Pmkisan id-ಪಿಎಂ ಕಿಸಾನ್: ರೈತರಿಗೀಗ ವಿಶಿಷ್ಟ ಡಿಜಿಟಲ್ ಐಡಿ ಕಡ್ಡಾಯ! ಏನಿದು ರೈತ ಐಡಿ? ನೋಂದಣಿ ಹೇಗೆ? ಪ್ರಯೋಜನಗಳೇನು?
<Krushirushi> <ಪಿಎಂ ಕಿಸಾನ್ 22ನೇ ಕಂತು> <ಪಿಎಂಕಿಸಾನ್> <ಪಿಎಂ ಕಿಸಾನ್> <ಪಿಎಂ ಕಿಸಾನ್ ಕೆವೈಸಿ> <ಪಿಎಂ ಕಿಸಾನ್ 22ನೇ ಕಂತಿನ ದಿನಾಂಕ> <ಪಿಎಂಕಿಸಾನ್ 22ನೇ ಕಂತಿನ ಅರ್ಹ ಮತ್ತು ಅನರ್ಹ ಪಟ್ಟಿ> <ಪಿಎಂ ಕಿಸಾನ್ 22ನೇ ಕಂತಿನ ಫಲಾನುಭವಿಗಳ ಪಟ್ಟಿ> <ಪಿಎಂ ಕಿಸಾನ್ ಸ್ಟೇಟಸ್> <pmkisan 22nd instalment date> <pmkisan 22nd instalment eligible and ineligible list> <Pmkisan> <pmkisan 22nd instalment> <pmkisan Karnataka> <pmkisan 22nd instalment beneficiary list> <pmkisan beneficiary list> <pmkisan beneficiary status> <pmkisan ineligible list> <pmkisan 22nd instalment ineligible list>
Pmkisan id-ಪಿಎಂ ಕಿಸಾನ್: ರೈತರಿಗೀಗ ವಿಶಿಷ್ಟ ಡಿಜಿಟಲ್ ಐಡಿ ಕಡ್ಡಾಯ! ಏನಿದು ರೈತ ಐಡಿ? ನೋಂದಣಿ ಹೇಗೆ? ಪ್ರಯೋಜನಗಳೇನು?
ರೈತ ಬಂಧುಗಳ ಗಮನಕ್ಕೆ! ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 6,000 ರೂ.ಗಳ ವಾರ್ಷಿಕ ಸಹಾಯಧನ ಪಡೆಯಲು 'ರೈತ ಐಡಿ' ಕಡ್ಡಾಯವಾಗಿದೆ. ಇದು ನಿಮ್ಮ ಅರ್ಹತೆಯನ್ನು ಖಚಿತಪಡಿಸಿ, ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುವಂತೆ ಮಾಡುತ್ತದೆ. ಮೋಸಗಾರರನ್ನು ತಡೆಯಲು ಮತ್ತು ನಿಜವಾದ ರೈತರಿಗೆ ನೆರವಾಗಲು ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ಕರ್ನಾಟಕದ 'ಫೂಟ್ಸ್' ಮಾದರಿಯಲ್ಲಿ ಈ ಐಡಿ ನೀಡಲಾಗುತ್ತಿದೆ. ಹೊಸದಾಗಿ ಸೇರಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ (PM-Kisan) ಯೋಜನೆಯಲ್ಲಿ ಪಾರದರ್ಶಕತೆ ತರಲು ಮತ್ತು ನಕಲಿ ಫಲಾನುಭವಿಗಳನ್ನು ಪತ್ತೆಹಚ್ಚಲು ಕೇಂದ್ರ ಸರ್ಕಾರವು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ. ಕರ್ನಾಟಕದ ಯಶಸ್ವಿ 'ಫ್ರೂಟ್ಸ್' ಮಾದರಿಯನ್ನೇ ಆಧರಿಸಿ ದೇಶಾದ್ಯಂತ ಈಗ 'ವಿಶಿಷ್ಟ ರೈತ ಗುರುತಿನ ಚೀಟಿ' ವಿತರಿಸುವ ಪ್ರಕ್ರಿಯೆ ಆರಂಭವಾಗಿದೆ. ಮುಂದಿನ ಪಿಎಂ ಕಿಸಾನ್ ಕಂತಿನ ಹಣವನ್ನು ಪಡೆಯಲಯ ವಿಶಿಷ್ಟ ರೈತ ಐಡಿ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಏನಿದು ಪಿಎಂ ಕಿಸಾನ್ ರೈತ ಐಡಿ , ಇದರ ಪ್ರಯೋಜನಗಳೇನು? ನೋಂದಣಿ ಹೇಗೆ ಎಂಬುದನ್ನು ತಿಳಿಯೋಣ.
ಏನಿದು 'ರೈತ ಐಡಿ'?
2025ರಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು ಪಡೆಯಲು 'ರೈತ ಐಡಿ' ಅಥವಾ ಕಿಸಾನ್ ಐಡಿ ಕಡ್ಡಾಯವಾಗಿದ್ದು, ಇದು ಅರ್ಹ ರೈತರಿಗೆ ವಾರ್ಷಿಕ 6,000 ರೂ.ಗಳ ಆರ್ಥಿಕ ನೆರವು ನಿರಂತರವಾಗಿ ಸಿಗುವಂತೆ ಮಾಡುತ್ತದೆ. ಪಿಎಂ ಕಿಸಾನ್ ಯೋಜನೆಯಡಿ ನೋಂದಾಯಿತ ರೈತರಿಗೆ ನೀಡಲಾಗುವ ಒಂದು ಅನನ್ಯ ಡಿಜಿಟಲ್ ಸಂಖ್ಯೆಯೇ 'ರೈತ ಐಡಿ'. ಇದು ರೈತರ ಆಧಾರ್ ಮತ್ತು ಭೂ ದಾಖಲೆಗಳೊಂದಿಗೆ (RTC) ನೇರವಾಗಿ ಸಂಪರ್ಕ ಹೊಂದಿರುತ್ತದೆ. ಕೇಂದ್ರ ಸರ್ಕಾರದ 'ಅಗ್ರಿಸ್ಟ್ಯಾಕ್' ಉಪಕ್ರಮದ ಭಾಗವಾಗಿರುವ ಈ ಡಿಜಿಟಲ್ ಐಡಿಯು ರೈತರ ಭೂ ದಾಖಲೆಗಳು, ಆಧಾರ್ ಮತ್ತು ಬ್ಯಾಂಕ್ ವಿವರಗಳನ್ನು ಒಂದೇ ದತ್ತಸಂಚಯದಲ್ಲಿ ಸಂಯೋಜಿಸುತ್ತದೆ. ಇದರಿಂದ ನಕಲಿ ಫಲಾನುಭವಿಗಳನ್ನು ತಡೆದು ನೇರವಾಗಿ ನೈಜ ರೈತರ ಖಾತೆಗೆ ಹಣ ವರ್ಗಾಯಿಸಲು ಸಾಧ್ಯವಾಗುತ್ತದೆ. ಕರ್ನಾಟದಲ್ಲಿ ಈಗಾಗಲೇ ಜಾರಿಯಲ್ಲಿರುವ ಫ್ರೂಟ್ಸ್ ಐಡಿ ಮಾದರಿಯಲ್ಲಿಯೇ ಇದನ್ನು ರೂಪಿಸಲಾಗಿದೆ. ಒಂದು ವೇಳೆ ರೈತರು ಈ ಐಡಿಯನ್ನು ಹೊಂದಿಲ್ಲದಿದ್ದರೆ ಅವರ 2,000 ರೂ.ಗಳ ಕಂತಿನ ಹಣ ಸ್ಥಗಿತಗೊಳ್ಳುವ ಸಾಧ್ಯತೆಯಿದ್ದು, ಪಾವತಿ ವಿಳಂಬ ಮತ್ತು ಅರ್ಜಿ ತಿರಸ್ಕಾರವನ್ನು ತಪ್ಪಿಸಲು ಆನ್ಲೈನ್ ಮೂಲಕ ಶೀಘ್ರವಾಗಿ ನೋಂದಣಿ ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಈ ಸರಳ ನೋಂದಣಿ ಪ್ರಕ್ರಿಯೆಯು ರೈತರಿಗೆ ಭವಿಷ್ಯದ ಸರ್ಕಾರಿ ಯೋಜನೆಗಳನ್ನು ಪಡೆಯಲು ಮತ್ತು ಆರ್ಥಿಕ ಭದ್ರತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.
ಈ ಐಡಿ ಏಕೆ ಅಗತ್ಯ?
- ಒಂದು ರಾಷ್ಟ್ರ, ಒಂದು ರೈತ ಐಡಿ: ಒಬ್ಬ ರೈತ ದೇಶದ ವಿವಿಧ ರಾಜ್ಯಗಳಲ್ಲಿ ಭೂಮಿ ಹೊಂದಿದ್ದರೂ, ಆತನಿಗೆ ಒಂದೇ ಐಡಿ ಇರುತ್ತದೆ. ಇದರಿಂದ ಬೇರೆ ಬೇರೆ ರಾಜ್ಯಗಳಲ್ಲಿ ಜಮೀನು ತೋರಿಸಿ ಹಣ ಪಡೆಯುವುದಕ್ಕೆ ತಡೆ ಬೀಳಲಿದೆ.
- ನಕಲಿ ತಡೆ: ಕುಟುಂಬವೊಂದರಲ್ಲಿ ಗಂಡ-ಹೆಂಡತಿ ಇಬ್ಬರೂ ಹಣ ಪಡೆಯುತ್ತಿದ್ದರೆ ಅಂತಹ ಖಾತೆಗಳನ್ನು ಗುರುತಿಸಿ ರದ್ದುಪಡಿಸಲಾಗುತ್ತದೆ.
- ಕುಟುಂಬಕ್ಕೆ ಒಬ್ಬರಿಗೆ ಮಾತ್ರ: ನಿಯಮದಂತೆ ಒಂದು ರೈತ ಕುಟುಂಬಕ್ಕೆ ವರ್ಷಕ್ಕೆ 6,000 ರೂ. ಮಾತ್ರ ಸಿಗಲಿದೆ.
- ಪಾರದರ್ಶಕತೆ: ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಹಣ ನೇರವಾಗಿ ರೈತರ ಖಾತೆಗೆ ಜಮೆಯಾಗಲು ಇದು ಸಹಕಾರಿ.
ಕರ್ನಾಟಕದ 'ಫೂಟ್ಸ್' ಮಾದರಿ ಈಗ ರಾಷ್ಟ್ರಕ್ಕೆ ಮಾದರಿ
ಕರ್ನಾಟಕವು ಈಗಾಗಲೇ ಫ್ರೂಟ್ಸ್ (Farmer Registration and Unified Beneficiary Information System) ಮೂಲಕ ರೈತರಿಗೆ ಏಕಗವಾಕ್ಷಿ ಸೇವೆಯನ್ನು ನೀಡುತ್ತಿದೆ. ರಾಜ್ಯದ ಈ ಯಶಸ್ಸನ್ನು ಗಮನಿಸಿದ ಕೇಂದ್ರ ಸರ್ಕಾರ, ಈಗ ಇದನ್ನು ದೇಶದ 14 ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದೆ. ರಾಜ್ಯದಲ್ಲಿ ಒಟ್ಟು 59,13,902 ರೈತರಿಗೆ ರೈತ ಐಡಿ ನೀಡುವ ಗುರಿ ಇದೆ. ಈಗಾಗಲೇ ಫೂಟ್ಸ್ ಐಡಿ ಹೊಂದಿರುವ 45,14,772 ರೈತರನ್ನು ಅಂಗೀಕರಿಸಲಾಗಿದ್ದು, ಬಾಕಿ ಇರುವ 13.99 ಲಕ್ಷ ರೈತರಿಗೆ ಐಡಿ ವಿತರಣೆ ಪ್ರಕ್ರಿಯೆ ನಡೆಯುತ್ತಿದೆ.
ಅನರ್ಹರ ಖಾತೆಗಳಿಗೆ ಬೀಗ!
ಪಿಎಂ-ಕಿಸಾನ್ ಯೋಜನೆಯಲ್ಲಿ ಪಾರದರ್ಶಕತೆ ತರಲು ಜಾರಿಗೆ ತಂದ ಡಿಜಿಟಲ್ ತಪಾಸಣಾ ಕ್ರಮಗಳಿಂದಾಗಿ ದೇಶಾದ್ಯಂತ ಲಕ್ಷಾಂತರ ಅನರ್ಹ ಖಾತೆಗಳನ್ನು ಪತ್ತೆಹಚ್ಚಿ ಸ್ಥಗಿತಗೊಳಿಸಲಾಗಿದೆ. ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ 7ನೇ ಕಂತಿನಲ್ಲಿ 52,81,757 ರೈತರಿದ್ದ ಫಲಾನುಭವಿಗಳ ಸಂಖ್ಯೆಯು 21ನೇ ಕಂತಿನ ವೇಳೆಗೆ 41,43,679ಕ್ಕೆ ಇಳಿಕೆಯಾಗಿದ್ದು, ಸುಮಾರು 11.38 ಲಕ್ಷಕ್ಕೂ ಅಧಿಕ ಅನರ್ಹ ಖಾತೆಗಳು ಬಂದ್ ಆಗಿವೆ. ಇದೇ ರೀತಿ ದೇಶಾದ್ಯಂತ 7ನೇ ಕಂತಿನಲ್ಲಿದ್ದ 9.84 ಕೋಟಿ ಫಲಾನುಭವಿಗಳ ಸಂಖ್ಯೆಯು ಕಳೆದ ನವೆಂಬರ್ನಲ್ಲಿ ಬಿಡುಗಡೆಯಾದ 21ನೇ ಕಂತಿನ ವೇಳೆಗೆ 9.34 ಕೋಟಿಗೆ ಇಳಿದಿದ್ದು, ಒಟ್ಟಾರೆ 50.20 ಲಕ್ಷಕ್ಕೂ ಹೆಚ್ಚು ಅನರ್ಹ ಖಾತೆಗಳನ್ನು ವ್ಯವಸ್ಥೆಯಿಂದ ಹೊರಹಾಕುವ ಮೂಲಕ ಅರ್ಹ ರೈತರಿಗೆ ಮಾತ್ರ ಯೋಜನೆಯ ಲಾಭ ತಲುಪುವಂತೆ ಮಾಡಲಾಗಿದೆ.
ಅರ್ಹತಾ ಮಾನದಂಡಗಳೇನು?
- ಈ ಯೋಜನೆಯಡಿ ಸೌಲಭ್ಯ ಪಡೆಯಲು ರೈತರು ಕನಿಷ್ಠ 1 ರಿಂದ 2 ಎಕರೆಯಷ್ಟು ಸ್ವಂತ ಕೃಷಿ ಜಮೀನನ್ನು ಹೊಂದಿರಬೇಕು.
- ರೈತರ ಹೆಸರಿನಲ್ಲಿ ಭೂ ಹಿಡುವಳಿ ವಿಸ್ತೀರ್ಣವನ್ನು ದೃಢೀಕರಿಸುವ ಅಧಿಕೃತ ಆರ್ಟಿಸಿ (RTC) ಅಥವಾ ಪಹಣಿ ದಾಖಲೆಗಳು ಇರುವುದು ಕಡ್ಡಾಯವಾಗಿದೆ.
- ಇನ್ನು ಆರ್ಥಿಕ ಸ್ಥಿತಿಗತಿಯನ್ನು ಪರಿಗಣಿಸಿ, ಅರ್ಜಿ ಸಲ್ಲಿಸುವ ರೈತರಿಗೆ ಮಾಸಿಕ 10 ಸಾವಿರ ರೂಪಾಯಿಗಿಂತ ಹೆಚ್ಚಿನ ಪಿಂಚಣಿ ಬರುತ್ತಿರಬಾರದು ಹಾಗೂ ಅವರು ಆದಾಯ ತೆರಿಗೆ ಪಾವತಿದಾರರಾಗಿರಬಾರದು.
- ಯೋಜನೆಯಲ್ಲಿ ಯಾವುದೇ ಅಡೆತಡೆಯಿಲ್ಲದೆ ಹಣ ಪಡೆಯಲು ರೈತರು ತಮ್ಮ ಆಧಾರ್ ಕಾರ್ಡ್ ಮತ್ತು ಜಮೀನಿನ ದಾಖಲೆಗಳನ್ನು ನವೀಕರಿಸುವುದರ ಜೊತೆಗೆ ಕಡ್ಡಾಯವಾಗಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಬೇಕು.
ಯಾರಿಗೆ ಈ ಯೋಜನೆ ಅನ್ವಯಿಸುವುದಿಲ್ಲ?
- ತಿಂಗಳಿಗೆ 10,000 ರೂ.ಗಿಂತ ಹೆಚ್ಚು ಪಿಂಚಣಿ ಪಡೆಯುವ ಸರ್ಕಾರಿ ನೌಕರರು (ನಿವೃತ್ತರು ಸೇರಿ).
- ಆದಾಯ ತೆರಿಗೆ ಅಥವಾ ಜಿಎಸ್ಟಿ ಪಾವತಿದಾರರು.
- ಸಾಂಸ್ಥಿಕ ಭೂಮಿ ಹೊಂದಿರುವವರು.
- ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಜನರು ಅರ್ಜಿ ಸಲ್ಲಿಸಿದರೆ (ಒಬ್ಬರಿಗೆ ಮಾತ್ರ ಅವಕಾಶ).
ರೈತ ಐಡಿ ಪಡೆಯುವುದು ಹೇಗೆ?
- ಹೊಸದಾಗಿ ಅರ್ಜಿ ಸಲ್ಲಿಸುವ ರೈತರು ಕೆಳಗಿನ ಹಂತಗಳನ್ನು ಅನುಸರಿಸಿ ರೈತ ಐಡಿ ಪಡೆಯಬಹುದು:
- ಪಿಎಂ ಕಿಸಾನ್ ಅಧಿಕೃತ ಪೋರ್ಟಲ್ pmkisan.gov.in/RegistrationFormupdated.aspx ಗೆ ಭೇಟಿ ನೀಡಿ.
- 'New Farmer Registration' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ನೀಡಿ, OTP ಮೂಲಕ ಪರಿಶೀಲಿಸಿ.
- ಭೂಮಿ ವಿವರ (RTC/ಪಹಣಿ) ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಅಪ್ಲೋಡ್ ಮಾಡಿ.
- ಅಧಿಕಾರಿಗಳ ಪರಿಶೀಲನೆಯ ನಂತರ ನಿಮಗೆ ನಿಮ್ಮ 'ರೈತ ಐಡಿ' ದೊರೆಯುತ್ತದೆ.

