Ineligible pension holder-ರಾಜ್ಯದ 23 ಲಕ್ಷ ಜನರ ಪಿಂಚಣೆ ರದ್ದು
Ineligible pension holder-ರಾಜ್ಯದ 23 ಲಕ್ಷ ಜನರ ಪಿಂಚಣೆ ರದ್ದು

Ineligible pension holder-ರಾಜ್ಯದ 23 ಲಕ್ಷ ಜನರ ಪಿಂಚಣೆ ರದ್ದು
ಸಾಮಾಜಿಕ ಭದ್ರತೆ ಯೋಜನೆಯಡಿ ಅಸಹಾಯಕ, ಅಶಕ್ತ, ವೃದ್ಧರು, ಅಂಗವಿಕಲರು ಮತ್ತು ವಿಧವೆಯರಿಗೆ ನೀಡುವ ಮಾಸಿಕ ಪಿಂಚಣಿ ಪಡೆಯುತ್ತಿರುವವರ ಪೈಕಿ 23.19 ಲಕ್ಷ ಅನರ್ಹರನ್ನು ಗುರುತಿಸಿರುವ ರಾಜ್ಯ ಸರ್ಕಾರ ಕೂಡಲೇ ಅವರನ್ನು ಅರ್ಹರ ಪಟ್ಟಿಯಿಂದ ಹೊರಹಾಕಿ ಬೊಕ್ಕಸ ಸೋರಿಕೆ ತಪ್ಪಿಸಲು ಮುಂದಾಗಿದೆ.
ಮುಖ್ಯಾಂಶಗಳು
21.87 ಲಕ್ಷ ವೃದ್ಧಾಪ್ಯ ಫಲಾನುಭವಿಗಳ ಪೈಕಿ 9.04 ಲಕ್ಷ ಅನರ್ಹ
31.33 ಲಕ್ಷ ಸಂಧ್ಯಾ ಸುರಕ್ಷಾ ಕಾರ್ಡ್ ಪೈಕಿ 14.15 ಲಕ್ಷ ರದ್ದು
ಕುಟುಂಬ ದತ್ತಾಂಶ ದಿಂದ ಅನರ್ಹ ಫಲಾನುಭವಿಗಳು ಪತ್ತೆ
ರಾಜ್ಯದಲ್ಲಿ 65 ವರ್ಷ ಅಥವಾ ಮೇಲ್ಪಟ್ಟ ವಯಸ್ಸಿನ ಹಿರಿಯ ಜೀವಗಳನ್ನು ಅರ್ಥಿಕ ಸಂಕಷ್ಟದಿಂದ ಪಾರು ಮಾಡುವ ದಿಶೆಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಡಿ 1 ಸಾವಿರ ರೂ. ಮಾಸಾಶನ ನೀಡಲಾಗುತ್ತಿದೆ. ಇದೇ ರೀತಿಯಾಗಿ 60 ವರ್ಷ ಅಥವಾ ಮೇಲ್ಪಟ್ಟ ಹಿರಿಯರಿಗೆ ವೃದ್ಧಾಪ್ಯ ವೇತನ ಯೋಜನೆಯಡಿ 800 ರೂ. ಮಾಸಾಶನ ನೀಡಲಾಗುತ್ತಿದೆ.
ಪ್ರಸ್ತುತ ರಾಜ್ಯದಲ್ಲಿ ವೃದ್ಧಾಪ್ಯ ವೇತನ ಯೋಜನೆಯಡಿ 21.87 ಲಕ್ಷ ಹಾಗೂ ಸಂಧ್ಯಾ ಸುರಕ್ಷಾ ಯೋಜನೆಯಡಿ 31.33 ಲಕ್ಷ ಫಲಾನುಭವಿಗಳಿಗೆ ಪಿಂಚಣಿ ಪಡೆಯುತ್ತಿದ್ದಾರೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲು ಇದೆ. ಆದರೆ, ಅಧಿಕೃತ ದತ್ತಾಂಶಕ್ಕಿಂತ ಅಧಿಕ ಜನರು ಮಾಸಾಶನ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ರಾಜ್ಯ ಸರ್ಕಾರ ಫಲಾನುಭವಿಗಳ ವಿವರಗಳನ್ನು ಕುಟುಂಬ ದತ್ತಾಂಶದ ಮಾಹಿತಿಯೊಂದಿಗೆ ಹೋಲಿಕೆ ಮಾಡಿದೆ.
ನಿಗದಿಗಿಂತ ಕಡಿಮೆ ವಯಸ್ಸಿನವರು, ಶ್ರೀಮಂತರು, ಎಪಿಎಲ್ ಕಾರ್ಡ್, ಆದಾಯ ತೆರಿಗೆ ಪಾವತಿದಾರರು, ಅರೆ-ಸರ್ಕಾರಿ ನಿವೃತ್ತ ನೌಕರರ (ಎಚ್ಆರ್ಎಂಎಸ್) ದತ್ತಾಂಶಗೊಂದಿಗೆ ಸಂಯೋಜನೆ ಮಾಡಿದಾಗ ದೊಡ್ಡ ಪ್ರಮಾಣದಲ್ಲಿ ಅನರ್ಹರು ಪತ್ತೆಯಾಗಿದ್ದಾರೆ. ವೃದ್ಧಾಪ್ಯ ವೇತನ ಯೋಜನೆ ಅಂದಾಜು 9.04 ಲಕ್ಷ, ಸಂಧ್ಯಾ ಸುರಕ್ಷಾ ಅಡಿ 14.15 ಲಕ್ಷ ಅನರ್ಹರು ಬೆಳಕಿಗೆ ಬಂದಿದ್ದಾರೆ.
ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಕಾರ್ಡ್ಗಳನ್ನು ರದ್ದು ಮಾಡಲು ಕಂದಾಯ ಇಲಾಖೆ ಆದೇಶಿಸಿದೆ. ಬಡವರ ಪಿಂಚಣಿ ಹಣದಲ್ಲೂ ಉಳಿತಾಯಕ್ಕೂ ಮುಂದಾಗಿರುವ ಸರ್ಕಾರ ದಿವಾಳಿ ಅಂಚಿಗೆ ತಲುಪಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷ್ಯ ಬೇಕೆ?
| ಸುನಿಲ್ ಕುಮಾರ್ ಕಾರ್ಕಳ ಶಾಸಕ
ಸರ್ಕಾರಕ್ಕೆ ಲಾಭವೇನು?
1. ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ಉಳಿತಾಯ
2. ಅರ್ಹರಿಗೆ ಯೋಜನೆ ಲಾಭ ಸಿಗುವ ತೃಪ್ತಿ
3. ಯೋಜನೆ ದುರು ಪಯೋಗಕ್ಕೆ ಕಡಿವಾಣ
4. ನೈಜ ಹೊಸ ಫಲಾನು ಭವಿಗಳಿಗೆ ಅನುಕೂಲ
5. ಆಡಳಿತ ಯಂತ್ರದ ಮೇಲೆ ಹೊರೆ ಕಡಿಮೆ
9 ಸಾವಿರ ಕೋಟಿ ರೂಪಾಯಿ ವೆಚ್ಚ
ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಕೇಂದ್ರದ ಪಾಲು ಅತ್ಯಲ್ಪ. ಅಂದರೆ ಒಂದು ಸಾವಿರ ಕೋಟಿ ರೂ.ಗಿಂತ ಕಡಿಮೆ ವೆಚ್ಚ ಮಾಡುತ್ತಿದೆ. ಆದರೆ ರಾಜ್ಯ ಸರ್ಕಾರ 9 ಸಾವಿರ ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡುತ್ತಿದೆ. ಇದೀಗ ಅನರ್ಹರನ್ನು ಪಟ್ಟಿಯಿಂದ ಹೊರಗಿಟ್ಟರೆ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಹೊರೆ ಕಡಿಮೆಯಾಗಲಿದೆ.
ಅನರ್ಹರನ್ನು ಕಂಡು ಹಿಡಿದಿದ್ದು ಹೇಗೆ?
ಎಚ್ಆರ್ಎಂಎಸ್ ಮೂಲಕ ಅನರ್ಹ ಪಿಂಚಣಿದಾರರು ಪತ್ತೆ
ಆದಾಯ ತೆರಿಗೆ ಪಾವತಿಸುವವರ ಮಾಹಿತಿ ಮೂಲಕವೂ ಬೆಳಕಿಗೆ
ಆಧಾರ್ ಕಾರ್ಡ್ನ ದತ್ತಾಂಶ ಆಧರಿಸಿ ವಯೋಮಾನದಲ್ಲಿ ಸ್ಪಷ್ಟತೆ
ಕುಟುಂಬ ತಂತ್ರಾಂಶದಲ್ಲಿನ ದತ್ತಾಂಶದ ವಿಶ್ಲೇಷಣೆಯಲ್ಲೂ ಮಾಹಿತಿ
ಅನರ್ಹ ಪಡಿತರದಾರರು 44 ಲಕ್ಷ
ರಾಜ್ಯದಲ್ಲಿ 44 ಲಕ್ಷ ಅನರ್ಹ ಪಡಿತರ ಫಲಾನುಭವಿಗಳು ಇದ್ದಾರೆ ಎಂದು ಪತ್ತೆಹಚ್ಚಿ ಕಾರ್ಡ್ ರದ್ದುಪಡಿಸಲು ರಾಜ್ಯ ಸರ್ಕಾರ ಥರ್ಡ್ ಪಾರ್ಟಿ ಸರ್ವೆಗೆ ನಿರ್ಧರಿಸಿದೆ. 2011ರ ಜನಸಂಖ್ಯೆ ದತ್ತಾಂಶದ ಪ್ರಕಾರ 4,01,93,130 ಸ್ವೀಕೃತದಾರರ ಮಿತಿ ನಿಗದಿ ಮಾಡಲಾಗಿದೆ. ಆದರೆ, 44 ಲಕ್ಷ ಹೆಚ್ಚುವರಿ ಕಾರ್ಡ್ ಇರುವುದಾಗಿ ಹೇಳುತ್ತಿದೆ.
Pension amount status check-ಪಿಂಚಣೆ ಹಣ 1200 ರಿಂದ 2000 ಕ್ಕೆ ಹೆಚ್ಚಳ
ಕೇಂದ್ರ ಸರ್ಕಾರ ಇತ್ತೀಚೆಗೆ ವಿಧವಾ ಪಿಂಚಣಿ ಯೋಜನೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ, ಇದು ಲಕ್ಷಾಂತರ ಮಹಿಳೆಯರಿಗೆ ಪರಿಹಾರವನ್ನು ತರುತ್ತದೆ. ಈ ಹೆಚ್ಚಳದೊಂದಿಗೆ, ಪಿಂಚಣಿ ಮೊತ್ತವನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದ್ದು, ಇದರಿಂದಾಗಿ ಮಹಿಳೆಯರು ಉತ್ತಮ ಆರ್ಥಿಕ ಸಹಾಯವನ್ನು ಪಡೆಯಬಹುದು.
ವಿಧವಾ ಪಿಂಚಣಿ ಯೋಜನೆಯಡಿಯಲ್ಲಿ ಪಡೆಯುವ ಮೊತ್ತವನ್ನು ಮಹತ್ತರವಾಗಿ ಹೆಚ್ಚಿಸಲಾಗಿದೆ. ಮೊದಲು ಈ ಯೋಜನೆಯಲ್ಲಿ ತಿಂಗಳಿಗೆ 500 ರಿಂದ 1000 ರೂಪಾಯಿಗಳವರೆಗೆ ಸಿಗುತ್ತಿತ್ತು ಆದರೆ ಈಗ ಅದನ್ನು ತಿಂಗಳಿಗೆ 2000 ರಿಂದ 3000 ಕ್ಕೆ ಹೆಚ್ಚಿಸಲಾಗಿದೆ. ಇದರರ್ಥ ಮಹಿಳೆಯರು ಮೊದಲಿಗಿಂತ ಹೆಚ್ಚಿನ ಆರ್ಥಿಕ ಸಹಾಯವನ್ನು ಪಡೆಯಲು ಸಾಧ್ಯವಾಗುತ್ತದೆ, ಆದರೂ ಪ್ರತಿ ರಾಜ್ಯ ಸರ್ಕಾರವನ್ನು ಅವಲಂಬಿಸಿ ಮೊತ್ತವು ಸ್ವಲ್ಪ ಬದಲಾಗಬಹುದು. ಆದರೆ ಕೇಂದ್ರ ಸರ್ಕಾರದ ಶಿಫಾರಸಿನ ನಂತರ, ಇದನ್ನು ಅನೇಕ ರಾಜ್ಯಗಳಲ್ಲಿ ಜಾರಿಗೆ ತರಲಾಗಿದ್ದು, ಇದು ಮಹಿಳೆಯರ ಜೀವನವನ್ನು ಸ್ವಲ್ಪ ಸುಲಭಗೊಳಿಸುತ್ತದೆ.
ಪ್ರಮುಖ ಬದಲಾವಣೆಗಳು
ಪಿಂಚಣಿ ಮೊತ್ತ ₹1000 ದಿಂದ ₹2000 ಕ್ಕೆ ಏರಿಕೆ.
ಈಗ ನೀವು ಪ್ರತಿ ತಿಂಗಳು ₹2000 ರಿಂದ ₹3000 ಪಡೆಯುತ್ತೀರಿ.
ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ನಿಯಮಗಳು.
ಈ ಯೋಜನೆಯ ಲಾಭವನ್ನು ಯಾರು ಪಡೆಯಬಹುದು
ಮಹಿಳೆಯ ವಯಸ್ಸು 18 ವರ್ಷಗಳು ಆಗಿರಬೇಕು.
ಮಹಿಳೆಯ ವಾರ್ಷಿಕ ಆದಾಯವು ಸರ್ಕಾರ ನಿಗದಿಪಡಿಸಿದ ಮಿತಿಗಿಂತ ಕಡಿಮೆಯಿರಬೇಕು.
ಮಹಿಳೆಗೆ ಬೇರೆ ಯಾವುದೇ ಸರ್ಕಾರಿ ಪಿಂಚಣಿ ಯೋಜನೆಯ ಲಾಭ ಸಿಗಬಾರದು
ಮಹಿಳೆಯ ಹೆಸರಿನಲ್ಲಿ ಯಾವುದೇ ದೊಡ್ಡ ಆಸ್ತಿ ಅಥವಾ ಕೃಷಿ ಭೂಮಿ ಇರಬಾರದು.
ಈ ಷರತ್ತುಗಳನ್ನು ಪೂರೈಸುವ ಮಹಿಳೆಯರು ಈ ಯೋಜನೆಯ ಲಾಭ ಪಡೆಯಬಹುದು.
ಪತಿಯ ಮರಣದ ನಂತರ ಆರ್ಥಿಕವಾಗಿ ದುರ್ಬಲರಾಗಿರುವ ಮತ್ತು ಉತ್ತಮ ಜೀವನ ನಡೆಸಲು ಸಹಾಯ ಬಯಸುವ ಮಹಿಳೆಯರಿಗಾಗಿ ಈ ಯೋಜನೆ ಇದೆ.
ಅರ್ಜಿ ಸಲ್ಲಿಸುವುದು ಹೇಗೆ?
ನೀವು ಈ ಯೋಜನೆಯ ಲಾಭ ಪಡೆಯಲು ಬಯಸಿದರೆ, ಅರ್ಜಿ ಸಲ್ಲಿಸುವುದು ತುಂಬಾ ಸುಲಭ. ನೀವು ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ಅರ್ಜಿ ಸಲ್ಲಿಸಬಹುದು.
ರಾಜ್ಯಗಳಾದ್ಯಂತ ಪಿಂಚಣಿ ಮೊತ್ತ
ದೇಶದ ವಿವಿಧ ರಾಜ್ಯಗಳಲ್ಲಿ ಪಿಂಚಣಿ ಮೊತ್ತವು ಬದಲಾಗಬಹುದು. ಕೆಲವು ರಾಜ್ಯಗಳ ಪಿಂಚಣಿ ಮೊತ್ತದ ಬಗ್ಗೆ ಇಲ್ಲಿದೆ ಮಾಹಿತಿ
ರಾಜ್ಯ ಹಿಂದಿನ ಮೊತ್ತ (₹) ಹೊಸ ಮೊತ್ತ (₹)
ಉತ್ತರ ಪ್ರದೇಶ 500 1500₹
ಬಿಹಾರ 600 2000₹
ರಾಜಸ್ಥಾನ 750 2500₹
ಮಧ್ಯಪ್ರದೇಶ 1000 3000₹
ಹರಿಯಾಣ 1200 2500₹
ಮಹಾರಾಷ್ಟ್ರ 800 2000₹
ಕರ್ನಾಟಕ 900 2200₹
ಎಲ್ಲಾ ರೀತಿಯ ಪಿಂಚಣೆ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://dssp.karnataka.gov.in/dssp/villageWise_list_Of_beneficiaries.aspx
ನಂತರ ನಿಮ್ಮ ಜಿಲ್ಲೆ,ತಾಲೂಕು,ಗ್ರಾಮ ಅಥವಾ ಪಟ್ಟಣ select ಮಾಡಿ, ಹೊಬಳಿ,ಗ್ರಾಮ select ಮಾಡಿ,Captch type ಮಾಡಿ, Search ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ನಿಮ್ಮ ಗ್ರಾಮದಲ್ಲಿ ಪಿಂಚಣಿ ಪಡೆಯುವವರ ಹೆಸರು ಸಿಗಲಿದೆ
(ಸೂಚನೆ-Desktop mode open ಮಾಡಿಕೊಳ್ಳಿ)
Pension status-ಈ ತಿಂಗಳ ನಿಮ್ಮ ಪಿಂಚಣೆ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ
ಮೊದಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://dssp.karnataka.gov.in/dssp/Beneficiary_Status.aspx
ನಂತರ ನಿಮ್ಮ ಗ್ರಾಮದ ಪಟ್ಟಿಯಲ್ಲಿ ನಿಮ್ಮ beneficiary ID ಹಾಕಿ,captcha type ಮಾಡಿ search ಮೇಲೆ ಕ್ಲಿಕ್ ಮಾಡಿ
ನಂತರ click here to get payment details from SSP portal ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ beneficiary ID ಹಾಗೂ captcha code ಹಾಕಿ search ಮೇಲೆ ಕ್ಲಿಕ್ ಮಾಡಿ
ಈ ಕೆಳಗಿನಂತೆ ಇಲ್ಲಿಯವರೆಗೆ ಜಮಾ ಆದ ಪಿಂಚಣೆ ಹಣ ಮಾಹಿತಿ ದೊರೆಯಲಿದೆ
ಹೀಗೂ ಚೆಕ್ ಮಾಡಬಹುದು
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application ಡೌನ್ಲೊಡ್ ಮಾಡಿ,install ಮಾಡಿಕೊಳ್ಳಿ
https://play.google.com/store/apps/details?id=com.dbtkarnataka
ನಂತರ ನಿಮ್ಮ ಆಧಾರ್ ನಂಬರ್(Aadhaar number) ಹಾಕಿ Get OTP ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Varify OTP ಮೇಲೆ ಕ್ಲಿಕ್ ಮಾಡಿ
ನಂತರ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ
ನಂತರ payment status ಮೇಲೆ ಕ್ಲಿಕ್ ಮಾಡಿ
ನಂತರ pension ಮೇಲೆ ಕ್ಲಿಕ್ ಮಾಡಿ
ನಂತರ ಇಲ್ಲಿಯವರೆಗೂ ಜಮಾ ಆದ ಪಿಂಚಣೆ ಹಣ(pension amount)ಮಾಹಿತಿ ಸಿಗಲಿದೆ.