Secondary agriculture-50 ರಿಂದ 75% ಸಬ್ಸಿಡಿಯಲ್ಲಿ ಸೆಕೆಂಡರಿ ಕೃಷಿ ಯೋಜನೆಗೆ ಅರ್ಜಿ ಆಹ್ವಾನ
ಸೆಕೆಂಡರಿ ಅಗ್ರಿಕಲ್ಚರ್ ಅಡಿ ಜೇನು ಸಾಕಾಣೆ, ಬೇವಿನ ಉತ್ಪನ್ನಗಳು, ಕಾರ್ನ್ ಪೌಡರ್ ತಯಾರಿಕೆ, ಹೈಡ್ರೋಪೋನಿಕ್ಸ್, ಕೈತೋಟ, ಅಡಿಕೆ ಹಾಳೆ ಉತ್ಪನ್ನಗಳು, ಅಲೊವೆರಾ ಉತ್ಪನ್ನಗಳು, ಬಿದಿರು ಉತ್ಪನ್ನಗಳು, ಅಂಟು ಉತ್ಪಾದನೆ, ರೇಷ್ಮೆ ಉತ್ಪನ್ನಗಳು, ಕುರಿಮರಿ ಹೊಸ ತಳಿ ಸಾಕಣೆ, ಹೋರಿ ಸಾಕಣೆ, ಡಯಾಂಚ ಬೆಳೆಸುವ ಮೂಲಕ ಪರ್ಯಾಯ/ಪೂರಕ ಉದ್ಯಮಗಳಿಗೆ ಉತ್ತೇಜಿಸುವುದು.

Secondary agriculture-50 ರಿಂದ 75% ಸಬ್ಸಿಡಿಯಲ್ಲಿ ಸೆಕೆಂಡರಿ ಕೃಷಿ ಯೋಜನೆಗೆ ಅರ್ಜಿ ಆಹ್ವಾನ
ಸೆಕೆಂಡರಿ ಅಗ್ರಿಕಲ್ಚರ್ ಅಡಿ ಜೇನು ಸಾಕಾಣೆ, ಬೇವಿನ ಉತ್ಪನ್ನಗಳು, ಕಾರ್ನ್ ಪೌಡರ್ ತಯಾರಿಕೆ, ಹೈಡ್ರೋಪೋನಿಕ್ಸ್, ಕೈತೋಟ, ಅಡಿಕೆ ಹಾಳೆ ಉತ್ಪನ್ನಗಳು, ಅಲೊವೆರಾ ಉತ್ಪನ್ನಗಳು, ಬಿದಿರು ಉತ್ಪನ್ನಗಳು, ಅಂಟು ಉತ್ಪಾದನೆ, ರೇಷ್ಮೆ ಉತ್ಪನ್ನಗಳು, ಕುರಿಮರಿ ಹೊಸ ತಳಿ ಸಾಕಣೆ, ಹೋರಿ ಸಾಕಣೆ, ಡಯಾಂಚ ಬೆಳೆಸುವ ಮೂಲಕ ಪರ್ಯಾಯ/ಪೂರಕ ಉದ್ಯಮಗಳಿಗೆ ಉತ್ತೇಜಿಸುವುದು.
ಸೆಕೆಂಡರಿ ಕೃಷಿ ಮಾರ್ಗಸೂಚಿ 2025-26
ಕರ್ನಾಟಕ ರಾಜ್ಯದ ರೈತರ ಆದಾಯ ದ್ವಿಗುಣಗೊಳಿಸುವನಿಟ್ಟಿನಲ್ಲಿ ರಾಜ್ಯ ಸೆಕೆಂಡರಿ ಕೃಷಿ ನಿರ್ದೇಶನಾಲಯವು ಮಾನ್ಯ ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷೆಯ ಪರಿಕಲ್ಪನೆಯಾಗಿರುತ್ತದೆ. ರಾಷ್ಟ್ರದಲ್ಲೇಪ್ರಥಮ ಬಾರಿಗೆ ಮಾದರಿಯಾಗಿ ಕರ್ನಾಟಕ ರಾಜ್ಯದಲ್ಲಿ ಈಯೋಜನೆಯನ್ನು ಅನುಷ್ಠಾನಗೊಳಿಸಲು ಯೋಜಿಸಲಾಗಿರುತ್ತದೆ.
ಕೃಷಿಯ ಪ್ರಾಥಮಿಕ ಉತ್ಪನ್ನಗಳನ್ನು, ಸ್ಥಳೀಯ ಮಾನವಸಂಪನ್ಮೂಲ ಮತ್ತು ಕೌಶಲ್ಯಗಳನ್ನು ಬಳಸಿ ಮೌಲ್ಯವರ್ಧನೆ ಮಾಡುವಮೂಲಕ ರೈತರಿಗೆ ಹೆಚ್ಚಿನ ಆದಾಯ ಒದಗಿಸುವಂತಹ ಚಟುವಟಿಕೆ /ಕಾರ್ಯಗಳನ್ನು ಸೆಕೆಂಡರಿ ಕೃಷಿ ಎಂದು ವ್ಯಾಖ್ಯಾನಿಸಲಾಗಿದೆ.
ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಪ್ರಾಣಿಜನ್ಯ ಉತ್ಪನ್ನಗಳಸಂಸ್ಕರಣೆ, ಗ್ರಾಮೀಣ ಮತ್ತು ಗುಡಿ ಕೈಗಾರಿಕೆಗಳ ಮೂಲಕ ರೈತರಿಗೆಹೆಚ್ಚಿನ ಆದಾಯ ತರಲು ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನಉದ್ಯೋಗ ಸೃಜನೆಗೆ, ಕೃಷಿ ಉತ್ಪನ್ನಗಳಿಂದ ಉಪ ಉತ್ಪನ್ನಗಳತಯಾರಿಕೆಗೆ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲು ಸುಸ್ಥಿರಹಾಗೂ ಕ್ರೋಡೀಕೃತ ವ್ಯವಸ್ಥೆಗಾಗಿ ಪ್ರತ್ಯೇಕ ರಾಜ್ಯ ಸೆಕೆಂಡರಿ ಕೃಷಿನಿರ್ದೇಶನಾಲಯವನ್ನು ಸರ್ಕಾರದ ಆದೇಶ ಸಂಖ್ಯೆ: ಎ.ಎಸ್. ಸಿ/73/2021 (ಪಿ.-3) ಬೆಂಗಳೂರು, ದಿನಾಂಕ: 18-01-2022 ರನ್ವಯಸ್ಥಾಪಿಸಲಾಗಿದೆ.
ಸೆಕೆಂಡರಿ ಕೃಷಿ ನಿರ್ದೇಶನಾಲಯವು ಕರ್ನಾಟಕ ರಾಜ್ಯದ ರೈತರಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಪ್ರಮುಖ ಸಂಸ್ಥೆಯಾಗಿರುತ್ತದೆ. ಸದರಿ ಆದೇಶದಲ್ಲಿ ಕೃಷಿ ಹಾಗೂ ಪೂರಕಚಟುವಟಿಕೆಗಳಿಗೆ ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆಅನುಷ್ಠಾನಗೊಳ್ಳಲು ಅನುವಾಗುವಂತೆ ಸೆಕೆಂಡರಿ ಕೃಷಿನಿರ್ದೇಶನಾಲಯವು ಕೃಷಿ, ಜಲಾನಯನ ಅಭಿವೃದ್ಧಿ, ಪಶುಸಂಗೋಪನೆ, ತೋಟಗಾರಿಕೆ, ರೇಷ್ಮೆ, ಕೃಷಿ ಮಾರುಕಟ್ಟೆ, ಅರಣ್ಯ ಹಾಗೂ ಇನ್ನಿತರೆಇಲಾಖೆಯ ಅಧಿಕಾರಿಗಳನ್ನು ಒಳಗೊಂಡಿರುತ್ತದೆ.
ಮಾರ್ಗದರ್ಶನಕ್ಕಾಗಿ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿರಾಜ್ಯಮಟ್ಟದ ಚಾಲನಾ ಸಮಿತಿ ಹಾಗೂ ಚಟುವಟಿಕೆಗಳಅನುಷ್ಠಾನಕ್ಕಾಗಿ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯನ್ನುರಚಿಸಲಾಗಿರುತ್ತದೆ.
ರೈತರ ಅದಾಯವನ್ನು ಹೆಚ್ಚಿಸುವ ಧ್ಯೇಯದೊಂದಿಗೆ ರಾಷ್ಟ್ರದಲ್ಲಿಯೇಮೊದಲ ಬಾರಿಗೆ ಸೆಕೆಂಡರಿ ಕೃಷಿ ನಿರ್ದೇಶನಾಲಯವನ್ನು ಸ್ಥಾಪಿಸಲಾಗಿದೆ. ರೈತ ಉತ್ಪಾದಕ ಸಂಸ್ಥೆಗಳನ್ನು ಬಳಸಿ ಕೃಷಿಯ ಪ್ರಾಥಮಿಕ ಉತ್ಪನ್ನಗಳಿಗೆಹೆಚ್ಚಿನ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸಲು ಇದುಸಹಕಾರಿಯಾಗಲಿದೆ ಎಂಬುದಾಗಿ ಘೋಷಿಸಿಲಾಗಿದೆ.
ಯೋಜನೆಯ ದೃಷ್ಟಿಕೋನ:
ಕೃಷಿಯಲ್ಲಿ ಇಲ್ಲಿಯವರೆಗೆ “ಇಳುವರಿ” ಹೆಚ್ಚಳಕ್ಕೆ ಹೆಚ್ಚಿನಮಹತ್ವವನ್ನು ನೀಡಲಾಗುತ್ತಿದ್ದು, ಸೆಕೆಂಡರಿ ಕೃಷಿ ನಿರ್ದೇಶನಾಲಯದಕಾರ್ಯಕ್ರಮಗಳ ಅನುಷ್ಠಾನ ಮೂಲಕ ಉಪ ಉತ್ಪನ್ನಗಳನ್ನುತಯಾರಿಸಲು ಉತ್ತೇಜನ ನೀಡುವುದರಿಂದ (ಇಳುವರಿ ಹೆಚ್ಚಳಕ್ಕೆಹೋಲಿಸಿದಾಗ) ಸ್ಥಳೀಯ ಉದ್ಯೋಗ ಸೃಜನೆಯಿಂದ ಆರ್ಥಿಕವೃದ್ಧಿಗೆ ಮಹತ್ವ ನೀಡಿದಂತಾಗುತ್ತದೆ.
ಕೃಷಿ ಪ್ರಾಥಮಿಕ ಉತ್ಪನ್ನಗಳನ್ನು ಸಂಸ್ಕರಿಸಿ / ಮೌಲ್ಯವರ್ಧನೆಮಾಡುವುದರ ಮೂಲಕ ಅವುಗಳಿಗೆ ಹೆಚ್ಚಿನ ಮೌಲ್ಯಒದಗಿಸಿದಂತಾಗುತ್ತದೆ.
ಕೃಷಿ ಸಂಸ್ಕರಣೆಯಲ್ಲಿ ನಾಲ್ಕು ವಿಧಗಳಿವೆ.
ಉದಾಹರಣೆ: ಸ್ವಚ್ಛತೆ, ವಿಂಗಡಣೆ, ವರ್ಗೀಕರಿಸುವುದು, ಇತ್ಯಾದಿಗಳನ್ನು ಒಳಗೊಂಡಿರುತ್ತದೆ.
ಉದಾಹರಣೆ: ಉಪ್ಪಿನಕಾಯಿ, ಪಾಪಡ್, ಕೆಚಪ್ –ಆಹಾರಉತ್ಪನ್ನಗಳು
ಕಾಂಪೋಸ್ಟ್, ಚಾರ್ ಕೋಲ್ –ಆಹಾರೇತರಉತ್ಪನ್ನಗಳು
ಉದಾಹರಣೆ: ತಿನ್ನಲು ಸಿದ್ಧ (ready-to-eat) / ಬಿಸಿಮಾಡಿ ಊಟ ಮಾಡುವ ಆಹಾರಗಳು (heat-and-serve foods).
2. ಸೆಕೆಂಡರಿ ಕೃಷಿಯ ಗುರಿ , ಉದ್ದೇಶಗಳು ಮತ್ತು ಸಹಯೋಗಇಲಾಖೆಗಳು / ಸಂಸ್ಥೆಗಳು
2.1 ಸೆಕೆಂಡರಿ ಕೃಷಿಯ ಗುರಿ:
ಕೃಷಿ ಪ್ರಾಥಮಿಕ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡುವುದರಮೂಲಕ ಈ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಅವಕಾಶಗಳನ್ನುಸೃಷ್ಟಿಸಿ ರೈತರ ಆದಾಯವನ್ನು ಹೆಚ್ಚಿಸುವುದು.
2.2 ಸೆಕೆಂಡರಿ ಕೃಷಿಯ ಉದ್ದೇಶಗಳು
2.3 :ಸಹಯೋಗ ಇಲಾಖೆಗಳು
2.4: ಸಹಯೋಗ ಸಂಸ್ಥೆಗಳು
2.5: ಸಹಯೋಗ ಇಲಾಖೆಗಳು/ ಸಂಸ್ಥೆಗಳು ಸೆಕೆಂಡರಿ ಕೃಷಿಚಟುವಟಿಕೆಗಳನ್ನು ಕೈಗೊಳ್ಳಲು ಪಾಲಿಸಬೇಕಾದ ಅಂಶಗಳು
1. ಸೆಕೆಂಡರಿ ಕೃಷಿ ಚಟುವಟಿಕೆಗಳ ಗುರುತಿಸುವಿಕೆ
2. ಚಟುವಟಿಕೆಗಳ ಆಯ್ಕೆ ಮತ್ತು ಯೋಜನಾ ವರದಿ ತಯಾರಿ
3. ಚಟುವಟಿಕೆಗಳ ಯಶಸ್ಸಿನ ಮೌಲ್ಯಮಾಪನ ಮತ್ತು ವರದಿತಯಾರಿಕೆ
2.5.1: ಸೆಕೆಂಡರಿ ಕೃಷಿ ಚಟುವಟಿಕೆಗಳ ಗುರುತಿಸುವಿಕೆ ಹಾಗೂ ಬೆಳೆವಾರು ಚಟುವಟಿಕೆಗಳ ಮ್ಯಾಪಿಂಗ್
ರೈತರು ಕೃಷಿಯಲ್ಲಿ ಸಂಪನ್ಮೂಲಗಳನ್ನು ಸಮರ್ಪಕವಾಗಿಬಳಸಿಕೊಂಡು ಆರ್ಥಿಕವಾಗಿ ಮುಂದುವರೆಯಲು ತಾಲ್ಲೂಕಿನ ಮುಖ್ಯಬೆಳೆಗಳನ್ನು (ಉತ್ಪನ್ನ) ಆಯ್ಕೆ ಮಾಡಿ ಆದ್ಯತೆ ನೀಡುವುದು.
2.5.2: ಚಟುವಟಿಕೆಗಳ ಆಯ್ಕೆ ಮತ್ತು ಯೋಜನೆ ವರದಿ ತಯಾರಿ
ಚಟುವಟಿಕೆಗಳ ಆಯ್ಕೆಯಲ್ಲಿನ ಮಾನದಂಡಗಳು:
ಯೋಜನೆ ಆಯ್ಕೆಗೆ ಉದಾಹರಣೆಗಳು:
ಕ್ರ ಸಂ |
ಯೋಜನೆಯ ಹೆಸರು |
ಶ್ರಮ/ ವೆಚ್ಚ |
ಪರಿಣಾಮ/ ಲಾಭ |
ಶಿಫಾರಸ್ಸು |
1 |
ಕೃಷಿ ತ್ಯಾಜ್ಯ ಸಂಸ್ಕರಣೆ |
ಮಧ್ಯಮ |
ಹೆಚ್ಚು |
ಸೆಕೆಂಡರಿ ಕೃಷಿ ಯೋಜನೆಗಳಡಿಪರಿಗಣಿಸುವುದು. |
2 |
ರೈತ ಉತ್ಪಾದಕ ಸಂಸ್ಥೆಗಳ ಮಾರುಕಟ್ಟೆವೇದಿಕೆ/ ವ್ಯವಸ್ಥೆ |
ಹೆಚ್ಚು |
ಹೆಚ್ಚು |
ಸೆಕೆಂಡರಿ ಕೃಷಿ ಯೋಜನೆಗಳಡಿಪರಿಗಣಿಸುವುದು. |
3 |
ಪಾಲಿಹೌಸ್ ಕೃಷಿ |
ಹೆಚ್ಚು |
ಹೆಚ್ಚು |
ಚಾಲ್ತಿ ಯೋಜನೆಗಳಡಿಪರಿಗಣಿಸುವುದು. |
ಶ್ರಮವನ್ನು ಕಡಿಮೆ, ಮಧ್ಯಮ ಮತ್ತು ಹೆಚ್ಚು ಎಂದು ವರ್ಗಗಳಾಗಿವಿಂಗಡಣೆ ಮಾಡಲು ಚಟುವಟಿಕೆಗಳಿಗೆ ತಗಲುವ ಸಮಯ, ಅನುದಾನಮತ್ತು ಸಂಕೀರ್ಣತೆಯನ್ನು ಪರಿಗಣಿಸಬಹುದಾಗಿದೆ. ಹಾಗೆಯೇ, ಲಾಭದವರ್ಗಗಳ ವಿಂಗಡಣೆಗೆ, ಮೂಲ ಆರ್ಥಿಕ ಬಂಡವಾಳ ಹೂಡಿಕೆ ಮೇಲಿನಪ್ರತಿಫಲದನ್ವಯ (Returns on investment-ROI) ಪರಿಗಣಿಸುವುದು.
2.5.3: ಚಟುವಟಿಕೆಗಳ ಯಶಸ್ಸಿನ ಮೌಲ್ಯಮಾಪನ ಮತ್ತು ವರದಿತಯಾರಿಕೆ:
3 : ಸೆಕೆಂಡರಿ ಕೃಷಿಗೆ ಸಂಬಂಧಿಸಿದಂತೆ ರೈತರ ಆದಾಯ ಹೆಚ್ಚಿಸಲುನವೀನ ಪರಿಕಲ್ಪನೆಗಳು :
ಸೆಕೆಂಡರಿ ಕೃಷಿ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಕೆಲವುಪರಿಣಾಮಕಾರಿ ಯೋಜನೆಗಳ ಕುರಿತು
3.1 ಕೃಷಿ ತ್ಯಾಜ್ಯ ಬಳಸಿ ಹೆಚ್ಚಿನ ಆದಾಯ ಗಳಿಕೆ
3.2 ರೈತ ಉತ್ಪಾದಕ ಸಂಸ್ಥೆಗಳಿಗೆ ಸೀಮಿತವಾಗಿರುವ ಇ-ಮಾರುಕಟ್ಟೆ(Digital platform)
ವೇದಿಕೆಯನ್ನು ಎಲ್ಲಾ ಮಾರಾಟ ಕೇಂದ್ರಗಳಿಗೆ ವಿಸ್ತರಣೆಮಾಡುವುದು.
ವಿವರ ಕೆಳಗಿನಂತಿವೆ:
3.1 ಕೃಷಿ ತ್ಯಾಜ್ಯ ಬಳಸಿ ಹೆಚ್ಚಿನ ಆದಾಯ ಗಳಿಕೆ :
ಅ) ಬೆಳೆಯ ಅವಶೇಷಗಳು ಹಲವು ಕೈಗಾರಿಕೆಗಳಿಗೆ ಪೂರಕವಸ್ತುಗಳಾಗಿರುತ್ತವೆ. ಆದ್ದರಿಂದ ಸಂಸ್ಕರಣೆಯಿಂದ ಇವುಗಳನ್ನುಹಲವಾರು ಕೈಗಾರಿಕೆಗಳಾಗಿ ರೂಪಿಸಬಹುದಾಗಿರುತ್ತದೆ.
ಉಪಯೋಗಗಳು:
ಆ) ಕೃಷಿ ತ್ಯಾಜ್ಯಗಳಿಂದ ಕಾಂಪೋಸ್ಟ್ ತಯಾರಿಸುವುದು
3.3 ಗ್ರಾಮ ಮಟ್ಟದಲ್ಲಿ ಕೃಷಿ ಉತ್ಪನ್ನಗಳಿಗೆ ಅವಶ್ಯವಿರುವ ಎಲ್ಲಾಕೃಷಿ ಸಂಸ್ಕರಣಾ ಘಟಕಗಳನ್ನು ಒಂದೇ ಸೂರಿನಡಿ ಸ್ಥಾಪಿಸುವುದು(Common Facility Center for Agro Processing similar to CHSC) ಮತ್ತು ಸದರಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಯನ್ನುಪ್ರತ್ಯೇಕವಾಗಿ ಕಲ್ಪಿಸುವುದು.
ಜಿಲ್ಲೆಯ ಮುಖ್ಯ ಬೆಳೆಗಳನ್ನು ಆದರಿಸಿ ಸದರಿ ಕೃಷಿ ಉತ್ಪನ್ನಗಳನ್ನುಸೆಕೆಂಡರಿ ಕೃಷಿಗೆ ಪರಿಗಣಿಸಲು ಬೇಕಾದ ಹಾಗೂ ಗ್ರಾಮ ಮಟ್ಟದಲ್ಲಿಅವಶ್ಯವಿರುವ ಎಲ್ಲಾ ಕೃಷಿ ಸಂಸ್ಕರಣಾ ಘಟಕಗಳನ್ನು ಒಂದೇ ಸೂರಿನಡಿಸ್ಥಾಪಿಸುವುದು. ಇದನ್ನು ಸ್ಥಳೀಯ ಉದ್ದಿಮೆದಾರರು / ಉತ್ತಮ ರೈತಉತ್ಪಾದಕ ಸಂಸ್ಥೆ /ಸ್ವಸಹಾಯ ಗುಂಪು ಇವರ ನೇತೃತ್ವದಲ್ಲಿ ಸ್ಥಾಪಿಸಲುಉದ್ದೇಶಿಸಲಾಗಿದೆ. ಈ ಮೂಲಭೂತ ಸೌಕರ್ಯಗಳನ್ನು ಬಳಸಿ ತಯಾರಿಸಲಾದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಯನ್ನು ಪ್ರತ್ಯೇಕವಾಗಿ ಕಲ್ಪಿಸುವುದು.
ಜಿಲ್ಲಾವಾರು ಸೆಕೆಂಡರಿ ಕೃಷಿಗೆ ಸಾಮರ್ಥ್ಯವಿರುವ ಚಟುವಟಿಕೆಗಳನ್ನುಆಯ್ಕೆ ಮಾಡುವುದು.
ಸ್ಥಳೀಯವಾಗಿ ಚಾಲ್ತಿಯಲ್ಲಿರುವ ಉದ್ಯಮಗಳಿಗೆ ಇನ್ನೂ ಹೆಚ್ಚಿನ ತಾಂತ್ರಿಕತೆಗಳನ್ನು
ಉತ್ತೇಜಿಸುವ ಮೂಲಕ ಸೆಕೆಂಡರಿ ಕೃಷಿಯಲ್ಲಿ ಅಳವಡಿಸಬಹುದಾಗಿದೆ.
4 : ಒಗ್ಗೂಡಿಸುವಿಕೆಯಡಿಯಲ್ಲಿ ಈ ಕೆಳಗಿನ ಕೇಂದ್ರ ಪುರಸ್ಕೃತ ಯೋಜನೆಗಳನ್ನು ಪರಿಗಣಿಸುವುದು
ಇದೇ ರೀತಿ ವಿವಿಧ ಇಲಾಖೆಯಡಿ ಲಭ್ಯವಿರುವ ಯೋಜನೆಗಳನ್ನು ಪರಿಗಣಿಸುವುದು5. ಸೆಕೆಂಡರಿ ಕೃಷಿಯ ಅನುಷ್ಠಾನ ಮಾರ್ಗಸೂಚಿ:
5.1 ಪೀಠಿಕೆ:
ರೈತರ ಆದಾಯವನ್ನು ಹೆಚ್ಚಿಸುವ ಧ್ಯೇಯದೊಂದಿಗೆ ರಾಷ್ಟ್ರದಲ್ಲೇ ಮೊದಲ ಬಾರಿಗೆ ಸೆಕೆಂಡರಿ ಕೃಷಿ ನಿರ್ದೇಶನಾಲಯವನ್ನು ಸ್ಥಾಪಿಸಲಾಗಿದೆ. ರೈತ ಉತ್ಪಾದಕರ ಸಂಸ್ಥೆಗಳನ್ನು ಬಳಸಿ ಕೃಷಿಯ ಪ್ರಾಥಮಿಕ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ, ಈ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸಲು ಸಹಕಾರಿಯಾಗಲಿದೆ ಎಂದು 2022-23ನೇ ಸಾಲಿನಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದ ಆಯವ್ಯಯದಲ್ಲಿ ಘೋಷಣೆಯಾಗಿದೆ.
ಕರ್ನಾಟಕ ರಾಜ್ಯದ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸೆಕೆಂಡರಿ ಕೃಷಿ ನಿರ್ದೇಶನಾಲಯವು ಮಾನ್ಯ ಮುಖ್ಯ ಮಂತ್ರಿಗಳ ಮಹತ್ವಾಕಾಂಕ್ಷಿ ಪರಿಕಲ್ಪನೆಯಾಗಿರುತ್ತದೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಪ್ರಾಣಿಜನ್ಯ ಉತ್ಪನ್ನಗಳ ಸಂಸ್ಕರಣೆ, ಗ್ರಾಮೀಣ ಮತ್ತು ಗುಡಿ ಕೈಗಾರಿಕೆಗಳ ಮೂಲಕ ರೈತರಿಗೆ ಹೆಚ್ಚಿನ ಆದಾಯ ತರಲು ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಉದ್ಯೋಗ ಸೃಜನೆಗೆ ಪೂರಕವಾಗಿ, ಕೃಷಿ ಉತ್ಪನ್ನಗಳಿಂದ ಉಪ ಉತ್ಪನ್ನಗಳ ತಯಾರಿಕೆಗೆ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲು ಸುಸ್ಥಿರ ಹಾಗೂ ಕ್ರೂಡೀಕೃತ ವ್ಯವಸ್ಥೆಗಾಗಿ ಪ್ರತ್ಯೇಕ ರಾಜ್ಯ ಸೆಕೆಂಡರಿ ಕೃಷಿ ನಿರ್ದೇಶನಾಲಯವನ್ನು ಸರ್ಕಾರದ ಆದೇಶ ಸಂ: ಎ ಎಸ್ ಸಿ/73/2021(ಪಿ-3), ಬೆಂಗಳೂರು, ದಿನಾಂಕ: 18-01-2022 ರನ್ವಯಅಧಿಸೂಚಿಸಲಾಗಿದೆ.
ಸೆಕೆಂಡರಿ ಕೃಷಿ ನಿರ್ದೇಶನಾಲಯವು ಕರ್ನಾಟಕ ರಾಜ್ಯದ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಸಂಸ್ಥೆಯಾಗಿದ್ದು, ರಾಷ್ಟ್ರದಲ್ಲೇ ಪ್ರಪ್ರಥಮ ಮಾದರಿಯಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಯೋಜಿಸಲಾಗಿರುತ್ತದೆ.
ಸರ್ಕಾರದ ಆದೇಶ ಸಂಖ್ಯೆ: AGRI-AML/172/2023, ದಿನಾಂಕ: 06-09-2023 ರನ್ವಯ, ಸೆಕೆಂಡರಿ ಕೃಷಿ ನಿರ್ದೇಶನಾಯದಕಾರ್ಯಕ್ರಮಗಳ ಅನುಷ್ಠಾನ ಮಾರ್ಗಸೂಚಿಯನ್ನುಅನುಮೋದಿಸಲಾಗಿರುತ್ತದೆ. ಅದರಂತೆ ಕೃಷಿ ಹಾಗೂ ಕೃಷಿ ಸಂಬಂಧಿತಅವಶ್ಯವಿರುವ ಕ್ರಿಯಾಯೋಜನೆಯನ್ನು ಸೆಕೆಂಡರಿ ಕೃಷಿನಿರ್ದೇಶನಾಲಯದ ಮೂಲಕ ರಾಜ್ಯಾದ್ಯಂತಅನುಷ್ಠಾನಗೊಳಿಸಲಾಗುತ್ತದೆ.
5.2 : ಆಯವ್ಯಯ:
2024-25ನೇ ಸಾಲಿನಲ್ಲಿ ಯೋಜನೆಯ ಅನುಷ್ಠಾನಕ್ಕಾಗಿಆಯವ್ಯಯದಲ್ಲಿ ರೂ.1.97 ಕೋಟಿಗಳ ಅನುದಾನವನ್ನು ನಿಗಧಿಪಡಿಸಲಾಗಿದೆ.
5.3 : ಯೋಜನೆಯ ಕಾರ್ಯ ವ್ಯಾಪ್ತಿ
ಕರ್ನಾಟಕ ರಾಜ್ಯದ ಹವಾಮಾನ ಆಧಾರಿತ ಕೃಷಿ ವಲಯದಆಧಾರದ ಮೇಲೆ ಐದು ಜಿಲ್ಲೆಗಳನ್ನು ಆಯ್ಕೆ ಮಾಡಿ ಅನುಷ್ಠಾನಮಾಡಲಾಗುವುದು. ಆಯ್ಕೆ ಮಾನದಂಡ ಮತ್ತು ಆಯ್ಕೆಯಾದ ಜಿಲ್ಲೆ ವಿವರ ಕೆಳಗಿನಂತಿದೆ.
ಕ್ರ ಸಂ |
ಆಯ್ಕೆಯಾದ ಜಿಲ್ಲೆ |
ಕೃಷಿ ವಲಯ |
ತಾಲ್ಲೂಕುಗಳ ಸಂಖ್ಯೆ |
1 |
ಕಲಬುರ್ಗಿ |
ಈಶಾನ್ಯ ಅರೆಮಲೆನಾಡು ಮತ್ತು ಈಶಾನ್ಯ ಒಣ ವಲಯ |
7 |
2 |
ವಿಜಯಪುರ |
ಉತ್ತರ ಒಣ ವಲಯ |
5 |
3 |
ದಾವಣಗೆರೆ |
ಮದ್ಯಮ ಒಣ ವಲಯ ಮತ್ತು ದಕ್ಷಿಣ ಅರೆಮಲೆನಾಡು ವಲಯ |
6 |
4 |
ಮಂಡ್ಯ |
ದಕ್ಷಿಣ ಒಣ ವಲಯ |
7 |
5 |
ಚಿಕ್ಕಮಗಳೂರು |
ದಕ್ಷಿಣ ಅರೆಮಲೆನಾಡು ವಲಯ, ಮದ್ಯಮ ಒಣ ವಲಯ ಮತ್ತು ಗುಡ್ಡಗಾಡು ವಲಯ |
7 |
ಒಟ್ಟು |
32 |
ಸೂಚನೆ:
ಜಿಲ್ಲಾವಾರು ಸೆಕೆಂಡರಿ ಕೃಷಿಗೆ ಸೂಕ್ತವಿರುವ ಚಟುವಟಿಕೆಗಳನ್ನು ಗುರುತಿಸುವ ಕುರಿತು
ಕರ್ನಾಟಕ ರಾಜ್ಯದಲ್ಲಿ ಜಿಲ್ಲಾವಾರು ಬೆಳೆಗಳಲ್ಲಿ, ಕೃಷಿ ಹಾಗೂ ಕೃಷಿ ಸಂಬಂಧಿತ ವಲಯಗಳಲ್ಲಿ ಅಗಾಧವಾದ ವೈವಿಧ್ಯತೆಯನ್ನು ಕಾಣಬಹುದಾಗಿದೆ. ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಪದ್ಧತಿ, ಪಶು ಸಂಗೋಪನೆ, ರೇಷ್ಮೆ, ಮೀನುಗಾರಿಕೆ, ಅರಣ್ಯ ಇತ್ಯಾದಿಗಳ ಆಧಾರದಲ್ಲಿ ಜಿಲ್ಲೆಗಳಲ್ಲಿ ವಿಭಿನ್ನ ಚಟುವಟಿಕೆಗಳಿಗೆ ಅವಕಾಶವಿದ್ದು, ಸ್ಥಳೀಯ ಅವಶ್ಯಕತೆ ಹಾಗೂ ಬೇಡಿಕೆಯನುಸಾರ ಸೂಕ್ತ ಚಟುವಟಿಕೆಗಳನ್ನು ಕೈಗೊಂಡಲ್ಲಿ ರೈತರ ಆದಾಯವನ್ನು ವೃದ್ಧಿಸಬಹುದಾಗಿದೆ.
ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಜಿಲ್ಲಾವಾರು ಸೆಕೆಂಡರಿ ಕೃಷಿಗೆಸೂಕ್ತವಾಗಿರುವ ಸಂಭಾವ್ಯ ಚಟುವಟಿಕೆಗಳನ್ನು ಸ್ಥಳೀಯ ಅವಶ್ಯಕತೆಗನುಗುಣವಾಗಿ ಗುರುತಿಸುವ ಅವಶ್ಯಕತೆ ಇರುತ್ತದೆ. ಈ ಕಾರ್ಯವನ್ನು ಕೈಗೊಳ್ಳಲು ಸೂಕ್ತ ಸಂಸ್ಥೆಯನ್ನು ಗುರುತಿಸಿ, ನಿಗಧಿತ ಸಮಯದಲ್ಲಿ ಜಿಲ್ಲಾವಾರು ಸೂಕ್ತವಾದ ಲಾಭದಾಯಕ ಸೆಕೆಂಡರಿ ಕೃಷಿ ಚಟುವಟಿಕೆಗಳ ಮಾಹಿತಿಯನ್ನು ಕ್ರೋಡೀಕರಿಸಿ ವರದಿಯನ್ನು ತಯಾರಿಸುವುದು. ಸದರಿ ಕಾರ್ಯವನ್ನು ಕೈಗೊಳ್ಳಲು ಸೂಕ್ತವಾದ ಸಂಸ್ಥೆಯನ್ನು ನಿಯಮಾನುಸಾರ ಆಯ್ಕೆ ಮಾಡುವುದು ಹಾಗೂ ಇದಕ್ಕೆ ತಗಲುವ ವೆಚ್ಚವನ್ನು ಸಂಬಂಧಿಸಿದ ಘಟಕದಡಿ ಭರಿಸುವುದು.
ಸೆಕೆಂಡರಿ ಕೃಷಿಯಲ್ಲಿ ಕೈಗೊಳ್ಳುವ ಕಾರ್ಯಕ್ರಮ/ ಚಟುವಟಿಕೆಗಳ ವಿವರ :
ಸೆಕೆಂಡರಿ ಕೃಷಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಿಂದ ಈ ಕೆಳಗಿನ ಘಟಕಗಳಡಿ ಕೈಗೊಳ್ಳುವ ಕಾರ್ಯಕ್ರಮ/ ಚಟುವಟಿಕೆಗಳಿಗೆ ರೂಪಿಸುವ ಯೋಜನಾ ವರದಿಗಳನ್ವಯ ಅನುದಾನ ನೀಡಲಾಗುವುದು. ಸೆಕೆಂಡರಿ ಕೃಷಿ ಚಟುವಟಿಕೆಗಳನ್ನು ಪ್ರಮುಖವಾಗಿ 3 ವಿಧವಾಗಿ ವಿಂಗಡಿಸಿದೆ.
ಅ) ಉತ್ಪಾದಿತ ಬೆಳೆಗಳ ಮೌಲ್ಯವರ್ಧನೆ: ಜಿಲ್ಲಾವಾರು ಪ್ರಮುಖ ಬೆಳೆಗಳ ಆಹಾರ ಸರಪಳಿಯಡಿ ಬರುವ ಚಟುವಟಿಕೆಗಳ ಉತ್ತೇಜನ-“Type A” activities.
ಆ) ಪರ್ಯಾಯ ಉದ್ಯಮಗಳಿಗೆ ಉತ್ತೇಜನ – “Type B” activities
ಇ) ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಪಶು ಸಂಗೋಪನಾ ತ್ಯಾಜ್ಯಗಳನ್ನು ಬಳಸಿ ಕೈಗೊಳ್ಳಬಹುದಾದ ಚಟುವಟಿಕೆಗಳಿಗೆ ಉತ್ತೇಜನ- “Type –C “activities
(ಸೂಚನೆ: ಪಿ.ಎಮ್.ಎಫ್.ಎಮ್.ಇ. (PMFME) ಯೋಜನೆಯಡಿಕೈಗೊಳ್ಳಬಹುದಾದ ಚಟುವಟಿಕೆಗಳನ್ನು ಹೊರತುಪಡಿಸಿದ (separate Food Processing Directorate) ಚಟುವಟಿಕೆಗಳಿಗೆ ಸೆಕೆಂಡರಿ ಕೃಷಿ ಯೋಜನೆಯಡಿ ಒತ್ತು ನೀಡುವುದು)
5.4 ತಾಂತ್ರಿಕ ಸಮಿತಿಗಳು:
1. ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ:
ವೈಯಕ್ತಿಕ ಮತ್ತು ಗುಂಪು ಆಧಾರಿತ ಚಟುವಟಿಕೆಗಳ ಎಲ್ಲಾ ಯೋಜನಾ ವರದಿಗಳನ್ನು ಈ ಕೆಳಗಿನ ತಾಂತ್ರಿಕ ಸಮಿತಿಯು ಮಾರ್ಗಸೂಚಿಯನ್ವಯ ಪರಿಶೀಲಿಸಿ, ತನ್ನ ಶಿಫಾರಸ್ಸಿನೊಂದಿಗೆಅನುಮೋದನೆಗಾಗಿ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಗೆ ಸಲ್ಲಿಸುವುದು.
ಕ್ರ.ಸಂ |
ಸದಸ್ಯರ ಹುದ್ದೆ |
ಸ್ಥಾನ |
1. |
ಜಂಟಿ ಕೃಷಿ ನಿರ್ದೇಶಕರು |
ಅಧ್ಯಕ್ಷರು |
2. |
ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕರು ಅಥವಾ ಸಂಬಂಧಿಸಿದ ವಿಜ್ಞಾನಿಗಳು |
ಸದಸ್ಯರು |
3. |
ಜಂಟಿ ನಿರ್ದೇಶಕರು (ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ) |
ಸದಸ್ಯರು |
4. |
ಉಪ ನಿರ್ದೇಶಕರು(ಪಶು ಸಂಗೋಪನೆ) |
ಸದಸ್ಯರು |
5. |
ಉಪ ನಿರ್ದೇಶಕರು (ತೋಟಗಾರಿಕೆ) |
ಸದಸ್ಯರು |
6. |
ಉಪ ನಿರ್ದೇಶಕರು (ರೇಷ್ಮೆ) |
ಸದಸ್ಯರು |
7. |
ಉಪ ನಿರ್ದೇಶಕರು (ಮೀನುಗಾರಿಕೆ) |
ಸದಸ್ಯರು |
8 |
ಪ್ರಸ್ತಾಪಿಸಿದ ಯೋಜನಾ ವರದಿಯ ಸಂಬಂಧಿತ ಜಿಲ್ಲಾ ಮಟ್ಟದ ಅಧಿಕಾರಿಗಳು |
ಸದಸ್ಯರು |
9 |
ಗುರುತಿಸಲಾದ ಜಿಲ್ಲಾ ಸಂಪನ್ಮೂಲ ವ್ಯಕ್ತಿ |
ಸದಸ್ಯರು |
10 |
ಸಹಾಯಕ ಕೃಷಿ ನಿರ್ದೇಶಕರು (ವಿ. ತ) |
ಸಂಚಾಲಕರು |
ಪರಿಶೀಲಿಸಬೇಕಾದ ಮುಖ್ಯ ಅಂಶಗಳು :
2. ರಾಜ್ಯ ಮಟ್ಟದ ತಾಂತ್ರಿಕ ಸಮಿತಿ
ಸಮುದಾಯ ಸೆಕೆಂಡರಿ ಕೃಷಿ ಉದ್ದಿಮೆಗೆ ಸಂಬಂಧಿಸಿದ ಯಂತ್ರೋಪಕರಣಗಳ ಸ್ಥಾಪನೆಗೆ (ಬಾಡಿಗೆ ಆಧಾರಿತ ಸೇವಾ ಕೇಂದ್ರಮಾದರಿಯಂತೆ) ಸಂಬಂಧಿಸಿದ ಎಲ್ಲಾ ಯೋಜನಾ ವರದಿಗಳನ್ನು ಈ ಕೆಳಗಿನ ತಾಂತ್ರಿಕ ಸಮಿತಿಯು ಮಾರ್ಗಸೂಚಿಯನ್ವಯ ಪರಿಶೀಲಿಸಿ, ಸೂಕ್ತ ಯೋಜನಾ ವರದಿಯನ್ನು ಅನುಮೋದಿಸಿ ಸಂಬಂಧಿಸಿದ ಜಿಲ್ಲಾ ಮಟ್ಟದ ಸಮಿತಿಗೆ ಅನುಷ್ಠಾನಕ್ಕಾಗಿ ಕಳುಹಿಸುವುದು. ರಾಜ್ಯ ಮಟ್ಟದ ತಾಂತ್ರಿಕ ಸಮಿತಿಯಲ್ಲಿ ಅನುಮೋದನೆಗೊಂಡ ಯೋಜನಾ ವರದಿಗಳನ್ನು ರಾಜ್ಯ ಮಟ್ಟದ ಚಾಲನಾ ಸಮಿತಿ ಸಭೆಯ ಗಮನಕ್ಕೆ ಮಂಡಿಸುವುದು.
ಕ್ರ.ಸಂ
|
ಸದಸ್ಯರ ಹುದ್ದೆ |
ಸ್ಥಾನ |
1. |
ನಿರ್ದೇಶಕರು , ರಾಜ್ಯ ಸೆಕೆಂಡರಿ ಕೃಷಿ ನಿರ್ದೇಶನಾಲಯ |
ಅಧ್ಯಕ್ಷರು |
2. |
ಸಂಬಂಧಿಸಿದ ಕೃಷಿ ವಿಶ್ವ ವಿದ್ಯಾಲಯದ ಇನ್ಕುಬೇಷನ್ ಕೇಂದ್ರದ ವಿಜ್ಞಾನಿಗಳು |
ಸದಸ್ಯರು |
3. |
ಜಂಟಿ ನಿರ್ದೇಶಕರು(ಪಶು ಸಂಗೋಪನೆ)* |
ಸದಸ್ಯರು |
4. |
ಜಂಟಿ ನಿರ್ದೇಶಕರು (ತೋಟಗಾರಿಕೆ)* |
ಸದಸ್ಯರು |
5. |
ಜಂಟಿ ನಿರ್ದೇಶಕರು (ರೇಷ್ಮೆ)* |
ಸದಸ್ಯರು |
6. |
ಜಂಟಿ ನಿರ್ದೇಶಕರು( ಮೀನುಗಾರಿಕೆ)* |
ಸದಸ್ಯರು |
7 |
ಜಂಟಿ ಕೃಷಿ ನಿರ್ದೇಶಕರು(ಜಲಾನಯನ ಅಭಿವೃದ್ಧಿ)* |
ಸದಸ್ಯರು |
8 |
ಪ್ರಸ್ತಾಪಿಸಿದ ಯೋಜನಾ ವರದಿಯ ಸಂಬಂಧಿತ ರಾಜ್ಯ ಮಟ್ಟದ ನೋಡಲ್ ಅಧಿಕಾರಿಗಳು |
ಸದಸ್ಯರು |
9 |
ಜಂಟಿ ಕೃಷಿ ನಿರ್ದೇಶಕರು (ಸೆಕೆಂಡರಿ ಕೃಷಿ ನಿರ್ದೇಶನಾಲಯ)* |
ಸದಸ್ಯ ಕಾರ್ಯದರ್ಶಿಗಳು |
* ಆಯಾ ಇಲಾಖೆಯ ಸೆಕೆಂಡರಿ ಕೃಷಿ ಕಾರ್ಯಪಡೆ ಮುಖ್ಯಸ್ಥರು
ಪರಿಶೀಲಿಸಬೇಕಾದ ಮುಖ್ಯ ಅಂಶಗಳು :
5.5: ಸೆಕೆಂಡರಿ ಕೃಷಿಯ ಮುಖ್ಯ ಘಟಕಗಳು
ಯೋಜನಾ ವರದಿಯಲ್ಲಿ ಪರಿಗಣಿಸಬೇಕಾದ ಅಂಶಗಳು:
ಅ) 3 ಲಕ್ಷದವರೆಗಿನ ಸಹಾಯಧನದ ಪ್ರಸ್ತಾವನೆಗಳಿಗೆ: ಎಲ್ಲಾ ವರ್ಗದ ರೈತರಿಗೆ ಕಿರು ಉದ್ಯಮವನ್ನು ಸ್ಥಾಪಿಸಲು/ ಮೇಲ್ದರ್ಜೆಗೇರಿಸಲು ಅನುವಾಗುವಂತೆ ಶೇ. 50 ರ ಸಹಾಯಧನಅಥವಾ ಗರಿಷ್ಟ ಸಹಾಯಧನ ರೂ.3.00 ಲಕ್ಷಗಳು ಮೀರದಂತೆ, ಅರ್ಹಯೋಜನಾ ಪ್ರಸ್ತಾವನೆಗಳಿಗೆ ಜಿಲ್ಲಾ ಅನುಷ್ಟಾನ ಸಮಿತಿಯಲ್ಲಿಅನುಮೋದನೆ ಪಡೆದು ಸಹಾಯಧನ ನೀಡುವುದು.
ಫಲಾನುಭವಿಗಳು ಉಳಿಕೆ ಶೇ.50 ನ್ನು ಬ್ಯಾಂಕ್ ಸಾಲ/ ಸ್ವಂತ ಬಂಡವಾಳ ಹೂಡಿಕೆಯಿಂದ ಅನುಷ್ಟಾನ ಮಾಡಲು ಅವಕಾಶವಿರುತ್ತದೆ. ಸಹಾಯಧನವನ್ನು ಬ್ಯಾಂಕ್ ಸಾಲದ ಮುಖಾಂತರ (Backended subsidy) ಅಥವಾ ನೇರವಾಗಿ ಫಲಾನುಭವಿಗೆ ಅಥವಾ ಮಾರಾಟಗಾರರಿಗೆ (vendor) ನೀಡಲಾಗುವುದು.
ಆ) ರೂ. 3 -10 ಲಕ್ಷದವರೆಗಿನ ಸಹಾಯಧನದ ಪ್ರಸ್ತಾವನೆಗಳಿಗೆ: ಎಲ್ಲಾ ವರ್ಗದ ರೈತರಿಗೆ ಶೇ. 50 ರ ಸಹಾಯಧನ ಅಥವಾ ಗರಿಷ್ಟ ರೂ.10.00 ಲಕ್ಷಗಳು ಮೀರದಂತೆ ಸಹಾಯಧನದ ಪ್ರಸ್ತಾವನೆಗಳಿಗೆ ಜಿಲ್ಲಾ ಅನುಷ್ಟಾನ ಸಮಿತಿಯಲ್ಲಿ ಅನುಮೋದನೆ ಪಡೆದು ಅನುಷ್ಟಾನ ಮಾಡುವುದು. ಫಲಾನುಭವಿಗಳು ಉಳಿಕೆ ಶೇ.50 ನ್ನು ಕಡ್ಡಾಯವಾಗಿ ಬ್ಯಾಂಕ್ ಸಾಲದ ರೂಪದಲ್ಲಿ ಪಡೆದುಕೊಳ್ಳುವುದು.
ಸಹಾಯಧನವನ್ನು ಬ್ಯಾಂಕ್ ಸಾಲದ ಮುಖಾಂತರ(Backended subsidy) ಅಥವಾ ಮಾರಾಟಗಾರರಿಗೆ (vendor) ನೀಡಲಾಗುವುದು.
ಸಹಾಯಧನಕ್ಕಾಗಿ ಈ ಕೆಳಗಿನ ವೆಚ್ಚಗಳನ್ನು ಮಾತ್ರ ಪರಿಗಣಿಸಲಾಗುವುದು.
ಸೆಕೆಂಡರಿ ಕೃಷಿ ಕೈಗೊಳ್ಳುವ ಉತ್ಪಾದಕ ಸಂಸ್ಥೆಗಳಿಗೆ /ಸ್ವಸಹಾಯಗುಂಪಿಗೆ/ ಸಂಘ ಸಂಸ್ಥೆಗಳು/ ಸಹಾಕಾರಿ ಸಂಘಗಳು ಇತ್ಯಾದಿ ಸಂಸ್ಥೆಗಳಿಗೆಅನುಮೋದಿತ ಯೋಜನಾ ವೆಚ್ಚದ ಗರಿಷ್ಟ 10 ಲಕ್ಷದವರೆಗೆ ಶೇ. 50 ರ ಸಹಾಯಧನ ನೀಡಲಾಗುವುದು. ಉಳಿಕೆ ಮೊತ್ತವನ್ನು ರೈತ ಉತ್ಪಾದಕರ ಸಂಸ್ಥೆ/ ಸ್ವಸಹಾಯ ಗುಂಪು/ ಸಂಘ ಸಂಸ್ಥೆಗಳು ಬ್ಯಾಂಕ್ ಸಾಲದ ಮುಖಾಂತರ ಪಡೆಯಬೇಕಾಗಿರುತ್ತದೆ. ಈ ಯೋಜನಾ ವರದಿಗಳನ್ನು ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಯ ಅನುಮೋದನೆಗಾಗಿ ಸಲ್ಲಿಸುವುದು. ಸಹಾಯಧನವನ್ನು ಬ್ಯಾಂಕ್ ಸಾಲದ ಮುಖಾಂತರ (Backended subsidy) ಫಲಾನುಭವಿಗಳ ಖಾತೆಗೆ ಅಥವಾ ಮಾರಾಟಗಾರರಿಗೆ (vendor) ನೀಡಲಾಗುವುದು.
ಸಹಾಯಧನಕ್ಕಾಗಿ ಈ ಕೆಳಗಿನ ವೆಚ್ಚಗಳನ್ನು ಮಾತ್ರ ಪರಿಗಣಿಸಲಾಗುವುದು.
ಸಮುದಾಯ ಸೆಕೆಂಡರಿ ಕೃಷಿ ಉದ್ದಿಮೆಗೆ ಸಂಬಂಧಿಸಿದ ಯಂತ್ರೋಪಕರಣಗಳ ಸ್ಥಾಪನೆಗೆ (ಬಾಡಿಗೆ ಆಧಾರಿತ ಸೇವಾ ಕೇಂದ್ರ ಮಾದರಿಯಂತೆ) ಸಹಾಯಧನ:
ಸೆಕೆಂಡರಿ ಕೃಷಿ ಚಟುವಟಿಕೆ ಕೈಗೊಳ್ಳಲು ಬೇಕಾಗುವ ಯಂತ್ರೋಪಕರಣಗಳನ್ನು ಒಂದೇ ಸೂರಿನಡಿ ಕಲ್ಪಿಸುವ ಉದ್ದೇಶದೊಂದಿಗೆ ರೈತ ಉತ್ಪಾದಕರ ಸಂಸ್ಥೆಗಳಿಗೆ/ ಸಹಕಾರಿ ಸಂಘಗಳು /ಸ್ವಸಹಾಯ ಗುಂಪಿಗೆ ಇತ್ಯಾದಿ ಅನುಮೋದಿತ ಯೋಜನಾ ವರದಿಯ ಗರಿಷ್ಟ 15 ಲಕ್ಷದವರೆಗೆ ಅಥವಾ ಶೇ. 50 ರ ಸಹಾಯಧನವನ್ನು ನೀಡಲಾಗುವುದು. ಉಳಿಕೆ ಮೊತ್ತವನ್ನುಆಯ್ಕೆಯಾದ ಸಂಸ್ಥೆಯು ಬ್ಯಾಂಕ್ ಸಾಲದ ಮುಖಾಂತರಭರಿಸಬೇಕಾಗಿರುತ್ತದೆ. ಸಹಾಧನ ಪಡೆಯಲು ಸಂಸ್ಕರಣ ಘಟಕದ ಜೊತೆ ಶೀತಲ ಘಟಕ, ಶೇಕರಣಾ ಮಳಿಗೆಗಳು ಹಾಗೂ ಪ್ರಯೋಗಾಲಯಗಳನ್ನು ಒಳಗೊಂಡಿರಬೇಕು. ಈ ಯೋಜನಾ ವರದಿಗಳನ್ನು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಶಿಫಾರಸ್ಸಿನೊಂದಿಗೆ ರಾಜ್ಯ ಮಟ್ಟದ ತಾಂತ್ರಿಕ ಸಮಿತಿಯ ಅನುಮೋದನೆಗಾಗಿ ಸಲ್ಲಿಸುವುದು.
ಸಹಾಯಧನಕ್ಕಾಗಿ ಈ ಕೆಳಗಿನ ವೆಚ್ಚಗಳನ್ನು ಮಾತ್ರ ಪರಿಗಣಿಸಲಾಗುವುದು.
ವಿಶೇಷ ಸೂಚನೆ: ಸ್ವೀಕೃತವಾಗುವ ಯೋಜನಾ ಪ್ರಸ್ತಾವನೆಗಳನ್ನು ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಯಲ್ಲಿನ ಇಲಾಖಾಧಿಕಾರಿಗಳು ಅನುದಾನ ಲಭ್ಯತೆಯನ್ನು ಪರಿಗಣಿಸಿ, ಪರಿಶೀಲಿಸಿ ಅನುಮೋದನೆ ನೀಡುವುದು /ಶಿಫಾರಸ್ಸು ಮಾಡುವುದು.
5.9 ನೋಂದಣಿ ಮತ್ತು ಅರ್ಜಿ ಸಲ್ಲಿಸುವಿಕೆ:
(ಅ) ಸೆಕೆಂಡರಿ ಕೃಷಿ ಚಟುವಟಿಕೆಗಳಲ್ಲಿ ಆಸಕ್ತ ವೈಯಕ್ತಿಕ ಫಲಾನುಭವಿಗಳನ್ನು ಅಥವಾ ಗುಂಪು / ಸಮುದಾಯ ಆಧಾರಿತ ಚಟುವಟಿಕೆಗಳನ್ನು ಕೈಗೊಳ್ಳಲು ವ್ಯಾಪಕ ಪ್ರಚಾರ ನೀಡುವುದು.
(ಆ) ಆಸಕ್ತ ರೈತರು ನಿಗದಿತ ನಮೂನೆಯಲ್ಲಿ (ನಮೂನೆ-1 & 2) ಅವರವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಕ್ಕೆ/ ಸಹಾಯಕ ಕೃಷಿ ನಿರ್ದೇಶಕರ ಕಛೇರಿ/ ಜಂಟಿ ಕೃಷಿ ನಿರ್ದೇಶಕರ ಕಛೇರಿಗೆ ಅರ್ಜಿ ಸಲ್ಲಿಸುವುದು.
(ಇ) ಸಲ್ಲಿಸಕೆಯಾದ ಅರ್ಜಿಗಳನ್ನು ಅರ್ಜಿಗಳನ್ನು ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಗೆ ಮಂಡಿಸಿ, ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ಅನುಮೋದನೆ ನಂತರ ಮಂಜೂರಾತಿ ನೀಡುವುದು.
(ಈ) ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಮಂಜೂರಾತಿ ನಂತರ ಅರ್ಜಿಯನ್ನು ಸಹಾಯಕ ಕೃಷಿ ನಿರ್ದೇಶಕರಿಗೆ ಕಳುಹಿಸುವುದು. ಸಹಾಯಕ ಕೃಷಿ ನಿರ್ದೇಶಕರು ಈ ಮಂಜೂರಾತಿಯನ್ನು ಆಧರಿಸಿ ಸಂಬಂಧಪಟ್ಟ ಫಲಾನುಭವಿಗೆ ಕಾರ್ಯಾದೇಶ ಪತ್ರವನ್ನು ನೀಡುವುದು.
(ಉ) ಫಲಾನುಭವಿಯು ಯೋಜನಾಪ್ರಸ್ತಾವನೆಯ ಅನುಸಾರಯಂತ್ರೋಪಕರಣಗಳೊಂದಿಗೆ ಸೆಕೆಂಡರಿ ಕೃಷಿ ಚಟುವಟಿಕೆಗಳಿಗಾಗಿ ಘಟಕವನ್ನು ಸ್ಥಾಪಿಸುವುದು. ಘಟಕ ಸ್ಥಾಪನೆಯ ನಂತರ ಪತ್ರ ಮುಖೇನ ಸಹಾಯಧನಕ್ಕಾಗಿ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸುವುದು.
(ಊ) ಕೃಷಿ ಅಧಿಕಾರಿಯು ಸದರಿ ಘಟಕಕ್ಕೆ ಭೇಟಿ ನೀಡಿ ಸದರಿ ಘಟಕಚಾಲ್ತಿ ಇರುವ ಕುರಿತು ಖಾತರಿಪಡಿಸಿಕಂಡು ಯಂತ್ರೋಪಕರಣಗಳಿರುವಜಿ.ಪಿ.ಎಸ್. ಫೋಟೋ ಹಾಗೂ ಇತರೆ ದಾಖಲಾತಿಗಳೊಂದಿಗೆ (Invoice, Electricity Bill, 5 ವರ್ಷದವೆರೆಗೆ ಮುಂದುವೆರೆಸುವುದಾಗಿ ಮತ್ತುಯಾರಿಗೂ ಮಾರಟ ಮಾಡದಿರುವ ಕುರಿತು ಮುಚ್ಚಳಿಕೆ ಪತ್ರ)ಸಹಾಯಧನ ಬಿಡುಗಡೆಗಾಗಿ ಸಹಾಯಕ ಕೃಷಿ ನಿರ್ದೇಶಕರಿಗೆಪ್ರಸ್ತಾವನೆಯನ್ನು ಸಲ್ಲಿಸುವುದು.
(ಋ) ಸಹಾಯಕ ಕೃಷಿ ನಿರ್ದೇಶಕರು ಕೃಷಿ ಅಧಿಕಾರಿಯವರಿಂದ ಸ್ವೀಕರಿಸಿದ ಪ್ರಸ್ತಾವನೆಯನ್ನು ಪರಿಶೀಲಿಸಿದ ನಂತರ ಆರ್ಥಿಕ ಮಂಜೂರಾತಿ ನೀಡಿ , ಉಪ ಕೃಷಿ ನಿರ್ದೇಶಕರ ಮೇಲುಸಹಿಯೊಂದಿಗೆ ಸಹಾಯಧನಕ್ಕಾಗಿ ಬಿಲ್ಲನ್ನು ಖಜಾನೆಗೆ ಸಲ್ಲಿಸುವುದು. ಖಜಾನೆಯಿಂದ ಸಹಾಯಧನ ಪಾವತಿಯಾದ ನಂತರ ಫಲಾನುಭವಿಯಿಂದ ಸಹಾಯಧನ ಪಡೆದಿದ್ದಕ್ಕೆ ಸ್ವೀಕೃತಿಯನ್ನು ಪಡೆಯುವುದು.
(ಎ) ಸಮುದಾಯ ಆಧಾರಿತ ಪ್ರಸ್ತಾವನೆಗಳಿಗೆ ಜಂಟಿ ಕೃಷಿ ನಿರ್ದೇಶಕರ ಶಿಫಾರಸ್ಸಿನೊಂದಿಗೆ ನಿರ್ದೇಶಕರು, ಸೆಕೆಂಡರಿ ಕೃಷಿ ನಿರ್ದೇಶನಾಲಯಕ್ಕೆಸಲ್ಲಿಸುವುದು. ಸ್ವೀಕರಿಸಿದ ಪ್ರಸ್ತಾವನೆಗಳನ್ನು ರಾಜ್ಯ ಮಟ್ಟದ ತಾಂತ್ರಿಕ ಸಮಿತಿಯಲ್ಲಿ ನಿಯಮಾನುಸಾರ ಪರಿಶೀಲಿಸಿ ಅನುಮೋದನೆ ನೀಡುವುದು.ಅನುಮೋದನೆಗೊಂಡ ಯೋಜನಾ ವರದಿಗಳನ್ನು ರಾಜ್ಯ ಮಟ್ಟದ ಚಾಲನಾಸಮಿತಿ ಸಭೆಯ ಗಮನಕ್ಕೆ ಮಂಡಿಸುವುದು. ಇಂತಹ ಪ್ರಸ್ತಾವನೆಗಳಿಗೆ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಕಾರ್ಯಾದೇಶ ಪತ್ರ ನೀಡುವುದು ಮತ್ತು ಕೃಷಿ ಅಧಿಕಾರಿ ಘಟಕ ಸ್ಥಾಪನೆ ನಂತರ ತಪಾಸಣೆ ಕೈಗೊಂಡು, ಜಿ.ಪಿ.ಎಸ್. ಪೋಟೋಗಳು ಹಾಗೂ ಇತರೆ ದಾಖಲಾತಿಗಳನ್ನು ಅಪ್ ಲೋಡ್ ಮಾಡಿ, ಸಹಾಯಕ ಕೃಷಿ ನಿರ್ದೇಶಕರಿಗೆ ಪ್ರಸ್ತಾವನೆಯನ್ನುಫಾರ್ವಡ್ ಮಾಡುವುದು. ಸಹಾಯಕ ಕೃಷಿ ನಿರ್ದೇಶಕರು ಸಹಾಯಧನ ಬಿಡುಗಡೆಗೆ ಖಜಾನೆಗೆ ಬಿಲ್ಲನ್ನು ಸಲ್ಲಿಸುವುದು.
ಅ) ಜಿಲ್ಲೆಗಳಿಗೆ ಖಜಾನೆ -2 ಮುಖಾಂತರ ರಾಜ್ಯ ಸೆಕೆಂಡರಿ ಕೃಷಿ ನಿರ್ದೇಶನಾಲಯದಿಂದ ಅನುದಾನ ಬಿಡುಗಡೆ ಮಾಡಲಾಗುವುದು.
ಆ) ವೈಯಕ್ತಿಕ/ ರೈತ ಉತ್ಪಾದಕ ಸಂಸ್ಥೆಗಳು/ಸ್ವಸಹಾಯ ಗುಂಪು/ ಸಮುದಾಯ ಕೃಷಿ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಜಿಲ್ಲೆಗಳಿಂದ ಫಲಾನುಭವಿಗಳಿಗೆ ಸಹಾಯಧನ ವಿತರಿಸತಕ್ಕದ್ದು.
5.10: ವಿವಿಧ ಕಾರ್ಯಪಡೆಯ ಜವಾಬ್ದಾರಿಗಳು:
IV. ಜಂಟಿ ಕೃಷಿ ನಿರ್ದೇಶಕರು
v) ರಾಜ್ಯ ಮಟ್ಟದ ಸೆಕೆಂಡರಿ ಕೃಷಿ ನಿರ್ದೇಶನಾಲಯ:
Vi. ರಾಜ್ಯ ಮಟ್ಟದ ವಿವಿಧ ಇಲಾಖೆಗಳು:
5.11 ಉಸ್ತುವಾರಿ ಮತ್ತು ಮೌಲ್ಯಮಾಪನ:
ಅ) ಜಿಲ್ಲಾ ಮಟ್ಟದ ಆಯಾ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮ ಅನುಷ್ಠಾನದ ಉಸ್ತುವಾರಿಯನ್ನು ನಿಯತಕಾಲಿಕವಾಗಿ ಮಾಡಿ ಕ್ರೋಢಿಕೃತ ವರದಿಯನ್ನು ಸಲ್ಲಿಸುವುದು.
ಆ) ರಾಜ್ಯ ಸೆಕೆಂಡರಿ ಕೃಷಿ ನಿರ್ದೇಶನಾಲಯದಿಂದ ಆಯಾ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮ ಅನುಷ್ಠಾನದ ಉಸ್ತುವಾರಿಯನ್ನು ನಿಯತಕಾಲಿಕವಾಗಿ ಮಾಡಿ ಕ್ರೋಡಿಕೃತ ವರದಿಯನ್ನು ಸಲ್ಲಿಸುವುದು .
ಇ) ಈ ಯೋಜನೆಯ ಮುಖ್ಯ ಉದ್ದೇಶವು ಫಲಿತಾಂಶ ಆಧಾರಿತವಾಗಿರುವುದರಿಂದ ಆರ್ಥಿಕ ವರ್ಷದ ಅಂತ್ಯದಲ್ಲಿ ಫಲಾನುಭವಿಗಳ ವಿವರ ಮತ್ತು ಯಶೋಗಾಥೆಯೊಂದಿಗೆ ಕಿರುಹೊತ್ತಿಗೆ (Compendium)ಯನ್ನು ಹಾಗೂ Video Documentary ಯನ್ನು ಕಡ್ಡಾಯವಾಗಿ ಸಲ್ಲಿಸುವುದು.
(ಈ) ಯೋಜನಾ ಅನುಷ್ಠಾನದ ಒಂದು ವರ್ಷದಿಂದ ಮೂರು ವರ್ಷದವರೆಗೆ ಚಟುವಟಿಕೆಯ ಯಶಸ್ಸಿನ ಮೌಲ್ಯಮಾಪನವನ್ನು ಸಂಬಂಧಿತ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ವರ್ಷವಾರು ಕ್ಷೇತ್ರ ತಪಾಸಣೆಯನ್ನು ಕೈಗೊಂಡು, ದಾಖಲಾತಿಗಳನ್ನು ಪರಿಶೀಲಿಸಿ ವರದಿಯನ್ನು ನಿರ್ದೇಶನಾಲಯಕ್ಕೆ ಸಲ್ಲಿಸುವುದು
5.12 ಸೆಕೆಂಡರಿ ಕೃಷಿ ಗೆ ಸಂಬಂಧಿಸಿದಂತೆ ಇತರೆ ಮಾಹಿತಿಗಳು: