Karnataka budget-2024 ಸಾಲಮನ್ನಾ,ಬೆಳೆಹಾನಿ ಪರಿಹಾರ ಸೇರಿದಂತೆ ರೈತರ 10 ನಿರೀಕ್ಷೆಗಳು
<Krushirushi> <ಕರ್ನಾಟಕ ಬಜೇಟ್2024> <Karnataka budget 2024> <budget 2024> <budget> <ಸಾಲಮನ್ನಾ> <belesala manna> <croploan wavier>

Karnataka budget-2024 ಸಾಲಮನ್ನಾ,ಬೆಳೆಹಾನಿ ಪರಿಹಾರ ಸೇರಿದಂತೆ ರೈತರ 10 ನಿರೀಕ್ಷೆಗಳು
ಗಳೂರು: ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿವೆ. 122 ವರ್ಷಗಳ ಬಳಿಕ ಅತೀ ಕಡಿಮೆ ಮಳೆ ಬಿದ್ದ ವರ್ಷವಾಗಿ 2023 ದಾಖಲಾಗಿದೆ. ಸಹಜವಾಗಿಯೇ ಬೆಳೆ ನಷ್ಟವಾಗಿದೆ. ಬರ ಪರಿಸ್ಥಿತಿ ಕಾಡಿದೆ. ಹೀಗಾಗಿ ಈ ಸಲದ ಬಜೆಟ್ (ಕರ್ನಾಟಕ ಬಜೆಟ್ 2024) ನಲ್ಲಿ ರೈತರ ನಿರೀಕ್ಷೆಗಳು ಹಲವು.
ಬರ ಪರಿಣಾಮ ಸರ್ವವ್ಯಾಪಿ. ಆರ್ಥಿಕ ಮಾತ್ರವಲ್ಲದೆ, ಜನಜೀವನ ಸೇರಿ ಎಲ್ಲದರ ಮೇಲೂ ಪರಿಣಾಮ ಬೀರುವಂತಹ ಪರಿಸ್ಥಿತಿ ಇದು. ಪ್ರಸಕ್ತ ಕೃಷಿ ವರ್ಷದಲ್ಲಿ 236 ತಾಲೂಕುಗಳ ಪೈಕಿ 223 ತಾಲೂಕುಗಳು ಬರಪೀಡಿತವಾಗಿವೆ. ಈ ಪೈಕಿ 196 ತಾಲೂಕುಗಳು ತೀವ್ರ ಬರಪೀಡಿತ ಎಂದು ಕರ್ನಾಟಕ ಸರ್ಕಾರ ಘೋಷಿಸಿದೆ.
ಕರ್ನಾಟಕದ ಜಿಡಿಪಿಗೆ ಶೇಕಡ 17 ರಷ್ಟು ಕೊಡುಗೆ ಕೃಷಿಯದ್ದು. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಶೇಕಡ 60 ರಷ್ಟು ಉದ್ಯೋಗ ಸೃಜನೆ ಮಾಡುವಂತಹ ಕ್ಷೇತ್ರವೂ ಹೌದು. ಬರ ಪರಿಸ್ಥಿತಿ ಇರುವಾಗ ಗ್ರಾಮೀಣ ಭಾಗದಲ್ಲಿ ಕೃಷಿ ಕಾರ್ಮಿಕರಿಗೆ ನಿರುದ್ಯೋಗ ಕಾಡುತ್ತದೆ. ಇದರಿಂದ ಆರ್ಥಿಕ ಚಟುವಟಿಕೆ ಕೂಡ ಕುಂಟಿತವಾಗುತ್ತದೆ.
ಬರದಿಂದಾಗುವ ಸಂಕಷ್ಟಗಳು ಹಲವು
ಕಳೆದ ವರ್ಷ ಕರ್ನಾಟಕದಲ್ಲಿ 168 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆಯಾಗಿತ್ತು. ಇದು ಕರ್ನಾಟಕದ ಮಟ್ಟಿಗೆ ಸಾರ್ವಕಾಲಿಕ ಅಧಿಕ ಉತ್ಪಾದನೆಯ ದಾಖಲೆ. ಈ ಸಲ 148 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆಯ ಗುರಿ ಇರಿಸಿಕೊಳ್ಳಲಾಗಿತ್ತು. ಆದರೆ ಬರ ಪರಿಸ್ಥಿತಿ ಕಾರಣ 50 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಕುಂಟಿತವಾಗುವ ಸಾಧ್ಯತೆ ಇದೆ.
ಬೆಳೆ ನಷ್ಟ ಪರಿಹಾರವಾಗಿ ಕರ್ನಾಟಕ ಸರ್ಕಾರ ರೈತರಿಗೆ ತಲಾ 2000 ರೂಪಾಯಿ ಘೋಷಣೆ ಮಾಡಿತ್ತು. ಅದಕ್ಕಾಗಿ 900 ಕೋಟಿ ರೂಪಾಯಿ ಹಂಚಿಕೆ ಮಾಡಿ ಘೋಷಣೆ ಮಾಡಿತ್ತು. ಇದೇ ರೀತಿ, ಮಧ್ಯಂತರ ಬಿತ್ತನೆಗಾಗಿ 600 ಕೋಟಿ ರೂಪಾಯಿ, ತೊಗರಿ ಬೆಂಬಲ ಬೆಲೆ ನೀಡಲು 250 ಕೋಟಿ ರೂಪಾಯಿ, ಕೊಬ್ಬರಿ ಖರೀದಿಗೆ ಪ್ರೋತ್ಸಾಹ ಧನ ಎಂದೆಲ್ಲ 2000 ಕೋಟಿ ರೂಪಾಯಿ ವೆಚ್ಚ ಮಾಡಿದರೆ ಅದು ಪರಿಹಾರದ ಕ್ರಮವಾದೀತೇ ವಿನಃ ಅಭಿವೃದ್ಧಿಗೆ ಮಾಡುವ ಹೂಡಿಕೆ ಆಗುವುದಿಲ್ಲ.
| ಕರ್ನಾಟಕ ಬಜೆಟ್ 2024: ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ ಕೋಟಿ ರೂ. ನೀಡಲು ಬೇಡಿಕೆ
ಈಗ ಬಡ್ಡಿ ಮನ್ನಾ ಮಾಡಬೇಕು ಎಂಬ ಬೇಡಿಕೆ ಇದೆ. ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸಿರುವ ಸರ್ಕಾರವು ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲದ ಮೇಲೆ ಬಡ್ಡಿ ಮನ್ನಾ ಘೋಷಿಸಿದೆ. ಇದಕ್ಕಾಗಿ 540 ಕೋಟಿ ರೂಪಾಯಿ ಬೇಕು.
ಬರ ಸಂಕಷ್ಟಕ್ಕೆ ಒಳಗಾಗಿರುವ ರೈತರು ಕರ್ನಾಟಕ ಬಜೆಟ್ 2024ರಲ್ಲಿ ನಿರೀಕ್ಷಿಸುವುದು ಇಷ್ಟು
1) ಸಾಲ ಮನ್ನಾ ಮಾಡ್ತಾರಾ: ಮುಂಗಾರು ಮತ್ತು ಹಿಂಗಾರು ಮಳೆ ಕೊರತೆ ಕಾಡಿದ ಕಾರಣ ಕೃಷಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬರ ಪರಿಸ್ಥಿತಿ ಕಾರಣ ಕುಡಿಯುವ ನೀರು ಸಿಗದ ಪರಿಸ್ಥಿತಿ ಉಂಟಾಗಿದೆ. ಸರ್ಕಾರ ಬರ ಪರಿಸ್ಥಿತಿ ನಿಭಾಯಿಸಲು ಕ್ರಮ ತೆಗೆದುಕೊಂಡರೂ ಅದು ಪೂರ್ಣ ಪ್ರಮಾಣದ ಪರಿಹಾರವಾಗಿ ನೋಡಲಾಗದು. ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದ ಅವಧಿಯಲ್ಲಿ 50,000 ರೂ ಸಾಲ ಮನ್ನಾ ಮಾಡಿದ್ದರು. ಸದ್ಯ ಬೀಸುವ ಬಡಿಗೆಯಿಂದ ತಪ್ಪಿಸಿಕೊಳ್ಳಬೇಕು ಎಂಬ ಇರಾದೆಯ ಕಾರಣ ರೈತರು ಸಾಲ ಮನ್ನಾ ನಿರೀಕ್ಷೆಯಲ್ಲಿದ್ದಾರೆ.
2) ಸಬ್ಸಿಡಿ ಹೆಚ್ಚಾಗಲಿ: ಕೃಷಿ ಯಂತ್ರೋಪಕರಣ ಮತ್ತು ರಸಗೊಬ್ಬರದ ಸಬ್ಸಿಡಿ ಹೆಚ್ಚಳ ಮಾಡಬೇಕು ಎಂಬುದು ರೈತರ ಬಹುಕಾಲದ ಬೇಡಿಕೆ. ಸಣ್ಣ, ಅತಿಸಣ್ಣ ಮತ್ತು ಮಧ್ಯಮ ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಬೇಕು.
3) ರೈತ ವಿಮೆ ಜಾರಿಯಾಗಲಿ: ಕರ್ನಾಟಕದಲ್ಲಿ ಪ್ರತಿ ರೈತರಿಗೆ 5 ಲಕ್ಷ ರೂಪಾಯಿ ವಿಮೆ ಜಾರಿಗೊಳಿಸಬೇಕು. ಅದೇ ರೀತಿ ಆರೋಗ್ಯ ವಿಮೆಯನ್ನೂ ಜಾರಿಗೊಳಿಸಬೇಕು.
4) ಬೆಂಬಲ ಬೆಲೆ ಖರೀದಿ ಕೇಂದ್ರ: ಬೆಂಬಲ ಬೆಲೆ ಘೋಷಿಸಿದ ಬಳಿಕ, ಕೃಷಿ ಉತ್ಪನ್ನ ಖರೀದಿಗೆ ಎಂದು ಸರ್ಕಾರವೇ ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವ ಕೇಂದ್ರಗಳನ್ನು ಪ್ರತಿ ಹೋಬಳಿಗೆ ಒಂದರಂತೆ ಶುರುಮಾಡಬೇಕು.
5) ಬರ ಪರಿಹಾರ ಮೊತ್ತ ಹೆಚ್ಚಿಸಿ: ಸದ್ಯ ಬರ ಪರಿಹಾರ ಮೊತ್ತ ಬಹಳ ಕಡಿಮೆ ಇದನ್ನು ಎಕರೆಗೆ ಕನಿಷ್ಠ 10,000 ರೂಪಾಯಿ ಮಾಡಬೇಕು. ಶೂನ್ಯ ಬಡ್ಡಿ ದರದ ಸಾಲ ಎಲ್ಲ ಕೃಷಿಕರಿಗೂ ಸಿಗುವಂತೆ ಆಗಬೇಕು.
6) ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ: ಯಡಿಯೂರಪ್ಪ ಸರ್ಕಾರ ಇದ್ದಾಗ ಮತ್ತು ಸಿದ್ದರಾಮಯ್ಯ ಅವರ ಈ ಹಿಂದಿನ ಸರ್ಕಾರದಲ್ಲಿ ಹೈನುಗಾರರಿಗೆ ಉತ್ತೇಜನ ನೀಡಿದ ಮಾದರಿಯಲ್ಲಿ ಹಾಲಿನ ಪ್ರೋತ್ಸಾಹ ಧನ ಹೆಚ್ಚಳ ಮಾಡಲಾಗಿತ್ತು. ಈ ಸಲವೂ ಹಾಲು ಉತ್ಪಾದಕರಿಗೆ ಪತಿ ಲೀಟರ್ಗೆ 10 ರೂ ಪ್ರೋತ್ಸಾಹ ಧನ ನೀಡಬೇಕು. ಹೈನುಗಾರಿಕೆಗೆ ಸಂಬಂಧಿಸಿದ ಯೋಜನೆ, ಸಬ್ಸಿಡಿ ಘೋಷಿಸಬೇಕು ಎನ್ನುತ್ತಾರೆ ಹೈನುಗಾರರು.
7) ಕೊಬ್ಬರಿ ಬೆಂಬಲ ಬೆಲೆ: ಕೊಬ್ಬರಿ ಬೆಲೆ ಕ್ವಿಂಟಾಲ್ಗೆ 17,000 ರೂಪಾಯಿಯಿಂದ 18,000 ರೂಪಾಯಿ ಇದ್ದದ್ದು ಈಗ 7,000 ರೂಪಾಯಿಯಿಂದ 8000 ರೂಪಾಯಿಗೆ ಇಳಿದಿದೆ. ನಾವು ಅಧಿಕಾರಕ್ಕೆ ಬಂದರೆ ಕೊಬ್ಬರಿಯ ಬೆಂಬಲ ಬೆಲೆಯನ್ನು 15,000 ರೂಪಾಯಿಗೆ ಏರಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚುನಾವಣೆಗೆ ಮೊದಲು ಘೋಷಿಸಿದ್ದರು. ಇದರಂತೆ, ಸರ್ಕಾರ ಕ್ವಿಂಟಾಲ್ಗೆ 1500 ರೂ ಬೆಂಬಲ ಬೆಲೆ ಏರಿಕೆ ಮಾಡಿದ್ದರಿಂದ ಬೆಂಬಲ ಬೆಲೆಯು 13,500 ರೂಗೆ ತಲುಪಿದೆ. ಇನ್ನೂ 1500 ರೂ ಏರಿಕೆ ಮಾಡಿ ಸರ್ಕಾರ ಮಾತು ಉಳಿಸಿಕೊಳ್ಳಬೇಕು ಎನ್ನುತ್ತಿದ್ದಾರೆ ತೆಂಗು ಬೆಳೆಗಾರರು.
8) ರೈತ ಆವರ್ತ ನಿಧಿಗೆ 1000 ಕೋಟಿ ರೂ: ಕೃಷಿ ಉತ್ಪನ್ನಕ್ಕೆ ಬೆಲೆ ಕುಸಿದಾಗ, ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಕಾಪಾಡಲು ಸರ್ಕಾರ ಮಧ್ಯಪ್ರವೇಶಿಸಬೇಕು. ರೈತ ಆವರ್ತ ನಿಧಿಗೆ ಎಂದು 1,000 ಕೋಟಿ ರೂಪಾಯಿ ಮೀಸಲಿಡಬೇಕು. ಇದಕ್ಕೆ ಸಂಬಂಧಿಸಿದ ನಿಯಮ ಸರಳಗೊಳಿಸಬೇಕು ಎನ್ನುತ್ತಿದ್ದಾರೆ ರೈತರು.
9) ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸಿ: ಬೆಳೆಗಾರರ ಹೊಲದಲ್ಲಿಯೇ ದರ ನಿಗದಿ ಮಾಡುವ ವ್ಯವಸ್ಥೆ ಬರಬೇಕು. ಕಾರ್ಖಾನೆಗಳು ಕಾಲಮಿತಿಯೊಳಗೆ ಬೆಳೆಗಾರರಿಗೆ ಹಣ ಪಾವತಿಸಬೇಕು. ಈ ಕುರಿತು ಸರ್ಕಾರ ಕ್ರಮ ಜರುಗಿಸಬೇಕು.
10) ದಾಖಲಾತಿಗಳನ್ನು ಸರಿಪಡಿಸಿ: ಕೃಷಿ ಜಮೀನಿಗೆ ಸಂಬಂಧಿಸಿದ ದಾಖಲಾತಿ ಸರಿಪಡಿಸಲು ಇರುವ ಅಡ್ಡಿ ಆತಂಕ ನಿವಾರಿಸಬೇಕು. ಮನೆ ಬಾಗಿಲಿಗೆ ಸರ್ಕಾರ, ಮನೆ ಬಾಗಿಲಿಗೆ ದಾಖಲಾತಿ ಘೋಷಣೆಯಲ್ಲಿ ಮಾತ್ರ ಉಳಿದಿದೆ. ಜಾರಿಗೆ ಬರಬೇಕು.
February month Gruhalakshmi amount-ನಮ್ಮ ಮನೆಯವರ ಖಾತೆಗೆ ಫೆಬ್ರುವರಿ ತಿಂಗಳ ಗೃಹಲಕ್ಷ್ಮಿ ಹಣ ಜಮಾ, ರೇಷನ್ ಕಾರ್ಡ ನಂಬರ್ ಹಾಕಿ ಜಮಾ ಚೆಕ್ ಮಾಡುವ ಹೊಸ ಡೈರೆಕ್ಟ್ ಲಿಂಕ್
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://mahitikanaja.karnataka.gov.in/Service/Service/3136
ನಂತರ ಗೃಹಲಕ್ಷ್ಮಿ ಅಪ್ಲಿಕೇಷನ್ ಸ್ಥಿತಿ ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ,Submit ಮೇಲೆ ಕ್ಲಿಕ್ ಮಾಡಿ
ನಂತರ Details ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ಯಾವ ತಿಂಗಳು,ಯಾವ ದಿನಾಂಕದಂದು ಗೃಹಲಕ್ಷ್ಮಿ ಹಣ ಜಮಾ ಆಗಿದೆ ಎಂದು ತೋರಿಸುತ್ತದೆ.
DBT Karnataka:ನಿಮ್ಮ ಖಾತೆಗೆ ಇಲ್ಲಿಯವರೆಗೂ ಎಷ್ಟು ಕಂತಿನ ಗೃಹಲಕ್ಷ್ಮಿ ಹಣ ಜಮಾ ಆಗಿದೆ ಎಂದು ಚೆಕ್ ಮಾಡುವ ಡೈರೆಕ್ಟ್ ಲಿಂಕ್
https://play.google.com/store/apps/details?id=com.dbtkarnataka
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application ಡೌನ್ಲೊಡ್ ಮಾಡಿ,install ಮಾಡಿಕೊಳ್ಳಿ
ನಂತರ ನಿಮ್ಮ ಆಧಾರ್ ನಂಬರ್ ಹಾಕಿ Get OTP ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Varify OTP ಮೇಲೆ ಕ್ಲಿಕ್ ಮಾಡಿ
ನಂತರ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ
ನಂತರ seeding status of Aadhar in bank account ಮೇಲೆ ಕ್ಲಿಕ್ ಮಾಡಿದರೆ ಆಧಾರ್ ಲಿಂಕ್ ಮಾಹಿತಿ ದೊರೆಯುತ್ತದೆ
payment status ಮೇಲೆ ಕ್ಲಿಕ್ ಮಾಡಿದರೆ ಯಾವ ಯೋಜನೆಯಿಂದ ಎಷ್ಟು ಹಣ ಜಮಾ ಆಗಿದೆ ಎಂದು ತಿಳಿಯಬಹುದು
ಈ ಕೆಳಗಿನಂತೆ ಯಾವ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಲಿಂಕ್ ಆಗಿದೆ ಎಂಬ ಮಾಹಿತಿ ದೊರೆಯುತ್ತದೆ.
ಇದನ್ನೂ ನೋಡಿ
https://youtu.be/-84ud1OKiL8?si=0BT27WQxVaPHWgN7
ಹಾವೇರಿಯಿಂದ ದೇಶ ವಿದೇಶಗಳಿಗೂ ಸಿರಿಧಾನ್ಯ ರಪ್ತು
ಸಿರಿಧಾನ್ಯ ಬೆಳೆ,ಸಂಸ್ಕರಣೆ ಹಾಗೂ ಮಾರುಕಟ್ಟೆಯ ಸಂಪೂರ್ಣ ಮಾಹಿತಿ
ಇದನ್ನೂ ಓದಿ
Annabhagya-ನನ್ನ ಖಾತೆಗೆ 680 ರೂಪಾಯಿ ಅನ್ನಭಾಗ್ಯ ಯೋಜನೆಯ ಹಣ ಜಮಾ,ನಿಮ್ಮ ಜಮಾ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-409
4 ಸದಸ್ಯರ ನನ್ನ ಕುಟುಂಬಕ್ಕೆ 680 ರೂಪಾಯಿ ಜಮಾ
ಈ ಲೇಖನದಲ್ಲಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ,ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಜಮಾ ಚೆಕ್ ಮಾಡಿ
DBT-ಅನ್ನಭಾಗ್ಯ,ಗೃಹಲಕ್ಷ್ಮಿ ಹಾಗೂ ಸರ್ಕಾರದ ಯಾವುದೇ ಯೋಜನೆಯ ನೇರ ನಗದು ವರ್ಗಾವಣೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-418
ಈ ಲೇಖನದಲ್ಲಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ,ಆಧಾರ್ ನಂಬರ್ ಹಾಕಿದರೆ, ಸರ್ಕಾರದಿಂದ ಬರುವ ಯಾವುದೇ ನೇರ ಹಣ ಜಮಾವಣೆ ಚೆಕ್ ಮಾಡಿ
Anna Bhagya-ನಿಮ್ಮ ಹೆಸರಿನ ಮುಂದೆ ಆಧಾರ್ ಸೀಡ್ ಆಗದೇ ಇರುವುದರಿಂದ ದೃಡೀಕರಣದಲ್ಲಿ ವಿಫಲವಾಗಿದೆ ಎಂದು ತೋರಿಸುತ್ತಿದ್ದರೆ ಹೀಗೆ ಮಾಡಿ - https://krushirushi.in/Krushirushi-1000-415
ಅನ್ನ ಭಾಗ್ಯ ಹಣ ಜಮಾ ಆಗಿಲ್ಲವೇ,ಕೂಡಲೇ ಹೀಗೆ ಮಾಡಿ
Annabhagya-ಈ ಪಟ್ಟಿಯಲ್ಲಿರುವವರಿಗೆ ಸಿಗಲಿದೆ ಅನ್ನಭಾಗ್ಯ ಹಣ,ಇಲ್ಲಿದೆ ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-416
1 ಸದಸ್ಯರಿರುವ ಕುಟುಂಬಕ್ಕೆ 170 ರೂಪಾಯಿ
2 ಸದಸ್ಯರಿರುವ ಕುಟುಂಬಕ್ಕೆ 340 ರೂಪಾಯಿ
3 ಸದಸ್ಯರಿರುವ ಕುಟುಂಬಕ್ಕೆ 510 ರೂಪಾಯಿ
4 ಸದಸ್ಯರಿರುವ ಕುಟುಂಬಕ್ಕೆ 680 ರೂಪಾಯಿ
ಈ ಲೇಖನದಲ್ಲಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ,ಫಲಾನುಭವಿಗಳ ಪಟ್ಚಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ
Male nakshatra-2023 ನೇ ಸಾಲಿನ ಮಳೆ ನಕ್ಷತ್ರಗಳು ಹಾಗೂ ಮಳೆ ದಿನಾಂಕ - https://krushirushi.in/Krushirushi-1000-261
Crop insurance-ನನ್ನ ಖಾತೆಗೆ 11,354 ರೂಪಾಯಿ ಬೆಳೆವಿಮೆ ಜಮಾ-ನಿಮ್ಮ ಬೆಳೆವಿಮೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-257
District incharge ministers-ಇವರೇ ನೋಡಿ ನಿಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು - https://krushirushi.in/Krushirushi-1000-268
Karnataka ministers-ಕೊನೆಗೂ ಖಾತೆ ಹಂಚಿಕೆ ಅಂತಿಮ ಪಟ್ಟಿ ಬಿಡುಗಡೆ - https://krushirushi.in/Krushirushi-1000-254
DBT Karnataka-ಸರ್ಕಾರದಿಂದ ನಿಮಗೆ ಇಲ್ಲಿಯವರೆಗೂ ಯಾವ ಯೋಜನೆಯಿಂದ ಎಷ್ಟು ಹಣ ಜಮಾ ಆಗಿದೆ ಎಂದು ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-259
Yuvanidhi-ಯುವನಿಧಿ ಯೋಜನೆಯಡಿ 3000 ರೂಪಾಯಿ-ಷರತ್ತು ಮತ್ತು ನಿಬಂಧನೆಗಳ ಅಧಿಕೃತ ಆದೇಶ - https://krushirushi.in/Krushirushi-1000-267
Aadhaar-ಆಧಾರ್ ನಂಬರ್ ಹಾಕಿ ರಾಜ್ಯ ಸರ್ಕಾರದಿಂದ ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಎಂದು ಚೆಕ್ ಮಾಡಿ - https://krushirushi.in/Krushirushi-1000-266
Aadhaar bank seeding status-ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-260
5 Guarantees approved-5 ಗ್ಯಾರಂಟಿಗಳಿಗೆ ಸಚಿವ ಸಂಪುಟ ಸಭೆಯಿಂದ ಒಪ್ಪಿಗೆ - https://krushirushi.in/Krushirushi-1000-265
Crop loss-20160 ಹೇಕ್ಟೆರ್ ಬೆಳೆಹಾನಿ ಪರಿಹಾರ ಬಿಡುಗಡೆ-ಕಂದಾಯ ಸಚಿವ ಕೃಷ್ಞಬೈರೆಗೌಡ - https://krushirushi.in/Krushirushi-1000-264
Krushi bhagya-ಕೃಷಿ ಭಾಗ್ಯ ಮರು ಜಾರಿ, ಬೆಳೆ ವಿಮೆ ರೈತರ ಕಂತು ಕಡಿತ- ಕೃಷಿ ಸಚಿವ ಚೆಲುವರಾಯಸ್ವಾಮಿ - https://krushirushi.in/Krushirushi-1000-262
Free bus pass-ನಾಳೆಯಿಂದ ರಾಜ್ಯದಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಘೋಷಣೆ - https://krushirushi.in/Krushirushi-1000-256
Pmkisan name correction as per Aadhaar-ಆಧಾರ್ ನಲ್ಲಿರುವಂತೆ ನಿಮ್ಮ ಹೆಸರು ಬದಲಾವಣೆ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-252
Crop insurance-ಬೆಳೆವಿಮೆ ಜಮಾ ಪ್ರಾರಂಭವಾಗಿದ್ದು,ನಿಮ್ಮ ಜಮಾ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-253