ಕರ್ನಾಟಕ ದಂತ ಭಾಗ್ಯ ಯೋಜನೆ: ದಂತಪಂಕ್ತಿ ಅಳವಡಿಕೆಗೆ ಸರ್ಕಾರದಿಂದ 3000 ರೂ. ನೆರವು; ಯಾರೆಲ್ಲಾ ಅರ್ಹರು?
ಕರ್ನಾಟಕ ದಂತ ಭಾಗ್ಯ ಯೋಜನೆ: ದಂತಪಂಕ್ತಿ ಅಳವಡಿಕೆಗೆ ಸರ್ಕಾರದಿಂದ 3000 ರೂ. ನೆರವು; ಯಾರೆಲ್ಲಾ ಅರ್ಹರು?

ಕರ್ನಾಟಕ ದಂತ ಭಾಗ್ಯ ಯೋಜನೆ: ದಂತಪಂಕ್ತಿ ಅಳವಡಿಕೆಗೆ ಸರ್ಕಾರದಿಂದ 3000 ರೂ. ನೆರವು; ಯಾರೆಲ್ಲಾ ಅರ್ಹರು?
ಹಲ್ಲಿದ್ದವನಿಗೆ ಕಡಲೆಯಿಲ್ಲ, ಕಡಲೆಯಿದ್ದವನಿಗೆ ಹಲ್ಲಿಲ್ಲ ಎಂಬ ಗಾದೆ ಮಾತನ್ನು ಕೇಳಿರುತ್ತೀರಿ. ಹಾಗೆಯೇ ವಯಸ್ಸಾಂತೆ ಹಾಳಾದ ಹಲ್ಲುಗಳನ್ನು ಬದಲಿಸಿ ಕೃತಕ ಹಲ್ಲುಗಳನ್ನು ಹಾಕಿಸಿಕೊಳ್ಳಬೇಕಾಗುತ್ತದೆ. ಅದರೆ, ಇವು ಬಲು ದುಬಾರಿ ಎಂಬ ಕಾರಣಕ್ಕೆ ಬಡವರಿಗೆ ಅಗ್ಗದ ದರದಲ್ಲಿ ದಂತ ಚಿಕಿತ್ಸೆ ಒದಗಿಸುವ ದಂತ ಭಾಗ್ಯ ಅಥವಾ ದಂದಪಂಕ್ತಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಈ ಯೋಜನೆಯಡಿ ಕರ್ನಾಟಕ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸೇರಿದ ಹಿರಿಯ ನಾಗರಿಕರಿಗೆ ಉಚಿತ ಮತ್ತು ಸಬ್ಸಿಡಿಯಲ್ಲಿ ದಂತಗಳನ್ನು ಒದಗಿಸುತ್ತದೆ. ಈ ಹಿನ್ನೆಲೆಯಲ್ಲಿ ಏನಿದು ದಂತ ಭಾಗ್ಯ ಯೋಜನೆ? ಈ ಯೋಜನೆಯಡಿ ಹಲ್ಲಿನ ಚಿಕಿತ್ಸೆಗೆ ಎಷ್ಟು ವೆಚ್ಚವಾಗಲಿದೆ? ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ ಎಂಬುದನ್ನು ತಿಳಿಯೋಣ.
ಯೋಜನೆಯ ಪ್ರಮುಖ ಲಕ್ಷಣಗಳು ಮತ್ತು ಪ್ರಯೋಜನಗಳು
ವಿಸ್ತೃತ ವಯೋಮಿತಿ: ಈ ಯೋಜನೆಯ ಪ್ರಮುಖ ಬದಲಾವಣೆಯೆಂದರೆ, ಅರ್ಹತಾ ವಯಸ್ಸನ್ನು 60 ವರ್ಷದಿಂದ 45 ವರ್ಷಕ್ಕೆ ಇಳಿಸಲಾಗಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಬಡ ನಾಗರಿಕರಿಗೆ ಯೋಜನೆಯ ಲಾಭ ಪಡೆಯಲು ಅವಕಾಶ ಸಿಗಲಿದೆ.
ಹೆಚ್ಚಿದ ಆರ್ಥಿಕ ನೆರವು: ಸಂಪೂರ್ಣ ದಂತಪಂಕ್ತಿಗೆ ನೀಡಲಾಗುತ್ತಿದ್ದ ಆರ್ಥಿಕ ನೆರವನ್ನು 2,000 ರೂ. ದಿಂದ 3,000 ರೂ.ಗೆ ಹೆಚ್ಚಿಸಲಾಗಿದೆ. ಭಾಗಶಃ ದಂತಪಂಕ್ತಿಗೆ ನೀಡಲಾಗುತ್ತಿದ್ದ 1,000 ರೂ. ಆರ್ಥಿಕ ನೆರವನ್ನು ಮುಂದುವರಿಸಲಾಗಿದೆ. ದಂತಪಂಕ್ತಿ ತಯಾರಿಕೆಗೆ ಹೆಚ್ಚುತ್ತಿರುವ ವೆಚ್ಚಗಳನ್ನು ಪರಿಗಣಿಸಿ ಈ ಬದಲಾವಣೆಗಳನ್ನು ಮಾಡಲಾಗಿದೆ.
ಉಚಿತ ದಂತಪಂಕ್ತಿಗಳು: ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ದಂತ ಚಿಕಿತ್ಸೆಯನ್ನು ಸುಲಭವಾಗಿ ಪಡೆಯಲು ಈ ಯೋಜನೆ ಸಹಕಾರಿಯಾಗಿದೆ. ದಂತಪಂಕ್ತಿಗಳ ಬೆಲೆ ಸಾಮಾನ್ಯವಾಗಿ ಹೆಚ್ಚಿರುವುದರಿಂದ, ಯೋಜನೆಯು ಬಡವರಿಗೆ ದಂತ ಚಿಕಿತ್ಸೆ ಪಡೆಯಲು ಅನುಕೂಲ ಮಾಡಿಕೊಡಲಿದೆ.
ಆರೋಗ್ಯ ಸುಧಾರಣೆ: ಸರಿಯಾಗಿ ಅಗಿಯುವ ಸಾಮರ್ಥ್ಯವನ್ನು ಮರಳಿ ಪಡೆಯುವುದರಿಂದ ಪೋಷಣೆ ಸುಧಾರಿಸಿ, ಒಟ್ಟಾರೆ ಆರೋಗ್ಯ ಉತ್ತಮಗೊಳ್ಳುತ್ತದೆ. ಹಾಳಾದ ಹಲ್ಲುಗಳು ಆರೋಗ್ಯವು ಅಪೌಷ್ಟಿಕತೆ ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗಬಹುದು.
ವ್ಯಾಪಕ ಪ್ರವೇಶಸಾಧ್ಯತೆ: ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ, ಈ ಯೋಜನೆ ರಾಜ್ಯದಾದ್ಯಂತ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ಸರ್ಕಾರಿ ಮತ್ತು ಖಾಸಗಿ ದಂತ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳ ಮೂಲಕ ತನ್ನ ಸೇವೆಗಳನ್ನು ವಿಸ್ತರಿಸಿದೆ.
ಮನೆಬಾಗಿಲಿಗೆ ಸೇವೆಗಳು: ಕೆಲವು ಗ್ರಾಮೀಣ ಪ್ರದೇಶಗಳಲ್ಲಿ, ವೃದ್ಧರಿಗೆ ಪ್ರಯಾಣಿಸಲು ಕಷ್ಟವಾಗುವುದರಿಂದ, ದಂತ ಶಿಬಿರಗಳನ್ನು ಆಯೋಜಿಸಿ ದಂತಪಂಕ್ತಿ ಸೇವೆಗಳನ್ನು ಅವರ ಗ್ರಾಮಗಳಲ್ಲೇ ಒದಗಿಸಲಾಗುತ್ತದೆ.
ಸಂಪರ್ಕ ಮತ್ತು ಗುರುತಿಸುವಿಕೆ: ಆಶಾ (ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ) ಕಾರ್ಯಕರ್ತರು ಅಗತ್ಯವಿರುವ ಹಿರಿಯ ನಾಗರಿಕರನ್ನು ಗುರುತಿಸಿ ದಂತ ವೈದ್ಯಕೀಯ ಕಾಲೇಜುಗಳಿಗೆ ಉಲ್ಲೇಖಿಸಲು ಸಹಾಯ ಮಾಡುತ್ತಾರೆ.
ಬಾಯಿ ಸ್ವಚ್ಛತೆ ಕುರಿತು ಶಿಕ್ಷಣ: ದಂತಪಂಕ್ತಿಗಳನ್ನು ನೀಡುವುದರ ಜೊತೆಗೆ, ಬಾಯಿ ಸ್ವಚ್ಛತೆ ಮತ್ತು ಸಾಮಾನ್ಯ ಬಾಯಿಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಸಹ ಈ ಯೋಜನೆ ಸಹಕಾರಿಯಾಗಿದೆ.
ದಂತ ಭಾಗ್ಯ ಯೋಜನೆಗೆ ಯಾರೆಲ್ಲಾ ಅರ್ಹರು?
ಕರ್ನಾಟಕ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗಾಗಿ ಜಾರಿಗೆ ತಂದಿರುವ ದಂತ ಭಾಗ್ಯ ಯೋಜನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ಬದಲಾವಣೆಗಳಿಂದಾಗಿ ಹೆಚ್ಚಿನ ಸಂಖ್ಯೆಯ ಜನರು ಯೋಜನೆಯ ಲಾಭ ಪಡೆಯಲು ಅರ್ಹರಾಗಿದ್ದಾರೆ. ವಯಸ್ಸಿನ ಮಿತಿ ಇಳಿಕೆ: ಯೋಜನೆಯಡಿ ದಂತಪಂಕ್ತಿ ಪಡೆಯಲು ಈ ಹಿಂದೆ ನಿಗದಿಪಡಿಸಿದ್ದ ವಯಸ್ಸಿನ ಮಿತಿ 60 ವರ್ಷವಾಗಿತ್ತು. ಈಗ ಈ ಮಿತಿಯನ್ನು 45 ವರ್ಷಕ್ಕೆ ಇಳಿಸಲಾಗಿದೆ. ಇದರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಕ್ತಿಗಳು ಕೂಡ ಉಚಿತ ದಂತಪಂಕ್ತಿಗಳನ್ನು ಪಡೆಯಬಹುದು.
(ಮರು ಸಿಂಚನ ಯೋಜನೆಯ ಬಗ್ಗೆ ತಿಳಿಯಿರಿ)
ಸರ್ಕಾರದಿಂದ ಆರ್ಥಿಕ ನೆರವು ಹೆಚ್ಚಳ
ಯೋಜನೆಯಡಿಯಲ್ಲಿ ದಂತಪಂಕ್ತಿಗಳ ತಯಾರಿಕೆಗೆ ತಗಲುವ ವೆಚ್ಚ ಹೆಚ್ಚಿರುವುದರಿಂದ, ಸರ್ಕಾರವು ನೀಡುವ ಸಹಾಯಧನವನ್ನು ಪರಿಷ್ಕರಿಸಿದೆ. ಆಸ್ಪತ್ರೆ/ ಕಾಲೇಜುಗಳಿಗೆ ಗುಣಮಟ್ಟದ ದಂತಪಂಕ್ತಿಯನ್ನು ನೀಡಲು ಪ್ರತಿ ರೋಗಿಗೆ 500 ರೂ.ನಿಂದ 750 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. 'ಪ್ರತಿ ಸಂಪೂರ್ಣ ದಂತ ಪಂಕ್ತಿಗೆ 750.00 ರೂ.ರಿಂದ 2000.00 ರೂ. ಗಳಿಗೆ ಹಾಗೂ ಭಾಗಶಃ ದಂತಪಂಕ್ತಿಗೆ 300.00 ರೂ. ರಿಂದ 1000 ರೂ.ಗಳಿಗೆ ಹೆಚ್ಚಿಸಲಾಗಿದೆ. ಈ ವೆಚ್ಚವನ್ನ ಸರ್ಕಾರವೇ ಭರಸಲಿದೆ. ಇದರಿಂದ ಉತ್ತಮ ಗುಣಮಟ್ಟದ ಸೇವೆ ಪಡೆಯಲು ಸಾಧ್ಯವಾಗುತ್ತದೆ. ಈ ಬದಲಾವಣೆಗಳು ದಂತಭಾಗ್ಯ ಯೋಜನೆಯನ್ನು ಹೆಚ್ಚು ಜನಸ್ನೇಹಿಯಾಗಿಸಿವೆ. ಈ ಪ್ರಮುಖ ಬದಲಾವಣೆಗಳಿಂದಾಗಿ ದಂತ ಭಾಗ್ಯ ಯೋಜನೆಯು ಹೆಚ್ಚಿನ ಅರ್ಹ ನಾಗರಿಕರಿಗೆ ಲಾಭ ಒದಗಿಸಲಿದೆ.
ಪರಿಷ್ಕೃತ ದರ
ಸಂಪೂರ್ಣ ದಂತಪಂಕ್ತಿ: ಈ ಮೊದಲು 2,000 ರೂ. ನೀಡಲಾಗುತ್ತಿತ್ತು, ಈಗ ಇದನ್ನು 3,000 ರೂ.ಗೆ ಹೆಚ್ಚಿಸಲಾಗಿದೆ.
ಭಾಗಶಃ ದಂತಪಂಕ್ತಿ: ಈ ಮೊದಲು 1,000 ರೂ. ನೀಡಲಾಗುತ್ತಿತ್ತು, ಈ ಸಹಾಯಧನವನ್ನು ಮುಂದುವರಿಸಲಾಗಿದೆ.