಸಮಾರಂಭವು ಜನೆವರಿ 24, 2026 ರಂದು ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮತ್ತು ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ನೇತೃತ್ವದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಈ ಕಾರ್ಯಕ್ರಮದ ವಿವರಗಳನ್ನು ಹಂಚಿಕೊಳ್ಳಲಾಗಿದೆ.

ಆವಾಸ್ ಯೋಜನೆಯಡಿ ಮನೆಗಳ ನಿರ್ಮಾಣ ಹೇಗೆ?

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಜಾರಿಯಾಗುತ್ತಿರುವ ಈ ವಸತಿ ಯೋಜನೆಯು ರಾಜ್ಯದ ಆರ್ಥಿಕವಾಗಿ ಹಿಂದುಳಿದ ಮತ್ತು ಕಡಿಮೆ ಆದಾಯದ ಗುಂಪುಗಳಿಗೆ ಕೈಗೆಟುಕುವ ದರದಲ್ಲಿ ಸುಸಜ್ಜಿತ ಮನೆಗಳನ್ನು ಒದಗಿಸುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ. ಈ ಯೋಜನೆಯಡಿ ಪ್ರತಿ ಮನೆಗೆ ಸುಮಾರು 7.50 ರೂ. ಲಕ್ಷ ವೆಚ್ಚವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ 2.70 ಲಕ್ಷ ರೂ.ದಿಂದ 3.50 ಲಕ್ಷ ರೂ.ವರೆಗೆ ಭಾರಿ ಸಹಾಯಧನ ನೀಡುತ್ತಿವೆ, ಇದರಿಂದಾಗಿ ಫಲಾನುಭವಿಗಳು ಕೇವಲ 1 ಲಕ್ಷ ರೂ. ರಷ್ಟು ಕಡಿಮೆ ವಂತಿಗೆಯನ್ನು ಪಾವತಿಸಿ ಸ್ವಂತ ಮನೆಯ ಮಾಲೀಕರಾಗಬಹುದು. ಕೇವಲ ತಲೆಗೊಂದು ಸೂರಿಲ್ಲದೆ, ಈ ವಸತಿ ಸಂಕೀರ್ಣಗಳಲ್ಲಿ ಆಸ್ಪತ್ರೆ, ಗ್ರಂಥಾಲಯ ಹಾಗೂ ಸಮುದಾಯ ಭವನಗಳಂತಹ ಆಧುನಿಕ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಸಾಮಾಜಿಕ ನ್ಯಾಯದಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಕಾರ್ಯಕ್ರಮದ ಪ್ರಮುಖ ವಿವರಗಳು:

  • ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ಮನೆಗಳ ವಿತರಣಾ ಸಮಾರಂಭವು 2026ರ ಜನೆವರಿ 24ರಂದು ಬೆಳಿಗ್ಗೆ 11:00 ಗಂಟೆಗೆ ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ಜರುಗಲಿದೆ.
  • ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯ ಸಚಿವ ಸಂಪುಟದ ಪ್ರಮುಖ ಸದಸ್ಯರು ಭಾಗವಹಿಸಲಿದ್ದಾರೆ.
  • ಸಮಾರಂಭದ ವೇದಿಕೆಯಲ್ಲಿ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಆಯ್ದ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಮನೆಗಳನ್ನು ಹಸ್ತಾಂತರಿಸಲಾಗುವುದು.
  • ವಿಶೇಷವೆಂದರೆ, ಇದೇ ಸಂದರ್ಭದಲ್ಲಿ ರಾಜ್ಯದ ಒಟ್ಟು 28 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಮನೆಗಳ ಹಂಚಿಕೆ ಪ್ರಕ್ರಿಯೆಯು ವ್ಯವಸ್ಥಿತವಾಗಿ ನಡೆಯಲಿದೆ.

ಮನೆ ಹಂಚಿಕೆಯ ವಿವರಗಳು

  • ಪ್ರಸ್ತುತ ಜಾರಿಯಲ್ಲಿರುವ ಈ ಯೋಜನೆಯು ಎರಡನೇ ಹಂತದ ಮನೆ ವಿತರಣೆಯಾಗಿದ್ದು, ಇದರಲ್ಲಿ ಸಾಮಾಜಿಕ ನ್ಯಾಯದ ತತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
  • ಈ ಹಂತದಲ್ಲಿ ರಾಜ್ಯಾದ್ಯಂತ ಒಟ್ಟು 42,345 ಮನೆಗಳನ್ನು ವಿತರಿಸಲಾಗುತ್ತಿದ್ದು, ಅದರಲ್ಲಿ 20,312 ಮನೆಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ಫಲಾನುಭವಿಗಳಿಗೆ ಮೀಸಲಿಡಲಾಗಿದೆ.
  • ಇನ್ನುಳಿದ 22,033 ಮನೆಗಳನ್ನು ಇತರ ವರ್ಗದ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುತ್ತಿದೆ.
  • ವಿಶೇಷವಾಗಿ ಧಾರವಾಡ ಜಿಲ್ಲೆಯಲ್ಲಿ ಈವರೆಗೆ ಒಟ್ಟು 2,169 ಮನೆಗಳು ಮಂಜೂರಾಗಿದ್ದು, ಸಮಾರಂಭದ ವೇಳೆ ಸುಮಾರು 3,000 ಫಲಾನುಭವಿಗಳಿಗೆ ಅಧಿಕೃತವಾಗಿ ಹಕ್ಕುಪತ್ರಗಳನ್ನು ವಿತರಿಸಲಾಗುವುದು.

ಮನೆಯ ನಿರ್ಮಾಣಕ್ಕೆ ಸಿಗುವ ಸಬ್ಸಿಡಿ ಎಷ್ಟು?

  • ಈ ಯೋಜನೆಯಡಿ ನಿರ್ಮಿಸಲಾದ ಪ್ರತಿ ಮನೆಯ ಒಟ್ಟು ವೆಚ್ಚ ಅಂದಾಜು 7.50 ಲಕ್ಷ ರೂ. ಆಗಿದ್ದು, ಜನಸಾಮಾನ್ಯರಿಗೆ ಹೊರೆಯಾಗದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಾರಿ ಪ್ರಮಾಣದ ಸಹಾಯಧನವನ್ನು ನೀಡುತ್ತಿವೆ.
  • ಇದರಲ್ಲಿ ಕೇಂದ್ರ ಸರ್ಕಾರವು 1.50 ಲಕ್ಷ ರೂ. ಪಾಲು ನೀಡಿದರೆ, ರಾಜ್ಯ ಸರ್ಕಾರವು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ 1.20 ಲಕ್ಷ ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 2 ಲಕ್ಷ ರೂ. ಸಹಾಯಧನವನ್ನು ಒದಗಿಸುತ್ತಿದೆ.
  • ಉಳಿದ ವೆಚ್ಚದಲ್ಲಿ ಫಲಾನುಭವಿಗಳು ಕೇವಲ 1 ಲಕ್ಷ ರೂ.ಪಾವತಿಸುವ ಮೂಲಕ ಸುಸಜ್ಜಿತ ಮನೆಯ ಮಾಲೀಕರಾಗಬಹುದಾಗಿದೆ. ವಿಶೇಷವೆಂದರೆ, ಈ ವಸತಿ ಸಂಕೀರ್ಣಗಳು ಕೇವಲ ಮನೆಗಳಿಗೆ ಸೀಮಿತವಾಗದೆ, ಅಲ್ಲಿನ ನಿವಾಸಿಗಳ ಅನುಕೂಲಕ್ಕಾಗಿ ಆಸ್ಪತ್ರೆ, ಗ್ರಂಥಾಲಯ ಹಾಗೂ ಸಮುದಾಯ ಭವನಗಳಂತಹ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒಳಗೊಂಡಿವೆ.

ರಾಜ್ಯದಲ್ಲಿ ಆವಾಸ್‌ ಮನೆ ನಿರ್ಮಾಣ ಯೋಜನೆಯ ಪ್ರಗತಿ

  • ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ಮಾಹಿತಿಯಂತೆ, ರಾಜ್ಯಾದ್ಯಂತ ಈ ಯೋಜನೆಯಡಿ ಒಟ್ಟು 1,80,253 ಮನೆಗಳು ಮಂಜೂರಾಗಿವೆ.
  • ಈ ಪೈಕಿ ಈಗಾಗಲೇ 86,651 ಮನೆಗಳ ನಿರ್ಮಾಣ ಕಾರ್ಯ ಸಂಪೂರ್ಣಗೊಂಡು ಹಸ್ತಾಂತರಕ್ಕೆ ಸಿದ್ಧವಾಗಿವೆ. ಪ್ರಸ್ತುತ ರಾಜ್ಯದ ವಿವಿಧೆಡೆ ಒಟ್ಟು 1,29,986 ಮನೆಗಳ ನಿರ್ಮಾಣ ಕಾರ್ಯವು ವಿವಿಧ ಹಂತಗಳಲ್ಲಿ ಅತ್ಯಂತ ವೇಗವಾಗಿ ಪ್ರಗತಿಯಲ್ಲಿದೆ.
  • ಮುಂದಿನ ಮೂರನೇ ಹಂತದಲ್ಲಿ ಅಂದರೆ 2026ರ ಏಪ್ರಿಲ್ ಅಥವಾ ಮೇ ತಿಂಗಳ ವೇಳೆಗೆ ಇನ್ನೂ ಹೆಚ್ಚುವರಿಯಾಗಿ 30,000 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.

ಫಲಾನುಭವಿಗಳ ಪಟ್ಟಿ ಪರಿಶೀಲಿಸುವುದು ಹೇಗೆ?

  • ಫಲಾನುಭವಿಗಳು ಮೊದಲಿಗೆ ರಾಜೀವ್ ಗಾಂಧಿ ವಸತಿ ನಿಗಮದ (RGRHCL) ಅಧಿಕೃತ ವೆಬ್‌ಸೈಟ್ ಆದ ashraya.karnataka.gov.in/ ಗೆ ಭೇಟಿ ನೀಡಬೇಕು.
  • ವೆಬ್‌ಸೈಟ್ ತೆರೆದ ನಂತರ, ಮುಖಪುಟದಲ್ಲಿ ಕಾಣಿಸುವ 'Beneficiary Information' (ಫಲಾನುಭವಿ ಮಾಹಿತಿ) ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

  • ನಂತರ ಅಲ್ಲಿ ಕಾಣಿಸುವ ಆಯ್ಕೆಗಳಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ದುಕೊಂಡು, ನಿಮ್ಮ ಅರ್ಜಿಯ ಅಕ್ನಾಲೆಜ್‌ಮೆಂಟ್ ಸಂಖ್ಯೆಯನ್ನು ನಮೂದಿಸಿ "ಸಲ್ಲಿಸು" ಮೇಲೆ ಕ್ಲಿಕ್ ಮಾಡಿ

  • ಒಂದು ವೇಳೆ ನಿಮಗೆ ಆನ್‌ಲೈನ್‌ನಲ್ಲಿ ಪರಿಶೀಲಿಸಲು ಸಾಧ್ಯವಾಗದಿದ್ದರೆ ಅಥವಾ ಹೆಚ್ಚಿನ ಮಾಹಿತಿ ಅಗತ್ಯವಿದ್ದರೆ, ಸರ್ಕಾರದ ಸಹಾಯವಾಣಿ ಸಂಖ್ಯೆಗಳಾದ 080-22106888 ಅಥವಾ 080-23118888 ಕ್ಕೆ ಕರೆ ಮಾಡಿ ವಿವರಗಳನ್ನು ಪಡೆಯಬಹುದು.
]]>
Wed, 21 Jan 2026 17:31:32 +0530 shivuagrico
New ration card 2026&ವೈದ್ಯಕೀಯ ತುರ್ತು ಚಿಕಿತ್ಸೆಗಾಗಿ 7 ದಿನದೊಳಗೆ ಸಿಗಲಿದೆ ಹೊಸ ಬಿಪಿಎಲ್‌ ಕಾರ್ಡ್ https://krushirushi.in/New-ration-card-2026 https://krushirushi.in/New-ration-card-2026 New ration card 2026-ವೈದ್ಯಕೀಯ ತುರ್ತು ಚಿಕಿತ್ಸೆಗಾಗಿ 7 ದಿನದೊಳಗೆ ಸಿಗಲಿದೆ ಹೊಸ ಬಿಪಿಎಲ್‌ ಕಾರ್ಡ್


ಬಿಪಿಎಲ್‌ ಕಾರ್ಡ್‌ ಹೊಂದಿದವರು ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರಿಯಾಯಿತಿ ದರದಲ್ಲಿ ನಾನಾ ಪರೀಕ್ಷೆ, ಚಿಕಿತ್ಸೆ ಸೌಲಭ್ಯ ಪಡೆಯುವುದಕ್ಕೆ ಸರಕಾರ ಎಂದೋ ಅವಕಾಶ ಕಲ್ಪಿಸಿದೆ. ಆದರೆ, ರಾಜ್ಯದ ಅನೇಕ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ಬಿಪಿಎಲ್‌ ಕಾರ್ಡ್‌ ಪಡೆಯಲು ಸಾಧ್ಯವಾಗಿಲ್ಲ. ಇಂತಹ ಕುಟುಂಬಗಳಿಗೆ ವೈದ್ಯಕೀಯ ತುರ್ತು ಚಿಕಿತ್ಸೆಯ ಅಗತ್ಯ ಬಿದ್ದಾಗ ಬಿಪಿಎಲ್ ಕಾರ್ಡ್‌ ಇಲ್ಲ ಎಂಬ ಕಾರಣಕ್ಕೆ ಚಿಕಿತ್ಸೆಯ ನಾನಾ ಸವಲತ್ತುಗಳು ದೊರೆಯದಂತಾಗಿತ್ತು

ಇದನ್ನು ತಪ್ಪಿಸಲೆಂದೇ ಸರಕಾರ ಇತ್ತೀಚೆಗೆ ವೈದ್ಯಕೀಯ ತುರ್ತು ಘಟಕದ ಸಾಫ್ಟ್‌ವೇರ್‌ ಸಿದ್ಧಪಡಿಸಿದೆ. ವೈದ್ಯಕೀಯ ಸೌಲಭ್ಯಕ್ಕಾಗಿ ಕರ್ನಾಟಕ ಒನ್‌, ಗ್ರಾಮ ಒನ್‌ಗಳ ಮೂಲಕ ಕಾರ್ಡ್‌ ನೀಡಲಾಗುತ್ತಿದೆ. ಆಧಾರ್‌ ಕಾರ್ಡ್‌, ಆದಾಯ ಪ್ರಮಾಣ ಪತ್ರ ಮತ್ತು ವೈದ್ಯಕೀಯ ದಾಖಲೆಗಳನ್ನು ವೈದ್ಯಕೀಯ ತುರ್ತು ಘಟಕಕ್ಕೆ ಸಲ್ಲಿಸಿ ಏಳು ದಿನದೊಳಗೆ ಬಿಪಿಎಲ್‌ ಕಾರ್ಡ್‌ ಪಡೆಯಲು ದಾರಿ ಮಾಡಿಕೊಟ್ಟಿದೆ.


ಮತ್ತೊಂದೆಡೆ ಸುಳ್ಳು ದಾಖಲೆಗಳನ್ನು ಒದಗಿಸುತ್ತಿರುವ ಹಿನ್ನೆಲೆ ಅರ್ಜಿ ತಿರಸ್ಕೃತಗೊಳ್ಳುವುದು ಬೆಳಕಿಗೆ ಬರುತ್ತಿವೆ. ಇಂತಹ ಪ್ರಕರಣಗಳು ರಾಜ್ಯಾದ್ಯಂತ ಕಂಡುಬಂದಿದ್ದು, ವಾಮಮಾರ್ಗದ ಮೂಲಕ ಕಾರ್ಡ್‌ ಪಡೆಯಲು ಯತ್ನಿಸಿ ವಿಫಲವಾಗುತ್ತಿರುವುದು ಆಹಾರ ನಿರೀಕ್ಷಕರ ಪರಿಶೀಲನೆ ಸಂದರ್ಭ ಬೆಳಕಿಗೆ ಬರುತ್ತಿವೆ.


ಅರ್ಜಿ ಸಲ್ಲಿಕೆ ವಿವರ

ರಾಜ್ಯಾದ್ಯಂತ ಮೆಡಿಕಲ್‌ ಎಮರ್ಜೆನ್ಸಿ ಮಾಡ್ಯುಲ್‌ ಮೂಲಕ ಬಿಪಿಎಲ್‌ ಕಾರ್ಡ್‌ ಪಡೆಯಲು ಅವಕಾಶ ದೊರೆತ ದಿನದಿಂದ ರಾಜ್ಯಾದ್ಯಂತ 5,677 ಅರ್ಜಿಗಳು ಫಲಾನುಭವಿಗಳಿಂದ ಸಲ್ಲಿಕೆಯಾಗಿದ್ದು, ಅರ್ಜಿ ಹಾಕಿದ ಬೆನ್ನಲ್ಲೇ 203 ಜನ ಹಿಂಪಡೆದಿದ್ದಾರೆ. ಈ ಅವಕಾಶದಡಿ ಬಿಪಿಎಲ್‌ ಕಾರ್ಡ್‌ ಕೋರಿ ಅರ್ಜಿ ಹಾಕಿದ 2327 ಅರ್ಜಿದಾರರ ಸ್ಥಳ ತಪಾಸಣೆ ಮಾಡಿದ್ದು, 906 ಅರ್ಜಿಗಳು ಅಧಿಕೃತವಾಗಿ ಅನುಮೋದನೆಗೊಂಡಿವೆ. ಇದೇ ವೇಳೆ ಸುಳ್ಳು, ಅಸ್ಪಷ್ಟ ದಾಖಲೆ ಒದಗಿಸಿದ ಕಾರಣಕ್ಕೆ 706 ಅರ್ಜಿಗಳು ತಿರಸ್ಕೃತಗೊಳ್ಳುವಂತಾಗಿದೆ. ಹಾಗಾಗಿ, ರಾಜ್ಯಾದ್ಯಂತ ಇವತ್ತಿನವರೆಗೆ ಇನ್ನೂ 4065 ಅರ್ಜಿಗಳನ್ನು ಪರಿಶೀಲಿಸಿ ಕಾರ್ಡ್‌ ಕೊಡುವ ಕಾರ್ಯ ಬಾಕಿ ಇದೆ.

ಮಧ್ಯವರ್ತಿಗಳ ಹಾವಳಿ

ಸದುದ್ದೇಶಕ್ಕಾಗಿ ಆರಂಭಿಸಿದ ಮೆಡಿಕಲ್‌ ಎಮರ್ಜೆನ್ಸಿ ಮಾಡ್ಯೂಲ್‌, ಅರ್ಹರಿಂದ ಸಮರ್ಪಕ ಬಳಕೆಯಾಗುತ್ತಿಲ್ಲಎಂಬ ದೂರುಗಳು ಕೇಳಿಬಂದಿರುವುದು ಒಂದೆಡೆಯಾದರೆ ಮಧ್ಯವರ್ತಿಗಳು ಫಲಾನುಭವಿಗಳನ್ನು ದಾರಿ ತಪ್ಪಿಸಿ ಸುಳ್ಳು ದಾಖಲೆ ಸಲ್ಲಿಸುತ್ತಿರುವುದು ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಇದರಿಂದ ಪ್ರತಿ ಅರ್ಜಿಯೊಂದಿಗೆ ಲಗತ್ತಿಸಿದ ಆಧಾರ್‌ ಕಾರ್ಡ್‌, ಆದಾಯ ಪ್ರಮಾಣಪತ್ರದ ಜತೆಗೆ ಮುಖ್ಯವಾಗಿ ವೈದ್ಯಕೀಯ ದಾಖಲೆಗಳನ್ನು ಕೂಲಂಕಷವಾಗಿ ತಪಾಸಣೆ ಮಾಡುವಂತಾಗಿದೆ.

]]>
Wed, 21 Jan 2026 08:03:45 +0530 shivuagrico
Pumpset akrama sakaram&ಪಂಪ್‌ಸೆಟ್ ಅಕ್ರಮ ಸಕ್ರಮ ಯೋಜನೆ:ಹಗಲಿನಲ್ಲೇ ಸಿಗಲಿದೆ 7 ಗಂಟೆ ಉಚಿತ ವಿದ್ಯುತ್ https://krushirushi.in/Pumpset-akrama-sakarama-2399 https://krushirushi.in/Pumpset-akrama-sakarama-2399 Pumpset akrama sakaram-ಪಂಪ್‌ಸೆಟ್ ಅಕ್ರಮ ಸಕ್ರಮ ಯೋಜನೆ:ಹಗಲಿನಲ್ಲೇ ಸಿಗಲಿದೆ 7 ಗಂಟೆ ಉಚಿತ ವಿದ್ಯುತ್

ರೈತರು ತಮ್ಮ ಹೊಲಗಳಿಗೆ ನೀರು ಹರಿಸುವ ಉದ್ದೇಶದಿಂದ ತರಾತುರಿಯಲ್ಲಿ ಪಂಪ್‌ಸೆಟ್‌ಗಳನ್ನು ಹಾಕಿಸಿಕೊಂಡು ಅವುಗಳನ್ನು ಬಳಕೆ ಮಾಡುತ್ತಿದ್ದಾರೆ. ಅದರೆ, ಕಾನೂನಿನ ಪ್ರಕಾರ ಹೀಗೆ ಮಾಡುವುದು ಅಕ್ರಮ. ಆದರೆ, ರೈತರ ಹಿತದೃಷ್ಟಿಯನ್ನು ಮನದಲ್ಲಿ ಇಟ್ಟುಕೊಂಡು ಅಕ್ರಮ ಪಂಪ್‌ಸೆಟ್‌ಗಳನ್ನು ಊರ್ಜಿತಗೊಳಿಸಲು ಸರ್ಕಾರ ಮುಂದಾಗಿದೆ. ಕರ್ನಾಟಕದ ರೈತರಿಗೆ ಕೃಷಿ ಪಂಪ್‌ಸೆಟ್‌ಗಳ ಅಕ್ರಮ ಸಂಪರ್ಕವನ್ನು ಸಕ್ರಮಗೊಳಿಸಲು ಸರ್ಕಾರವು 'ಅಕ್ರಮ-ಸಕ್ರಮ' ಯೋಜನೆಯನ್ನು ಮತ್ತೆ ಚುರುಕುಗೊಳಿಸಿದೆ. ಈ ಯೋಜನೆಯ ಮೂಲಕ ಅನಧಿಕೃತವಾಗಿ ವಿದ್ಯುತ್ ಬಳಸುತ್ತಿದ್ದ ಲಕ್ಷಾಂತರ ರೈತರಿಗೆ ಕಾನೂನುಬದ್ಧ ಸಂಪರ್ಕ ಕಲ್ಪಿಸಿ, ಸುಸ್ಥಿರ ಕೃಷಿಗೆ ದಾರಿಯ ಮಾಡಿಕೊಡಲಾಗುತ್ತಿದೆ. ಈ ಯೋಜನೆಯ ಸ್ಥಿತಿಗತಿ, ಪ್ರಕ್ರಿಯೆ ಮತ್ತು ಪ್ರಯೋಜನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಏನಿದು ಪಂಪ್‌ಸೆಟ್‌ ಅಕ್ರಮ-ಸಕ್ರಮ ಯೋಜನೆ?

ಕರ್ನಾಟಕ ಸರ್ಕಾರದ 'ಪಂಪ್‌ಸೆಟ್‌ ಅಕ್ರಮ-ಸಕ್ರಮ' ಯೋಜನೆಯು ಅನುಮತಿ ಪಡೆಯದೆ ಅನಧಿಕೃತವಾಗಿ ಬಳಸುತ್ತಿದ್ದ ಕೃಷಿ ಪಂಪ್‌ಸೆಟ್‌ಗಳಿಗೆ ಕಾನೂನುಬದ್ಧ ವಿದ್ಯುತ್ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯ ಉಪಕ್ರಮವಾಗಿದೆ. ಈ ಯೋಜನೆಯಡಿ, ವಿದ್ಯುತ್ ಜಾಲದಿಂದ 500 ಮೀಟರ್ ಒಳಗಿರುವ ಪಂಪ್‌ಸೆಟ್‌ಗಳನ್ನು ನಿಗದಿಪಡಿಸಿದ ಶುಲ್ಕದೊಂದಿಗೆ (ಸುಮಾರು 10,000 ರೂ.) ಸಕ್ರಮಗೊಳಿಸಿ ಅಧಿಕೃತ RR ಸಂಖ್ಯೆ ನೀಡಲಾಗುತ್ತದೆ. ಇನ್ನು 500 ಮೀಟರ್‌ಗಿಂತ ದೂರವಿರುವ ಪಂಪ್‌ಸೆಟ್‌ಗಳಿಗೆ ಕುಸುಮ್-ಸಿ ಯೋಜನೆಯಡಿ ಶೇ. 80ರಷ್ಟು ಸರ್ಕಾರಿ ಸಹಾಯಧನದೊಂದಿಗೆ ಸೌರಶಕ್ತಿ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಳ್ಳಲು ಉತ್ತೇಜಿಸಲಾಗುತ್ತದೆ. ಈ ಮೂಲಕ ರೈತರಿಗೆ ಹಗಲು ವೇಳೆ ನಿರಂತರ 7 ಗಂಟೆಗಳ ಕಾಲ ಉಚಿತ ವಿದ್ಯುತ್ ಒದಗಿಸುವುದು, ಸುಟ್ಟುಹೋದ ಟ್ರಾನ್ಸ್‌ಫಾರ್ಮರ್‌ಗಳ ಉಚಿತ ದುರಸ್ತಿ ಮತ್ತು ಅಕ್ರಮ ಸಂಪರ್ಕದ ದಂಡದಿಂದ ಮುಕ್ತಿ ದೊರೆಯಲಿದೆ.

 

ಯೋಜನೆಯ ಉದ್ದೇಶವೇನು?

ಕರ್ನಾಟಕದ ವಿವಿಧ ವಿದ್ಯುತ್ ವಿತರಣಾ ಕಂಪನಿಗಳ ವ್ಯಾಪ್ತಿಯಲ್ಲಿ ರೈತರು ಅನಿವಾರ್ಯ ಕಾರಣಗಳಿಂದ ಅನುಮತಿ ಪಡೆಯದೆ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಂಡಿದ್ದರು. ಇಂತಹ ಅಕ್ರಮ ಸಂಪರ್ಕಗಳಿಂದಾಗಿ ವಿದ್ಯುತ್ ಜಾಲದ ಮೇಲೆ ಒತ್ತಡ ಉಂಟಾಗುತ್ತಿತ್ತು ಮತ್ತು ರೈತರಿಗೆ ಸರ್ಕಾರಿ ಸೌಲಭ್ಯಗಳು ಸಿಗುತ್ತಿರಲಿಲ್ಲ. ಇದನ್ನು ಸರಿಪಡಿಸಲು ಅಕ್ರಮ-ಸಕ್ರಮ ಯೋಜನೆಯನ್ನು ಜಾರಿಗೆ ತರಲಾಗಿದೆ.

ಯೋಜನೆಯ ಪ್ರಸ್ತುತ ಸ್ಥಿತಿ ಏನು?

  • ಈ ಯೋಜನೆಯು ಆರಂಭವಾದ ಸಮಯದಲ್ಲಿ ರಾಜ್ಯಾದ್ಯಂತ ಸುಮಾರು 4.5 ಲಕ್ಷ ಪಂಪ್‌ಸೆಟ್ ಸಕ್ರಮಕ್ಕಾಗಿ ಅರ್ಜಿಗಳು ಬಾಕಿ ಇದ್ದವು.
  • ಸರ್ಕಾರದ ನಿರಂತರ ಪ್ರಯತ್ನದಿಂದಾಗಿ ಈಗಾಗಲೇ 3 ಲಕ್ಷಕ್ಕೂ ಹೆಚ್ಚು ಪಂಪ್‌ಸೆಟ್‌ಗಳನ್ನು ಯಶಸ್ವಿಯಾಗಿ ಸಕ್ರಮಗೊಳಿಸಿ, ಅವುಗಳಿಗೆ ಅಧಿಕೃತ ವಿದ್ಯುತ್ ಸಂಪರ್ಕ ನೀಡಲಾಗಿದೆ.
  • ಉಳಿದಿರುವ ಸುಮಾರು 1.5 ರಿಂದ 2 ಲಕ್ಷ ಪಂಪ್‌ಸೆಟ್‌ಗಳಿಗೆ ಕಾನೂನುಬದ್ಧವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಕ್ರಿಯೆಯು ಪ್ರಸ್ತುತ ಜಾರಿಯಲ್ಲಿದೆ.
  • ಮುಂದಿನ ಒಂದು ವರ್ಷದ ಅವಧಿಯೊಳಗೆ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿ, ಪ್ರತಿಯೊಬ್ಬ ಅರ್ಹ ರೈತರಿಗೂ ಅಧಿಕೃತ RR ಸಂಖ್ಯೆ ನೀಡಬೇಕೆಂಬ ಗುರಿಯನ್ನು ಇಂಧನ ಇಲಾಖೆ ಹಾಕಿಕೊಂಡಿದೆ.

ಅರ್ಹತಾ ಮಾನದಂಡಗಳು ಏನು?

  • ಒಂದು ವೇಳೆ ರೈತರ ಪಂಪ್‌ಸೆಟ್ ಹತ್ತಿರದ ಟ್ರಾನ್ಸ್‌ಫಾರ್ಮರ್‌ನಿಂದ 500 ಮೀಟರ್ ಒಳಗಿದ್ದರೆ, ಅಸ್ತಿತ್ವದಲ್ಲಿರುವ ವಿದ್ಯುತ್ ಜಾಲದ ಮೂಲಕವೇ ನೇರವಾಗಿ ಸಂಪರ್ಕವನ್ನು ಸಕ್ರಮಗೊಳಿಸಲಾಗುತ್ತದೆ.
  • ಈ ವ್ಯಾಪ್ತಿಯಲ್ಲಿರುವ ರೈತರಿಗೆ ವಿದ್ಯುತ್‌ ವಿತರಣಾ ಸಂಸ್ಥೆಗಳ ಮೂಲಸೌಕರ್ಯಗಳನ್ನು ಒದಗಿಸಿ, ಅಧಿಕೃತ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಡುತ್ತವೆ.
  • ಟ್ರಾನ್ಸ್‌ಫಾರ್ಮರ್‌ನಿಂದ 500 ಮೀಟರ್‌ಗಿಂತ ಹೆಚ್ಚಿನ ದೂರದಲ್ಲಿರುವ ಪಂಪ್‌ಸೆಟ್‌ಗಳಿಗೆ ಸಾಂಪ್ರದಾಯಿಕ ವಿದ್ಯುತ್ ಕಂಬಗಳ ಮೂಲಕ ಸಂಪರ್ಕ ನೀಡುವುದು ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಕಷ್ಟಸಾಧ್ಯವಾಗಿರುತ್ತದೆ.
  • ಇಂತಹ ಸಂದರ್ಭಗಳಲ್ಲಿ ಸರ್ಕಾರವು ರೈತರಿಗೆ ಸಾಂಪ್ರದಾಯಿಕ ವಿದ್ಯುತ್‌ಗೆ ಕಾಯುವ ಬದಲು, ಸೌರಶಕ್ತಿ ಚಾಲಿತ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಳ್ಳಲು ಹೆಚ್ಚಿನ ಉತ್ತೇಜನ ನೀಡುತ್ತಿದೆ.

ಕುಸುಮ್-ಸಿ ಯೋಜನೆಯಡಿ ಪ್ರಯೋಜನಗಳು

  • ರೈತರು ರಾತ್ರಿ ಸಮಯದಲ್ಲಿ ಹಾವು-ಚೇಳುಗಳ ಭಯದಲ್ಲಿ ಅಥವಾ ಚಳಿಯಲ್ಲಿ ಹೊಲಕ್ಕೆ ಹೋಗುವ ಸಂಕಷ್ಟವನ್ನು ತಪ್ಪಿಸಲು, ಈ ಯೋಜನೆಯಡಿ ಹಗಲಿನಲ್ಲೇ ನಿರಂತರವಾಗಿ 7 ಗಂಟೆಗಳ ಕಾಲ ವಿದ್ಯುತ್ ಪೂರೈಸಲು ಸರ್ಕಾರ ಕ್ರಮ ಕೈಗೊಂಡಿದೆ.
  • ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡುವ ಫೀಡರ್‌ಗಳನ್ನು ಸೌರಶಕ್ತಿಯ ಮೂಲಕ ಆಧುನೀಕರಿಸಲಾಗುತ್ತಿದೆ. ಇದರಿಂದಾಗಿ ವಿದ್ಯುತ್ ಜಾಲದ ಮೇಲಿನ ಒತ್ತಡ ಕಡಿಮೆಯಾಗಿ, ರೈತರಿಗೆ ಗುಣಮಟ್ಟದ ವಿದ್ಯುತ್ ಲಭ್ಯವಾಗುತ್ತದೆ.
  • ಸೌರ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಳ್ಳುವ ರೈತರಿಗೆ ಆರ್ಥಿಕ ಹೊರೆಯಾಗದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಒಟ್ಟು ವೆಚ್ಚದ ಶೇ. 80 ರಷ್ಟು ಸಹಾಯಧನವನ್ನು ನೀಡುತ್ತಿವೆ.
  • ಈ ಯೋಜನೆಯಡಿ ರೈತರು ಪಂಪ್‌ಸೆಟ್‌ನ ಒಟ್ಟು ಮೊತ್ತದಲ್ಲಿ ಕೇವಲ ಶೇ. 20 ರಷ್ಟು ಅಲ್ಪ ಮೊತ್ತವನ್ನು ಮಾತ್ರ ಪಾವತಿಸಿ, ಸ್ವಂತ ಸೌರಶಕ್ತಿ ಪಂಪ್‌ಸೆಟ್ ಅನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಳ್ಳಬಹುದು.

ರೈತರಿಗೆ ಆಗುವ ಪ್ರಯೋಜನಗಳು

ಅಕ್ರಮ-ಸಕ್ರಮ ಯೋಜನೆಯಡಿ ಪಂಪ್‌ಸೆಟ್ ಸಕ್ರಮಗೊಳಿಸುವುದರಿಂದ ರೈತರಿಗೆ ಹಲವಾರು ಮಹತ್ವದ ಪ್ರಯೋಜನಗಳು ದೊರೆಯುತ್ತವೆ. ಮೊದಲನೆಯದಾಗಿ, ಇದು ರೈತರಿಗೆ ಕಾನೂನುಬದ್ಧ ರಕ್ಷಣೆ ನೀಡುತ್ತದೆ. ಇದರಿಂದಾಗಿ ದಂಡ ಪಾವತಿಸುವ ಅಥವಾ ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಭೀತಿಯಿಲ್ಲದೆ ನಿಶ್ಚಿಂತೆಯಿಂದ ಕೃಷಿ ಚಟುವಟಿಕೆಗಳನ್ನು ಮುಂದುವರಿಸಬಹುದು. ಎರಡನೆಯದಾಗಿ, ಸಂಪರ್ಕವು ಅಧಿಕೃತಗೊಂಡ ನಂತರ ಟ್ರಾನ್ಸ್‌ಫಾರ್ಮರ್ ಸುಟ್ಟು ಹೋದರೆ ಅಥವಾ ವಿದ್ಯುತ್ ಕಂಬ ಹಾಗೂ ತಂತಿಗಳಿಗೆ ಹಾನಿಯಾದರೆ, ಸಂಬಂಧಪಟ್ಟ ಎಸ್ಕಾಂಗಳೇ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಉಚಿತವಾಗಿ ದುರಸ್ತಿ ಮಾಡಿಕೊಡುತ್ತವೆ. ಇವೆಲ್ಲಕ್ಕಿಂತ ಮುಖ್ಯವಾಗಿ, ಸಕ್ರಮಗೊಂಡ ಪಂಪ್‌ಸೆಟ್‌ಗಳಿಗೆ ಅಧಿಕೃತ RR ಸಂಖ್ಯೆ ದೊರೆಯುವುದರಿಂದ, ರೈತರು ಸರ್ಕಾರದ ಉಚಿತ ವಿದ್ಯುತ್ ಅಥವಾ ರಿಯಾಯಿತಿ ದರದ ವಿದ್ಯುತ್ ಯೋಜನೆಗಳಿಗೆ ನೇರವಾಗಿ ಅರ್ಹರಾಗುತ್ತಾರೆ ಮತ್ತು ಸೌರ ಪಂಪ್‌ಸೆಟ್ ಅಳವಡಿಕೆಗೆ ಸಿಗುವ ಬೃಹತ್ ಸಬ್ಸಿಡಿ ಸೌಲಭ್ಯವನ್ನೂ ಪಡೆಯಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲನೆಯದಾಗಿ, ರೈತರು ತಮ್ಮ ವ್ಯಾಪ್ತಿಗೆ ಬರುವ ಬೆಸ್ಕಾಂ (BESCOM), ಹೆಸ್ಕಾಂ (HESCOM), ಮೆಸ್ಕಾಂ (MESCOM), ಚೆಸ್ಕಾಂ (CESC) ಅಥವಾ ಗೆಸ್ಕಾಂ (GESCOM) ಕಚೇರಿಗೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಯನ್ನು ಸಂಪರ್ಕಿಸಬೇಕು.
  • ಅರ್ಜಿಯೊಂದಿಗೆ ಜಮೀನಿನ ಮಾಲೀಕತ್ವವನ್ನು ದೃಢೀಕರಿಸುವ ಪಹಣಿ (RTC), ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ ಮತ್ತು ಅಕ್ರಮ ಸಂಪರ್ಕದ ಕುರಿತಾದ ಸ್ವಯಂ ಘೋಷಣಾ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.
  • ಸಕ್ರಮೀಕರಣ ಪ್ರಕ್ರಿಯೆಯನ್ನು ಆರಂಭಿಸಲು ಸರ್ಕಾರ ನಿಗದಿಪಡಿಸಿರುವ ಅಂದಾಜು 10,000 ರೂ. ಶುಲ್ಕವನ್ನು ಪಾವತಿಸಬೇಕು (ಈ ಮೊತ್ತವು ಸರ್ಕಾರದ ಕಾಲಕಾಲದ ಆದೇಶದಂತೆ ಬದಲಾಗುವ ಸಾಧ್ಯತೆ ಇರುತ್ತದೆ).
  • ದಾಖಲೆಗಳನ್ನು ಸಲ್ಲಿಸಿದ ನಂತರ, ಎಸ್ಕಾಂ ಅಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿ ಪಂಪ್‌ಸೆಟ್‌ನ ಸಾಮರ್ಥ್ಯ ಮತ್ತು ಟ್ರಾನ್ಸ್‌ಫಾರ್ಮರ್‌ನಿಂದ ಇರುವ ಅಂತರವನ್ನು ತಾಂತ್ರಿಕವಾಗಿ ಪರಿಶೀಲಿಸುತ್ತಾರೆ.
  • ತಪಾಸಣೆ ಯಶಸ್ವಿಯಾದ ನಂತರ, ನಿಮ್ಮ ಸಂಪರ್ಕವನ್ನು ಕಾನೂನುಬದ್ಧಗೊಳಿಸಿ ಅಧಿಕೃತವಾದ RR ಸಂಖ್ಯೆಯನ್ನು ನೀಡಲಾಗುತ್ತದೆ. ಇದರಿಂದ ನೀವು ಸರ್ಕಾರದ ಎಲ್ಲಾ ವಿದ್ಯುತ್ ಸೌಲಭ್ಯಗಳನ್ನು ಪಡೆಯಲು ಅರ್ಹರಾಗುತ್ತೀರಿ.

ಸಹಾಯವಾಣಿ ಸಂಖ್ಯೆ

ಹೆಚ್ಚಿನ ಮಾಹಿತಿಗಾಗಿ ಅಥವಾ ದೂರುಗಳಿಗಾಗಿ ಕರ್ನಾಟಕದ ಉಚಿತ ವಿದ್ಯುತ್ ಸಹಾಯವಾಣಿ ಸಂಖ್ಯೆ 1912 ಕ್ಕೆ ಕರೆ ಮಾಡಬಹುದು.

]]>
Tue, 20 Jan 2026 06:57:37 +0530 shivuagrico
Yashsvini yojane 2026&ಯಶಸ್ವಿನಿ ಯೋಜನೆಯಡಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆ,ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ನಿಗಧಿ https://krushirushi.in/Yashsvini-yojane-2026 https://krushirushi.in/Yashsvini-yojane-2026 Yashsvini yojane 2026-ಯಶಸ್ವಿನಿ ಯೋಜನೆಯಡಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆ,ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ನಿಗಧಿ

ಕರ್ನಾಟಕ ಸರ್ಕಾರವು ಸಹಕಾರ ಸಂಘಗಳ ಸದಸ್ಯರಿಗಾಗಿ ಜಾರಿಗೆ ತಂದಿರುವ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯು ಗ್ರಾಮೀಣ ಮತ್ತು ನಗರ ಪ್ರದೇಶದ ಸಹಕಾರಿ ಸದಸ್ಯರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವ ಯೋಜನೆಯಾಗಿದೆ. ಯಶಸ್ವಿನಿ ಯೋಜನೆಯು ಸಹಕಾರಿ ಕುಟುಂಬಗಳಿಗೆ ಆಪತ್ಕಾಲದ ಮಿತ್ರನಿದ್ದಂತೆ. ಈ ಯೋಜನೆಯಡಿ 2025-26ನೇ ಸಾಲಿನ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಸಹಕಾರ ಸಂಘಗಳ ಸದಸ್ಯರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಮರುಜಾರಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಏನಿದು ಯಶಸ್ವಿನಿ ಆರೋಗ್ಯ ವಿಮೆ ಯೋಜನೆ? ಪ್ರಯೋಜನಗಳೇನು? ನೋಂದಣಿ ಮಾಡುವುದು ಹೇಗೆ? ಇತ್ಯಾದಿ ಮಾಹಿತಿಗಳು ಇಲ್ಲಿವೆ.

ಏನಿದು ಯಶಸ್ವಿನಿ ಆರೋಗ್ಯ ಯೋಜನೆ?

ಯಶಸ್ವಿನಿ ಆರೋಗ್ಯ ಯೋಜನೆಯು ಕರ್ನಾಟಕ ಸರ್ಕಾರದ ಒಂದು ಮಹತ್ವಾಕಾಂಕ್ಷೆಯ ನಗದು ರಹಿತ ಚಿಕಿತ್ಸಾ ಯೋಜನೆಯಾಗಿದೆ. ಇದು ರಾಜ್ಯದ ಸಹಕಾರ ಸಂಘಗಳ ಸದಸ್ಯರು ಮತ್ತು ಅವರ ಕುಟುಂಬದವರಿಗೆ ಅಲ್ಪ ಮೊತ್ತದ ವಾರ್ಷಿಕ ವಂತಿಗೆಯೊಂದಿಗೆ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತದೆ. ಈ ಯೋಜನೆಯಡಿ ನೋಂದಾಯಿತ ಫಲಾನುಭವಿಗಳು ರಾಜ್ಯಾದ್ಯಂತ ಇರುವ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ವರ್ಷಕ್ಕೆ ಗರಿಷ್ಠ 5 ಲಕ್ಷ ರೂ.ದವರೆಗೆ ಸುಮಾರು 2,128 ಕ್ಕೂ ಹೆಚ್ಚು ವಿವಿಧ ರೀತಿಯ ಶಸ್ತ್ರಚಿಕಿತ್ಸೆ ಮತ್ತು ICU ಚಿಕಿತ್ಸೆಗಳನ್ನು ಪಡೆಯಬಹುದು. ರಾಜ್ಯದ ಎಲ್ಲಾ ಸಹಕಾರಿಗಳ ಮತ್ತು ರೈತರ ನಿರಂತರ ಒತ್ತಾಯ ಹಾಗೂ ಬೇಡಿಕೆ ಪರಿಗಣಿಸಿ ಈ ಹಿಂದೆ 2018ರಲ್ಲಿ ಸ್ಥಗಿತಗೊಳಿಸಿದ್ದ ಯಶಸ್ವಿನಿ ಯೋಜನೆಯನ್ನು ಪುನರ್ ಜಾರಿಗೊಳಿಸಲು ರಾಜ್ಯ ಸರ್ಕಾರವು ತೀರ್ಮಾನಿಸಿ, 2022-23ನೇ ಸಾಲಿನ ಆಯವ್ಯಯದಲ್ಲಿ ಪರಿಷ್ಕೃತ ಯಶಸ್ವಿನಿ ಯೋಜನೆಯನ್ನು ಘೋಷಣೆ ಮಾಡಿದೆ. ಯೋಜನೆ ಜಾರಿಗಾಗಿ “ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್”ಅನ್ನು ರಚಿಸಿದ್ದು, ಇದಕ್ಕೆ ಮಾನ್ಯ ಮುಖ್ಯಮಂತ್ರಿಗಳು ಮಹಾ ಪೋಷಕರಾಗಿ, ಸಹಕಾರ ಸಚಿವರು ಪೋಷಕರಾಗಿ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಸಹಕಾರ ಇಲಾಖೆ ಇವರು ಟ್ರಸ್ಟ್‌ನ ಅಧ್ಯಕ್ಷರಾಗಿರುತ್ತಾರೆ.

ಯೋಜನೆಯ ಪ್ರಮುಖ ಸೌಲಭ್ಯಗಳು

  • ನಗದು ರಹಿತ ಚಿಕಿತ್ಸೆ: ಯಶಸ್ವಿನಿ ಯೋಜನೆಯಡಿ ಫಲಾನುಭವಿಗಳು ಆಸ್ಪತ್ರೆಗೆ ದಾಖಲಾದಾಗ ಯಾವುದೇ ಹಣ ಪಾವತಿಸುವ ಅಗತ್ಯವಿರುವುದಿಲ್ಲ; ಕೇವಲ ಯಶಸ್ವಿನಿ ಕಾರ್ಡ್ ತೋರಿಸುವ ಮೂಲಕ ನೇರವಾಗಿ ನಗದು ರಹಿತ ಚಿಕಿತ್ಸೆ ಪಡೆಯಬಹುದು.
  • ವಾರ್ಷಿಕ ಚಿಕಿತ್ಸಾ ಮಿತಿ: ಈ ಯೋಜನೆಯಡಿ ನೋಂದಾಯಿತ ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ ಗರಿಷ್ಠ 5 ಲಕ್ಷ ರೂಪಾಯಿಗಳವರೆಗೆ ಆಗುವ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.
  • ಚಿಕಿತ್ಸೆಗಳ ಲಭ್ಯತೆ: ಯೋಜನೆಯಲ್ಲಿ ಸುಮಾರು 1,650 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳು ಮತ್ತು ಐಸಿಯು (ICU) ಸೇರಿದಂತೆ ಒಟ್ಟು 2,128 ವಿವಿಧ ರೀತಿಯ ವೈದ್ಯಕೀಯ ಚಿಕಿತ್ಸೆಗಳು ಲಭ್ಯವಿವೆ.
  • ಆಸ್ಪತ್ರೆಗಳ ಜಾಲ: ಈ ಸೌಲಭ್ಯವು ರಾಜ್ಯಾದ್ಯಂತ ಇರುವ ನೂರಾರು ನೋಂದಾಯಿತ ಸರ್ಕಾರಿ ಮತ್ತು ಖಾಸಗಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಮಾತ್ರ ದೊರೆಯಲಿದ್ದು, ಸದಸ್ಯರು ಚಿಕಿತ್ಸೆಗೂ ಮುನ್ನ ಆಸ್ಪತ್ರೆಯು ಈ ಯೋಜನೆಗೆ ಒಳಪಟ್ಟಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು.

ಸದಸ್ಯತ್ವ ಪಡೆಯಲು ಅರ್ಹತೆಗಳು

  • ಕರ್ನಾಟಕ ರಾಜ್ಯದ ಯಾವುದೇ ನೋಂದಾಯಿತ ಸಹಕಾರ ಸಂಘದಲ್ಲಿ ಕನಿಷ್ಠ 3 ತಿಂಗಳಿಂದ ಸದಸ್ಯರಾಗಿರುವವರು ಈ ಯೋಜನೆಗೆ ಅರ್ಹರು; ಆದರೆ ಹೊಸದಾಗಿ ಅಸ್ತಿತ್ವಕ್ಕೆ ಬಂದ ಸಂಘಗಳ ಸದಸ್ಯರಿಗೆ ಕೇವಲ 1 ತಿಂಗಳ ಸದಸ್ಯತ್ವವಿದ್ದರೂ ಅರ್ಜಿ ಸಲ್ಲಿಸಲು ಅವಕಾಶವಿದೆ.
  • ಸಹಕಾರ ಸಂಘಗಳಲ್ಲಿ ಕನಿಷ್ಠ 3 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿರುವ ಮತ್ತು ಮಾಸಿಕ 30,000 ರೂಪಾಯಿಗಳಿಗಿಂತ ಕಡಿಮೆ ಒಟ್ಟು ವೇತನ ಪಡೆಯುತ್ತಿರುವ ನೌಕರರು ಈ ಯೋಜನೆಯ ಲಾಭ ಪಡೆಯಬಹುದು.
  • ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿದಾರರಿಗೆ ಗರಿಷ್ಠ 75 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
  • ಈ ಯೋಜನೆಯ ಪ್ರಯೋಜನವು ಕೇವಲ ಮೂಲ ಸದಸ್ಯರಿಗೆ ಮಾತ್ರವಲ್ಲದೆ ಅವರ ಕುಟುಂಬದ ಸದಸ್ಯರಾದ ಪತಿ ಅಥವಾ ಪತ್ನಿ, ಮಕ್ಕಳು ಮತ್ತು ಆಶ್ರಿತ ಪೋಷಕರಿಗೂ ದೊರೆಯುತ್ತದೆ.

ಯಾರು ಅರ್ಹರಲ್ಲ?

ಸರ್ಕಾರಿ ನೌಕರರು, ಖಾಸಗಿ ಕಂಪನಿಯಲ್ಲಿ 30,000 ರೂ.ಕ್ಕಿಂತ ಹೆಚ್ಚು ವೇತನ ಪಡೆಯುವವರು ಮತ್ತು ಈಗಾಗಲೇ ಬೇರೆ ಆರೋಗ್ಯ ವಿಮೆ ಹೊಂದಿರುವವರು ಈ ಯೋಜನೆಗೆ ಅರ್ಹರಲ್ಲ.

ವಂತಿಗೆ ಮೊತ್ತ ಎಷ್ಟು?

  • ಗ್ರಾಮೀಣ ಭಾಗದ ಸಹಕಾರ ಸಂಘಗಳ ಸದಸ್ಯರ ಗರಿಷ್ಠ ನಾಲ್ಕು ಜನರ ಕುಟುಂಬಕ್ಕೆ ವರ್ಷಕ್ಕೆ 500 ರೂ. ವಂತಿಗೆ ನಿಗದಿಪಡಿಸಲಾಗಿದೆ. ಒಂದು ವೇಳೆ ಕುಟುಂಬದಲ್ಲಿ ನಾಲ್ಕಕ್ಕಿಂತ ಹೆಚ್ಚು ಸದಸ್ಯರಿದ್ದರೆ, ಪ್ರತಿ ಹೆಚ್ಚುವರಿ ಸದಸ್ಯರಿಗೆ ತಲಾ 100 ರೂ. ಪಾವತಿಸಬೇಕಾಗುತ್ತದೆ.
  • ನಗರ ಪ್ರದೇಶದ ಸಹಕಾರ ಸಂಘಗಳ ಸದಸ್ಯರ ಗರಿಷ್ಠ ನಾಲ್ಕು ಜನರ ಕುಟುಂಬಕ್ಕೆ ವಾರ್ಷಿಕ 1,000 ರೂ. ವಂತಿಗೆ ಇರುತ್ತದೆ. ಈ ಕುಟುಂಬಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಸದಸ್ಯರಿದ್ದಲ್ಲಿ, ಪ್ರತಿ ಹೆಚ್ಚುವರಿ ಸದಸ್ಯರಿಗೆ ತಲಾ 200 ರೂ.ರಂತೆ ಹೆಚ್ಚಿನ ಹಣ ಪಾವತಿಸಬೇಕು.
  • SC ಮತ್ತು ST ಸಮುದಾಯದ ಸಹಕಾರಿ ಸದಸ್ಯರಿಗೆ ಈ ಯೋಜನೆಯು ಸಂಪೂರ್ಣ ಉಚಿತವಾಗಿದ್ದು, ಅವರ ವಂತಿಗೆ ಮೊತ್ತವನ್ನು ಸರ್ಕಾರವೇ ಭರಿಸುತ್ತದೆ.
  • ಪರಿಶಿಷ್ಟ ಜಾತಿ ಅಥವಾ ಪಂಗಡದ ಸದಸ್ಯರು ಈ ಸೌಲಭ್ಯ ಪಡೆಯಲು ತಮ್ಮ ಜಾತಿ ಪ್ರಮಾಣ ಪತ್ರದಲ್ಲಿರುವ ಆರ್.ಡಿ (R.D) ಸಂಖ್ಯೆಯನ್ನು ಅರ್ಜಿಯೊಂದಿಗೆ ಕಡ್ಡಾಯವಾಗಿ ನಮೂದಿಸಬೇಕು.

ನಿಯಮಗಳು ಮತ್ತು ನಿಬಂಧನೆಗಳು

  • ಯೋಜನೆಯ ನಿಯಮದಂತೆ ಫಲಾನುಭವಿಗಳು ಆಸ್ಪತ್ರೆಯ ಜನರಲ್ ವಾರ್ಡ್‌ನಲ್ಲಿ ಮಾತ್ರ ಚಿಕಿತ್ಸೆ ಪಡೆಯಲು ಅರ್ಹರಾಗಿರುತ್ತಾರೆ. ಒಂದು ವೇಳೆ ಸದಸ್ಯರು ತಮ್ಮ ಇಚ್ಛೆಯಂತೆ ಸ್ಪೆಷಲ್ ವಾರ್ಡ್ ಅಥವಾ ಸೆಮಿ-ಸ್ಪೆಷಲ್ ವಾರ್ಡ್ ಬಯಸಿದಲ್ಲಿ, ಅದರ ಹೆಚ್ಚುವರಿ ವೆಚ್ಚವನ್ನು ಅವರೇ ಪಾವತಿಸಬೇಕಾಗುತ್ತದೆ.
  • ಮೊಣಕಾಲು ಚಿಪ್ಪು ಬದಲಾವಣೆ ಅಥವಾ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ಲೆನ್ಸ್‌ಗಳಂತಹ ಇಂಪ್ಲಾಂಟ್ಸ್‌ಗಳ ಮೂಲ ದರವು ಯೋಜನೆಯ ಪ್ಯಾಕೇಜ್‌ನಲ್ಲಿ ಸೇರಿರುತ್ತದೆ. ಆದರೆ ಸದಸ್ಯರು ಉನ್ನತ ದರ್ಜೆಯ ಅಥವಾ ಹೆಚ್ಚಿನ ಬೆಲೆಯ ಇಂಪ್ಲಾಂಟ್ಸ್‌ಗಳನ್ನು ಬಳಸಲು ಬಯಸಿದರೆ, ಪ್ಯಾಕೇಜ್ ದರಕ್ಕಿಂತ ಹೆಚ್ಚಿನದಾದ ವ್ಯತ್ಯಾಸದ ಮೊತ್ತವನ್ನು ಸ್ವತಃ ಭರಿಸಬೇಕು.
  • ಈ ಯೋಜನೆಯಡಿ ಹೆರಿಗೆ ಸೌಲಭ್ಯವು ಕೇವಲ ಎರಡು ಜೀವಂತ ಮಕ್ಕಳಿಗೆ ಅಥವಾ ಗರಿಷ್ಠ ಎರಡು ಹೆರಿಗೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
  • ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆಯುವಾಗ (ಮೂರು ತಿಂಗಳ ಅವಧಿಗೆ) ಗರಿಷ್ಠ 200 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಈ ಪೈಕಿ 100 ರೂ. ಗಳನ್ನು ಯಶಸ್ವಿನಿ ಟ್ರಸ್ಟ್ ಭರಿಸುತ್ತದೆ.

    ಯಾವೆಲ್ಲಾ ಚಿಕಿತ್ಸೆಗಳು ಲಭ್ಯ?

    • ಹೃದಯ ಮತ್ತು ಸಾಮಾನ್ಯ ರೋಗಗಳು: ಹೃದಯ ಸಂಬಂಧಿ ಕಾಯಿಲೆಗಳು, ಸಾಮಾನ್ಯ ಶಾರೀರಿಕ ಕಾಯಿಲೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳು.
    • ಮೂಳೆ ಮತ್ತು ನರ ರೋಗಗಳು: ಮೂಳೆ ರೋಗಗಳು, ನರವೈಜ್ಞಾನಿಕ ಶಸ್ತ್ರಚಿಕಿತ್ಸೆ ಮತ್ತು ನರ ಸಂಬಂಧಿತ ಕಾಯಿಲೆಗಳು.
    • ಕ್ಯಾನ್ಸರ್ ಮತ್ತು ನಾಳೀಯ ಚಿಕಿತ್ಸೆ: ಶಸ್ತ್ರಚಿಕಿತ್ಸಾ ಆಂಕೊಲಾಜಿ ಮತ್ತು ನಾಳೀಯ ಶಸ್ತ್ರಚಿಕಿತ್ಸೆ .
    • ವಿಶೇಷ ವಿಭಾಗಗಳು: ಕಿವಿ, ಮೂಗು ಮತ್ತು ಗಂಟಲು ರೋಗಗಳು ಹಾಗೂ ಕಣ್ಣಿನ ಕಾಯಿಲೆಗಳ ಚಿಕಿತ್ಸೆ.
    • ಮಹಿಳೆ ಮತ್ತು ಮಕ್ಕಳ ಚಿಕಿತ್ಸೆ: ಪ್ರಸೂತಿ ಮತ್ತು ಸ್ತ್ರೀರೋಗಗಳು, ಯುರೋಲಜಿ, ಹಾಗೂ ನವಜಾತ ಶಿಶು ಮತ್ತು ಮಕ್ಕಳ ಚಿಕಿತ್ಸೆ.
    • ತುರ್ತು ಮತ್ತು ಅಪಘಾತ ಪ್ರಕರಣಗಳು: ನಾಯಿ ಕಡಿತ ಮತ್ತು ಹಾವು ಕಡಿತಕ್ಕೆ ಚಿಕಿತ್ಸೆ. ಕೃಷಿ ಉಪಕರಣಗಳನ್ನು ಬಳಸುವಾಗ ಸಂಭವಿಸುವ ಅಪಘಾತಗಳು. ಕೆಲವು ನಿರ್ದಿಷ್ಟ ರೀತಿಯ ಸುಟ್ಟಗಾಯಗಳು. ಇತರ ಸಾಮಾನ್ಯ ತುರ್ತು ವೈದ್ಯಕೀಯ ಪರಿಸ್ಥಿತಿಗಳು ಇತ್ಯಾದಿ.

    ನೋಂದಣಿಗೆ ಕೊನೆಯ ದಿನಾಂಕ ಎಂದು?

    ಈ ಯೋಜನೆಯಡಿ 2026ರ ಜನವರಿ 03ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 31, 2026 ಕೊನೆಯ ದಿನಾಂಕವಾಗಿದೆ. ನೋಂದಾಯಿತ ಸದಸ್ಯರಿಗೆ ಮಾರ್ಚ್ 01, 2026ರಿಂದ ಯಶಸ್ವಿನಿ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಲಾಗುವುದು ಮತ್ತು ಈ ಕಾರ್ಡ್ ಬಳಸಿ ಚಿಕಿತ್ಸೆ ಪಡೆಯುವ ಅವಧಿಯು ಏಪ್ರಿಲ್ 01, 2026 ರಿಂದ ಮಾರ್ಚ್ 31, 2027 ರವರೆಗೆ ಇರುತ್ತದೆ. ಆದ್ದರಿಂದ ಅರ್ಹ ಸದಸ್ಯರು ತಡಮಾಡದೆ ತಮ್ಮ ಹತ್ತಿರದ ಸಹಕಾರ ಸಂಘಗಳಲ್ಲಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.

ಯೋಜನೆಗೆ ನೋಂದಣಿ ಮಾಡುವುದು ಹೇಗೆ?

  • ನೀವು ಸದಸ್ಯರಾಗಿರುವ ಅಥವಾ ಷೇರು ಹೊಂದಿರುವ ನಿಮ್ಮ ಹತ್ತಿರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸಹಕಾರಿ ಬ್ಯಾಂಕ್ ಅಥವಾ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಭೇಟಿ ನೀಡಿ.
  • ಸಂಘದ ಕಚೇರಿಯಲ್ಲಿ ಲಭ್ಯವಿರುವ 'ಯಶಸ್ವಿನಿ ನೋಂದಣಿ ಅರ್ಜಿ'ಯನ್ನು ಪಡೆದು, ಕುಟುಂಬದ ಎಲ್ಲಾ ಸದಸ್ಯರ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.
  • ಅರ್ಜಿಯೊಂದಿಗೆ ಕುಟುಂಬದ ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್ ಪ್ರತಿ, ರೇಷನ್ ಕಾರ್ಡ್ ಪ್ರತಿ ಮತ್ತು ತಲಾ 2 ಇತ್ತೀಚಿನ ಭಾವಚಿತ್ರಗಳನ್ನು (Photos) ನೀಡಿ.
  • ತಮ್ಮ ಕುಟುಂಬದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ (ಗ್ರಾಮೀಣ ಭಾಗದವರಿಗೆ 500 ರೂ., ನಗರ ಭಾಗದವರಿಗೆ 1,000 ರೂ. ನಿಗದಿತ ವಂತಿಗೆ ಮೊತ್ತವನ್ನು ಸಂಘದ ಕಚೇರಿಯಲ್ಲಿ ಪಾವತಿಸಿ ರಸೀದಿ ಪಡೆಯಿರಿ.
  • ಅರ್ಜಿಯನ್ನು ಸಲ್ಲಿಸಿದ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ನೋಂದಣಿಯ ಬಗ್ಗೆ ಸಂದೇಶ ಬರಲಿದೆ. ಮಾರ್ಚ್ 1ರ ನಂತರ ನಿಮ್ಮ ಸಹಕಾರ ಸಂಘದ ಮೂಲಕವೇ ಪ್ಲಾಸ್ಟಿಕ್ ಯಶಸ್ವಿನಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬಹುದು. ಕಾರ್ಡ್ ಕಳೆದುಕೊಂಡರೆ 250 ರೂ. ಪಾವತಿಸಿ ಡೂಪ್ಲಿಕೇಟ್ ಕಾರ್ಡ್ ಪಡೆಯಬಹುದು.



ಅಗತ್ಯ ವಿರುವ ದಾಖಲೆಗಳು

  • ಆಧಾರ್ ಕಾರ್ಡ್
  • ಪಡಿತರ ಚೀಟಿ
  • ಸಹಕಾರ ಸಂಘದ ಸದಸ್ಯತ್ವ ಪುರಾವೆ
  • ಕುಟುಂಬದ ಪ್ರತಿಯೊಬ್ಬ ಸದಸ್ಯರ 2 ಭಾವಚಿತ್ರಗಳು
  • ಸದಸ್ಯರ ಮೊಬೈಲ್ ಸಂಖ್ಯೆ

]]>
Tue, 20 Jan 2026 06:22:21 +0530 shivuagrico
Baddi sahayadana&ಕೇವಲ 4% ಬಡ್ಡಿ ದರದಲ್ಲಿ 5 ಕೋಟಿವರೆಗೆ ಸಾಲಸೌಲಭ್ಯ https://krushirushi.in/Baddi-sahayadana-2397 https://krushirushi.in/Baddi-sahayadana-2397 Baddi sahayadana-ಕೇವಲ 4% ಬಡ್ಡಿ ದರದಲ್ಲಿ 5 ಕೋಟಿವರೆಗೆ ಸಾಲಸೌಲಭ್ಯ

ಮಹಿಳಾ ಉದ್ಯಮಿಗಳಿಗೆ ಕರ್ನಾಟಕ ಸರ್ಕಾರದಿಂದ ಸಿಹಿ ಸುದ್ದಿ. ಕೇವಲ ಶೇ. 4ರಷ್ಟು ಬಡ್ಡಿದರದಲ್ಲಿ ಸಾಲ ಪಡೆಯುವ ಅವಕಾಶ. ಹೊಸ ಉದ್ಯಮ ಸ್ಥಾಪನೆಗೆ ಅಥವಾ ವಿಸ್ತರಣೆಗೆ ರೂ. 5 ಲಕ್ಷದಿಂದ ರೂ. 5 ಕೋಟಿವರೆಗೆ ಸಾಲ ಲಭ್ಯ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಬಡ್ಡಿ ವ್ಯತ್ಯಾಸವನ್ನು ಭರಿಸುತ್ತದೆ. ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ವಿವರಗಳು ಲಭ್ಯ. ಈ ಕುರಿತ ವಿವರಗಳು ಇಲ್ಲಿವೆ.

ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರದ ಹಲವು ಯೋಜನೆಗಳನ್ನು ರೂಪಿಸಿದೆ. ಉದ್ಯಮಿಗಳಿಗೆ ಕಡಿಮೆ ಬಡ್ಡಿಯಲ್ಲಿ ಸಾಲವನ್ನು ನೀಡುತ್ತಿದೆ. ಕರ್ನಾಟಕ ಸರ್ಕಾರವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಅತ್ಯಂತ ಆಕರ್ಷಕವಾದ ಸಾಲ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಮಹಿಳಾ ಉದ್ಯಮಿಗಳು ಕೇವಲ ಶೇ. 4ರಷ್ಟು ನಿವ್ವಳ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಪಡೆಯಬಹುದು.

ಯೋಜನೆಯ ಪ್ರಮುಖ ಅಂಶಗಳು

  • ಸಾಲದ ಮೊತ್ತ: ಕನಿಷ್ಠ ರೂ. 5.00 ಲಕ್ಷದಿಂದ ಗರಿಷ್ಠ ರೂ. 5.00 ಕೋಟಿ (500 ಲಕ್ಷ) ವರೆಗೆ.
  • ನಿವ್ವಳ ಬಡ್ಡಿದರ: ಮಹಿಳಾ ಉದ್ಯಮಿಗಳು ಪಾವತಿಸಬೇಕಾದ ಅಂತಿಮ ಬಡ್ಡಿ ದರ ವಾರ್ಷಿಕ ಶೇ. 4 ಮಾತ್ರ.
  • ಬಡ್ಡಿ ಸಹಾಯಧನ: ಸಂಸ್ಥೆಯು ವಿಧಿಸುವ ಸಾಮಾನ್ಯ ಬಡ್ಡಿದರ ಮತ್ತು ಶೇ. 4ರ ನಡುವಿನ ವ್ಯತ್ಯಾಸದ ಮೊತ್ತವನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಸಹಾಯಧನದ ರೂಪದಲ್ಲಿ ಸಂಸ್ಥೆಗೆ ಭರಿಸುತ್ತದೆ.
  • ಅವಧಿ: ಈ ಸಹಾಯಧನವು ಸಾಲ ವಿತರಣೆಯಾದ ದಿನಾಂಕದಿಂದ ಗರಿಷ್ಠ 5 ವರ್ಷಗಳವರೆಗೆ ಮಾತ್ರ ಲಭ್ಯವಿರುತ್ತದೆ.

ಅರ್ಹತೆಗಳು ಮತ್ತು ಷರತ್ತುಗಳು

  • ಉದ್ಯಮದ ಮಾಲೀಕತ್ವ: ಏಕಸ್ವಾಮ್ಯದ ಘಟಕ, ಪಾಲುದಾರಿಕೆ ಸಂಸ್ಥೆ ಅಥವಾ ಖಾಸಗಿ ಕಂಪನಿಯಾಗಿದ್ದಲ್ಲಿ, ಮಹಿಳಾ ಪಾಲುದಾರರು/ನಿರ್ದೇಶಕರು ಕನಿಷ್ಠ ಶೇ. 51 ರಷ್ಟು ಷೇರುಗಳನ್ನು ಹೊಂದಿರಬೇಕು.
  • ಯೋಜನೆಯ ವ್ಯಾಪ್ತಿ: ಹೊಸ ಘಟಕಗಳ ಸ್ಥಾಪನೆ, ಅಸ್ತಿತ್ವದಲ್ಲಿರುವ ಘಟಕಗಳ ವಿಸ್ತರಣೆ, ಆಧುನೀಕರಣ ಅಥವಾ ತಾಂತ್ರಿಕ ಉನ್ನತೀಕರಣಕ್ಕಾಗಿ ಮಾಡುವ ಹೊಸ ಹೂಡಿಕೆಗೆ (ಕಟ್ಟಡ ಮತ್ತು ಉಪಕರಣಗಳು) ಈ ಸಾಲ ಅನ್ವಯಿಸುತ್ತದೆ.
  • ಮರುಪಾವತಿ ನಿಯಮ: ಬಡ್ಡಿ ಸಹಾಯಧನದ ಪ್ರಯೋಜನ ಪಡೆಯಲು ಸಾಲಗಾರರು ಕಂತುಗಳ ಮರುಪಾವತಿಯಲ್ಲಿ ಸುಸ್ತಿದಾರರಾಗಬಾರದು. ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದರೆ ಮಾತ್ರ ಸಹಾಯಧನ ದೊರೆಯುತ್ತದೆ.
  • ದಿನಾಂಕ: ಈ ಯೋಜನೆಯು ಮೇ 12, 2017ರ ನಂತರ ಮಂಜೂರಾದ ಸಾಲಗಳಿಗೆ ಅನ್ವಯಿಸುತ್ತದೆ.

ಅರ್ಹ ಚಟುವಟಿಕೆಗಳು

  • ಆರೋಗ್ಯ ಸೇವೆಗಳು: ಆಸ್ಪತ್ರೆಗಳು, ನರ್ಸಿಂಗ್ ಹೋಮ್, ಕಣ್ಣಿನ ಆಸ್ಪತ್ರೆ, ದಂತ ಚಿಕಿತ್ಸಾಲಯಗಳು, ಡಯಾಗ್ನಾಸ್ಟಿಕ್ ಕೇಂದ್ರಗಳು (ಎಕ್ಸರೇ, ಸ್ಕ್ಯಾನಿಂಗ್, ಲ್ಯಾಬ್).
  • ಪ್ರವಾಸೋದ್ಯಮ: ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಕೇಟರಿಂಗ್ ಸೇವೆಗಳು.
  • ತಂತ್ರಜ್ಞಾನ: ಮಾಹಿತಿ ತಂತ್ರಜ್ಞಾನ ಸೇವಾ ಕೇಂದ್ರಗಳು.
  • ಇತರೆ: ಜಿಮ್, ಸ್ಪಾ, ಆರೋಗ್ಯ ಕೇಂದ್ರಗಳು, ಇವೆಂಟ್ ಮ್ಯಾನೇಜ್‌ಮೆಂಟ್, ಅಮ್ಯೂಸ್‌ಮೆಂಟ್ ಪಾರ್ಕ್‌ಗಳು ಮತ್ತು ಕೈಗಾರಿಕಾ ವಲಯದ ವೇ-ಬ್ರಿಡ್ಜ್‌ಗಳು.

ಯಾವ ಚಟುವಟಿಕೆಗಳಿಗೆ ಸಾಲ ಸಿಗುವುದಿಲ್ಲ?

  • ರಿಯಲ್ ಎಸ್ಟೇಟ್ ಚಟುವಟಿಕೆಗಳು, ವಾಣಿಜ್ಯ ಮಾಲ್‌ಗಳು ಮತ್ತು ವಸತಿ ಸಮುಚ್ಚಯಗಳ ನಿರ್ಮಾಣ.
  • ಚಿತ್ರಮಂದಿರಗಳು ಮತ್ತು ಸಾರಿಗೆ ಸಂಬಂಧಿತ ಚಟುವಟಿಕೆಗಳು.
  • ಬೇರೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲದ ವರ್ಗಾವಣೆ.
  • ಸರ್ಕಾರಿ ಸ್ವಾಮ್ಯದ ಭೂಮಿ ಖರೀದಿಸಲು ಈ ಯೋಜನೆ ಅನ್ವಯಿಸುವುದಿಲ್ಲ.
  • ಈಗಾಗಲೇ ಬೇರೆ ಸರ್ಕಾರಿ ಯೋಜನೆಗಳಡಿ ಬಡ್ಡಿ ಸಹಾಯಧನ ಪಡೆಯುತ್ತಿರುವ ಘಟಕಗಳು.

ಬಡ್ಡಿದರ ಮತ್ತು ಸಹಾಯಧನ ಪಡೆಯುವುದು ಹೇಗೆ?

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಈ ಯೋಜನೆಯಡಿ ಮಹಿಳಾ ಉದ್ಯಮಿಗಳಿಗೆ ವಾರ್ಷಿಕ ಶೇ. 4ರಷ್ಟು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರೆಯಲಿದ್ದು, ಸಂಸ್ಥೆಯು ಸಾಲವನ್ನು ಮೊದಲು ಶೇ. 12.00 ರಿಂದ ಶೇ. 14.50 ರವರೆಗಿನ ಸಾಮಾನ್ಯ ಬಡ್ಡಿದರದಲ್ಲಿ ಮಂಜೂರು ಮಾಡುತ್ತದೆ. ಸಾಲಗಾರರು ಆರಂಭದಲ್ಲಿ ಈ ಸಾಮಾನ್ಯ ದರದಂತೆ ಕಂತುಗಳನ್ನು ಪಾವತಿಸಬೇಕಾಗುತ್ತದೆ; ಆದರೆ ಉದ್ಯಮಿಯು ಮರುಪಾವತಿಯಲ್ಲಿ ಯಾವುದೇ ವಿಳಂಬ ಮಾಡದೆ ನಿಯಮಿತವಾಗಿ ಕಂತುಗಳನ್ನು ಪಾವತಿಸಿದರೆ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ವಿಧಿಸಿದ ಸಾಮಾನ್ಯ ಬಡ್ಡಿದರ ಮತ್ತು ಶೇ. 4ರ ನಡುವಿನ ಉಳಿದ ಮೊತ್ತವನ್ನು (ವ್ಯತ್ಯಾಸವನ್ನು) ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಪ್ರತಿ ತಿಂಗಳು ಸಹಾಯಧನದ ರೂಪದಲ್ಲಿ ಮರುಪಾವತಿಸುತ್ತದೆ. ಈ ಮೂಲಕ ಮಹಿಳಾ ಉದ್ಯಮಿಗಳ ಮೇಲಿನ ಬಡ್ಡಿಯ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡಲಾಗುತ್ತದೆ. ಸಾಲದ ಮೊತ್ತದ ಶೇ. 0.50 ರಿಂದ ಶೇ. 1.00 ರವರೆಗೆ ಸಂಸ್ಕರಣಾ ಶುಲ್ಕ ಇರುತ್ತದೆ.

ಉದ್ಯಮಿಯ ಬಂಡವಾಳದ ಪಾಲು ಎಷ್ಟು?

ಈ ಯೋಜನೆಯಡಿ ಸಾಲ ಪಡೆಯಲು ಮಹಿಳಾ ಉದ್ಯಮಿಗಳು ತಮ್ಮ ಕಡೆಯಿಂದ ಹೂಡಿಕೆ ಮಾಡಬೇಕಾದ ಬಂಡವಾಳದ ಪಾಲು (ಮಾರ್ಜಿನ್ ಮನಿ) ಅವರು ಉದ್ಯಮವನ್ನು ಸ್ಥಾಪಿಸುವ ಪ್ರದೇಶದ ಮೇಲೆ ಅವಲಂಬಿತವಾಗಿರುತ್ತದೆ. ಅಂದರೆ, ಕೈಗಾರಿಕಾ ದೃಷ್ಟಿಯಿಂದ ಹಿಂದುಳಿದ ಜಿಲ್ಲೆ ಅಥವಾ ಪ್ರದೇಶಗಳಲ್ಲಿ ಉದ್ಯಮ ಪ್ರಾರಂಭಿಸುವವರಿಗೆ ಒಟ್ಟು ಯೋಜನಾ ವೆಚ್ಚದ ಶೇ. 20.00 ರಷ್ಟು ಬಂಡವಾಳ ಹೂಡಿಕೆ ಸಾಕಾಗುತ್ತದೆ. ಆದರೆ ಹಿಂದುಳಿದಿರದ ಇತರ ಸುಧಾರಿತ ಜಿಲ್ಲೆ ಅಥವಾ ಪ್ರದೇಶಗಳಲ್ಲಿ ಉದ್ಯಮ ಸ್ಥಾಪಿಸುವವರು ಯೋಜನಾ ವೆಚ್ಚದ ಶೇ. 22.50 ರಷ್ಟು ಪಾಲನ್ನು ತಮ್ಮ ಸ್ವಂತ ಬಂಡವಾಳವಾಗಿ ಹೊಂದಿರಬೇಕಾಗುತ್ತದೆ.

 

ಸಾಲ ಮರುಪಾವತಿ ಹಾಗೂ ಸಹಾಯಧನದ ಅವಧಿ ಎಷ್ಟು?

ಈ ಯೋಜನೆಯಡಿ ಬಡ್ಡಿ ಸಹಾಯಧನದ ಸೌಲಭ್ಯವು ಸಾಲದ ಮೊದಲ ಕಂತು ಬಿಡುಗಡೆಯಾದ ದಿನಾಂಕದಿಂದ ಗರಿಷ್ಠ 5 ವರ್ಷಗಳ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ. ಒಂದು ವೇಳೆ ಸಾಲದ ಒಟ್ಟು ಮರುಪಾವತಿ ಅವಧಿಯು 5 ವರ್ಷಗಳಿಗಿಂತ ಹೆಚ್ಚಿದ್ದರೂ ಸಹ, ಉದ್ಯಮಿಗಳು ಸಹಾಯಧನವನ್ನು ಕೇವಲ ಮೊದಲ 5 ವರ್ಷಗಳವರೆಗೆ ಮಾತ್ರ ಪಡೆಯಲು ಅರ್ಹರಾಗಿರುತ್ತಾರೆ. ಇನ್ನು ಸಾಲದ ಒಟ್ಟು ಮರುಪಾವತಿ ಅವಧಿ, ಮಾಸಿಕ ಕಂತುಗಳ ವಿವರ ಹಾಗೂ ಅವಧಿಪೂರ್ವ ಸಾಲ ಮನ್ನಾ ಮಾಡಲು ಇರುವ ಶುಲ್ಕಗಳ ಕುರಿತಾದ ನಿಖರ ಮಾಹಿತಿಗಾಗಿ ಅರ್ಜಿದಾರರು ತಮ್ಮ ಹತ್ತಿರದ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಶಾಖೆಯನ್ನು ನೇರವಾಗಿ ಸಂಪರ್ಕಿಸಿ ಮಾಹಿತಿ ಪಡೆಯುವುದು ಅತ್ಯಗತ್ಯವಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

  • ನಿಮ್ಮ ಉದ್ಯಮದ ವಿವರವಾದ ಯೋಜನಾ ವರದಿ ಸಿದ್ಧಪಡಿಸಿಕೊಳ್ಳಿ.
  • ಅಗತ್ಯ ದಾಖಲೆಗಳೊಂದಿಗೆ ನಿಮ್ಮ ಜಿಲ್ಲೆಯ ಹತ್ತಿರದ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಶಾಖೆಗೆ ಭೇಟಿ ನೀಡಿ.
  • ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಅಥವಾ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಚೇರಿಯನ್ನು ಸಂಪರ್ಕಿಸಬಹುದು.



ಅಗತ್ಯವಿರುವ ದಾಖಲೆಗಳು

  • ಯೋಜನಾ ವರದಿ: ಉದ್ಯಮದ ವಿವರ, ಹೂಡಿಕೆ, ಲಾಭ-ನಷ್ಟದ ಅಂದಾಜು ಮತ್ತು ಉದ್ಯೋಗಾವಕಾಶಗಳ ಬಗ್ಗೆ ಸಂಪೂರ್ಣ ಮಾಹಿತಿ ಇರುವ ವರದಿ.
  • ಗುರುತಿನ ಚೀಟಿ: ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ಪಾಸ್‌ಪೋರ್ಟ್.
  • ವಿಳಾಸದ ಪುರಾವೆ: ರೇಷನ್ ಕಾರ್ಡ್ ಅಥವಾ ಇತ್ತೀಚಿನ ವಿದ್ಯುತ್ ಬಿಲ್.
  • ಪಾನ್ ಕಾರ್ಡ್: ಉದ್ಯಮಿ ಮತ್ತು ಉದ್ಯಮದ ಹೆಸರಿನಲ್ಲಿರುವುದು ಕಡ್ಡಾಯ.
  • ಭಾವಚಿತ್ರ: ಅರ್ಜಿದಾರರ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋಗಳು.
  • ಉದ್ಯಮ ನೋಂದಣಿ ಪ್ರಮಾಣಪತ್ರ/ ಜಿಎಸ್ ಟಿ ನೋಂದಣಿ ಪ್ರಮಾಣಪತ್ರ.
  • ಕಟ್ಟಡದ ದಾಖಲೆ: ಉದ್ಯಮ ನಡೆಸುವ ಜಾಗದ ಬಾಡಿಗೆ ಒಪ್ಪಂದ ಅಥವಾ ಸ್ವಂತ ಜಾಗವಾಗಿದ್ದರೆ ಖಾತಾ/ತೆರಿಗೆ ಪಾವತಿ ರಶೀದಿ.
  • ಪರವಾನಗಿ: ಸ್ಥಳೀಯ ಸಂಸ್ಥೆಗಳಿಂದ (ಗ್ರಾಮ ಪಂಚಾಯತ್/ನಗರ ಸಭೆ) ಪಡೆದ ವ್ಯಾಪಾರ ಪರವಾನಗಿ ಅಥವಾ ಕೈಗಾರಿಕಾ ಅನುಮತಿ ಪತ್ರ.
  • ಬ್ಯಾಂಕ್ ಸ್ಟೇಟ್‌ಮೆಂಟ್: ಕಳೆದ 6 ತಿಂಗಳ ಅಥವಾ 1 ವರ್ಷದ ಉಳಿತಾಯ/ಚಾಲ್ತಿ ಖಾತೆಯ ವಹಿವಾಟಿನ ವಿವರ.
  • ಆದಾಯ ತೆರಿಗೆ ವಿವರ: ಅಸ್ತಿತ್ವದಲ್ಲಿರುವ ಘಟಕಗಳಾಗಿದ್ದರೆ ಕಳೆದ 2-3 ವರ್ಷಗಳ ಐಟಿ ರಿಟರ್ನ್ಸ್ ಫೈಲ್ಸ್.

]]>
Mon, 19 Jan 2026 10:41:25 +0530 shivuagrico
Stree Shakthi package yojane&ಸ್ವಂತ ಉದ್ಯೋಗ ಮಾಡಲು ಸಿಗಲಿದೆ ಕಡಿಮೆ ಬಡ್ಡಿ ದರದಲ್ಲಿ 2 ರಿಂದ 25 ಲಕ್ಷದವರೆಗೆ ಸಾಲಸೌಲಬ್ಯ https://krushirushi.in/Stee-shakthi-package-yojane-2396 https://krushirushi.in/Stee-shakthi-package-yojane-2396 Stree Shakthi package yojane-ಸ್ವಂತ ಉದ್ಯೋಗ ಮಾಡಲು ಸಿಗಲಿದೆ ಕಡಿಮೆ ಬಡ್ಡಿ ದರದಲ್ಲಿ 2 ರಿಂದ 25 ಲಕ್ಷದವರೆಗೆ ಸಾಲಸೌಲಬ್ಯ

ಮಹಿಳಾ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡಲು ಭಾರತೀಯ ಸ್ಟೇಟ್ ಬ್ಯಾಂಕ್‌ 'ಸ್ತ್ರೀ ಶಕ್ತಿ ಪ್ಯಾಕೇಜ್' ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ 25 ಲಕ್ಷ ರೂ.ವರೆಗೆ ಸಾಲ ಸಿಗಲಿದ್ದು, 10 ಲಕ್ಷ ರೂ.ವರೆಗೆ ಮೇಲಾಧಾರ ರಹಿತ ಸಾಲ ಲಭ್ಯವಿದೆ. ಉತ್ಪಾದನೆ, ಚಿಲ್ಲರೆ ವ್ಯಾಪಾರ ಮತ್ತು ಸೇವಾ ವಲಯಗಳಲ್ಲಿ ಮಹಿಳೆಯರು ತಮ್ಮ ಉದ್ಯಮಗಳನ್ನು ಬೆಳೆಸಲು ಇದು ಉತ್ತಮ ಅವಕಾಶ ನೀಡುತ್ತದೆ. ಈ ಕುರಿತ ವಿವರಗಳು ಇಲ್ಲಿವೆ.

ಭಾರತದಲ್ಲಿ ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸಲು ಸರ್ಕಾರ ಮತ್ತು ಬ್ಯಾಂಕುಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಕರ್ನಾಟಕದಲ್ಲಿ ಸ್ತ್ರೀ ಶಕ್ತಿ ಹೆಸರಿನ ಯೋಜನೆಯನ್ನು ನಾವೆಲ್ಲಾ ಕೇಳಿರುತ್ತೇವೆ. ಇದೇ ರೀತಿಯ ಯೋಜನೆಯೊಂದನ್ನು ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್‌ ಬ್ಯಾಂಕ್‌ ಜಾರಿಗೆ ತಂದಿದೆ. ಎಸ್‌ಬಿಐ ಪ್ರಾಯೋಜಿತ 'ಸ್ತ್ರೀ ಶಕ್ತಿ ಪ್ಯಾಕೇಜ್' ಯೋಜನೆ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಮತ್ತು ತಮ್ಮದೇ ಆದ ಉದ್ಯಮವನ್ನು ಪ್ರಾರಂಭಿಸಲು ಅಥವಾ ವಿಸ್ತರಿಸಲು ಈ ಉತ್ತಮ ವೇದಿಕೆಯಾಗಿದೆ. ಈ ಯೋಜನೆಯ ಕುರಿತಾದ ವಿವರಗಳು ಇಲ್ಲಿವೆ.


ಸ್ತ್ರೀ ಶಕ್ತಿ ಪ್ಯಾಕೇಜ್ ಮುಖ್ಯವಾಗಿ ಭಾರತದ ಮಹಿಳಾ ಉದ್ಯಮಿಗಳಿಗೆ ಎಸ್‌ಬಿಐ ನಂತಹ ಪ್ರಮುಖ ರಾಷ್ಟ್ರೀಕೃತ ಬ್ಯಾಂಕುಗಳು ನೀಡುವ ಸಾಲ ಯೋಜನೆಯಾಗಿದೆ. ಈ ಯೋಜನೆಯು ಮಹಿಳಾ ಉದ್ಯಮಿಗಳಿಗೆ ಉತ್ಪಾದನೆ, ಚಿಲ್ಲರೆ ವ್ಯಾಪಾರ ಮತ್ತು ಸೇವಾ ವಲಯಗಳಲ್ಲಿ ಹಣಕಾಸಿನ ನೆರವು ನೀಡುವ ಗುರಿಯನ್ನು ಹೊಂದಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳನ್ನು ಬೆಳೆಸಲು ವ್ಯವಹಾರಗಳಿಗೆ ಕಡಿಮೆ ಬಡ್ಡಿದರದಲ್ಲಿ 25 ಲಕ್ಷ ರೂ.ವರೆಗೆ ಸಾಲ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಇನ್ನೊಂದು ವಿಶೇಷತೆಯೆಂದರೆ, 10 ಲಕ್ಷ ರೂ.ದವರೆಗೆ ಮೇಲಾಧಾರ ರಹಿತ ಸಾಲ ಲಭ್ಯವಾಗಲಿದೆ. ಮಹಿಳಾ ಉದ್ಯಮಿಗಳು ನಡೆಸುವ ವ್ಯವಹಾರಗಳಿಗೆ ತಕ್ಕನಾದ ವಿವಿಧ ರೀತಿಯ ಸಾಲದ ಪ್ಯಾಕೇಜ್‌ಗಳನ್ನು ಈ ಯೋಜನೆ ಒದಗಿಸುತ್ತದೆ. ಈ ಯೋಜನೆಯ ಸೌಲಭ್ಯಗಳನ್ನು ಪಡೆಯಬೇಕಾದರೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಬೆಂಬಲಿಸುವ ಮೂಲಕ ಮಹಿಳೆಯರು ಉದ್ಯಮದ ಕನಿಷ್ಠ 50 ಪ್ರತಿಶತದಷ್ಟು ಮಾಲೀಕತ್ವವನ್ನು ಹೊಂದಿರಬೇಕು.

ಯೋಜನೆಯ ಪ್ರಮುಖ ವೈಶಿಷ್ಟ್ಯಗಳು


ಸಾಲದ ಮೊತ್ತ: ಮಹಿಳಾ ಉದ್ಯಮಿಗಳು ಮತ್ತು ವೃತ್ತಿಪರರು ಈ ಯೋಜನೆಯಡಿ 25 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆಯಬಹುದು ಹಾಗೂ ವಿಶೇಷ ಸಂದರ್ಭಗಳಲ್ಲಿ ಈ ಮೊತ್ತವು 50 ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಲ್ಪಡುತ್ತದೆ

ಬಡ್ಡಿ ದರದಲ್ಲಿ ರಿಯಾಯಿತಿ: ಸಾಲದ ಮೊತ್ತವು 2 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿದ್ದರೆ, ಮಹಿಳೆಯರಿಗೆ ಉತ್ತೇಜನ ನೀಡಲು ಬ್ಯಾಂಕ್ ಬಡ್ಡಿ ದರದಲ್ಲಿ ಶೇಕಡಾ 0.5 ರಷ್ಟು ವಿಶೇಷ ರಿಯಾಯಿತಿಯನ್ನು ನೀಡುತ್ತದೆ.

ಶೂನ್ಯ ಭದ್ರತೆ: 10 ಲಕ್ಷ ರೂಪಾಯಿಗಳವರೆಗಿನ ಸಾಲಕ್ಕೆ ಯಾವುದೇ ಆಸ್ತಿ ಅಥವಾ ಶೂರಿಟಿಯನ್ನು ಭದ್ರತೆಯಾಗಿ ನೀಡುವ ಅಗತ್ಯವಿಲ್ಲ, ಏಕೆಂದರೆ ಇದು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ (CGTMSE) ಯೋಜನೆಯಡಿ ರಕ್ಷಣೆ ಪಡೆಯುತ್ತದೆ.

ಅರ್ಹ ಕ್ಷೇತ್ರಗಳು: ಈ ಯೋಜನೆಯು ಚಿಲ್ಲರೆ ವ್ಯಾಪಾರ, ಉತ್ಪಾದನಾ ವಲಯ, ಕೃಷಿ ಪೂರಕ ಚಟುವಟಿಕೆಗಳು ಹಾಗೂ ವೈದ್ಯರು, ಚಾರ್ಟರ್ಡ್ ಅಕೌಂಟೆಂಟ್ಸ್ ಮತ್ತು ಬ್ಯೂಟಿ ಪಾರ್ಲರ್ ನಡೆಸುವ ವೃತ್ತಿಪರ ಮಹಿಳೆಯರಿಗೆ ಮುಕ್ತವಾಗಿದೆ.

ಸ್ತ್ರೀ ಶಕ್ತಿ ಯೋಜನೆಯ ವಿವಿಧ ಸಾಲದ ಪ್ಯಾಕೇಜ್‌ಗಳು

ಚಿಲ್ಲರೆ ವ್ಯಾಪಾರದಲ್ಲಿ ತೊಡಗಿರುವ ಮಹಿಳೆಯರು ಕನಿಷ್ಠ 50,000 ರೂ. ರಿಂದ ಗರಿಷ್ಠ 2 ಲಕ್ಷ ರೂ.ದವರೆಗೆ ಸಾಲದ ಸಹಾಯವನ್ನು ಪಡೆಯಬಹುದು.

ವಿವಿಧ ವ್ಯವಹಾರ ಅಥವಾ ಉದ್ಯಮಗಳನ್ನು ನಡೆಸುವ ಮಹಿಳಾ ಉದ್ದಿಮೆದಾರರಿಗೆ 50,000 ರೂ. ರಿಂದ 2 ರೂ. ಲಕ್ಷದವರೆಗಿನ ಸಾಲದ ಮಿತಿಯನ್ನು ನಿಗದಿಪಡಿಸಲಾಗಿದೆ.

ವೈದ್ಯರು, ಚಾರ್ಟರ್ಡ್ ಅಕೌಂಟೆಂಟ್‌ಗಳಂತಹ ವೃತ್ತಿಪರ ಮಹಿಳೆಯರು ತಮ್ಮ ವೃತ್ತಿಜೀವನವನ್ನು ವಿಸ್ತರಿಸಲು ಅಥವಾ ಸ್ಥಾಪಿಸಲು 50,000 ರೂ. ರಿಂದ 25 ಲಕ್ಷ ರೂ.ದವರೆಗೆ ಸಾಲ ಪಡೆಯಲು ಅರ್ಹರಿದ್ದಾರೆ.

ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳನ್ನು ನಡೆಸುವ ಮಹಿಳೆಯರಿಗೆ ಈ ಯೋಜನೆಯಡಿ ಕನಿಷ್ಠ 50,000 ರೂ. ರಿಂದ 25 ಲಕ್ಷ ರೂ.ದವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ.

ಯಾವೆಲ್ಲಾ ಉದ್ಯಮಗಳಿಗೆ ಸಾಲ ಸೌಲಭ್ಯಗಳು ಲಭ್ಯ?

ಸ್ತ್ರೀ ಶಕ್ತಿ ಪ್ಯಾಕೇಜ್‌ ಯೋಜನೆಯು ಕೇವಲ ವ್ಯವಹಾರದಲ್ಲಿ ನೇರವಾಗಿ ತೊಡಗಿಸಿಕೊಂಡಿರುವ ಮಹಿಳೆಯರಿಗಾಗಿ ಮಾತ್ರ ಲಭ್ಯವಿದ್ದು, ದೈನಂದಿನ ವ್ಯಾಪಾರಕ್ಕೆ ಬೇಕಾದ 'ದುಡಿಯುವ ಬಂಡವಾಳ' ಹೆಚ್ಚಿಸಲು ಅಥವಾ ಅಗತ್ಯ ಉಪಕರಣಗಳನ್ನು ಖರೀದಿಸಲು ಈ ಸಾಲವನ್ನು ಬಳಸಬಹುದು.

ಸಿದ್ಧ ಉಡುಪುಗಳ ವಲಯ: ಸಿದ್ಧ ಉಡುಪುಗಳ ತಯಾರಿಕೆ ಅಥವಾ ಬಟ್ಟೆ ವ್ಯಾಪಾರದಲ್ಲಿ ತೊಡಗಿರುವ ಮಹಿಳಾ ಉದ್ಯಮಿಗಳು ತಮ್ಮ ವ್ಯವಹಾರದ ಅಭಿವೃದ್ಧಿಗಾಗಿ ಈ ಯೋಜನೆಯಡಿ ಹೆಚ್ಚಾಗಿ ಸಾಲ ಪಡೆಯುತ್ತಾರೆ.

ಡೈರಿ ಅಥವಾ ಹೈನುಗಾರಿಕೆ ವಲಯ: ಹಾಲು, ಮೊಸರು ಮತ್ತು ಮೊಟ್ಟೆಗಳಂತಹ ಡೈರಿ ಉತ್ಪನ್ನಗಳ ಮಾರಾಟ ಅಥವಾ ಉತ್ಪಾದನೆಯಲ್ಲಿ ತೊಡಗಿರುವ ಮಹಿಳೆಯರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.

ಕೃಷಿ ಉತ್ಪನ್ನಗಳು: ಬೀಜಗಳು, ಗೊಬ್ಬರ ಅಥವಾ ಇತರ ಕೃಷಿ ಸಂಬಂಧಿತ ಉತ್ಪನ್ನಗಳ ಮಾರಾಟದಲ್ಲಿ ತೊಡಗಿರುವ ಮಹಿಳಾ ಉದ್ಯಮಿಗಳಿಗೆ ಈ ಯೋಜನೆಯಡಿ ಸಾಲ ಸೌಲಭ್ಯ ಲಭ್ಯವಿದೆ.

ಗೃಹ ಉತ್ಪನ್ನಗಳು: ಬ್ರ್ಯಾಂಡ್ ಇಲ್ಲದ ಸೋಪುಗಳು ಮತ್ತು ಡಿಟರ್ಜೆಂಟ್‌ಗಳ ತಯಾರಿಕೆ ಅಥವಾ ಮಾರಾಟ ಮಾಡುವ ಮಹಿಳೆಯರು ತಮ್ಮ ಆರ್ಥಿಕ ಅಗತ್ಯಗಳಿಗಾಗಿ ಈ ಯೋಜನೆಯನ್ನು ಬಳಸಿಕೊಳ್ಳಬಹುದು.

ಸ್ತ್ರೀ ಶಕ್ತಿ ಪ್ಯಾಕೇಜ್‌ ಯೋಜನೆ ವಿವರ

ಬಡ್ಡಿದರ ಎಷ್ಟು?

ಈ ಯೋಜನೆಯಡಿ ಬಡ್ಡಿ ದರಗಳು ಸಾಲದ ಮೊತ್ತಕ್ಕೆ ಅನುಗುಣವಾಗಿ ಬದಲಾಗುತ್ತವೆ. ವಿವಿಧ ವರ್ಗಗಳಿಗೆ ಅನ್ವಯವಾಗುವಂತೆ ಮಾರ್ಜಿನ್ ಮೊತ್ತದಲ್ಲಿ ಶೇಕಡಾ 5 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ.

ಅರ್ಹತಾ ಮಾನದಂಡಗಳೇನು?
ಈ ಯೋಜನೆಯಡಿ ಪ್ರಯೋಜನ ಪಡೆಯಲು, ಉದ್ದಿಮೆಯ ಒಡೆತನದಲ್ಲಿ ಮಹಿಳೆಯರ ಪಾಲು ಕನಿಷ್ಠ 51% ಅಥವಾ ಅದಕ್ಕಿಂತ ಹೆಚ್ಚಿರಬೇಕು. ಅಂದರೆ ಮಹಿಳೆಯು ಆ ಸಂಸ್ಥೆಯ ಪ್ರಮುಖ ಪಾಲುದಾರರಾಗಿರಬೇಕು.

ಯೋಜನೆಯ ಲಾಭ ಪಡೆಯಲು ಉದ್ದಿಮೆಯು ಕೇಂದ್ರ ಸರ್ಕಾರದ ಎಂಎಸ್‌ಎಂಇ ಇಲಾಖೆಯ ಅಡಿಯಲ್ಲಿ ಅಧಿಕೃತವಾಗಿ ನೋಂದಾಯಿಸಲ್ಪಟ್ಟಿರಬೇಕು.

ಸಾಲ ಪಡೆಯುವ ಮಹಿಳೆಯರು ರಾಜ್ಯ ಸರ್ಕಾರದ ವಿವಿಧ ಏಜೆನ್ಸಿಗಳು ಆಯೋಜಿಸುವ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತರಬೇತಿ ಪಡೆದಿರುವುದು ಸಾಲ ಮಂಜೂರಾತಿಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತದೆ.

ಈ ಉದ್ದಿಮೆಯು ಮಹಿಳೆಯರಿಂದಲೇ ನಿರ್ವಹಿಸಲ್ಪಡುತ್ತಿರಬೇಕು ಮತ್ತು ಅವರು ಕಂಪನಿಯ ನಿರ್ದೇಶಕರು ಅಥವಾ ಪಾಲುದಾರರಾಗಿ ಆರ್ಥಿಕ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ಹೊಂದಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಸ್ತ್ರೀ ಶಕ್ತಿ ಪ್ಯಾಕೇಜ್ ಯೋಜನೆಯಡಿ ಸಾಲ ಪಡೆಯಲು ಆಸಕ್ತ ಮಹಿಳೆಯರು ಸಾಮಾನ್ಯವಾಗಿ ಎಸ್‌ಬಿಐನ ಅಧಿಕೃತ ಬ್ಯಾಂಕ್ ಶಾಖೆಗಳಿಗೆ ನೇರವಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ಗುರುತಿನ ಚೀಟಿ, ವಿಳಾಸದ ಪುರಾವೆ, ವ್ಯವಹಾರದ ಸಮಗ್ರ ಯೋಜನೆ ಮತ್ತು ಆರ್ಥಿಕ ವರದಿಗಳಂತಹ ಅಗತ್ಯ ದಾಖಲೆಗಳನ್ನು ಬ್ಯಾಂಕಿನ ಮೌಲ್ಯಮಾಪನಕ್ಕಾಗಿ ಸಲ್ಲಿಸುವುದು ಕಡ್ಡಾಯವಾಗಿದೆ. ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿದ ನಂತರ, ಬ್ಯಾಂಕ್ ಅಧಿಕಾರಿಗಳು ಉದ್ದಿಮೆಯ ಪರಿಶೀಲನೆ ನಡೆಸಿ ಸಾಲವನ್ನು ಮಂಜೂರು ಮಾಡುತ್ತಾರೆ.

ಬೇಕಾಗುವ ದಾಖಲೆಗಳು

ಗುರುತಿನ ಚೀಟಿ: ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಪಾಸ್‌ಪೋರ್ಟ್.

ವಿಳಾಸ ಪುರಾವೆ: ವಿದ್ಯುತ್ ಬಿಲ್ ಅಥವಾ ಟೆಲಿಫೋನ್ ಬಿಲ್

ಉದ್ದಿಮೆಯ ಪುರಾವೆ: ಉದ್ದಿಮೆಯ ನೋಂದಣಿ ಪತ್ರ ಮತ್ತು ಕಳೆದ 3 ವರ್ಷಗಳ ಬ್ಯಾಲೆನ್ಸ್ ಶೀಟ್.

ಯೋಜನಾ ವರದಿ: ವ್ಯವಹಾರದ ಲಾಭ ಮತ್ತು ನಷ್ಟದ ಅಂದಾಜು ವಿವರಗಳು.

]]>
Mon, 19 Jan 2026 08:39:55 +0530 shivuagrico
Baddi sahayadana&ಕೇವಲ 4% ಬಡ್ಡಿ ಸಹಾಯಧನದೊಂದಿಗೆ ಸಿಗಲಿದೆ 1ಕೋಟಿ ಸಾಲಸೌಲಭ್ಯ https://krushirushi.in/Baddi-sahayadana-2395 https://krushirushi.in/Baddi-sahayadana-2395 Baddi sahayadana-ಕೇವಲ 4% ಬಡ್ಡಿ ಸಹಾಯಧನದೊಂದಿಗೆ ಸಿಗಲಿದೆ 1ಕೋಟಿ ಸಾಲಸೌಲಭ್ಯ


ನಿಮ್ಮ ಕನಸಿನ ಸ್ವಂತ ಉದ್ಯಮಕ್ಕೆ ಕರ್ನಾಟಕ ಸರ್ಕಾರದ ಮಹತ್ವದ ಕೊಡುಗೆ. ₹1 ಕೋಟಿ ವರೆಗಿನ ಸಾಲಕ್ಕೆ ಕೇವಲ ಶೇ. 4ರಷ್ಟು ಬಡ್ಡಿ ಮಾತ್ರ ನೀವು ಕಟ್ಟಬೇಕು. ಉಳಿದ ಬಡ್ಡಿಯನ್ನು ಸರ್ಕಾರವೇ ಭರಿಸುತ್ತದೆ. ಕೈಗಾರಿಕೆ, ಐಟಿ, ಆರೋಗ್ಯ, ಪ್ರವಾಸೋದ್ಯಮ ಹೀಗೆ ಯಾವುದೇ ಕ್ಷೇತ್ರದಲ್ಲಿ ನಿಮ್ಮ ಉದ್ಯಮವನ್ನು ಐದು ವರ್ಷದೊಳಗೆ ಸ್ಥಾಪಿಸಿ, ಬೆಳೆಸಿ. ಇದು ನಿಮ್ಮ ಆರ್ಥಿಕ ಸ್ವಾವಲಂಬನೆಗೆ ಸುವರ್ಣಾವಕಾಶ!

ಸ್ವಂತ ಉದ್ಯಮ ಆರಂಭಿಸಿ ಆರ್ಥಿಕವಾಗಿ ಸಬಲರಾಗಲು ನಿಮಗೊಂದು ಸುವರ್ಣಾವಕಾಶ. ಕರ್ನಾಟಕ ಸರ್ಕಾರವು ಪರಿಶಿಷ್ಟ ಪಂಗಡದ ಸಮುದಾಯದ ಅಭ್ಯರ್ಥಿಗಳನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಮತ್ತು ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಲು ವಿಶೇಷ ಬಡ್ಡಿ ಸಹಾಯಧನ ಯೋಜನೆಯನ್ನು ಜಾರಿಗೆ ತಂದಿದೆ. ನೀವು ಹೊಸ ಉದ್ಯಮವನ್ನು ಪ್ರಾರಂಭಿಸಲು ಬಯಸಿದ್ದರೆ ಅಥವಾ ಅಸ್ತಿತ್ವದಲ್ಲಿರುವ ಘಟಕವನ್ನು ವಿಸ್ತರಿಸಲು ಆಲೋಚಿಸುತ್ತಿದ್ದರೆ, ಈ ಯೋಜನೆಯು ನಿಮಗೆ ಭದ್ರ ಬುನಾದಿ ಒದಗಿಸಲಿದೆ. ಈ ಹಿನ್ನೆಲೆಯಲ್ಲಿ ಏನಿದು ಬಡ್ಡಿ ಸಹಾಯಧನ ಯೋಜನೆ? ಈ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ? ಪ್ರಯೋಜನಗಳು ಏನು ಎಂಬುದನ್ನು ತಿಳಿಯೋಣ.

ಕರ್ನಾಟಕ ಸರ್ಕಾರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಪರಿಶಿಷ್ಟ ಪಂಗಡದ ಉದ್ಯಮಿಗಳ ಆರ್ಥಿಕ ಸಬಲೀಕರಣಕ್ಕಾಗಿ ಈ ವಿಶೇಷ ಬಡ್ಡಿ ಸಹಾಯಧನ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಎಂ.ಎಸ್.ಎಂ.ಇ ಘಟಕಗಳು, ಹೋಟೆಲ್, ಫ್ರಾಂಚೈಸಿ ಅಥವಾ ಡೀಲರ್‌ಶಿಪ್‌ಗಳಂತಹ ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಅಥವಾ ಅಸ್ತಿತ್ವದಲ್ಲಿರುವ ಘಟಕಗಳನ್ನು ಆಧುನೀಕರಿಸಲು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಅಥವಾ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‌ಗಳಿಂದ ಪಡೆಯುವ ಗರಿಷ್ಠ ರೂ. 1.00 ಕೋಟಿ ವರೆಗಿನ ಸಾಲಕ್ಕೆ ಕೇವಲ 4% ರಿಯಾಯಿತಿ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ (ಉಳಿದ ಬಡ್ಡಿಯನ್ನು ಸರ್ಕಾರವೇ ಭರಿಸುತ್ತದೆ). ಉದ್ಯಮದ ಸಂಪೂರ್ಣ ಮಾಲೀಕತ್ವವು ಎಸ್‌ಟಿ ಸಮುದಾಯದವರದ್ದೇ ಆಗಿರಬೇಕು ಎಂಬ ಷರತ್ತಿನೊಂದಿಗೆ, ಪಡೆದ ಸಾಲವನ್ನು 5 ವರ್ಷಗಳ ಅವಧಿಯಲ್ಲಿ ಮರುಪಾವತಿಸಲು ಅವಕಾಶವಿದ್ದು, ಇದು ಸಮುದಾಯದ ಯುವ ಉದ್ಯಮಿಗಳು ಕಡಿಮೆ ಬಂಡವಾಳ ವೆಚ್ಚದಲ್ಲಿ ಸ್ವಾವಲಂಬಿಗಳಾಗಲು ಅತ್ಯುತ್ತಮ ವೇದಿಕೆಯಾಗಿದೆ

ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಕೈಗೆಟುಕುವ ದರದಲ್ಲಿ ಬಂಡವಾಳ ಒದಗಿಸುವುದು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಉತ್ತೇಜಿಸುವುದು ಮತ್ತು ಸೇವಾ ವಲಯಗಳಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ

ಬಡ್ಡಿ ದರದ ರಿಯಾಯಿತಿ: ಈ ಯೋಜನೆಯಡಿ ಆಯ್ಕೆಯಾದ ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಕೇವಲ 4% ರಷ್ಟು ರಿಯಾಯಿತಿ ಬಡ್ಡಿ ದರದಲ್ಲಿ ಸಾಲದ ಸೌಲಭ್ಯ ದೊರೆಯುತ್ತದೆ. ಬ್ಯಾಂಕಿನ ಅಸಲಿ ಬಡ್ಡಿ ದರ ಮತ್ತು ಈ 4% ನಡುವಿನ ವ್ಯತ್ಯಾಸದ ಮೊತ್ತವನ್ನು ಸರ್ಕಾರವೇ ಬಡ್ಡಿ ಸಹಾಯಧನದ ರೂಪದಲ್ಲಿ ಭರಿಸುತ್ತದೆ.

ಗರಿಷ್ಠ ಸಾಲದ ಮಿತಿ: ಉದ್ಯಮಿಗಳು ತಮ್ಮ ಘಟಕಗಳ ಸ್ಥಾಪನೆ ಅಥವಾ ವಿಸ್ತರಣೆಗಾಗಿ ಈ ಯೋಜನೆಯ ಅಡಿಯಲ್ಲಿ ಗರಿಷ್ಠ 1.00 ಕೋಟಿ ರೂಪಾಯಿಗಳವರೆಗೆ ಸಾಲವನ್ನು ಪಡೆಯಲು ಅವಕಾಶವಿದೆ.


ಸಾಲ ಮರುಪಾವತಿಯ ಕಾಲಾವಕಾಶ: ಪಡೆದ ಸಾಲವನ್ನು ಮರುಪಾವತಿ ಮಾಡಲು ಉದ್ಯಮಿಗಳಿಗೆ 5 ವರ್ಷಗಳ ಕಾಲಾವಧಿಯನ್ನು ನಿಗದಿಪಡಿಸಲಾಗಿದೆ. ಈ ಅವಧಿಯಲ್ಲಿ ನಿಗದಿತ ಕಂತುಗಳ ಮೂಲಕ ಸಾಲ ತೀರಿಸಬಹುದಾಗಿದೆ.

ಸಾಲ ಒದಗಿಸುವ ಹಣಕಾಸು ಸಂಸ್ಥೆಗಳು: ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಉದ್ಯಮಿಗಳು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ , ಯಾವುದಾದರು ರಾಷ್ಟ್ರೀಕೃತ ಬ್ಯಾಂಕ್‌ಗಳು, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ಗಳು ಅಥವಾ ಅಪೆಕ್ಸ್ ಸಹಕಾರಿ ಬ್ಯಾಂಕ್‌ಗಳಿಂದ ಸಾಲವನ್ನು ಪಡೆಯಬಹುದಾಗಿದೆ.

ಕೈಗಾರಿಕಾ ವಲಯ: ಆಹಾರ ಸಂಸ್ಕರಣಾ ಘಟಕಗಳು, ಜವಳಿ ಉದ್ಯಮ, ಸಿದ್ಧ ಉಡುಪುಗಳ ತಯಾರಿಕೆ, ಎಂಜಿನಿಯರಿಂಗ್ ವರ್ಕ್‌ಶಾಪ್‌ಗಳು ಮತ್ತು ಆಟೋಮೊಬೈಲ್ ಬಿಡಿಭಾಗಗಳ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಈ ಯೋಜನೆಯಡಿ ಸಾಲ ಪಡೆಯಬಹುದು.

ಮಾಹಿತಿ ತಂತ್ರಜ್ಞಾನ ಮತ್ತು ಸೇವಾ ವಲಯ: ಸಾಫ್ಟ್‌ವೇರ್ ಅಭಿವೃದ್ಧಿ ಕೇಂದ್ರಗಳು, ಐಟಿ ಆಧಾರಿತ ಸೇವೆಗಳು ಹಾಗೂ ಈವೆಂಟ್ ಮ್ಯಾನೇಜ್‌ಮೆಂಟ್‌ನಂತಹ ಸೇವಾ ಆಧಾರಿತ ಉದ್ಯಮಗಳಿಗೆ ಸರ್ಕಾರವು ಪ್ರೋತ್ಸಾಹ ನೀಡುತ್ತದೆ.

ವಾಣಿಜ್ಯ ಮತ್ತು ವ್ಯಾಪಾರ ಚಟುವಟಿಕೆಗಳು: 2021-22ನೇ ಸಾಲಿನಿಂದ ಈ ಯೋಜನೆಯನ್ನು ವಿಸ್ತರಿಸಲಾಗಿದ್ದು, ಇದರ ಅಡಿಯಲ್ಲಿ ಸ್ವಂತ ಮಳಿಗೆ, ಪ್ರಮುಖ ಕಂಪನಿಗಳ ಡೀಲರ್‌ಶಿಪ್, ಫ್ರಾಂಚೈಸಿಗಳು ಮತ್ತು ಹೋಟೆಲ್ ಉದ್ಯಮಗಳನ್ನು ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ.

ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರ: ಸುಸಜ್ಜಿತ ಆಸ್ಪತ್ರೆಗಳು, ನರ್ಸಿಂಗ್ ಹೋಮ್‌ಗಳು, ಸ್ಕ್ಯಾನಿಂಗ್ ಅಥವಾ ಡಯಾಗ್ನೋಸ್ಟಿಕ್ ಸೆಂಟರ್‌ಗಳು, ದಂತ ಚಿಕಿತ್ಸಾಲಯ ಮತ್ತು ಕಣ್ಣಿನ ಆಸ್ಪತ್ರೆಗಳನ್ನು ತೆರೆಯಲು ಹಾಗೂ ಆಧುನಿಕ ವೈದ್ಯಕೀಯ ಉಪಕರಣಗಳ ಖರೀದಿಗೆ ಸಹಾಯಧನ ಲಭ್ಯವಿದೆ.

ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯ: ಪ್ರವಾಸಿಗರನ್ನು ಸೆಳೆಯಲು ಹೋಟೆಲ್, ರೆಸಾರ್ಟ್, ಕ್ಯಾಟರಿಂಗ್ ಸೇವೆಗಳು, ಅಮ್ಯೂಸ್‌ಮೆಂಟ್ ಪಾರ್ಕ್‌ಗಳು ಮತ್ತು ಪ್ರವಾಸಿ ಏಜೆನ್ಸಿಗಳನ್ನು ನಡೆಸಲು ಆಸಕ್ತಿಯಿರುವ ಉದ್ಯಮಿಗಳು ಈ ಯೋಜನೆಯ ಲಾಭ ಪಡೆಯಬಹುದು.

ಉದ್ಯಮವು ಸಂಪೂರ್ಣವಾಗಿ ಪರಿಶಿಷ್ಟ ಪಂಗಡದ ವ್ಯಕ್ತಿಗಳ ಮಾಲೀಕತ್ವದಲ್ಲಿರಬೇಕು. ಪಾಲುದಾರಿಕೆ ಸಂಸ್ಥೆಯಾಗಿದ್ದರೆ, ಎಲ್ಲಾ ಪಾಲುದಾರರು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸೇರಿದವರಾಗಿರಬೇಕು.

ಅರ್ಜಿದಾರರು ಈ ಹಿಂದೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಅಥವಾ ಯಾವುದೇ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಮರುಪಾವತಿ ಮಾಡದೆ ಸುಸ್ತಿದಾರರಾಗಿರಬಾರದು.

ಈ ಹಿಂದೆ ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಬಡ್ಡಿ ಸಹಾಯಧನ ಯೋಜನೆಯಡಿ ಪ್ರಯೋಜನ ಪಡೆದಿದ್ದರೆ ಈ ಯೋಜನೆಗೆ ಅರ್ಹರಲ್ಲ.

ಹಂತ 1: ನಿಮ್ಮ ಜಿಲ್ಲೆಯ ಹತ್ತಿರದ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಶಾಖಾ ಕಚೇರಿ ಅಥವಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಗೆ ಭೇಟಿ ನೀಡಿ.

ಹಂತ 2: ನಿಗದಿತ ಅರ್ಜಿ ನಮೂನೆಯನ್ನು ಪಡೆದು, ಎಲ್ಲಾ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ.

ಹಂತ 3: ಅಗತ್ಯವಿರುವ ದಾಖಲೆಗಳ ಸ್ವಯಂ ದೃಢೀಕರಿಸಿದ ಪ್ರತಿಗಳನ್ನು ಲಗತ್ತಿಸಿ.

ಹಂತ 4: ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಪಟ್ಟ ಕಚೇರಿಯಲ್ಲಿ ಸಲ್ಲಿಸಿ ಮತ್ತು ಸ್ವೀಕೃತಿ ಪತ್ರ ಪಡೆಯಿರಿ.

ದಾಖಲೆಗಳು

ಅರ್ಜಿದಾರರ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ.

ಜಾತಿ ಪ್ರಮಾಣಪತ್ರ (SC/ST ಧೃಢೀಕರಣ).

ಬಯೋ-ಡೇಟಾ ಮತ್ತು ನಿವ್ವಳ ಮೌಲ್ಯದ ಹೇಳಿಕೆ.

ನಿಗದಿತ ನಮೂನೆಯಲ್ಲಿ ಪ್ರಮಾಣಪತ್ರ.

ಬ್ಯಾಂಕ್ ಖಾತೆಯ ವಿವರಗಳು.

ಹೆಚ್ಚಿನ ಮಾಹಿತಿಗಾಗಿ ಅಥವಾ ಯಾವುದೇ ಸಂದೇಹಗಳಿದ್ದಲ್ಲಿ ನಿಮ್ಮ ಜಿಲ್ಲೆಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ ಸಹಾಯವಾಣಿ ಸಂಖ್ಯೆ: 080-22261703 ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು.

Bele sala baddi manna-ಈ ಯೋಜನೆಯಡಿ ಸಿಗಲಿದೆ ನಿಮ್ಮ ಸಾಲದ ಮೇಲೆ 3% ಬಡ್ಡಿ ಮನ್ನಾ,ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

https://krushirushi.in/Bele-sala-baddi-manna-1905

]]>
Sun, 18 Jan 2026 20:11:33 +0530 shivuagrico
Government plots&ಸರ್ಕಾರದಿಂದ ಕೇವಲ 9.7 to 10.5 ಲಕ್ಷಕ್ಕೆ 1 BHK ಫ್ಲಾಟ್ https://krushirushi.in/Government-plots-2394 https://krushirushi.in/Government-plots-2394 Government plots-ಸರ್ಕಾರದಿಂದ ಕೇವಲ 9.7 to 10.5 ಲಕ್ಷಕ್ಕೆ 1 BHK ಫ್ಲಾಟ್

ಸಿಲಿಕಾನ್ ಸಿಟಿಯಲ್ಲಿ ತಿಂಗಳ ಪೂರ್ತಿ ದುಡಿದ ಸಂಬಳದಲ್ಲಿ ಅರ್ಧದಷ್ಟು ಹಣ ಮನೆ ಬಾಡಿಗೆಗೇ (House Rent) ಖಾಲಿಯಾಗುತ್ತಿದೆಯೇ? ನಮಗೂ ಒಂದು ಸ್ವಂತ ಸೂರು ಸಿಗಲಾರದೇ? ಎಂಬ ಹಂಬಲ ನಿಮ್ಮದಾಗಿದ್ದರೆ ಇಲ್ಲಿದೆ ನಿಮಗಾಗಿ ಒಂದು ಸುವರ್ಣ ಅವಕಾಶ. ಹೌದು ಬೆಂಗಳೂರಿನಲ್ಲಿ ಊಹಿಸಲೂ ಸಾಧ್ಯವಾಗದ ಬೆಲೆಗೆ ಅಂದರೆ ಕೇವಲ ₹9.70 ಲಕ್ಷಕ್ಕೆ ಸುಸಜ್ಜಿತ 1 BHK ಫ್ಲಾಟ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು!
ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆ?
ಬೆಂಗಳೂರಿನ ಗಗನಕ್ಕೇರಿರುವ ರಿಯಲ್ ಎಸ್ಟೇಟ್ ಬೆಲೆಗಳ ನಡುವೆ ಬಡವರು ಮತ್ತು ಮಧ್ಯಮ ವರ್ಗದವರ ಸ್ವಂತ ಮನೆಯ ಕನಸನ್ನು ನನಸಾಗಿಸಲು ಕರ್ನಾಟಕ ಸರ್ಕಾರವು ಈ ಮಾದರಿ ಯೋಜನೆಯನ್ನು ತಂದಿದೆ. ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ನಗರದ ವಿವಿಧ ಭಾಗಗಳಲ್ಲಿ ಸುಸಜ್ಜಿತ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲಾಗಿದ್ದು ಸಬ್ಸಿಡಿ ದರದಲ್ಲಿ ಇವುಗಳನ್ನು ಹಂಚಿಕೆ ಮಾಡಲಾಗುತ್ತಿದೆ.
ಸಹಾಯವಾಣಿ (Helpline): ಯಾವುದೇ ಗೊಂದಲವಿದ್ದರೆ ವಾಟ್ಸಾಪ್ ಮೂಲಕ ಮಾಹಿತಿ ಪಡೆಯಬಹುದು: 9739774666
ಫ್ಲಾಟ್‌ಗಳ ಬೆಲೆ ವಿವರ: ಯಾರಿಗೆ ಎಷ್ಟು?
ಮಾರುಕಟ್ಟೆ ದರಕ್ಕಿಂತ ಅತಿ ಕಡಿಮೆ ಬೆಲೆಗೆ ಇಲ್ಲಿ ಮನೆಗಳು ಲಭ್ಯವಿವೆ:
ಪರಿಶಿಷ್ಟ ಜಾತಿ ಮತ್ತು ಪಂಗಡ (SC/ST): ₹9.70 ಲಕ್ಷ.
ಸಾಮಾನ್ಯ ಮತ್ತು ಇತರೆ ವರ್ಗ (General/OBC): ₹10.50 ಲಕ್ಷ.
ಈ ಹಣವನ್ನು ಒಮ್ಮೆಲೆ ಪಾವತಿಸಲು ಕಷ್ಟವಾದರೆ, ಬ್ಯಾಂಕ್‌ಗಳ ಮೂಲಕ ಸುಲಭವಾಗಿ ಹೋಮ್ ಲೋನ್ (Home Loan) ಪಡೆಯುವ ಸೌಲಭ್ಯವನ್ನೂ ಸರ್ಕಾರವೇ ಒದಗಿಸಲಿದೆ.
ಈ ಮನೆ ಪಡೆಯಲು ನೀವು ಅರ್ಹರೇ?
ಈ ಯೋಜನೆಯಡಿ ಅರ್ಜಿ ಸಲ್ಲಿಸಲು ನೀವು ಈ ಕೆಳಗಿನ ಮಾನದಂಡಗಳನ್ನು ಪೂರೈಸಬೇಕು:
ಕುಟುಂಬದ ವಾರ್ಷಿಕ ಆದಾಯ ₹3 ಲಕ್ಷದ ಒಳಗೆ ಇರಬೇಕು.
ಕಳೆದ ಕನಿಷ್ಠ 5 ವರ್ಷಗಳಿಂದ ಬೆಂಗಳೂರಿನಲ್ಲೇ ವಾಸವಾಗಿರಬೇಕು.
ಬೆಂಗಳೂರು ಅಥವಾ ರಾಜ್ಯದ ಯಾವುದೇ ಭಾಗದಲ್ಲಿ ಅರ್ಜಿದಾರರ ಹೆಸರಿನಲ್ಲಿ ಸ್ವಂತ ಮನೆ ಇರಬಾರದು.
ಕ್ಯಾಬ್/ಆಟೋ ಚಾಲಕರು, ಗಾರ್ಮೆಂಟ್ಸ್ ಕೆಲಸಗಾರರು, ಬೀದಿ ಬದಿ ವ್ಯಾಪಾರಿಗಳು ಮತ್ತು ಮನೆ ಕೆಲಸದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಬೇಕಾಗುವ ದಾಖಲೆಗಳು:
ಆಧಾರ್ ಕಾರ್ಡ್ (Aadhaar Card)
ಪಡಿತರ ಚೀಟಿ (BPL/APL Card)
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಬೆಂಗಳೂರಿನಲ್ಲಿ 5 ವರ್ಷ ವಾಸವಿರುವ ಬಗ್ಗೆ ದೃಢೀಕರಣ
ಬ್ಯಾಂಕ್ ಪಾಸ್ ಬುಕ್ ವಿವರ
ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
ಬೆಂಗಳೂರಿನ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಲಭ್ಯವಿರುವ ಫ್ಲಾಟ್‌ಗಳ ವಿವರ ಹಾಗೂ ಅರ್ಜಿ ಸಲ್ಲಿಸುವ ಹಂತ-ಹಂತದ ಮಾಹಿತಿ ಇಲ್ಲಿದೆ.
ಕ್ಷೇತ್ರವಾರು ಫ್ಲಾಟ್‌ಗಳ ಲಭ್ಯತೆಯ ವಿವರಯಾವ ಕ್ಷೇತ್ರದಲ್ಲಿ ಎಷ್ಟು ಮನೆಗಳು ನಿರ್ಮಾಣವಾಗಿವೆ ಮತ್ತು ಪ್ರಸ್ತುತ ಎಷ್ಟು ಲಭ್ಯವಿವೆ ಎಂಬ ಪಟ್ಟಿ ಇಲ್ಲಿದೆ:
ವಿಧಾನಸಭಾ ಕ್ಷೇತ್ರಒಟ್ಟು ಮನೆಗಳು ಸದ್ಯ ಲಭ್ಯವಿರುವ ಫ್ಲಾಟ್‌ಗಳು
ವಿಧಾನಸಭಾ ಕ್ಷೇತ್ರ ಒಟ್ಟು ನಿರ್ಮಿಸಿದ ಮನೆಗಳು ಸದ್ಯ ಲಭ್ಯವಿರುವ ಫ್ಲಾಟ್‌ಗಳು ಸ್ಥಿತಿ (Status)
ಯಲಹಂಕ 14,820 8,372 ಅತಿ ಹೆಚ್ಚು ಲಭ್ಯ
ಯಶವಂತಪುರ 12,377 7,894 ಹೆಚ್ಚು ಲಭ್ಯ
ಮಹದೇವಪುರ 4,199 2,976 ಅವಕಾಶವಿದೆ
ಆನೇಕಲ್ 4,044 2,683 ಅವಕಾಶವಿದೆ
ಬ್ಯಾಟರಾಯನಪುರ 1,943 1,012 ಮಧ್ಯಮ ಲಭ್ಯತೆ
ಕೃಷ್ಣರಾಜಪುರಂ (KR Puram) 576 273 ಕಡಿಮೆ ಲಭ್ಯತೆ
ದಾಸರಹಳ್ಳಿ 1,132 118 ಶೀಘ್ರವೇ ಭರ್ತಿ
ಬೆಂಗಳೂರು ದಕ್ಷಿಣ 579 44 ಅಂತಿಮ ಹಂತ
ಬೆಂಗಳೂರಿನಲ್ಲಿ ಸ್ವಂತ ಮನೆ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮೊದಲಿಗೆ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕೃತ ಪೋರ್ಟಲ್ www.ashraya.karnataka.gov.in ಗೆ ಭೇಟಿ ನೀಡಿ. ಮುಖಪುಟದಲ್ಲಿ ಬೆಂಗಳೂರು 1 ಲಕ್ಷ ಬಹುಮಹಡಿ ಮನೆ ಯೋಜನೆ ಲಿಂಕ್ ಕ್ಲಿಕ್ ಮಾಡಿ.
ಇಲ್ಲಿ ನಿಮಗೆ ಎರಡು ಆಯ್ಕೆಗಳಿರುತ್ತವೆ. ನೀವು ಸದ್ಯ ವಾಸವಿರುವ ವಿಧಾನಸಭಾ ಕ್ಷೇತ್ರದಲ್ಲೇ ಮನೆ ಬೇಕಿದ್ದರೆ ಸ್ಥಳೀಯ ಕ್ಷೇತ್ರದವರಿಗೆ ಎಂದು ಆಯ್ಕೆ ಮಾಡಿ. ಒಂದು ವೇಳೆ ಬೇರೆ ಕ್ಷೇತ್ರದಲ್ಲಿ ಮನೆ ಬೇಕಿದ್ದರೆ ಸಾರ್ವಜನಿಕರಿಗೆ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ
ನಿಮ್ಮ ವಲಯ (Zone), ವಾರ್ಡ್ ಸಂಖ್ಯೆ, ನಿಖರವಾದ ವಿಳಾಸ ಮತ್ತು ಏರಿಯಾದ ಪಿನ್ ಕೋಡ್ ಅನ್ನು ಯಾವುದೇ ತಪ್ಪುಗಳಿಲ್ಲದೆ ನಮೂದಿಸಿ.
ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಹೆಸರನ್ನು (ಆಧಾರ್‌ನಲ್ಲಿರುವಂತೆಯೇ) ನಮೂದಿಸಿ.
ನಂತರ ಪಡಿತರ ಚೀಟಿ (Ration Card) ಸಂಖ್ಯೆಯನ್ನು ಹಾಕಿ. ಮನೆಯ ಸದಸ್ಯರ ಪಟ್ಟಿಯಲ್ಲಿ ಯಾರ ಹೆಸರಿನಲ್ಲಿ ಫ್ಲಾಟ್ ನೋಂದಣಿಯಾಗಬೇಕೋ ಅವರ ಹೆಸರನ್ನು ಆಯ್ಕೆ ಮಾಡಿ.
ನಿಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ RD ಸಂಖ್ಯೆಯನ್ನು ನಮೂದಿಸಿ. ನೆನಪಿಡಿ, ನಿಮ್ಮ ವಾರ್ಷಿಕ ಕುಟುಂಬ ಆದಾಯ 3 ಲಕ್ಷ ರೂಪಾಯಿ ಮೀರಿದ್ದರೆ ಅರ್ಜಿ ಸ್ವೀಕೃತವಾಗುವುದಿಲ್ಲ.
ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿ. ಜೊತೆಗೆ ನೀವು ಮಾಡುವ ಉದ್ಯೋಗದ (ಉದಾ: ಆಟೋ ಚಾಲಕರು, ಗಾರ್ಮೆಂಟ್ಸ್ ನೌಕರರು ಇತ್ಯಾದಿ) ಮಾಹಿತಿಯನ್ನು ಭರ್ತಿ ಮಾಡಿ
ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ Save ಬಟನ್ ಒತ್ತಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸಿ ಅರ್ಜಿಯನ್ನು ಸಲ್ಲಿಸಿ. ಕೊನೆಯಲ್ಲಿ ನಿಗದಿತ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ ಅರ್ಜಿ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
]]>
Sun, 18 Jan 2026 14:06:22 +0530 shivuagrico
Bele parihara list 2026&ಇಲ್ಲಿಯವರೆಗೂ ಬೆಳೆ ಪರಿಹಾರ ಜಮಾ ಆದವರ ಪಟ್ಟಿ ಬಿಡುಗಡೆ,ನಿಮಗೇಷ್ಟು ಜಮಾ ಚೆಕ್ ಮಾಡಿ https://krushirushi.in/Bele-parihara-list-2026 https://krushirushi.in/Bele-parihara-list-2026 Bele parihara list 2026-ಇಲ್ಲಿಯವರೆಗೂ ಬೆಳೆಪರಿಹಾರ ಜಮಾ ಆದವರ ಪಟ್ಟಿ ಬಿಡುಗಡೆ,ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಅನುಭವಿಸಿದ 14.21 ಲಕ್ಷ ರೈತರಿಗೆ 2,249 ಕೋಟಿ ರೂ. ಬೆಳೆ ಪರಿಹಾರ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು.


ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service89/PaymentDetailsReport.aspx

 ನಂತರ ವರ್ಷ,ಋುತು,ವಿಪತ್ತಿನ ವಿಧ,ನಿಮ್ಮ ಜಿಲ್ಲೆ,ತಾಲೂಕು,ಹೊಬಳಿ,ಗ್ರಾಮ,payment success cases select ಮಾಡಿ Get reports ಮೇಲೆ ಕ್ಲಿಕ್ ಮಾಡಿ

ನಿಮಗೆ ಈ ಕೆಳಗಿನಂತೆ ಪರಿಹಾರ ಪಾವತಿ ಯಶಸ್ಸಿನ ಪ್ರಕರಣಗಳ ಪಟ್ಟಿ ದೊರೆಯಲಿದೆ

 

 

]]>
Sun, 18 Jan 2026 08:00:23 +0530 shivuagrico
Budget 2026&ಬಜೇಟ್ ನಿರೀಕ್ಷೆಯಲ್ಲಿದ್ದ ರೈತರಿಗೆ ಸಿಹಿಸುದ್ದಿ ಕೊಟ್ಟ ಕೇಂದ್ರ ಸರ್ಕಾರ,ಪಿಎಂ ಕಿಸಾನ್ ಹಣ ಹೆಚ್ಚಳ ಸೇರಿದಂತೆ ಏನೇಲ್ಲ ಸಿಗಲಿವೆ https://krushirushi.in/Budget-2026 https://krushirushi.in/Budget-2026 Budget 2026-ಬಜೇಟ್ ನಿರೀಕ್ಷೆಯಲ್ಲಿದ್ದ ರೈತರಿಗೆ ಸಿಹಿಸುದ್ದಿ ಕೊಟ್ಟ ಕೇಂದ್ರ ಸರ್ಕಾರ,ಪಿಎಂ ಕಿಸಾನ್ ಹಣ ಹೆಚ್ಚಳ ಸೇರಿದಂತೆ ಏನೇಲ್ಲ ಸಿಗಲಿವೆ

ಫೆಬ್ರವರಿ 1 ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ನಲ್ಲಿ 'ಪಿಎಂ ಕಿಸಾನ್' ಯೋಜನೆಯ ಸಹಾಯಧನ ವಾರ್ಷಿಕ 6,000 ರೂ. ನಿಂದ 8,000 ರೂ.ಗೆ ಏರಿಸುವ ಸಾಧ್ಯತೆಯಿದೆ. ಏರುತ್ತಿರುವ ಕೃಷಿ ವೆಚ್ಚಗಳಿಂದ ಕಂಗಾಲಾಗಿರುವ ರೈತರು ಈ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ. ವಿಶೇಷವಾಗಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ತವರು ರಾಜ್ಯವಾದ ಮಧ್ಯಪ್ರದೇಶದ ರೈತರು ಬೆಂಬಲ ಬೆಲೆ ಏರಿಕೆ, ಸಕಾಲಿಕ ವಿಮೆ ಮತ್ತು ಸಾಲ ಮನ್ನಾಗಾಗಿ ಆಗ್ರಹಿಸುತ್ತಿದ್ದಾರೆ.

ಮುಂಬರುವ ಕೇಂದ್ರ ಬಜೆಟ್ ಅಧಿವೇಶನಕ್ಕೆ ದಿನಗಣನೆ ಆರಂಭವಾಗಿದೆ. ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ ಬಜೆಟ್ ಮೇಲೆ ದೇಶದ ಅನ್ನದಾತರು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ವಿಶೇಷವಾಗಿ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ' ಯೋಜನೆಯಡಿ ರೈತರಿಗೆ ನೀಡಲಾಗುವ ವಾರ್ಷಿಕ ಸಹಾಯಧನವನ್ನು ಹೆಚ್ಚಿಸಲಾಗುತ್ತದೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

ಪಿಎಂ ಕಿಸಾನ್ ಹಣ ಏರಿಕೆ ಸಾಧ್ಯತೆ

ಪ್ರಸ್ತುತ ಪಿಎಂ ಕಿಸಾನ್ ಯೋಜನೆಯಡಿ ಅರ್ಹ ರೈತರಿಗೆ ವಾರ್ಷಿಕ 6,000 ರೂ. ಸಹಾಯಧನವನ್ನು ಮೂರು ಕಂತುಗಳಲ್ಲಿ (ತಲಾ 2,000 ರೂ.) ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ. ಆದರೆ, ಏರುತ್ತಿರುವ ಬೆಲೆಗಳು ಮತ್ತು ಕೃಷಿ ವೆಚ್ಚಗಳ ಹಿನ್ನೆಲೆಯಲ್ಲಿ ಈ ಮೊತ್ತ ಸಾಲುತ್ತಿಲ್ಲ ಎಂಬುದು ರೈತ ಸಂಘಟನೆಗಳ ವಾದ. ಹೀಗಾಗಿ, ಈ ಬಾರಿಯ ಬಜೆಟ್‌ನಲ್ಲಿ ಈ ಮೊತ್ತವನ್ನು ವಾರ್ಷಿಕ 8,000 ರೂ. ಗಳಿಗೆ ಹೆಚ್ಚಿಸುವಂತೆ ಬಲವಾದ ಬೇಡಿಕೆ ಕೇಳಿಬಂದಿದೆ.

ಸರ್ಕಾರದಿಂದ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬೀಳದಿದ್ದರೂ, ಬಜೆಟ್‌ನಲ್ಲಿ ಈ ಬಗ್ಗೆ ಸಿಹಿ ಸುದ್ದಿ ಸಿಗಬಹುದು ಎಂಬ ನಿರೀಕ್ಷೆ ರೈತರಲ್ಲಿದೆ. 2018 ರಲ್ಲಿ ಆರಂಭವಾದ ಈ ಯೋಜನೆ ಕೋಟ್ಯಂತರ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಆಸರೆಯಾಗಿದೆ.

ಇತ್ತೀಚಿನ ವರ್ಷಗಳಲ್ಲಿ ರಸಗೊಬ್ಬರ, ಬೀಜ, ಕೀಟನಾಶಕ, ಡೀಸೆಲ್ ಮತ್ತು ಕೃಷಿ ಉಪಕರಣಗಳ ಬೆಲೆ ಗಗನಕ್ಕೇರಿದೆ. ಕೇವಲ 6,000 ರೂ. ರೈತರಿಗೆ ಯಾವ ಮೂಲೆಗೂ ಸಾಲುತ್ತಿಲ್ಲ. ಹೀಗಾಘಿ ಸಹಾಯಧನ ಹೆಚ್ಚಾದರೆ, ರೈತರು ಕೃಷಿಯಲ್ಲಿ ಹೂಡಿಕೆ ಮಾಡಲು ಮತ್ತು ಸಾಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.

ನಿರೀಕ್ಷೆಯ ಮೂಟೆಯನ್ನೇ ಹೊತ್ತಿದ್ದಾರೆ ಮಧ್ಯಪ್ರದೇಶ ರೈತರು

ದೇಶದ ಕೃಷಿ ಭೂಪಟದಲ್ಲಿ ಮಧ್ಯಪ್ರದೇಶಕ್ಕೆ ಪ್ರಮುಖ ಸ್ಥಾನವಿದೆ. ಗೋಧಿ, ಸೋಯಾಬಿನ್, ಬೇಳೆಕಾಳು ಮತ್ತು ಮಸಾಲೆ ಪದಾರ್ಥಗಳ ಉತ್ಪಾದನೆಯಲ್ಲಿ ಅಗ್ರಗಣ್ಯವಾಗಿರುವ ಈ ರಾಜ್ಯದ ರೈತರು ಬಜೆಟ್ ಮೇಲೆ ಹೆಚ್ಚಿನ ಭರವಸೆ ಇಟ್ಟಿದ್ದಾರೆ. ಅದಕ್ಕೆ ಮತ್ತೊಂದು ಕಾರಣವೆಂದರೆ, ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರು ಇದೇ ರಾಜ್ಯದ ಸೆಹೋರ್ ಜಿಲ್ಲೆಯವರು.

ಸೆಹೋರ್ ಜಿಲ್ಲೆಯು 'ಶರಬತಿ ಗೋಧಿ'ಗೆ ಹೆಸರುವಾಸಿ. ಆದರೆ ಇಲ್ಲಿನ ರೈತರು ತಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದಾರೆ. "ನಮ್ಮ ಬೆಳೆಗಳಿಗೆ ಬೆಂಬಲ ಬೆಲೆ (ಎಂಎಸ್‌ಪಿ) ಸಿಗುತ್ತಿಲ್ಲ. ಈರುಳ್ಳಿ ಬೆಲೆ ಕುಸಿದು ಹೊಲದಲ್ಲೇ ಕೊಳೆಯುತ್ತಿದೆ. ವಿಮೆ ಹಣ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ," ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ನಮ್ಮದೇ ರಾಜ್ಯದ ಸಚಿವರು ಬೇಡಿಕೆ ಈಡೇರಿಸಬಹುದು ಎಂಬ ನಿರೀಕ್ಷೆಯಲ್ಲಿ ಇಲ್ಲಿನ ಅನ್ನದಾತರಿದ್ದಾರೆ.

ರೈತರ ಪ್ರಮುಖ ಬೇಡಿಕೆಗಳೇನು?

 

  • ಬೆಂಬಲ ಬೆಲೆ ಏರಿಕೆ: ಗೋಧಿಗೆ ಕ್ವಿಂಟಾಲ್‌ಗೆ 3,500-4,000 ರೂ. ಮತ್ತು ಸೋಯಾಬಿನ್‌ಗೆ 5,000-6,000 ರೂ. ಬೆಲೆ ನಿಗದಿಪಡಿಸಬೇಕು.
  • ಸಾಲ ಮನ್ನಾ: ಸಾಲದ ಸುಳಿಯಲ್ಲಿ ಸಿಲುಕಿರುವ ರೈತರಿಗೆ ಸಾಲ ಮನ್ನಾ ಮಾಡುವ ಮೂಲಕ ನೆರವಾಗಬೇಕು.
  • ಸಮರ್ಪಕ ವಿಮೆ: ಬೆಳೆ ನಷ್ಟವಾದಾಗ ವಿಮಾ ಪರಿಹಾರ ನೇರವಾಗಿ ಮತ್ತು ತ್ವರಿತವಾಗಿ ರೈತರಿಗೆ ತಲುಪಬೇಕು.
  • ಪಿಎಂ ಕಿಸಾನ್ ಹೆಚ್ಚಳ: ವಾರ್ಷಿಕ ಸಹಾಯಧನ ಏರಿಕೆಯಾಗಬೇಕು.


ಮಧ್ಯಪ್ರದೇಶ ಸರ್ಕಾರ 2026 ಅನ್ನು 'ರೈತ ಕಲ್ಯಾಣ ವರ್ಷ' ಎಂದು ಘೋಷಿಸಿದ್ದರೂ, ಯೋಜನೆಗಳು ಕೇವಲ ಕಾಗದದ ಮೇಲಿರದೆ ರೈತರ ಕೈ ಸೇರಬೇಕು ಎಂಬುದು ಅನ್ನದಾತರ ಒತ್ತಾಯವಾಗಿದೆ. ಬಜೆಟ್ ಕೇವಲ ಅಂಕಿ-ಅಂಶಗಳಾಗದೆ, ತಮ್ಮ ಬದುಕಿನ ಬವಣೆ ನೀಗಿಸುವ ಸಂಜೀವಿನಿಯಾಗಲಿ ಎಂದು ಇವರು ಕಾಯುತ್ತಿದ್ದಾರೆ.

]]>
Sat, 17 Jan 2026 16:52:08 +0530 shivuagrico
Drone pilot training&ಡ್ರೋನ್ ಖರೀದಿಸಲು 8 ಲಕ್ಷ ಸಬ್ಸಿಡಿ, ಉಚಿತ ಡ್ರೋನ್ ಪೈಲಟ್ ತರಬೇತಿ; 15 ದಿನಗಳಲ್ಲಿ ಡ್ರೋನ್‌ ಹಾರಿಸುವುದನ್ನು ಕಲಿಯಿರಿ https://krushirushi.in/Drone-pilot-training-2391 https://krushirushi.in/Drone-pilot-training-2391 Drone pilot training-ಡ್ರೋನ್ ಖರೀದಿಸಲು 8 ಲಕ್ಷ ಸಬ್ಸಿಡಿ, ಉಚಿತ ಡ್ರೋನ್ ಪೈಲಟ್ ತರಬೇತಿ; 15 ದಿನಗಳಲ್ಲಿ ಡ್ರೋನ್‌ ಹಾರಿಸುವುದನ್ನು ಕಲಿಯಿರಿ


ತಾಂತ್ರಿಕತೆಯು ಮುಗಿಲೆತ್ತರಕ್ಕೇರುತ್ತಿರುವ ಈ ಕಾಲದಲ್ಲಿ, ಡ್ರೋನ್ ಪೈಲಟ್‌ಗಳ ಅವಶ್ಯಕತೆ ಗಣನೀಯವಾಗಿ ಹೆಚ್ಚಿದೆ. ಈ ನಿಟ್ಟಿನಲ್ಲಿ, ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಯ ಕೃಷಿ ಪದವೀಧರರಿಗಾಗಿ ಉಚಿತ ಡ್ರೋನ್ ಪೈಲಟ್ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 15 ದಿನಗಳ ವಸತಿಯುತ ಈ ತರಬೇತಿಯು ಡ್ರೋನ್ ಹಾರಾಟದ ಕೌಶಲ್ಯ, ಸಂಬಂಧಿತ ನಿಯಮಗಳು ಮತ್ತು ಕೃಷಿಯಲ್ಲಿ ಡ್ರೋನ್‌ಗಳ ನವೀನ ಉಪಯೋಗಗಳ ಬಗ್ಗೆ ಸಮಗ್ರ ಜ್ಞಾನವನ್ನು ನೀಡುತ್ತದೆ. ಆಸಕ್ತರು ಮಾರ್ಚ್ 31, 2026 ರೊಳಗಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಇದು ಕೃಷಿ ಕ್ಷೇತ್ರದ ಯುವಕರಿಗೆ ಉದ್ಯೋಗಾವಕಾಶಗಳನ್ನು ವಿಸ್ತರಿಸುವ ಒಂದು ಮಹತ್ವದ ಹೆಜ್ಜೆಯಾಗಿದೆ.

ಇಂದಿನ ತಾಂತ್ರಿಕ ಯುಗದಲ್ಲಿ ಡ್ರೋನ್ ಬಳಕೆ ಕೇವಲ ಮನೋರಂಜನೆಗೆ ಸೀಮಿತವಾಗಿಲ್ಲ. ಕೃಷಿ, ಸರ್ವೇಕ್ಷಣೆ, ರಕ್ಷಣೆ ಮತ್ತು ವಿತರಣಾ ಕ್ಷೇತ್ರಗಳಲ್ಲಿ ಡ್ರೋನ್ ಪೈಲಟ್‌ಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಇದನ್ನು ಮನಗಂಡು ಕರ್ನಾಟಕ ಸರ್ಕಾರ ಡ್ರೋನ್‌ ತರಬೇತಿ ಯೋಜನೆಯನ್ನು ಆರಂಭಿಸಿದೆ. ಸಮಾಜ ಕಲ್ಯಾಣ ಇಲಾಖೆಯ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರ ವತಿಯಿಂದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗಾಗಿ ಉಚಿತ ಸುಧಾರಿತ ಡ್ರೋನ್ ಪೈಲಟ್ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಡ್ರೋನ್‌ ತರಬೇತಿ ಪಡೆಯುವುದು ಹೇಗೆ? ಅರ್ಹತೆಗಳೇನು? ಅರ್ಜಿ ಸಲ್ಲಿಕೆ ಹೇಗೆ? ಇತ್ಯಾದಿ ಮಾಹಿತಿಗಳನ್ನು ತಿಳಿಯೋಣ.

ಏನಿದು ಡ್ರೋನ್‌ ತರಬೇತಿ ಯೋಜನೆ?

ಇದು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರ ಹಮ್ಮಿಕೊಂಡಿರುವ 'ಉಚಿತ ಸುಧಾರಿತ ಡ್ರೋನ್ ಪೈಲಟ್ ತರಬೇತಿ' ಕಾರ್ಯಕ್ರಮವಾಗಿದೆ. ಮುಖ್ಯವಾಗಿ ಪರಿಶಿಷ್ಟ ಜಾತಿಯ ಕೃಷಿ ಪದವೀಧರರು ಅಥವಾ ಕೃಷಿ ವಿಜ್ಞಾನ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿರುವ ಈ ಯೋಜನೆಯು, ಅಭ್ಯರ್ಥಿಗಳಿಗೆ 15 ದಿನಗಳ ಕಾಲ ಉಚಿತ ವಸತಿಯುತ ತರಬೇತಿಯನ್ನು ನೀಡುತ್ತದೆ. ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ನಡೆಯುವ ಈ ತರಬೇತಿಯಲ್ಲಿ ಡ್ರೋನ್ ಹಾರಾಟದ ಪ್ರಾಯೋಗಿಕ ಜ್ಞಾನ, ಡಿಜಿಸಿಎ ನಿಯಮಗಳು ಮತ್ತು ಕೃಷಿ ಕ್ಷೇತ್ರದಲ್ಲಿ ಡ್ರೋನ್ ಅನ್ವಯಿಕೆಗಳ ಬಗ್ಗೆ (ಕೀಟನಾಶಕ ಸಿಂಪಡಣೆ, ಸಮೀಕ್ಷೆ ಇತ್ಯಾದಿ) ಸಮಗ್ರ ಮಾಹಿತಿ ನೀಡಲಾಗುತ್ತದೆ. ಅರ್ಹ ಯುವಜನತೆಯನ್ನು ತಾಂತ್ರಿಕವಾಗಿ ಸಬಲಗೊಳಿಸಿ, ಬೆಳೆಯುತ್ತಿರುವ ಡ್ರೋನ್ ತಂತ್ರಜ್ಞಾನದ ಮಾರುಕಟ್ಟೆಯಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಯೋಜನೆಯ ಪ್ರಮುಖ ಅಂಶಗಳು

  • ತರಬೇತಿ ನೀಡುವ ಸಂಸ್ಥೆ: ಈ ವಿಶೇಷ ತರಬೇತಿಯನ್ನು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರ ವತಿಯಿಂದ ಆಯೋಜಿಸಲಾಗಿದೆ.
  • ತರಬೇತಿಯ ಕಾಲಾವಧಿ: ಆಯ್ಕೆಯಾದ ಅಭ್ಯರ್ಥಿಗಳಿಗೆ ಒಟ್ಟು 15 ದಿನಗಳ ಕಾಲ ಸುಧಾರಿತ ಡ್ರೋನ್ ತರಬೇತಿಯನ್ನು ನೀಡಲಾಗುತ್ತದೆ.
  • ತರಬೇತಿಯ ಸ್ವರೂಪ: ಇದು ವಸತಿಯುತ ತರಬೇತಿಯಾಗಿದ್ದು, ಅಭ್ಯರ್ಥಿಗಳು ತರಬೇತಿ ಅವಧಿಯಲ್ಲಿ ಅಲ್ಲಿಯೇ ವಾಸ್ತವ್ಯ ಹೂಡುವುದು ಕಡ್ಡಾಯವಾಗಿರುತ್ತದೆ.
  • ತರಬೇತಿ ನಡೆಯುವ ಸ್ಥಳಗಳು: ಈ ಕಾರ್ಯಕ್ರಮವನ್ನು ಕರ್ನಾಟಕದಾದ್ಯಂತ ಇರುವ ನಾಲ್ಕು ಕಂದಾಯ ವಿಭಾಗಗಳಲ್ಲಿ (ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ) ಪ್ರತ್ಯೇಕವಾಗಿ ನಡೆಸಲು ಉದ್ದೇಶಿಸಲಾಗಿದೆ.
  • ಉಚಿತ ಸೌಲಭ್ಯಗಳು: ಈ ಯೋಜನೆಯಡಿ ಅಭ್ಯರ್ಥಿಗಳಿಗೆ ತರಬೇತಿ ಶುಲ್ಕವಿಲ್ಲದೆ ಸಂಪೂರ್ಣವಾಗಿ ಉಚಿತ ತರಬೇತಿಯನ್ನು ನೀಡಲಾಗುತ್ತದೆ.
  • ವಸತಿ ಮತ್ತು ಊಟ: ತರಬೇತಿಯ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಉಚಿತವಾಗಿ ವಸತಿ ಸೌಲಭ್ಯ ಹಾಗೂ ಆಹಾರದ ವ್ಯವಸ್ಥೆಯನ್ನು ಇಲಾಖೆಯೇ ಭರಿಸಲಿದೆ.

ಯಾರು ಅರ್ಜಿ ಸಲ್ಲಿಸಬಹುದು?

  • ಈ ತರಬೇತಿಯು ಕೇವಲ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮಾತ್ರ ಸೀಮಿತವಾಗಿದೆ.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷದಿಂದ ಗರಿಷ್ಠ 45 ವರ್ಷದೊಳಗಿರಬೇಕು.
  • ಅಭ್ಯರ್ಥಿಗಳು ಯು.ಜಿ.ಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಕೃಷಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾಗಿರಬೇಕು ಅಥವಾ ಕೃಷಿ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಪದವೀಧರರು ಅಥವಾ ಕೃಷಿ ವಿಜ್ಞಾನಿಗಳಾಗಿರಬೇಕು.
  • ಅರ್ಜಿದಾರರು ಕಡ್ಡಾಯವಾಗಿ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
  • ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ. 5.00 ಲಕ್ಷ ಮೀರಿರಬಾರದು.

ತರಬೇತಿಯಲ್ಲಿ ನೀವು ಏನು ಕಲಿಯುವಿರಿ?

  • ಅಭ್ಯರ್ಥಿಗಳಿಗೆ ವಿವಿಧ ಮಾದರಿಯ ಡ್ರೋನ್‌ಗಳು, ಅವುಗಳ ವಿನ್ಯಾಸ ಮತ್ತು ಅವು ಕೆಲಸ ಮಾಡುವ ತಾಂತ್ರಿಕ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ.
  • ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ನಿಯಮಾವಳಿಗಳಿಗೆ ಅನುಗುಣವಾಗಿ ಡ್ರೋನ್‌ಗಳನ್ನು ಸುರಕ್ಷಿತವಾಗಿ ಹಾರಿಸುವ ಪ್ರಾಯೋಗಿಕ ಅನುಭವವನ್ನು ಅಭ್ಯರ್ಥಿಗಳಿಗೆ ಒದಗಿಸಲಾಗುತ್ತದೆ.
  • ಡ್ರೋನ್‌ನ ವಿವಿಧ ಬಿಡಿಭಾಗಗಳನ್ನು ಸರಿಯಾಗಿ ಜೋಡಿಸುವ ವಿಧಾನ, ಬ್ಯಾಟರಿ ನಿರ್ವಹಣೆ ಮತ್ತು ತಾಂತ್ರಿಕ ಸಮಸ್ಯೆಗಳು ಎದುರಾದಾಗ ಅವುಗಳನ್ನು ಸರಿಪಡಿಸುವ (ರಿಪೇರಿ) ಕೌಶಲ್ಯಗಳನ್ನು ಕಲಿಸಲಾಗುತ್ತದೆ.
  • ರೈತರಿಗೆ ಅನುಕೂಲವಾಗುವಂತೆ ಡ್ರೋನ್ ಮೂಲಕ ಕೀಟನಾಶಕಗಳನ್ನು ವೈಜ್ಞಾನಿಕವಾಗಿ ಸಿಂಪಡಿಸುವುದು ಮತ್ತು ಬೆಳೆಗಳ ಆರೋಗ್ಯವನ್ನು ಸಮೀಕ್ಷೆ ಮಾಡುವ ಸುಧಾರಿತ ವಿಧಾನಗಳ ಬಗ್ಗೆ ವಿಶೇಷ ತರಬೇತಿ ನೀಡಲಾಗುತ್ತದೆ.

ತರಬೇತಿಯ ಪ್ರಮುಖ ನಿಯಮಗಳು ಮತ್ತು ಷರತ್ತುಗಳು:

  • ಅರ್ಜಿ ಸಲ್ಲಿಸುವಾಗ ನೀವು ಆಯ್ಕೆ ಮಾಡಿದ ವಿಭಾಗದ ಆಧಾರದ ಮೇಲೆ ತರಬೇತಿ ಕೇಂದ್ರವನ್ನು ನೀಡಲಾಗುತ್ತದೆ. ಆದರೆ, ಅಗತ್ಯವಿದ್ದಲ್ಲಿ ನಿಮ್ಮ ತರಬೇತಿ ವಿಭಾಗವನ್ನು ಬದಲಾಯಿಸುವ ಸಂಪೂರ್ಣ ಹಕ್ಕನ್ನು ಇಲಾಖೆಯು ಕಾಯ್ದಿರಿಸಿದೆ.
  • ಅಭ್ಯರ್ಥಿಗಳು ತರಬೇತಿಯ ಎಲ್ಲಾ ನೀತಿ-ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ನಿಗದಿಪಡಿಸಿದ ವೇಳಾಪಟ್ಟಿಯಂತೆ ಹಾಜರಿರಬೇಕು. ನಿಯಮ ಉಲ್ಲಂಘಿಸಿದರೆ ತರಬೇತಿಯಿಂದ ಅನರ್ಹಗೊಳಿಸಲಾಗುವುದು.
  • ಬೋಧಕರು, ಅಧ್ಯಾಪಕರು ಅಥವಾ ತರಬೇತಿ ಸಂಸ್ಥೆಯ ಸಿಬ್ಬಂದಿಯೊಂದಿಗೆ ದುರ್ನಡತೆ ಅಥವಾ ಅವಿಧೇಯತೆಯಿಂದ ವರ್ತಿಸುವ ಅಭ್ಯರ್ಥಿಗಳನ್ನು ತಕ್ಷಣವೇ ತರಬೇತಿಯಿಂದ ಹೊರಹಾಕಲಾಗುತ್ತದೆ.
  • ಆಯ್ಕೆಯಾದ ಪ್ರತಿಯೊಬ್ಬ ಅಭ್ಯರ್ಥಿಯು 15 ದಿನಗಳ ಪೂರ್ಣಾವಧಿ ತರಬೇತಿಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು.
  • ತರಬೇತಿಯ ಅವಧಿಯಲ್ಲಿ ಯಾವುದಾದರೂ ತುರ್ತು ಸಂದರ್ಭ ಎದುರಾದರೆ ಮಾತ್ರ ಇಲಾಖೆ ಮತ್ತು ತರಬೇತಿ ಸಂಸ್ಥೆಯ ಅನುಮತಿ ಪಡೆದು ಆವರಣದಿಂದ ಹೊರಗೆ ಹೋಗಲು ಅವಕಾಶವಿರುತ್ತದೆ.
  • ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡುವುದರಿಂದ ಅಥವಾ ವೆಬ್‌ಸೈಟ್ ಗಮನಿಸದೆ ಇರುವುದರಿಂದ ಉಂಟಾಗುವ ಯಾವುದೇ ಲೋಪಗಳಿಗೆ ಅಭ್ಯರ್ಥಿಗಳೇ ನೇರ ಹೊಣೆಗಾರರಾಗಿರುತ್ತಾರೆ.
  • ಅಭ್ಯರ್ಥಿಗಳು ಪ್ರಸ್ತುತ ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಹೊಂದಿರಬೇಕು.

ಡ್ರೋನ್‌ ತರಬೇತಿಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಅಭ್ಯರ್ಥಿಗಳು ಮೊದಲಿಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ಸೇವಾ ಪೋರ್ಟಲ್ ಗೆ ಭೇಟಿ ನೀಡಬೇಕು.
  • ವೆಬ್‌ಸೈಟ್‌ನ ಮುಖಪುಟದಲ್ಲಿ ಕಾಣಿಸುವ 'Apply' (ಅರ್ಜಿ ಸಲ್ಲಿಸಿ) ಎಂಬ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಪ್ರಕ್ರಿಯೆಯನ್ನು ಆರಂಭಿಸಬೇಕು.
  • ನಂತರ ತೆರೆಯುವ ಪುಟದಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಆಧಾರ್‌ನಲ್ಲಿರುವಂತೆ ನಿಮ್ಮ ಹೆಸರನ್ನು ನಿಖರವಾಗಿ ನಮೂದಿಸಿ, ಅಲ್ಲಿರುವ ಕ್ಯಾಪ್ಚಾ ಕೋಡ್ ಟೈಪ್ ಮಾಡಿ 'Proceed' ಬಟನ್ ಒತ್ತಬೇಕು.
  • ಮುಂದಿನ ಹಂತದಲ್ಲಿ ನಿಮ್ಮ ವೈಯಕ್ತಿಕ ವಿವರಗಳು, ಶೈಕ್ಷಣಿಕ ಮಾಹಿತಿಗಳನ್ನು ಭರ್ತಿ ಮಾಡಬೇಕು ಹಾಗೂ ಕೇಳಲಾದ ಅಗತ್ಯ ದಾಖಲೆಗಳನ್ನು (ಜಾತಿ ಪ್ರಮಾಣ ಪತ್ರ, ಫೋಟೋ ಇತ್ಯಾದಿ) ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು.
  • ನೀವು ನೀಡಿದ ಎಲ್ಲಾ ಮಾಹಿತಿಗಳು ಸರಿಯಾಗಿವೆಯೇ ಎಂದು ಮತ್ತೊಮ್ಮೆ ಪರಿಶೀಲಿಸಿ, ಅಂತಿಮವಾಗಿ 'Submit' ಬಟನ್ ಕ್ಲಿಕ್ ಮಾಡುವ ಮೂಲಕ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂದು?

ಅಂತಿಮ ದಿನಾಂಕ: ಈ ಉಚಿತ ಸುಧಾರಿತ ಡ್ರೋನ್ ಪೈಲಟ್ ತರಬೇತಿಯನ್ನು ಪಡೆಯಲು ಆಸಕ್ತಿ ಹೊಂದಿರುವ ಮತ್ತು ಅರ್ಹತೆ ಇರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 2026ರ ಮಾರ್ಚ್ 31 ಕೊನೆಯ ದಿನಾಂಕವಾಗಿದೆ. ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು ಅಭ್ಯರ್ಥಿಗಳು ಕೊನೆಯ ದಿನದವರೆಗೆ ಕಾಯದೆ ಮುಂಚಿತವಾಗಿಯೇ ಅರ್ಜಿಯನ್ನು ಸಲ್ಲಿಸುವುದು ಉತ್ತಮ.

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು:

  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಇತ್ತೀಚಿನ ಫೋಟೋ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಸಕ್ರಿಯ ಮೊಬೈಲ್ ಸಂಖ್ಯೆ



ಇತರೆ ಖಾಸಗಿ ಮತ್ತು ಕೇಂದ್ರ ಸರ್ಕಾರದ ಯೋಜನೆಗಳು:

  • ನಮೋ ಡ್ರೋನ್ ದೀದಿ ಯೋಜನೆ: ಕೇಂದ್ರ ಸರ್ಕಾರದ ಈ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯೆಯರಿಗೆ ಆದ್ಯತೆ ನೀಡಲಾಗುತ್ತದೆ. ಇಲ್ಲಿ ಡ್ರೋನ್ ಖರೀದಿಸಲು ಮತ್ತು ತರಬೇತಿ ಪಡೆಯಲು ಶೇಕಡಾ 80 ರಷ್ಟು ರಿಯಾಯಿತಿ (ಗರಿಷ್ಠ 8 ಲಕ್ಷ ರೂಪಾಯಿಗಳವರೆಗೆ) ನೀಡಲಾಗುತ್ತದೆ.
  • ಖಾಸಗಿ ತರಬೇತಿ ಸಂಸ್ಥೆಗಳು: ಕರ್ನಾಟಕದಲ್ಲಿ ಗರುಡ ಏರೋಸ್ಪೇಸ್, ಜೇನ್ ಏರೋಸ್ಪೇಸ್ ಮತ್ತು ಏರೋಫೈಲ್ ಅಕಾಡೆಮಿಗಳಂತಹ ಡಿಜಿಸಿಎ ಮಾನ್ಯತೆ ಪಡೆದ ಸಂಸ್ಥೆಗಳು ವೃತ್ತಿಪರ ತರಬೇತಿಯನ್ನು ನೀಡುತ್ತವೆ. ಆದರೆ ಇಲ್ಲಿ ತರಬೇತಿ ಪಡೆಯಲು ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
  • ಏರ್‌ಬಸ್ ತರಬೇತಿ ಕೇಂದ್ರ: ಜಾಗತಿಕ ಸಂಸ್ಥೆಯಾದ ಏರ್‌ಬಸ್ ಬೆಂಗಳೂರಿನಲ್ಲಿ ತನ್ನ ತರಬೇತಿ ಕೇಂದ್ರವನ್ನು ಹೊಂದಿದ್ದು, ಇಲ್ಲಿ ಮೈಕ್ರೋ ಮತ್ತು ಸಣ್ಣ ಗಾತ್ರದ ಡ್ರೋನ್‌ಗಳನ್ನು ಹಾರಿಸುವ ಬಗ್ಗೆ ಡಿಜಿಸಿಎ ನಿಯಮದಂತೆ ಸುಧಾರಿತ ತರಬೇತಿಯನ್ನು ನೀಡಲಾಗುತ್ತದೆ.
  • ಕೃಷಿ ವಿವಿಗಳ ಸಹಯೋಗ: ರಾಜ್ಯದ ರಾಯಚೂರು ಕೃಷಿ ವಿಶ್ವವಿದ್ಯಾಲಯದಂತಹ ಸಂಸ್ಥೆಗಳು ಕೃಷಿ ಡ್ರೋನ್‌ಗಳ ಬಳಕೆ ಮತ್ತು ಅದರ ಅನ್ವಯಗಳ ಬಗ್ಗೆ ಕಾಲಕಾಲಕ್ಕೆ ಅಲ್ಪಾವಧಿ ಕೋರ್ಸ್‌ಗಳನ್ನು ಆಯೋಜಿಸುತ್ತವೆ.

]]>
Sat, 17 Jan 2026 09:00:32 +0530 shivuagrico
Bhoo odethana yojane&ಭೂ ಒಡೆತನ ಯೋಜನೆ ಪರಿಷ್ಕರಣೆ: ಸ್ವಂತ ಭೂಮಿ ಖರೀದಿಸಲು 12.50 ಲಕ್ಷ ರೂ. ವರೆಗೆ ಸಹಾಯಧನ https://krushirushi.in/Bhoo-odethana-yojane-2390 https://krushirushi.in/Bhoo-odethana-yojane-2390 Bhoo odethana yojane-ಭೂ ಒಡೆತನ ಯೋಜನೆ ಪರಿಷ್ಕರಣೆ: ಸ್ವಂತ ಭೂಮಿ ಖರೀದಿಸಲು 12.50 ಲಕ್ಷ ರೂ. ವರೆಗೆ ಸಹಾಯಧನ


ಕರ್ನಾಟಕ ಸರ್ಕಾರವು ಭೂ ಒಡೆತನ ಯೋಜನೆಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಭೂಹೀನ ಮಹಿಳಾ ಕೃಷಿ ಕಾರ್ಮಿಕರಿಗೆ ಸ್ವಂತ ಭೂಮಿ ಒದಗಿಸಲು ಘಟಕ ವೆಚ್ಚವನ್ನು ಹೆಚ್ಚಿಸಲಾಗಿದೆ. ಬೆಂಗಳೂರು, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ 25 ಲಕ್ಷ ರೂ. ಹಾಗೂ ಇತರ ಜಿಲ್ಲೆಗಳಲ್ಲಿ 20 ಲಕ್ಷ ರೂ. ವೆಚ್ಚ ನಿಗದಿಪಡಿಸಲಾಗಿದೆ. ಶೇ.50 ಸಹಾಯಧನ ಹಾಗೂ ಶೇ.50 ಸಾಲ ನೀಡಲಾಗುತ್ತದೆ. ಇದರಿಂದ ಬಡವರು ಕೂಡ ಭೂಮಿ ಹೊಂದುವಂತಾಗುತ್ತದೆ.


ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಭೂಹೀನ ಮಹಿಳಾ ಕೃಷಿ ಕಾರ್ಮಿಕರನ್ನು ಆರ್ಥಿಕವಾಗಿ ಸಬಲೀಕರಿಸಲು "ಭೂ ಒಡೆತನ ಯೋಜನೆ" ಅಡಿಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ. 2026ರ ಸಾಲಿನಲ್ಲಿ ಜಮೀನುಗಳ ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಘಟಕ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಸರ್ಕಾರದ ಈ ಸೌಲಭ್ಯವನ್ನು ಬಳಸಿಕೊಂಡು ಬಡವರು ಕೂಡ ಸ್ವಂತ ಭೂಮಿಯನ್ನು ಹೊಂದಲು ಈ ಯೋಜನೆ ಅನುಕೂಲ ಮಾಡಿಕೊಡಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ದೊರೆಯುವ ಪರಿಷ್ಕೃತ ಸಹಾಯಧನದ ಮೊತ್ತ ಎಷ್ಟು? ಪ್ರಯೋಜನಗಳೇನು? ಅರ್ಜಿ ಸಲ್ಲಿಕೆ ಹೇಗೆ? ಇತ್ಯಾದಿ ಮಾಹಿತಿಗಳನ್ನು ತಿಳಿಯೋಣ.

 

ಏನಿದು ಭೂ ಒಡೆತನ ಯೋಜನೆ?

ಕರ್ನಾಟಕ ಸರ್ಕಾರದ ಭೂ ಒಡೆತನ ಯೋಜನೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಭೂಹೀನ ಮಹಿಳಾ ಕೃಷಿ ಕಾರ್ಮಿಕರಿಗೆ ಕೃಷಿ ಭೂಮಿಯನ್ನು ಒದಗಿಸುವ ಪ್ರಮುಖ ಯೋಜನೆಯಾಗಿದ್ದು, 2026ರ ಸಾಲಿನಲ್ಲಿ ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಘಟಕ ವೆಚ್ಚವನ್ನು 25.00 ಲಕ್ಷ ರೂ.ಗೆ ಹಾಗೂ ರಾಜ್ಯದ ಇತರೆ ಜಿಲ್ಲೆಗಳಲ್ಲಿ 20.00 ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ. ಈ ಯೋಜನೆಯಡಿ ಒಟ್ಟು ವೆಚ್ಚದ 50% ಸಹಾಯಧನ ಹಾಗೂ ಉಳಿದ 50% ಅನ್ನು ವಾರ್ಷಿಕ 6% ಬಡ್ಡಿ ದರದಲ್ಲಿ ಸಾಲವಾಗಿ ನೀಡಲಾಗುತ್ತದೆ. ಇದರ ಮೂಲಕ ಫಲಾನುಭವಿಗಳು ಕನಿಷ್ಠ 2 ಎಕರೆ ಖುಷ್ಕಿ ಅಥವಾ 1 ಎಕರೆ ತರಿ ಭೂಮಿಯನ್ನು ಖರೀದಿಸಿ ತಮ್ಮ ಹೆಸರಿನಲ್ಲಿ ನೋಂದಾಯಿಸಿಕೊಳ್ಳಬಹುದು.

ಯೋಜನೆಯ ಪ್ರಮುಖ ಉದ್ದೇಶ

ಗ್ರಾಮೀಣ ಭಾಗದ ಭೂಹೀನ ದಲಿತ ಮತ್ತು ಆದಿವಾಸಿ ಮಹಿಳೆಯರಿಗೆ ಕೃಷಿ ಭೂಮಿಯನ್ನು ಕೊಡಿಸುವ ಮೂಲಕ ಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಜಮೀನನ್ನು ಕುಟುಂಬದ ಹಿರಿಯ ಮಹಿಳೆಯ ಹೆಸರಿನಲ್ಲಿಯೇ ನೇರವಾಗಿ ನೋಂದಣಿ ಮಾಡಲಾಗುತ್ತದೆ.

ಪರಿಷ್ಕೃತ ಘಟಕ ವೆಚ್ಚ ಮತ್ತು ಸಹಾಯಧನ ಎಷ್ಟು?

  • ಕರ್ನಾಟಕ ಸರ್ಕಾರವು ಭೂಮಿಯ ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ಭೂ ಒಡೆತನ ಯೋಜನೆಯ ಹಣಕಾಸಿನ ನೆರವನ್ನು ಎರಡು ಹಂತಗಳಲ್ಲಿ ವಿಂಗಡಿಸಿದೆ.
  • ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಜಮೀನು ಖರೀದಿಸಲು ಒಟ್ಟು ಘಟಕ ವೆಚ್ಚವನ್ನು 25.00 ಲಕ್ಷ ರೂ.ಎಂದು ನಿಗದಿಪಡಿಸಲಾಗಿದೆ. ಈ ನಾಲ್ಕು ಜಿಲ್ಲೆಗಳ ಫಲಾನುಭವಿಗಳಿಗೆ ಸರ್ಕಾರದಿಂದ 12.50 ಲಕ್ಷ ರೂ. ಸಹಾಯಧನ ಸಿಗಲಿದ್ದು, ಉಳಿದ 12.50 ಲಕ್ಷ ರೂ. ಮೊತ್ತವನ್ನು ಸಾಲದ ರೂಪದಲ್ಲಿ ನೀಡಲಾಗುತ್ತದೆ.
  • ರಾಜ್ಯದ ಇನ್ನುಳಿದ 27 ಜಿಲ್ಲೆಗಳಲ್ಲಿ ಭೂಮಿ ಖರೀದಿಸಲು ಒಟ್ಟು ಘಟಕ ವೆಚ್ಚವನ್ನು 20.00 ಲಕ್ಷ ರೂ. ಎಂದು ನಿಗದಿಪಡಿಸಲಾಗಿದೆ. ಈ ಜಿಲ್ಲೆಗಳ ಫಲಾನುಭವಿಗಳಿಗೆ ಸರ್ಕಾರವು 10.00 ಲಕ್ಷ ರೂ.ಸಹಾಯಧನವನ್ನು ನೀಡುತ್ತದೆ ಮತ್ತು ಬಾಕಿ ಇರುವ 10.00 ಲಕ್ಷ ರೂ. ಮೊತ್ತವನ್ನು ಕಡಿಮೆ ಬಡ್ಡಿದರದ ಸಾಲವಾಗಿ ಒದಗಿಸುತ್ತದೆ.

    ಸಾಲ ಮರುಪಾವತಿ ಮತ್ತು ಬಡ್ಡಿ ದರ ಎಷ್ಟು?

    • ಭೂ ಒಡೆತನ ಯೋಜನೆಯಡಿ ಫಲಾನುಭವಿಗಳು ಪಡೆಯುವ ಸಾಲದ ಮೊತ್ತಕ್ಕೆ ಸರ್ಕಾರವು ವಾರ್ಷಿಕ ಶೇಕಡಾ 6% ರಷ್ಟು ಅತ್ಯಲ್ಪ ಬಡ್ಡಿಯನ್ನು ವಿಧಿಸುತ್ತದೆ.
    • ಈ ಸಾಲವನ್ನು ಫಲಾನುಭವಿಗಳು ತಕ್ಷಣವೇ ಪಾವತಿಸಬೇಕಿಲ್ಲ; ಬದಲಿಗೆ 10 ರಿಂದ 20 ಅರ್ಧವಾರ್ಷಿಕ ಕಂತುಗಳಲ್ಲಿ ಮರುಪಾವತಿ ಮಾಡಲು ಅವಕಾಶ ನೀಡಲಾಗಿದೆ.
    • ಅಂದರೆ, ಫಲಾನುಭವಿಗಳು ಪ್ರತಿ ಆರು ತಿಂಗಳಿಗೊಮ್ಮೆ ಸಾಲದ ಕಂತನ್ನು ಪಾವತಿಸುವ ಮೂಲಕ ಒಟ್ಟು 10 ವರ್ಷಗಳ ಸುದೀರ್ಘ ಅವಧಿಯಲ್ಲಿ ಸಾಲವನ್ನು ತೀರಿಸಬಹುದು.
    • ಈ ಹಂತ-ಹಂತದ ಮರುಪಾವತಿ ವ್ಯವಸ್ಥೆಯು ಭೂಹೀನ ಮಹಿಳಾ ಕೃಷಿ ಕಾರ್ಮಿಕರಿಗೆ ಆರ್ಥಿಕ ಹೊರೆಯಾಗದಂತೆ ಜಮೀನಿನ ಮಾಲೀಕತ್ವವನ್ನು ಪಡೆಯಲು ಸಹಾಯ ಮಾಡುತ್ತದೆ.

    ಖರೀದಿಸಬಹುದಾದ ಭೂಮಿಯ ಪ್ರಮಾಣ ಎಷ್ಟು?

    • ಭೂ ಒಡೆತನ ಯೋಜನೆಯ ಹಣಕಾಸಿನ ನೆರವನ್ನು ಬಳಸಿಕೊಂಡು ಫಲಾನುಭವಿಗಳು ಕನಿಷ್ಠ 2 ಎಕರೆ ಖುಷ್ಕಿ (ಒಣ) ಭೂಮಿಯನ್ನು ಖರೀದಿಸಲು ಅವಕಾಶವಿದೆ.
    • ಒಂದು ವೇಳೆ ನೀರಾವರಿ ಸೌಲಭ್ಯವಿರುವ ತರಿ (ನೀರಾವರಿ) ಭೂಮಿಯನ್ನು ಖರೀದಿಸುವುದಾದರೆ, ಫಲಾನುಭವಿಗಳು 1 ಎಕರೆ ವರೆಗೆ ಜಮೀನನ್ನು ಪಡೆಯಬಹುದು.
    • ಇನ್ನು ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಯೋಗ್ಯವಾದ ತೋಟಗಾರಿಕಾ ಭೂಮಿಯನ್ನು ಖರೀದಿಸಲು ಇಚ್ಛಿಸಿದರೆ, ಕನಿಷ್ಠ ಅರ್ಧ ಎಕರೆ ಜಮೀನನ್ನು ಈ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು.
    • ಒಟ್ಟಾರೆಯಾಗಿ, ಸರ್ಕಾರ ನಿಗದಿಪಡಿಸಿದ ಘಟಕ ವೆಚ್ಚಕ್ಕೆ ( 20 ಲಕ್ಷ ರೂ. ಅಥವಾ 25 ಲಕ್ಷ ರೂ.) ಮಾರುಕಟ್ಟೆಯಲ್ಲಿ ಲಭ್ಯವಿರುವ ಜಮೀನಿನ ಪ್ರಮಾಣ ಅಥವಾ ಮೇಲೆ ತಿಳಿಸಿದ ಕನಿಷ್ಠ ಪ್ರಮಾಣದಲ್ಲಿ ಭೂಮಿಯನ್ನು ಖರೀದಿಸಲು ಅವಕಾಶ ನೀಡಲಾಗುತ್ತದೆ.

    ಅರ್ಹತಾ ಮಾನದಂಡಗಳೇನು?

    • ಭೂ ಒಡೆತನ ಯೋಜನೆಯ ಹಣಕಾಸಿನ ನೆರವನ್ನು ಬಳಸಿಕೊಂಡು ಫಲಾನುಭವಿಗಳು ಕನಿಷ್ಠ 2 ಎಕರೆ ಖುಷ್ಕಿ (ಒಣ) ಭೂಮಿಯನ್ನು ಖರೀದಿಸಲು ಅವಕಾಶವಿದೆ.
    • ಒಂದು ವೇಳೆ ನೀರಾವರಿ ಸೌಲಭ್ಯವಿರುವ ತರಿ (ನೀರಾವರಿ) ಭೂಮಿಯನ್ನು ಖರೀದಿಸುವುದಾದರೆ, ಫಲಾನುಭವಿಗಳು 1 ಎಕರೆ ವರೆಗೆ ಜಮೀನನ್ನು ಪಡೆಯಬಹುದು.
    • ಇನ್ನು ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಯೋಗ್ಯವಾದ ತೋಟಗಾರಿಕಾ ಭೂಮಿಯನ್ನು ಖರೀದಿಸಲು ಇಚ್ಛಿಸಿದರೆ, ಕನಿಷ್ಠ ಅರ್ಧ ಎಕರೆ (ಅಂದರೆ 20 ಗುಂಟೆ) ಜಮೀನನ್ನು ಈ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು.
    • ಒಟ್ಟಾರೆಯಾಗಿ, ಸರ್ಕಾರ ನಿಗದಿಪಡಿಸಿದ ಘಟಕ ವೆಚ್ಚಕ್ಕೆ (₹20 ಲಕ್ಷ ಅಥವಾ ₹25 ಲಕ್ಷ) ಮಾರುಕಟ್ಟೆಯಲ್ಲಿ ಲಭ್ಯವಿರುವ ಜಮೀನಿನ ಪ್ರಮಾಣ ಅಥವಾ ಮೇಲೆ ತಿಳಿಸಿದ ಕನಿಷ್ಠ ಪ್ರಮಾಣದಲ್ಲಿ ಭೂಮಿಯನ್ನು ಖರೀದಿಸಲು ಅವಕಾಶ ನೀಡಲಾಗುತ್ತದೆ.


    ಭೂ ಒಡೆತನಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ?

    • ಮೊದಲು ಸೇವಾ ಸಿಂಧು ಅಧಿಕೃತ ವೆಬ್‌ಸೈಟ್‌ಗೆ (sevasindhu.karnataka.gov.in) ಭೇಟಿ ನೀಡಿ.
    • ನೀವು ಮೊದಲ ಬಾರಿಗೆ ಭೇಟಿ ನೀಡುತ್ತಿದ್ದರೆ, 'ಹೊಸ ಬಳಕೆದಾರ ನೋಂದಣಿ' ಮೂಲಕ ನಿಮ್ಮ ವಿವರ ದಾಖಲಿಸಿ.
    • ನಿಮ್ಮ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಪೋರ್ಟಲ್‌ಗೆ ಲಾಗಿನ್ ಆಗಿ.
    • ಲಾಗಿನ್ ಆದ ನಂತರ 'ಇಲಾಖೆಗಳು ಮತ್ತು ಸೇವೆಗಳು' ವಿಭಾಗಕ್ಕೆ ಹೋಗಿ.
    • ಅಲ್ಲಿ ಹುಡುಕಾಟ ಬಾಕ್ಸ್‌ನಲ್ಲಿ 'ಭೂ ಮಾಲೀಕತ್ವ ಯೋಜನೆ' ಎಂದು ಟೈಪ್ ಮಾಡಿ ಹುಡುಕಿ.
    • ಯೋಜನೆ ಕಾಣಿಸಿಕೊಂಡಾಗ 'ಆನ್‌ಲೈನ್‌ನಲ್ಲಿ ಅನ್ವಯಿಸು' ಬಟನ್ ಮೇಲೆ ಕ್ಲಿಕ್ ಮಾಡಿ.
    • ಅರ್ಜಿಯಲ್ಲಿ ಕೇಳಲಾದ ಹೆಸರು, ವಿಳಾಸ, ಆಧಾರ್ ಮತ್ತು ಆರ್‌.ಡಿ ಸಂಖ್ಯೆಗಳಂತಹ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
    • ಅಗತ್ಯವಿರುವ ಜಾತಿ, ಆದಾಯ ಮತ್ತು ಭೂಹೀನ ಕೃಷಿ ಕಾರ್ಮಿಕ ಪ್ರಮಾಣಪತ್ರಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
    • ಎಲ್ಲಾ ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿ 'ಸಲ್ಲಿಸು' ಬಟನ್ ಒತ್ತಿ.
    • ಅರ್ಜಿ ಸಲ್ಲಿಕೆಯಾದ ನಂತರ ಸಿಗುವ 'ಸ್ವೀಕೃತಿ ಪತ್ರ' ಅಥವಾ ಟೋಕನ್ ಸಂಖ್ಯೆಯನ್ನು ಭವಿಷ್ಯದ ಉಲ್ಲೇಖಕ್ಕಾಗಿ ಉಳಿಸಿಕೊಳ್ಳಿ.


    ಸಹಾಯವಾಣಿ

    ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ - 94823 00400 ಅನ್ನು ಸಂಪರ್ಕಿಸಬಹುದು.


    ಹೆಚ್ಚುವರಿ ಸೌಲಭ್ಯಗಳು

    ಈ ಯೋಜನೆಯಡಿ ಜಮೀನು ಪಡೆದ ಫಲಾನುಭವಿಗಳಿಗೆ ನೀರಾವರಿ ಸೌಲಭ್ಯವಿಲ್ಲದಿದ್ದರೆ, ಸರ್ಕಾರದ 'ಗಂಗಾ ಕಲ್ಯಾಣ ಯೋಜನೆ' ಅಡಿಯಲ್ಲಿ ಉಚಿತವಾಗಿ ಬೋರೆವೆಲ್ ಕೊರೆಸಿಕೊಡುವ ಸೌಲಭ್ಯವನ್ನೂ ಸಹ ಪಡೆಯಲು ಅವಕಾಶವಿದೆ.

    ಅಗತ್ಯವಿರುವ ದಾಖಲೆಗಳು

    • ಇತ್ತೀಚಿನ ಭಾವಚಿತ್ರ.
    • ಜಾತಿ ಮತ್ತು ಆದಾಯ ಪ್ರಮಾಣ ಪತ್ರ (RD ಸಂಖ್ಯೆಯೊಂದಿಗೆ).
    • ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ.
    • ಭೂಹೀನ ಕೃಷಿ ಕಾರ್ಮಿಕ ದೃಢೀಕರಣ ಪತ್ರ (ತಹಶೀಲ್ದಾರ್ ಅವರಿಂದ).
    • ಖರೀದಿಸಲಿರುವ ಜಮೀನಿನ ದಾಖಲೆಗಳು (ದರ ಪಟ್ಟಿ/ಯೋಜನಾ ವರದಿ).

]]>
Fri, 16 Jan 2026 18:00:40 +0530 shivuagrico
Kuri sakanike&ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ: ಕುರಿ ಸಾಕಾಣಿಕೆಗೆ 43,750 ರೂಪಾಯಿ ರೈತರ ಖಾತೆಗೆ ನೇರ ಜಮಾ https://krushirushi.in/Kuri-sakanike-2389 https://krushirushi.in/Kuri-sakanike-2389 Kuri sakanike-ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ: ಕುರಿ ಸಾಕಾಣಿಕೆಗೆ 43,750 ರೂಪಾಯಿ ರೈತರ ಖಾತೆಗೆ ನೇರ ಜಮಾ

ಕುರಿ ಸಾಕಾಣಿಕೆ ಈಗ ಲಾಭದಾಯಕ ಉದ್ಯಮವಾಗಿದೆ. ಕುರಿ ಸಾಕಣೆ ಮಾಡುವ ಯುವಕರನ್ನು ಪ್ರೋತ್ಸಾಹಿಸಲು ಕರ್ನಾಟಕ ಸರ್ಕಾರ 'ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ' ಜಾರಿಗೆ ತಂದಿದೆ. ಈ ಯೋಜನೆಯಡಿ 20 ಕುರಿ/ಮೇಕೆ ಮತ್ತು 1 ಟಗರು/ಹೋತದ ಘಟಕ ನೀಡಲಾಗುತ್ತದೆ. ಒಟ್ಟು 1,75,000 ರೂ. ವೆಚ್ಚದಲ್ಲಿ 50% ಸಾಲ, 25% ಸಹಾಯಧನ, 25% ಫಲಾನುಭವಿ ವಂತಿಕೆ ಇರುತ್ತದೆ. ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶ ನೀಡಲು ಇದು ಸಹಕಾರಿ. ಈ ಯೋಜನೆಯ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಿಂದೊಮ್ಮೆ ಒಂದು ಸಮುದಾಯಕ್ಕಷ್ಟೇ ಸೀಮಿತವಾಗಿದ್ದ ಕುರಿ ಸಾಕಾಣಿಕೆಯು ಇಂದು ಒಂದು ವೃತ್ತಿಪರ ಉದ್ಯೋಗವಾಗಿ ಮಾರ್ಪಾಟ್ಟಿದೆ. ಹೆಚ್ಚಿನ ಯುವಕರು ಕುರಿ ಸಾಕಾಣಿಕೆಯತ್ತ ಆಕರ್ಷಿತರಾಗುತ್ತಿದ್ದಾರೆ. ಕರ್ನಾಟಕ ಸರ್ಕಾರವು ರಾಜ್ಯದ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಜೀವನಮಟ್ಟವನ್ನು ಸುಧಾರಿಸಲು ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ' ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಆರ್ಥಿಕವಾಗಿ ಹಿಂದುಳಿದ ಸದಸ್ಯರಿಗೆ ಸುಸ್ಥಿರ ಜೀವನೋಪಾಯವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಏನಿದು ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ?

ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯು ಕರ್ನಾಟಕ ಸರ್ಕಾರದ ಪಶುಸಂಗೋಪನಾ ಇಲಾಖೆಯ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ರಾಜ್ಯದ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಆರ್ಥಿಕವಾಗಿ ಹಿಂದುಳಿದ ಸದಸ್ಯರಿಗೆ ಸುಸ್ಥಿರ ಜೀವನೋಪಾಯವನ್ನು ಕಲ್ಪಿಸುವ ಉದ್ದೇಶ ಹೊಂದಿದೆ. ಈ ಯೋಜನೆಯಡಿ ಪ್ರತಿ ಫಲಾನುಭವಿಗೆ ಒಟ್ಟು 1,75,000 ರೂ.ವೆಚ್ಚದಲ್ಲಿ 20 ಕುರಿ/ಮೇಕೆ ಮತ್ತು 1 ಟಗರು/ಹೋತವನ್ನೊಳಗೊಂಡ (20+1) ಘಟಕವನ್ನು ನೀಡಲಾಗುತ್ತದೆ. ಈ ಮೊತ್ತದಲ್ಲಿ ಶೇ. 50 ರಷ್ಟು ಎನ್.ಸಿ.ಡಿ.ಸಿ ವತಿಯಿಂದ ಸಾಲ, ಶೇ. 25 ರಷ್ಟು ರಾಜ್ಯ ಸರ್ಕಾರದ ಸಹಾಯಧನ ಮತ್ತು ಉಳಿದ ಶೇ. 25 ರಷ್ಟು ಫಲಾನುಭವಿಯ ವಂತಿಕೆಯಾಗಿರುತ್ತದೆ.

 

ಯೋಜನೆಯ ಪ್ರಮುಖ ಅಂಶಗಳು

  • ಆರ್ಥಿಕ ನೆರವು ಮತ್ತು ಘಟಕಗಳ ಸ್ಥಾಪನೆ;ರಾಜ್ಯದ ಕುರಿಗಾಹಿಗಳ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರವು ಹೊಸ ಕುರಿ ಸಾಕಾಣಿಕೆ ಘಟಕಗಳನ್ನು ಸ್ಥಾಪಿಸಲು ಗಣನೀಯ ಪ್ರಮಾಣದ ಹಣಕಾಸಿನ ನೆರವು ನೀಡುತ್ತದೆ. ಈ ಯೋಜನೆಯಡಿ, ಕುರಿಗಾಹಿಗಳು ತಮ್ಮ ಅಸ್ತಿತ್ವದಲ್ಲಿರುವ ಸಾಕಾಣಿಕೆ ಕೇಂದ್ರಗಳನ್ನು ವಿಸ್ತರಿಸಲು ಅಥವಾ ಹೊಸದಾಗಿ 20 ಕುರಿ ಹಾಗೂ 1 ಟಗರು ಒಳಗೊಂಡ ಘಟಕಗಳನ್ನು ಪ್ರಾರಂಭಿಸಲು ಬ್ಯಾಂಕ್‌ಗಳ ಮೂಲಕ ಸಾಲ ಮತ್ತು ಸರ್ಕಾರದ ಮೂಲಕ ಸಬ್ಸಿಡಿ (ಸಹಾಯಧನ) ಪಡೆಯಬಹುದು.
  • ಗ್ರಾಮೀಣ ಸ್ವಯಂ ಉದ್ಯೋಗ ಮತ್ತು ಸ್ವಾವಲಂಬನೆ; ಗ್ರಾಮೀಣ ಭಾಗದ ಯುವಕರು ಮತ್ತು ಸಾಂಪ್ರದಾಯಿಕ ಕುರಿಗಾಹಿ ಕುಟುಂಬಗಳು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುವುದನ್ನು ತಡೆಯುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಕುರಿ ಸಾಕಾಣಿಕೆಯನ್ನು ಲಾಭದಾಯಕ ಉದ್ದಿಮೆಯನ್ನಾಗಿ ಪರಿವರ್ತಿಸುವ ಮೂಲಕ, ಗ್ರಾಮೀಣ ಜನರಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶಗಳನ್ನು ಒದಗಿಸಿ, ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಇದು ಉತ್ತೇಜನ ನೀಡುತ್ತದೆ.
  • ಮಾಂಸ ಮತ್ತು ಉಣ್ಣೆ ಉತ್ಪಾದನೆ ವೃದ್ಧಿ; ರಾಜ್ಯದ ಕೃಷಿ ಆಧಾರಿತ ಆರ್ಥಿಕತೆಯನ್ನು ಬಲಪಡಿಸಲು ಮಾಂಸ ಮತ್ತು ಉಣ್ಣೆಯ ಉತ್ಪಾದನೆಯನ್ನು ಹೆಚ್ಚಿಸುವುದು ಅತ್ಯಗತ್ಯವಾಗಿದೆ. ವೈಜ್ಞಾನಿಕ ಹೈನುಗಾರಿಕೆ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಗುಣಮಟ್ಟದ ಮಾಂಸವನ್ನು ಉತ್ಪಾದಿಸಿ ಮಾರುಕಟ್ಟೆಗೆ ಪೂರೈಸಲು ಈ ಯೋಜನೆ ಸಹಕಾರಿಯಾಗಿದೆ. ಇದು ಕೇವಲ ಕುರಿಗಾಹಿಗಳ ಆದಾಯವನ್ನು ಹೆಚ್ಚಿಸುವುದಲ್ಲದೆ, ರಾಜ್ಯದ ಒಟ್ಟು ಜಿಡಿಪಿಗೆ ಪಶುಸಂಗೋಪನಾ ವಲಯದಿಂದ ಹೆಚ್ಚಿನ ಕೊಡುಗೆ ನೀಡುವಂತೆ ಮಾಡುತ್ತದೆ.

ಯೋಜನೆಯಡಿ ದೊರೆಯುವ ಆರ್ಥಿಕ ನೆರವು ಎಷ್ಟು?

  • ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದ ಸಾಲ: ಒಟ್ಟು ಘಟಕ ವೆಚ್ಚದ ಶೇಕಡಾ 50 ರಷ್ಟು ಭಾಗ ಅಂದರೆ 87,500 ರೂ. ಹಣವನ್ನು ಎನ್‌ಸಿಡಿಸಿ ಮೂಲಕ ಸಾಲದ ರೂಪದಲ್ಲಿ ನೀಡಲಾಗುತ್ತದೆ. ಈ ಮೊತ್ತವನ್ನು ಫಲಾನುಭವಿಯು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಬೇಕಿರುತ್ತದೆ.
  • ಸರ್ಕಾರದ ಸಹಾಯಧನ : ಕುರಿಗಾಹಿಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಕರ್ನಾಟಕ ಸರ್ಕಾರವು ಒಟ್ಟು ವೆಚ್ಚದ ಶೇಕಡಾ 25 ರಷ್ಟು ಮೊತ್ತವನ್ನು ಸಹಾಯಧನದ ರೂಪದಲ್ಲಿ ನೀಡುತ್ತದೆ. ಅಂದರೆ 43,750 ರೂ. ಹಣವು ಉಚಿತ ಸಹಾಯಧನವಾಗಿದ್ದು, ಇದನ್ನು ಮರುಪಾವತಿ ಮಾಡುವ ಅಗತ್ಯವಿರುವುದಿಲ್ಲ.
  • ಫಲಾನುಭವಿಯ ವಂತಿಕೆ: ಯೋಜನೆಯಲ್ಲಿ ಫಲಾನುಭವಿಯ ಪಾಲುದಾರಿಕೆಯನ್ನು ಖಚಿತಪಡಿಸಿಕೊಳ್ಳಲು, ಒಟ್ಟು ವೆಚ್ಚದ ಶೇಕಡಾ 25 ರಷ್ಟು ಭಾಗ ಅಂದರೆ 43,750 ರೂ. ಹಣವನ್ನು ಸ್ವತಃ ಅರ್ಜಿದಾರರೇ ಭರಿಸಬೇಕಾಗುತ್ತದೆ.

ಘಟಕದ ರಚನೆ ಮತ್ತು ಸ್ವರೂಪ ಹೇಗಿರಬೇಕು?

ಈ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಒಂದು ಸಣ್ಣ ಪ್ರಮಾಣದ ಕುರಿ ಅಥವಾ ಮೇಕೆ ಸಾಕಾಣಿಕೆ ಘಟಕವನ್ನು ಮಂಜೂರು ಮಾಡಲಾಗುತ್ತದೆ. ಈ ಘಟಕವು ಒಟ್ಟು 21 ಪ್ರಾಣಿಗಳನ್ನು ಒಳಗೊಂಡಿರುತ್ತದೆ, ಅದರಲ್ಲಿ 20 ಹೆಣ್ಣು ಕುರಿ/ಮೇಕೆಗಳು ಮತ್ತು ಸಂತಾನೋತ್ಪತ್ತಿಗಾಗಿ 1 ಗಂಡು ಟಗರು ಅಥವಾ ಹೋತವನ್ನು ನೀಡಲಾಗುತ್ತದೆ. ಇದನ್ನು ವೈಜ್ಞಾನಿಕವಾಗಿ ಒಂದು ಲಾಭದಾಯಕ ಸಾಕಾಣಿಕಾ ಘಟಕವೆಂದು ಪರಿಗಣಿಸಲಾಗುತ್ತದೆ.

ಒಟ್ಟು ವೆಚ್ಚದ ವಿವರ

ಒಂದು ಪೂರ್ಣ ಪ್ರಮಾಣದ ಘಟಕವನ್ನು ಸ್ಥಾಪಿಸಲು ತಗಲುವ ಒಟ್ಟು ಮೊತ್ತವನ್ನು 1,75,000 ರೂ. (ಒಂದು ಲಕ್ಷದ ಎಪ್ಪತ್ತೈದು ಸಾವಿರ ರೂಪಾಯಿಗಳು) ಎಂದು ನಿಗದಿಪಡಿಸಲಾಗಿದೆ. ಈ ಮೊತ್ತವು ಪ್ರಾಣಿಗಳ ಖರೀದಿ ಮತ್ತು ಇತರ ಪ್ರಾರಂಭಿಕ ವೆಚ್ಚಗಳನ್ನು ಒಳಗೊಂಡಿರುತ್ತದೆ.

ಅರ್ಹತಾ ಮಾನದಂಡಗಳೇನು?

  • ಈ ಯೋಜನೆಯ ಲಾಭ ಪಡೆಯಲು ಅರ್ಜಿದಾರರು ಕಡ್ಡಾಯವಾಗಿ ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
  • ಅರ್ಜಿದಾರರು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರಬೇಕು, ಅಂದರೆ ವಯಸ್ಕರಾಗಿರಬೇಕು.
  • ಕುರಿಗಾಹಿ ವೃತ್ತಿಯಲ್ಲಿ ತೊಡಗಿಸಿಕೊಂಡಿರಬೇಕು. ಇದು ಕುರುಬ ಸಮುದಾಯದವರು ಅಥವಾ ಸಕ್ರಿಯವಾಗಿ ಕುರಿ ಸಾಕಾಣಿಕೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡಿರುವವರಿಗೆ ಅನ್ವಯಿಸುತ್ತದೆ.

ಸಂಘಟನೆ ಮತ್ತು ತಾಂತ್ರಿಕ ನೋಂದಣಿ

  • ಫಲಾನುಭವಿಯು ಸ್ಥಳೀಯ ಅಥವಾ ಜಿಲ್ಲಾ ಮಟ್ಟದ 'ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘ'ದ ಕಡ್ಡಾಯ ಸದಸ್ಯರಾಗಿರಬೇಕು. ಸದಸ್ಯರಲ್ಲದವರಿಗೆ ಈ ಯೋಜನೆಯಡಿ ಸೌಲಭ್ಯ ಸಿಗುವುದಿಲ್ಲ.
  • ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅರ್ಜಿದಾರರು ಕೃಷಿ ಇಲಾಖೆಯ ಫ್ರೂಟ್ಸ್ (FRUITS) ಪೋರ್ಟಲ್‌ fruits.karnataka.gov.in/ ನಲ್ಲಿ ನೋಂದಾಯಿಸಿಕೊಂಡಿರಬೇಕು. ಇದರೊಂದಿಗೆ, ಮಾರಾಟ ಪ್ರಕ್ರಿಯೆಗಾಗಿ NeML (National E-Market Limited) ಆನ್‌ಲೈನ್ ಮಾರ್ಕೆಟಿಂಗ್ ಪ್ಲಾಟ್‌ಫಾರ್ಮ್‌ನಲ್ಲಿಯೂ ಹೆಸರು ನೋಂದಾಯಿಸಿರುವುದು ಅತ್ಯಗತ್ಯ.

ಪ್ರಮುಖ ಷರತ್ತುಗಳು ಏನೇನು?

  • ಕುರಿ ಅಥವಾ ಮೇಕೆಗಳನ್ನು ವೈಜ್ಞಾನಿಕವಾಗಿ ಸಾಕಲು ಅರ್ಜಿದಾರರ ಬಳಿ ಕನಿಷ್ಠ 1000 ಚದರ ಅಡಿಗಳಷ್ಟು ಸ್ವಂತ ಜಾಗ ಲಭ್ಯವಿರಬೇಕು. ಪ್ರಾಣಿಗಳ ವಾಸಸ್ಥಳ ಮತ್ತು ನಿರ್ವಹಣೆಗೆ ಇದು ಅವಶ್ಯಕ.
  • ಯೋಜನೆಯ ಲಾಭವು ಹೆಚ್ಚಿನ ಕುಟುಂಬಗಳಿಗೆ ತಲುಪಲಿ ಎಂಬ ಉದ್ದೇಶದಿಂದ, ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
  • ಅರ್ಜಿದಾರರು ಕಳೆದ 3 ವರ್ಷಗಳಲ್ಲಿ ಪಶುಸಂಗೋಪನಾ ಇಲಾಖೆಯ ಯಾವುದೇ ಯೋಜನೆಗಳ ಅಡಿಯಲ್ಲಿ ಯಾವುದೇ ರೀತಿಯ ಆರ್ಥಿಕ ನೆರವು ಅಥವಾ ಸಹಾಯಧನವನ್ನು ಪಡೆದಿರಬಾರದು. ಒಂದು ವೇಳೆ ಈ ಹಿಂದೆ ನೆರವು ಪಡೆದಿದ್ದಲ್ಲಿ, ಅವರು ಈ ಯೋಜನೆಗೆ ಅನರ್ಹರಾಗುತ್ತಾರೆ.

ಯೋಜನೆಯ ಪ್ರಸ್ತುತ ಸ್ಥಿತಿ ಏನು?

ಪ್ರಸ್ತುತ 2026ರ ಆರಂಭದ ಮಾಹಿತಿಯಂತೆ, ಈ ಯೋಜನೆಯು ರಾಜ್ಯಾದ್ಯಂತ ಜಾರಿಯಲ್ಲಿದ್ದರೂ ಕೆಲವು ಜಿಲ್ಲೆಗಳಲ್ಲಿ ಅನುದಾನದ ಬಿಡುಗಡೆ ವಿಳಂಬವಾಗಿರುವ ವರದಿಗಳಿವೆ. ಕಳೆದ ವರ್ಷಗಳಲ್ಲಿ ಸಾವಿರಾರು ರೈತರು ಇದರ ಲಾಭ ಪಡೆದಿದ್ದಾರೆ. ಪ್ರಸ್ತುತ ಸಾಲಿನ ಹೊಸ ಅರ್ಜಿ ಸಲ್ಲಿಕೆ ಮತ್ತು ಅನುದಾನದ ಲಭ್ಯತೆಯ ಬಗ್ಗೆ ಮಾಹಿತಿ ಪಡೆಯಲು ರೈತರು ತಕ್ಷಣವೇ ತಮ್ಮ ಜಿಲ್ಲಾ ಪಶುಸಂಗೋಪನಾ ಕಚೇರಿಯನ್ನು ಸಂಪರ್ಕಿಸುವುದು ಸೂಕ್ತ.

ಅರ್ಜಿ ಸಲ್ಲಿಸುವುದು ಹೇಗೆ?

  • ಯೋಜನೆಯ ಲಾಭ ಪಡೆಯಲು ಇಚ್ಛಿಸುವ ಆಸಕ್ತ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ತಾಲ್ಲೂಕು ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಕಚೇರಿಗೆ ಅಥವಾ ಸಹಾಯಕ ನಿರ್ದೇಶಕರ ಕಚೇರಿಗೆ ಖುದ್ದಾಗಿ ಭೇಟಿ ನೀಡಬೇಕು. ಅಲ್ಲಿ ಇಲಾಖೆಯು ನಿಗದಿಪಡಿಸಿದ ಅಧಿಕೃತ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು.
  • ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ನಿಗದಿತ ಅವಧಿಯೊಳಗೆ ಸ್ಥಳೀಯ ಕಚೇರಿಗೆ ಸಲ್ಲಿಸಬೇಕು.



ಫಲಾನುಭವಿಗಳ ಆಯ್ಕೆ ಹೇಗೆ?

ಸಲ್ಲಿಸಲಾದ ಅರ್ಜಿಗಳನ್ನು ಪರಿಶೀಲಿಸಲು ಜಿಲ್ಲಾ ಮಟ್ಟದಲ್ಲಿ ಒಂದು ಅಧಿಕೃತ ಸಮಿತಿಯನ್ನು ರಚಿಸಲಾಗಿರುತ್ತದೆ. ಈ ಸಮಿತಿಯು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಪಶುಸಂಗೋಪನಾ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರು ಮತ್ತು ಲೀಡ್ ಬ್ಯಾಂಕ್ ಮ್ಯಾನೇಜರ್‌ಗಳು ಸದಸ್ಯರಾಗಿರುತ್ತಾರೆ. ಈ ಸಮಿತಿಯು ಅರ್ಜಿದಾರರ ಅರ್ಹತೆ ಮತ್ತು ಲಭ್ಯವಿರುವ ಗುರಿಯ ಆಧಾರದ ಮೇಲೆ ಅಂತಿಮವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ.


ಅಗತ್ಯವಿರುವ ದಾಖಲೆಗಳು

  • ಆಧಾರ್ ಕಾರ್ಡ್/ಗುರುತಿನ ಚೀಟಿ
  • ಪಡಿತರ ಚೀಟಿ
  • ಬ್ಯಾಂಕ್ ಪಾಸ್‌ಬುಕ್ ಪ್ರತಿ
  • ಇತ್ತೀಚಿನ ಭಾವಚಿತ್ರ
  • ಜಾತಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ಸಹಕಾರಿ ಸಂಘದ ಸದಸ್ಯತ್ವದ ಪುರಾವೆ
]]>
Fri, 16 Jan 2026 08:37:56 +0530 shivuagrico
Koli Kuri shed&ಕುರಿ,ಕೋಳಿ,ದನದ ಶೆಡ್ ನಿರ್ಮಾಣಕ್ಕೆ ರೈತರ ಖಾತೆಗೆ ಜಮಾ ಆಗಲಿದೆ 57,000 ರೂಪಾಯಿ https://krushirushi.in/Koli-Kuri-shed-2388 https://krushirushi.in/Koli-Kuri-shed-2388 Koli shed-ಕುರಿ,ಕೋಳಿ,ದನದ ಶೆಡ್ ನಿರ್ಮಾಣಕ್ಕೆ ರೈತರ ಖಾತೆಗೆ ಜಮಾ ಆಗಲಿದೆ 57,000 ರೂಪಾಯಿ

ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯ ನಂತರ ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಜಾನುವಾರು ಸಾಕಾಣಿಕೆ ಪ್ರಮುಖ ಜೀವನಾಧಾರವಾಗಿದೆ. ರೈತರ ಆದಾಯ ಹೆಚ್ಚಿಸಲು, ಸುರಕ್ಷಿತ ಹಾಗೂ ಸ್ವಚ್ಛ ಪರಿಸರದಲ್ಲಿ ಜಾನುವಾರುಗಳ ಆರೋಗ್ಯಕರ ಬೆಳವಣಿಗೆಗೆ ನೆರವಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಸಬ್ಸಿಡಿ ಮತ್ತು ಸಹಾಯಧನ ಯೋಜನೆಗಳನ್ನು ಜಾರಿಗೆ ತಂದಿವೆ. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಾನುವಾರುಗಳ ಶೆಡ್‌ಗಳ ನಿರ್ಮಾಣಕ್ಕೆ 57 ಸಾವಿರ ರೂ.ಗಳ ಸಾಯಧನವನ್ನು ಪಡೆಯಬಹುದಾಗಿದೆ. ಜೊತೆಗೆ ವೈಯಕ್ತಿಕ ಕಾಮಗಾರಿಗೆ ಸರ್ಕಾರದಿಂದ ಸಹಾಯಧನ ಲಭ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಶೆಡ್‌ಗಳ ನಿರ್ಮಾಣಕ್ಕೆ ಸಹಾಯಧನ ಪಡೆಯುವುದು ಹೇಗೆ ಎಂಬುದನ್ನು ತಿಳಿಯೋಣ.

ಏನಿದು ಶೆಡ್‌ ನಿರ್ಮಾಣ ಸಹಾಯಧನ ಯೋಜನೆ?

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮುಖ್ಯ ಉದ್ದೇಶವು ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬದ ವಯಸ್ಕ ಸದಸ್ಯರಿಗೆ, ಅವರು ಕೌಶಲ್ಯರಹಿತ ದೈಹಿಕ ಕೆಲಸ ಮಾಡಲು ಸ್ವಯಂಸೇವಕರಾಗಿ ಮುಂದೆ ಬಂದಲ್ಲಿ, ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 100 ದಿನಗಳ ಖಾತರಿಯ ವೇತನದ ಉದ್ಯೋಗವನ್ನು ಒದಗಿಸುವುದಾಗಿದೆ. ಈ ಯೋಜನೆಯಡಿ ಒಟ್ಟು 266 ರೀತಿಯ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದ್ದು, ಅವುಗಳಲ್ಲಿ ಶಾಲೆ ಕಾಂಪೌಂಡ್, ಆಟದ ಮೈದಾನ, ಶೌಚಾಲಯ, ಅಡುಗೆ ಕೋಣೆ, ಮಳೆ ನೀರು ಕೊಯ್ಲು, ಅರಣ್ಯೀಕರಣ, ಪೌಷ್ಟಿಕ ಕೈತೋಟ, ಕೆರೆ ಅಭಿವೃದ್ಧಿ, ರಾಜಕಾಲುವೆ, ಚರಂಡಿ, ಸಮುದಾಯ ಭವನ, ಗೋದಾಮು, ಸ್ವಚ್ಛ ಸಂಕೀರ್ಣ ಘಟಕ, ಬೂದು ನೀರು ನಿರ್ವಹಣೆ, ಸ್ಮಶಾನ ಅಭಿವೃದ್ಧಿ ಮುಂತಾದವುಗಳು ಸೇರಿವೆ. ಮಹಾತ್ಮ ಗಾಂಧಿ ನರೇಗಾ ಯೋಜನೆಯು ಗ್ರಾಮೀಣ ಜನರ ಜೀವನ ಮಟ್ಟ ಸುಧಾರಿಸಲು ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಮೂಲಕ ಆರ್ಥಿಕ ನೆರವು ನೀಡುತ್ತದೆ. ಇದರಲ್ಲಿ ದನ, ಕುರಿ, ಮೇಕೆ, ಮತ್ತು ಕೋಳಿ ಸಾಕಣೆಗಾಗಿ ವೈಯಕ್ತಿಕ ಶೆಡ್‌ ನಿರ್ಮಾಣಕ್ಕೆ ಸಹಾಯಧನವೂ ಲಭ್ಯವಿದೆ.

ಸಹಾಯಧನದ ಮೊತ್ತ ಎಷ್ಟು?

  • ಹಸು ಮತ್ತು ಎಮ್ಮೆ ಕೊಟ್ಟಿಗೆ ನಿರ್ಮಾಣಕ್ಕೆ ಎಲ್ಲಾ ವರ್ಗದ ರೈತರಿಗೂ 57,000 ರೂ. ಸಹಾಯಧನ ನೀಡಲಾಗುತ್ತದೆ.
  • ಈ ಮೊತ್ತದಲ್ಲಿ ಸುಮಾರು 10,556 ರೂ. ಕೂಲಿಯಾಗಿ ಮತ್ತು ಉಳಿದ 46,644 ರೂ. ಸಾಮಗ್ರಿ ಸಹಾಯಧನವಾಗಿ ಸಿಗುತ್ತದೆ. ಕುರಿ, ಕೋಳಿ, ಹಂದಿ ಶೆಡ್‌ ನಿರ್ಮಾಣಕ್ಕೂ ಸಹಾಯಧನ ಲಭ್ಯವಿದೆ.
  • ಒಂದು ಕುಟುಂಬವು ಜೀವಿತಾವಧಿಯಲ್ಲಿ ನರೇಗಾ ವೈಯಕ್ತಿಕ ಕಾಮಗಾರಿಗಳ ಅಡಿಯಲ್ಲಿ ಗರಿಷ್ಠ 5 ಲಕ್ಷ ರೂ.ವರೆಗೆ ಸಹಾಯಧನ ಪಡೆಯಬಹುದಾಗಿದೆ. ಕೃಷಿ ಹೊಂಡ, ತೋಟಗಾರಿಕೆ ಬೆಳೆ, ಕ್ಷೇತ್ರ ಬದು ಇತ್ಯಾದಿ ವೈಯಕ್ತಿಕ ಕಾಮಗಾರಿಗಳಿಗೂ ನೆರವು ಸಿಗುತ್ತದೆ.

 

ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ನರೇಗಾ ಯೋಜನೆಯ ಲಾಭ ಪಡೆಯಲು ಮೊದಲು ಜಾಬ್ ಕಾರ್ಡ್ ಹೊಂದಿರಬೇಕು. ಇಲ್ಲದಿದ್ದರೆ, ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.
ನೀವು ಜಾನುವಾರುಗಳನ್ನು ಸಾಕುತ್ತಿದ್ದೀರಿ ಮತ್ತು ಶೆಡ್ ಅಗತ್ಯವಿದೆ ಎಂಬುದನ್ನು ದೃಢೀಕರಿಸಲು ಸ್ಥಳೀಯ ಪಶು ಚಿಕಿತ್ಸಾಲಯಕ್ಕೆ ಭೇಟಿ ನೀಡಿ, ದೃಢೀಕರಣ ಪತ್ರ ಪಡೆಯಬೇಕು. ಎಲ್ಲಾ ದಾಖಲೆಗಳೊಂದಿಗೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ಪರಿಶೀಲನೆ ನಂತರ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಆರಂಭಕ್ಕೆ ಅನುಮತಿ ಸಿಗುತ್ತದೆ.

ದಾಖಲೆಗಳು

  • ಜಾಬ್ ಕಾರ್ಡ್ ಪ್ರತಿ
  • ಆಧಾರ್ ಕಾರ್ಡ್
  • ಭೂಮಿಯ ದಾಖಲಾತಿ (ಪಹಣಿ)
  • ಬ್ಯಾಂಕ್ ಖಾತೆಯ ವಿವರಗಳು
  • ಪಶು ವೈದ್ಯಾಧಿಕಾರಿಗಳ ದೃಢೀಕರಣ ಪತ್ರ

ಕುರಿ ಮತ್ತು ಮೇಕೆ ಸಾಕಾಣಿಕೆಗಾಗಿ ಇತರೆ ಯೋಜನೆಗಳು

ಹೈನುಗಾರಿಕೆಯ ಜೊತೆಗೆ ಕುರಿ ಮತ್ತು ಮೇಕೆ ಸಾಕಾಣಿಕೆಗೆ ಉತ್ತೇಜನ ನೀಡಲು ಕರ್ನಾಟಕ ಸರ್ಕಾರವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ.

  • ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ:

ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿಯಲ್ಲಿ, ರಾಜ್ಯದ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿನ 10 ಸಾವಿರ ಆರ್ಥಿಕವಾಗಿ ಹಿಂದುಳಿದ ಕುರಿಗಾಹಿ ಸದಸ್ಯರಿಗೆ 20+1 ಕುರಿ/ಮೇಕೆ ಘಟಕಗಳನ್ನು ಒದಗಿಸಲಾಗುತ್ತಿದೆ. ಯೋಜನೆಯಡಿ ಘಟಕದ ಒಟ್ಟು ವೆಚ್ಚ 1,75,000 ರೂ. ಆಗಿದೆ.
ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (NCDC) ಮತ್ತು ಭಾರತ ಸರ್ಕಾರದ ಸಹಕಾರ ಇಲಾಖೆಯಿಂದ ಶೇ. 50% ಸಾಲ ನೀಡಲಾಗುತ್ತದೆ. ರಾಜ್ಯ ಸರ್ಕಾರದಿಂದ ಶೇ. 25% ಸಹಾಯಧನ (ಸಬ್ಸಿಡಿ) ಲಭ್ಯವಾಗಲಿದ್ದು, ಫಲಾನುಭವಿ ಸದಸ್ಯರಿಂದ ಶೇ. 25% ವಂತಿಕೆ ಸಂಗ್ರಹಿಸಲಾಗುತ್ತದೆ.

  • ವಿಶೇಷ ಘಟಕ ಯೋಜನೆ / ಗಿರಿಜನ ಉಪಯೋಜನೆ

ಈ ಯೋಜನೆಯಡಿ ಕರ್ನಾಟಕ ಕುರಿ ಮತ್ತು ಕುರಿ ಉಣ್ಣೆ ಅಭಿವೃದ್ಧಿ ನಿಗಮದಿಂದ ಕುರಿ/ಮೇಕೆ ಘಟಕ ವಿತರಣೆ ಮಾಡಲಾಗುತ್ತದೆ. ಯೋಜನೆ ಪ್ರಯೋಜನ ಪಡೆಯಲು ಫಲಾನುಭವಿಗಳು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST)ದವರಾಗಿರಬೇಕು. 6+1 ಕುರಿ/ಮೇಕೆ ಘಟಕ ವಿತರಣೆ ಮಾಡಲಾಗುವುದು. ಘಟಕದ ಮೊತ್ತ 45,000 ರೂ.ಗಳಾಗಿವೆ. ಇದರಲ್ಲಿ 90% ಸಹಾಯಧನ ನೀಡಲಾಗುತ್ತದೆ. ಅಂದರೆ 40,500 ರೂ. ಘಟಕದ ವೆಚ್ಚದಲ್ಲಿ ಫಲಾನುಭವಿ ವಂತಿಕೆ / ಬ್ಯಾಂಕ್‌ ಸಾಲದ ಮತ್ತ ಕೇವಲ 4,500 ರೂ.ಗಳಾಗಿವೆ. ಉಳಿದ ಮೊತ್ತವನ್ನು ಸರ್ಕಾರವೇ ಪಾವತಿ ಮಾಡಲಿದೆ.

]]>
Thu, 15 Jan 2026 21:05:19 +0530 shivuagrico
Koli sakanike&ಉಚಿತ 20 ಕೋಳಿ ಮರಿ ವಿತರಣೆಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ https://krushirushi.in/Koli-sakanike-2387 https://krushirushi.in/Koli-sakanike-2387 Koli sakanike-ಉಚಿತ 20 ಕೋಳಿ ಮರಿ ವಿತರಣೆಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ


ಗ್ರಾಮೀಣ ಪ್ರದೇಶದ ಬಡ ಕುಟುಂಬದವರನ್ನು ಆರ್ಥಿಕವಾಗಿ ಸದೃಢಗೊಳಿಸಲು ಮತ್ತು ಅಪೌಷ್ಟಿಕತೆ ಹೋಗಲಾಡಿಸುವ ಉದ್ದೇಶದಿಂದ ಉಚಿತವಾಗಿ ಕೋಳಿ ಮರಿಗಳನ್ನು ವಿತರಿಸಲು ಸರ್ಕಾರ ಮುಂದಾಗಿದೆ.


ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ ಕೋಳಿ ಮರಿಗಳನ್ನು ವಿತರಿಸಲಾಗುವುದು. ಜೇನು, ಕುರಿ, ಹಸು ಸಾಕಾಣಿಕೆಗೆ ಪ್ರೋತ್ಸಾಹ ನೀಡುತ್ತಿರುವ ಮಾದರಿಯಲ್ಲಿ ನಾಟಿ ಕೋಳಿ ಸಾಕಾಣಿಕೆ ಉತ್ತೇಜಿಸಲು ಸರ್ಕಾರ ಕ್ರಮ ಕೈಗೊಂಡಿದ್ದು, ಬಡ ಕುಟುಂಬಗಳ ಮಹಿಳೆಯರಿಗೆ ತಲಾ 20 ನಾಟಿ ಕೋಳಿ ಮರಿಗಳನ್ನು ವಿತರಿಸಲಾಗುವುದು. ಪ್ರತಿ ತಾಲೂಕಿಗೆ 106 ಫಲಾನುಭವಿಗಳಂತೆ ಗುರಿ ನಿಗದಿಪಡಿಸಲಾಗಿದೆ. ಬಡತನ ರೇಖೆಗಿಂತ ಕೆಳಗಿನ ರೈತ ಮಹಿಳೆಯರು, ಸ್ವಸಹಾಯ ಗುಂಪಿನ ಮಹಿಳಾ ಸದಸ್ಯರು, ಪ್ರಾಥಮಿಕ ಕೋಳಿ ಸಹಕಾರ ಸಂಘದ ಮಹಿಳಾ ಸದಸ್ಯರಿಗೆ, ರೈತ ಉತ್ಪಾದಕ ಸಂಸ್ಥೆಯ ಮಹಿಳಾ ಯೋಜನೆಯಡಿ ಆದ್ಯತೆ ನೀಡಲಾಗುವುದು.

ನಾಟಿ ಕೋಳಿಗಳಿಗೆ ಪ್ರಸ್ತುತ ಬೇಡಿಕೆ ಹೆಚ್ಚಾಗಿದೆ. ಇವುಗಳ ಸಾಕಾಣೆಗೆ ಹೆಚ್ಚು ಖರ್ಚಾಗುವುದಿಲ್ಲ. ಮನೆ ಮುಂದೆ ಹಿತ್ತಲುಗಳಲ್ಲಿ ಕೋಳಿ ಸಾಕಬಹುದು, ವೆಚ್ಚಕ್ಕಿಂತ ಅಧಿಕ ಲಾಭ ಸಿಗುತ್ತದೆ. ಇವುಗಳ ಸಾಕಾಣಿಕೆಗೆ ಹೆಚ್ಚಿನ ಶ್ರಮ ಅಗತ್ಯವಿರುವುದಿಲ್ಲ. ಕುಟುಂಬದ ಆರ್ಥಿಕ ಸ್ಥಿತಿ ಸುಧಾರಣೆಗೆ ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಬಡ ಹೆಣ್ಣು ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಆರ್ಥಿಕ ಸಬಲತೆ ಸಾಧಿಸಲು ತಲಾ 20 ಕೋಳಿ ಮರಿ ವಿತರಿಸಲಾಗುವುದು ಎಂದು ಹೇಳಲಾಗಿದೆ.

1 ಹಸು 1 ಎಮ್ಮೆ ಸಾಕಾಣಿೆಕೆಗೆ 65 ಸಾವಿರ ಸಹಾಯಧನ ಪಡೆಯಲು ಅರ್ಜಿ ಆಹ್ವಾನ-Dairy farming 

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ
ಇಲಾಖೆ(Vetarnary department)ವತಿಯಿಂದ ಹಾಲು ಉತ್ಪಾದಕರ ಉತ್ತೇಜನ ಉಳಿಕೆ ಅನುದಾನದಡಿ ರೈತ ಮಹಿಳೆಯರಿಗೆ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಒಂದು ಹಸು ಅಥವಾ ಎಮ್ಮೆ ಖರೀದಿಗೆ ಪಡೆಯುವ ಸಾಲವನ್ನು ಸಕಾಲದಲ್ಲಿ ಮರುಪಾವತಿಸುವ ಮಹಿಳೆಯರಿಗೆ ಶೇಕಡಾ 6ರ ಬಡ್ಡಿಯ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.



ರೈತ ಮಹಿಳೆಯರು ತಮ್ಮ ವ್ಯಾಪ್ತಿಯ ರಾಷ್ಟ್ರೀಕೃತ, ಗ್ರಾಮೀಣ, ಸಹಕಾರ ಬ್ಯಾಂಕ್‌ಗಳಿಂದ ಹೈನುಗಾರಿಕೆಗೆ ಸಾಲ ಪಡೆದು ಸಕಾಲದಲ್ಲಿ ಮರುಪಾವತಿ ಮಾಡಿರಬೇಕು.
.

ಆಯ್ಕೆಯಾದ ಫಲಾನುಭವಿಗಳಿಂದ ಮುಂಗಡ ಹಣದ ಸ್ವೀಕೃತಿ ರಶೀದಿ ಪಡೆದು ಸಹಾಯಧನವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು. 2024ರ ಏಪ್ರೀಲ್ 1ರಿಂದ ವಿವಿಧ ಬ್ಯಾಂಕ್‌ಗಳಿಂದ ಸಾಲ ಪಡೆದಿರುವ ರೈತ ಮಹಿಳೆಯರು ಸಂಬಂಧ ಪಟ್ಟ ದಾಖಲಾತಿಗಳೊಂದಿಗೆ ತಮ್ಮ ವ್ಯಾಪ್ತಿಯ ಪಶುವೈದ್ಯ ಸಂಸ್ಥೆಯ ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

Vetarnary department schemes 2024-ಪಶುಇಲಾಖೆಯಲ್ಲಿರುವ ಯೋಜನೆಗಳ ಪಟ್ಟಿ ಬಿಡುಗಡೆ,ಯಾವ ಯೋಜನೆಯಿಂದ ಯಾವ ಸೌಲಭ್ಯ ಸಿಗಲಿದೆ?

ಸಮಸ್ತೆ ರೈತ ಬಾಂಧವರೇ Krushirushi.in ಜಾಲತಾಣದ ಇಂದಿನ ಸಂಚಿಕೆಯಲ್ಲಿ ಪಶು ಸಂಗೋಪನಾ ಇಲಾಖೆಯಲ್ಲಿ ಯಾವೆಲ್ಲಾ ಯೋಜನೆಗಳಿವೆ ಎಂದು ತಿಳಿದುಕೊಂಡು ಅದರ ಸದುಪಯೋಗ ಪಡೆದುಕೊಳ್ಳೋಣ


ಹಾಲು ಉತ್ಪಾದಕರಿಗೆ ಪ್ರೋತ್ಸಾಹ
• ಹಾಲು ಉತ್ಪಾದಕ ಸದಸ್ಯರು ಸರಬರಾಜು ಮಾಡುವ ಪ್ರತಿ ಲೀಟರ್ ಗುಣಾತ್ಮಕ ಹಾಲಿಗೆ ರೂ 5/- ರಂತೆ ರೂ. 1103.22 ಕೋಟಿಗಳನ್ನು ವಿತರಿಸಲಾಗಿರುತ್ತದೆ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಹಸು/ ಎಮ್ಮೆ ಖರೀದಿಗೆ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದಲೇ ಶೇ. 6ರ ಬಡ್ಡಿ ಸಹಾಯಧನ ನೀಡಲಾಗುವುದು.

ದನದ ಶೆಡ್,ಕುರಿ ಶೆಡ್,ಕೋಳಿ ಶೆಡ್ ನಿರ್ಮಾಣಕ್ಕೆ ಎಲ್ಲಾ ವರ್ಗಗಳಿಗೂ 57,000 ರೂಪಾಯಿ ಸಹಾಯಧನ,ನಿಮ್ಮ ಅರ್ಜಿ ಹೀಗೆ ಸಲ್ಲಿಸಿ-Cattle shed subsidy - https://krushirushi.in/Cattle-shed-subsidy-scheme-1630 

ಲಸಿಕಾ ಕಾರ್ಯಕ್ರಮ
• ಕಾಲುಬಾಯಿ ರೋಗ, ಕಂದುರೋಗ, ಪಿ ಪಿ ಆರ್ ರೋಗ, ಹಂದಿಜ್ವರ, ಗಳಲೆ ರೋಗ, ಕರಳುಬೇನೆ ರೋಗ, ಚರ್ಮಗಂಟು ರೋಗಗಳ ವಿರುದ್ಧ ಉಚಿತವಾಗಿ ಲಸಿಕೆ ಹಾಕಲಾಗುವುದು.


ನಾಟಿ ಕೋಳಿ ಮರಿಗಳ ವಿತರಣೆ
• ಮಹಿಳಾ ಸ್ವಸಹಾಯಕ ಸಂಘಗಳ ಆಯ್ದ ಗ್ರಾಮೀಣ ಮಹಿಳಾ ಸದಸ್ಯರಿಗೆ ತಲಾ 20 ಆರು ವಾರದ ನಾಟಿ ಕೋಳಿ ಮರಿಗಳನ್ನು 2650 ಫಲಾನುಭವಿಗಳಿಗೆ 53,000 ಕೋಳಿ ಮರಿಗಳನ್ನು ವಿತರಿಸಲಾಗುವುದು

ರಾಸುಗಳ ಆಕಸ್ಮಿಕ ಸಾವಿಗೆ ಪರಿಹಾರ
* 6 ತಿಂಗಳ ಮೇಲ್ಪಟ್ಟ ಹಸು, ಎಮ್ಮೆ, ಎತ್ತು, ಕೋಣ, ಹೋರಿ ಆಕಸ್ಮಿಕವಾಗಿ ಮರಣ ಹೊಂದಿದಾಗ ಗರಿಷ್ಠ 10000 ರೂ ಪರಿಹಾರಧನ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ರೂ.20 ಕೋಟಿ ನಿಗಧಿಪಡಿಸಿದೆ.


ಕುರಿಗಾರರಿಗೆ ಅನುಗ್ರಹ ಕೊಡುಗೆ
• ಆಕಸ್ಮಿಕವಾಗಿ ಮರಣ ಹೊಂದಿದ 6 ತಿಂಗಳ ಮೇಲ್ಪಟ್ಟ ಕುರಿ/ಮೇಕೆಗಳಿಗೆ ರೂ. 5000.00 ಹಾಗೂ 3 ರಿಂದ 6 ತಿಂಗಳ ಕುರಿ/ಮೇಕೆಗಳಿಗೆ ರೂ. 3500 ಪರಿಹಾರ ಧನ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ರೂ. 20 ಕೋಟಿ ನಿಗಧಿಪಡಿಸಿದೆ.


ಲಿಂಗನಿರ್ಧರಿತ ವೀರ್ಯನಳಿಕೆ ಬಳಕೆ
* ಹೆಣ್ಣು ಕರುಗಳ ಸಂತತಿಯನ್ನು ಹೆಚ್ಚಿಸಲು ಕೃತಕ ಗರ್ಭಧಾರಣೆಯಲ್ಲಿ ಲಿಂಗನಿರ್ಧರಿತ ವೀರ್ಯನಳಿಕೆಗಳನ್ನು ಬಳಸಲಾಗುತ್ತಿದೆ.

ಸಂಚಾರಿ ಪಶು ಚಿಕಿತ್ಸಾ ಘಟಕ
ಸಂಚಾರಿ ಪಶುಚಿಕಿತ್ಸಾ ಘಟಕ ಮೂಲಕ ಜಾನುವಾರುಗಳಿಗೆ ಅಗತ್ಯವಿರುವ ತುರ್ತು ಪಶುವೈದ್ಯಕೀಯ ಸೇವೆಗಳನ್ನು ರೈತರ ಮನೆ ಬಾಗಿಲಿಗೆ ನೀಡಲಾಗುತ್ತಿದೆ. ಪಶುವೈದ್ಯಕೀಯ ತುರ್ತು ಚಿಕಿತ್ಸೆ ಅವಶ್ಯವಿರುವ ಜಾನುವಾರು ಮಾಲೀಕರು "1962" ಸಂಚಾರಿ ಪಶುಚಿಕಿತ್ಸಾ ಸಹಾಯವಾಣಿಗೆ ಕರೆ ಮಾಡಿ ಸೌಲಭ್ಯ ಪಡೆಯಬಹುದಾಗಿರುತ್ತದೆ.

ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ
- ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿನ ಸದಸ್ಯರಿಗೆ 20+1 ಕುರಿ/ಮೇಕೆ ಘಟಕಗಳನ್ನು NCDC ಸಾಲ, ಸರ್ಕಾರದ ಸಹಾಯಧನದೊಂದಿಗೆ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿಯೂ ಮುಂದುವರೆಸಿ ಒಟ್ಟು 20,000 ಫಲಾನುಭವಿಗಳಿಗೆ ಸಹಾಯಧನ ನೀಡಲಾಗುವುದು.


ಮೇವಿನ ಬೀಜವ ಕಿರು ಪೊಟ್ಟಣ ವಿತರಣೆ
- ಬರಗಾಲದ ನಿರ್ವಹಣೆಗೆ ರೂ.8.17 ಲಕ್ಷ ಮೇವಿನ ಬೀಜದ ಮಿನಿ ಕಿಟ್‌ಗಳನ್ನು ರೂ.22.00 ಕೋಟಿಗಳ ಅನುದಾನದಲ್ಲಿ ಉಚಿತವಾಗಿ ವಿತರಿಸಲಾಗಿದೆ ಹಾಗೂ ಮೇವು ಕತ್ತರಿಸುವ ಯಂತ್ರಗಳನ್ನು ಶೇ. 50% ಸಹಾಯಧನದೊಂದಿಗೆ ರೂ.6.10 ಕೋಟಿ ವೆಚ್ಚದಲ್ಲಿ 3666 ಫಲಾನುಭವಿಗಳಿಗೆ ವಿತರಿಸಲಾಗಿದೆ.

ತಾಲ್ಲೂಕೂಗಳಲ್ಲಿ ಪಾಲಿಕ್ಲಿನಿಕ್ ಸ್ಥಾಪನೆ
* ರಾಜ್ಯದ ಆಯ್ದ 20 ತಾಲ್ಲೂಕುಗಳ ಪಶು ಆಸ್ಪತ್ರೆಗಳನ್ನು ರೂ 10 ಕೋಟಿ ಅನುದಾನದಲ್ಲಿ ಪಾಲಿಕ್ಲಿನಿಕ್‌ಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು.


ಪಶು ಚಿಕಿತ್ಸಾಲಯಗಳಿಗೆ ನೂತನ ಕಟ್ಟಡ ನಿರ್ಮಾಣ
* 200 ಪಶುವೈದ್ಯ ಸಂಸ್ಥೆಗಳಿಗೆ 100 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡಗಳನ್ನು ನಿರ್ಮಿಸಲಾಗುವುದು

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://ahvs.karnataka.gov.in/info-2/Schemes+&+Benefits/kn

]]>
Thu, 15 Jan 2026 16:42:28 +0530 shivuagrico
Baddi sahayadana&ಕೇವಲ 4% ಬಡ್ಡಿ ಸಹಾಯಧನದೊಂದಿಗೆ ಸಿಗಲಿದೆ 1ಕೋಟಿ ಸಾಲಸೌಲಭ್ಯ https://krushirushi.in/Baddi-sahayadana-2386 https://krushirushi.in/Baddi-sahayadana-2386 Baddi sahayadana-ಕೇವಲ 4% ಬಡ್ಡಿ ಸಹಾಯಧನದೊಂದಿಗೆ ಸಿಗಲಿದೆ 1ಕೋಟಿ ಸಾಲಸೌಲಭ್ಯ


ನಿಮ್ಮ ಕನಸಿನ ಸ್ವಂತ ಉದ್ಯಮಕ್ಕೆ ಕರ್ನಾಟಕ ಸರ್ಕಾರದ ಮಹತ್ವದ ಕೊಡುಗೆ. ₹1 ಕೋಟಿ ವರೆಗಿನ ಸಾಲಕ್ಕೆ ಕೇವಲ ಶೇ. 4ರಷ್ಟು ಬಡ್ಡಿ ಮಾತ್ರ ನೀವು ಕಟ್ಟಬೇಕು. ಉಳಿದ ಬಡ್ಡಿಯನ್ನು ಸರ್ಕಾರವೇ ಭರಿಸುತ್ತದೆ. ಕೈಗಾರಿಕೆ, ಐಟಿ, ಆರೋಗ್ಯ, ಪ್ರವಾಸೋದ್ಯಮ ಹೀಗೆ ಯಾವುದೇ ಕ್ಷೇತ್ರದಲ್ಲಿ ನಿಮ್ಮ ಉದ್ಯಮವನ್ನು ಐದು ವರ್ಷದೊಳಗೆ ಸ್ಥಾಪಿಸಿ, ಬೆಳೆಸಿ. ಇದು ನಿಮ್ಮ ಆರ್ಥಿಕ ಸ್ವಾವಲಂಬನೆಗೆ ಸುವರ್ಣಾವಕಾಶ!

ಸ್ವಂತ ಉದ್ಯಮ ಆರಂಭಿಸಿ ಆರ್ಥಿಕವಾಗಿ ಸಬಲರಾಗಲು ನಿಮಗೊಂದು ಸುವರ್ಣಾವಕಾಶ. ಕರ್ನಾಟಕ ಸರ್ಕಾರವು ಪರಿಶಿಷ್ಟ ಪಂಗಡದ ಸಮುದಾಯದ ಅಭ್ಯರ್ಥಿಗಳನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಮತ್ತು ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಲು ವಿಶೇಷ ಬಡ್ಡಿ ಸಹಾಯಧನ ಯೋಜನೆಯನ್ನು ಜಾರಿಗೆ ತಂದಿದೆ. ನೀವು ಹೊಸ ಉದ್ಯಮವನ್ನು ಪ್ರಾರಂಭಿಸಲು ಬಯಸಿದ್ದರೆ ಅಥವಾ ಅಸ್ತಿತ್ವದಲ್ಲಿರುವ ಘಟಕವನ್ನು ವಿಸ್ತರಿಸಲು ಆಲೋಚಿಸುತ್ತಿದ್ದರೆ, ಈ ಯೋಜನೆಯು ನಿಮಗೆ ಭದ್ರ ಬುನಾದಿ ಒದಗಿಸಲಿದೆ. ಈ ಹಿನ್ನೆಲೆಯಲ್ಲಿ ಏನಿದು ಬಡ್ಡಿ ಸಹಾಯಧನ ಯೋಜನೆ? ಈ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ? ಪ್ರಯೋಜನಗಳು ಏನು ಎಂಬುದನ್ನು ತಿಳಿಯೋಣ.

ಕರ್ನಾಟಕ ಸರ್ಕಾರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಪರಿಶಿಷ್ಟ ಪಂಗಡದ ಉದ್ಯಮಿಗಳ ಆರ್ಥಿಕ ಸಬಲೀಕರಣಕ್ಕಾಗಿ ಈ ವಿಶೇಷ ಬಡ್ಡಿ ಸಹಾಯಧನ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಎಂ.ಎಸ್.ಎಂ.ಇ ಘಟಕಗಳು, ಹೋಟೆಲ್, ಫ್ರಾಂಚೈಸಿ ಅಥವಾ ಡೀಲರ್‌ಶಿಪ್‌ಗಳಂತಹ ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಅಥವಾ ಅಸ್ತಿತ್ವದಲ್ಲಿರುವ ಘಟಕಗಳನ್ನು ಆಧುನೀಕರಿಸಲು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಅಥವಾ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‌ಗಳಿಂದ ಪಡೆಯುವ ಗರಿಷ್ಠ ರೂ. 1.00 ಕೋಟಿ ವರೆಗಿನ ಸಾಲಕ್ಕೆ ಕೇವಲ 4% ರಿಯಾಯಿತಿ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ (ಉಳಿದ ಬಡ್ಡಿಯನ್ನು ಸರ್ಕಾರವೇ ಭರಿಸುತ್ತದೆ). ಉದ್ಯಮದ ಸಂಪೂರ್ಣ ಮಾಲೀಕತ್ವವು ಎಸ್‌ಟಿ ಸಮುದಾಯದವರದ್ದೇ ಆಗಿರಬೇಕು ಎಂಬ ಷರತ್ತಿನೊಂದಿಗೆ, ಪಡೆದ ಸಾಲವನ್ನು 5 ವರ್ಷಗಳ ಅವಧಿಯಲ್ಲಿ ಮರುಪಾವತಿಸಲು ಅವಕಾಶವಿದ್ದು, ಇದು ಸಮುದಾಯದ ಯುವ ಉದ್ಯಮಿಗಳು ಕಡಿಮೆ ಬಂಡವಾಳ ವೆಚ್ಚದಲ್ಲಿ ಸ್ವಾವಲಂಬಿಗಳಾಗಲು ಅತ್ಯುತ್ತಮ ವೇದಿಕೆಯಾಗಿದೆ

ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಕೈಗೆಟುಕುವ ದರದಲ್ಲಿ ಬಂಡವಾಳ ಒದಗಿಸುವುದು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಉತ್ತೇಜಿಸುವುದು ಮತ್ತು ಸೇವಾ ವಲಯಗಳಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ

ಬಡ್ಡಿ ದರದ ರಿಯಾಯಿತಿ: ಈ ಯೋಜನೆಯಡಿ ಆಯ್ಕೆಯಾದ ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಕೇವಲ 4% ರಷ್ಟು ರಿಯಾಯಿತಿ ಬಡ್ಡಿ ದರದಲ್ಲಿ ಸಾಲದ ಸೌಲಭ್ಯ ದೊರೆಯುತ್ತದೆ. ಬ್ಯಾಂಕಿನ ಅಸಲಿ ಬಡ್ಡಿ ದರ ಮತ್ತು ಈ 4% ನಡುವಿನ ವ್ಯತ್ಯಾಸದ ಮೊತ್ತವನ್ನು ಸರ್ಕಾರವೇ ಬಡ್ಡಿ ಸಹಾಯಧನದ ರೂಪದಲ್ಲಿ ಭರಿಸುತ್ತದೆ.

ಗರಿಷ್ಠ ಸಾಲದ ಮಿತಿ: ಉದ್ಯಮಿಗಳು ತಮ್ಮ ಘಟಕಗಳ ಸ್ಥಾಪನೆ ಅಥವಾ ವಿಸ್ತರಣೆಗಾಗಿ ಈ ಯೋಜನೆಯ ಅಡಿಯಲ್ಲಿ ಗರಿಷ್ಠ 1.00 ಕೋಟಿ ರೂಪಾಯಿಗಳವರೆಗೆ ಸಾಲವನ್ನು ಪಡೆಯಲು ಅವಕಾಶವಿದೆ.


ಸಾಲ ಮರುಪಾವತಿಯ ಕಾಲಾವಕಾಶ: ಪಡೆದ ಸಾಲವನ್ನು ಮರುಪಾವತಿ ಮಾಡಲು ಉದ್ಯಮಿಗಳಿಗೆ 5 ವರ್ಷಗಳ ಕಾಲಾವಧಿಯನ್ನು ನಿಗದಿಪಡಿಸಲಾಗಿದೆ. ಈ ಅವಧಿಯಲ್ಲಿ ನಿಗದಿತ ಕಂತುಗಳ ಮೂಲಕ ಸಾಲ ತೀರಿಸಬಹುದಾಗಿದೆ.

ಸಾಲ ಒದಗಿಸುವ ಹಣಕಾಸು ಸಂಸ್ಥೆಗಳು: ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಉದ್ಯಮಿಗಳು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ , ಯಾವುದಾದರು ರಾಷ್ಟ್ರೀಕೃತ ಬ್ಯಾಂಕ್‌ಗಳು, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ಗಳು ಅಥವಾ ಅಪೆಕ್ಸ್ ಸಹಕಾರಿ ಬ್ಯಾಂಕ್‌ಗಳಿಂದ ಸಾಲವನ್ನು ಪಡೆಯಬಹುದಾಗಿದೆ.

ಕೈಗಾರಿಕಾ ವಲಯ: ಆಹಾರ ಸಂಸ್ಕರಣಾ ಘಟಕಗಳು, ಜವಳಿ ಉದ್ಯಮ, ಸಿದ್ಧ ಉಡುಪುಗಳ ತಯಾರಿಕೆ, ಎಂಜಿನಿಯರಿಂಗ್ ವರ್ಕ್‌ಶಾಪ್‌ಗಳು ಮತ್ತು ಆಟೋಮೊಬೈಲ್ ಬಿಡಿಭಾಗಗಳ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಈ ಯೋಜನೆಯಡಿ ಸಾಲ ಪಡೆಯಬಹುದು.

ಮಾಹಿತಿ ತಂತ್ರಜ್ಞಾನ ಮತ್ತು ಸೇವಾ ವಲಯ: ಸಾಫ್ಟ್‌ವೇರ್ ಅಭಿವೃದ್ಧಿ ಕೇಂದ್ರಗಳು, ಐಟಿ ಆಧಾರಿತ ಸೇವೆಗಳು ಹಾಗೂ ಈವೆಂಟ್ ಮ್ಯಾನೇಜ್‌ಮೆಂಟ್‌ನಂತಹ ಸೇವಾ ಆಧಾರಿತ ಉದ್ಯಮಗಳಿಗೆ ಸರ್ಕಾರವು ಪ್ರೋತ್ಸಾಹ ನೀಡುತ್ತದೆ.

ವಾಣಿಜ್ಯ ಮತ್ತು ವ್ಯಾಪಾರ ಚಟುವಟಿಕೆಗಳು: 2021-22ನೇ ಸಾಲಿನಿಂದ ಈ ಯೋಜನೆಯನ್ನು ವಿಸ್ತರಿಸಲಾಗಿದ್ದು, ಇದರ ಅಡಿಯಲ್ಲಿ ಸ್ವಂತ ಮಳಿಗೆ, ಪ್ರಮುಖ ಕಂಪನಿಗಳ ಡೀಲರ್‌ಶಿಪ್, ಫ್ರಾಂಚೈಸಿಗಳು ಮತ್ತು ಹೋಟೆಲ್ ಉದ್ಯಮಗಳನ್ನು ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ.

ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರ: ಸುಸಜ್ಜಿತ ಆಸ್ಪತ್ರೆಗಳು, ನರ್ಸಿಂಗ್ ಹೋಮ್‌ಗಳು, ಸ್ಕ್ಯಾನಿಂಗ್ ಅಥವಾ ಡಯಾಗ್ನೋಸ್ಟಿಕ್ ಸೆಂಟರ್‌ಗಳು, ದಂತ ಚಿಕಿತ್ಸಾಲಯ ಮತ್ತು ಕಣ್ಣಿನ ಆಸ್ಪತ್ರೆಗಳನ್ನು ತೆರೆಯಲು ಹಾಗೂ ಆಧುನಿಕ ವೈದ್ಯಕೀಯ ಉಪಕರಣಗಳ ಖರೀದಿಗೆ ಸಹಾಯಧನ ಲಭ್ಯವಿದೆ.

ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯ: ಪ್ರವಾಸಿಗರನ್ನು ಸೆಳೆಯಲು ಹೋಟೆಲ್, ರೆಸಾರ್ಟ್, ಕ್ಯಾಟರಿಂಗ್ ಸೇವೆಗಳು, ಅಮ್ಯೂಸ್‌ಮೆಂಟ್ ಪಾರ್ಕ್‌ಗಳು ಮತ್ತು ಪ್ರವಾಸಿ ಏಜೆನ್ಸಿಗಳನ್ನು ನಡೆಸಲು ಆಸಕ್ತಿಯಿರುವ ಉದ್ಯಮಿಗಳು ಈ ಯೋಜನೆಯ ಲಾಭ ಪಡೆಯಬಹುದು.

ಉದ್ಯಮವು ಸಂಪೂರ್ಣವಾಗಿ ಪರಿಶಿಷ್ಟ ಪಂಗಡದ ವ್ಯಕ್ತಿಗಳ ಮಾಲೀಕತ್ವದಲ್ಲಿರಬೇಕು. ಪಾಲುದಾರಿಕೆ ಸಂಸ್ಥೆಯಾಗಿದ್ದರೆ, ಎಲ್ಲಾ ಪಾಲುದಾರರು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸೇರಿದವರಾಗಿರಬೇಕು.

ಅರ್ಜಿದಾರರು ಈ ಹಿಂದೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಅಥವಾ ಯಾವುದೇ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಮರುಪಾವತಿ ಮಾಡದೆ ಸುಸ್ತಿದಾರರಾಗಿರಬಾರದು.

ಈ ಹಿಂದೆ ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಬಡ್ಡಿ ಸಹಾಯಧನ ಯೋಜನೆಯಡಿ ಪ್ರಯೋಜನ ಪಡೆದಿದ್ದರೆ ಈ ಯೋಜನೆಗೆ ಅರ್ಹರಲ್ಲ.

ಹಂತ 1: ನಿಮ್ಮ ಜಿಲ್ಲೆಯ ಹತ್ತಿರದ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಶಾಖಾ ಕಚೇರಿ ಅಥವಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಗೆ ಭೇಟಿ ನೀಡಿ.

ಹಂತ 2: ನಿಗದಿತ ಅರ್ಜಿ ನಮೂನೆಯನ್ನು ಪಡೆದು, ಎಲ್ಲಾ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ.

ಹಂತ 3: ಅಗತ್ಯವಿರುವ ದಾಖಲೆಗಳ ಸ್ವಯಂ ದೃಢೀಕರಿಸಿದ ಪ್ರತಿಗಳನ್ನು ಲಗತ್ತಿಸಿ.

ಹಂತ 4: ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಪಟ್ಟ ಕಚೇರಿಯಲ್ಲಿ ಸಲ್ಲಿಸಿ ಮತ್ತು ಸ್ವೀಕೃತಿ ಪತ್ರ ಪಡೆಯಿರಿ.

ದಾಖಲೆಗಳು

ಅರ್ಜಿದಾರರ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ.

ಜಾತಿ ಪ್ರಮಾಣಪತ್ರ (SC/ST ಧೃಢೀಕರಣ).

ಬಯೋ-ಡೇಟಾ ಮತ್ತು ನಿವ್ವಳ ಮೌಲ್ಯದ ಹೇಳಿಕೆ.

ನಿಗದಿತ ನಮೂನೆಯಲ್ಲಿ ಪ್ರಮಾಣಪತ್ರ.

ಬ್ಯಾಂಕ್ ಖಾತೆಯ ವಿವರಗಳು.

ಹೆಚ್ಚಿನ ಮಾಹಿತಿಗಾಗಿ ಅಥವಾ ಯಾವುದೇ ಸಂದೇಹಗಳಿದ್ದಲ್ಲಿ ನಿಮ್ಮ ಜಿಲ್ಲೆಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ ಸಹಾಯವಾಣಿ ಸಂಖ್ಯೆ: 080-22261703 ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು.

Bele sala baddi manna-ಈ ಯೋಜನೆಯಡಿ ಸಿಗಲಿದೆ ನಿಮ್ಮ ಸಾಲದ ಮೇಲೆ 3% ಬಡ್ಡಿ ಮನ್ನಾ,ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

https://krushirushi.in/Bele-sala-baddi-manna-1905

]]>
Wed, 14 Jan 2026 07:56:11 +0530 shivuagrico
Mobile canteen subsidy&ಉದ್ಯಮ ಶೀಲತಾ ಅಭಿವೃದ್ದಿ ಯೋಜನೆಯಡಿ ಮೊಬೈಲ್‌ ಕ್ಯಾಂಟೀನ್‌ ತೆರೆಯಲು ಸಿಗಲಿದೆ 4 ಲಕ್ಷ ರೂ. ಸಹಾಯಧನ https://krushirushi.in/Mobile-canteen-subsidy-2385 https://krushirushi.in/Mobile-canteen-subsidy-2385 Mobile canteen subsidy-ಉದ್ಯಮ ಶೀಲತಾ ಅಭಿವೃದ್ದಿ ಯೋಜನೆಯಡಿ ಮೊಬೈಲ್‌ ಕ್ಯಾಂಟೀನ್‌ ತೆರೆಯಲು ಸಿಗಲಿದೆ 4 ಲಕ್ಷ ರೂ. ಸಹಾಯಧನ

ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಉದ್ಯಮ ಶೀಲತಾ ಅಭಿವೃದ್ದಿ ಯೋಜನೆಯಡಿ ಸಣ್ಣ ಉದ್ದಿಮೆಯನ್ನು ಆರಂಭಿಸಲು ಆಸಕ್ತಿಯನ್ನು ಹೊಂದಿರುವ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಉದ್ದಿಮೆಯನ್ನು ಆರಂಭಿಸಲು ನೆರವು ನೀಡಲಾಗುತ್ತಿದೆ. ಈ ಯೋಜನೆಯಡಿ ಮೊಬೈಲ್‌ ಕ್ಯಾಂಟೀನ್‌ ಆರಂಭಿಸಲು ಆಹಾರ ಟ್ರಕ್‌ಗಳ ಖರೀದಿಗೆ ಸಹಾಯಧನಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಏನಿದು ಮೊಬೈಲ್‌ ಕ್ಯಾಂಟೀನ್‌ ಸಹಾಯಧನ ಯೋಜನೆ? ಯಾರಿಗೆ ಈ ಯೋಜನೆ ಅನ್ವಯಿಸಲಿದೆ? ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಏನಿದು ಉದ್ಯಮಶೀಲತೆ ಅಭಿವೃದ್ಧಿ ಯೋಜನೆ?

ಉದ್ಯಮಶೀಲತಾ ಅಭಿವೃದ್ಧಿ ಯೋಜನೆ ಅಂದರೆ ಉದ್ಯಮಗಳನ್ನು ಪ್ರಾರಂಭಿಸಲು ಮತ್ತು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಒಂದು ಯೋಜನೆಯಾಗಿದೆ. ಈ ಯೋಜನೆಯು ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳಿಗೆ ಆರ್ಥಿಕ ನೆರವು, ತರಬೇತಿ ಮತ್ತು ಮಾರ್ಗದರ್ಶನ ನೀಡುತ್ತದೆ. ಈ ಯೋಜನೆಯಡಿ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು ಮತ್ತು ಸ್ವಯಂ ಉದ್ಯೋಗ ಘಟಕಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಲಾಗುತ್ತದೆ.

ಯೋಜನೆಯ ಪ್ರಮುಖ ಅಂಶಗಳು

  • ಆರ್ಥಿಕ ನೆರವು: ಉದ್ಯಮವನ್ನು ಪ್ರಾರಂಭಿಸಲು ಸಾಲ ಮತ್ತು ಸಹಾಯಧನ ಸೌಲಭ್ಯಗಳನ್ನು ಒದಗಿಸುವುದು.
  • ತರಬೇತಿ ಮತ್ತು ಮಾರ್ಗದರ್ಶನ: ಉದ್ಯಮಶೀಲತಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು.
  • ಮಾರುಕಟ್ಟೆ ನೆರವು: ಉದ್ಯಮಗಳು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಹಾಯ ಮಾಡುವುದು.

 

ಮೊಬೈಲ್‌ ಕ್ಯಾಂಟೀನ್‌ ತೆರೆಯಲು ಸಹಾಯಧನ

ರಾಜ್ಯ ಸರಕಾರದಿಂದ ಸಮಾಜ ಕಲ್ಯಾಣ ಇಲಾಖೆಯು ಉದ್ಯಮ ಶೀಲತಾ ಅಭಿವೃದ್ದಿ ಯೋಜನೆ ಯೋಜನೆಯ ಅಡಿಯಲ್ಲಿ ಮೊಬೈಲ್‌ ಕ್ಯಂಟೀನ್‌ ವ್ಯವಹಾರಗಳನ್ನು ಆರಂಭಿಸಲು ಧನ ಸಹಾಯ ನೀಡುತ್ತಿದೆ. ಈ ಯೋಜನೆಯಡಿ ನೀವು ಮೊಬೈಲ್‌ ಕ್ಯಾಂಟೀನ್‌ಗಳನ್ನು ಆರಂಭಿಸಲು ಸರ್ಕಾರದಿಂದ 4 ಲಕ್ಷ ರೂ.ವರೆಗಿನ ಸಹಾಯಧನ ಪಡೆಯಬಹುದಾಗಿದೆ.

ಅರ್ಹತಾ ಮಾನದಂಡಗಳು

  • ಉದ್ಯಮ ಶೀಲತಾ ಅಭಿವೃದ್ದಿ ಯೋಜನೆ ಯೋಜನೆಯ ಅಡಿಯಲ್ಲಿ ಸಂಪೂರ್ಣ ಸಹಾಯಧನದೊಂದಿಗೆ 4.00 ಲಕ್ಷ ರೂ. ಮೌಲ್ಯದ ಫಾಸ್ಟ್ ಫುಡ್ ಟ್ರಕ್ ಟ್ರೇಲರ್/ಮೊಬೈಲ್ ಕಿಚನ್ ಚಲಿಸುವ ಆಹಾರ ಸೇವಾ ಘಟಕವನ್ನು ಪರಿಶಿಷ್ಟ ಜಾತಿಯವರಿಗೆ ನೀಡಲಾಗುವುದು.
  • ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ/ಯುವತಿಯವರು ಸಣ್ಣ ಕೈಗಾರಿಕೆ, ಸೇವಾ ಕ್ಷೇತ್ರ ಮತ್ತು ವ್ಯಾಪಾರಿ ಕ್ಷೇತ್ರಗಳಲ್ಲಿ ಸ್ವಯಂ ಉದ್ಯೋಗ ಘಟಕವನ್ನು ಆರಂಭಿಸಲು ನಿಗಮದ ಸಹಾಯಧನ ಮತ್ತು ಬ್ಯಾಂಕಿನ ಸಾಲ ವ್ಯವಸ್ಥೆಯೊಂದಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.

ಸಹಾಯಧನದ ಮೊತ್ತ ಎಷ್ಟು?

ಪರಿಶಿಷ್ಟ ಜಾತಿಗೆ ಸೇರಿದ ನಿರುದ್ಯೋಗಿ ಯುವಕರಿಗೆ ಇಲಾಖೆಯ ಆಯಾ ನಿಗಮಗಳ ಅಡಿಯಲ್ಲಿ ಘಟಕ ವೆಚ್ಚದ 75% ಅಥವಾ ಗರಿಷ್ಠ 4.00 ಲಕ್ಷ ರೂ.ಗಳವರೆಗೆ ಸಹಾಯಧನ ನೀಡಲಾಗುವುದು.

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

  • ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು
  • ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
  • ಅರ್ಜಿದಾರರು 21 ವರ್ಷದಿಂದ 50 ವರ್ಷದವರೆಗಿನ ವಯೋಮಾನದವರಾಗಿರಬೇಕು.
  • ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ರೂ. 1,50,000/- ಗ್ರಾಮೀಣ ಹಾಗೂ ರೂ. 2,00,000/- ನಗರ ಪ್ರದೇಶದವರಿಗೆ ಮಿತಿಯೊಳಗಿರಬೇಕು
  • ಅರ್ಜಿದಾರರು/ಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಈ ಹಿಂದೆ ನಿಗಮ/ಸರ್ಕಾರದಿಂದ ರೂ. 1,00,000/- ಮೇಲ್ಪಟ್ಟು ಸೌಲಭ್ಯ ಪಡೆದಿದ್ದಲ್ಲಿ ಅಂತಹ ಫಲಾನುಭವಿಗಳು ಈ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ
  • ಅರ್ಜಿದಾರರು ಘಟಕವನ್ನು ಸ್ಥಾಪಿಸಲು ಅವಶ್ಯವಿರುವ ಸ್ಥಳಾವಕಾಶವನ್ನು ಹೊಂದಿರಬೇಕು.

ಷರತ್ತುಗಳು:-

  • ಅರ್ಜಿದಾರರು ಆಯ್ಕೆ ಸಮಿತಿಯಲ್ಲಿ ಆಯ್ಕೆಯಾಗಿರಬೇಕು.
  • ಮಂಜೂರಾತಿ ಪಡೆದ ಪಡೆದ ಫಲಾನುಭವಿಗಳು ಅನರ್ಹರು ಎಂದು ತಿಳಿದುಬಂದ ಸಂದರ್ಭದಲ್ಲಿ ಮಂಜೂರಾತಿಯನ್ನು ರದ್ದುಪಡಿಸಲಾಗುವುದು.

 

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ನೇರವಾಗಿ ತಮ್ಮ ಮೊಬೈಲ್ ಮೂಲಕ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಿ ಕೆಳಗಿನ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕವೂ ಅರ್ಜಿಯನ್ನು ಸಲ್ಲಿಸಬಹುದು.

  • ಹಂತ-1: ಅಧಿಕೃತ ವೆಬ್‌ಸೈಟ್‌ "https://swdcorp.karnataka.gov.in/ADCLPortal/schemedetail/MKF " ಮಾಡಿ ನಿಗಮದ ತಂತ್ರಾಂಶವನ್ನು ಪ್ರವೇಶ ಮಾಡಬೇಕು.
  • ಹಂತ 2: ತದನಂತರ ಇಲ್ಲಿ ಕೆಳಗ ಕಾಣಿಸುವ "ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಸೇವಾ ಸಿಂಧು ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು ಇಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು OTP ಅನ್ನು ಹಾಕಿ ಕೆಳಗೆ ಕಾಣುವ ಕ್ಯಾಪ್ಚ್ ಕೋಡ್ ನಮೂದಿಸಿ "Login" ಬಟನ್ ಮೇಲೆ ಒತ್ತಿ ಲಾಗಿನ್ ಅಗಬೇಕು.
  • ಹಂತ-3: "Login" ಬಟನ್ ಮೇಲೆ ಕ್ಲಿಕ್ ಮಾಡಿ ಮುಂದಿನ ಪೇಜ್ ಗೆ ಭೇಟಿ ಮಾಡಿದರೆ ಅಧಿಕೃತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಅಗತ್ಯವಿರುವ ದಾಖಲೆಗಳು

  • ಅಭ್ಯರ್ಥಿಯ ಆಧಾರ್ ಕಾರ್ಡ
  • ವಾಹನ ಚಾಲನಾ ಪರವಾನಗಿ
  • ಅಭ್ಯರ್ಥಿಯ ಭಾವಚಿತ್‌ರ
  • ಬ್ಯಾಂಕ್ ಪಾಸ್ ಬುಕ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ರೇಶನ್ ಕಾರ್ಡ
  • ಮೊಬೈಲ್ ನಂಬರ್

ಸಹಾಯಾಣಿ: ಯೋಜನೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ದಿನದ ಯಾವುದೇ ಸಮಯದಲ್ಲಿ ಸಹಾಯವಾಣಿ ಸಂಖ್ಯೆ 9482300400 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ

]]>
Mon, 12 Jan 2026 09:01:11 +0530 shivuagrico
Rastriya gokul mission&ರಾಷ್ಟ್ರೀಯ ಗೋಕುಲ ಮೀಷನ್ ಯೋಜನೆಯಡಿ ರೈತರಿಗೆ ಹೆಚ್ಚುವರಿ 21,500 ರವರೆಗೆ ಆದಾಯ https://krushirushi.in/Rastriya-gokul-mission-2384 https://krushirushi.in/Rastriya-gokul-mission-2384 Rastriya gokul mission-ರಾಷ್ಟ್ರೀಯ ಗೋಕುಲ ಮೀಷನ್ ಯೋಜನೆಯಡಿ ರೈತರಿಗೆ ಹೆಚ್ಚುವರಿ 21,500 ರವರೆಗೆ ಆದಾಯ

ಭಾರತದಲ್ಲಿ ಗೋವುಗಳನ್ನು ಪೂಜನೀಯ ದೃಷ್ಟಿಯಲ್ಲಿ ನೋಡಲಾಗುತ್ತದೆ. ಗೋವುಗಳು ರೈತರ ಜೀವನಾಡಿಯಾಗಿದೆ. ಹೀಗಾಗಿ ಗೋ ತಳಿಗಳ ಅಭಿವೃದ್ಧಿ ಹಾಗೂ ರೈತರಿಗೆ ಅನುಕೂಲಕ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಗೋಕುಲ ಮಿಷನ್ ಎಂಬ ಮಹತ್ವಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಇದು ಸ್ಥಳೀಯ ಹಸು ಮತ್ತು ಎಮ್ಮೆ ತಳಿಗಳ ಅಭಿವೃದ್ಧಿ, ಸಂರಕ್ಷಣೆ ಮತ್ತು ಹೈನುಗಾರಿಕೆಯನ್ನು ಲಾಭದಾಯಕವಾಗಿಸುವ ಗುರಿಯನ್ನು ಹೊಂದಿದೆ. ಪ್ರಸ್ತುತ ಈ ಯೋಜನೆಯು 2021-2026ರ ಅವಧಿಗೆ 'ರಾಷ್ಟ್ರೀಯ ಪಶುಧನ ವಿಕಾಸ ಯೋಜನೆ'ಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಏನಿದು ರಾಷ್ಟ್ರೀಯ ಗೋಕುಲ ಮಿಷನ್? ಇದರಿಂದ ರೈತರಿಗೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.

ಏನಿದು ರಾಷ್ಟ್ರೀಯ ಗೋಕುಲ ಮಿಷನ್?ರಾಷ್ಟ್ರೀಯ ಗೋಕುಲ ಮಿಷನ್ ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಇದು 2014 ರಿಂದ 2026ರ ಅವಧಿಯವರೆಗೆ ಸ್ಥಳೀಯ ಗೋತಳಿಗಳ ಸಂರಕ್ಷಣೆ ಮತ್ತು ತಳಿ ಅಭಿವೃದ್ಧಿಗ ಒತ್ತು ನೀಡುತ್ತಿದೆ. ದೇಶೀಯ ಹಸು ಮತ್ತು ಎಮ್ಮೆಗಳ ತಳೀಯ ಸುಧಾರಣೆ ಮಾಡುವುದು, ಹಾಲಿನ ಉತ್ಪಾದಕತೆಯನ್ನು ಹೆಚ್ಚಿಸುವುದು ಮತ್ತು ಗ್ರಾಮೀಣ ರೈತರ, ವಿಶೇಷವಾಗಿ ಮಹಿಳಾ ಪಶುಪಾಲಕರ ಜೀವನೋಪಾಯವನ್ನು ಸುಧಾರಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ. ಇದಕ್ಕಾಗಿ ಐವಿಎಫ್, ಲಿಂಗ-ವಿಂಗಡಿತ ವೀರ್ಯ ಮತ್ತು ರಾಷ್ಟ್ರವ್ಯಾಪಿ ಕೃತಕ ಗರ್ಭಧಾರಣೆ ಕಾರ್ಯಕ್ರಮಗಳಂತಹ ಸುಧಾರಿತ ವೈಜ್ಞಾನಿಕ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಸುಸ್ಥಿರ ಹೈನುಗಾರಿಕೆಯನ್ನು ಉತ್ತೇಜಿಸುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಹಾಲಿನ ಲಭ್ಯತೆಯನ್ನು ಹೆಚ್ಚಿಸಲು ತ್ತು ಹೈನುಗಾರಿಕೆಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಲು ಈ ಮಿಷನ್ ಶ್ರಮಿಸುತ್ತಿದೆ.

ಯೋಜನೆಯ ಪ್ರಮುಖ ಉದ್ದೇಶಗಳು

  1. ಉತ್ಪಾದಕತೆ ಹೆಚ್ಚಳ: ಸುಧಾರಿತ ತಂತ್ರಜ್ಞಾನಗಳನ್ನು ಬಳಸಿ ಹೈನುರಾಸುಗಳ ಹಾಲು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು.
  2. ತಳಿ ಸುಧಾರಣೆ: ತಳೀಯವಾಗಿ ಉತ್ತಮ ಗುಣಮಟ್ಟದ ಹೋರಿಗಳನ್ನು ಸಂತಾನೋತ್ಪತ್ತಿಗೆ ಬಳಸುವುದು.
  3. ಕೃತಕ ಗರ್ಭಧಾರಣೆ ವಿಸ್ತರಣೆ: ರೈತರ ಮನೆ ಬಾಗಿಲಿಗೇ ಗುಣಮಟ್ಟದ ಕೃತಕ ಗರ್ಭಧಾರಣೆ ಸೇವೆಗಳನ್ನು ತಲುಪಿಸುವುದು.
  4. ತಳಿ ಸಂರಕ್ಷಣೆ: ದೇಶೀಯ ಗೋತಳಿಗಳು ಮತ್ತು ಎಮ್ಮೆ ತಳಿಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸುವುದು.
  5. ರೈತರ ಸಬಲೀಕರಣ: ಸಣ್ಣ ರೈತರು ಮತ್ತು ಮಹಿಳಾ ಪಶುಪಾಲಕರಿಗೆ ಹೈನುಗಾರಿಕೆಯನ್ನು ಹೆಚ್ಚು ಲಾಭದಾಯಕವಾಗಿಸುವುದು.


ರಾಷ್ಟ್ರೀಯ ಗೋಕುಲ ಮಿಷನ್‌ನ ಚಟುವಟಿಕೆಗಳು

  • ರಾಷ್ಟ್ರವ್ಯಾಪಿ ಕೃತಕ ಗರ್ಭಧಾರಣೆ ಕಾರ್ಯಕ್ರಮ: ಆಯ್ದ ಜಿಲ್ಲೆಗಳಲ್ಲಿ ರೈತರ ಮನೆ ಬಾಗಿಲಿಗೆ ಉಚಿತವಾಗಿ ಕೃತಕ ಗರ್ಭಧಾರಣೆ ಸೇವೆ. ಇದನ್ನು 'ಭಾರತ್ ಪಶುಧನ್' ಆ್ಯಪ್ ಮೂಲಕ ಟ್ರ್ಯಾಕ್ ಮಾಡಲಾಗುತ್ತದೆ.
  • ಲಿಂಗ-ವಿಂಗಡಿತ ವೀರ್ಯ: ಈ ತಂತ್ರಜ್ಞಾನದ ಮೂಲಕ 90% ಕ್ಕಿಂತ ಹೆಚ್ಚು ನಿಖರತೆಯೊಂದಿಗೆ ಹೆಣ್ಣು ಕರುಗಳನ್ನೇ ಪಡೆಯಬಹುದು. ಇದು ಬೀಡಾಡಿ ದನಗಳ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
  • IVF ತಂತ್ರಜ್ಞಾನ: ಗರ್ಭಧಾರಣೆಯನ್ನು ಖಚಿತಪಡಿಸಿಕೊಳ್ಳಲು ಐವಿಎಫ್ ತಂತ್ರಜ್ಞಾನಕ್ಕೆ ಉತ್ತೇಜನ.
  • ಗೋಕುಲ ಗ್ರಾಮಗಳು: ಸ್ಥಳೀಯ ತಳಿಗಳ ಸಂರಕ್ಷಣೆಗಾಗಿ ಸ್ಥಾಪಿಸಲಾದ ಸಮಗ್ರ ಅಭಿವೃದ್ಧಿ ಕೇಂದ್ರಗಳು.
  • ಡಿಜಿಟಲ್ ಟ್ರೇಸಿಬಿಲಿಟಿ: 34 ಕೋಟಿಗೂ ಹೆಚ್ಚು ಪಶುಗಳನ್ನು 'ಭಾರತ್ ಪಶುಧನ್' ಆ್ಯಪ್ ಅಡಿಯಲ್ಲಿ ನೋಂದಾಯಿಸಿ ಅವುಗಳ ಆರೋಗ್ಯ ಮತ್ತು ಸಂತಾನೋತ್ಪತ್ತಿ ಮಾಹಿತಿಯನ್ನು ನಿರ್ವಹಿಸಲಾಗುತ್ತದೆ.
  • ಗೌ ಚಿಪ್ ಮತ್ತು ಮಹಿಷ್ ಚಿಪ್: ಉತ್ತಮ ಗುಣಮಟ್ಟದ ಹೋರಿಗಳನ್ನು ಚಿಕ್ಕ ವಯಸ್ಸಿನಲ್ಲೇ ಗುರುತಿಸಲು ಅಭಿವೃದ್ಧಿಪಡಿಸಲಾದ ಜಿನೋಮಿಕ್ ಚಿಪ್‌ಗಳು.


ಫಲಾನುಭವಿಗಳು ಮತ್ತು ಪ್ರಯೋಜನಗಳು

  • ಫಲಾನುಭವಿಗಳು: ಈ ಯೋಜನೆಯು ಜಾತಿ, ವರ್ಗ ಅಥವಾ ಲಿಂಗದ ತಾರತಮ್ಯವಿಲ್ಲದೆ ಎಲ್ಲಾ ಡೈರಿ ರೈತರಿಗೆ ಮುಕ್ತವಾಗಿದೆ.
  • ಉಚಿತ ಸೇವೆಗಳು: ರಾಷ್ಟ್ರವ್ಯಾಪಿ ಕೃತಕ ಗರ್ಭಧಾರಣೆ ಕಾರ್ಯಕ್ರಮದ ಅಡಿಯಲ್ಲಿ ರೈತರ ಮನೆ ಬಾಗಿಲಿಗೆ ಉಚಿತವಾಗಿ ಕೃತಕ ಗರ್ಭಧಾರಣೆ ಸೇವೆಗಳನ್ನು ಒದಗಿಸಲಾಗುತ್ತದೆ.
  • ಆದಾಯ ವೃದ್ಧಿ: ಈ ಕಾರ್ಯಕ್ರಮದ ಮೂಲಕ ಸುಮಾರು 1.5 ಕೋಟಿ ರೈತರು ಪ್ರಯೋಜನ ಪಡೆಯಲಿದ್ದು, ಮೂರು ವರ್ಷಗಳ ನಂತರ ರೈತರ ವಾರ್ಷಿಕ ಆದಾಯ ಸರಾಸರಿ 21,500 ರೂಪಾಯಿಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
  • IVF ಸಬ್ಸಿಡಿ: ತ್ವರಿತ ತಳಿ ಸುಧಾರಣಾ ಕಾರ್ಯಕ್ರಮದ ಅಡಿಯಲ್ಲಿ ಐವಿಎಫ್ ತಂತ್ರಜ್ಞಾನ ಬಳಸಿ ಪಡೆಯುವ ಪ್ರತಿ ಖಚಿತ ಗರ್ಭಧಾರಣೆಗೆ ರೈತರಿಗೆ 5,000 ರೂಪಾಯಿಗಳ ಸಬ್ಸಿಡಿ ನೀಡಲಾಗುತ್ತದೆ.
  • ಹೆಚ್ಚುವರಿ ಲಾಭ: ಐವಿಎಫ್ ತಂತ್ರಜ್ಞಾನ ಬಳಸುವ ರೈತರ ಆದಾಯವು ಮೂರು ವರ್ಷಗಳ ನಂತರ ವಾರ್ಷಿಕವಾಗಿ 60,000 ರೂ.ಗಳವರೆಗೆ ಹೆಚ್ಚಾಗುವ ಸಾಧ್ಯತೆಯಿದೆ.
  • ಲಿಂಗ-ವಿಂಗಡಿತ ವೀರ್ಯ: ಲಿಂಗ-ವಿಂಗಡಿತ ವೀರ್ಯದ ಮೂಲಕ ಖಚಿತ ಗರ್ಭಧಾರಣೆ ಪಡೆಯುವ ರೈತರಿಗೆ 750 ರೂಪಾಯಿಗಳ ಸಬ್ಸಿಡಿ ನೀಡಲಾಗುವುದು.
  • ಉದ್ಯಮಿಗಳಿಗೆ ನೆರವು: 'ಹಬ್ ಮತ್ತು ಸ್ಪೋಕ್' ಮಾದರಿಯಲ್ಲಿ ತಳಿ ವರ್ಧನಾ ಫಾರ್ಮ್‌ಗಳನ್ನು ಸ್ಥಾಪಿಸಲು 2 ಕೋಟಿ ರೂ.ವರೆಗೆ ಬೃಹತ್ ಸಬ್ಸಿಡಿ ಲಭ್ಯವಿದೆ.
  • ಸಾಲ ಸಹಾಯಧನ: ಹೆಚ್ಚಿನ ಹಾಲು ನೀಡುವ ಗುಣಮಟ್ಟದ ಹೆಣ್ಣು ಕರುಗಳನ್ನು ಖರೀದಿಸಲು ಬ್ಯಾಂಕ್ ಸಾಲ ಪಡೆದ ರೈತರಿಗೆ 3% ಬಡ್ಡಿ ರಿಯಾಯಿತಿ ಸೌಲಭ್ಯವನ್ನು ಈ ಯೋಜನೆಯು ಒದಗಿಸುತ್ತದೆ.

ರಾಷ್ಟ್ರೀಯ ಗೋಕುಲ ಮಿಷನ್‌ ಸಹಾಯಧನ ವಿವರ

ಯೋಜನೆ / ಘಟಕ ಸಬ್ಸಿಡಿ ಅಥವಾ ಆರ್ಥಿಕ ನೆರವು
ಸಾಮಾನ್ಯ ಘಟಕಗಳು ಭಾರತ ಸರ್ಕಾರದಿಂದ 100% ಅನುದಾನ (ಕೆಲವು ವೈಯಕ್ತಿಕ ಘಟಕಗಳನ್ನು ಹೊರತುಪಡಿಸಿ).
ತ್ವರಿತ ತಳಿ ಸುಧಾರಣೆ ಪ್ರತಿ ಖಚಿತ IVF ಗರ್ಭಧಾರಣೆಗೆ 5,000 ರೂ. ಪ್ರೋತ್ಸಾಹಧನ.
ಲಿಂಗ-ವಿಂಗಡಿತ ವೀರ್ಯ ವೀರ್ಯದ ವೆಚ್ಚದ ಮೇಲೆ 50% ವರೆಗೆ ಸಬ್ಸಿಡಿ (ಹೆಣ್ಣು ಕರುಗಳ ಜನನ ಖಚಿತಪಡಿಸಲು).
ತಳಿ ವರ್ಧನಾ ಫಾರ್ಮ್‌ಗಳು ಉದ್ಯಮಿಗಳು, SHG, FPO ಗಳಿಗೆ 50% ಬಂಡವಾಳ ಸಬ್ಸಿಡಿ (ಗರಿಷ್ಠ 2 ಕೋಟಿ ರೂ.ವರೆಗೆ).
ಹೆಫರ್ (ಹೆಣ್ಣು ಕರು) ಸಾಕಾಣಿಕೆ ಕೇಂದ್ರಗಳು 15,000 ಕರುಗಳ ಸಾಮರ್ಥ್ಯದ ಕೇಂದ್ರ ಸ್ಥಾಪನೆಗೆ 35% ಸಹಾಯಧನ.
ಹೆಚ್ಚಿನ ಇಳುವರಿಯ IVF ಹೆಣ್ಣು ಕರುಗಳು

ಇವುಗಳ ಖರೀದಿಗೆ ಪಡೆದ ಬ್ಯಾಂಕ್ ಸಾಲದ ಮೇಲೆ 3% ಬಡ್ಡಿ ರಿಯಾಯಿತಿ.

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲಿಗೆ ನೀವು ಯೋಜನೆಯ ಯಾವ ಭಾಗದ ಅಡಿಯಲ್ಲಿ (ಉದಾಹರಣೆಗೆ: ಗೋಕುಲ ಗ್ರಾಮ, ಮೈತ್ರಿ ತರಬೇತಿ, ಅಥವಾ ತಳಿ ಅಭಿವೃದ್ಧಿ) ಪ್ರಯೋಜನ ಪಡೆಯಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸಿ.
  • ರಾಷ್ಟ್ರೀಯ ಪಶುಧನ ಮಿಷನ್‌ನ ಅಧಿಕೃತ ಪೋರ್ಟಲ್ nlm.udyamimitra.in ಅಥವಾ ನಿಮ್ಮ ರಾಜ್ಯದ ಪಶುಸಂಗೋಪನಾ ಇಲಾಖೆಯ ವೆಬ್‌ಸೈಟ್‌ https://ahvs.karnataka.gov.in/ ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಿ ಮತ್ತು ಲಾಗಿನ್ ಆಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್ ಮೂಲಕವೇ ಸಲ್ಲಿಸಿ.
  • ನಿಮ್ಮ ಅರ್ಜಿಯನ್ನು ರಾಜ್ಯ ಅನುಷ್ಠಾನ ಏಜೆನ್ಸಿಯು ಕೂಲಂಕಷವಾಗಿ ಪರಿಶೀಲಿಸುತ್ತದೆ. ಅರ್ಹ ಯೋಜನೆಗಳನ್ನು ಸಾಲದ ಮಂಜೂರಾತಿಗಾಗಿ ಬ್ಯಾಂಕ್‌ಗಳಿಗೆ ಶಿಫಾರಸು ಮಾಡಲಾಗುತ್ತದೆ.
  • ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿಯು ಯೋಜನೆಯನ್ನು ಪರಿಶೀಲಿಸಿ ಅಂತಿಮ ಅನುಮೋದನೆಗಾಗಿ ಶಿಫಾರಸು ಮಾಡುತ್ತದೆ.
  • ಅಂತಿಮವಾಗಿ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಯೋಜನೆಯನ್ನು ಅನುಮೋದಿಸುತ್ತದೆ, ನಂತರ ಸಬ್ಸಿಡಿ ಹಣವನ್ನು ವಿವಿಧ ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಅಗತ್ಯವಿರುವ ದಾಖಲೆಗಳು

  • ಆಧಾರ್ ಕಾರ್ಡ್.
  • ವಾಸಸ್ಥಳದ ಪುರಾವೆ.
  • ಆದಾಯ ಪ್ರಮಾಣಪತ್ರ.
  • ಬ್ಯಾಂಕ್ ಖಾತೆ ವಿವರಗಳು (ಸಬ್ಸಿಡಿ ವರ್ಗಾವಣೆಗಾಗಿ)
  • ಯೋಜನಾ ವರದಿ (- ಅನ್ವಯವಾಗುವಲ್ಲಿ)

ಪ್ರಶ್ನೋತ್ತರಗಳು

  1. ರಾಷ್ಟ್ರೀಯ ಗೋಕುಲ್‌ ಮಿಷನ್‌ ಯೋಜನೆಗೆ ಯಾವ ಸಚಿವಾಲಯವು ಜವಾಬ್ದಾರಿಯಾಗಿದೆ?
    ಕೇಂದ್ರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಈ ಯೋಜನೆಯನ್ನು ಜಾರಿಗೆ ತರುವ ನೋಡಲ್ ಸಚಿವಾಲಯವಾಗಿದೆ.
  2. ಈ ಯೋಜನೆಯ ಅವಧಿ ಎಷ್ಟು?
    2021ರಲ್ಲಿ ಪರಿಷ್ಕೃತಗೊಂಡ ಈ ಮಿಷನ್, ಪ್ರಸ್ತುತ 'ರಾಷ್ಟ್ರೀಯ ಪಶುಧನ ವಿಕಾಸ ಯೋಜನೆ'ಯ ಅಡಿಯಲ್ಲಿ 2025-26 ರವರೆಗೆ ಕಾರ್ಯನಿರ್ವಹಿಸಲಿದೆ.
  3. ಈ ಯೋಜನೆಯ ಪ್ರಾಥಮಿಕ ಫಲಾನುಭವಿಗಳು ಯಾರು?
    ಸಣ್ಣ ಮತ್ತು ಅತಿಸಣ್ಣ ರೈತರು ಹಾಗೂ ಪಶುಸಂಗೋಪನೆಯಲ್ಲಿ 70% ಕ್ಕಿಂತ ಹೆಚ್ಚು ತೊಡಗಿಸಿಕೊಂಡಿರುವ ಮಹಿಳೆಯರು ಈ ಯೋಜನೆಯ ಪ್ರಮುಖ ಫಲಾನುಭವಿಗಳು. ಜೊತೆಗೆ, ಸಂಬಂಧಿತ ಮೂಲಸೌಕರ್ಯಗಳನ್ನು ಸ್ಥಾಪಿಸುವ ಉದ್ಯಮಿಗಳು ಸಹ ಸಬ್ಸಿಡಿಗಳ ಲಾಭವನ್ನು ಪಡೆಯಬಹುದು.
  4. ಒಬ್ಬ ರೈತನು ಈ ಪ್ರಯೋಜನಗಳನ್ನು ಅಥವಾ ಸಬ್ಸಿಡಿಗಳನ್ನು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?
    ಫಲಾನುಭವಿಗಳು ರಾಜ್ಯ ಪಶುಧನ ಅಭಿವೃದ್ಧಿ ಮಂಡಳಿಗಳು ಅಥವಾ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯಂತಹ ರಾಜ್ಯ ಅನುಷ್ಠಾನ ಸಂಸ್ಥೆಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಅರ್ಜಿಗಳನ್ನು ಆನ್‌ಲೈನ್ ಮೂಲಕ ಅಥವಾ ಸ್ಥಳೀಯ ಪಶುಸಂಗೋಪನಾ ಕಚೇರಿಗಳ ಮೂಲಕ ಆಫ್‌ಲೈನ್‌ನಲ್ಲಿ ಸಲ್ಲಿಸಬಹುದು.
  5. ರಾಷ್ಟ್ರೀಯ ಗೋಕುಲ್‌ ಮಿಷನ್‌ ಜೊತೆಗೆ ಉಲ್ಲೇಖಿಸಲಾದ "ರಾಷ್ಟ್ರೀಯ ಡಿಜಿಟಲ್ ಪಶುಧನ ಮಿಷನ್ " ಎಂದರೇನು?
    ರಾಷ್ಟ್ರೀಯ ಡಿಜಿಟಲ್ ಪಶುಧನ ಮಿಷನ್ ಎಂಬುದು RGM ಅಡಿಯಲ್ಲಿ ತರಲಾದ ಒಂದು ಡಿಜಿಟಲ್ ಉಪಕ್ರಮವಾಗಿದ್ದು, ಇದು 'ಭಾರತ್ ಪಶುಧನ್' ಎಂಬ ರಾಷ್ಟ್ರೀಯ ಡೇಟಾಬೇಸ್ ಅನ್ನು ನಿರ್ಮಿಸುತ್ತದೆ. ಇದರ ಅಡಿಯಲ್ಲಿ ಪ್ರತಿ ಪ್ರಾಣಿಗೆ 12-ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯನ್ನು (ID) ನೀಡಲಾಗುತ್ತದೆ, ಇದು ಪ್ರಾಣಿಗಳ ಪತ್ತೆಹಚ್ಚುವಿಕೆಯನ್ನು ಸುಲಭಗೊಳಿಸುತ್ತದೆ ಮತ್ತು ಗುಣಮಟ್ಟದ ಡೈರಿ ಉತ್ಪನ್ನಗಳ ರಫ್ತಿಗೆ ಉತ್ತೇಜನ ನೀಡುತ್ತದೆ.
  6. ನನ್ನ ಹಸು/ಎಮ್ಮೆಗೆ ಈಗಾಗಲೇ ವಿಮೆ ಇದ್ದರೆ, ನಾನು RGM ಸೌಲಭ್ಯಗಳನ್ನು ಪಡೆಯಬಹುದೇ?
    ಹೌದು. ವಿಮೆ ಮತ್ತು ತಳಿ ಅಭಿವೃದ್ಧಿ ಸೌಲಭ್ಯಗಳು ವಿಭಿನ್ನವಾಗಿವೆ. ನೀವು RGM ಅಡಿಯಲ್ಲಿ ಉಚಿತ ಕೃತಕ ಗರ್ಭಧಾರಣೆ ಅಥವಾ ಐವಿಎಫ್ (IVF) ಸೌಲಭ್ಯಗಳನ್ನು ಪಡೆಯಲು ಯಾವುದೇ ಅಡ್ಡಿಯಿಲ್ಲ.
  7. ಈ ಯೋಜನೆಯಲ್ಲಿ ಕೇವಲ ಹಸುಗಳಿಗೆ ಮಾತ್ರ ಆದ್ಯತೆ ಇದೆಯೇ ಅಥವಾ ಎಮ್ಮೆಗಳಿಗೂ ಅವಕಾಶವಿದೆಯೇ?
    ಈ ಯೋಜನೆಯು ಹಸು ಮತ್ತು ಎಮ್ಮೆಗಳೆರಡಕ್ಕೂ ಅನ್ವಯಿಸುತ್ತದೆ. ವಿಶೇಷವಾಗಿ ಮುರ್ರಾ, ಜಾಫ್ರಾಬಾದಿಯಂತಹ ಸುಧಾರಿತ ಎಮ್ಮೆ ತಳಿಗಳ ಸಂರಕ್ಷಣೆ ಮತ್ತು ಉತ್ಪಾದಕತೆ ಹೆಚ್ಚಳಕ್ಕೆ ಈ ಮಿಷನ್ ಒತ್ತು ನೀಡುತ್ತದೆ.

]]>
Sun, 11 Jan 2026 07:49:23 +0530 shivuagrico
Rasthe veer yojane&ರಸ್ತೆಯ ವೀರ ಯೋಜನೆ: ಸೂಪರ್ ಹೀರೋಗಳಾಗಿ ಅಪಘಾತ ಸಂತ್ರಸ್ತರ ಪ್ರಾಣ ಉಳಿಸಿದವರಿಗೆ ಸಿಗಲಿದೆ 25,000 ರೂ. ನಗದು ಬಹುಮಾನ https://krushirushi.in/Rasthe-veer-yojane-2383 https://krushirushi.in/Rasthe-veer-yojane-2383 Rasthe veer yojane-ರಸ್ತೆಯ ವೀರ ಯೋಜನೆ: ಸೂಪರ್ ಹೀರೋಗಳಾಗಿ ಅಪಘಾತ ಸಂತ್ರಸ್ತರ ಪ್ರಾಣ ಉಳಿಸಿದವರಿಗೆ ಸಿಗಲಿದೆ 25,000 ರೂ. ನಗದು ಬಹುಮಾನ

ಭಾರತದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡಲು ಜನರನ್ನು ಪ್ರೋತ್ಸಾಹಿಸಲು 'ರಾಹ್-ವೀರ್' ಅಥವಾ ರಸ್ತೆಯ ವೀರ ಯೋಜನೆ ಜಾರಿಯಾಗಿದೆ. ಅಪಘಾತವಾದ ಒಂದು ಗಂಟೆಯೊಳಗೆ ಸಂತ್ರಸ್ತರನ್ನು ಆಸ್ಪತ್ರೆಗೆ ಸೇರಿಸುವವರಿಗೆ 25,000 ರೂ. ಬಹುಮಾನ ಮತ್ತು ಕಾನೂನು ರಕ್ಷಣೆ ನೀಡಲಾಗುತ್ತದೆ. ಇದು ಅಮೂಲ್ಯ ಜೀವಗಳನ್ನು ಉಳಿಸಲು ಮತ್ತು 'ಉತ್ತಮ ಸಮರಿಟನ್' ಗಳನ್ನು ಗೌರವಿಸಲು ಉದ್ದೇಶಿಸಿದೆ. ಈ ಕುರಿತ ವಿವರಗಳು ಇಲ್ಲಿವೆ.

ಭಾರತದಲ್ಲಿ ರಸ್ತೆ ಅಪಘಾತದಿಂದಾಗಿ ಲಕ್ಷಾಂತರ ಮಂದಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಂಕಿಅಂಶಗಳ ಪ್ರಕಾರ, ಪ್ರತಿ ವರ್ಷ ಅಂದಾಜು 45 ಲಕ್ಷ ಅಪಘಾತಗಳು ನಡೆಯುತ್ತಿದ್ದು, ಪ್ರತಿ ಕೆಲವು ನಿಮಿಷಕ್ಕೆ ಒಬ್ಬರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದರೆ, ಸರಿಯಾದ ಕ್ಷಣದಲ್ಲಿ ಚಿಕಿತ್ಸೆ ನೀಡಿದರೆ, ಅಮೂಲ್ಯ ಜೀವವನ್ನು ಉಳಿಸಬಹುದು. ಅಪಘಾತ ನಡೆದ ನಂತರದ ಮೊದಲ 60 ನಿಮಿಷಗಳನ್ನು 'ಗೋಲ್ಡನ್ ಅವರ್' ಎನ್ನಲಾಗುತ್ತದೆ. ಈ ಸಮಯದಲ್ಲಿ ಸಿಗುವ ತುರ್ತು ಚಿಕಿತ್ಸೆ ಸಾವು ಮತ್ತು ಶಾಶ್ವತ ಅಂಗವೈಕಲ್ಯವನ್ನು ತಡೆಯಬಲ್ಲದು. ಆದರೆ, ಪೊಲೀಸರ ವಿಚಾರಣೆ ಅಥವಾ ಕಾನೂನು ಸಂಕಷ್ಟಗಳಿಗೆ ಹೆದರಿ ಅನೇಕರು ಸಹಾಯ ಮಾಡಲು ಮುಂದೆ ಬರುತ್ತಿರಲಿಲ್ಲ. ಈ ಭಯವನ್ನು ಹೋಗಲಾಡಿಸಲು ಭಾರತ ಸರ್ಕಾರವು 'ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ 2019' ರ ಸೆಕ್ಷನ್ 134A ಅಡಿಯಲ್ಲಿ 'ರಸ್ತೆಯ ವೀರ' ಯೋಜನೆಯನ್ನು ಜಾರಿಗೆ ತಂದಿದೆ.

ಏನಿದು 'ರಸ್ತೆಯ ವೀರ' ಯೋಜನೆ?

61

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮಹತ್ವಾಕಾಂಕ್ಷೆಯ ಯೋಜನೆಯಾದ 'ರಾಹ್-ವೀ‌ರ್' ಅಥವಾ “ರಸ್ತೆಯ ವೀರ' ಯೋಜನೆಯು ರಸ್ತೆ ಅಪಘಾತದ ಸಂತ್ರಸ್ತರಿಗೆ ತುರ್ತು ಸಂದರ್ಭದಲ್ಲಿ ನೆರವಾಗುವ ಸಾರ್ವಜನಿಕರನ್ನು ಉತ್ತೇಜಿಸುವ ಮತ್ತು ರಕ್ಷಿಸುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯಡಿ ಅಪಘಾತಕ್ಕೀಡಾದವರನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರಿಸುವ ವ್ಯಕ್ತಿಗಳಿಗೆ ಕಾನೂನು ಕಿರುಕುಳದಿಂದ ಸಂಪೂರ್ಣ ರಕ್ಷಣೆ ನೀಡಲಾಗುವುದು ಮಾತ್ರವಲ್ಲದೆ, ಅವರ ವೈಯಕ್ತಿಕ ವಿವರಗಳನ್ನು ನೀಡುವಂತೆ ಅಥವಾ ವಿಚಾರಣೆಗಾಗಿ ಅನಗತ್ಯವಾಗಿ ಕಾಯುವಂತೆ ಒತ್ತಾಯಿಸುವಂತಿಲ್ಲ. ಸಂತ್ರಸ್ತರ ಪ್ರಾಣ ಉಳಿಸಲು ಧೈರ್ಯದಿಂದ ಮುಂದೆ ಬರುವ ಇಂತಹ 'ಉತ್ತಮ ಸಮರಿಟನ್'ಗಳ ಘನತೆ ಮತ್ತು ಗೌಪ್ಯತೆಯನ್ನು ಕಾಪಾಡುವುದರ ಜೊತೆಗೆ, ಅವರಿಗೆ ಆರ್ಥಿಕ ಬಹುಮಾನ ಮತ್ತು ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಲಾಗುತ್ತದೆ.

ಸಮರಿಟನ್‌ಗಳಿಗೆ ಬಹುಮಾನದ ಮೊತ್ತ ಎಷ್ಟು?

ಅಪಘಾತಕ್ಕೀಡಾದ ಸಂತ್ರಸ್ತನನ್ನು 'ಗೋಲ್ಡನ್‌ ಅವ‌ರ್' (ಅಪಘಾತವಾದ ಒಂದು ಗಂಟೆಯೊಳಗೆ) ಆಸ್ಪತ್ರೆಗೆ ಸೇರಿಸುವ ವ್ಯಕ್ತಿಗೆ ಪ್ರತಿ ಘಟನೆಗೆ 25,000 ರೂ. ನಗದು ಬಹುಮಾನ ನೀಡಲಾಗುತ್ತದೆ.

ಈ ನಗದು ಬಹುಮಾನದ ಜೊತೆಗೆ ವ್ಯಕ್ತಿಯ ಸೇವೆಗಾಗಿ ಗೌರವಾನ್ವಿತ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಲಾಗುತ್ತದೆ.

ಒಬ್ಬ ವ್ಯಕ್ತಿಯು ಒಂದು ವರ್ಷದಲ್ಲಿ ಗರಿಷ್ಠ 5 ಬಾರಿ ಈ ಆರ್ಥಿಕ ಬಹುಮಾನ ಮತ್ತು ಪ್ರಶಂಸನಾ ಪತ್ರವನ್ನು ಪಡೆಯಲು ಅವಕಾಶವಿದೆ.

ದೇಶಾದ್ಯಂತ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಮೊದಲ 10 'ರಾಹ್-ವೀರ್'ಗಳನ್ನು ರಾಷ್ಟ್ರ ಮಟ್ಟದಲ್ಲಿ ಆಯ್ಕೆ ಮಾಡಿ, ಅವರಿಗೆ ತಲಾ 1,00,000 ರೂ. ಹೆಚ್ಚುವರಿ ಬಹುಮಾನ ನೀಡಲಾಗುತ್ತದೆ.

]]>
Sat, 10 Jan 2026 09:40:07 +0530 shivuagrico
Free fodder seeds&ಉಚಿತ ಮೇವಿನ ಬೀಜಗಳವಿತರಣೆ https://krushirushi.in/Free-fodder-seeds-2382 https://krushirushi.in/Free-fodder-seeds-2382 Free fodder seeds-ಉಚಿತ ಮೇವಿನ ಬೀಜಗಳವಿತರಣೆ


ಕರ್ನಾಟಕ ಸರ್ಕಾರವು ರೈತರಿಗೆ ಉಚಿತವಾಗಿ ಸುಧಾರಿತ ಮೇವಿನ ಬೀಜಗಳನ್ನು ನೀಡುತ್ತಿದೆ. ಇದರಿಂದ ಜಾನುವಾರುಗಳ ಆರೋಗ್ಯ ಸುಧಾರಿಸಿ ಹಾಲಿನ ಇಳುವರಿ ಹೆಚ್ಚುತ್ತದೆ. ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಆದ್ಯತೆ ನೀಡಲಾಗಿದೆ. ಅರ್ಹ ರೈತರು ತಮ್ಮ ಹತ್ತಿರದ ಪಶು ಆಸ್ಪತ್ರೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಇದು ರೈತರ ವೆಚ್ಚ ಕಡಿಮೆ ಮಾಡಿ ಸ್ವಾವಲಂಬನೆಗೆ ನೆರವಾಗುತ್ತದೆ. ಈ ಕುರಿತ ಮಾಹಿತಿಗಳು ಇಲ್ಲಿವೆ.

ಕೃಷಿ ಪರಿಕರಗಳ ಖರೀದಿ ಹಾಗೂ ಮಾರಾಟಕ್ಕಾಗಿ ನಿಮ್ಮ ಮನೆಬಾಗಿಲಿಗೆ ಬರಲಿದೆ krishibuy.in 

https://krishibuy.in/product/trichoderma/

ಜಾನುವಾರುಗಳ ಆರೋಗ್ಯ ಮತ್ತು ಹೈನುಗಾರಿಕೆಯ ಲಾಭವು ಅವುಗಳಿಗೆ ನೀಡುವ ಆಹಾರದ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ. ಆದರೆ, ಜಾನುವಾರುಗಳಿಗೆ ಹಣಕೊಟ್ಟು ಮೇವು ತರುವುದು ರೈತರಿಗೆ ಕಷ್ಟಕರ. ಇದನ್ನು ಮನಗಂಡ ಕರ್ನಾಟಕ ಸರ್ಕಾರವು ರೈತರಿಗೆ ಉಚಿತವಾಗಿ ಸುಧಾರಿತ ತಳಿಗಳ ಮೇವಿನ ಬೀಜಗಳನ್ನು ವಿತರಿಸುವ ಯೋಜನೆಯನ್ನು ಜಾರಿಗೆ ತಂದಿದೆ. ಸರ್ಕಾರದಿಂದ ಜಾನುವಾರುಗಳಿಗೆ ಉಚಿತವಾಗಿ ಮೇವಿನ ಕಿರು ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ.

ಏನಿದು ಮೇವಿನ ಕಿರು ಪೊಟ್ಟಣಗಳ ವಿತರಣೆ ಯೋಜನೆ?

ಕರ್ನಾಟಕ ಸರ್ಕಾರದ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಜಾರಿಗೆ ತಂದಿರುವ 'ಮೇವಿನ ಕಿರು ಪೊಟ್ಟಣಗಳ ವಿತರಣೆ' ಯೋಜನೆಯು ಹೈನುಗಾರಿಕೆ ಮಾಡುವ ರೈತರಿಗೆ ಉಚಿತವಾಗಿ ಸುಧಾರಿತ ತಳಿಗಳ ಮೇವಿನ ಬೀಜಗಳನ್ನು ಒದಗಿಸುವ ಮಹತ್ವದ ಯೋಜನೆಯಾಗಿದ್ದು, ಇದು ಜಾನುವಾರುಗಳ ಪೌಷ್ಟಿಕಾಂಶವನ್ನು ಹೆಚ್ಚಿಸಿ ಹಾಲಿನ ಇಳುವರಿಯನ್ನು ಸುಧಾರಿಸುವ ಉದ್ದೇಶ ಹೊಂದಿದೆ. ಈ ಯೋಜನೆಯಡಿ ಆಫ್ರಿಕನ್ ಟಾಲ್ ಮೆಕ್ಕೆಜೋಳ, ಲುಸರ್ನ್, ಬರಸೀಮ್, ಓಟ್ಸ್ ಮತ್ತು ವಿವಿಧ ಜೋಳದ ತಳಿಗಳ ಬೀಜಗಳನ್ನು ಖಾರಿಫ್ ಮತ್ತು ರಬಿ ಹಂಗಾಮುಗಳಲ್ಲಿ ರೈತರಿಗೆ ಉಚಿತವಾಗಿ ವಿತರಿಸಲಾಗುತ್ತದೆ. ಒಮ್ಮೆ ಸೌಲಭ್ಯ ಪಡೆದ ಫಲಾನುಭವಿಗಳು ಒಂದು ವರ್ಷದ ನಂತರ ಮತ್ತೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ಯೋಜನೆಯ ಉದ್ದೇಶಗಳು

  • ಗುಣಮಟ್ಟದ ಮೇವು: ಈ ಯೋಜನೆಯು ರೈತರು ತಮ್ಮ ಸ್ವಂತ ಹೊಲಗಳಲ್ಲಿಯೇ ಸುಧಾರಿತ ತಳಿಗಳ ಮತ್ತು ಉತ್ತಮ ಗುಣಮಟ್ಟದ ಹಸಿರು ಮೇವನ್ನು ಬೆಳೆಯಲು ಅಗತ್ಯ ಪ್ರೋತ್ಸಾಹ ಹಾಗೂ ನೆರವು ನೀಡುತ್ತದೆ.
  • ಜಾನುವಾರುಗಳ ಆರೋಗ್ಯ: ಜಾನುವಾರುಗಳಿಗೆ ಪೌಷ್ಟಿಕಾಂಶಯುಕ್ತ ಹಸಿರು ಮೇವನ್ನು ಒದಗಿಸುವ ಮೂಲಕ ಅವುಗಳ ಆರೋಗ್ಯವನ್ನು ಸುಧಾರಿಸುವುದು ಮತ್ತು ಹಾಲಿನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.
  • ವೆಚ್ಚ ಕಡಿತ: ರೈತರು ಹೊರಗಿನಿಂದ ಕೊಂಡುಕೊಳ್ಳುವ ದುಬಾರಿ ಪಶು ಆಹಾರದ ಮೇಲಿನ ವೆಚ್ಚವನ್ನು ಕಡಿಮೆ ಮಾಡುವ ಮೂಲಕ, ಅವರ ಒಟ್ಟಾರೆ ಕೃಷಿ ಲಾಭವನ್ನು ಹೆಚ್ಚಿಸಲು ಈ ಯೋಜನೆ ಸಹಕಾರಿಯಾಗಿದೆ.
  • ಸ್ವಾವಲಂಬನೆ: ರೈತರು ಮೇವಿನ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗುವಂತೆ ಮಾಡುವ ಮೂಲಕ ಹೈನುಗಾರಿಕೆಯನ್ನು ಲಾಭದಾಯಕ ಉದ್ಯೋಗವನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ.

ವಿತರಿಸಲಾಗುವ ಮೇವಿನ ಬೀಜಗಳ ವಿವರ

  • ಈ ಯೋಜನೆಯಡಿ ಈ ಕೆಳಗಿನ ಸುಧಾರಿತ ಮೇವಿನ ಬೀಜಗಳ ಕಿಟ್‌ಗಳನ್ನು (1 ರಿಂದ 5 ಕೆಜಿ ವರೆಗೆ) ನೀಡಲಾಗುತ್ತದೆ.
  • ಆಫ್ರಿಕನ್ ಟಾಲ್ ಮೆಕ್ಕೆಜೋಳ
  • ಲುಸರ್ನ್/ಕುದುರೆ ಮಸಾಲೆ)
  • ಬರ್ಸೀಮ್
  • ಜೋಳ
  • ಓಟ್ಸ್
  • ಚೈನೀಸ್ ಕ್ಯಾಬೇಜ್ ಮತ್ತು ಕಾಂಗೋ ಸಿಗ್ನಲ್ ಹುಲ್ಲು.

ಮೀಸಲಾತಿ ಮತ್ತು ಆದ್ಯತೆ

  • ಮಹಿಳಾ ಮೀಸಲಾತಿ: ಯೋಜನೆಯ ಒಟ್ಟು ಫಲಾನುಭವಿಗಳಲ್ಲಿ ಶೇಕಡಾ 30% ರಷ್ಟು ಸ್ಥಾನಗಳನ್ನು ಮಹಿಳಾ ರೈತರಿಗಾಗಿ ಮೀಸಲಿಡಲಾಗಿದ್ದು, ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆ.
  • ಪರಿಶಿಷ್ಟ ಜಾತಿ: ಸಮಾಜದ ಹಿಂದುಳಿದ ವರ್ಗಗಳ ಏಳಿಗೆಗಾಗಿ ಈ ಯೋಜನೆಯಡಿ ಪರಿಶಿಷ್ಟ ಜಾತಿಯ ರೈತರಿಗೆ ಶೇಕಡಾ 16% ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ.
  • ಪರಿಶಿಷ್ಟ ಪಂಗಡ: ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತ ಫಲಾನುಭವಿಗಳಿಗಾಗಿ ಶೇಕಡಾ 7% ರಷ್ಟು ಮೀಸಲಾತಿಯನ್ನು ನಿಗದಿಪಡಿಸಲಾಗಿದೆ.
  • ಅಲ್ಪಸಂಖ್ಯಾತರು ಮತ್ತು ಇತರರು: ಮೀಸಲಾತಿ ವರ್ಗಗಳ ಜೊತೆಗೆ ಅಲ್ಪಸಂಖ್ಯಾತ ಸಮುದಾಯದ ರೈತರಿಗೂ ಸರ್ಕಾರದ ನಿಯಮಾನುಸಾರ ಯೋಜನೆಯ ಲಾಭ ಪಡೆಯಲು ಆದ್ಯತೆ ನೀಡಲಾಗುತ್ತದೆ.
  • ಒಟ್ಟಾರೆ ಗುರಿ: ಸಮಾಜದ ಎಲ್ಲಾ ವರ್ಗದ ಅರ್ಹ ರೈತರಿಗೂ ಸಮಾನವಾಗಿ ಈ ಯೋಜನೆಯ ಪ್ರಯೋಜನಗಳು ತಲುಪುವಂತೆ ನೋಡಿಕೊಳ್ಳುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.

ಅರ್ಹತಾ ಮಾನದಂಡಗಳು ಏನು?

  • ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಜಿದಾರರು ಕಡ್ಡಾಯವಾಗಿ ಕರ್ನಾಟಕ ರಾಜ್ಯದ ಕಾಯಂ ನಿವಾಸಿಯಾಗಿರಬೇಕು.
  • ಮೇವು ಬೆಳೆಯಲು ಅನುಕೂಲವಾಗುವಂತೆ ರೈತರು ತಮ್ಮ ಹೆಸರಿನಲ್ಲಿ ಕನಿಷ್ಠ ಪ್ರಮಾಣದ ಸ್ವಂತ ಕೃಷಿ ಭೂಮಿಯನ್ನು ಹೊಂದಿರಬೇಕು.
  • ಹೈನುಗಾರಿಕೆಯನ್ನು ಉತ್ತೇಜಿಸುವ ಉದ್ದೇಶವಿರುವುದರಿಂದ, ಕನಿಷ್ಠ ಎರಡು ಜಾನುವಾರುಗಳನ್ನು (ಹಸು ಅಥವಾ ಎಮ್ಮೆ) ಸಾಕುತ್ತಿರುವ ರೈತರಿಗೆ ಈ ಯೋಜನೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ.
  • ಒಮ್ಮೆ ಈ ಯೋಜನೆಯಡಿ ಮೇವಿನ ಕಿಟ್ ಪಡೆದ ರೈತರು, ಸೌಲಭ್ಯ ಪಡೆದ ದಿನಾಂಕದಿಂದ ಒಂದು ವರ್ಷ ಪೂರ್ಣಗೊಂಡ ನಂತರವಷ್ಟೇ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ.
  • ಅರ್ಹ ರೈತರು ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು ಆಯಾ ಪಶುವೈದ್ಯಕೀಯ ಕಚೇರಿಗಳಲ್ಲಿ ಅಗತ್ಯ ಭೂ ದಾಖಲೆಗಳು ಮತ್ತು ಜಾನುವಾರುಗಳ ವಿವರಗಳನ್ನು ಒದಗಿಸಬೇಕಾಗುತ್ತದೆ.

ಮೇವಿನ ಕಿರು ಪೊಟ್ಣಣಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

  • ಆಸಕ್ತ ರೈತರು ತಮ್ಮ ಗ್ರಾಮಕ್ಕೆ ಅಥವಾ ತಾಲ್ಲೂಕಿಗೆ ಹತ್ತಿರವಿರುವ ಪಶು ಆಸ್ಪತ್ರೆ, ಪಶು ಚಿಕಿತ್ಸಾಲಯ ಅಥವಾ ತಾಲ್ಲೂಕು ಪಶುಸಂಗೋಪನೆ ಇಲಾಖೆಯ ಕಚೇರಿಗೆ ನೇರವಾಗಿ ಭೇಟಿ ನೀಡಬೇಕು.
  • ಕಚೇರಿಯಲ್ಲಿ ಲಭ್ಯವಿರುವ 'ಮೇವಿನ ಕಿರು ಪೊಟ್ಣಣ ವಿತರಣೆ' ಯೋಜನೆಯ ನಿಗದಿತ ಅರ್ಜಿ ನಮೂನೆಯನ್ನು ಪಡೆದು, ಅದರಲ್ಲಿ ಕೇಳಲಾದ ಎಲ್ಲಾ ವೈಯಕ್ತಿಕ ಮತ್ತು ಕೃಷಿ ವಿವರಗಳನ್ನು ಭರ್ತಿ ಮಾಡಬೇಕು.
  • ಭರ್ತಿ ಮಾಡಿದ ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಪಹಣಿ ಮತ್ತು ಜಾತಿ ಪ್ರಮಾಣಪತ್ರದಂತಹ ಅಗತ್ಯ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬೇಕು.
  • ಅರ್ಜಿ ಸ್ವೀಕರಿಸಿದ ನಂತರ, ಪಶುವೈದ್ಯಕೀಯ ಅಧಿಕಾರಿಗಳು ರೈತರ ಭೂ ದಾಖಲೆಗಳನ್ನು ಮತ್ತು ಜಾನುವಾರುಗಳ ಲಭ್ಯತೆಯನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಾರೆ.
  • ಪರಿಶೀಲನೆ ಪ್ರಕ್ರಿಯೆ ಮುಗಿದ ನಂತರ, ಮಳೆಗಾಲ (ಖಾರಿಫ್) ಅಥವಾ ಚಳಿಗಾಲದ (ರಬಿ) ಬಿತ್ತನೆ ಹಂಗಾಮಿಗೆ ಸರಿಯಾಗಿ ಸುಧಾರಿತ ಮೇವಿನ ಬೀಜಗಳ ಕಿಟ್‌ಗಳನ್ನು ರೈತರಿಗೆ ಉಚಿತವಾಗಿ ವಿತರಿಸಲಾಗುತ್ತದೆ.



ಅಗತ್ಯ ದಾಖಲೆಗಳು

  • ಆಧಾರ್ ಕಾರ್ಡ್
  • ಜಮೀನಿನ ದಾಖಲೆಗಳು (ಪಹಣಿ)
  • ಜಾತಿ ಮತ್ತು ಆದಾಯ ಪ್ರಮಾಣಪತ್ರ (ಅನ್ವಯವಾಗುವವರಿಗೆ)
  • ರೇಷನ್ ಕಾರ್ಡ್ (ಬಿಪಿಎಲ್ ಕಾರ್ಡ್ ಇದ್ದರೆ ಅನುಕೂಲ)
  • ಬ್ಯಾಂಕ್ ಪಾಸ್ ಬುಕ್ ವಿವರಗಳು
  • ಇತ್ತೀಚಿನ ಫೋಟೋ



ಸಂಪರ್ಕ ಮಾಹಿತಿ

  • ವೆಬ್‌ಸೈಟ್: ahvs.kar.nic.in
  • ಸಹಾಯವಾಣಿ: 8277100200
  • ವಿಳಾಸ: ಪಶುಪಾಲನಾ ಭವನ, ಹೆಬ್ಬಾಳ, ಬೆಂಗಳೂರು - 560024.
]]>
Sat, 10 Jan 2026 07:29:15 +0530 shivuagrico
Gram one franchise&ಗ್ರಾಮ ಒನ್ ಕೇಂದ್ರದ ಫ್ರಾಂಚೈಸಿಗಾಗಿ ಅರ್ಜಿ ಆಹ್ವಾನ: ನಿಮ್ಮ ಹಳ್ಳಿಯಲ್ಲೇ ಸ್ವಂತ ಉದ್ಯೋಗ ಆರಂಭಿಸಲು ಸುವರ್ಣಾವಕಾಶ https://krushirushi.in/Gram-one-franchise-2381 https://krushirushi.in/Gram-one-franchise-2381 Gram one franchise-ಗ್ರಾಮ ಒನ್ ಕೇಂದ್ರದ ಫ್ರಾಂಚೈಸಿಗಾಗಿ ಅರ್ಜಿ ಆಹ್ವಾನ: ನಿಮ್ಮ ಹಳ್ಳಿಯಲ್ಲೇ ಸ್ವಂತ ಉದ್ಯೋಗ ಆರಂಭಿಸಲು ಸುವರ್ಣಾವಕಾಶ


ಕರ್ನಾಟಕ ಸರ್ಕಾರವು ಗ್ರಾಮ ಒನ್ ಕೇಂದ್ರಗಳ ಫ್ರಾಂಚೈಸಿಯನ್ನು ಆರಂಭಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಇದರಿಂದ ಗ್ರಾಮೀಣ ಜನರಿಗೆ ಸರ್ಕಾರಿ ಮತ್ತು ಖಾಸಗಿ ಸೇವೆಗಳು ಒಂದೇ ಸೂರಿನಡಿ ದೊರೆಯಲಿವೆ. ಕಲಬುರಗಿ ಮತ್ತು ಮೈಸೂರು ವಿಭಾಗದ ಜಿಲ್ಲೆಗಳಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸಬಹುದು. ಅರ್ಜಿ ಸಲ್ಲಿಸಲು ಜನವರಿ 15, 2026 ಕೊನೆಯ ದಿನಾಂಕವಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಈ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಗಳು ಹಾಗೂ ಸೇವೆಗಳನ್ನು ಜನರಿಗೆ ತಲುಪಿಸುವಲ್ಲಿ ಗ್ರಾಮ ಒನ್‌ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತಿವೆ. ನೀವು ಕೂಡ ಗ್ರಾಮ ಒನ್‌ ಫ್ರಾಂಚೈಸಿಯನ್ನು ಆರಂಭಿಸಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಇ-ಆಡಳಿತ ನಿರ್ದೇಶನಾಲಯವು ಗ್ರಾಮೀಣ ಭಾಗದ ಜನರಿಗೆ ಒಂದೇ ಸೂರಿನಡಿ ಸರ್ಕಾರಿ ಮತ್ತು ಖಾಸಗಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ 'ಗ್ರಾಮ ಒನ್' ಕೇಂದ್ರಗಳನ್ನು ಸ್ಥಾಪಿಸಲು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

 

ಗ್ರಾಮ ಒನ್ ಎಂದರೇನು?

ಗ್ರಾಮ ಒನ್ ಎಂಬುದು ಗ್ರಾಮೀಣ ಮಟ್ಟದಲ್ಲಿ ನಾಗರಿಕರಿಗೆ ಒಂದೇ ಸೂರಿನಡಿ ವಿವಿಧ ಸರ್ಕಾರಿ ಮತ್ತು ಖಾಸಗಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು 2020-21ರ ಆಯವ್ಯಯದಲ್ಲಿ ಘೋಷಿಸಿದ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಇದು ಗ್ರಾಮ ಮಟ್ಟದಲ್ಲಿ ನಾಗರಿಕ ಕೇಂದ್ರಿತ ಚಟುವಟಿಕೆಗಳಿಗೆ ಏಕ ಸಹಾಯಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಸರ್ಕಾರದಿಂದ ನಾಗರಿಕರಿಗೆ ಸರ್ಕಾರಿ ಸೇವೆಗಳು, ಬ್ಯಾಂಕಿಂಗ್ ಸೇವೆಗಳು ಮತ್ತು ಆರ್‌ಟಿಐ ಅರ್ಜಿಗಳೂ ಸೇರಿದಂತೆ ಸುಮಾರು 800ಕ್ಕೂ ಹೆಚ್ಚು ಸೇವೆಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಈ ಕೇಂದ್ರಗಳು ವಾರದ ಏಳು ದಿನಗಳೂ ಸಹ ಬೆಳಿಗ್ಗೆ 8:00 ಗಂಟೆಯಿಂದ ರಾತ್ರಿ 8:00 ಗಂಟೆಯವರೆಗೆ ಸತತವಾಗಿ ಕಾರ್ಯನಿರ್ವಹಿಸುತ್ತವೆ. ಇದರಿಂದ ಗ್ರಾಮೀಣ ಜನರು ಕಚೇರಿಗಳಿಗೆ ಅಲೆಯುವ ಸಮಯ ಮತ್ತು ಹಣ ಉಳಿತಾಯವಾಗುತ್ತದೆ.

ಗ್ರಾಮ ಒನ್ ಕೇಂದ್ರದಿಂದ ಆಗುವ ಲಾಭಗಳು:

  • ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ: ಸಾರ್ವಜನಿಕರು ಸಣ್ಣಪುಟ್ಟ ಸರ್ಕಾರಿ ಕೆಲಸಗಳಿಗಾಗಿ ಅಥವಾ ದಾಖಲೆಗಳಿಗಾಗಿ ಪದೇ ಪದೇ ತಾಲ್ಲೂಕು ಮತ್ತು ಜಿಲ್ಲಾ ಕಚೇರಿಗಳಿಗೆ ಅಲೆಯುವ ಅವಶ್ಯಕತೆ ಇರುವುದಿಲ್ಲ. ಎಲ್ಲಾ ಸೇವೆಗಳು ಗ್ರಾಮ ಮಟ್ಟದಲ್ಲೇ ದೊರೆಯುತ್ತವೆ.
  • ಸಮಯ ಮತ್ತು ಹಣದ ಉಳಿತಾಯ: ನಾಗರಿಕರು ತಮ್ಮ ಹಳ್ಳಿಯಲ್ಲೇ ಸೇವೆಗಳನ್ನು ಪಡೆಯುವುದರಿಂದ ನಗರ ಪ್ರದೇಶಗಳಿಗೆ ಪ್ರಯಾಣಿಸುವ ಖರ್ಚು ಕಡಿಮೆಯಾಗುತ್ತದೆ ಮತ್ತು ಕಚೇರಿಗಳಲ್ಲಿ ಗಂಟೆಗಟ್ಟಲೆ ಕಾಯುವ ಸಮಯ ಉಳಿತಾಯವಾಗುತ್ತದೆ.
  • ಮಧ್ಯವರ್ತಿಗಳ ಹಾವಳಿ ಇಲ್ಲ: ಗ್ರಾಮ ಒನ್ ಕೇಂದ್ರಗಳಲ್ಲಿ ನೇರ ಮತ್ತು ಪಾರದರ್ಶಕ ವ್ಯವಸ್ಥೆ ಇರುವುದರಿಂದ ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳ ಮೊರೆ ಹೋಗುವ ಅಗತ್ಯವಿಲ್ಲ, ಇದರಿಂದ ಹಣ ದುರುಪಯೋಗವಾಗುವುದು ತಪ್ಪುತ್ತದೆ.
  • ಅನುಕೂಲಕರ ಸಮಯ: ಈ ಕೇಂದ್ರಗಳು ಬೆಳಿಗ್ಗೆ 8:00 ರಿಂದ ರಾತ್ರಿ 8:00 ರವರೆಗೆ ಕಾರ್ಯನಿರ್ವಹಿಸುವುದರಿಂದ, ಕೃಷಿ ಕಾರ್ಮಿಕರು ಅಥವಾ ಉದ್ಯೋಗಸ್ಥರು ತಮ್ಮ ಕೆಲಸ ಮುಗಿದ ನಂತರ ತಮಗೆ ಅನುಕೂಲವಾದ ಸಮಯದಲ್ಲಿ ಭೇಟಿ ನೀಡಿ ಸೇವೆಗಳನ್ನು ಪಡೆಯಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂದು?

ಗ್ರಾಮ ಒನ್‌ ಫ್ರಾಂಚೈಸಿಗೆ ಅರ್ಜಿ ಆಹ್ವಾನ

ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು ಆಸಕ್ತಿ ಇರುವ ಅಭ್ಯರ್ಥಿಗಳು 01 ಜನವರಿ 2026 ರಿಂದಲೇ ತಮ್ಮ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯಡಿ ಫ್ರಾಂಚೈಸಿ ಪಡೆಯಲು ಅರ್ಜಿ ಸಲ್ಲಿಸಲು 15 ಜನವರಿ 2026ರ ಸಂಜೆ 6:00 ಗಂಟೆಯವರೆಗೆ ಮಾತ್ರ ಕಾಲಾವಕಾಶವಿರುತ್ತದೆ. ಈ ಅರ್ಜಿಗಳನ್ನು ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ ಸಲ್ಲಿಸಬೇಕಾಗಿದ್ದು, ಯಾವುದೇ ರೀತಿಯ ಭೌತಿಕ ಅಥವಾ ಆಫ್‌ಲೈನ್ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ನಿಗದಿತ ದಿನಾಂಕ ಮತ್ತು ಸಮಯದ ನಂತರ ಬರುವ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಆಹ್ವಾನಿಸಲಾದ ಜಿಲ್ಲೆಗಳು

ಪ್ರಸ್ತುತ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಕೇವಲ ಕಲಬುರಗಿ ಮತ್ತು ಮೈಸೂರು ವಿಭಾಗದ ಜಿಲ್ಲೆಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಮೈಸೂರು ವಿಭಾಗದ ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ ಹಾಗೂ ಕೊಡಗು ಜಿಲ್ಲೆಗಳು ಸೇರಿದ್ದರೆ, ಕಲಬುರಗಿ ವಿಭಾಗದ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಆಸಕ್ತ ಅಭ್ಯರ್ಥಿಗಳು ಮಾತ್ರ ಈ ಹಂತದಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಶೈಕ್ಷಣಿಕ ಅರ್ಹತೆ ಏನು?

ಅರ್ಜಿದಾರರು ಕನಿಷ್ಠ ಪಿಯುಸಿ (PUC II), ಡಿಪ್ಲೊಮಾ, ಐಟಿಐ ಅಥವಾ ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಇದರೊಂದಿಗೆ ಕಂಪ್ಯೂಟರ್ ನಿರ್ವಹಣೆಯ ಬಗ್ಗೆ ಕಡ್ಡಾಯವಾಗಿ ಜ್ಞಾನ ಹೊಂದಿರಬೇಕಾದುದು ಅವಶ್ಯಕ

ಬಂಡವಾಳ ಹೂಡಿಕೆ ಎಷ್ಟು?

ಈ ಕೇಂದ್ರವನ್ನು ಆರಂಭಿಸಲು ಅಭ್ಯರ್ಥಿಯು ಸುಮಾರು 1 ರಿಂದ 2 ಲಕ್ಷ ರೂಪಾಯಿಗಳ ಬಂಡವಾಳ ಹೂಡಿಕೆ ಮಾಡುವ ಸಾಮರ್ಥ್ಯ ಹೊಂದಿರಬೇಕು. ಅಭ್ಯರ್ಥಿಯು ಕಡ್ಡಾಯವಾಗಿ ಪೊಲೀಸ್ ತಪಾಸಣಾ ಪ್ರಮಾಣ ಪತ್ರವನ್ನು ಒದಗಿಸಬೇಕು. ಅರ್ಜಿಯ ಜೊತೆಗೆ 100 ರೂಪಾಯಿಗಳ ಮರುಪಾವತಿಸಲಾಗದ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಒಂದು ವೇಳೆ ನೀವು ಈ ಯೋಜನೆಗೆ ಆಯ್ಕೆಯಾದರೆ, 5000 ರೂಪಾಯಿಗಳ ಮರುಪಾವತಿಸಬಹುದಾದ ಭದ್ರತಾ ಠೇವಣಿಯನ್ನು ಪಾವತಿಸಬೇಕು.

ಗ್ರಾಮ ಒನ್_ ಕೇಂದ್ರಗಳ ಸೇವೆಗಳ ವಿವರ

ಮೂಲ ಸೌಕರ್ಯದ ಅವಶ್ಯಕತೆಗಳೇನು

  • ಗ್ರಾಮ ಒನ್ ಕೇಂದ್ರವು ಕನಿಷ್ಠ 100 ಚದರ ಅಡಿ ವಿಸ್ತೀರ್ಣವಿರುವ ಒಂದು ಪ್ರತ್ಯೇಕ ಕೊಠಡಿಯನ್ನು ಹೊಂದಿರಬೇಕು.
  • ಈ ಕೇಂದ್ರವು ಗ್ರಾಮದ ಪ್ರಮುಖ ಸ್ಥಳದಲ್ಲಿದ್ದು, ಸಾರ್ವಜನಿಕರು ಸುಲಭವಾಗಿ ಭೇಟಿ ನೀಡುವಂತಿರಬೇಕು.
  • ಕೊಠಡಿಯ ನೆಲಹಾಸು ಟೈಲ್ಸ್ ಅಥವಾ ಗ್ರಾನೈಟ್‌ನಿಂದ ಕೂಡಿರಬೇಕು ಹಾಗೂ ಉತ್ತಮ ಗಾಳಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಹೊಂದಿರಬೇಕು.
  • ಕೇಂದ್ರಕ್ಕೆ ಬರುವ ಗ್ರಾಹಕರಿಗಾಗಿ ಕನಿಷ್ಠ 4 ಕುರ್ಚಿಗಳ ಆಸನ ವ್ಯವಸ್ಥೆ ಇರಬೇಕು.
  • ಸುರಕ್ಷತೆಯ ದೃಷ್ಟಿಯಿಂದ ಸಿ.ಸಿ.ಟಿ.ವಿ ಕ್ಯಾಮೆರಾ ಮತ್ತು ಮಾಹಿತಿ ಪ್ರದರ್ಶನಕ್ಕಾಗಿ ಎಲ್.ಸಿ.ಡಿ ಟಿವಿ ಅಳವಡಿಸಿರುವುದು ಕಡ್ಡಾಯ.


ತಾಂತ್ರಿಕ ಸಾಮಗ್ರಿಗಳ ಅವಶ್ಯಕತೆಗಳು

  • ಕೇಂದ್ರದಲ್ಲಿ ಕನಿಷ್ಠ i3 ಸಂರಚನೆಯ ಡೆಸ್ಕ್‍ಟಾಪ್ ಅಥವಾ ಲ್ಯಾಪ್‍ಟಾಪ್ ಇರಬೇಕು.
  • ಸ್ಕ್ಯಾನ್ ಮತ್ತು ಪ್ರಿಂಟ್ ಮಾಡಲು ಅನುಕೂಲವಾಗುವ ಮಲ್ಟಿ ಫಂಕ್ಷನ್ ಪ್ರಿಂಟರ್ ಹಾಗೂ ಬಯೋಮೆಟ್ರಿಕ್ ಸ್ಕ್ಯಾನರ್ ಉಪಕರಣಗಳು ಇರಬೇಕು.
  • ಆನ್‌ಲೈನ್ ಸೇವೆಗಳಿಗಾಗಿ ವೆಬ್ ಕ್ಯಾಮರಾ ಮತ್ತು ವೈ-ಫೈ ರಿಸೀವರ್ ವ್ಯವಸ್ಥೆ ಹೊಂದಿರಬೇಕು.
  • ಇಂಟರ್ನೆಟ್ ವ್ಯತ್ಯಯವಾಗದಂತೆ ತಡೆಯಲು ಕನಿಷ್ಠ ಇಬ್ಬರು ಸೇವೆ ಒದಗಿಸುವವರಿಂದ (ISPs) ಸ್ಥಿರವಾದ ಅಂತರ್ಜಾಲ ಸಂಪರ್ಕ ಪಡೆದಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲು ಗ್ರಾಮ ಒನ್ ಅಧಿಕೃತ ಪೋರ್ಟಲ್ kal-mys.gramaone.karnataka.gov.in/ ಗೆ ಭೇಟಿ ನೀಡಿ.
  • ವೆಬ್‌ಸೈಟ್‌ನಲ್ಲಿ 'New Registration' ಅಥವಾ 'Apply for Franchise' ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಬಳಸಿ ಪ್ರಾಥಮಿಕ ನೋಂದಣಿ ಮಾಡಿಕೊಳ್ಳಿ.
  • ನಿಮ್ಮ ವೈಯಕ್ತಿಕ ವಿವರಗಳು, ಶೈಕ್ಷಣಿಕ ಅರ್ಹತೆ (ಪಿಯುಸಿ/ಪದವಿ), ಮತ್ತು ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಿರುವ ಗ್ರಾಮ ಹಾಗೂ ಜಿಲ್ಲೆಯ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.
  • ಅಗತ್ಯವಿರುವ ದಾಖಲೆಗಳನ್ನು (ಗುರುತಿನ ಚೀಟಿ, ಶೈಕ್ಷಣಿಕ ದಾಖಲೆಗಳು, ಸ್ಥಳದ ಫೋಟೋಗಳು ಮತ್ತು ಪೊಲೀಸ್ ತಪಾಸಣಾ ಪ್ರಮಾಣ ಪತ್ರ) ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
  • ರೂ. 100 ಅರ್ಜಿ ಶುಲ್ಕವನ್ನು ಆನ್‌ಲೈನ್ ಪೇಮೆಂಟ್ ಗೇಟ್‌ವೇ (UPI, Net Banking ಅಥವಾ Card) ಮೂಲಕ ಪಾವತಿಸಿ. ಯಾವುದೇ ಕಾರಣಕ್ಕೂ ನಗದು ಪಾವತಿ ಮಾಡಬೇಡಿ.
  • ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ 'Submit' ಬಟನ್ ಕ್ಲಿಕ್ ಮಾಡಿ. ಅರ್ಜಿ ಸಲ್ಲಿಸಿದ ನಂತರ ಬರುವ 'ಅರ್ಜಿ ಉಲ್ಲೇಖ ಸಂಖ್ಯೆ' ಅನ್ನು ಮುಂದಿನ ಉಲ್ಲೇಖಕ್ಕಾಗಿ ಉಳಿಸಿಕೊಳ್ಳಿ.


  • ಪ್ರಮುಖ ಸೂಚನೆ

    ಸಾರ್ವಜನಿಕರಿಗೆ ಪ್ರಮುಖ ಸೂಚನೆಯೆಂದರೆ, ಗ್ರಾಮ ಒನ್ ಕೇಂದ್ರದ ಅರ್ಜಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ನಗದು ಹಣದ ಪಾವತಿಯನ್ನು ಮಾಡಬಾರದು. ಬಿಎಲ್‌ಎಸ್ ಗ್ರೂಪ್ ತನ್ನ ಯಾವುದೇ ಉದ್ಯೋಗಿ ಅಥವಾ ಪ್ರತಿನಿಧಿಗಳಿಗೆ ನಗದು ಸ್ವೀಕರಿಸಲು ಅಧಿಕಾರ ನೀಡಿರುವುದಿಲ್ಲ ಮತ್ತು ಎಲ್ಲಾ ಅಧಿಕೃತ ಪಾವತಿಗಳನ್ನು ಕೇವಲ ಆನ್‌ಲೈನ್ ಪೇಮೆಂಟ್ ಗೇಟ್‌ವೇ (ನೆಟ್ ಬ್ಯಾಂಕಿಂಗ್/ಯುಪಿಐ/ಕಾರ್ಡ್‌ಗಳು) ಮೂಲಕವೇ ಮಾಡಬೇಕಾಗುತ್ತದೆ. ಒಂದು ವೇಳೆ ನೀವು ಯಾರಿಗಾದರೂ ನಗದು ನೀಡಿದ್ದಲ್ಲಿ ಕಂಪನಿಯು ಅದರ ಜವಾಬ್ದಾರಿಯನ್ನು ಹೊರುವುದಿಲ್ಲ. ಯಾರಾದರೂ ಹಣಕ್ಕಾಗಿ ಬೇಡಿಕೆ ಇಟ್ಟಲ್ಲಿ ತಕ್ಷಣವೇ ಸಾಕ್ಷ್ಯದೊಂದಿಗೆ [email protected]ಇಮೇಲ್ ವಿಳಾಸಕ್ಕೆ ಅಥವಾ +91-9148712473/ +91-080 22221934 ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು ಅಥವಾ ಬೆಂಗಳೂರಿನ ಇನ್‌ಫಾಂಟ್ರಿ ರಸ್ತೆಯಲ್ಲಿರುವ ಅವರ ಕಚೇರಿಯನ್ನು ಸಂಪರ್ಕಿಸಬಹುದು.


    ಸಂಪರ್ಕ ಮಾಹಿತಿ

    • ದೂರವಾಣಿ ಸಂಖ್ಯೆ: 91487 12473
    • ಇ-ಮೇಲ್: [email protected]

]]>
Fri, 09 Jan 2026 07:52:45 +0530 shivuagrico
Agriculture department subsidy schemes 2026ನೇ ಸಾಲಿನ ಕೃಷಿ ಇಲಾಖೆಯ ಸಬ್ಸಿಡಿ ಯೋಜನೆಗಳ ಪಟ್ಟಿ https://krushirushi.in/Agriculture-department-subsidy-schemes-2026 https://krushirushi.in/Agriculture-department-subsidy-schemes-2026 Agriculture department subsidy schemes 2026ನೇ ಸಾಲಿನ ಕೃಷಿ ಇಲಾಖೆಯ ಸಬ್ಸಿಡಿ ಯೋಜನೆಗಳ ಪಟ್ಟಿ

ಕೃಷಿ ಇಲಾಖೆಯ ಯೋಜನೆಗಳು ರೈತರಿಗೆ ಕೃಷಿ ಯಂತ್ರೋಪಕರಣ, ಬೆಳೆ ವಿಮೆ, ನೀರಾವರಿ, ಮಣ್ಣು ಪರೀಕ್ಷೆ, ಆದಾಯ ಬೆಂಬಲ ಮತ್ತು ಮಾರುಕಟ್ಟೆ ಸಂಪರ್ಕದಂತಹ ವಿವಿಧ ಸೌಲಭ್ಯಗಳನ್ನು ನೀಡುತ್ತವೆ, ಕೃಷಿ ಇಲಾಖೆಯಿಂದ ಸಿಗುವ 21 ಯೋಜನೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ಕೃಷಿ ಇಲಾಖೆ ವತಿಯಿಂದ ಕೈಗೊಳ್ಳುತ್ತಿರುವ ಫಲಾನುಭವಿ ಆಧಾರಿತ ಯೋಜನೆಗಳು, ಫಲಾನುಭವಿಗಳ ಆಯ್ಕೆಗೆ ಇರುವ ಮಾನದಂಡಗಳ ವಿವರ

1. ಬೀಜಗಳ ಪೂರೈಕೆ: ಕೃಷಿ ಇಲಾಖೆಯ ಬೀಜಗಳ ಪೂರೈಕೆ ಮತ್ತು ಇತರೆ ಹೂಡುವಳಿ

ಯೋಜನೆಯಡಿ ರಾಜ್ಯದ ಎಲ್ಲಾ ವರ್ಗದ ರೈತರಿಗೆ ವಿವಿಧ ಕೃಷಿ ಬೆಳೆಗಳ (ಭತ್ತ, ರಾಗಿ, ಜೋಳ, ಮುಸುಕಿನ ಜೋಳ, ಸಜ್ಜೆ, ತೊಗರಿ, ಕಡಲೆ, ಹೆಸರು, ಉದ್ದು, ಅಲಸಂದೆ, ನೆಲಗಡಲೆ, ಸೂರ್ಯಕಾಂತಿ, ಸೋಯಾ ಅವರೆ, ಹತ್ತಿ ಇತ್ಯಾದಿ) ಪ್ರಮಾಣಿತ/ ನಿಜ ಚೀಟಿ ಬಿತ್ತನೆ ಬೀಜಗಳನ್ನು ಸಾಮಾನ್ಯ ವರ್ಗದ ರೈತರಿಗೆ ಶೇ. 50 ಹಾಗೂ ಪರಿಶಿಷ್ಟ ಜಾತಿ/ ಪಂಗಡದ ರೈತರಿಗೆ ಶೇ.75 ರ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ಒಟ್ಟಾರೆ ಗರಿಷ್ಟ 2.00 ಹೆಕ್ಟೇರ್ ಅಥವಾ ಅವರ ವಾಸ್ತವಿಕ ಹಿಡುವಳಿ (Actual holding) ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ಮಾತ್ರ ರಿಯಾಯಿತಿಯಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಬಿತ್ತನೆ ಬೀಜ ವಿತರಣೆಯಲ್ಲಿ ರೈತರ ಪಹಣಿಯಲ್ಲಿನ ವಿವರಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರು ಜಾತಿ ಪ್ರಮಾಣ ಪತ್ರವನ್ನು ជជ໖. ผู้ส่ง Farmer Registration & Unified Beneficiary Information System - FRUITS , Farmers Identification number(FID) ಪಡೆದಿರಬೇಕು.

2. ಸಸ್ಯ ಸಂರಕ್ಷಣೆ: ಶೇ.50ರ ಸಹಾಯಧನದಡಿ ಪೀಡೆನಾಶಕ/ ಜೈವಿಕ ಪೀಡೆನಾಶಕ ಹಾಗೂ ಜೈವಿಕ ನಿಯಂತ್ರಣಕಾರಕಗಳ ವಿತರಣೆ, ಬೀಜೋಪಚಾರ ಆಂದೋಲನ ಹಾಗೂ ಸುರಕ್ಷಿತ ಕೀಟನಾಶಕಗಳ ಬಳಕೆ ಬಗ್ಗೆ ತರಬೇತಿಗಾಗಿ ಅನುದಾನವನ್ನು ಬಳಸಿಕೊಳ್ಳಲಾಗುತ್ತಿದೆ. ರೈತರು Farmer Registration & Unified Beneficiary Information System FRUITS Fe ನಲ್ಲಿ ನೋಂದಣಿಯಾಗಿ Farmers Identification number(FID) ಪಡೆದಿರಬೇಕು.

3. ಕೃಷಿ ಯಾಂತ್ರೀಕರಣ & ಕೃಷಿ ಸಂಸ್ಕರಣೆ:

ಕೃಷಿ ಯಾಂತ್ರೀಕರಣ: ರೈತರು ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕೆ ಅನುವು ಮಾಡಿಕೊಡಲು ಹಾಗೂ ಕೂಲಿ ಕಾರ್ಮಿಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಈ ಯೋಜನೆಯಡಿ ಕೃಷಿ ಯಂತ್ರೋಪಕರಣಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ.50 ಹಾಗೂ ಪ.ಜಾ./ಪ.ಪಂ. ರೈತರಿಗೆ ಶೇ.90 ರಂತೆ ಎಲ್ಲಾ ವರ್ಗದ ರೈತರಿಗೆ ಗರಿಷ್ಠ ರೂ.1.00 ಲಕ್ಷಕ್ಕೆ ಮಿತಿಗೊಳಪಟ್ಟು ಸಹಾಯಧನವನ್ನು ಒದಗಿಸಲಾಗುತ್ತದೆ ಹಾಗೂ 45 ಪಿ.ಟಿ.ಒ ಹೆಚ್.ಪಿ ವರೆಗಿನ ಟ್ರಾಕ್ಟರ್ ಗಳಿಗೆ ಸಾಮಾನ್ಯ ವರ್ಗದ ರೈತರಿಗೆ ರೂ.0.75 ಲಕ್ಷ ಹಾಗೂ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ರೈತರಿಗೆ ಶೇ.90 ರ ಗರಿಷ್ಠ ರೂ.3.00 ಲಕ್ಷ ಸಹಾಯಧನ ನೀಡಲಾಗುತ್ತಿದೆ.

ಕೃಷಿ ಸಂಸ್ಕರಣೆ: ಈ ಯೋಜನೆಯಡಿ ಕೃಷಿ ಸಂಸ್ಕರಣಾ ಘಟಕಗಳು, ಟಾರ್ಪಾಲಿನ್ ಮತ್ತು ಸಣ್ಣ ಯಂತ್ರಚಾಲಿತ ಎಣ್ಣೆಗಾಣ ಘಟಕಗಳನ್ನು ಸಹಾಯಧನದಡಿ ರೈತರಿಗೆ ವಿತರಿಸಲಾಗುತ್ತಿದೆ. ಸದರಿ ಯೋಜನೆಯಡಿ ಕೃಷಿ ಸಂಸ್ಕರಣಾ ಘಟಕಗಳು ಮತ್ತು ಟಾರ್ಪಾಲಿನ್ ಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ.50ರಷ್ಟು ಮತ್ತು ಪರಿಶಿಷ್ಟ ಜಾತಿ/ ಪಂಗಡದ ರೈತರಿಗೆ ಶೇ.90ರಷ್ಟು ಸಹಾಯಧನದಡಿ ನೀಡಲಾಗುವುದು. ಸಣ್ಣ ಯಂತ್ರಚಾಲಿತ ಎಣ್ಣೆಗಾಣ ಘಟಕಗಳನ್ನು ಸಾಮಾನ್ಯ ವರ್ಗದ ರೈತರಿಗೆ ಶೇ.75 ಹಾಗೂ ಪ.ಜಾ./ಪ.ಪಂ., ರೈತರಿಗೆ ಶೇ.90 ರಂತೆ ಎಲ್ಲಾ ವರ್ಗದ ರೈತರಿಗೆ ಗರಿಷ್ಠ ರೂ.1.00 ಲಕ್ಷಕ್ಕೆ ಮಿತಿಗೊಳಪಟ್ಟು ಸಹಾಯಧನವನ್ನು ಒದಗಿಸಲಾಗುತ್ತಿದೆ.

Farmer Registration and Unified Beneficiary Information System FRUITS F Farmers Identification number (FID) ಪಡೆಯಬೇಕು. ರೈತರು ನಿಗದಿತ ಅರ್ಜಿ ನಮೂನೆಯಲ್ಲಿ ಆ‌ರ್.ಟಿ.ಸಿ. ಯೊಂದಿಗೆ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು ಹಾಗೂ ಕೆ-ಕಿಸಾನ್ ತಂತ್ರಾಂಶದಲ್ಲಿ ಅರ್ಜಿಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ಎಲ್ಲಾ ಅರ್ಹ ರೈತರಿಗೆ ಜೇಷ್ಠತೆ ಹಾಗೂ ಅನುದಾನ ಲಭ್ಯತೆಯ ಆಧಾರದ ಮೇರೆಗೆ ಮಾರ್ಗಸೂಚಿ ಅನ್ವಯ ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ಒದಗಿಸಲಾಗುತ್ತಿದೆ. ರಾಜ್ಯದ ಎಲ್ಲಾ ರೈತರಿಗೂ ಯಂತ್ರೋಪಕರಣ/ಕೃಷಿ ಸಂಸ್ಕರಣಾ ಘಟಕಗಳ ಯೋಜನೆಯ ಸೌಲಭ್ಯ ನೀಡುವ ದೃಷ್ಟಿಯಿಂದ, ಒಮ್ಮೆ ಕೃಷಿ ಯಂತ್ರೋಪಕರಣ/ಕೃಷಿ ಸಂಸ್ಕರಣಾ ಘಟಕಗಳ ಸೌಲಭ್ಯ ಪಡೆದ ರೈತರು 7 ವರ್ಷಗಳ ನಂತರ ಮತ್ತು ಕೃಷಿ ಸಂಸ್ಕರಣಾ ಕಾರ್ಯಕ್ರಮದಡಿ ಟಾರ್ಪಲಿನ್ ಸೌಲಭ್ಯ ಪಡೆದ ರೈತರು 3 ವರ್ಷಗಳ ನಂತರ ಮತ್ತೆ ಸದರಿ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.

4. ರೈತ ಸಿರಿ & ಸಾವಯವ ಕೃಷಿ: ಸಾವಯವ ಕೃಷಿ ಅಳವಡಿಕೆ ಮತ್ತು ದೃಢೀಕರಣ

ಕಾರ್ಯಕ್ರಮದಡಿ ರಾಜ್ಯದ ಸಾವಯವ ಪ್ರಮಾಣೀಕೃತ ಪ್ರದೇಶವನ್ನು ವಿಸ್ತರಿಸುವ ನಿಟ್ಟಿನಲ್ಲಿ ಆಸಕ್ತ ಗುಂಪು ಮತ್ತು ವ್ಯಕ್ತಿಗತ ಪ್ರಸ್ತಾವನೆಗಳ ಪ್ರಮಾಣೀಕರಣಕ್ಕಾಗಿ ಅನುದಾನ ಬಳಕೆ ಮಾಡಲಾಗುತ್ತದೆ.

ರೈತ ಸಿರಿ ಕಾರ್ಯಕ್ರಮದಡಿ ಸಿರಿಧಾನ್ಯಗಳ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಸಿರಿಧಾನ್ಯಗಳಾದ ನವಣೆ, ಹಾರಕ, ಕೊರಲೆ, ಸಾಮೆ, ಊದಲು, ಬರಗು ಬೆಳೆಗಳನ್ನು ಬೆಳೆದ ಎಲ್ಲಾ ವರ್ಗದ ರೈತರಿಗೆ ಪ್ರತಿ ಹೆಕ್ಟೇರಿಗೆ ರೂ.10000/-ದಂತೆ ಗರಿಷ್ಠ ಎರಡು ಹಕ್ಕೇರುಗಳಿಗೆ ಬೆಳೆ ಸಮೀಕ್ಷೆ ಆಧಾರದಂತೆ ಪ್ರೋತ್ಸಾಹಧನವನ್ನು ನೇರ ನಗದು ವರ್ಗಾವಣೆ ಮೂಲಕ ನೀಡಲಾಗುವುದು ಹಾಗೂ ಸಾವಯವ ಮತ್ತು ಸಿರಿಧಾನ್ಯಗಳ ಉತ್ತೇಜನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.

5. ಸಾವಯವ ಇಂಗಾಲ ಅಭಿಯಾನ: ರಾಜ್ಯದ ಕೃಷಿ ಭೂಮಿಯಲ್ಲಿ ಸಾವಯವ ಇಂಗಾಲದ

ಪ್ರಮಾಣವನ್ನು ಹೆಚ್ಚಿಸಲು, ದ್ವಿದಳಧಾನ್ಯಗಳ ವಿಸ್ತೀರ್ಣ ಮತ್ತು ಉತ್ಪಾದನೆ ಹೆಚ್ಚಿಸುವ ಸಲುವಾಗಿ ಶೇ. 75ರ ರಿಯಾಯಿತಿ ದರದಲ್ಲಿ ಹಸಿರೆಲೆ ಗೊಬ್ಬರ ಬಿತ್ತನೆ ಬೀಜಗಳ ವಿತರಣೆ ಮಾಡಲಾಗುವುದು ಹಾಗೂ ಹಸಿರೆಲೆ ಗೊಬ್ಬರ ಬೀಜ ಮತ್ತು ಸಾವಯವ ಗೊಬ್ಬರಗಳ ಬಳಕೆಯಿಂದ ಸಾವಯವ ಇಂಗಾಲ ಹೆಚ್ಚಿಸುವ ಕುರಿತು ಪ್ರಾತ್ಯಕ್ಷಿಕೆಗಳನ್ನು (ಪ್ರತಿ ಪ್ರಾತ್ಯಕ್ಷಿಕೆಗೆ ರೂ. 2500/-) ಆಯೋಜಿಸಲಾಗುತ್ತಿದೆ. ರೈತರು Farmer Registration & Unified Beneficiary Farmers Identification Information System - FRUITS number(FID) ಪಡೆದಿರಬೇಕು.

6. ಹೊಸ ಬೆಳೆ ವಿಮಾ ಯೋಜನೆ: ಈ ಯೋಜನೆಯಡಿ ಪ್ರಕೃತಿ ವಿಕೋಪಗಳು, ಕೀಟಗಳು ಮತ್ತು

ರೋಗಗಳಿಂದಾಗಿ ಯಾವುದೇ ಅಧಿಸೂಚಿತ ಬೆಳೆ ವಿಫಲವಾದ ಪಕ್ಷದಲ್ಲಿ ರೈತರಿಗೆ ವಿಮಾ ರಕ್ಷಣೆ ಮತ್ತು ಹಣಕಾಸು ಬೆಂಬಲ ನೀಡಲಾಗುವುದು. ರೈತರಿಗೆ ನೀಡುವ ವಿಮಾ ಕಂತಿನ ರಿಯಾಯಿತಿಯಲ್ಲಿ ರಾಜ್ಯ ಸರ್ಕಾರದ ಪಾಲನ್ನು ನೀಡಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ಅನುವು ಮಾಡಲಾಗುತ್ತಿದೆ.

ಈ ಯೋಜನೆಯಡಿ ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಾಗೂ ಇತರೆ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಪ್ರಥಮವಾಗಿ ಅಧಿಸೂಚಿಸಲಾಗುತ್ತದೆ. ಅಂತಿಮ ದಿನಾಂಕದೊಳಗೆ ರೈತರಿಂದ ಪ್ರೀಮಿಯಂ ಪಡೆದು ಬ್ಯಾಂಕ್ / ಸಹಕಾರ ಸಂಸ್ಥೆ / ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಬೆಳೆ ವಿಮೆ ನೋಂದಣಿ ಕಾರ್ಯ ಕೈಗೊಳ್ಳಲಾಗುತ್ತದೆ ದಾಖಲೆಗಳನ್ನು ಪರಿಶೀಲಿಸಿ ಅರ್ಹ ರೈತರ ಪ್ರಸ್ತಾವನೆಗಳನ್ನು ಸಂಬಂಧಿಸಿದ ವಿಮಾ ಸಂಸ್ಥೆಗಳಿಗೆ ಅಂಗೀಕರಿಸಲು ರವಾನಿಸಲಾಗುತ್ತದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯು ಕ್ಷೇತ್ರಾಧಾರಿತ ಹಾಗೂ ಇಳುವರಿ ಆಧಾರಿತ ಯೋಜನೆಯಾಗಿದ್ದು, ಮಾರ್ಗಸೂಚಿಯನುಸಾರ ಹೋಬಳಿ / ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯವರು ನೀಡುವ ಬೆಳೆ ಕಟಾವು ಪ್ರಯೋಗಗಳಿಂದ ಬಂದಂತಹ ವಾಸ್ತವಿಕ ಇಳುವರಿ ಮಾಹಿತಿಯು ನಿಗದಿಪಡಿಸಲಾದ ಪ್ರಾರಂಭಿಕ ಇಳುವರಿಗಿಂತ ಕಡಿಮೆ ಇದ್ದರೆ, ಇಳುವರಿಯ ಕೊರತೆಗನುಗುಣವಾಗಿ ಹೋಬಳಿ/ ಗ್ರಾಮ ಪಂಚಾಯಿತಿಯಲ್ಲಿ ಬೆಳೆ ವಿಮೆ ಮಾಡಿಸಿದ ಎಲ್ಲಾ ರೈತರು ಬೆಳೆ ವಿಮಾ ನಷ್ಟ ಪರಿಹಾರ ಪಡೆಯಲು ಅರ್ಹರಾಗುತ್ತಾರೆ. ಅರ್ಹ ರೈತರಿಗೆ ವಿಮೆ ಪರಿಹಾರ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವಿಮಾ ಸಂಸ್ಥೆಯವರು ವರ್ಗಾಯಿಸುತ್ತಾರೆ.

7. ಬೆಳೆ ಸಮೀಕ್ಷೆ: ಪೂರ್ವ ಮುಂಗಾರು, ಮುಂಗಾರು, ಹಿಂಗಾರು ಮತ್ತು ಬೇಸಿಗೆ

ಹಂಗಾಮುಗಳಲ್ಲಿ ಬೆಳೆ ಸಮೀಕ್ಷೆ ಕೈಗೊಂಡ ಖಾಸಗಿ ನಿವಾಸಿಗಳಿಗೆ ಕೇಂದ್ರೀಕೃತ DBT k2 ಮೂಲಕ ಆಧಾ‌ರ್ ಆಧಾರಿತ ನೇರ ಗೌರವಧನ ಪಾವತಿ, ಮಾಸ್ಟರ್ ತರಬೇತುದಾರರು ಹಾಗೂ ಜಿಲ್ಲಾ ತಾಂತ್ರಿಕ ಸಲಹೆಗಾರರ ಗೌರವಧನ, ಬೆಳೆ ಸಮೀಕ್ಷೆ ಕುರಿತು ತರಬೇತಿ, ಕಾರ್ಯಾಗಾರ ಆಯೋಜನೆ, ವಿವಿಧ ಮಾಧ್ಯಮಗಳ ಮೂಲಕ ಜಾಹೀರಾತು, ಮುದ್ರಣ, ಸಿ.ಡಿ. ದಾಖಲಾತಿ, ವಿದ್ಯುನ್ಮಾನ ಮತ್ತು ವಿವಿಧ ಮಾಧ್ಯಮಗಳ ಮುಖಾಂತರ ಪ್ರಚಾರಕ್ಕಾಗಿ ತಗಲುವ ವೆಚ್ಚ, ಹೆಲ್ಸ್ ಡೆಸ್ಕ್ ಸಿಬ್ಬಂದಿ ವೇತನ ಹಾಗೂ ತಂತ್ರಾಂಶ ನಿರ್ವಹಣೆ ವೆಚ್ಚ, ಶೇ. 1ರಷ್ಟು ದತ್ತಾಂಶದ ಪರಿಶೀಲನೆ ಕೈಗೊಳ್ಳುವ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಸಿಬ್ಬಂದಿಗಳಿಗೆ ಗೌರವಧನ, ಬೆಳೆ ಸಮೀಕ್ಷೆ ಕಾರ್ಯತಂಡ ನಿರ್ವಹಣೆ, ಇತರೆ ಕಛೇರಿ ಮತ್ತು ಆಡಳಿತಾತ್ಮಕ ವೆಚ್ಚಕ್ಕಾಗಿ ಉಪಯೋಗಿಸಲಾಗುತ್ತದೆ. ಪಹಣಿ ಹೊಂದಿರುವ ಎಲ್ಲಾ ಹಿಡುವಳಿದಾರರು ಅರ್ಹರಿರುತ್ತಾರೆ.

8. ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ: ಎಸ್.ಎಸ್.ಎಲ್.ಸಿ/ 10ನೇ ತರಗತಿಯನ್ನು

ಪೂರೈಸಿರುವ ಹಾಗೂ ರಾಜ್ಯದ ಯಾವುದೇ ಭಾಗದಲ್ಲಿ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆ/ ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ ಗಳವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ರೈತರ ಹಾಗೂ ಪ್ರೌಢಶಾಲಾ ಶಿಕ್ಷಣ ಪಡೆಯುತ್ತಿರುವ ರೈತ ಕುಟುಂಬದ ಹೆಣ್ಣು ಮಕ್ಕಳಿಗೆ ಹಾಗೂ ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ.

ಸದರಿ ಯೋಜನೆಯಡಿ:-

8, 9 ಮತ್ತು 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರೈತ ಕುಟುಂಬದ ಹೆಣ್ಣು ಮಕ್ಕಳು ಮತ್ತು ಎಸ್.ಎಸ್.ಎಲ್.ಸಿ /10ನೇ ತರಗತಿಯನ್ನು ಪೂರೈಸಿರುವ ಹಾಗೂ ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿರುವ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣಸಂಸ್ಥೆ/ ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್-ಗಳವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ರೈತರ ಮಕ್ಕಳು ಈ ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುತ್ತಾರೆ.

ರೈತ ಕುಟುಂಬದ ಎಲ್ಲಾ ಮಕ್ಕಳು 'ಮುಖ್ಯಮಂತ್ರಿ ರೈತ ವಿದ್ಯಾನಿಧಿ' ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುತ್ತಾರೆ. ಸದರಿ ಉದ್ದೇಶಕ್ಕೆ ರೈತ ಎಂದರೆ ರಾಜ್ಯದ ಯಾವುದೇ ಭಾಗದಲ್ಲಿ ಉಳುಮೆ ಮಾಡುವಂತಹ/ ಕೃಷಿ ಮಾಡುವಂತಹ ಜಮೀನನ್ನು ತನ್ನ ಹೆಸರಿನಲ್ಲಿ ಹೊಂದಿರುವಂತಹ ವ್ಯಕ್ತಿ (ಕೃಷಿ ಇಲಾಖೆಯ FRUITS ತಂತ್ರಾಂಶದಲ್ಲಿ ಭೂಸಹಿತ FID ಸಂಖ್ಯೆ ಹೊಂದಿರಬೇಕು). ಕೃಷಿ ಕಾರ್ಮಿಕರು ಎಂದರೆ ಕೃಷಿ ಇಲಾಖೆಯ FRUITS ತಂತ್ರಾಂಶದಲ್ಲಿ ಭೂರಹಿತ FID ಸಂಖ್ಯೆ ಹೊಂದಿದ್ದು MGNREGA ಉದ್ಯೋಗ ಚೀಟಿ ಹೊಂದಿರಬೇಕು. ರೈತ ಕುಟುಂಬ ಎಂದರೆ ರಾಜ್ಯದ ಇ-ಆಡಳಿತ ಇಲಾಖೆಯು ನಿರ್ವಹಿಸುತ್ತಿರುವ "ಕುಟುಂಬ' ತಂತ್ರಂಶದ ದತ್ತಾಂಶದಲ್ಲಿ ದಾಖಲಾಗಿರುವ ಸದಸ್ಯರು.

ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಇತರೆ ಯಾವುದೇ ಇಲಾಖೆಯು ನೀಡುವ ವಿದ್ಯಾರ್ಥಿ ವೇತನ ಪಡೆಯುತ್ತಿರುವ ವಿದ್ಯಾರ್ಥಿಗಳು 'ಮುಖ್ಯಮಂತ್ರಿ ರೈತ ವಿದ್ಯಾನಿಧಿ' ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುವುದಿಲ್ಲ.

9. ಕೃಷಿ ಪ್ರಶಸ್ತಿ ಮತ್ತು ಕೃಷಿ ಪಂಡಿತ ಪ್ರಶಸ್ತಿ:

ಹಿಂದೆ ಕೃಷಿ ಪಂಡಿತ ಪ್ರಶಸ್ತಿ: ಕೃಷಿ ಕ್ಷೇತ್ರದಲ್ಲಿ ವಿನೂತನ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿರುವ ಮತ್ತು ರೈತ ಸಮುದಾಯದ ಅಭಿವೃದ್ಧಿಗಾಗಿ ಕೊಡುಗೆ ನೀಡುತ್ತಿರುವ ರೈತ ಮತ್ತು ರೈತ ಮಹಿಳೆಯರಿಗೆ ಕೃಷಿ ಪಂಡಿತ ಪ್ರಶಸ್ತಿ ನೀಡಲಾಗುತ್ತಿದೆ. ಪಂಡಿತ ಪ್ರಶಸ್ತಿ (ಪ್ರಥಮ/ದ್ವಿತೀಯ/ತೃತೀಯ/ಉದಯೋನ್ಮುಖ) ಪಡೆದವರು ಹೊರತುಪಡಿಸಿ ಉಳಿದೆಲ್ಲಾ ರೈತ ಮತ್ತು ರೈತ ಮಹಿಳೆಯರು ಕೃಷಿ ಪಂಡಿತ ಪ್ರಶಸ್ತಿಗೆ ಸ್ಪರ್ಧಿಸಬಹುದಾಗಿರುತ್ತದೆ. ಕೃಷಿ

ಕೃಷಿ ಪ್ರಶಸ್ತಿ : ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ರೈತರಲ್ಲಿ ಆರೋಗ್ಯಕರ ಸ್ಪರ್ಧಾ ಮನೋಭಾವನೆಯನ್ನು ಉಂಟು ಮಾಡಿ ಅತಿ ಹೆಚ್ಚು ಇಳುವರಿ ಪಡೆಯುವ ರೈತ ಮತ್ತು ರೈತ ಮಹಿಳೆಯರಿಗೆ ಕೃಷಿ ಪ್ರಶಸಿಯನ್ನು ನೀಡಲಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಬೆಳೆ ಸ್ಪರ್ಧೆಯಡಿ ವಿಜೇತರಾದವರನ್ನು ಹೊರತುಪಡಿಸಿ ಉಳಿದೆಲ್ಲಾ ರೈತರು ಕೃಷಿ ಪ್ರಶಸ್ತಿಗೆ ಸ್ಪರ್ಧಿಸಬಹುದಾಗಿರುತ್ತದೆ.

10.ತರಬೇತಿ ಕಾರ್ಯಕ್ರಮಗಳು: ಈ ಯೋಜನೆಯಡಿ ಕೃಷಿ ವಿಸ್ತರಣಾ ಅಧಿಕಾರಿಗಳ ನಿರ್ವಹಣಾ

ಸಾಮರ್ಥ್ಯ ಮತ್ತು ರೈತರ/ ರೈತ ಮಹಿಳೆಯರ ವೃತ್ತಿ ಸಾಮರ್ಥ್ಯವನ್ನು ಹೆಚ್ಚಿಸಲು ಕೃಷಿ ತಾಂತ್ರಿಕತೆಗಳಿಗೆ ಸಂಬಂಧಿಸಿದಂತೆ ವಿಶೇಷ ತರಬೇತಿಗಳನ್ನು ಹಾಗೂ ಅಧ್ಯಯನ ಪ್ರವಾಸಗಳನ್ನು ಆಯೋಜಿಸಲಾಗುತ್ತದೆ.

11. ಕೃಷಿ ಭಾಗ್ಯ: ಮಳೆಯಾಶ್ರಿತ ಕೃಷಿ ನೀತಿ

ಒಣ ಹವಾಮಾನ ವಲಯಗಳ 24 ಬರ ಪೀಡಿತ ಜಿಲ್ಲೆಗಳಲ್ಲಿನ 106 ತಾಲ್ಲೂಕುಗಳಲ್ಲಿ ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನ ಮಾಡಲಾಗುವುದು. ರಾಜ್ಯದ ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಗೊಳಿಸುವುದು, ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ ಪದ್ದತಿಯಿಂದ ಕೃಷಿ ಉತ್ಪಾದಕತೆಯನ್ನು ಉತ್ತಮ ಪಡಿಸುವುದು ಮತ್ತು ಆದಾಯವನ್ನು ಹೆಚ್ಚಿಸುವುದು. ಮಳೆ ನೀರನ್ನು ವ್ಯರ್ಥ ಮಾಡದೆ ಆಯ್ಕೆ ಸ್ಥಳದಲ್ಲಿ ಕೃಷಿ ಹೊಂಡ ತೆಗೆದು ಜಲ ಸಂಗ್ರಹಿಸಿ, ಬೆಳೆಗಳ ಸಂದಿಗ್ಧ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ. ಕೃಷಿ ಭಾಗ್ಯ ಯೋಜನೆಯಡಿ ಕ್ಷೇತ್ರ ಬದು ನಿರ್ಮಾಣ, ನೀರು ಸಂಗ್ರಹಣಾ ರಚನೆ (ಕೃಷಿ ಹೊಂಡ), ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ (GI Wire Stone Fencing). ಹೊಂಡದಿಂದ ನೀರು ಎತ್ತಲು ಡೀಸೆಲ್/ಪೆಟ್ರೋಲ್/ಸೋಲಾರ್ ಪಂಪ್ ಸೆಟ್, ನೀರನ್ನು ಬೆಳೆಗೆ ಘಟಕಗಳನ್ನು ಒದಗಿಸಲು ಹಾಯಿಸಲು ಸೂಕ್ಷ್ಮ(ತುಂತುರು/ಹನಿ) ಯೋಜಿಸಲಾಗುತ್ತಿದೆ. ನೀರಾವರಿ

ಫಲಾನುಭವಿಯ ಆಯ್ಕೆ ಮಾನದಂಡಗಳು:

ಕ್ಷೇತ್ರ ಪರಿಶೀಲನೆಯಲ್ಲಿ ಅರ್ಹಗೊಂಡ ರಾಜ್ಯದ 5 ಕೃಷಿ ಹವಾಮಾನ ಒಣ ವಲಯದ (ಅಚ್ಚು ಕಟ್ಟು ಪ್ರದೇಶ ಹೊರತುಪಡಿಸಿ) ಎಲ್ಲಾ ಆಸಕ್ತ ರೈತರು ಯೋಜನೆಗೆ ಅರ್ಹರಾಗಿರುತ್ತಾರೆ.

ರೈತರ ಒಟ್ಟು ಸಾಗುವಳಿ ಕ್ಷೇತ್ರದ ಒಂದು ಸರ್ವೆ ನಂಬರ್ ನಲ್ಲಿ ಕನಿಷ್ಠ 1 ಎಕರೆ (single land parcel).

ಕೃಷಿ ಭಾಗ್ಯ ಯೋಜನೆಯ ಪೂರ್ಣ ಪ್ಯಾಕೇಜ್‌ನ ಘಟಕಗಳನ್ನು ಅನುಷ್ಠಾನಗೊಳಿಸಲು ಆಸಕ್ತಿಯಿರುವಂತಹ ರೈತರನ್ನು ಮಾತ್ರ ಆಯ್ಕೆ ಮಾಡಿ ಕ್ಷೇತ್ರ ಪರಿಶೀಲನ ಕೈಗೊಳ್ಳಲಾಗುವುದು.

ಹಿಂದಿನ ಸಾಲುಗಳಲ್ಲಿ ಕೃಷಿ ಭಾಗ್ಯ ಯೋಜನೆ ಅಥವ ಇನ್ಯಾವುದೇ ಯೋಜನೆಯಡಿ ಕೃಷಿ ಹೊಂಡ ಫಲಾನುಭವಿಯಾಗಿರುವ ರೈತರು ಸದರಿ ಯೋಜನೆಗೆ ಅರ್ಹತೆ ಹೊಂದಿರುವುದಿಲ್ಲ

ಪರಿಶಿಷ್ಟ ಜಾತಿ/ಪ.ಪಂಗಡ ರೈತರು ಸರ್ಕಾರದ ನಿರ್ದಿಷ್ಟ ಅನುಪಾತದನ್ವಯ ಅರ್ಹರಾಗಿರುತ್ತಾರೆ.

]]>
Thu, 08 Jan 2026 21:26:00 +0530 shivuagrico
Ration card list&ಮತ್ತೆ 4.5 ಲಕ್ಷ ರೇಷನ್ ಕಾರ್ಡ್ ರದ್ದು,ರದ್ದಾದ ಪಟ್ಟಿಯಲ್ಲಿರುವವರಿಗಿಲ್ಲ ರೇಷನ್,ಗೃಹಲಕ್ಷ್ಮಿ ಹಣ https://krushirushi.in/Ration-card-list-2377 https://krushirushi.in/Ration-card-list-2377 Ration card list-ಮತ್ತೆ 4.5 ಲಕ್ಷ ರೇಷನ್ ಕಾರ್ಡ್ ರದ್ದು,ರದ್ದಾದ ಪಟ್ಟಿಯಲ್ಲಿರುವವರಿಗಿಲ್ಲ ರೇಷನ್,ಗೃಹಲಕ್ಷ್ಮಿ ಹಣ

ಗ್ಯಾರಂಟಿ ಯೋಜನೆಗಳ ಆರ್ಥಿಕ ಕಡಿಮೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ನಿಗದಿತ ಮಾನದಂಡ ಉಲ್ಲಂಘಿಸಿ ಪಡೆದುಕೊಂಡಿದ್ದ ಸುಮಾರು 4.50 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಿದೆ.


ರದ್ದುಗೊಂಡ ಕಾರ್ಡ್ ದಾರರು ಸಹಜವಾಗಿಯೇ ಗೃಹಲಕ್ಷ್ಮಿ ಸೇರಿದಂತೆ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳಿಂದ ಹೊರಗುಳಿಯಲಿದ್ದಾರೆ.

ಇದರಿಂದ ರಾಜ್ಯದ ಬೊಕ್ಕಸಕ್ಕೆ ಪ್ರತಿ ತಿಂಗಳು ಸುಮಾರು 110 ಕೋಟಿ ರೂಪಾಯಿಗೂ ಅಧಿಕ ಹಣ ಉಳಿತಾಯವಾಗುತ್ತದೆ.

ರಾಜ್ಯಾದ್ಯಂತ ಆಹಾರ ಇಲಾಖೆ 4.50 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಿದೆ. ವಿವಿಧ ಯೋಜನೆಗಳ ಫಲಾನುಭವಿಗಳ ಪಟ್ಟಿಯಿಂದ 14.50 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇವರು ಅಧಿಕ ಆದಾಯ ಹೊಂದಿದವರು ಮತ್ತು ಕುಟುಂಬ ಸದಸ್ಯರು ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ. ಹೀಗಾಗಿ ಈ ಕುಟುಂಬಗಳಿಗೆ ಗೃಹಲಕ್ಷ್ಮಿ ಯೋಜನೆ ಪ್ರಯೋಜನ ನಿಂತಿದೆ. ಇದೊಂದೇ ಯೋಜನೆಯಿಂದ ತಿಂಗಳಿಗೆ ಸುಮಾರು 90 ಕೋಟಿ ಉಳಿತಾಯವಾಗುತ್ತದೆ. ಈ ಫಲಾನುಭವಿಗಳಿಗೆ ತಿಂಗಳಿಗೆ 72.50 ಲಕ್ಷ ಕ್ವಿಂಟಲ್ ಪಡಿತರ ವಿತರಿಸಲಾಗುತ್ತಿತ್ತು. ಇದಕ್ಕೆ ವೆಚ್ಚವಾಗುತ್ತಿದ್ದ ಅಂದಾಜು 22 ಕೋಟಿ ರೂಪಾಯಿ ಉಳಿತಾಯವಾಗಿದೆ.

7,76,206 ಬಿಪಿಎಲ್ ಕಾರ್ಡುಗಳನ್ನು ಶಂಕಾಸ್ಪದ ಪಟ್ಟಿಗೆ ಸೇರ್ಪಡೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇವು ಕೂಡ ರದ್ದಾಗುವ ಸಾಧ್ಯತೆ ಇದೆ.

ಅನರ್ಹ ಪಟ್ಚಿಯಲ್ಲಿ ನಿಮ್ಮ ಹೆಸರು ಹೀಗೆ ಚೆಕ್ ಮಾಡಿ

https://ahara.kar.nic.in/Home/EServices

ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ e-Ration Card ಮೇಲೆ ಕ್ಲಿಕ್ ಮಾಡಿ

ನಂತರ Show cancelled/suspended list ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಜಿಲ್ಲೆ,ತಾಲೂಕು,ತಿಂಗಳು,ವರ್ಷ select ಮಾಡಿ,Go ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಅನರ್ಹ ಪಟ್ಟಿ ಸಿಗಲಿದೆ,ಇದರಲ್ಲಿ ನಿಮ್ಮ ಹೆಸರಿದ್ದರೆ,ನಿಮಗೆ ಈ ತಿಂಗಳಿನಿಂದ ಅನ್ನಭಾಗ್ಯ ಹಾಗೂ ಗೃಹಲಕ್ಷ್ನಿ ಹಣ ಸಿಗುವುದಿಲ್ಲ

]]>
Thu, 08 Jan 2026 07:55:02 +0530 shivuagrico
Ksheera sanjeevini yojane&ಕ್ಷೀರ ಸಂಜೀವಿನಿ ಯೋಜನೆಯಡಿ ಹಸು ಸಾಕಾಣಿಕೆ ಮಾಡುವವರಿಗೆ ಸಿಗಲಿದೆ ಪ್ರತಿ ತಿಂಗಳು 3,500 ರೂಪಾಯಿ https://krushirushi.in/Ksheera-sanjeevini-yojane-2379 https://krushirushi.in/Ksheera-sanjeevini-yojane-2379 Ksheera sanjeevini yojane-ಕ್ಷೀರ ಸಂಜೀವಿನಿ ಯೋಜನೆಯಡಿ ಹಸು ಸಾಕಾಣಿಕೆ ಮಾಡುವವರಿಗೆ ಸಿಗಲಿದೆ ಪ್ರತಿ ತಿಂಗಳು 3,500 ರೂಪಾಯಿ

ಕೃಷಿಯಂತೆ ಹೈನುಗಾರಿಕೆಯನ್ನು ನಂಬಿ ಲಕ್ಷಾಂತರ ಕುಟುಂಬಗಳು ಜೀವನ ಸಾಗಿಸುತ್ತಿವೆ. ಹೈನುಗಾರಿಕೆ ಮೂಲಕ ಗ್ರಾಮೀಣ ಮಹಿಳೆಯರ ಸಾಮಾಜಿಕ, ಆರ್ಥಿಕ ಮಟ್ಟವನ್ನು ಸುಧಾರಿಸಲು ಕ್ಷೀರ ಸಂಜೀವಿನಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸೊಸೈಟಿ (KSRLPS) ಮತ್ತು ಕರ್ನಾಟಕ ಹಾಲು ಮಹಾಮಂಡಳಿ (KMF) ಜಂಟಿಯಾಗಿ "ಕ್ಷೀರ ಸಂಜೀವಿನಿ" ಯೋಜನೆಯನ್ನು ಪ್ರಾರಂಭಿಸಿವೆ. ಈ ಯೋಜನೆಯ ಮುಖ್ಯ ಉದ್ದೇಶವು ಗ್ರಾಮೀಣ ಪ್ರದೇಶದ ಬಡ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಮತ್ತು ಹೈನುಗಾರಿಕೆಯನ್ನು ಅವರ ಜೀವನೋಪಾಯದ ಮೂಲವನ್ನಾಗಿ ಪ್ರೋತ್ಸಾಹಿಸುವುದು. ಈ ಹಿನ್ನೆಲೆಯಲ್ಲಿ ಏನಿದು ಕ್ಷೀರ ಸಂಜೀವಿನಿ ಯೋಜನೆ? ಇದರಿಂದ ರೈತರಿಗೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.

ಏನಿದು ಕ್ಷೀರ ಸಂಜೀವಿನಿ ಯೋಜನೆ?

ಕ್ಷೀರ ಸಂಜೀವಿನಿ ಯೋಜನೆಯು ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಹಾಲು ಒಕ್ಕೂಟದ ಯೋಜನೆಯಾಗಿದ್ದು, ಮಹಿಳಾ ಹೈನು ಸಹಕಾರಿ ಸಂಘಗಳನ್ನು ಉತ್ತೇಜಿಸುವ ಮೂಲಕ ಹಾಗೂ ಹೈನುಗಾರಿಕೆಯ ಮೂಲಕ ಬಡ ಗ್ರಾಮೀಣ ಮಹಿಳೆಯರ ಸಬಲೀಕರಣದ ಗುರಿಯನ್ನು ಹೊಂದಿದೆ. ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ ಸಹಯೋಗದೊಂದಿಗೆ ಪ್ರಾರಂಭಿಸಲಾದ ಈ ಉಪಕ್ರಮವು ಹೈನುಗಾರಿಕೆಯಲ್ಲಿ ತೊಡಗಿರುವ ಮಹಿಳೆಯರಿಗೆ ತರಬೇತಿ, ಆರ್ಥಿಕ ಬೆಂಬಲ ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತದೆ. ಈ ಮೂಲಕ ಅವರ ಆದಾಯ ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುತ್ತದೆ. ಮೊದಲ ಹಂತದ ಯೋಜನೆ 2014ರ ಏಪ್ರಿಲ್‌ನಲ್ಲಿ ಪ್ರಾರಂಭವಾಯಿತು. ಪ್ರಸ್ತುತ ಕ್ಷೀರ ಸಂಜೀವಿನಿ ಯೋಜನೆಯನ್ನು 3ನೇ ಹಂತದಲ್ಲಿ ಜಾರಿಗೊಳಿಸಲಾಗುತ್ತಿದೆ.

ಯೋಜನೆಯ ಉದ್ದೇಶ ಮತ್ತು ಗುರಿಗಳು

ಕ್ಷೀರ ಸಂಜೀವಿನಿ ಯೋಜನೆಯ ಪ್ರಮುಖ ಗುರಿ ಸಮಾಜದ ಹಿಂದುಳಿದ ವರ್ಗದ ಮಹಿಳೆಯರಿಗೆ, ಅಂದರೆ ಹಿಂದುಳಿದ ಜಾತಿಗಳು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿಗಳು/ಪರಿಶಿಷ್ಟ ಪಂಗಡಗಳು, ಬಿಪಿಎಲ್ ಕುಟುಂಬಗಳು ಮತ್ತು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಆದಾಯದ ಮೂಲವನ್ನು ಒದಗಿಸುವುದು. ಈ ಯೋಜನೆಯ ಮೂಲಕ ಸುಮಾರು 10,000 ಮಹಿಳೆಯರಿಗೆ ಸಹಾಯ ಮಾಡಲು ಉದ್ದೇಶಿಸಲಾಗಿದೆ. ಕ್ಷೀರ ಸಂಜೀವಿನಿ ಯೋಜನೆಯನ್ನು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿದ್ದು, ಬೇಡಿಕೆಗೆ ತಕ್ಕಂತೆ ಯೋಜನೆಯ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತಿದೆ.

ಯೋಜನೆಯ ಮುಖ್ಯ ಪ್ರಯೋಜನಗಳು

  • ಮಹಿಳಾ ಸಬಲೀಕರಣ: ಯೋಜನೆಯು ಗ್ರಾಮೀಣ ಮಹಿಳೆಯರಿಗೆ ಸುಸ್ಥಿರ ಆದಾಯದ ಮೂಲವನ್ನು ಒದಗಿಸುವ ಮೂಲಕ ಅವರ ಸಬಲೀಕರಣಕ್ಕೆ ಸಹಾಯ ಮಾಡುತ್ತದೆ.
  • ಸಹಕಾರಿ ಸಂಘಗಳ ಸ್ಥಾಪನೆ: 250 ಮಹಿಳಾ ಡೈರಿ ಸಹಕಾರಿ ಸಂಘಗಳ ಸ್ಥಾಪನೆಗೆ ಇದು ಸಹಾಯ ಮಾಡಿದೆ.
  • ರಾಸು ಖರೀದಿಗೆ ನೆರವು: ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವ ಉದ್ದೇಶದಿಂದ ರಾಸುಗಳನ್ನು ಖರೀದಿ ಮಾಡಲು ಬಡ್ಡಿ ರಹಿತವಾಗಿ 46 ಸಾವಿರ ಸಾಲವನ್ನು ನೀಡಲಾಗುತ್ತಿದೆ.
  • ಆದಾಯ ಹೆಚ್ಚಳ: ಯೋಜನೆಯಲ್ಲಿ ಭಾಗವಹಿಸಿದ ಮಹಿಳೆಯರ ಮಾಸಿಕ ನಿವ್ವಳ ಆದಾಯದಲ್ಲಿ 3,000 ರೂ. ರಿಂದ 3,500 ರೂ. ವರೆಗೆ ಹೆಚ್ಚಳವಾಗುವ ಗುರಿಯನ್ನು ಹೊಂದಿದೆ.
  • ಉದ್ಯೋಗ ಸೃಷ್ಟಿ: ಯೋಜನೆಯು ಗ್ರಾಮೀಣ ಮಹಿಳೆಯರಿಗೆ ನೇರ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
  • ಹಣಕಾಸು ನೆರವು: ಫಲಾನುಭವಿಗಳಿಗೆ ಬಡ್ಡಿ-ರಹಿತ ಸಾಲ ಮತ್ತು ನಿರ್ವಹಣಾ ವೆಚ್ಚಕ್ಕಾಗಿ ಅನುದಾನ ದೊರೆಯುತ್ತದೆ.
  • ತರಬೇತಿ ಮತ್ತು ಸಂಪನ್ಮೂಲಗಳು: ಜಾನುವಾರು ಸಾಕಣೆ, ನಿರ್ವಹಣೆ ಮತ್ತು ಪಶು ಆಹಾರದ ಬಗ್ಗೆ ತರಬೇತಿ ನೀಡಲಾಗುತ್ತದೆ.
  • ಪ್ರಾಣಿಗಳ ಆರೋಗ್ಯ ರಕ್ಷಣೆ ಮತ್ತು ವಿಮೆ: ಇದು ಜಾನುವಾರುಗಳ ಆರೋಗ್ಯ ರಕ್ಷಣೆ ಮತ್ತು ವಿಮೆಯನ್ನು ಒದಗಿಸುತ್ತದೆ.

ಯೋಜನೆಯ ರಚನೆ ಮತ್ತು ಅನುಷ್ಠಾನ

ಈ ಯೋಜನೆಯನ್ನು ಒಟ್ಟು 250 ಮಹಿಳಾ ಡೈರಿ ಸಹಕಾರಿ ಸಂಘಗಳ ಮೂಲಕ ಜಾರಿಗೊಳಿಸಲಾಗುತ್ತದೆ. ಪ್ರತಿ ಸಂಘದಿಂದ 40 ಟಾರ್ಗೆಟ್ ಗುಂಪುಗಳ ಸದಸ್ಯರನ್ನು ಗುರುತಿಸಲಾಗುತ್ತದೆ. ಈ ಮೂಲಕ ಒಟ್ಟು 10,000 ಮಹಿಳೆಯರಿಗೆ (250 x 40 = 10,000) ನಿಶ್ಚಿತ ಜೀವನೋಪಾಯವನ್ನು ಒದಗಿಸುವ ಗುರಿ ಹೊಂದಿದೆ. ಈ ಯೋಜನೆಗೆ KSRLPS (ಸಂಜೀವಿನಿ) ಬಹುಪಾಲು ಹಣವನ್ನು ಒದಗಿಸಿದ್ದು, ಉಳಿದ ಮೊತ್ತವನ್ನು KMF ನೀಡಿದೆ.

ಅರ್ಹತಾ ಮಾನದಂಡಗಳು

ಯೋಜನೆಯ ಪ್ರಯೋಜನ ಪಡೆಯಲು ಬಯಸುವ ಮಹಿಳೆಯರು ಈ ಕೆಳಗಿನ ಮಾನದಂಡಗಳನ್ನು ಪೂರೈಸಬೇಕು:

  • ಯೋಜನೆಯ ಫಲಾನುಭವಿಗಳು ಮಹಿಳೆಯಾಗಿರಬೇಕು.
  • ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸೇರಿದವರಾಗಿರಬೇಕು.
  • ಕೆಎಂಎಫ್ (KMF) ಈ ಸಂಘಗಳ ಸದಸ್ಯರ ಸರ್ವೇಕ್ಷಣೆಯ ಮೂಲಕ ಅರ್ಹ ಫಲಾನುಭವಿಗಳನ್ನು ಗುರುತಿಸುತ್ತದೆ.

 

ಇತರೆ ಪೂರಕ ಯೋಜನೆಗಳು

  • ಕ್ಷೀರ ಸಂಜೀವಿನಿ ಯೋಜನೆಯು ಮಹಿಳಾ ಡೈರಿ ಸಹಕಾರಿ ಸಂಘಗಳ ಸಾಮರ್ಥ್ಯ ಹೆಚ್ಚಿಸುವತ್ತ ಗಮನಹರಿಸಿದರೆ, ಕರ್ನಾಟಕದಲ್ಲಿ ಹಾಲು ಉತ್ಪಾದಕರಿಗೆ ನೇರ ಆರ್ಥಿಕ ನೆರವು ನೀಡುವ ಇತರ ಕೆಲವು ಯೋಜನೆಗಳೂ ಇವೆ:
  • ಹಾಲಿಗೆ ಪ್ರೋತ್ಸಾಹ ಧನ: ಹಾಲು ಉತ್ಪಾದಕರು ಸಹಕಾರಿ ಸಂಘಗಳಿಗೆ ಪೂರೈಸುವ ಪ್ರತಿ ಲೀಟರ್ ಹಾಲಿಗೆ ಸರ್ಕಾರವು 5 ರೂ. ಪ್ರೋತ್ಸಾಹ ಧನ ನೀಡುತ್ತದೆ.
  • ಕಿಸಾನ್ ಕ್ರೆಡಿಟ್ ಕಾರ್ಡ್ ಬಡ್ಡಿ ಸಬ್ಸಿಡಿ: ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಮೂಲಕ ಅಲ್ಪಾವಧಿ ಸಾಲ ಪಡೆಯುವ ಡೈರಿ ರೈತರಿಗೆ ಶೇ.2ರಷ್ಟು ಬಡ್ಡಿ ಸಬ್ಸಿಡಿ ಲಭ್ಯವಿದೆ. ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದರೆ ಹೆಚ್ಚುವರಿ ಶೇ.3ರಷ್ಟು ಸಬ್ಸಿಡಿ ದೊರೆಯುತ್ತದೆ.
  • ಕ್ಷೀರಧಾರೆ ಯೋಜನೆ: ಕೆಎಂಎಫ್‌ನಿಂದ ಜಾರಿಯಾಗಿರುವ ಈ ಯೋಜನೆಯು ಡೈರಿ ಫಾರ್ಮಿಂಗ್ ಅನ್ನು ಹೆಚ್ಚು ಲಾಭದಾಯಕವಾಗಿಸಲು ಮತ್ತು ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ವಿವಿಧ ಪ್ರೋತ್ಸಾಹಕಗಳನ್ನು ನೀಡುತ್ತದೆ.

ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಕ್ಷೀರ ಸಂಜೀವಿನಿ ಯೋಜನೆಯು ವ್ಯಕ್ತಿಗಳಿಗೆ ನೇರ ಅರ್ಜಿ ಪ್ರಕ್ರಿಯೆಯನ್ನು ಹೊಂದಿಲ್ಲ. ಇದು ಹೈನುಗಾರಿಕೆಯ ಮೂಲಕ ಮಹಿಳೆಯರ ಸಬಲೀಕರಣದ ಗುರಿಯನ್ನು ಹೊಂದಿರುವ ಯೋಜನೆಯಾಗಿದೆ ಮತ್ತು ಮಹಿಳಾ ಹೈನು ಸಹಕಾರಿ ಸಂಘಗಳನ್ನು ಸ್ಥಾಪಿಸುವ ಮೂಲಕ ಇದರ ಪ್ರಯೋಜನಗಳನ್ನು ತಲುಪಿಸಲಾಗುತ್ತದೆ. ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸಂಘ ಮತ್ತು ಕರ್ನಾಟಕ ಹಾಲು ಒಕ್ಕೂಟ ಅನುಷ್ಠಾನಗೊಳಿಸುವ ಸಂಸ್ಥೆಗಳಾಗಿವೆ.

]]>
Wed, 07 Jan 2026 21:45:45 +0530 shivuagrico
Rabi crop survey app 2025&ಹಿಂಗಾರು ಬೆಳೆ ಸಮೀಕ್ಷೆ ಮಾಡಿ ಬೆಳೆ ವಿಮೆ ಪಡೆಯಿರಿ https://krushirushi.in/Rabi-crop-survey-app-2025 https://krushirushi.in/Rabi-crop-survey-app-2025 2025-26 ನೇ ಸಾಲಿನ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ನನ್ನ ಬೆಳೆ ನನ್ನ ಹಕ್ಕು ಅಡಿಯಲ್ಲಿ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಡಿಸೆಂಬರ್ 1 ರಿಂದ ಆರಂಭಗೊಂಡಿದೆ. ಕಳೆದ ವರ್ಷದಂತೆ ಈ ವರ್ಷವು ಸಹ ಬೆಳೆ ಸಮೀಕ್ಷೆ ಕಾರ್ಯದಲ್ಲಿ ರೈತರು ಸ್ವತಃ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.

ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ದಾಖಲಿಸಲು ಹಿಂಗಾರು ರೈತರ ಬೆಳೆ ಸಮೀಕ್ಷೆ 2025-26 ಎಂಬ ಹೆಸರಿನ ಮೊಬೈಲ್ ಅಪ್ಲಿಕೇಶನ್‍ನ್ನು ಗೂಗಲ್ ಪ್ಲೇ ಸ್ಟೋರ್‍ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.

ಜನೆವರಿ 15, 2026 ರೊಳಗಾಗಿ ಬೆಳೆ ವಿವರಗಳನ್ನು ಆಯಪ್ ಮೂಲಕ ಅಪಲೋಡ್ ಮಾಡಬೇಕು. ಮೊಬೈಲ್ ಆಯಪ್ ಬಳಕೆ ಮಾಡುವ ರೀತಿಯನ್ನು ರೈತರಿಗೆ ತಿಳಿಸಲು ಪ್ರತಿ ಗ್ರಾಮದಲ್ಲಿ ನುರಿತ ಖಾಸಗಿ ನಿವಾಸಿಗಳನ್ನು ನೇಮಿಸಲಾಗಿದೆ. ಮತ್ತು ಖಾಸಗಿ ನಿವಾಸಿಗಳಿಂದ ಬೆಳೆ ಸಮೀಕ್ಷೆ ಕಾರ್ಯವು ಜನೆವರಿ 30, 2026 ರಂದು ಪೂರ್ಣಗೊಳ್ಳಲಿದ್ದು, ಒಂದು ವೇಳೆ ಖಾಸಗಿ ನಿವಾಸಿಗಳು ನಮೂದಿಸಿದ ಬೆಳೆಯು ತಪ್ಪಾಗಿದ್ದಲ್ಲಿ ರೈತರು ಫೆಬ್ರವರಿ 15, 2026 ರೊಳಗಾಗಿ ಆಕ್ಷೇಪಣೆಗಳನ್ನು ಸಲ್ಲಿಸಬೇಕು.

ಹೆಚ್ಚಿನ ತಾಂತ್ರಿಕ ಮಾಹಿತಿಗಾಗಿ ಬೆಳೆ ಸಮೀಕ್ಷೆ ಸಹಾಯವಾಣಿ ಸಂಖ್ಯೆ: 18004253553 ಗೆ ಕರೆಮಾಡಿ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ.ಬೆಳೆ ಸಮೀಕ್ಷೆ ಮಾಹಿತಿಯು ಕನಿಷ್ಠ ಬೆಂಬಲ ಯೋಜನೆಯಡಿ (ಎಮ್‍ಎಸ್‍ಪಿ) ಅರ್ಹ ಫಲಾನುಭವಿಗಳನ್ನು ಗುರುತಿಸಲು, ಬೆಳೆ ವಿಮಾ ಯೋಜನೆಯಡಿ ಬೆಳೆ ವಿವರ ಪರಿಶೀಲಿಸಲು, ಬೆಳೆ ಹಾನಿ ಪರಿಹಾರ ವಿತರಿಸಲು, ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು, ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಮತ್ತು ಇತರ ಮಾನದಂಡಗಳಿಗೆ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ನಿಖರವಾಗಿ ತಾವೇ ಸಮೀಕ್ಷೆ ಮಾಡಲು ಕೃಷಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Bele samikshe status-ಬೆಳೆ ಸಮಿಕ್ಷೆ ಸರಿಯಾಗಿ ಆದ ಬೆಳೆಗಳಿಗೆ ಮಾತ್ರ ಬೆಳೆವಿಮೆ ಬೆಳೆಹಾನಿ ಹಣ,ನಿಮ್ಮ ಬೆಳೆ ಸಮಿಕ್ಷೆ ಸರಿಯಾಗಿ ಆಗಿದೆಯಾ ಚೆಕ್ ಮಾಡಿಕೊಳ್ಳಿ

ಬೆಳೆ ಸಮೀಕ್ಷೆ(Bele samikshe) ಮೂಲಕ ಸಂಗ್ರಹಿಸಲಾದ ಬೆಳೆ
ಮಾಹಿತಿ ಕುರಿತು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ರೈತರು ಬೆಳೆ ದರ್ಶಕ ಮೊಬೈಲ್ ಆ್ಯಪ್(Bele darshaka App)ಅಥವಾ ಬೆಳೆ ಸಮೀಕ್ಷೆ ತಂತ್ರಾಂಶದ(Crop survey portal) ಮೂಲಕ ಆಕ್ಷೇಪಣೆ ಸಲ್ಲಿಸಬಹುದು. 

ಬೆಳೆ ಸಮೀಕ್ಷೆ ದತ್ತಾಂಶವನ್ನು ಬೆಳೆವಿಮೆ(Bele vime), ಬೆಂಬಲ ಬೆಲೆ ಯೋಜನೆಯಡಿ(MSP) ಬೆಳೆ ಮಾರಾಟ ಮಾಡಲು, ಬೆಳೆ ನಷ್ಟ ಪರಿಹಾರ(bele hani) ಹಾಗೂ ಇತರ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬಳಕೆ ಮಾಡಲಾಗುವುದು. ಆದ್ದರಿಂದ ರೈತರು ತಾವು ಬೆಳೆದ ಬೆಳೆ ಹಾಗೂ ಬೆಳೆ ಸಮೀಕ್ಷೆಯಲ್ಲಿ (crop survey)ದಾಖಲಾದ ಬೆಳೆಯು ಒಂದೇ ಇರುವ ಕುರಿತು ಬೆಳೆ ದರ್ಶಕ ಮೊಬೈಲ್ ಆ್ಯಪ್ ಮೂಲಕ ಖಾತ್ರಿಪಡಿಸಿಕೊಳ್ಳಬೇಕು. ಒಂದು ವೇಳೆ ಭಿನ್ನವಾಗಿದ್ದಲ್ಲಿ, ಆಕ್ಷೇಪಣೆ ಸಲ್ಲಿಸಲು ಅವಕಾಶವಿರುತ್ತದೆ. ನಂತರದ ಆಕ್ಷೇಪಣೆ ಸ್ವೀಕರಿಸಲಾಗುವುದಿಲ್ಲ.

ನಿಮ್ಮ ಸ್ಟೇಟಸ್ ಹೀಗೆ ಚೆಕ್ ಮಾಡಿ

ಮೊದಲು ಗೂಗಲ್ ಪ್ಲೇ ಸ್ಟೋರ್ ಮೂಲಕ ಅಥವಾ https://play.google.com/store/apps/details?id=com.crop.offcskharif_2021  ಲಿಂಕ್ ಮೇಲೆ ಕ್ಲಿಕ್ ಮಾಡಿ bele Darshaka application ಇನ್ಸ್ ಸ್ಟಾಲ್ ಮಾಡಿಕೊಳ್ಳಬಹುದು. 

ನಂತರ ರೈತ select ಮಾಡಿ

 ನಂತರ ವರ್ಷ,ಋುತು, ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿ.

ನಂತರ ಸರ್ವೇ ನಂಬರ್ ಹಾಕಿ,ಹಿಸ್ಸಾಆಯ್ಕೆ ಮಾಡಿ,ಸಮೀಕ್ಷೆಯ  ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡಿ

ನಂತರ ಬೆಳೆವಿವರ ವೀಕ್ಷಿಸಿ ಮೇಲೆ ಕ್ಲಿಕ್ ಮಾಡಿ

ನಂತರ photo ಮೇಲೆ ಕ್ಲಿಕ್ ಮಾಡಿದರೆ ನೀವು ಬೆಳೆದ ಬೆಳೆ ಹಾಗೂ ಫೋಟೊ ಅಪ್ಲೊಡ್ ಸರಿಯಾಗಿರುವುದನ್ನು ಪರಿಕ್ಷೀಸಿ.

ಬೆಳೆ ಸಮಿಕ್ಷೆ ಸರಿಯಾಗಿರದಿದ್ದರೆ,ಮತ್ತೆ ಬೆಳೆ ಸಮಿಕ್ಷೆ ಮಾಡಿ ಸರಿಪಡಿಸಲು ಅವಕಾಶವಿರುತ್ತದೆ.

ಏನಿದು ಬೆಳೆ ದರ್ಶಕ ಆ್ಯಪ್?

ಈ ಅಪ್ಲಿಕೇಶನ್ ಮಾಡಿದ ಉದ್ದೇಶ ಬೆಳೆ ಸಮೀಕ್ಷೆಯನ್ನು (Crop survey)ನೋಡಲು.. ಇದರಲ್ಲಿ ನೀವು ಅಪ್‌ಲೋಡ್ ಮಾಡಿದ ಚಿತ್ರಗಳನ್ನು ಮತ್ತು ಸಮೀಕ್ಷೆ ಮಾಡಿದ ಸರ್ವೇಯರ್ ವಿವರಗಳನ್ನು ನೋಡಬಹುದು.

ತಮ್ಮ ಮೊಬೈಲ್ ಮೂಲಕ ಬೆಳೆಗಳ ಸಮೀಕ್ಷೆ(Bele samikshe) ಮಾಡಬಹುದು. ಅಥವಾ ನೆರೆಯ ಖಾಸಗಿ ವ್ಯಕ್ತಿಗಳ (Private resident) ಮೊಬೈಲ್ ಮೂಲಕ ಜಮೀನುಗಳ ಸಮೀಕ್ಷೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ನಿಮ್ಮ ಜಮೀನಿನ ಸರ್ವೆ ನಂಬರ್(Survey number) ಮತ್ತು ಜಮೀನಿನ ಫೊಟೋ ಅಪ್ಲೋಡ್ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಮೊಬೈಲ್ ನಲ್ಲಿ Bele darshak app ಮೂಲಕ ಕ್ಷಣಾರ್ಧದಲ್ಲಿ  ನೋಡಬಹುದು. ಒಂದು ವೇಳೆ ತಪ್ಪಾಗಿದ್ದಲ್ಲಿ ಆಕ್ಷೇಪಣೆ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬಹುದು. 

ಬೆಳೆ ದರ್ಶಕ್ ಆ್ಯಪ್(bele darshaka app) ಇನ್ಸ್ ಸ್ಟಾಲ್ ಮಾಡಿಕೊಂಡ ನಂತರ ವರ್ಷ, ಋತು, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ಇನ್ನಿತರ ಮಾಹಿತಿ ನಮೂದಿಸಬೇಕು. ಬೆಳೆ ದರ್ಶಕ್ ಆ್ಯಪ್(Bele darshaka application) ಮೂಲಕ ಜಮೀನಿನಲ್ಲಿ ಬೆಳೆ ಸಮೀಕ್ಷೆ (Bele samikshe)ಪ್ರಕಾರ ದಾಖಲಾಗಿರುವ ಬೆಳೆ ವಿವರಗಳು ಮತ್ತು ವಿಸ್ತೀರ್ಣದ ಮಾಹಿತಿ ಪಡೆಯಬಹುದು. ಬೆಳೆ ಸಮೀಕ್ಷೆ (Crop survey)ಸಮಯದಲ್ಲಿ ತೆಗೆಯಲಾದ ಜಿಪಿಎಸ್ ಆಧಾರಿತ (GPS Photo)ಛಾಯಾಚಿತ್ರಗಳನ್ನು ವೀಕ್ಷಿಸಬಹುದು. ಅಲ್ಲದೆ ರೈತರ ಜಮೀನಿನ ಬೆಳೆ ಸಮೀಕ್ಷೆ ಮಾಡಿದವರ ಹೆಸರು ಮತ್ತು ಮೊಬೈಲ್ ಸಂಖ್ಯೆಯ ವಿವರ, (Mobile number)ರೈತರು ಬೆಳೆ ಸಮೀಕ್ಷೆ ಪ್ರಕಾರ ದಾಖಲಿಸಿದ ಮಾಹಿತಿಯನ್ನು ನೋಡಬಹುದು.

 ಒಂದು ವೇಳೆ ಮಾಹಿತಿ ತಪ್ಪಾಗಿದ್ದರೆ ಆಕ್ಷೇಪಣೆ ಸಲ್ಲಿಸಬಹುದು.ಮೇಲ್ವಿಚಾರಕರು ಸೂಕ್ತ ಬೆಳೆಗಳನ್ನು ದಾಖಲಿಸಿ ರೈತರ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸುತ್ತಾರೆ. ಇನ್ನೇಕೆ ತಡ ಒಮ್ಮೆ ನಿಮ್ಮ ಬೆಳೆ ಸಮೀಕ್ಷೆಯಲ್ಲಿ ಎಲ್ಲಾ ಸರ್ವೆ ನಂಬರ್, ಮಾಹಿತಿ ಹಾಗೂ ಫೋಟೋ ಸರಿಯಾಗಿ ಅಪ್ಲೋಡ್ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಬೇಟಿ ಕೊಡಿ

]]>
Wed, 07 Jan 2026 14:54:10 +0530 shivuagrico
Post office franchise&ಅಂಚೆ ಇಲಾಖೆ ಜೊತೆಗೂಡಿ ಸ್ವಂತ ಉದ್ಯಮ ಆರಂಭಿಸಿ, ತಿಂಗಳಿಗೆ 80,000 ರೂ.ವರೆಗೆ ಗಳಿಸಿ! https://krushirushi.in/Post-office-franchise-2376 https://krushirushi.in/Post-office-franchise-2376 Post office franchise-ಅಂಚೆ ಇಲಾಖೆ ಜೊತೆಗೂಡಿ ಸ್ವಂತ ಉದ್ಯಮ ಆರಂಭಿಸಿ, ತಿಂಗಳಿಗೆ 80,000 ರೂ.ವರೆಗೆ ಗಳಿಸಿ!

ಭಾರತೀಯ ಅಂಚೆ ಇಲಾಖೆಯು 'ಹೊಸ ಫ್ರಾಂಚೈಸಿ ಯೋಜನೆ 2.0' ಅನ್ನು ಪರಿಚಯಿಸಿದೆ. ಜನವರಿ 1, 2026 ರಿಂದ ಜಾರಿಗೆ ಬರುವ ಈ ಯೋಜನೆಯು ಯುವಕರಿಗೆ ಸ್ವಯಂ ಉದ್ಯೋಗದ ಅವಕಾಶ ನೀಡುತ್ತದೆ. ಕಡಿಮೆ ಹೂಡಿಕೆಯಲ್ಲಿ ಅಂಚೆ ಸೇವೆಗಳನ್ನು ಒದಗಿಸಿ ಆಕರ್ಷಕ ಕಮಿಷನ್ ಗಳಿಸಬಹುದು. ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲ್ ಸೇವೆಗಳಿಗೆ ಒತ್ತು ನೀಡಲಾಗಿದೆ. ಅರ್ಹತೆ, ಹೂಡಿಕೆ, ಕಮಿಷನ್ ಮತ್ತು ಅರ್ಜಿ ಸಲ್ಲಿಕೆ ವಿವರಗಳನ್ನು ತಿಳಿಯಿರಿ.

ನೀವು ಅಂಚೆ ಇಲಾಖೆಯ ಫ್ರಾಂಚೈಸಿಯನ್ನು ಮುನ್ನಡೆಸಲು ಬಯಸುತ್ತಿದ್ದೀರಾ? ಹಾಗಿದ್ದರೆ, ನಿಮಗೆ ಇಲ್ಲಿದೆ ಎಂದು ಸುವರ್ಣಾವಕಾಶ. ಭಾರತೀಯ ಅಂಚೆ ಇಲಾಖೆಯು ದೇಶದಾದ್ಯಂತ ತನ್ನ ಸೇವೆಗಳನ್ನು ವಿಸ್ತರಿಸಲು ಮತ್ತು ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗದ ಅವಕಾಶವನ್ನು ನೀಡಲು "ಹೊಸ ಫ್ರಾಂಚೈಸಿ ಯೋಜನೆ 2.0" ಅನ್ನು ಪರಿಚಯಿಸಿದೆ. ಈ ಯೋಜನೆಯು ಜನವರಿ 01, 2026 ರಿಂದ ಜಾರಿಗೆ ಬಂದಿದ್ದು, ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲ್ ಸೇವೆಗಳ ಮೇಲೆ ಹೆಚ್ಚಿನ ಗಮನ ಹರಿಸಿದೆ. ಈ ಹಿನ್ನೆಲೆಯಲ್ಲಿ ಫ್ರಾಂಚೈಸಿಯನ್ನು ಪಡೆಯುವುದು ಹೇಗೆ? ಪ್ರಯೋಜನಗಳೇನು? ಅರ್ಜಿ ಸಲ್ಲಿಕೆ ಹೇಗೆ ಇತ್ಯಾದಿ ವಿವರಗಳನ್ನು ತಿಳಿಯೋಣ.

ಹೊಸ ಫ್ರಾಂಚೈಸಿ ಯೋಜನೆ 2.0 ಎಂದರೇನು?

ಭಾರತೀಯ ಅಂಚೆ ಇಲಾಖೆಯ 'ಹೊಸ ಫ್ರಾಂಚೈಸಿ ಯೋಜನೆ 2.0' ಒಂದು ಮಹತ್ವದ ಉಪಕ್ರಮವಾಗಿದ್ದು, ಇದು 'ಆತ್ಮನಿರ್ಭರ ಭಾರತ' ಮತ್ತು 'ಡಿಜಿಟಲ್ ಇಂಡಿಯಾ' ಅಭಿಯಾನದ ಅಡಿಯಲ್ಲಿ ಅಂಚೆ ಸೇವೆಗಳಿಲ್ಲದ ಪ್ರದೇಶಗಳಲ್ಲಿ ಜನಸಾಮಾನ್ಯರಿಗೆ ಸ್ವಯಂ ಉದ್ಯೋಗದ ಅವಕಾಶಗಳನ್ನು ಕಲ್ಪಿಸುತ್ತದೆ. ಅತ್ಯಂತ ಕಡಿಮೆ ಹೂಡಿಕೆಯೊಂದಿಗೆ ಸಣ್ಣ ಉದ್ಯಮಿಗಳು ಅಥವಾ ವ್ಯಕ್ತಿಗಳು ಅಂಚೆ ಚೀಟಿಗಳ ಮಾರಾಟ, ಸ್ಪೀಡ್ ಪೋಸ್ಟ್ ಬುಕಿಂಗ್, ಇ-ಕಾಮರ್ಸ್ ಪಾರ್ಸೆಲ್ ಮತ್ತು ಹಣಕಾಸು ಸೇವೆಗಳನ್ನು ಒದಗಿಸುವ ಮೂಲಕ ಆಕರ್ಷಕ ಕಮಿಷನ್ ಗಳಿಸಬಹುದು. ಈ ಯೋಜನೆಯು ಎಪಿಟಿ 2.0 ಎಂಬ ಸುಧಾರಿತ ತಾಂತ್ರಿಕ ವೇದಿಕೆಯನ್ನು ಬಳಸಿಕೊಂಡು ಡಿಜಿಟಲ್ ಪಾವತಿ, ರಿಯಲ್-ಟೈಮ್ ಟ್ರ್ಯಾಕಿಂಗ್ ಮತ್ತು ಸ್ಮಾರ್ಟ್ ಲಾಕರ್‌ಗಳಂತಹ ಆಧುನಿಕ ಸೌಲಭ್ಯಗಳನ್ನು ನೀಡುತ್ತದಲ್ಲದೆ, ಸರ್ಕಾರದ ಮಾನ್ಯತೆಯೊಂದಿಗೆ ಉದ್ಯೋಗಾಕಾಂಕ್ಷಿಗಳಿಗೆ ಸುಸ್ಥಿರ ಆದಾಯವನ್ನು ಖಚಿತಪಡಿಸುತ್ತದೆ.

ಅಂಚೆ ಕಚೇರಿ ಫ್ರಾಂಚೈಸಿ ಯೋಜನೆ ಪ್ರಮುಖ ಅಂಶಗಳು

  • ಈ ಹೊಸ ಯೋಜನೆಯನ್ನು ಭಾರತ ಸರ್ಕಾರದ 'ಡಿಜಿಟಲ್ ಇಂಡಿಯಾ' ಮತ್ತು 'ಸ್ಟಾರ್ಟ್ಅಪ್ ಇಂಡಿಯಾ' ಗುರಿಗಳಿಗೆ ಪೂರಕವಾಗುವಂತೆ ಅತ್ಯಂತ ಸುಧಾರಿತವಾಗಿ ವಿನ್ಯಾಸಗೊಳಿಸಲಾಗಿದೆ.
  • ಸೇವೆಯ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದಿಂದ, ಈಗ ಹೊಸ ನಗರ ಪ್ರದೇಶಗಳು, ದೊಡ್ಡ ಟೌನ್‌ಶಿಪ್‌ಗಳು, ಕೈಗಾರಿಕಾ ವಲಯಗಳು ಮತ್ತು ಶೈಕ್ಷಣಿಕ ಕ್ಯಾಂಪಸ್‌ಗಳಲ್ಲಿಯೂ ಫ್ರಾಂಚೈಸಿ ಆರಂಭಿಸಲು ಅವಕಾಶ ನೀಡಲಾಗಿದೆ.
  • ಎಪಿಟಿ 2.0 (APT 2.0) ಎಂಬ ನವೀನ ತಾಂತ್ರಿಕ ವೇದಿಕೆಯ ಮೂಲಕ ಆನ್‌ಲೈನ್ ಪಾರ್ಸೆಲ್ ಬುಕಿಂಗ್ ಮತ್ತು ಸ್ಮಾರ್ಟ್ ಲಾಕರ್‌ನಂತಹ ಆಧುನಿಕ ಡಿಜಿಟಲ್ ಸೇವೆಗಳನ್ನು ಜನರಿಗೆ ಒದಗಿಸಬಹುದು.
  • ಸಾಂಪ್ರದಾಯಿಕ ಅಂಚೆ ಸೇವೆಗಳ ಜೊತೆಗೆ ಇ-ಕಾಮರ್ಸ್ ಡೆಲಿವರಿ ಮತ್ತು ಇತರ ಆಧುನಿಕ ಸೇವೆಗಳನ್ನು ಸೇರ್ಪಡೆಗೊಳಿಸಿರುವುದರಿಂದ, ಫ್ರಾಂಚೈಸಿ ಮಾಲೀಕರು ಹೆಚ್ಚಿನ ಆದಾಯವನ್ನು ಗಳಿಸಲು ಉತ್ತಮ ಅವಕಾಶವಿದೆ.

ಪ್ರಯೋಜನಗಳೇನು?

  • ಭಾರತೀಯ ಅಂಚೆ ಇಲಾಖೆಯಂತಹ ಸರ್ಕಾರಿ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದುವುದರಿಂದ ಮಾರುಕಟ್ಟೆ ವೆಚ್ಚ ಕಡಿಮೆಯಾಗುತ್ತದೆ ಮತ್ತು ಗ್ರಾಹಕರಲ್ಲಿ ತಕ್ಷಣದ ವಿಶ್ವಾಸ ಮೂಡುತ್ತದೆ.
  • ಅಂಚೆ ಚೀಟಿಗಳು, ಸ್ಪೀಡ್ ಪೋಸ್ಟ್, ಪಾರ್ಸೆಲ್, ಮನಿ ಆರ್ಡರ್ ಮತ್ತು ಬಿಲ್ ಪಾವತಿಗಳಂತಹ ವಿವಿಧ ಸೇವೆಗಳ ಮೂಲಕ ಕಮಿಷನ್ ಗಳಿಸಬಹುದು; ಅಲ್ಲದೆ ಉತ್ತಮ ಕಾರ್ಯಕ್ಷಮತೆಗೆ ವಿಶೇಷ ಪ್ರೋತ್ಸಾಹಧನವೂ ದೊರೆಯುತ್ತದೆ.
  • ಅಂಚೆ ಇಲಾಖೆಯು ಫ್ರಾಂಚೈಸಿಗಳಿಗೆ ಪ್ರಮಾಣಿತ ತರಬೇತಿ, ಕಾರ್ಯವಿಧಾನದ ಮಾರ್ಗಸೂಚಿಗಳು ಮತ್ತು ನಿರಂತರ ಇಲಾಖಾ ಬೆಂಬಲವನ್ನು ಒದಗಿಸುತ್ತದೆ.
  • ಈ ಯೋಜನೆಯು ಯುವಕರು ಮತ್ತು ಉದ್ಯಮಿಗಳಿಗೆ ಸ್ವಾವಲಂಬಿಯಾಗಲು ಮತ್ತು ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಉತ್ತಮ ವೇದಿಕೆಯಾಗಿದೆ.
  • ಫ್ರಾಂಚೈಸಿಗಳು ಕೇವಲ ಅಂಚೆ ಸೇವೆಗಳಿಗೆ ಸೀಮಿತವಾಗದೆ, ಹಣಕಾಸು ಸೇವೆಗಳು ಮತ್ತು ಇ-ಕಾಮರ್ಸ್ ಲಾಜಿಸ್ಟಿಕ್ಸ್ ಸೇರಿದಂತೆ ವ್ಯಾಪಕ ಶ್ರೇಣಿಯ ಸೇವೆಗಳನ್ನು ಗ್ರಾಹಕರಿಗೆ ನೀಡಬಹುದು.
  • ಅಂಚೆ ಇಲಾಖೆಯ ಸೇವೆಗಳು ಅತ್ಯಗತ್ಯ ಸೇವೆಗಳಾಗಿರುವುದರಿಂದ, ವರ್ಷವಿಡೀ ಗ್ರಾಹಕರ ಸಂಖ್ಯೆ ಸ್ಥಿರವಾಗಿರುತ್ತದೆ ಮತ್ತು ವ್ಯವಹಾರದಲ್ಲಿ ನಿರಂತರತೆ ಇರುತ್ತದೆ.

ಅರ್ಹತಾ ಮಾನದಂಡಗಳು ಏನು?

  • ಈ ಫ್ರಾಂಚೈಸಿ ಪಡೆಯಲು ಅರ್ಜಿದಾರರು ಕನಿಷ್ಠ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಅವರಿಗೆ ಕಂಪ್ಯೂಟರ್ ಜ್ಞಾನ ಮತ್ತು ಸ್ಥಳೀಯ ಭಾಷೆಯ ಮೇಲೆ ಉತ್ತಮ ಹಿಡಿತವಿರಬೇಕು.
  • ಅರ್ಜಿದಾರರಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು, ಆದರೆ ಈ ಯೋಜನೆಗೆ ಯಾವುದೇ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿಲ್ಲ.
  • ಫ್ರಾಂಚೈಸಿ ನಡೆಸಲು ಜನನಿಬಿಡ ಪ್ರದೇಶಗಳಲ್ಲಿ ಸ್ವಂತ ಅಥವಾ ಬಾಡಿಗೆಗೆ ಪಡೆದ ಸಣ್ಣ ಮಳಿಗೆ ಅಥವಾ ಕಚೇರಿಯನ್ನು ಹೊಂದಿರಬೇಕು; ಇದಕ್ಕಾಗಿ ಸಣ್ಣ ಕಿರಾಣಿ ಅಂಗಡಿ ಅಥವಾ ಟೀ ಅಂಗಡಿ ಮಾಲೀಕರೂ ಸಹ ಅರ್ಜಿ ಸಲ್ಲಿಸಲು ಅವಕಾಶವಿದೆ.
  • ಕಚೇರಿಯಲ್ಲಿ ಕಡ್ಡಾಯವಾಗಿ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್, ಇಂಟರ್ನೆಟ್ ಸಂಪರ್ಕ, ತೂಕದ ಯಂತ್ರ, ಬಾರ್‌ಕೋಡ್ ಸ್ಕ್ಯಾನರ್ ಮತ್ತು ಪ್ರಿಂಟರ್‌ನಂತಹ ಮೂಲಸೌಕರ್ಯಗಳನ್ನು ಹೊಂದಿರಬೇಕು.

ಬಂಡವಾಳ ಹೂಡಿಕೆ ಎಷ್ಟು?

ಈ ಯೋಜನೆಯಡಿ ಫ್ರಾಂಚೈಸಿ ಪಡೆಯಲು ಸ್ಥಳ ಮತ್ತು ಒಪ್ಪಂದದ ಆಧಾರದ ಮೇಲೆ 5,000 ರೂ. ರಿಂದ 10,000 ರೂ. ವರೆಗೆ ಮರುಪಾವತಿಸಲ್ಪಡುವ ಭದ್ರತಾ ಠೇವಣಿಯನ್ನು ಇಡಬೇಕಾಗುತ್ತದೆ. ಪೀಠೋಪಕರಣಗಳು, ಕಂಪ್ಯೂಟರ್ ಮತ್ತು ಇತರ ತಾಂತ್ರಿಕ ಉಪಕರಣಗಳು ಸೇರಿದಂತೆ ಮೂಲಸೌಕರ್ಯ ಸಿದ್ಧಪಡಿಸಲು ಅಂದಾಜು 1 ಲಕ್ಷ ರೂ.ದಿಂದ 1.5 ಲಕ್ಷ ರೂ.ದವರೆಗೆ ಒಟ್ಟು ಹೂಡಿಕೆಯ ಅಗತ್ಯವಿರುತ್ತದೆ. ಫ್ರಾಂಚೈಸಿ ಮಾಲೀಕರು ತಮ್ಮ ಕಾರ್ಯಕ್ಷಮತೆಯ ಆಧಾರದ ಮೇಲೆ ಮಾಸಿಕ 20,000 ರೂ.ದಿಂದ 80,000 ರೂ.ಕ್ಕಿಂತ ಹೆಚ್ಚು ಆದಾಯವನ್ನು ಗಳಿಸಲು ಅವಕಾಶವಿದೆ.

ಎಷ್ಟು ಕಮಿಷನ್ ಸಿಗಲಿದೆ?

  • ಕಮಿಷನ್ ದರಗಳ ಅನ್ವಯ, ಸ್ಪೀಡ್ ಪೋಸ್ಟ್ ಬುಕಿಂಗ್ ಮೇಲೆ ಒಟ್ಟು ಮಾಸಿಕ ವ್ಯವಹಾರದ 7% ರಿಂದ 25% ರಷ್ಟು ಪಾಲನ್ನು ಪಡೆಯಬಹುದು.
  • ಪ್ರತಿಯೊಂದು ನೋಂದಾಯಿತ ಪತ್ರದ ಮೇಲೆ 3.00 ರೂ. ಮತ್ತು 200 ರೂ. ಕ್ಕಿಂತ ಹೆಚ್ಚಿನ ಮೌಲ್ಯದ ಮನಿ ಆರ್ಡರ್‌ಗಳ ಮೇಲೆ 5.00 ರೂ. ರಷ್ಟು ಕಮಿಷನ್ ನಿಗದಿಪಡಿಸಲಾಗಿದೆ.
  • ಅಂಚೆ ಚೀಟಿಗಳು ಮತ್ತು ಸ್ಟೇಷನರಿ ಸಾಮಗ್ರಿಗಳ ಮಾರಾಟದ ಮೇಲೆ ಒಟ್ಟು ಮೊತ್ತದ 5% ರಷ್ಟು ಲಾಭಾಂಶ ದೊರೆಯುತ್ತದೆ.
  • ಎಲ್ಲಕ್ಕಿಂತ ಮುಖ್ಯವಾಗಿ, ಉತ್ತಮ ಪ್ರದರ್ಶನ ನೀಡುವ ಫ್ರಾಂಚೈಸಿಗಳಿಗೆ ಅವರ ಒಟ್ಟು ಗಳಿಕೆಯ ಮೇಲೆ 25% ರಿಂದ 30% ರಷ್ಟು ಹೆಚ್ಚುವರಿ ಪ್ರೋತ್ಸಾಹಧನವನ್ನುನೀಡಲಾಗುತ್ತದೆ.

ನೀಡಬಹುದಾದ ಸೇವೆಗಳು

  • ಸ್ಪೀಡ್ ಪೋಸ್ಟ್ ಮತ್ತು ರಿಜಿಸ್ಟರ್ಡ್ ಪೋಸ್ಟ್ ಬುಕಿಂಗ್.
  • ಅಂಚೆ ಚೀಟಿಗಳು ಮತ್ತು ಲೇಖನ ಸಾಮಗ್ರಿಗಳ ಮಾರಾಟ.
  • ಅಂತಾರಾಷ್ಟ್ರೀಯ ಪಾರ್ಸೆಲ್ ಸೇವೆಗಳು.
  • ಕ್ಯಾಶ್ ಆನ್ ಡೆಲಿವರಿ ಸೌಲಭ್ಯ.
  • ಇ-ಕಾಮರ್ಸ್ ಪಾರ್ಸೆಲ್ ಪಿಕಪ್ ಮತ್ತು ವಿತರಣೆ.
  • ಡಿಜಿಟಲ್ ವ್ಯಾಲೆಟ್ ಪಾವತಿ ಮತ್ತು ರಿಯಲ್-ಟೈಮ್ ಟ್ರ್ಯಾಕಿಂಗ್.

ಅರ್ಜಿ ಸಲ್ಲಿಸುವುದು ಹೇಗೆ?

  • ಈ ಯೋಜನೆಯ ಅರ್ಜಿ ಪ್ರಕ್ರಿಯೆಯು ಪ್ರಮುಖವಾಗಿ ನಿಮ್ಮ ಭಾಗದ ಅಂಚೆ ವಿಭಾಗೀಯ ಹಂತದಲ್ಲಿ ನಡೆಯುತ್ತದೆ.
  • ಮೊದಲಿಗೆ, ನೀವು ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್‌ indiapost.gov.in/ ನಿಂದ 'Form A' ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಅಥವಾ ನಿಮ್ಮ ಹತ್ತಿರದ ಅಂಚೆ ವಿಭಾಗೀಯ ಕಚೇರಿಗೆ ಭೇಟಿ ನೀಡಿ ಫಾರ್ಮ್ ಪಡೆಯಬಹುದು.
  • ಅರ್ಜಿಯೊಂದಿಗೆ ನೀವು ಒಂದು ವಿವರವಾದ ವ್ಯಾಪಾರ ಯೋಜನೆಯನ್ನು ಸಿದ್ಧಪಡಿಸಬೇಕು; ಇದರಲ್ಲಿ ನೀವು ಫ್ರಾಂಚೈಸಿಯನ್ನು ಹೇಗೆ ನಡೆಸುತ್ತೀರಿ ಮತ್ತು ಮಾಸಿಕ ಕನಿಷ್ಠ 50,000 ರೂ. ವಹಿವಾಟಿನ ಗುರಿಯನ್ನು ಹೇಗೆ ತಲುಪುತ್ತೀರಿ ಎಂಬುದನ್ನು ವಿವರಿಸಿರಬೇಕು.
  • ಪೂರ್ಣವಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯ ಜೊತೆಗೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಶೈಕ್ಷಣಿಕ ದಾಖಲೆಗಳು ಮತ್ತು ಮಳಿಗೆಯ ಮಾಲೀಕತ್ವ ಅಥವಾ ಬಾಡಿಗೆ ಒಪ್ಪಂದದ ಪತ್ರಗಳನ್ನು ಲಗತ್ತಿಸಿ ವಿಭಾಗೀಯ ಕಚೇರಿಗೆ ಸಲ್ಲಿಸಬೇಕು.
  • ನೀವು ಅರ್ಜಿ ಸಲ್ಲಿಸಿದ ನಂತರ, ಅಂಚೆ ಇಲಾಖೆಯ ಅಧಿಕಾರಿಗಳು 14 ದಿನಗಳ ಒಳಗಾಗಿ ನಿಮ್ಮ ಮಳಿಗೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ.
  • ನಿಮ್ಮ ಅರ್ಜಿ ಮತ್ತು ಸ್ಥಳ ಪರಿಶೀಲನೆ ಯಶಸ್ವಿಯಾದ ನಂತರ, ನೀವು ಇಲಾಖೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಬೇಕು ಮತ್ತು ನಿಗದಿತ ಭದ್ರತಾ ಠೇವಣಿಯನ್ನು ಪಾವತಿಸಿ ನಿಮ್ಮ ಅಂಚೆ ಸೇವಾ ಕೇಂದ್ರವನ್ನು ಪ್ರಾರಂಭಿಸಬಹುದು.

(ನಿರಾಮಯ ಆರೋಗ್ಯ ವಿಮಾ ಯೋಜನೆ)

ಅಗತ್ಯವಿರುವ ದಾಖಲೆಗಳೇನು?

  • ವಯಸ್ಸಿನ ಪುರಾವೆ: ಅರ್ಜಿದಾರರು ತಮ್ಮ ವಯಸ್ಸನ್ನು ದೃಢೀಕರಿಸಲು ಜನ್ಮ ಪ್ರಮಾಣಪತ್ರ ಅಥವಾ ಶಾಲಾ ವರ್ಗಾವಣೆ ಪ್ರಮಾಣಪತ್ರವನ್ನು ಸಲ್ಲಿಸಬೇಕು.
  • ಗುರುತಿನ ಚೀಟಿ: ಅರ್ಜಿದಾರರ ಅಧಿಕೃತ ಗುರುತಿಗಾಗಿ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ನೀಡುವುದು ಕಡ್ಡಾಯವಾಗಿದೆ.
  • ವಿಳಾಸದ ಪುರಾವೆ: ಅರ್ಜಿದಾರರ ವೈಯಕ್ತಿಕ ವಾಸಸ್ಥಳದ ವಿಳಾಸ ಮತ್ತು ಫ್ರಾಂಚೈಸಿ ನಡೆಸಲು ಉದ್ದೇಶಿಸಿರುವ ವ್ಯವಹಾರದ ಸ್ಥಳದ ವಿಳಾಸಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕು.
  • ಶೈಕ್ಷಣಿಕ ಅರ್ಹತೆ: ಅರ್ಜಿದಾರರು ಕನಿಷ್ಠ 10ನೇ ತರಗತಿ ಪಾಸಾಗಿರುವುದಕ್ಕೆ ಪೂರಕವಾಗಿ ಸಂಬಂಧಿಸಿದ ಶೈಕ್ಷಣಿಕ ಅಂಕಪಟ್ಟಿ ಅಥವಾ ಪ್ರಮಾಣಪತ್ರಗಳನ್ನು ಸಲ್ಲಿಸಬೇಕು.
  • ಆಸ್ತಿ ದಾಖಲೆಗಳು: ಫ್ರಾಂಚೈಸಿ ನಡೆಸುವ ಸ್ಥಳವು ಸ್ವಂತದ್ದಾಗಿದ್ದರೆ ಅದರ ಮಾಲೀಕತ್ವದ ಪತ್ರ ಅಥವಾ ಬಾಡಿಗೆಗೆ ಪಡೆದ ಸ್ಥಳವಾಗಿದ್ದರೆ ಅಧಿಕೃತ ಬಾಡಿಗೆ ಒಪ್ಪಂದದ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ.

For more such information, join our WhatsApp Channel- whatsapp.com/channel/0029Va

]]>
Wed, 07 Jan 2026 07:10:18 +0530 shivuagrico
Kuri sakanike&20 ಕುರಿ+1ಟಗರು ಸಾಕಾಣಿಕೆಗೆ 43,750 ರೂಪಾಯಿ ರೈತರ ಖಾತೆಗೆ ನೇರ ಜಮಾ https://krushirushi.in/Kuri-sakanike-2375 https://krushirushi.in/Kuri-sakanike-2375 Kuri sakanike-ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ: ಕುರಿ ಸಾಕಾಣಿಕೆಗೆ 43,750 ರೂಪಾಯಿ ರೈತರ ಖಾತೆಗೆ ನೇರ ಜಮಾ

ಕುರಿ ಸಾಕಾಣಿಕೆ ಈಗ ಲಾಭದಾಯಕ ಉದ್ಯಮವಾಗಿದೆ. ಕುರಿ ಸಾಕಣೆ ಮಾಡುವ ಯುವಕರನ್ನು ಪ್ರೋತ್ಸಾಹಿಸಲು ಕರ್ನಾಟಕ ಸರ್ಕಾರ 'ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ' ಜಾರಿಗೆ ತಂದಿದೆ. ಈ ಯೋಜನೆಯಡಿ 20 ಕುರಿ/ಮೇಕೆ ಮತ್ತು 1 ಟಗರು/ಹೋತದ ಘಟಕ ನೀಡಲಾಗುತ್ತದೆ. ಒಟ್ಟು 1,75,000 ರೂ. ವೆಚ್ಚದಲ್ಲಿ 50% ಸಾಲ, 25% ಸಹಾಯಧನ, 25% ಫಲಾನುಭವಿ ವಂತಿಕೆ ಇರುತ್ತದೆ. ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶ ನೀಡಲು ಇದು ಸಹಕಾರಿ. ಈ ಯೋಜನೆಯ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಿಂದೊಮ್ಮೆ ಒಂದು ಸಮುದಾಯಕ್ಕಷ್ಟೇ ಸೀಮಿತವಾಗಿದ್ದ ಕುರಿ ಸಾಕಾಣಿಕೆಯು ಇಂದು ಒಂದು ವೃತ್ತಿಪರ ಉದ್ಯೋಗವಾಗಿ ಮಾರ್ಪಾಟ್ಟಿದೆ. ಹೆಚ್ಚಿನ ಯುವಕರು ಕುರಿ ಸಾಕಾಣಿಕೆಯತ್ತ ಆಕರ್ಷಿತರಾಗುತ್ತಿದ್ದಾರೆ. ಕರ್ನಾಟಕ ಸರ್ಕಾರವು ರಾಜ್ಯದ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಜೀವನಮಟ್ಟವನ್ನು ಸುಧಾರಿಸಲು ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ' ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಆರ್ಥಿಕವಾಗಿ ಹಿಂದುಳಿದ ಸದಸ್ಯರಿಗೆ ಸುಸ್ಥಿರ ಜೀವನೋಪಾಯವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಏನಿದು ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ?

ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯು ಕರ್ನಾಟಕ ಸರ್ಕಾರದ ಪಶುಸಂಗೋಪನಾ ಇಲಾಖೆಯ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ರಾಜ್ಯದ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಆರ್ಥಿಕವಾಗಿ ಹಿಂದುಳಿದ ಸದಸ್ಯರಿಗೆ ಸುಸ್ಥಿರ ಜೀವನೋಪಾಯವನ್ನು ಕಲ್ಪಿಸುವ ಉದ್ದೇಶ ಹೊಂದಿದೆ. ಈ ಯೋಜನೆಯಡಿ ಪ್ರತಿ ಫಲಾನುಭವಿಗೆ ಒಟ್ಟು 1,75,000 ರೂ.ವೆಚ್ಚದಲ್ಲಿ 20 ಕುರಿ/ಮೇಕೆ ಮತ್ತು 1 ಟಗರು/ಹೋತವನ್ನೊಳಗೊಂಡ (20+1) ಘಟಕವನ್ನು ನೀಡಲಾಗುತ್ತದೆ. ಈ ಮೊತ್ತದಲ್ಲಿ ಶೇ. 50 ರಷ್ಟು ಎನ್.ಸಿ.ಡಿ.ಸಿ ವತಿಯಿಂದ ಸಾಲ, ಶೇ. 25 ರಷ್ಟು ರಾಜ್ಯ ಸರ್ಕಾರದ ಸಹಾಯಧನ ಮತ್ತು ಉಳಿದ ಶೇ. 25 ರಷ್ಟು ಫಲಾನುಭವಿಯ ವಂತಿಕೆಯಾಗಿರುತ್ತದೆ.

 

ಯೋಜನೆಯ ಪ್ರಮುಖ ಅಂಶಗಳು

  • ಆರ್ಥಿಕ ನೆರವು ಮತ್ತು ಘಟಕಗಳ ಸ್ಥಾಪನೆ;ರಾಜ್ಯದ ಕುರಿಗಾಹಿಗಳ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರವು ಹೊಸ ಕುರಿ ಸಾಕಾಣಿಕೆ ಘಟಕಗಳನ್ನು ಸ್ಥಾಪಿಸಲು ಗಣನೀಯ ಪ್ರಮಾಣದ ಹಣಕಾಸಿನ ನೆರವು ನೀಡುತ್ತದೆ. ಈ ಯೋಜನೆಯಡಿ, ಕುರಿಗಾಹಿಗಳು ತಮ್ಮ ಅಸ್ತಿತ್ವದಲ್ಲಿರುವ ಸಾಕಾಣಿಕೆ ಕೇಂದ್ರಗಳನ್ನು ವಿಸ್ತರಿಸಲು ಅಥವಾ ಹೊಸದಾಗಿ 20 ಕುರಿ ಹಾಗೂ 1 ಟಗರು ಒಳಗೊಂಡ ಘಟಕಗಳನ್ನು ಪ್ರಾರಂಭಿಸಲು ಬ್ಯಾಂಕ್‌ಗಳ ಮೂಲಕ ಸಾಲ ಮತ್ತು ಸರ್ಕಾರದ ಮೂಲಕ ಸಬ್ಸಿಡಿ (ಸಹಾಯಧನ) ಪಡೆಯಬಹುದು.
  • ಗ್ರಾಮೀಣ ಸ್ವಯಂ ಉದ್ಯೋಗ ಮತ್ತು ಸ್ವಾವಲಂಬನೆ; ಗ್ರಾಮೀಣ ಭಾಗದ ಯುವಕರು ಮತ್ತು ಸಾಂಪ್ರದಾಯಿಕ ಕುರಿಗಾಹಿ ಕುಟುಂಬಗಳು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುವುದನ್ನು ತಡೆಯುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಕುರಿ ಸಾಕಾಣಿಕೆಯನ್ನು ಲಾಭದಾಯಕ ಉದ್ದಿಮೆಯನ್ನಾಗಿ ಪರಿವರ್ತಿಸುವ ಮೂಲಕ, ಗ್ರಾಮೀಣ ಜನರಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶಗಳನ್ನು ಒದಗಿಸಿ, ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಇದು ಉತ್ತೇಜನ ನೀಡುತ್ತದೆ.
  • ಮಾಂಸ ಮತ್ತು ಉಣ್ಣೆ ಉತ್ಪಾದನೆ ವೃದ್ಧಿ; ರಾಜ್ಯದ ಕೃಷಿ ಆಧಾರಿತ ಆರ್ಥಿಕತೆಯನ್ನು ಬಲಪಡಿಸಲು ಮಾಂಸ ಮತ್ತು ಉಣ್ಣೆಯ ಉತ್ಪಾದನೆಯನ್ನು ಹೆಚ್ಚಿಸುವುದು ಅತ್ಯಗತ್ಯವಾಗಿದೆ. ವೈಜ್ಞಾನಿಕ ಹೈನುಗಾರಿಕೆ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಗುಣಮಟ್ಟದ ಮಾಂಸವನ್ನು ಉತ್ಪಾದಿಸಿ ಮಾರುಕಟ್ಟೆಗೆ ಪೂರೈಸಲು ಈ ಯೋಜನೆ ಸಹಕಾರಿಯಾಗಿದೆ. ಇದು ಕೇವಲ ಕುರಿಗಾಹಿಗಳ ಆದಾಯವನ್ನು ಹೆಚ್ಚಿಸುವುದಲ್ಲದೆ, ರಾಜ್ಯದ ಒಟ್ಟು ಜಿಡಿಪಿಗೆ ಪಶುಸಂಗೋಪನಾ ವಲಯದಿಂದ ಹೆಚ್ಚಿನ ಕೊಡುಗೆ ನೀಡುವಂತೆ ಮಾಡುತ್ತದೆ.

ಯೋಜನೆಯಡಿ ದೊರೆಯುವ ಆರ್ಥಿಕ ನೆರವು ಎಷ್ಟು?

  • ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದ ಸಾಲ: ಒಟ್ಟು ಘಟಕ ವೆಚ್ಚದ ಶೇಕಡಾ 50 ರಷ್ಟು ಭಾಗ ಅಂದರೆ 87,500 ರೂ. ಹಣವನ್ನು ಎನ್‌ಸಿಡಿಸಿ ಮೂಲಕ ಸಾಲದ ರೂಪದಲ್ಲಿ ನೀಡಲಾಗುತ್ತದೆ. ಈ ಮೊತ್ತವನ್ನು ಫಲಾನುಭವಿಯು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಬೇಕಿರುತ್ತದೆ.
  • ಸರ್ಕಾರದ ಸಹಾಯಧನ : ಕುರಿಗಾಹಿಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಕರ್ನಾಟಕ ಸರ್ಕಾರವು ಒಟ್ಟು ವೆಚ್ಚದ ಶೇಕಡಾ 25 ರಷ್ಟು ಮೊತ್ತವನ್ನು ಸಹಾಯಧನದ ರೂಪದಲ್ಲಿ ನೀಡುತ್ತದೆ. ಅಂದರೆ 43,750 ರೂ. ಹಣವು ಉಚಿತ ಸಹಾಯಧನವಾಗಿದ್ದು, ಇದನ್ನು ಮರುಪಾವತಿ ಮಾಡುವ ಅಗತ್ಯವಿರುವುದಿಲ್ಲ.
  • ಫಲಾನುಭವಿಯ ವಂತಿಕೆ: ಯೋಜನೆಯಲ್ಲಿ ಫಲಾನುಭವಿಯ ಪಾಲುದಾರಿಕೆಯನ್ನು ಖಚಿತಪಡಿಸಿಕೊಳ್ಳಲು, ಒಟ್ಟು ವೆಚ್ಚದ ಶೇಕಡಾ 25 ರಷ್ಟು ಭಾಗ ಅಂದರೆ 43,750 ರೂ. ಹಣವನ್ನು ಸ್ವತಃ ಅರ್ಜಿದಾರರೇ ಭರಿಸಬೇಕಾಗುತ್ತದೆ.

ಘಟಕದ ರಚನೆ ಮತ್ತು ಸ್ವರೂಪ ಹೇಗಿರಬೇಕು?

ಈ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಒಂದು ಸಣ್ಣ ಪ್ರಮಾಣದ ಕುರಿ ಅಥವಾ ಮೇಕೆ ಸಾಕಾಣಿಕೆ ಘಟಕವನ್ನು ಮಂಜೂರು ಮಾಡಲಾಗುತ್ತದೆ. ಈ ಘಟಕವು ಒಟ್ಟು 21 ಪ್ರಾಣಿಗಳನ್ನು ಒಳಗೊಂಡಿರುತ್ತದೆ, ಅದರಲ್ಲಿ 20 ಹೆಣ್ಣು ಕುರಿ/ಮೇಕೆಗಳು ಮತ್ತು ಸಂತಾನೋತ್ಪತ್ತಿಗಾಗಿ 1 ಗಂಡು ಟಗರು ಅಥವಾ ಹೋತವನ್ನು ನೀಡಲಾಗುತ್ತದೆ. ಇದನ್ನು ವೈಜ್ಞಾನಿಕವಾಗಿ ಒಂದು ಲಾಭದಾಯಕ ಸಾಕಾಣಿಕಾ ಘಟಕವೆಂದು ಪರಿಗಣಿಸಲಾಗುತ್ತದೆ.

ಒಟ್ಟು ವೆಚ್ಚದ ವಿವರ

ಒಂದು ಪೂರ್ಣ ಪ್ರಮಾಣದ ಘಟಕವನ್ನು ಸ್ಥಾಪಿಸಲು ತಗಲುವ ಒಟ್ಟು ಮೊತ್ತವನ್ನು 1,75,000 ರೂ. (ಒಂದು ಲಕ್ಷದ ಎಪ್ಪತ್ತೈದು ಸಾವಿರ ರೂಪಾಯಿಗಳು) ಎಂದು ನಿಗದಿಪಡಿಸಲಾಗಿದೆ. ಈ ಮೊತ್ತವು ಪ್ರಾಣಿಗಳ ಖರೀದಿ ಮತ್ತು ಇತರ ಪ್ರಾರಂಭಿಕ ವೆಚ್ಚಗಳನ್ನು ಒಳಗೊಂಡಿರುತ್ತದೆ.

ಅರ್ಹತಾ ಮಾನದಂಡಗಳೇನು?

  • ಈ ಯೋಜನೆಯ ಲಾಭ ಪಡೆಯಲು ಅರ್ಜಿದಾರರು ಕಡ್ಡಾಯವಾಗಿ ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
  • ಅರ್ಜಿದಾರರು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರಬೇಕು, ಅಂದರೆ ವಯಸ್ಕರಾಗಿರಬೇಕು.
  • ಕುರಿಗಾಹಿ ವೃತ್ತಿಯಲ್ಲಿ ತೊಡಗಿಸಿಕೊಂಡಿರಬೇಕು. ಇದು ಕುರುಬ ಸಮುದಾಯದವರು ಅಥವಾ ಸಕ್ರಿಯವಾಗಿ ಕುರಿ ಸಾಕಾಣಿಕೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡಿರುವವರಿಗೆ ಅನ್ವಯಿಸುತ್ತದೆ.

ಸಂಘಟನೆ ಮತ್ತು ತಾಂತ್ರಿಕ ನೋಂದಣಿ

  • ಫಲಾನುಭವಿಯು ಸ್ಥಳೀಯ ಅಥವಾ ಜಿಲ್ಲಾ ಮಟ್ಟದ 'ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘ'ದ ಕಡ್ಡಾಯ ಸದಸ್ಯರಾಗಿರಬೇಕು. ಸದಸ್ಯರಲ್ಲದವರಿಗೆ ಈ ಯೋಜನೆಯಡಿ ಸೌಲಭ್ಯ ಸಿಗುವುದಿಲ್ಲ.
  • ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅರ್ಜಿದಾರರು ಕೃಷಿ ಇಲಾಖೆಯ ಫ್ರೂಟ್ಸ್ (FRUITS) ಪೋರ್ಟಲ್‌ fruits.karnataka.gov.in/ ನಲ್ಲಿ ನೋಂದಾಯಿಸಿಕೊಂಡಿರಬೇಕು. ಇದರೊಂದಿಗೆ, ಮಾರಾಟ ಪ್ರಕ್ರಿಯೆಗಾಗಿ NeML (National E-Market Limited) ಆನ್‌ಲೈನ್ ಮಾರ್ಕೆಟಿಂಗ್ ಪ್ಲಾಟ್‌ಫಾರ್ಮ್‌ನಲ್ಲಿಯೂ ಹೆಸರು ನೋಂದಾಯಿಸಿರುವುದು ಅತ್ಯಗತ್ಯ.

ಪ್ರಮುಖ ಷರತ್ತುಗಳು ಏನೇನು?

  • ಕುರಿ ಅಥವಾ ಮೇಕೆಗಳನ್ನು ವೈಜ್ಞಾನಿಕವಾಗಿ ಸಾಕಲು ಅರ್ಜಿದಾರರ ಬಳಿ ಕನಿಷ್ಠ 1000 ಚದರ ಅಡಿಗಳಷ್ಟು ಸ್ವಂತ ಜಾಗ ಲಭ್ಯವಿರಬೇಕು. ಪ್ರಾಣಿಗಳ ವಾಸಸ್ಥಳ ಮತ್ತು ನಿರ್ವಹಣೆಗೆ ಇದು ಅವಶ್ಯಕ.
  • ಯೋಜನೆಯ ಲಾಭವು ಹೆಚ್ಚಿನ ಕುಟುಂಬಗಳಿಗೆ ತಲುಪಲಿ ಎಂಬ ಉದ್ದೇಶದಿಂದ, ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
  • ಅರ್ಜಿದಾರರು ಕಳೆದ 3 ವರ್ಷಗಳಲ್ಲಿ ಪಶುಸಂಗೋಪನಾ ಇಲಾಖೆಯ ಯಾವುದೇ ಯೋಜನೆಗಳ ಅಡಿಯಲ್ಲಿ ಯಾವುದೇ ರೀತಿಯ ಆರ್ಥಿಕ ನೆರವು ಅಥವಾ ಸಹಾಯಧನವನ್ನು ಪಡೆದಿರಬಾರದು. ಒಂದು ವೇಳೆ ಈ ಹಿಂದೆ ನೆರವು ಪಡೆದಿದ್ದಲ್ಲಿ, ಅವರು ಈ ಯೋಜನೆಗೆ ಅನರ್ಹರಾಗುತ್ತಾರೆ.

ಯೋಜನೆಯ ಪ್ರಸ್ತುತ ಸ್ಥಿತಿ ಏನು?

ಪ್ರಸ್ತುತ 2026ರ ಆರಂಭದ ಮಾಹಿತಿಯಂತೆ, ಈ ಯೋಜನೆಯು ರಾಜ್ಯಾದ್ಯಂತ ಜಾರಿಯಲ್ಲಿದ್ದರೂ ಕೆಲವು ಜಿಲ್ಲೆಗಳಲ್ಲಿ ಅನುದಾನದ ಬಿಡುಗಡೆ ವಿಳಂಬವಾಗಿರುವ ವರದಿಗಳಿವೆ. ಕಳೆದ ವರ್ಷಗಳಲ್ಲಿ ಸಾವಿರಾರು ರೈತರು ಇದರ ಲಾಭ ಪಡೆದಿದ್ದಾರೆ. ಪ್ರಸ್ತುತ ಸಾಲಿನ ಹೊಸ ಅರ್ಜಿ ಸಲ್ಲಿಕೆ ಮತ್ತು ಅನುದಾನದ ಲಭ್ಯತೆಯ ಬಗ್ಗೆ ಮಾಹಿತಿ ಪಡೆಯಲು ರೈತರು ತಕ್ಷಣವೇ ತಮ್ಮ ಜಿಲ್ಲಾ ಪಶುಸಂಗೋಪನಾ ಕಚೇರಿಯನ್ನು ಸಂಪರ್ಕಿಸುವುದು ಸೂಕ್ತ.

ಅರ್ಜಿ ಸಲ್ಲಿಸುವುದು ಹೇಗೆ?

  • ಯೋಜನೆಯ ಲಾಭ ಪಡೆಯಲು ಇಚ್ಛಿಸುವ ಆಸಕ್ತ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ತಾಲ್ಲೂಕು ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಕಚೇರಿಗೆ ಅಥವಾ ಸಹಾಯಕ ನಿರ್ದೇಶಕರ ಕಚೇರಿಗೆ ಖುದ್ದಾಗಿ ಭೇಟಿ ನೀಡಬೇಕು. ಅಲ್ಲಿ ಇಲಾಖೆಯು ನಿಗದಿಪಡಿಸಿದ ಅಧಿಕೃತ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು.
  • ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ನಿಗದಿತ ಅವಧಿಯೊಳಗೆ ಸ್ಥಳೀಯ ಕಚೇರಿಗೆ ಸಲ್ಲಿಸಬೇಕು.



ಫಲಾನುಭವಿಗಳ ಆಯ್ಕೆ ಹೇಗೆ?

ಸಲ್ಲಿಸಲಾದ ಅರ್ಜಿಗಳನ್ನು ಪರಿಶೀಲಿಸಲು ಜಿಲ್ಲಾ ಮಟ್ಟದಲ್ಲಿ ಒಂದು ಅಧಿಕೃತ ಸಮಿತಿಯನ್ನು ರಚಿಸಲಾಗಿರುತ್ತದೆ. ಈ ಸಮಿತಿಯು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಪಶುಸಂಗೋಪನಾ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರು ಮತ್ತು ಲೀಡ್ ಬ್ಯಾಂಕ್ ಮ್ಯಾನೇಜರ್‌ಗಳು ಸದಸ್ಯರಾಗಿರುತ್ತಾರೆ. ಈ ಸಮಿತಿಯು ಅರ್ಜಿದಾರರ ಅರ್ಹತೆ ಮತ್ತು ಲಭ್ಯವಿರುವ ಗುರಿಯ ಆಧಾರದ ಮೇಲೆ ಅಂತಿಮವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ.


ಅಗತ್ಯವಿರುವ ದಾಖಲೆಗಳು

  • ಆಧಾರ್ ಕಾರ್ಡ್/ಗುರುತಿನ ಚೀಟಿ
  • ಪಡಿತರ ಚೀಟಿ
  • ಬ್ಯಾಂಕ್ ಪಾಸ್‌ಬುಕ್ ಪ್ರತಿ
  • ಇತ್ತೀಚಿನ ಭಾವಚಿತ್ರ
  • ಜಾತಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ಸಹಕಾರಿ ಸಂಘದ ಸದಸ್ಯತ್ವದ ಪುರಾವೆ

 

]]>
Tue, 06 Jan 2026 15:20:04 +0530 shivuagrico
Maize support price&ಮೆಕ್ಕೆಜೋಳ ಬೆಳೆಗಾರರಿಗಾಗಿ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ; ಬೆಲೆ ಕುಸಿತಕ್ಕೆ ಬ್ರೇಕ್ https://krushirushi.in/Maize-support-price-2374 https://krushirushi.in/Maize-support-price-2374 Maize support price-ಮೆಕ್ಕೆಜೋಳ ಬೆಳೆಗಾರರಿಗಾಗಿ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ; ಬೆಲೆ ಕುಸಿತಕ್ಕೆ ಬ್ರೇಕ್

ಕರ್ನಾಟಕ ಸರ್ಕಾರವು 2025-26ನೇ ಸಾಲಿನ ಖಾರಿಫ್ ಹಂಗಾಮಿನ ಮೆಕ್ಕೆಜೋಳ ಬೆಳೆಗಾರರಿಗಾಗಿ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯನ್ನು ಜಾರಿಗೆ ತಂದಿದೆ. ದಾಖಲೆ ಪ್ರಮಾಣದ ಉತ್ಪಾದನೆಯಿಂದ ಬೆಲೆ ಕುಸಿತ ಎದುರಿಸುತ್ತಿರುವ ರೈತರಿಗೆ ಪ್ರತಿ ಕ್ವಿಂಟಾಲ್‌ಗೆ 2,150 ರೂ. ನಿಗದಿತ ದರ ನಿಗದಿಪಡಿಸಲಾಗಿದೆ. ಮಾರುಕಟ್ಟೆ ದರ 1,900 ರೂ.ಗಿಂತ ಕಡಿಮೆಯಾದರೆ 250 ರೂ.ವರೆಗೆ ಬೆಲೆ ವ್ಯತ್ಯಾಸ ಪರಿಹಾರ ಧನ ದೊರೆಯಲಿದೆ. ಈ ಯೋಜನೆಯಿಂದ 10 ಲಕ್ಷಕ್ಕೂ ಹೆಚ್ಚು ರೈತರು ಪ್ರಯೋಜನ ಪಡೆಯಲಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.

ಕರ್ನಾಟಕ ಸರ್ಕಾರವು 2025-26ನೇ ಸಾಲಿನ ಖಾರಿಫ್ ಹಂಗಾಮಿನ ಮೆಕ್ಕೆಜೋಳ ಬೆಳೆಗಾರರಿಗೆ ನೆರವಾಗಲು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯನ್ನು ಜಾರಿಗೊಳಿಸಿದೆ. ರಾಜ್ಯದಲ್ಲಿ ಈ ಬಾರಿ ದಾಖಲೆ ಪ್ರಮಾಣದ ಮೆಕ್ಕೆಜೋಳ ಉತ್ಪಾದನೆಯಾಗಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರಿಗೆ ಈ ಯೋಜನೆ ಆಸರೆಯಾಗಲಿದೆ. ಈ ಯೋಜನೆಯಿಂದ ರಾಜ್ಯದಲ್ಲಿನ 10 ಲಕ್ಷಕ್ಕೂ ಹೆಚ್ಚಿನ ಮೆಕ್ಕೆಜೋಳ ಬೆಳೆಗಾರರಿಗೆ ಅನುಕೂಲವಾಗಲಿದೆ. ರಾಜ್ಯದ ಮೆಕ್ಕೆಜೋಳ ಬೆಳೆಗಾರರು ಎದುರಿಸುತ್ತಿರುವ 'ಬೆಲೆ ಕುಸಿತ' ಮತ್ತು 'ಸಂಕಷ್ಟದ ಮಾರಾಟ'ವನ್ನು ತಡೆಯಲು ಸರ್ಕಾರವು ಪ್ರತಿ ಕ್ವಿಂಟಾಲ್‌ಗೆ ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆಯನ್ನು ನಿಗದಿಪಡಿಸಿದೆ.

ಏನಿದು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ?

ಕರ್ನಾಟಕ ಸರ್ಕಾರವು 2025-26ನೇ ಸಾಲಿನ ಖಾರಿಫ್ ಹಂಗಾಮಿನ ಮೆಕ್ಕೆಜೋಳ ಬೆಳೆಗಾರರಿಗೆ ನೆರವಾಗಲು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ ಜಾರಿಗೆ ತಂದಿದ್ದು, ಪ್ರತಿ ಕ್ವಿಂಟಾಲ್‌ಗೆ 2,150 ರೂ. ನಿಗದಿತ ದರ ನಿಗದಿಪಡಿಸಿದೆ. ಮಾರುಕಟ್ಟೆ ದರವು 1,900 ರೂ. ಅಥವಾ ಅದಕ್ಕಿಂತ ಕಡಿಮೆಯಾದಲ್ಲಿ ರೈತರಿಗೆ ಪ್ರತಿ ಕ್ವಿಂಟಾಲ್‌ಗೆ 250 ರೂ.ವರೆಗೆ ಬೆಲೆ ವ್ಯತ್ಯಾಸದ ಪರಿಹಾರ ಧನ ದೊರೆಯಲಿದೆ. ಮಾರುಕಟ್ಟೆ ಬೆಲೆ ಏರಿಕೆಯಾದಂತೆ ಈ ಪರಿಹಾರದ ಮೊತ್ತವು ಕಡಿಮೆಯಾಗುತ್ತಾ ಹೋಗುತ್ತದೆ ಮತ್ತು ನಿಗದಿತ ಬೆಲೆಯನ್ನು ತಲುಪಿದಾಗ ಸ್ಥಗಿತಗೊಳ್ಳುತ್ತದೆ. ಆದರೆ ರಾಜ್ಯದ ಸಾಮಾನ್ಯ ಸಂಗ್ರಹಣೆ ಯೋಜನೆಯಡಿ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಾಲ್‌ಗೆ 2,400 ರೂ.ಕನಿಷ್ಠ ಬೆಂಬಲ ಬೆಲೆ ಲಭ್ಯವಿರುತ್ತದೆ. ಈ ಯೋಜನೆಯು ನಿಯೋಜಿತ ಎಪಿಎಂಸಿ ಮತ್ತು ಉಪ-ಮಾರುಕಟ್ಟೆ ಯಾರ್ಡ್‌ಗಳಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ ಮೂಲಕ ಮಾರಾಟವಾಗುವ ಗರಿಷ್ಠ ನಾಲ್ಕು ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಒಳಗೊಳ್ಳಲಿದ್ದು, ಪ್ರತಿ ರೈತರಿಗೆ ಗರಿಷ್ಠ 50 ಕ್ವಿಂಟಾಲ್ ಅಥವಾ ಪ್ರತಿ ಎಕರೆಗೆ ಗರಿಷ್ಠ 12 ಕ್ವಿಂಟಾಲ್ ಮಿತಿಯವರೆಗೆ ಮಾತ್ರ ಸೌಲಭ್ಯ ಸಿಗಲಿದೆ. ಕಡ್ಡಾಯ ಗುಣಮಟ್ಟದ ತಪಾಸಣೆ ಮತ್ತು ದಾಖಲೆಗಳ ಪರಿಶೀಲನೆಯ ನಂತರ ಪರಿಹಾರದ ಮೊತ್ತವನ್ನು ನೇರ ನಗದು ವರ್ಗಾವಣೆ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.

 

ಬೆಲೆ ಮತ್ತು ಪರಿಹಾರದ ವಿವರಗಳು

  • ಪ್ರಸ್ತುತ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆಯು ಪ್ರತಿ ಕ್ವಿಂಟಾಲ್‌ಗೆ 1,600 ರೂ. ದಿಂದ 2,000 ರೂ. ರಷ್ಟಿದ್ದು, ಇದು ರೈತರಿಗೆ ಆರ್ಥಿಕ ನಷ್ಟ ಉಂಟುಮಾಡುತ್ತಿದೆ.
  • ಈ ನಷ್ಟವನ್ನು ಸರಿದೂಗಿಸಲು ಸರ್ಕಾರವು ಪ್ರತಿ ಕ್ವಿಂಟಾಲ್ ಮೆಕ್ಕೆಜೋಳಕ್ಕೆ ₹2,150 ರಂತೆ ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆಯನ್ನು ನಿಗದಿಪಡಿಸಿದೆ.
  • ಮಾರುಕಟ್ಟೆಯ ಸರಾಸರಿ ಮಾದರಿ ಬೆಲೆಯು 1,900 ರೂ. ಅಥವಾ ಅದಕ್ಕಿಂತ ಕಡಿಮೆ ಇದ್ದಾಗ, ರೈತರಿಗೆ ಪ್ರತಿ ಕ್ವಿಂಟಾಲ್‌ಗೆ ಗರಿಷ್ಠ 250 ರೂ. ವರೆಗೆ ಬೆಲೆ ವ್ಯತ್ಯಾಸದ ಪರಿಹಾರವನ್ನು ನೀಡಲಾಗುತ್ತದೆ.
  • ಮಾರುಕಟ್ಟೆ ಬೆಲೆಯು 1,900 ರೂ. ಕ್ಕಿಂತ ಹೆಚ್ಚಾದಂತೆ ಪರಿಹಾರದ ಮೊತ್ತವು ಹಂತ-ಹಂತವಾಗಿ ಕಡಿಮೆಯಾಗುತ್ತಾ ಹೋಗುತ್ತದೆ.
  • ಒಂದು ವೇಳೆ ಮಾರುಕಟ್ಟೆ ಬೆಲೆಯು ನಿಗದಿತ ದರವಾದ 2,150 ರೂ. ಅಥವಾ ಅದಕ್ಕಿಂತ ಹೆಚ್ಚಿದ್ದರೆ, ಈ ಯೋಜನೆಯಡಿ ಯಾವುದೇ ಪರಿಹಾರ ಅನ್ವಯಿಸುವುದಿಲ್ಲ.
  • ಅರ್ಹ ರೈತರಿಗೆ ಸಿಗಬೇಕಾದ ಈ ಬೆಲೆ ವ್ಯತ್ಯಾಸದ ಮೊತ್ತವನ್ನು ನೇರ ನಗದು ವರ್ಗಾವಣೆ ಮೂಲಕ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.

ಪ್ರಸ್ತುತ ಮಾರುಕಟ್ಟೆ ಸ್ಥಿತಿಗತಿ ಏನು?

  • ಕರ್ನಾಟಕ ರಾಜ್ಯದಲ್ಲಿ ಈ ಬಾರಿ ದಾಖಲೆ ಪ್ರಮಾಣದಲ್ಲಿ ಮೆಕ್ಕೆಜೋಳದ ಉತ್ಪಾದನೆಯಾಗಿದ್ದು, ಒಟ್ಟು 17.64 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈ ಬೆಳೆಯನ್ನು ಬೆಳೆಯಲಾಗಿದೆ.
  • ಪ್ರಸಕ್ತ ಸಾಲಿನಲ್ಲಿ ಒಟ್ಟು ಮೆಕ್ಕೆಜೋಳದ ಉತ್ಪಾದನೆಯು 53.80 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಆಗಬಹುದು ಎಂದು ಅಂದಾಜಿಸಲಾಗಿದೆ.
  • 2025ರ ಆಗಸ್ಟ್‌ನಿಂದ ಡಿಸೆಂಬರ್ ತಿಂಗಳ ಅವಧಿಯಲ್ಲಿಯೇ ಸುಮಾರು 20.50 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಮೆಕ್ಕೆಜೋಳವು ವಿವಿಧ ಎಪಿಎಂಸಿ ಮಾರುಕಟ್ಟೆಗಳಿಗೆ ಬಂದಿದೆ.
  • ಈ ಅವಧಿಯಲ್ಲಿ ಮಾರುಕಟ್ಟೆಗೆ ಬಂದಿರುವ ಮೆಕ್ಕೆಜೋಳದ ಪ್ರಮಾಣವು ರಾಜ್ಯದ ಒಟ್ಟು ಅಂದಾಜು ಉತ್ಪಾದನೆಯ ಶೇಕಡಾ 38ಕ್ಕಿಂತಲೂ ಅಧಿಕವಾಗಿದೆ.
  • ಉತ್ಪಾದನೆಯಲ್ಲಿನ ಈ ಭಾರಿ ಏರಿಕೆಯೇ ಮಾರುಕಟ್ಟೆಯಲ್ಲಿ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದ್ದು, ರೈತರು ಸಂಕಷ್ಟ ಎದುರಿಸುವಂತಾಗಿದೆ.
  • ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮೆಕ್ಕೆಜೋಳವನ್ನು ಬೆಳೆಯಲಾಗುತ್ತದೆಯಾದರೂ, ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಇದರ ಸಾಂದ್ರತೆ ಹೆಚ್ಚಾಗಿದೆ.
  • ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಮೆಕ್ಕೆಜೋಳ ಬೆಳೆಯುವ ಪ್ರಮುಖ ಕೇಂದ್ರಗಳಾಗಿವೆ.
  • ಮಧ್ಯ ಮತ್ತು ದಕ್ಷಿಣ ಕರ್ನಾಟಕ ಭಾಗದಲ್ಲಿ ದಾವಣಗೆರೆ, ಹಾವೇರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಈ ಬೆಳೆಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ.
  • ಅದರಲ್ಲೂ ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳು ರಾಜ್ಯದ ಪ್ರಮುಖ ಮೆಕ್ಕೆಜೋಳದ ಮಾರುಕಟ್ಟೆ ಕೇಂದ್ರಗಳಾಗಿ ಗುರುತಿಸಿಕೊಂಡಿವೆ.

ಯೋಜನೆಯ ಅರ್ಹತೆ ಮತ್ತು ಮಿತಿಗಳು

  • ಒಬ್ಬ ರೈತರು ಈ ಯೋಜನೆಯ ಮೂಲಕ ಗರಿಷ್ಠ 50 ಕ್ವಿಂಟಾಲ್‌ ಮೆಕ್ಕೆಜೋಳಕ್ಕೆ ಮಾತ್ರ ಬೆಲೆ ವ್ಯತ್ಯಾಸದ ಪರಿಹಾರವನ್ನು ಪಡೆಯಲು ಅವಕಾಶವಿದೆ.
  • ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ, ಪ್ರತಿ ಎಕರೆಗೆ ಗರಿಷ್ಠ 12 ಕ್ವಿಂಟಾಲ್‌ ಮೆಕ್ಕೆಜೋಳವನ್ನು ಮಾತ್ರ ಯೋಜನೆಯಡಿ ಪರಿಗಣಿಸಲಾಗುತ್ತದೆ.
  • ರಾಜ್ಯಾದ್ಯಂತ ಒಟ್ಟಾರೆಯಾಗಿ ಗರಿಷ್ಠ 4 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳದ ವಹಿವಾಟಿಗೆ ಮಾತ್ರ ಈ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯ ಲಾಭ ಸಿಗಲಿದೆ.
  • ಈ ಮಿತಿಗಳನ್ನು ವಿಧಿಸುವ ಮೂಲಕ ಸರ್ಕಾರವು ಹೆಚ್ಚಿನ ಸಂಖ್ಯೆಯ ಸಣ್ಣ ರೈತರಿಗೆ ಯೋಜನೆಯ ಪ್ರಯೋಜನ ತಲುಪುವಂತೆ ಗುರಿ ಹೊಂದಿದೆ.
  • ಅರ್ಹ ಫಲಾನುಭವಿಗಳನ್ನು ಗುರುತಿಸಲು ರೈತರ ಭೂ ದಾಖಲೆಗಳನ್ನು ಫ್ರೂಟ್ಸ್‌ ತಂತ್ರಾಂಶದ ಮೂಲಕ ಕಡ್ಡಾಯವಾಗಿ ಪರಿಶೀಲಿಸಲಾಗುತ್ತದೆ.

ಯಾರಿಗೆ ಈ ಯೋಜನೆ ಅನ್ವಯಿಸುವುದಿಲ್ಲ?

  • ಎಥೆನಾಲ್ ಉತ್ಪಾದನಾ ಘಟಕಗಳಿಗೆ ಮೆಕ್ಕೆಜೋಳವನ್ನು ಪೂರೈಕೆ ಮಾಡಿದ ರೈತರಿಗೆ ಈ ಯೋಜನೆಯಡಿ ಪರಿಹಾರ ಧನ ಅನ್ವಯಿಸುವುದಿಲ್ಲ.
  • ಕೋಳಿ ಆಹಾರ ಅಥವಾ ಜಾನುವಾರು ಆಹಾರ ತಯಾರಿಕಾ ಘಟಕಗಳಿಗೆ ನೇರವಾಗಿ ಮೆಕ್ಕೆಜೋಳವನ್ನು ಮಾರಾಟ ಮಾಡಿದ ರೈತರನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ.
  • ಕರ್ನಾಟಕ ಹಾಲು ಮಹಾಮಂಡಳಿ ಅಥವಾ ಅದರ ಒಕ್ಕೂಟಗಳಿಗೆ ಮೆಕ್ಕೆಜೋಳ ಪೂರೈಸಿದ ರೈತರು ಕೂಡ ಈ ಸೌಲಭ್ಯ ಪಡೆಯಲು ಅರ್ಹರಲ್ಲ.
  • ಈ ಮೇಲಿನ ಸಂಸ್ಥೆಗಳಿಗೆ ಈಗಾಗಲೇ ಪೂರೈಕೆ ಮಾಡಿರುವ ರೈತರಿಗೆ ಸರ್ಕಾರದ ಈ ಬೆಲೆ ವ್ಯತ್ಯಾಸದ ಪರಿಹಾರ ಧನ ದೊರೆಯುವುದಿಲ್ಲ ಎಂದು ಅಧಿಕೃತವಾಗಿ ತಿಳಿಸಲಾಗಿದೆ.

ಅನುಷ್ಠಾನ ಪ್ರಕ್ರಿಯೆ ಮತ್ತು ನೋಂದಣಿ ಹೇಗೆ?

  • ಈ ಯೋಜನೆಯನ್ನು ಸಂಪೂರ್ಣವಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ವತಿಯಿಂದ ಜಾರಿಗೊಳಿಸಲಾಗುತ್ತದೆ.
  • ನೋಂದಣಿಗಾಗಿ ಮೊದಲಿಗೆ, ರೈತರು ಕರ್ನಾಟಕ ಸರ್ಕಾರದ ಅಧಿಕೃತ ಕರ್ನಾಟಕ ಕಿಸಾನ್ ಪೋರ್ಟಲ್‌ kkisan.karnataka.gov.in/ ಗೆ ಭೇಟಿ ನೀಡಬೇಕು.
  • ಪೋರ್ಟಲ್‌ನಲ್ಲಿ ಲಭ್ಯವಿರುವ "ರೈತರ ನೋಂದಣಿ" ಅಥವಾ ಸಂಬಂಧಿತ ಯೋಜನೆಯ ಲಿಂಕ್ ಅನ್ನು ಹುಡುಕಿ ಅದರ ಮೇಲೆ ಕ್ಲಿಕ್ ಮಾಡಬೇಕು.
  • ನಂತರ, NeML ವೇದಿಕೆಯ ಮೂಲಕ ನಿಮ್ಮ ಆಧಾರ್ ಕಾರ್ಡ್ ಬಳಸಿ ಬಯೋಮೆಟ್ರಿಕ್ ದೃಢೀಕರಣ ಅಥವಾ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
  • ನಿಮ್ಮ ಜಮೀನಿನ ಮಾಹಿತಿ ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಲು, FRUITS ತಂತ್ರಾಂಶದಲ್ಲಿ ದಾಖಲಾಗಿರುವ ಭೂ ದಾಖಲೆಗಳನ್ನು ನಿಮ್ಮ ಕಿಸಾನ್‌ ಪ್ರೊಫೈಲ್‌ಗೆ ಲಿಂಕ್ ಮಾಡಲಾಗಿದೆಯೇ ಎಂದು ಪರಿಶೀಲಿಸಿಕೊಳ್ಳಿ.
  • ಮಾರುಕಟ್ಟೆಗೆ ತರುವ ಮೆಕ್ಕೆಜೋಳದ ಗುಣಮಟ್ಟವನ್ನು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ನೇಮಿಸಿದ ತಾಂತ್ರಿಕ ಅಧಿಕಾರಿಗಳು ಕಡ್ಡಾಯವಾಗಿ ತಪಾಸಣೆ ಮಾಡುತ್ತಾರೆ.
  • ಈ ಪ್ರಕ್ರಿಯೆಯು ಪಾರದರ್ಶಕತೆಯಿಂದ ಕೂಡಿರಲು ಭೂ ದಾಖಲೆ ಮತ್ತು ಬೆಳೆ ಸಮೀಕ್ಷೆಯ ದತ್ತಾಂಶಗಳ ತಾಳೆ ನೋಡುವುದು ಅತ್ಯಂತ ಅವಶ್ಯಕವಾಗಿದೆ.
  • ಅಂತಿಮವಾಗಿ, ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು; ತದನಂತರ ಅಧಿಕಾರಿಗಳು ಭೂ ದಾಖಲೆಗಳು, ಆಧಾರ್ ಮತ್ತು ಬೆಳೆ ಸಮೀಕ್ಷೆಯ ದತ್ತಾಂಶಗಳನ್ನು ಆಧರಿಸಿ ನಿಮ್ಮ ಅರ್ಜಿಯನ್ನು ಪರಿಶೀಲಿಸುತ್ತಾರೆ.
  • ರೈತರಿಗೆ ಸಿಗಬೇಕಾದ ಪರಿಹಾರದ ಮೊತ್ತವನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗುತ್ತದೆ.



ಆಡಳಿತಾತ್ಮಕ ಮೇಲ್ವಿಚಾರಣೆ

ಜಿಲ್ಲಾಧಿಕಾರಿಗಳು ಈ ಯೋಜನೆಯ ಸಂಪೂರ್ಣ ಉಸ್ತುವಾರಿ ವಹಿಸಲಿದ್ದು, ಮಾರುಕಟ್ಟೆಗೆ ಬರುವ ಮೆಕ್ಕೆಜೋಳದ ದೈನಂದಿನ ವರದಿ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸುತ್ತಾರೆ. ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಮೊದಲ ವಹಿವಾಟು ನಡೆದ ದಿನದಿಂದ ಒಂದು ತಿಂಗಳ ಕಾಲ ಈ ಯೋಜನೆ ಚಾಲ್ತಿಯಲ್ಲಿರುತ್ತದೆ. ಯೋಜನೆ ಮುಗಿದ ಎರಡು ತಿಂಗಳೊಳಗೆ ಸಮಗ್ರ ಲೆಕ್ಕಪರಿಶೋಧನೆ ನಡೆಸಲಾಗುವುದು.

]]>
Tue, 06 Jan 2026 07:28:44 +0530 shivuagrico
Pmkisan id&ಪಿಎಂ ಕಿಸಾನ್: ರೈತರಿಗೀಗ ವಿಶಿಷ್ಟ ಡಿಜಿಟಲ್ ಐಡಿ ಕಡ್ಡಾಯ! ಏನಿದು ರೈತ ಐಡಿ? ನೋಂದಣಿ ಹೇಗೆ? ಪ್ರಯೋಜನಗಳೇನು? https://krushirushi.in/Pmkisan-id-2373 https://krushirushi.in/Pmkisan-id-2373 Pmkisan id-ಪಿಎಂ ಕಿಸಾನ್: ರೈತರಿಗೀಗ ವಿಶಿಷ್ಟ ಡಿಜಿಟಲ್ ಐಡಿ ಕಡ್ಡಾಯ! ಏನಿದು ರೈತ ಐಡಿ? ನೋಂದಣಿ ಹೇಗೆ? ಪ್ರಯೋಜನಗಳೇನು?

ರೈತ ಬಂಧುಗಳ ಗಮನಕ್ಕೆ! ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 6,000 ರೂ.ಗಳ ವಾರ್ಷಿಕ ಸಹಾಯಧನ ಪಡೆಯಲು 'ರೈತ ಐಡಿ' ಕಡ್ಡಾಯವಾಗಿದೆ. ಇದು ನಿಮ್ಮ ಅರ್ಹತೆಯನ್ನು ಖಚಿತಪಡಿಸಿ, ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುವಂತೆ ಮಾಡುತ್ತದೆ. ಮೋಸಗಾರರನ್ನು ತಡೆಯಲು ಮತ್ತು ನಿಜವಾದ ರೈತರಿಗೆ ನೆರವಾಗಲು ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ಕರ್ನಾಟಕದ 'ಫೂಟ್ಸ್' ಮಾದರಿಯಲ್ಲಿ ಈ ಐಡಿ ನೀಡಲಾಗುತ್ತಿದೆ. ಹೊಸದಾಗಿ ಸೇರಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ (PM-Kisan) ಯೋಜನೆಯಲ್ಲಿ ಪಾರದರ್ಶಕತೆ ತರಲು ಮತ್ತು ನಕಲಿ ಫಲಾನುಭವಿಗಳನ್ನು ಪತ್ತೆಹಚ್ಚಲು ಕೇಂದ್ರ ಸರ್ಕಾರವು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ. ಕರ್ನಾಟಕದ ಯಶಸ್ವಿ 'ಫ್ರೂಟ್ಸ್‌' ಮಾದರಿಯನ್ನೇ ಆಧರಿಸಿ ದೇಶಾದ್ಯಂತ ಈಗ 'ವಿಶಿಷ್ಟ ರೈತ ಗುರುತಿನ ಚೀಟಿ' ವಿತರಿಸುವ ಪ್ರಕ್ರಿಯೆ ಆರಂಭವಾಗಿದೆ. ಮುಂದಿನ ಪಿಎಂ ಕಿಸಾನ್‌ ಕಂತಿನ ಹಣವನ್ನು ಪಡೆಯಲಯ ವಿಶಿಷ್ಟ ರೈತ ಐಡಿ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಏನಿದು ಪಿಎಂ ಕಿಸಾನ್‌ ರೈತ ಐಡಿ , ಇದರ ಪ್ರಯೋಜನಗಳೇನು? ನೋಂದಣಿ ಹೇಗೆ ಎಂಬುದನ್ನು ತಿಳಿಯೋಣ.

ಏನಿದು 'ರೈತ ಐಡಿ'?

2025ರಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು ಪಡೆಯಲು 'ರೈತ ಐಡಿ' ಅಥವಾ ಕಿಸಾನ್ ಐಡಿ ಕಡ್ಡಾಯವಾಗಿದ್ದು, ಇದು ಅರ್ಹ ರೈತರಿಗೆ ವಾರ್ಷಿಕ 6,000 ರೂ.ಗಳ ಆರ್ಥಿಕ ನೆರವು ನಿರಂತರವಾಗಿ ಸಿಗುವಂತೆ ಮಾಡುತ್ತದೆ. ಪಿಎಂ ಕಿಸಾನ್ ಯೋಜನೆಯಡಿ ನೋಂದಾಯಿತ ರೈತರಿಗೆ ನೀಡಲಾಗುವ ಒಂದು ಅನನ್ಯ ಡಿಜಿಟಲ್ ಸಂಖ್ಯೆಯೇ 'ರೈತ ಐಡಿ'. ಇದು ರೈತರ ಆಧಾರ್ ಮತ್ತು ಭೂ ದಾಖಲೆಗಳೊಂದಿಗೆ (RTC) ನೇರವಾಗಿ ಸಂಪರ್ಕ ಹೊಂದಿರುತ್ತದೆ. ಕೇಂದ್ರ ಸರ್ಕಾರದ 'ಅಗ್ರಿಸ್ಟ್ಯಾಕ್' ಉಪಕ್ರಮದ ಭಾಗವಾಗಿರುವ ಈ ಡಿಜಿಟಲ್ ಐಡಿಯು ರೈತರ ಭೂ ದಾಖಲೆಗಳು, ಆಧಾರ್ ಮತ್ತು ಬ್ಯಾಂಕ್ ವಿವರಗಳನ್ನು ಒಂದೇ ದತ್ತಸಂಚಯದಲ್ಲಿ ಸಂಯೋಜಿಸುತ್ತದೆ. ಇದರಿಂದ ನಕಲಿ ಫಲಾನುಭವಿಗಳನ್ನು ತಡೆದು ನೇರವಾಗಿ ನೈಜ ರೈತರ ಖಾತೆಗೆ ಹಣ ವರ್ಗಾಯಿಸಲು ಸಾಧ್ಯವಾಗುತ್ತದೆ. ಕರ್ನಾಟದಲ್ಲಿ ಈಗಾಗಲೇ ಜಾರಿಯಲ್ಲಿರುವ ಫ್ರೂಟ್ಸ್‌ ಐಡಿ ಮಾದರಿಯಲ್ಲಿಯೇ ಇದನ್ನು ರೂಪಿಸಲಾಗಿದೆ. ಒಂದು ವೇಳೆ ರೈತರು ಈ ಐಡಿಯನ್ನು ಹೊಂದಿಲ್ಲದಿದ್ದರೆ ಅವರ 2,000 ರೂ.ಗಳ ಕಂತಿನ ಹಣ ಸ್ಥಗಿತಗೊಳ್ಳುವ ಸಾಧ್ಯತೆಯಿದ್ದು, ಪಾವತಿ ವಿಳಂಬ ಮತ್ತು ಅರ್ಜಿ ತಿರಸ್ಕಾರವನ್ನು ತಪ್ಪಿಸಲು ಆನ್‌ಲೈನ್ ಮೂಲಕ ಶೀಘ್ರವಾಗಿ ನೋಂದಣಿ ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಈ ಸರಳ ನೋಂದಣಿ ಪ್ರಕ್ರಿಯೆಯು ರೈತರಿಗೆ ಭವಿಷ್ಯದ ಸರ್ಕಾರಿ ಯೋಜನೆಗಳನ್ನು ಪಡೆಯಲು ಮತ್ತು ಆರ್ಥಿಕ ಭದ್ರತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.

ಈ ಐಡಿ ಏಕೆ ಅಗತ್ಯ?

  • ಒಂದು ರಾಷ್ಟ್ರ, ಒಂದು ರೈತ ಐಡಿ: ಒಬ್ಬ ರೈತ ದೇಶದ ವಿವಿಧ ರಾಜ್ಯಗಳಲ್ಲಿ ಭೂಮಿ ಹೊಂದಿದ್ದರೂ, ಆತನಿಗೆ ಒಂದೇ ಐಡಿ ಇರುತ್ತದೆ. ಇದರಿಂದ ಬೇರೆ ಬೇರೆ ರಾಜ್ಯಗಳಲ್ಲಿ ಜಮೀನು ತೋರಿಸಿ ಹಣ ಪಡೆಯುವುದಕ್ಕೆ ತಡೆ ಬೀಳಲಿದೆ.
  • ನಕಲಿ ತಡೆ: ಕುಟುಂಬವೊಂದರಲ್ಲಿ ಗಂಡ-ಹೆಂಡತಿ ಇಬ್ಬರೂ ಹಣ ಪಡೆಯುತ್ತಿದ್ದರೆ ಅಂತಹ ಖಾತೆಗಳನ್ನು ಗುರುತಿಸಿ ರದ್ದುಪಡಿಸಲಾಗುತ್ತದೆ.
  • ಕುಟುಂಬಕ್ಕೆ ಒಬ್ಬರಿಗೆ ಮಾತ್ರ: ನಿಯಮದಂತೆ ಒಂದು ರೈತ ಕುಟುಂಬಕ್ಕೆ ವರ್ಷಕ್ಕೆ 6,000 ರೂ. ಮಾತ್ರ ಸಿಗಲಿದೆ.
  • ಪಾರದರ್ಶಕತೆ: ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಹಣ ನೇರವಾಗಿ ರೈತರ ಖಾತೆಗೆ ಜಮೆಯಾಗಲು ಇದು ಸಹಕಾರಿ.

ಕರ್ನಾಟಕದ 'ಫೂಟ್ಸ್' ಮಾದರಿ ಈಗ ರಾಷ್ಟ್ರಕ್ಕೆ ಮಾದರಿ

ಕರ್ನಾಟಕವು ಈಗಾಗಲೇ ಫ್ರೂಟ್ಸ್‌ (Farmer Registration and Unified Beneficiary Information System) ಮೂಲಕ ರೈತರಿಗೆ ಏಕಗವಾಕ್ಷಿ ಸೇವೆಯನ್ನು ನೀಡುತ್ತಿದೆ. ರಾಜ್ಯದ ಈ ಯಶಸ್ಸನ್ನು ಗಮನಿಸಿದ ಕೇಂದ್ರ ಸರ್ಕಾರ, ಈಗ ಇದನ್ನು ದೇಶದ 14 ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದೆ. ರಾಜ್ಯದಲ್ಲಿ ಒಟ್ಟು 59,13,902 ರೈತರಿಗೆ ರೈತ ಐಡಿ ನೀಡುವ ಗುರಿ ಇದೆ. ಈಗಾಗಲೇ ಫೂಟ್ಸ್ ಐಡಿ ಹೊಂದಿರುವ 45,14,772 ರೈತರನ್ನು ಅಂಗೀಕರಿಸಲಾಗಿದ್ದು, ಬಾಕಿ ಇರುವ 13.99 ಲಕ್ಷ ರೈತರಿಗೆ ಐಡಿ ವಿತರಣೆ ಪ್ರಕ್ರಿಯೆ ನಡೆಯುತ್ತಿದೆ.

ಅನರ್ಹರ ಖಾತೆಗಳಿಗೆ ಬೀಗ!

ಪಿಎಂ-ಕಿಸಾನ್ ಯೋಜನೆಯಲ್ಲಿ ಪಾರದರ್ಶಕತೆ ತರಲು ಜಾರಿಗೆ ತಂದ ಡಿಜಿಟಲ್ ತಪಾಸಣಾ ಕ್ರಮಗಳಿಂದಾಗಿ ದೇಶಾದ್ಯಂತ ಲಕ್ಷಾಂತರ ಅನರ್ಹ ಖಾತೆಗಳನ್ನು ಪತ್ತೆಹಚ್ಚಿ ಸ್ಥಗಿತಗೊಳಿಸಲಾಗಿದೆ. ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ 7ನೇ ಕಂತಿನಲ್ಲಿ 52,81,757 ರೈತರಿದ್ದ ಫಲಾನುಭವಿಗಳ ಸಂಖ್ಯೆಯು 21ನೇ ಕಂತಿನ ವೇಳೆಗೆ 41,43,679ಕ್ಕೆ ಇಳಿಕೆಯಾಗಿದ್ದು, ಸುಮಾರು 11.38 ಲಕ್ಷಕ್ಕೂ ಅಧಿಕ ಅನರ್ಹ ಖಾತೆಗಳು ಬಂದ್ ಆಗಿವೆ. ಇದೇ ರೀತಿ ದೇಶಾದ್ಯಂತ 7ನೇ ಕಂತಿನಲ್ಲಿದ್ದ 9.84 ಕೋಟಿ ಫಲಾನುಭವಿಗಳ ಸಂಖ್ಯೆಯು ಕಳೆದ ನವೆಂಬರ್‌ನಲ್ಲಿ ಬಿಡುಗಡೆಯಾದ 21ನೇ ಕಂತಿನ ವೇಳೆಗೆ 9.34 ಕೋಟಿಗೆ ಇಳಿದಿದ್ದು, ಒಟ್ಟಾರೆ 50.20 ಲಕ್ಷಕ್ಕೂ ಹೆಚ್ಚು ಅನರ್ಹ ಖಾತೆಗಳನ್ನು ವ್ಯವಸ್ಥೆಯಿಂದ ಹೊರಹಾಕುವ ಮೂಲಕ ಅರ್ಹ ರೈತರಿಗೆ ಮಾತ್ರ ಯೋಜನೆಯ ಲಾಭ ತಲುಪುವಂತೆ ಮಾಡಲಾಗಿದೆ.

ಅರ್ಹತಾ ಮಾನದಂಡಗಳೇನು?

  • ಈ ಯೋಜನೆಯಡಿ ಸೌಲಭ್ಯ ಪಡೆಯಲು ರೈತರು ಕನಿಷ್ಠ 1 ರಿಂದ 2 ಎಕರೆಯಷ್ಟು ಸ್ವಂತ ಕೃಷಿ ಜಮೀನನ್ನು ಹೊಂದಿರಬೇಕು.
  • ರೈತರ ಹೆಸರಿನಲ್ಲಿ ಭೂ ಹಿಡುವಳಿ ವಿಸ್ತೀರ್ಣವನ್ನು ದೃಢೀಕರಿಸುವ ಅಧಿಕೃತ ಆರ್‌ಟಿಸಿ (RTC) ಅಥವಾ ಪಹಣಿ ದಾಖಲೆಗಳು ಇರುವುದು ಕಡ್ಡಾಯವಾಗಿದೆ.
  • ಇನ್ನು ಆರ್ಥಿಕ ಸ್ಥಿತಿಗತಿಯನ್ನು ಪರಿಗಣಿಸಿ, ಅರ್ಜಿ ಸಲ್ಲಿಸುವ ರೈತರಿಗೆ ಮಾಸಿಕ 10 ಸಾವಿರ ರೂಪಾಯಿಗಿಂತ ಹೆಚ್ಚಿನ ಪಿಂಚಣಿ ಬರುತ್ತಿರಬಾರದು ಹಾಗೂ ಅವರು ಆದಾಯ ತೆರಿಗೆ ಪಾವತಿದಾರರಾಗಿರಬಾರದು.
  • ಯೋಜನೆಯಲ್ಲಿ ಯಾವುದೇ ಅಡೆತಡೆಯಿಲ್ಲದೆ ಹಣ ಪಡೆಯಲು ರೈತರು ತಮ್ಮ ಆಧಾರ್ ಕಾರ್ಡ್ ಮತ್ತು ಜಮೀನಿನ ದಾಖಲೆಗಳನ್ನು ನವೀಕರಿಸುವುದರ ಜೊತೆಗೆ ಕಡ್ಡಾಯವಾಗಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಬೇಕು.

ಯಾರಿಗೆ ಈ ಯೋಜನೆ ಅನ್ವಯಿಸುವುದಿಲ್ಲ?

  • ತಿಂಗಳಿಗೆ 10,000 ರೂ.ಗಿಂತ ಹೆಚ್ಚು ಪಿಂಚಣಿ ಪಡೆಯುವ ಸರ್ಕಾರಿ ನೌಕರರು (ನಿವೃತ್ತರು ಸೇರಿ).
  • ಆದಾಯ ತೆರಿಗೆ ಅಥವಾ ಜಿಎಸ್‌ಟಿ ಪಾವತಿದಾರರು.
  • ಸಾಂಸ್ಥಿಕ ಭೂಮಿ ಹೊಂದಿರುವವರು.
  • ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಜನರು ಅರ್ಜಿ ಸಲ್ಲಿಸಿದರೆ (ಒಬ್ಬರಿಗೆ ಮಾತ್ರ ಅವಕಾಶ).

ರೈತ ಐಡಿ ಪಡೆಯುವುದು ಹೇಗೆ?

pm kisan portal
  • ಹೊಸದಾಗಿ ಅರ್ಜಿ ಸಲ್ಲಿಸುವ ರೈತರು ಕೆಳಗಿನ ಹಂತಗಳನ್ನು ಅನುಸರಿಸಿ ರೈತ ಐಡಿ ಪಡೆಯಬಹುದು:
  • ಪಿಎಂ ಕಿಸಾನ್ ಅಧಿಕೃತ ಪೋರ್ಟಲ್ pmkisan.gov.in/RegistrationFormupdated.aspx ಗೆ ಭೇಟಿ ನೀಡಿ.
  • 'New Farmer Registration' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ನೀಡಿ, OTP ಮೂಲಕ ಪರಿಶೀಲಿಸಿ.
  • ಭೂಮಿ ವಿವರ (RTC/ಪಹಣಿ) ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಅಪ್‌ಲೋಡ್ ಮಾಡಿ.
  • ಅಧಿಕಾರಿಗಳ ಪರಿಶೀಲನೆಯ ನಂತರ ನಿಮಗೆ ನಿಮ್ಮ 'ರೈತ ಐಡಿ' ದೊರೆಯುತ್ತದೆ.

]]>
Mon, 05 Jan 2026 18:46:39 +0530 shivuagrico
Udyama sheelatha yojane&ಸ್ವಂತ ಉದ್ಯೋಗ ಆರಂಭಿಸಲು 2 ಲಕ್ಷ ರೂಪಾಯಿ ನೇರ ಖಾತೆಗೆ ಜಮಾ https://krushirushi.in/Udyama-sheelatha-yojane-2372 https://krushirushi.in/Udyama-sheelatha-yojane-2372 Udyama sheelatha yojane-ಸ್ವಂತ ಉದ್ಯೋಗ ಆರಂಭಿಸಲು 2 ಲಕ್ಷ ರೂ. ಸಹಾಯಧನ


ಕರ್ನಾಟಕ ಸರ್ಕಾರದ 2025-30ರ ಕೈಗಾರಿಕಾ ನೀತಿಯು ಯುವಕರು, ಮಹಿಳೆಯರು ಮತ್ತು ಹಿಂದುಳಿದ ವರ್ಗಗಳ ಆರ್ಥಿಕ ಕನಸುಗಳಿಗೆ ರೆಕ್ಕೆ ನೀಡುತ್ತಿದೆ! ಸ್ವಯಂ ಉದ್ಯೋಗ ಸ್ಥಾಪಿಸಲು ಭಾರಿ ಸಬ್ಸಿಡಿ, ಸುಲಭ ಸಾಲ ಮತ್ತು ಪರಿಶಿಷ್ಟ ಜಾತಿ/ಇತರ ಸಮುದಾಯದವರಿಗೆ ವಿಶೇಷ ಸಹಾಯಧನ ಲಭ್ಯವಿದೆ. ಸಣ್ಣ ವ್ಯಾಪಾರ, ಸಾರಿಗೆ, ಮಹಿಳಾ ಉದ್ಯಮಶೀಲತೆ - ಎಲ್ಲದಕ್ಕೂ ಆರ್ಥಿಕ ನೆರವು, ನಿಮ್ಮ ಕನಸು ನನಸಾಗಿಸಲು ಸರ್ಕಾರ ಸದಾ ಸಿದ್ಧ!

ಒಂದು ಉದ್ದಿಮೆ ಯಶಸ್ವಿಯಾಗಿ ಬೆಳೆಯಬೇಕೆಂದರೆ ಆರ್ಥಿಕ ಪ್ರೋತ್ಸಾಹ ಅತ್ಯಗತ್ಯ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು 2025-30ರ ಕೈಗಾರಿಕಾ ನೀತಿಯ ಅಡಿಯಲ್ಲಿ ನಿರುದ್ಯೋಗಿ ಯುವಕರು, ಮಹಿಳೆಯರು ಮತ್ತು ಹಿಂದುಳಿದ ವರ್ಗಗಳ ಆರ್ಥಿಕ ಸಬಲೀಕರಣಕ್ಕಾಗಿ ವಿವಿಧ ನಿಗಮಗಳ ಮೂಲಕ ಭಾರಿ ಸಬ್ಸಿಡಿ ಮತ್ತು ಸಾಲದ ಸೌಲಭ್ಯಗಳನ್ನು ಘೋಷಿಸಿದೆ. ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಹಾಗೂ ಸಮುದಾಯಗಳ ಆರ್ಥಿಕ ಸಬಲೀಕರಣಕ್ಕಾಗಿ ವಿವಿಧ ಅಭಿವೃದ್ಧಿ ನಿಗಮಗಳ ಮೂಲಕ ಉದ್ಯಮಶೀಲತಾ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಭಾರಿ ಸಹಾಯಧನವನ್ನು ನೀಡುತ್ತಿದೆ.

ಉದ್ಯಮಶೀಲತಾ ಅಭಿವೃದ್ಧಿ ಯೋಜನೆ ಎಂದರೇನು?

ಈ ಯೋಜನೆಯಡಿ ನಿರುದ್ಯೋಗಿ ಪುರುಷರು ಮತ್ತು ಮಹಿಳೆಯರು ಸಣ್ಣ ಕೈಗಾರಿಕೆ, ಸೇವಾ ವಲಯ ಅಥವಾ ವ್ಯಾಪಾರವನ್ನು ಪ್ರಾರಂಭಿಸಲು ಬ್ಯಾಂಕ್‌ಗಳ ಸಹಯೋಗದೊಂದಿಗೆ ಹಣಕಾಸಿನ ನೆರವು ಪಡೆಯಬಹುದು. ನೀವು ಸ್ವಂತ ಉದ್ಯೋಗ ಅಥವಾ ಸಾರಿಗೆ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದ್ದರೆ, ಪರಿಶಿಷ್ಟ ಜಾತಿ ಸಮುದಾಯದ ನಿರುದ್ಯೋಗ ಯುವಕ-ಯುವತಿಯರಿಗೆ ಈ ಯೋಜನೆಯಡಿ ಸ್ವಯಂ ಉದ್ಯೋಗ ಘಟಕಗಳನ್ನು ಆರಂಭಿಸಲು ಇಲಾಖೆಯ ಆಯಾ ನಿಗಮಗಳಿಂದ ಘಟಕ ವೆಚ್ಚ ಶೇ. 70 ರಷ್ಟು ಮತ್ತು ಗರಿಷ್ಠ ರೂ. 2.00 ಲಕ್ಷ ಸಹಾಯಧನ ನೀಡಲಾಗುವುದು. ಈ ಯೋಜನೆಯಡಿ ಪರಿಶಿಷ್ಟ ಜಾತಿಯ ಮಾದಿಗ ಜಾತಿಗೆ ಸೇರಿದ ನಿರುದ್ಯೋಗಿ ಪುರುಷರು ಮತ್ತು ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯಧನದ ಆರ್ಥಿಕ ನೆರವನ್ನು ಒದಗಿಸಲಾಗುವುದು.

ಯೋಜನೆಯ ಪ್ರಮುಖ ಹಂತಗಳು

  • ಐ.ಎಸ್.ಬಿ - 1 : ಈ ಯೋಜನೆಯಡಿ ಪರಿಶಿಷ್ಟ ಜಾತಿಯ ಮಾದಿಗ ಮತ್ತು ಸಂಬಂದಿತ ಜಾತಿಗೆ ಸೇರಿದ ನಿರುದ್ಯೋಗಿ ಪುರುಷ ಮತ್ತು ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ಘಟಕ ವೆಚ್ಚದ ಶೆ. 20 ರಷ್ಟು ಅಥವಾ ಗರಿಷ್ಟ ರೂ.1.00 ಲಕ್ಷಗಳವರೆಗೆ ಸಹಾಯಧನವನ್ನು ಮಂಜೂರು ಮಾಡಿ ಬ್ಯಾಂಕ್‌ ಸಹಯೋಗದೊಂದಿಗೆ ಯೋಜನೆಯನ್ನು ಅನುಷ್ಟಾನಗೊಳಿಸಲಾಗುವುದು.
  • ಐ.ಎಸ್.ಬಿ - 2 : ಈ ಯೋಜನೆಯಡಿ ಪರಿಶಿಷ್ಟ ಜಾತಿಯ ಮಾದಿಗ ಮತ್ತು ಸಂಬಂದಿತ ಜಾತಿಗೆ ಸೇರಿದ ನಿರುದ್ಯೋಗಿ ಪುರುಷರು ಮತ್ತು ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ಘಟಕ ವೆಚ್ಚದ ಶೆ. 70 ರಷ್ಟು ಅಥವಾ ಗರಿಷ್ಟ ರೂ.2.00 ಲಕ್ಷಗಳವರೆಗೆ ಸಹಾಯಧನವನ್ನು ಮಂಜೂರು ಮಾಡಿ ಬ್ಯಾಂಕ್‌ ಸಹಯೋಗದೊಂದಿಗೆ ಯೋಜನೆಯನ್ನು ಅನುಷ್ಟಾನಗೊಳಿಸಲಾಗುವುದು.
  • ಐ.ಎಸ್.ಬಿ - 3 : ಈ ಯೋಜನೆಯಡಿ ಪರಿಶಿಷ್ಟ ಜಾತಿಯ ಮಾದಿಗ ಮತ್ತು ಸಂಬಂದಿತ ಜಾತಿಗೆ ಸೇರಿದ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯಮ ಶೀಲತಾ ಅಭಿವೃದ್ಧಿ ಸ್ವಾವಲಂಬಿ ಸಾರಥಿ (ಸರಕು/ಟ್ಯಾಕ್ಸಿ) ಯೋಜನೆಯಡಿ 4 ಚಕ್ರದ ವಾಹನಗಳಿಗೆ ಘಟಕ ವೆಚ್ಚದ ಶೆ. 75 ರಷ್ಟು ಅಥವಾ ಗರಿಷ್ಟ ರೂ.4.00 ಲಕ್ಷಗಳವರೆಗೆ ಸಹಾಯಧನವನ್ನು ಮಂಜೂರು ಮಾಡಿ ಬ್ಯಾಂಕ್‌ ಸಹಯೋಗದೊಂದಿಗೆ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ.

ವಿವಿಧ ಅಭಿವೃದ್ಧಿ ನಿಗಮಗಳ ಯೋಜನೆಗಳು

  • ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ (SC) ವತಿಯಿಂದ ಸಣ್ಣ ವ್ಯಾಪಾರಗಳಿಗಾಗಿ 1 ಲಕ್ಷ ರೂ.ದ ನೆರವು ನೀಡಲಾಗುತ್ತಿದ್ದು, ಇದರಲ್ಲಿ 50,000 ರೂ. ಸಬ್ಸಿಡಿ ಮತ್ತು 50,000 ರೂ. ಸಾಲ ಸೌಲಭ್ಯ ಒದಗಿಸಲಾಗುತ್ತಿದೆ.
  • ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KMDC) ಅಡಿಯಲ್ಲಿ 'ಶ್ರಮ ಶಕ್ತಿ' ಯೋಜನೆಯ ಮೂಲಕ ಶೇ. 33ರಷ್ಟು (ಗರಿಷ್ಠ ₹1 ಲಕ್ಷ) ಸಬ್ಸಿಡಿ ಅಥವಾ ಸರಳ ಸಾಲದ ಆಯ್ಕೆಗಳನ್ನು ನೀಡಲಾಗುತ್ತಿದೆ.
  • ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುವ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ (ST) ಘಟಕ ವೆಚ್ಚದ ಶೇ. 70ರಷ್ಟು ಅಥವಾ ಗರಿಷ್ಠ 2.00 ಲಕ್ಷ ರೂ.ದವರೆಗೆ ಸಹಾಯಧನ ನೀಡುತ್ತಿದೆ.
  • ಬಂಜಾರ ಸಮುದಾಯದ ಏಳಿಗೆಗಾಗಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ (KTDC) ಕಿರು ಉದ್ದಿಮೆಗಳಿಗೆ ಶೇ. 50ರಷ್ಟು ಸಬ್ಸಿಡಿ ಒದಗಿಸುತ್ತಿದೆ.

ಕರ್ನಾಟಕ ಕೈಗಾರಿಕಾ ನೀತಿಯಡಿ ಉದ್ಯಮಶೀಲತೆ ಬೆಂಬಲ

ಕರ್ನಾಟಕದ ನೂತನ ಕೈಗಾರಿಕಾ ನೀತಿ 2025-30ರ ಅಡಿಯಲ್ಲಿ ರಾಜ್ಯ ಸರ್ಕಾರವು ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸಲು ಹತ್ತು ಹಲವು ಆಕರ್ಷಕ ಸೌಲಭ್ಯಗಳನ್ನು ಘೋಷಿಸಿದೆ. ಈ ನೀತಿಯಡಿ ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳಿಗೆ ಅವುಗಳ ಸ್ಥಿರ ಬಂಡವಾಳ ಹೂಡಿಕೆಯ ಮೇಲೆ ಶೇಕಡಾ 20 ರಿಂದ 30 ರವರೆಗೆ ಭಾರಿ ಸಬ್ಸಿಡಿಯನ್ನು ನೀಡಲಾಗುತ್ತಿದ್ದು, ಮಹಿಳಾ ಉದ್ಯಮಿಗಳ ನೇತೃತ್ವದ ಘಟಕಗಳಿಗೆ ಹೆಚ್ಚುವರಿಯಾಗಿ ಶೇಕಡಾ 5 ರಷ್ಟು ಪ್ರೋತ್ಸಾಹಕ ಸಬ್ಸಿಡಿ ಲಭ್ಯವಿದೆ. ಎಲೆಕ್ಟ್ರಾನಿಕ್ಸ್, ಬಾಹ್ಯಾಕಾಶ ಮತ್ತು ರಕ್ಷಣೆ, ಎಲೆಕ್ಟ್ರಿಕ್ ವಾಹನಗಳು (EV) ಹಾಗೂ ನವೀಕರಿಸಬಹುದಾದ ಇಂಧನದಂತಹ ಆದ್ಯತಾ ವಲಯಗಳಿಗೆ ವಿಶೇಷ ಪ್ಯಾಕೇಜ್‌ಗಳನ್ನು ನೀಡಲಾಗುತ್ತಿದೆ. ಇದರೊಂದಿಗೆ, ಉದ್ದಿಮೆದಾರರಿಗೆ ಆರ್ಥಿಕ ಹೊರೆ ತಗ್ಗಿಸಲು ಸತತ 5 ವರ್ಷಗಳ ಕಾಲ ವಿದ್ಯುತ್ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಮತ್ತು ಸ್ಥಿರ ಆಸ್ತಿಗಳ ಮೇಲಿನ ಮುದ್ರಾಂಕ ಶುಲ್ಕ ಹಾಗೂ ನೋಂದಣಿ ಶುಲ್ಕದ ಮರುಪಾವತಿಯಂತಹ ತೆರಿಗೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಅರ್ಹತೆ ಮತ್ತು ಮಾನದಂಡಗಳು

  • ಅರ್ಜಿದಾರರು ಪರಿಶಿಷ್ಟ ಜಾತಿಯ ಮಾದಿಗ ಮತ್ತು ಸಂಬಂಧಿತ ಸಮುದಾಯದವರಾಗಿರಬೇಕು. (ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಎಂದು ಪ್ರಮಾಣ ಪತ್ರವಿದ್ದರೆ, ಮೂಲ ಜಾತಿಯ ಸ್ವಯಂ ಘೋಷಣೆ ಸಲ್ಲಿಸಬೇಕು).
  • ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರಿಗೆ ರೂ. 1.50 ಲಕ್ಷ ಹಾಗೂ ನಗರ ಪ್ರದೇಶದವರಿಗೆ ರೂ. 2.00 ಲಕ್ಷ ಮೀರಿರಬಾರದು.
  • ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರಿಯಲ್ಲಿರಬಾರದು.
  • ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದ ಫಲಾನುಭವಿಗಳು ಅಥವಾ ಅವರ ಕುಟುಂಬದವರು ಅರ್ಹರಲ್ಲ.
  • ಉದ್ದಿಮೆ ಸ್ಥಾಪಿಸಲು ಕನಿಷ್ಠ 200 ಚದರ ಅಡಿ ಸ್ವಂತ ಅಥವಾ ಬಾಡಿಗೆ ಸ್ಥಳ ಹೊಂದಿರಬೇಕು.




ಪ್ರಮುಖ ನಿಯಮಗಳು

  • ಬ್ಯಾಂಕಿನಿಂದ ಸಾಲ ಮಂಜೂರಾದ ಘಟಕಗಳಿಗೆ ಮಾತ್ರ ಸರ್ಕಾರದ ಸಹಾಯಧನ ದೊರೆಯುತ್ತದೆ.
  • ಸಹಾಯಧನವನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡಲಾಗುತ್ತದೆ.
  • ಈ ಯೋಜನೆಯಡಿ ಪ್ರಯೋಜನ ಪಡೆಯುವ ಅಭ್ಯರ್ಥಿಗಳನ್ನು ನಿಗಮದ ಅಧಿಕೃತ ಆಯ್ಕೆ ಸಮಿತಿಯು ಕಡ್ಡಾಯವಾಗಿ ಆಯ್ಕೆ ಮಾಡಿರಬೇಕು.
  • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದವರಿಗೆ ರೂ. 1.50 ಲಕ್ಷ ಹಾಗೂ ನಗರ ಪ್ರದೇಶದವರಿಗೆ ರೂ. 2.00 ಲಕ್ಷ ಮಿತಿಯೊಳಗಿರಬೇಕು.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ 21 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ 50 ವರ್ಷದೊಳಗಿರಬೇಕು.
  • ಯೋಜನೆಯ ಸಹಾಯಧನವು ಕೇವಲ ಬ್ಯಾಂಕ್ ಸಾಲ ಮಂಜೂರಾದ ಘಟಕಗಳಿಗೆ ಮಾತ್ರ ಅನ್ವಯವಾಗುತ್ತದೆ ಮತ್ತು ಅದು ಮಂಜೂರಾತಿ ಪಡೆದ ನಂತರವೇ ಬಿಡುಗಡೆಯಾಗುತ್ತದೆ.
  • ಆಯ್ಕೆಯ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ಅಭ್ಯರ್ಥಿಯು ಅನರ್ಹನೆಂದು ಕಂಡುಬಂದಲ್ಲಿ, ಅವರ ಅರ್ಜಿಯನ್ನು ತಕ್ಷಣವೇ ತಿರಸ್ಕರಿಸಲಾಗುತ್ತದೆ.
  • ಸರ್ಕಾರದ ಸಹಾಯಧನವನ್ನು ನೇರವಾಗಿ ಫಲಾನುಭವಿಯ ಹೆಸರಿನಲ್ಲಿರುವ ಬ್ಯಾಂಕ್ ಸಾಲದ ಖಾತೆಗೆ ಬಿಡುಗಡೆ ಮಾಡಲಾಗುತ್ತದೆ.




ಸಲ್ಲಿಸಬೇಕಾದ ಅಗತ್ಯ ದಾಖಲೆಗಳು

  • ಭರ್ತಿ ಮಾಡಿದ ಅರ್ಜಿ ಮತ್ತು ಇತ್ತೀಚಿನ ಭಾವಚಿತ್ರ.
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ (RD ಸಂಖ್ಯೆ ಕಡ್ಡಾಯ).
  • ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್‌ಬುಕ್ ಪ್ರತಿ.
  • ವೃತ್ತಿ ಅಥವಾ ಕೆಲಸದ ಅನುಭವ ಪ್ರಮಾಣ ಪತ್ರ.
  • ಸಾರಿಗೆ ವಾಹನ ಯೋಜನೆಯಾಗಿದ್ದರೆ ವಾಹನ ಚಾಲನಾ ಪರವಾನಗಿ (DL).
  • ಉದ್ದಿಮೆಯ ಸ್ಥಳದ ಮಾಹಿತಿ ಮತ್ತು ಇತರೆ ಪೂರಕ ದಾಖಲೆಗಳು.

]]>
Mon, 05 Jan 2026 15:10:13 +0530 shivuagrico
Dairy farming&ಹೈನುಗಾರಿಕೆ ಯೋಜನೆಯಡಿ ಎಮ್ಮೆ& ಹಸು ಖರೀದಿಸಲು 1.25 ಲಕ್ಷ ರೂ. ಸಹಾಯಧನ https://krushirushi.in/Dairy-farming-2371 https://krushirushi.in/Dairy-farming-2371 Dairy farming-ಹೈನುಗಾರಿಕೆ ಯೋಜನೆಯಡಿ ಎಮ್ಮೆ- ಹಸು ಖರೀದಿಸಲು 1.25 ಲಕ್ಷ ರೂ. ಸಹಾಯಧನ


ಹೈನುಗಾರಿಕೆಯಲ್ಲಿ ಯಶಸ್ಸು ಸಾಧಿಸಲು ಬಯಸುವವರಿಗೆ ಕರ್ನಾಟಕ ಸರ್ಕಾರವು ಉತ್ತಮ ಅವಕಾಶವನ್ನು ಒದಗಿಸುತ್ತಿದೆ. ಪಶು ಭಾಗ್ಯ ಯೋಜನೆ ಅಡಿಯಲ್ಲಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದಂತಹ ಆರ್ಥಿಕವಾಗಿ ಹಿಂದುಳಿದವರಿಗೆ ಸಮಾಜ ಕಲ್ಯಾಣ ಇಲಾಖೆಯ ವಿವಿಧ ನಿಗಮಗಳ ಮೂಲಕ ಎರಡು ಹಸು ಅಥವಾ ಎಮ್ಮೆಗಳನ್ನು ಖರೀದಿಸಲು ಶೇ. 50% ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಯೋಜನೆಯಡಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಏನಿದು ಹೈನುಗಾರಿಕೆ ಯೋಜನೆ? ಇದರಿಂದ ರೈತರಿಗೆ ಏನೆಲ್ಲಾ ಪ್ರಯೋಜನಗಳಿವೆ? ಎಂಬುದನ್ನು ತಿಳಿಯೋಣ.

ಏನಿದು ಹೈನುಗಾರಿಕೆ ಯೋಜನೆ?

ಕರ್ನಾಟಕ ಹೈನುಗಾರಿಕೆ ಯೋಜನೆ , ಪಶು ಭಾಗ್ಯ ಯೋಜನೆ ಎಂದೂ ಕರೆಯಲ್ಪಡುತ್ತದೆ. ಇದು ರಾಜ್ಯ ಪ್ರಾಯೋಜಿತ ಉಪಕ್ರಮವಾಗಿದ್ದು, ಸಮಾಜ ಕಲ್ಯಾಣ ಇಲಾಖೆಯಿಂದ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಇದು ಕರ್ನಾಟಕದಲ್ಲಿ ಹೈನುಗಾರರನ್ನು ಬೆಂಬಲಿಸುವ ಮತ್ತು ಹೈನುಗಾರಿಕೆ ವಲಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ಡೈರಿ ಘಟಕಗಳನ್ನು ಸ್ಥಾಪಿಸಲು, ಪ್ರಾಣಿಗಳನ್ನು ಖರೀದಿಸಲು ಮತ್ತು ಸಾಲಗಳನ್ನು ಪಡೆಯಲು ಸಹಾಯಧನಗಳನ್ನು ಒಳಗೊಂಡಂತೆ ಡೈರಿ ರೈತರಿಗೆ ಹಣಕಾಸಿನ ನೆರವು, ತರಬೇತಿ ಮತ್ತು ಮಾರುಕಟ್ಟೆ ಬೆಂಬಲವನ್ನು ಒದಗಿಸುತ್ತದೆ. ಈ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ಹೈನುಗಾರಿಕೆಯ ಘಟಕಗಳನ್ನು ಸ್ಥಾಪಿಸಲು ಮತ್ತು ಅಭಿವೃದ್ಧಿಪಡಿಸಲು 1.25 ಲಕ್ಷ ರೂ.ಗಳ ಸಹಾಯಧನವನ್ನು ನೀಡಲಾಗುತ್ತದೆ, ಇದು ಸ್ಥಿರ ಜೀವನೋಪಾಯ ಮತ್ತು ಹಾಲು ಉತ್ಪಾದನೆಗೆ ನೆರವಾಗುತ್ತದೆ

ಯೋಜನೆಯ ಪ್ರಮುಖ ಅಂಶಗಳು

ಈ ಯೋಜನೆಯ ಮುಖ್ಯ ಉದ್ದೇಶವು ಗ್ರಾಮೀಣ ಪ್ರದೇಶದ ರೈತರಿಗೆ ಸ್ಥಿರ ಆದಾಯದ ಮೂಲವನ್ನು ಒದಗಿಸುವುದು ಮತ್ತು ಹೈನುಗಾರಿಕೆ ಕ್ಷೇತ್ರವನ್ನು ಬಲಪಡಿಸುವುದು. ಯೋಜನೆ ಅಡಿಯಲ್ಲಿ ಸಿಗುವ ಪ್ರಮುಖ ಪ್ರಯೋಜನಗಳೆಂದರೆ…

  • ಆರ್ಥಿಕ ನೆರವು: ಡೈರಿ ಘಟಕಗಳನ್ನು ಸ್ಥಾಪಿಸಲು, ಹಾಲು ನೀಡುವ ಪ್ರಾಣಿಗಳನ್ನು (ಹಸು, ಎಮ್ಮೆ) ಖರೀದಿಸಲು, ಮತ್ತು ಮೇವು ಅಭಿವೃದ್ಧಿಪಡಿಸಲು ಆರ್ಥಿಕ ಸಹಾಯಧನ ದೊರೆಯುತ್ತದೆ.
  • ತರಬೇತಿ ಮತ್ತು ಬೆಂಬಲ: ಪ್ರಾಣಿಗಳ ನಿರ್ವಹಣೆ, ಆಹಾರ ಪದ್ಧತಿ, ಮತ್ತು ರೋಗ ನಿಯಂತ್ರಣದ ಬಗ್ಗೆ ರೈತರಿಗೆ ತರಬೇತಿ ನೀಡಲಾಗುತ್ತದೆ.
  • ಸಾಲ ಮತ್ತು ವಿಮಾ ರಕ್ಷಣೆ: ಪ್ರಾಣಿಗಳನ್ನು ಖರೀದಿಸಲು ತೆಗೆದುಕೊಂಡ ಸಾಲಗಳ ಮೇಲೆ ಬಡ್ಡಿ ಸಬ್ಸಿಡಿ ಮತ್ತು ಜಾನುವಾರುಗಳಿಗೆ ವಿಮಾ ರಕ್ಷಣೆಯೂ ದೊರೆಯುತ್ತದೆ.
  • ಮಾರುಕಟ್ಟೆ ಬೆಂಬಲ: ಸಹಕಾರಿ ಸಂಘಗಳ ಮೂಲಕ ಹಾಲು ಉತ್ಪಾದಕರಿಗೆ ಉತ್ತಮ ಬೆಲೆ ಮತ್ತು ಮಾರುಕಟ್ಟೆ ಪ್ರವೇಶಕ್ಕೆ ಸಹಾಯ ದೊರೆಯುತ್ತದೆ.

 

ಯೋಜನೆಯಡಿ ದೊರೆಯುವ ಆರ್ಥಿಕ ನೆರವು ಎಷ್ಟು?

ಯೋಜನೆ ಅಡಿಯಲ್ಲಿ, ಅರ್ಹ ಫಲಾನುಭವಿಗಳಿಗೆ ಎರಡು ಹಸು ಅಥವಾ ಎಮ್ಮೆಗಳನ್ನು ಖರೀದಿಸಲು ಗರಿಷ್ಠ 1.25 ಲಕ್ಷ ರೂ. ಅಥವಾ ಶೇ. 50% ಸಬ್ಸಿಡಿ ನೀಡಲಾಗುತ್ತದೆ.

ಪ್ರಮುಖ ಅರ್ಹತಾ ಮಾನದಂಡಗಳೇನು?

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಸಮಾಜ ಕಲ್ಯಾಣ ಇಲಾಖೆಯಡಿ ಬರುವ ನಿಗಮಗಳ ವರ್ಗಗಳಿಗೆ ಸೇರಿದವರಾಗಿರಬೇಕು.
  • ಈ ಹಿಂದೆ ಇದೇ ಯೋಜನೆಯಡಿ ಸಬ್ಸಿಡಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಲ್ಲ.
  • ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರಿಯಲ್ಲಿರುವ ಕುಟುಂಬದ ಸದಸ್ಯರು ಅರ್ಜಿ ಸಲ್ಲಿಸುವಂತಿಲ್ಲ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂದು?

ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಎರಡು ಎಮ್ಮೆ ಅಥವಾ ಹಸುವನ್ನು ಖರೀದಿ ಮಾಡಲು ಸಹಾಯಹಧನವನ್ನು ಒದಗಿಸಲು ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 10, 2025 ಆಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಎರಡು ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು:

  • ಆನ್‌ಲೈನ್ ಮೂಲಕ: ನೀವು ಸ್ವತಃ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
  • ಕೇಂದ್ರಗಳ ಮೂಲಕ: ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಸಹಾಯ ಪಡೆಯಬಹುದು.

ಆನ್‌ಲೈನ್ ಅರ್ಜಿ ಸಲ್ಲಿಸುವ ಹಂತಗಳು:

  • ಅಧಿಕೃತ ವೆಬ್‌ಸೈಟ್‌ https://swdcorp.karnataka.gov.in/ADCLPortal/schemedetail/DFS ಗೆ ಭೇಟಿ ನೀಡಿ.
  • ವೆಬ್‌ಸೈಟ್‌ನಲ್ಲಿ "ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಮೊಬೈಲ್ ನಂಬರ್ ಮತ್ತು ಒಟಿಪಿ ಬಳಸಿ ಲಾಗಿನ್ ಆಗಿ.
  • ಅರ್ಜಿ ನಮೂನೆಯಲ್ಲಿ ಕೇಳಿದ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಕೊನೆಯಲ್ಲಿ "ಸಲ್ಲಿಸಿ" (Submit) ಬಟನ್ ಮೇಲೆ ಕ್ಲಿಕ್ ಮಾಡಿ.

ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಬ್ಯಾಂಕ್ ಪಾಸ್ ಬುಕ್
  • ಜಾತಿ ಮತ್ತು ಆದಾಯ ಪ್ರಮಾಣಪತ್ರ
  • ರೇಷನ್ ಕಾರ್ಡ್
  • ಮೊಬೈಲ್ ನಂಬರ್

ಸಹಾಯವಾಣಿ

ಯಾವುದೇ ಹೆಚ್ಚಿನ ಮಾಹಿತಿ ಬೇಕಿದ್ದರೆ, ನೀವು ಸಹಾಯವಾಣಿ ಸಂಖ್ಯೆ 9482300400 ಅನ್ನು ಸಂಪರ್ಕಿಸಬಹುದು.

]]>
Mon, 05 Jan 2026 08:04:39 +0530 shivuagrico
Namma hola Namma Dari&ನಿಮ್ಮ ಜಮೀನಿಗೆ ಹೋಗಲು ಸರಿಯಾದ ರಸ್ತೆ ಇಲ್ಲವೇ? ಹಾಗಾದರೆ ಸರ್ಕಾರದಿಂದ ಸಿಗಲಿದೆ 12.5 ಲಕ್ಷ ರೂ. ಸಹಾಯಧನ https://krushirushi.in/Namma-hola-Namma-Dari-2370 https://krushirushi.in/Namma-hola-Namma-Dari-2370 Namma hola Namma Dari-ನಿಮ್ಮ ಜಮೀನಿಗೆ ಹೋಗಲು ಸರಿಯಾದ ರಸ್ತೆ ಇಲ್ಲವೇ? ಹಾಗಾದರೆ ಸರ್ಕಾರದಿಂದ ಸಿಗಲಿದೆ 12.5 ಲಕ್ಷ ರೂ. ಸಹಾಯಧನ

ಕರ್ನಾಟಕ ಸರ್ಕಾರವು "ನಮ್ಮ ಹೊಲ ನಮ್ಮ ದಾರಿ" ಎಂಬ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಗ್ರಾಮೀಣ ರೈತರ ಜಮೀನುಗಳಿಗೆ ಸುಗಮ ರಸ್ತೆ ಸಂಪರ್ಕ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನವನ್ನು ಒದಗಿಸಲಾಗುತ್ತದೆ. ಇದರಿಂದ ಕೃಷಿ ಉತ್ಪನ್ನಗಳ ಸಾಗಾಣಿಕೆ ಸುಲಭವಾಗಲಿದ್ದು, ಸಾರಿಗೆ ವೆಚ್ಚ ತಗ್ಗಲಿದೆ. ಸ್ಥಳೀಯರಿಗೆ ಉದ್ಯೋಗಾವಕಾಶವೂ ದೊರೆಯಲಿದೆ. ಈ ಕುರಿತ ಸಮಗ್ರ ಮಾಹಿತಿ ಇಲ್ಲಿದೆ.

ಗ್ರಾಮೀಣ ಭಾಗದಲ್ಲಿ ರೈತರ ಬಳಿ ಜಮೀನು ಇದ್ದರೂ, ಅವುಗಳಿಗೆ ಹೋಗಲು ದಾರಿಯೇ ಇರುವುದಿಲ್ಲ. ಇದಕ್ಕಾಗಿ ಗಾಮಸ್ಥರ ಮಧ್ಯೆ ಜಗಳಗಳು, ಮನಸ್ಥಾಪಗಳು ನಡೆದಿದ್ದಿವೆ. ಇದಕ್ಕೆಲ್ಲಾ ಒಂದು ಪರಿಹಾರವನ್ನು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ನಮ್ಮ ಹೊಲ ನಮ್ಮ ದಾರಿ ಎಂಬ ಯೋಜನೆಯನ್ನು ರೂಪಿಸಿದೆ. ರಾಜ್ಯದ ಗ್ರಾಮೀಣ ಪ್ರದೇಶದ ರೈತರಿಗೆ ನೇರವಾಗಿ ಅವರ ಹೊಲ, ಗದ್ದೆ, ತೋಟ ಮತ್ತು ಜಮೀನುಗಳಿಗೆ ಸುಗಮ ರಸ್ತೆ ಸಂಪರ್ಕ ಕಲ್ಪಿಸುವ ಮಹತ್ವಕಾಂಕ್ಷೆಯ ಯೋಜನೆಯೇ "ನಮ್ಮ ಹೊಲ ನಮ್ಮ ದಾರಿ". ಈ ಯೋಜನೆಯು ಕೃಷಿ ಉತ್ಪನ್ನಗಳ ಸಾಗಾಣಿಕೆ ಮತ್ತು ಗ್ರಾಮೀಣ ಮೂಲಸೌಕರ್ಯಗಳ ಸುಧಾರಣೆಗೆ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಈ ಯೋಜನೆಯ ಮೂಲಕ ರೈತರು ತಮ್ಮ ಹೊಲಗಳಿಗೆ ಟ್ರ್ಯಾಕ್ಟರ್‌ಗಳನ್ನು ಒಯ್ಯಬಹುದಾದಷ್ಟು ದೊಡ್ಡದಾದ ದಾರಿಯನ್ನು ಮಾಡಿಕೊಳ್ಳಬಹುದಾಗಿದೆ.

ಏನಿದು ನಮ್ಮ ಹೊಲ ನಮ್ಮ ದಾರಿ ಯೋಜನೆ ?

"ನಮ್ಮ ಹೊಲ ನಮ್ಮ ದಾರಿ" ಎಂಬುದು ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಮಹತ್ವದ ಯೋಜನೆಯಾಗಿದ್ದು, ಗ್ರಾಮೀಣ ಪ್ರದೇಶದ ರೈತರ ಹೊಲ, ಗದ್ದೆ ಮತ್ತು ಜಮೀನುಗಳಿಗೆ ಸುಗಮ ರಸ್ತೆ ಸಂಪರ್ಕ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ರಾಜ್ಯದ 189 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ, ಪ್ರತಿ ಕ್ಷೇತ್ರಕ್ಕೆ 30 ಕಿ.ಮೀ ನಂತೆ, ಒಟ್ಟಾರೆ 5670 ಕಿ.ಮೀ ರಸ್ತೆಯನ್ನು ಪ್ರತಿ ಕಿ.ಮೀಗೆ ರೂ. 12.50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಗುರಿಯನ್ನು ಇದು ಹೊಂದಿದೆ. ಈ ಯೋಜನೆಗೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮತ್ತು ರಾಜ್ಯ ಸರ್ಕಾರದ ಲೆಕ್ಕ ಶೀರ್ಷಿಕೆ 3054 ರ ಅನುದಾನಗಳನ್ನು ಒಗ್ಗೂಡಿಸಿ ಬಳಸಲಾಗುತ್ತಿದ್ದು, ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಾಗಾಣಿಕೆ ವೆಚ್ಚ ತಗ್ಗಿಸುವಿಕೆ ಮತ್ತು ಗ್ರಾಮೀಣ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವಿಕೆ ಇದರ ಪ್ರಮುಖ ಪ್ರಯೋಜನಗಳಾಗಿವೆ.

ಯೋಜನೆಯ ಪ್ರಮುಖ ಅಂಶಗಳು

  • ರಸ್ತೆ ಸಂಪರ್ಕ: ರೈತರ ಹೊಲ/ಗದ್ದೆ/ತೋಟ/ಜಮೀನುಗಳಿಗೆ ನೇರ ರಸ್ತೆ ಸಂಪರ್ಕ ಒದಗಿಸುವುದು.
  • ಮಾರುಕಟ್ಟೆ ಸೌಲಭ್ಯ: ಬೆಳೆದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸುಲಭವಾಗಿ ಮತ್ತು ವೇಗವಾಗಿ ಸಾಗಾಣಿಕೆ ಮಾಡಲು ಅನುಕೂಲ ಮಾಡಿಕೊಡುವುದು.
  • ಸಾರಿಗೆ ವೆಚ್ಚ ಕಡಿತ: ರೈತರ ಕೃಷಿ ಉತ್ಪನ್ನಗಳ ಸಾಗಾಣಿಕೆ ವೆಚ್ಚವನ್ನು ಗಣನೀಯವಾಗಿ ತಗ್ಗಿಸುವುದು.
  • ಸುರಕ್ಷಿತ ಸಂಚಾರ: ಸಾರ್ವಜನಿಕರು ಮತ್ತು ರೈತರಿಗೆ ಸುರಕ್ಷಿತ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವುದು.
  • ಉದ್ಯೋಗ ಸೃಷ್ಟಿ: ಗ್ರಾಮೀಣ ಜನತೆಗೆ ಉದ್ಯೋಗಾವಕಾಶ ಒದಗಿಸಿ, ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವುದು ಮತ್ತು ನಗರ ವಲಸೆಯನ್ನು ತಡೆಯುವುದು.
  • ಜೀವನಮಟ್ಟ ಸುಧಾರಣೆ: ಒಟ್ಟಾರೆಯಾಗಿ ಗ್ರಾಮೀಣ ಜನತೆಯ ಜೀವನಮಟ್ಟವನ್ನು ಸುಧಾರಿಸುವುದು.

ರೈತರಿಗೆ ಆಗುವ ಪ್ರಮುಖ ಲಾಭಗಳು

  • ಟ್ರ್ಯಾಕ್ಟರ್, ಜೀಪ್ ಮತ್ತು ಲೋಡಿಂಗ್ ವಾಹನಗಳು ನೇರವಾಗಿ ಹೊಲಕ್ಕೆ ತಲುಪಲು ಸಾಧ್ಯ.
  • ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸುವ ವೆಚ್ಚ ಗಣನೀಯವಾಗಿ ಕಡಿಮೆಯಾಗುತ್ತದೆ.
  • ಮಳೆಗಾಲದಲ್ಲಿ ಕೆಸರಿನಲ್ಲಿ ಸಿಲುಕುವ ಸಮಸ್ಯೆಗಳಿಗೆ ಪರಿಹಾರ.
  • ಎಂಜಿನರೇಗಾ ಮೂಲಕ ಸ್ಥಳೀಯ ಕಾರ್ಮಿಕರಿಗೆ ಉದ್ಯೋಗಾವಕಾಶ ಲಭ್ಯ.
  • ಬೆಳೆಯನ್ನು ಮಾರುಕಟ್ಟೆಗೆ ವೇಗವಾಗಿ ಕೊಂಡೊಯ್ಯಲು ಸಾಧ್ಯವಾಗುತ್ತದೆ.
  • ರಸಗೊಬ್ಬರ, ಬೀಜಗಳು ಮತ್ತು ಕೃಷಿ ಯಂತ್ರಗಳನ್ನು ಸುಲಭವಾಗಿ ಹೊಲಕ್ಕೆ ತರಲು ಸಾಧ್ಯ.
  • ರಾತ್ರಿ ಸಮಯದಲ್ಲೂ ಹೊಲಕ್ಕೆ ಸುರಕ್ಷಿತವಾಗಿ ತೆರಳಲು ಅವಕಾಶ.
  • ಗ್ರಾಮೀಣ ಸಂಪರ್ಕತೆ ಮತ್ತು ಮೂಲಸೌಕರ್ಯಗಳ ಸುಧಾರಣೆ.

ರಸ್ತೆಯನ್ನು ಮಾಡಿಸಲು ಅರ್ಹತಾ ಮಾನದಂಡಗಳೇನು?

  • ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ, ಕಂದಾಯ ಇಲಾಖೆಯ ಗ್ರಾಮ ನಕಾಶೆಯಲ್ಲಿ ಅದು 'ಸಾರ್ವಜನಿಕ ರಸ್ತೆ', 'ಬಂಡಿದಾರಿ', ಅಥವಾ 'ಕಾಲುದಾರಿ' ಎಂದು ಅಧಿಕೃತವಾಗಿ ಗುರುತಿಸಲ್ಪಟ್ಟಿರಬೇಕು.
  • ಕೇವಲ ಒಬ್ಬ ರೈತ ಬಳಸುವ ರಸ್ತೆಗಳ ಬದಲು, ಅತೀ ಹೆಚ್ಚು ಬಳಕೆಯಾಗುವ ಮತ್ತು ಅನೇಕ ರೈತರು ಅವಲಂಬಿತರಾಗಿರುವ ರಸ್ತೆಗಳನ್ನು ಮಾತ್ರ ಆಯ್ಕೆ ಮಾಡಬೇಕು.
  • ಆಯ್ಕೆ ಪ್ರಕ್ರಿಯೆಯಲ್ಲಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು (ಎಂಜಿನರೇಗಾ ತಾಲ್ಲೂಕು ಕಾರ್ಯಕ್ರಮ ಅಧಿಕಾರಿ) ಸಂಬಂಧಪಟ್ಟ ಶಾಸಕರೊಂದಿಗೆ ಸಮಾಲೋಚಿಸಿ ಅಗತ್ಯವಿರುವ ಕಾಮಗಾರಿಗಳನ್ನು ಗುರುತಿಸುತ್ತಾರೆ, ಮತ್ತು ಈ ವೇಳೆ ಕಂದಾಯ ಇಲಾಖೆ ಹಾಗೂ ಪಂಚಾಯತ್‌ ರಾಜ್‌ ಅಭಿಯಂತರ ಇಲಾಖೆ ಅಧಿಕಾರಿಗಳ ಅಭಿಪ್ರಾಯಗಳನ್ನು ಪರಿಗಣಿಸಲಾಗುತ್ತದೆ.
  • ಅಂತಿಮವಾಗಿ, ಆಯ್ಕೆಯಾದ ಕಾಮಗಾರಿಗಳಿಗೆ ಆಯಾ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಕಡ್ಡಾಯವಾಗಿ ಅನುಮೋದನೆ ಪಡೆದು, ಅದರ ನಂತರ ವಿಶೇಷ ಕ್ರಿಯಾ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತದೆ.
  • ಕಾರ್ಯಕ್ರಮ ಅನುಷ್ಠಾನದ ಎಲ್ಲಾ ಹಂತಗಳಲ್ಲೂ ಜನರ ಸಹಭಾಗಿತ್ವವನ್ನು ಅವಶ್ಯಕವಾಗಿ ತೊಡಗಿಸಿಕೊಳ್ಳಬೇಕು.

ಖಾಸಗಿ ಜಮೀನಿಗೆ ಸರ್ಕಾರದ ಷರತ್ತುಗಳೇನು?

  • ರಸ್ತೆ ನಿರ್ಮಾಣಕ್ಕೆ ಜಮೀನು ನೀಡುವ ಭೂ ಮಾಲೀಕರಿಗೆ ಸರ್ಕಾರದಿಂದ ಯಾವುದೇ ಭೂಸ್ವಾಧೀನ ಪರಿಹಾರ ಹಣ ನೀಡಲಾಗುವುದಿಲ್ಲ.
  • ಜಮೀನು ಮಾಲೀಕರು ಸ್ವ-ಇಚ್ಛೆಯಿಂದ ಉಪನೋಂದಣಾಧಿಕಾರಿ ಕಚೇರಿಯಲ್ಲಿ "ನೋಂದಾಯಿತ ದಾನ ಪತ್ರ" ಮೂಲಕ ಜಾಗವನ್ನು ಗ್ರಾಮ ಪಂಚಾಯಿತಿ ಹೆಸರಿಗೆ ನೋಂದಣಿ ಮಾಡಬೇಕು.
  • ರೈತರು ಜಮೀನು ನೀಡಲು ಒಪ್ಪದಿದ್ದರೆ, ಆ ರಸ್ತೆಯನ್ನು ಕೈಬಿಟ್ಟು ಬೇರೊಂದು ರಸ್ತೆಯನ್ನು ಆಯ್ಕೆ ಮಾಡಬೇಕು ಎಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಒಂದು ಕಿ.ಮೀ. ರಸ್ತೆ ನಿರ್ಮಾಣಕ್ಕೆ 12.50 ಲಕ್ಷ ರೂ. ಅನುದಾನ

"ನಮ್ಮ ಹೊಲ ನಮ್ಮ ದಾರಿ" ಯೋಜನೆಯಡಿ ಪ್ರತಿ ಕಿ.ಮೀ ರಸ್ತೆ ನಿರ್ಮಾಣಕ್ಕೆ ನಿಗದಿಪಡಿಸಿದ ಒಟ್ಟು ರೂ. 12.50 ಲಕ್ಷ ವೆಚ್ಚವನ್ನು ಎರಡು ಅನುದಾನಗಳಡಿ ಹಂಚಿಕೆ ಮಾಡಲಾಗುತ್ತದೆ. ಅದರಲ್ಲಿ ಬಹುಪಾಲು, ಅಂದರೆ ರೂ. 9.00 ಲಕ್ಷ ವನ್ನು ಎಂಜಿನರೇಗಾ ಯೋಜನೆಯಡಿಯಲ್ಲಿ ಬಳಸಲಾಗುತ್ತದೆ, ಇದು ಮುಖ್ಯವಾಗಿ 3.75 ಮೀ ಅಗಲದ ರಸ್ತೆ ನಿರ್ಮಾಣದ ಕೆಲಸಗಳು, 1.00 ಕಿ.ಮೀ ಉದ್ದಕ್ಕೆ 0.075 ಮೀಟರ್ ದಪ್ಪದ ಗ್ರೇಡ್‌-2 ಮೆಟಲಿಂಗ್‌ ಮತ್ತು 0.400 ಕಿ.ಮೀ ಉದ್ದಕ್ಕೆ 0.075 ಮೀಟರ್ ದಪ್ಪದ ಗ್ರೇಡ್‌-3 ಮೆಟಲಿಂಗ್‌ ಕಾಮಗಾರಿಗಳನ್ನು ಒಳಗೊಂಡಿರುತ್ತದೆ; ಇನ್ನುಳಿದ ರೂ. 3.50 ಲಕ್ಷ ವನ್ನು ರಾಜ್ಯ ಸರ್ಕಾರದ ಲೆಕ್ಕ ಶೀರ್ಷಿಕೆ 3054 ರಡಿ ಮೀಸಲಿಡಲಾಗಿದ್ದು, ಇದು ರಸ್ತೆ ಕಾಮಗಾರಿಗಳಿಗೆ ಯಂತ್ರಗಳನ್ನು ಬಳಸುವ ಅಗತ್ಯವಿದ್ದಲ್ಲಿ ಆ ವೆಚ್ಚವನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ಅನುಷ್ಠಾನದ ಮಾರ್ಗಸೂಚಿಗಳೇನು?

  • ಕೂಲಿ ಮತ್ತು ಸಾಮಗ್ರಿಗಳ 60:40 ಅನುಪಾತವನ್ನು ಕಡ್ಡಾಯವಾಗಿ ಪಾಲಿಸುವುದು ಕಡ್ಡಾಯವಾಗಿದೆ.
  • ಅಕುಶಲ ಕೆಲಸವನ್ನು ಕೇವಲ ನೋಂದಾಯಿತ (ಉದ್ಯೋಗ ಚೀಟಿ ಹೊಂದಿದ) ಕೂಲಿಕಾರರಿಂದ ಮಾತ್ರ ನಿರ್ವಹಿಸಬೇಕು.
  • MGNREGA ಯೋಜನೆಯಡಿ ಅನುಮತಿಸಲಾದ ಯಂತ್ರಗಳನ್ನು ಹೊರತುಪಡಿಸಿ ಇತರೆ ಯಾವುದೇ ಯಂತ್ರಗಳನ್ನು ಬಳಸತಕ್ಕದ್ದಲ್ಲ. ಲೆಕ್ಕ ಶೀರ್ಷಿಕೆ 3054ರಡಿ ಮಾತ್ರ ಯಂತ್ರಗಳನ್ನು ಬಳಸಲು ಅವಕಾಶವಿದೆ.
  • ಕೇಂದ್ರ ಸರ್ಕಾರದ ಎಂಜಿನರೇಗಾ ಮಾರ್ಗಸೂಚಿಗಳು ಮತ್ತು KTPP ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
  • ಚಿಕ್ಕ ಸೇತುವೆಗಳು, ಮೋರಿಗಳಂತಹ ಸಂಪರ್ಕ ಸಾಧನಗಳನ್ನೂ ಕೈಗೆತ್ತಿಕೊಳ್ಳಬೇಕು ಮತ್ತು ಲಭ್ಯವಿರುವ ಇತರೆ ಯೋಜನೆಗಳ ಅನುದಾನಗಳೊಂದಿಗೆ (CSR, ಶಾಸಕರ ಅನುದಾನ, ಆರ್ಥಿಕ ದೇಣಿಗೆ) ಒಗ್ಗೂಡಿಸಬೇಕು.
  • ಅನುಷ್ಠಾನದ ಮೊದಲು, ಸಮಯದಲ್ಲಿ ಮತ್ತು ನಂತರದ ಹಂತಗಳಲ್ಲಿ ಕಾಮಗಾರಿಯ ಛಾಯಾಚಿತ್ರಗಳು ಮತ್ತು ಜಿಯೋ-ಟ್ಯಾಗ್ ಅನ್ನು NGSK ತಂತ್ರಾಂಶದಲ್ಲಿ ಕಡ್ಡಾಯವಾಗಿ ಅಳವಡಿಸಬೇಕು.

ನಿಮ್ಮ ಊರು/ತೋಟದ ರಸ್ತೆ ಮಂಜೂರು ಮಾಡಿಸುವುದು ಹೇಗೆ?

  • ಲಿಖಿತ ಮನವಿ ಸಲ್ಲಿಸಿ: ಮೊದಲು ನಿಮ್ಮ ಮತ್ತು ಅಕ್ಕಪಕ್ಕದ ರೈತರು ಒಟ್ಟಾಗಿ ಸೇರಿ, ರಸ್ತೆ ನಿರ್ಮಾಣದ ಅಗತ್ಯತೆಯನ್ನು ವಿವರಿಸುವ ಒಂದು ಲಿಖಿತ ಮನವಿಯನ್ನು ತಯಾರಿಸಿ. ಈ ಮನವಿಯನ್ನು ನಿಮ್ಮ ಗ್ರಾಮ ಪಂಚಾಯಿತಿಯ ಪಿಡಿಒ ಅವರಿಗೆ ಸಲ್ಲಿಸಿ, ರಸ್ತೆಯನ್ನು "ನಮ್ಮ ಹೊಲ ನಮ್ಮ ದಾರಿ" ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳುವಂತೆ ಕೋರಿ.
  • ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆಯಿರಿ: ರಸ್ತೆ ಕಾಮಗಾರಿಯು ಗ್ರಾಮ ಸಭೆಯ ಅನುಮೋದನೆಯ ಮೂಲಕವೇ ಆರಂಭವಾಗುವುದರಿಂದ, ಗ್ರಾಮ ಸಭೆ ನಡೆದಾಗ ತಪ್ಪದೇ ಹಾಜರಾಗಿ, ಈ ರಸ್ತೆ ಕಾಮಗಾರಿಯ ವಿಷಯವನ್ನು ಪ್ರಸ್ತಾಪಿಸಿ ಮತ್ತು ಕಡ್ಡಾಯವಾಗಿ ಅನುಮೋದನೆ ಪಡೆದುಕೊಳ್ಳಿ.
  • ಶಾಸಕರ ಗಮನಕ್ಕೆ ತನ್ನಿ: ಈ ಯೋಜನೆಯಡಿ ರಸ್ತೆಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಶಾಸಕರ ಸಮಾಲೋಚನೆ ಮುಖ್ಯವಾಗಿರುವುದರಿಂದ, ನಿಮ್ಮ ಕ್ಷೇತ್ರದ ಶಾಸಕರಿಗೆ ವೈಯಕ್ತಿಕವಾಗಿ ಮನವಿ ಸಲ್ಲಿಸಿ, ನಿಮ್ಮ ರಸ್ತೆಯ ಮಂಜೂರಾತಿಗಾಗಿ ಒತ್ತಡ ಮತ್ತು ಪ್ರೋತ್ಸಾಹ ನೀಡಿ.
  • ಜಿಯೋ ಟ್ಯಾಗ್ ಮತ್ತು ಉಸ್ತುವಾರಿ: ಕಾಮಗಾರಿ ಆರಂಭವಾದ ನಂತರ, ರಸ್ತೆ ಕಾಮಗಾರಿಯ ಗುಣಮಟ್ಟ ಮತ್ತು ಪಾರದರ್ಶಕತೆಗಾಗಿ, ಕಾಮಗಾರಿ ಪ್ರಾರಂಭವಾಗುವ ಮೊದಲು, ಕಾಮಗಾರಿ ನಡೆಯುವಾಗ ಮತ್ತು ಪೂರ್ಣಗೊಂಡ ನಂತರ ಫೋಟೋ ತೆಗೆದು 'ಜಿಯೋ ಟ್ಯಾಗ್' ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ (ಇದು ಅನುಷ್ಠಾನ ಮಾಡುವ ಅಧಿಕಾರಿಗಳ ಜವಾಬ್ದಾರಿಯಾದರೂ, ಸಾರ್ವಜನಿಕರೂ ಇದರ ಬಗ್ಗೆ ಗಮನ ಹರಿಸಬಹುದು).

]]>
Sun, 04 Jan 2026 07:56:37 +0530 shivuagrico