Kalu dari-ನಿಮ್ಮ ಜಮೀನಿಗೆ ಹೊಗಲು ಯಾರಾದರೂ ದಾರಿ ಬಿಡದಿದ್ದರೆ ಹೀಗೆ ಮಾಡಿ,ನಿಮ್ಮ ಗ್ರಾಮದ ಕಾಲು ದಾರಿ,ಬಂಡಿ ಜಾಡು ಇರುವ ಗ್ರಾಮನಕ್ಷೆ ಡೌನ್ಲೋಡ್ ಮಾಡಿಕೊಳ್ಳಿ-Village map

<Krushirushi> <ಕಾಲುದಾರಿ> <ಬಂಡಿದಾರಿ> <villagemap> <ಗ್ರಾಮನಕ್ಷೆ> <ಬಂಡಿಜಾಡು> <kaludari> <bandijadu>

Kalu dari-ನಿಮ್ಮ ಜಮೀನಿಗೆ ಹೊಗಲು ಯಾರಾದರೂ ದಾರಿ ಬಿಡದಿದ್ದರೆ ಹೀಗೆ ಮಾಡಿ,ನಿಮ್ಮ ಗ್ರಾಮದ ಕಾಲು ದಾರಿ,ಬಂಡಿ ಜಾಡು ಇರುವ ಗ್ರಾಮನಕ್ಷೆ ಡೌನ್ಲೋಡ್ ಮಾಡಿಕೊಳ್ಳಿ-Village map

Village map-ಕಾಲುದಾರಿ,ಬಂಡಿ ಜಾಡು ಕೂಡ ರಸ್ತೆಗಳೇ,ಯಾರೂ ಕೂಡ ತಡೆಯುವ ಹಾಗಿಲ್ಲ-ಹೈಕೊರ್ಟ್ ಮಹತ್ವದ ಆದೇಶ,ನಿಮ್ಮ ಗ್ರಾಮದ ಕಾಲು ದಾರಿ,ಬಂಡಿ ಜಾಡು ಇರುವ ಗ್ರಾಮನಕ್ಷೆ ಡೌನ್ಲೋಡ್ ಮಾಡಿಕೊಳ್ಳಿ

ರಸ್ತೆಗಳು ಎಂಬ ಪರಿಕಲ್ಪನೆಯಲ್ಲಿ ಕಾಲುದಾರಿ(Kalu Dari),
ಬಂಡಿ ಜಾಡು(Bandi jadu)ಕೂಡಾ ಒಳಗೊಂಡಿರುತ್ತವೆ' ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಭೂಸ್ವಾಧೀನ ಕಾಯ್ದೆಯಡಿ ಜಮೀಣು ಸ್ವಾಧೀನಪಡಿಸಿಕೊಂಡ ಮಾತ್ರಕ್ಕೆ 'ಬಿ ಖರಾಬ್' ಭೂಮಿಯಲ್ಲಿ ಸಾರ್ವಜನಿಕರ ಹಕ್ಕನ್ನು ರದ್ದುಪಡಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

'ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಕಲಂ 67ರ ಪ್ರಕಾರ ಎಲ್ಲಾ ಸಾರ್ವಜನಿಕ ರಸ್ತೆಗಳು, ಬೀದಿಗಳು, ಓಣಿಗಳು, ಪಥಗಳು, ಸೇತುವೆಗಳು, ಕಂದಕಗಳು, ತಡೆಗೋಡೆಗಳು ಮತ್ತು ಬೇಲಿಗಳು ಸರ್ಕಾರಕ್ಕೆ ಸೇರಿವೆ ಎಂದು ಸೂಚಿಸುತ್ತದೆ. ಕಾಲುದಾರಿ(Klaudari) ಅಥವಾ ಬಂಡಿ ಜಾಡು (Bandi jadu)ಎಂಬ ಗಾಡಿ ಜಾಡು ಈ ಹಿಂದೆ ಕರೆಯಲಾಗುತ್ತಿದ್ದ ರಸ್ತೆಗಳೆನಿಸಿವೆ' ಎಂದು ನ್ಯಾಯಪೀಠ ಹೇಳಿದೆ.


'ಕಾಲುದಾರಿ, ಬಂಡಿ ಜಾಡು ಸ್ಥಳವನ್ನು ಗ್ರಾಮದ ನಕ್ಷೆಯಲ್ಲಿ(Village map) ಮತ್ತು ಸಂಬಂಧಿತ ಕಂದಾಯ ದಾಖಲೆಗಳಲ್ಲಿ ಗುರುತಿಸಲಾಗಿದೆ. ಭೂಮಾಲೀಕರಿಗೆ ಸಂಬಂಧಿಸಿದಂತೆ ಈ ಭಾಗವನ್ನು 'ಬಿ ಖರಾಬ್' ಎಂದು ವರ್ಗೀಕರಿಸಲಾಗಿದೆ. ಈ ಜಮೀನುಗಳು ಸರ್ಕಾರಕ್ಕೆ ಸೇರಿದ್ದರೂ, ಸಾರ್ವಜನಿಕರ ಹಕ್ಕನ್ನೂ ನೀಡಲಾಗಿರುತ್ತದೆ' ಎಂದು ನ್ಯಾಯಪೀಠ ತಿಳಿಸಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 68ರ ಪ್ರಕಾರ 'ಬಿ
ಖರಾಬ್'ನಲ್ಲಿ ಸಾರ್ವಜನಿಕರ ಹಕ್ಕನ್ನು ಕಸಿದುಕೊಳ್ಳಲಾಗಿಲ್ಲ. ಈ ಸ್ಥಳದ ಮತ್ತು ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರು ಅಥವಾ ಸಾರ್ವಜನಿಕರು ಕಾಲುದಾರಿ ಬಳಸಲು ಅರ್ಹರಾಗಿರುತ್ತಾರೆ. ಹಾಗಾಗಿ, ಅರ್ಜಿದಾರರು ಈ ಭೂಮಿಯನ್ನು ಮೀಸಲಿಡಬೇಕಾಗಿತ್ತು ಮತ್ತು ಅದನ್ನು ಮಾರುಕಟ್ಟೆ ಪ್ರಾಂಗಣದ ಉದ್ದೇಶಗಳಿಗಾಗಿ ಬಳಸಬಾರದು' ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ರೈತರಿಗೆ ತಮ್ಮ ಜಮೀನಿಗೆ ಹೋಗಲು ದಾರಿಯಿಲ್ಲದೆ ಸಾಕಷ್ಟು ಕಷ್ಟ ಪಡುತ್ತಿರುತ್ತಾರೆ. ಜಮೀನು ಹತ್ತಿರವೇ ಇರುತ್ತದೆ. ಆದರೆ ಎತ್ತಿನ ಬಂಡಿ ಹೋಗುವ ದಾರಿಯಿಲ್ಲದೆ ಬಹಳಷ್ಟು ತೊಂದರೆ ಅನುಭವಿಸುತ್ತಿರುತ್ತಾರೆ. ಅದಲ್ಲದೆ ಆದರೆ ಕೆಲವರಿಗೆ ತಮ್ಮ ಜಮೀನಿಗೆ ಹೋಗಲು ದಾರಿಯೇ ಇಲ್ಲ.

ಅಕ್ಕಪಕ್ಕದ ಜಮೀನುಗಳಿಗೆ ದಾರಿ ಮಾಡಿಕೊಡದೆ ತೊಂದರೆ ಕೊಡುತ್ತಾರೆ.ಆದರೆ ಸರ್ಕಾರ ಈ ಕುರಿತು ಹೊಸ ನಿಯಮಾವಳಿಗಳನ್ನು ಹೊರಡಿಸಿದೆ. ನೀವು ಭೂಮಿಯನ್ನು ಹೊಂದಿರುವಾಗ ಜಮೀನಿನಲ್ಲಿ ಕೃಷಿ ಕಾರ್ಯಾಚರಣೆಗಳು ಎಷ್ಟು ಮುಖ್ಯವೋ, ಕ್ಷೇತ್ರಕ್ಕೆ ಪ್ರವೇಶವನ್ನು ಖಚಿತಪಡಿಸಿಕೊಳ್ಳುವುದು ಅಷ್ಟೇ ಮುಖ್ಯ.

ರೈತರು ತಮ್ಮ ಕೃಷಿ ಪರಿಕರಗಳನ್ನು ಜಮೀನಿಗೆ ಒಯ್ಯಬೇಕು. ಆದರೆ ಸರಿಯಾದ ದಾರಿ ಇಲ್ಲದಿದ್ದರೆ ಸಾಧ್ಯವಿಲ್ಲ. ಅಕ್ಕಪಕ್ಕದ ರೈತರನ್ನು ದಾರಿ ಕೇಳಿದರೆ ಅವರು ನಿರಾಕರಿಸುತ್ತಾರೆ. ತೊಂದರೆ ಕೊಡಲು ಪ್ರಯತ್ನಿಸುತ್ತಾರೆ. ಇಂತಹ ಸಮಯದಲ್ಲಿ ನೀವು ಕಾನೂನಿನ ಆಶ್ರಯವನ್ನು ತೆಗೆದುಕೊಳ್ಳಬಹುದು. ಈ ಕಾಯಿದೆಯ ಮೂಲಕ ನಿಮ್ಮ ಭೂಮಿಗೆ ಪ್ರವೇಶವನ್ನು ಮಾಡಬಹುದು. ಜಮೀನಿನ ದಾರಿಯ ಬಗ್ಗೆ ಕಾನೂನು ವ್ಯವಸ್ಥೆಯಲ್ಲಿ ಕಾನೂನುಗಳಿವೆ.

ಸರಾಗಗೊಳಿಸುವ ಕಾಯಿದೆಯು ಅವಶ್ಯಕತೆಯ ಸುಲಭತೆಯನ್ನು ಸೂಚಿಸುತ್ತದೆ. ಕಾನೂನಿನ ನಿಯಮದ ಪ್ರಕಾರ.. ಯಾವುದೇ ಕ್ಷೇತ್ರವು ಮತ್ತೊಂದು ಕ್ಷೇತ್ರದ ಮುಂದೆ ಇರುವಾಗ ಹಿಂಬದಿ ಕ್ಷೇತ್ರಕ್ಕೆ ಬಿಟ್ಟುಕೊಡಬೇಕು ಇಲ್ಲದಿದ್ದರೆ ಪ್ರಕರಣ ದಾಖಲಿಸಬಹುದು. ಸರಾಗ ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕಾದ ಇನ್ನೊಂದು ಮುಖ್ಯ ವಿಷಯವೆಂದರೆ ಈ ಹಿಂದೆ ಆ ಜಮೀನಿಗೆ ರಸ್ತೆ ಇದ್ದು, ಈಗ ಅದು ಮುಚ್ಚಿದ್ದರೆ ನೀವು ಅದರ ಬಗ್ಗೆ ಕೇಸ್‌ ದಾಖಲಿಸಬಹುದು. ಬೇರೆ ಜಮೀನಿಗೆ ಹೋಗಬೇಕಾದರೆ ದಾರಿ ಬಿಡಬೇಕು. ಇಲ್ಲದಿದ್ದರೆ ನೊಂದ ರೈತರು ಪ್ರಕರಣ ದಾಖಲಿಸಬಹುದು. ಟೆನೆನ್ಸಿ ಆಕ್ಟ್‌ನ ಸೆಕ್ಷನ್ 251 ನಿಮ್ಮ ಫಾರ್ಮ್‌ಗೆ ಹೋಗುವ ಹೊಸ ರಸ್ತೆಯನ್ನು ನಿರ್ಮಿಸಲು ನಿಮಗೆ ಅನುಮತಿಸುತ್ತದೆ.

Village map-ನಿಮ್ಮ ಊರಿನ ಕಾಲುದಾರಿ,ಬಂಡಿದಾರಿ ತಿಳಿಯುವ ಡೈರೆಕ್ಟ್ ಲಿಂಕ್

https://landrecords.karnataka.gov.in/indexkn.aspx 

ನಂತರ ಕಂದಾಯ ನಕ್ಷೆಗಳು ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಜಿಲ್ಲೆ,ತಾಲೂಕು,ಹೋಬಳಿ,ಗ್ರಾಮ select ಮಾಡಿ, search ಮೇಲೆ ಕ್ಲಿಕ್ ಮಾಡಿದರೆ ಈ ಕೆಳಗಿನಂತೆ ನಿಮ್ಮ ಗ್ರಾಮದ ಹೆಸರು ಕಾಣೆಸುತ್ತದೆ. ಆಗ ನಿಮ್ಮ ಗ್ರಾಮದ ಮುಂದಿರುವ pdf file ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ನಿಮ್ಮ ಗ್ರಾಮದ ನಕ್ಷೆ ಕಾಣೆಸುತ್ತದೆ. ಅದರಲ್ಲಿ ಕಾಲುದಾರಿ,ಬಂಡಿದಾರಿ,ಕೆರೆ ಕಟ್ಟೆಯನ್ನು ನೋಡಬಹುದು.