Secondary agriculture-50 ರಿಂದ 75% ಸಬ್ಸಿಡಿಯಲ್ಲಿ ಸೆಕೆಂಡರಿ ಕೃಷಿ ಯೋಜನೆಗೆ ಅರ್ಜಿ ಆಹ್ವಾನ

ಸೆಕೆಂಡರಿ ಅಗ್ರಿಕಲ್ಚರ್ ಅಡಿ ಜೇನು ಸಾಕಾಣೆ, ಬೇವಿನ ಉತ್ಪನ್ನಗಳು, ಕಾರ್ನ್ ಪೌಡರ್ ತಯಾರಿಕೆ, ಹೈಡ್ರೋಪೋನಿಕ್ಸ್, ಕೈತೋಟ, ಅಡಿಕೆ ಹಾಳೆ ಉತ್ಪನ್ನಗಳು, ಅಲೊವೆರಾ ಉತ್ಪನ್ನಗಳು, ಬಿದಿರು ಉತ್ಪನ್ನಗಳು, ಅಂಟು ಉತ್ಪಾದನೆ, ರೇಷ್ಮೆ ಉತ್ಪನ್ನಗಳು, ಕುರಿಮರಿ ಹೊಸ ತಳಿ ಸಾಕಣೆ, ಹೋರಿ ಸಾಕಣೆ, ಡಯಾಂಚ ಬೆಳೆಸುವ ಮೂಲಕ ಪರ್ಯಾಯ/ಪೂರಕ ಉದ್ಯಮಗಳಿಗೆ ಉತ್ತೇಜಿಸುವುದು.

Secondary agriculture-50 ರಿಂದ 75% ಸಬ್ಸಿಡಿಯಲ್ಲಿ ಸೆಕೆಂಡರಿ ಕೃಷಿ ಯೋಜನೆಗೆ ಅರ್ಜಿ ಆಹ್ವಾನ

Secondary agriculture-50 ರಿಂದ 75% ಸಬ್ಸಿಡಿಯಲ್ಲಿ ಸೆಕೆಂಡರಿ ಕೃಷಿ ಯೋಜನೆಗೆ ಅರ್ಜಿ ಆಹ್ವಾನ

ಸೆಕೆಂಡರಿ ಅಗ್ರಿಕಲ್ಚರ್ ಅಡಿ ಜೇನು ಸಾಕಾಣೆ, ಬೇವಿನ ಉತ್ಪನ್ನಗಳು, ಕಾರ್ನ್ ಪೌಡರ್ ತಯಾರಿಕೆ, ಹೈಡ್ರೋಪೋನಿಕ್ಸ್, ಕೈತೋಟ, ಅಡಿಕೆ ಹಾಳೆ ಉತ್ಪನ್ನಗಳು, ಅಲೊವೆರಾ ಉತ್ಪನ್ನಗಳು, ಬಿದಿರು ಉತ್ಪನ್ನಗಳು, ಅಂಟು ಉತ್ಪಾದನೆ, ರೇಷ್ಮೆ ಉತ್ಪನ್ನಗಳು, ಕುರಿಮರಿ ಹೊಸ ತಳಿ ಸಾಕಣೆ, ಹೋರಿ ಸಾಕಣೆ, ಡಯಾಂಚ ಬೆಳೆಸುವ ಮೂಲಕ ಪರ್ಯಾಯ/ಪೂರಕ ಉದ್ಯಮಗಳಿಗೆ ಉತ್ತೇಜಿಸುವುದು.

ಸೆಕೆಂಡರಿ  ಕೃಷಿ ಮಾರ್ಗಸೂಚಿ 2025-26

1. ಸೆಕೆಂಡರಿ  ಕೃಷಿ ಕುರಿತು ಹಿನ್ನೆಲೆ, ದೃಷ್ಟಿಕೋನ, ಪರಿಕಲ್ಪನೆ:

 

ಕರ್ನಾಟಕ ರಾಜ್ಯದ ರೈತರ ದಾಯ ದ್ವಿಗುಣಗೊಳಿಸುವನಿಟ್ಟಿನಲ್ಲಿ ರಾಜ್ಯ ಸೆಕೆಂಡರಿ ಕೃಷಿ ನಿರ್ದೇಶನಾಲಯವು ಮಾನ್ಯ ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷೆಯ ಪರಿಕಲ್ಪನೆಯಾಗಿರುತ್ತದೆ. ರಾಷ್ಟ್ರದಲ್ಲೇಪ್ರಥಮ ಬಾರಿಗೆ ಮಾದರಿಯಾಗಿ ಕರ್ನಾಟಕ ರಾಜ್ಯದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲು ಯೋಜಿಸಲಾಗಿರುತ್ತದೆ.

ಕೃಷಿಯ ಪ್ರಾಥಮಿಕ ಉತ್ಪನ್ನಗಳನ್ನು, ಸ್ಥಳೀಯ ಮಾನವಸಂಪನ್ಮೂಲ ಮತ್ತು ಕೌಶಲ್ಯಗಳನ್ನು ಬಳಸಿ ಮೌಲ್ಯವರ್ಧನೆ ಮಾಡುವಮೂಲಕ ರೈತರಿಗೆ ಹೆಚ್ಚಿನ ಆದಾಯ ಒದಗಿಸುವಂತಹ ಚಟುವಟಿಕೆ /ಕಾರ್ಯಗಳನ್ನು ಸೆಕೆಂಡರಿ   ಕೃಷಿ ಎಂದು ವ್ಯಾಖ್ಯಾನಿಸಲಾಗಿದೆ.

ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಪ್ರಾಣಿಜನ್ಯ ಉತ್ಪನ್ನಗಳಸಂಸ್ಕರಣೆ, ಗ್ರಾಮೀಣ ಮತ್ತು ಗುಡಿ ಕೈಗಾರಿಕೆಗಳ ಮೂಲಕ ರೈತರಿಗೆಹೆಚ್ಚಿನ ಆದಾಯ ತರಲು ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನಉದ್ಯೋಗ ಸೃಜನೆಗೆ, ಕೃಷಿ ಉತ್ಪನ್ನಗಳಿಂದ ಉಪ ಉತ್ಪನ್ನಗಳತಯಾರಿಕೆಗೆ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲು ಸುಸ್ಥಿರಹಾಗೂ ಕ್ರೋಡೀಕೃತ ವ್ಯವಸ್ಥೆಗಾಗಿ ಪ್ರತ್ಯೇಕ ರಾಜ್ಯ ಸೆಕೆಂಡರಿ ಕೃಷಿನಿರ್ದೇಶನಾಲಯವನ್ನು ಸರ್ಕಾರದ ಆದೇಶ ಸಂಖ್ಯೆ: .ಎಸ್. ಸಿ/73/2021 (ಪಿ.-3) ಬೆಂಗಳೂರು, ದಿನಾಂಕ: 18-01-2022 ರನ್ವಸ್ಥಾಪಿಸಲಾಗಿದೆ.  

ಸೆಕೆಂಡರಿ ಕೃಷಿ ನಿರ್ದೇಶನಾಲಯವು ಕರ್ನಾಟಕ ರಾಜ್ಯದ ರೈತರಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಪ್ರಮುಖ ಸಂಸ್ಥೆಯಾಗಿರುತ್ತದೆ. ಸದರಿ ಆದೇಶದಲ್ಲಿ ಕೃಷಿ ಹಾಗೂ ಪೂರಕಚಟುವಟಿಕೆಗಳಿಗೆ ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆಅನುಷ್ಠಾನೊಳ್ಳಲು ಅನುವಾಗುವಂತೆ ಸೆಕೆಂಡರಿ ಕೃಷಿನಿರ್ದೇಶನಾಲಯವು ಕೃಷಿ, ಜಲಾನಯನ ಅಭಿವೃದ್ಧಿ, ಪಶುಸಂಗೋಪನೆ, ತೋಟಗಾರಿಕೆ, ರೇಷ್ಮೆ, ಕೃಷಿ ಮಾರುಕಟ್ಟೆ, ಅರಣ್ಯ ಹಾಗೂ ಇನ್ನಿತರೆಇಲಾಖೆಯ ಅಧಿಕಾರಿಗಳನ್ನು ಒಳಗೊಂಡಿರುತ್ತದೆ.

ಮಾರ್ಗದರ್ಶನಕ್ಕಾಗಿ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿರಾಜ್ಯಮಟ್ಟದ ಚಾಲನಾ ಸಮಿತಿ ಹಾಗೂ ಚಟುವಟಿಕೆಗಳಅನುಷ್ಠಾನಕ್ಕಾಗಿ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯನ್ನುರಚಿಸಲಾಗಿರುತ್ತದೆ.

ರೈತರ ಅದಾಯವನ್ನು ಹೆಚ್ಚಿಸುವ ಧ್ಯೇಯದೊಂದಿಗೆ ರಾಷ್ಟ್ರದಲ್ಲಿಯೇಮೊದಲ ಬಾರಿಗೆ ಸೆಕೆಂಡರಿ ಕೃಷಿ ನಿರ್ದೇಶನಾಲಯವನ್ನು ಸ್ಥಾಪಿಸಲಾಗಿದೆ. ರೈತ ಉತ್ಪಾದಕ ಸಂಸ್ಥೆಗಳನ್ನು ಬಳಸಿ ಕೃಷಿಯ ಪ್ರಾಥಮಿಕ ತ್ಪನ್ನಗಳಿಗೆಹೆಚ್ಚಿ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸಲು ಇದುಸಹಕಾರಿಯಾಗಲಿದೆ ಎಂಬುದಾಗಿ ಘೋಷಿಸಿಲಾಗಿದೆ.

 

 

 

 

ಯೋಜನೆಯ ದೃಷ್ಟಿಕೋನ:

ಕೃಷಿಯಲ್ಲಿ ಲ್ಲಿಯವರೆಗೆಇಳುವರಿಹೆಚ್ಚಳಕ್ಕೆ ಹೆಚ್ಚಿನಮಹತ್ವವನ್ನು ನೀಡಲಾಗುತ್ತಿದ್ದು, ಸೆಕೆಂಡರಿ ಕೃಷಿ ನಿರ್ದೇಶನಾಲಯಕಾರ್ಯಕ್ರಮಗಳ ಅನುಷ್ಠಾನ ಮೂಲಕ ಉಪ ಉತ್ಪನ್ನಗಳನ್ನುತಯಾರಿಸಲು ಉತ್ತೇಜನ ನೀಡುವುದರಿಂದ (ಇಳುವರಿೆಚ್ಚಳಕ್ಕೆಹೋಲಿಸಿದಾಗ) ಸ್ಥಳೀಯ ಉದ್ಯೋಗ ಸೃಜನೆಯಿಂದ ಆರ್ಥಿಕವೃದ್ಧಿ ಮಹತ್ವ ನೀಡಿದಂತಾಗುತ್ತದೆ.

 

1. ಪ್ರಾಥಮಿಕ ಕೃಷಿ : ಕೃಷಿ ಉತ್ಪನ್ನಗಳನ್ನು ಉತ್ಪಾದಿಸುವುದು

 

2. ಸೆಕೆಂಡರಿ ಕೃಷಿ: ಸ್ಥಳೀಯವಾಗಿ ಲಭ್ಯವಿರುವ ಕೃಷಿ ಮತ್ತು ಇತರೆಜೈವಿಕ ಸಂಪನ್ಮೂಲಗಳ ಪ್ರಾಥಮಿಕ ಉತ್ಪನ್ನ ಮತ್ತುಉಪ-ಉತ್ಪನ್ನಗಳನ್ನು ಕಚ್ಚಾ ವಸ್ತುವಾಗಿ ಬಳಸಿಕೊಂಡು ಸಂಸ್ಕರಣೆ, ಮೌಲ್ಯವರ್ಧನೆ, ಪ್ಯಾಕಿಂಗ್ ಹಾಗೂ ಸೂಕ್ತ ಬ್ರ್ಯಾಂಡ್ ಮೂಲಕಮಾರುಕಟ್ಟೆ ಕಲ್ಪಿಸಿ ರೈತರ ದಾಯ ದ್ವಿಗುಣಗೊಳಿಸುವುದು ಮುಖ್ಯಧ್ಯೇಯೋದ್ದೇಶವಾಗಿದೆ.

ಕೃಷಿ ಪ್ರಾಥಮಿಕ ಉತ್ಪನ್ನಗಳನ್ನು ಸಂಸ್ಕರಿಸಿ / ಮೌಲ್ಯವರ್ಧನೆಮಾಡುವುದರ ಮೂಲಕ ಅವುಗಳಿಗೆ ಹೆಚ್ಚಿ ಮೌಲ್ಯಒದಗಿಸಿದಂತಾಗುತ್ತದೆ.

 

ಕೃಷಿ ಸಂಸ್ಕರಣೆಯಲ್ಲಿ ನಾಲ್ಕು ವಿಧಗಳಿವೆ.

 

(i) ಪ್ರಾಥಮಿಕ ಸಂಸ್ಕರಣೆ:  ಭೌತಿಕರಾಸಾಯನಿಕಬದಲಾವಣೆಗಳಿಲ್ಲದೆ ಉತ್ಪನ್ನಗಳನ್ನು ಸಂಸ್ಕರಿಸುವುದು.

ಉದಾಹರಣೆ: ಸ್ವಚ್ಛತೆ, ವಿಂಗಡಣೆ, ವರ್ಗೀಕರಿಸುವುದು, ಇತ್ಯಾದಿಗಳನ್ನು           ಒಳಗೊಂಡಿರುತ್ತದೆ.

 

(ii) ದ್ವಿತೀಯ ಹಂತದ ಸಂಸ್ಕರಣೆ:  ಪ್ರಾಥಮಿಕ ಉತ್ಪನ್ನ/ಉಪಉತ್ಪನ್ನಗಳನ್ನು (ಆಹಾರ ಆಹಾರೇತರ) ಸ್ಥಳೀಯ ಬೇಡಿಕೆಗೆಅನುಗುಣವಾಗಿ ಭೌತಿ ಮತ್ತು ಾಸಾಯನಿಕ ಬದಲಾವಣೆಗಳಮೂಲಕ ಹೆಚ್ಚಿನ ಬಾಳಿಕೆ ಬರುವಂತೆ ಸರಳ ಸಂಸ್ಕರಣೆಗೆ ಒಳಪಡಿಸುವುದು.

ಉದಾಹರಣೆ: ಉಪ್ಪಿನಕಾಯಿ, ಪಾಪಡ್, ಕೆಚಪ್ಆಹಾರಉತ್ಪನ್ನಗಳು

                      ಕಾಂಪೋಸ್ಟ್, ಚಾರ್ ಕೋಲ್ಆಹಾರೇತರಉತ್ಪನ್ನಗಳು

 

(iii) ತೃತೀಯ ಹಂತದ ಸಂಸ್ಕರಣೆ: ದ್ವಿತೀಯ ಹಂತದಲ್ಲಿ ಸಂಸ್ಕರಿಸಿದಉತ್ಪನ್ನಗಳನ್ನು ಇನ್ನೂ ಹೆಚ್ಚಿನ ಸಂಸ್ಕರಣೆಗೆ ಒಳಪಡಿಸುವುದು. ಇದು ಹೆಚ್ಚಿನ ಬಂಡವಾಳ ಹಾಗೂ ತಾಂತ್ರಿಕತೆಗಳನ್ನುಒಳಗೊಂಡಿರುತ್ತದೆ.

ಉದಾಹರಣೆ: ತಿನ್ನಲು ಸಿದ್ಧ (ready-to-eat) / ಬಿಸಿಮಾಡಿ ಊಟ ಮಾಡುವ ಆಹಾರಗಳು (heat-and-serve foods).

 

(iv) ಉನ್ನತ ಮಟ್ಟದ ಸಂಸ್ಕರಣೆ: ಇನ್ನೂ ಮೇಲ್ದರ್ಜೆ ಹೊಂದಿದ ಉನ್ನತಮಟ್ಟದ ಸಂಸ್ಕರಿತ ಉತ್ಪನ್ನಗಳು. ದ್ವಿತೀಯ ಹಂತದ ಸಂಸ್ಕರಿಸಿದಉತ್ಪನ್ನಗಳನ್ನು ಉಪಯೋಗಿಸಿಕೊಂಡು ಸಂಸ್ಕರಿಸಲಾಗುತ್ತದೆ.  ಇದು ಅತೀ ಹೆಚ್ಚಿನ ಬಂಡವಾಳ ಹಾಗೂ ತಾಂತ್ರಿಕತೆಗಳನ್ನುಒಳಗೊಂಡಿರುತ್ತದೆ.

 

2. ಸೆಕೆಂಡರಿ  ಕೃಷಿಯ  ಗುರಿ , ಉದ್ದೇಶಗಳು ಮತ್ತು ಸಹಯೋಗಇಲಾಖೆಗಳು / ಸಂಸ್ಥೆಗಳು

2.1 ಸೆಕೆಂಡರಿ ಕೃಷಿಯ ಗುರಿ:  

ಕೃಷಿ ಪ್ರಾಥಮಿಕ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡುವುದರಮೂಲಕ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಅವಕಾಶಗಳನ್ನುಸೃಷ್ಟಿಸಿ ರೈತರ ಆದಾಯವನ್ನು ಹೆಚ್ಚಿಸುವುದು.

 

2.2 ಸೆಕೆಂಡರಿ  ಕೃಷಿಯ  ಉದ್ದೇಶಗಳು

ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳ ಮೂಲಕ ಉದ್ಯೋಗಮತ್ತು ರೈತರ ಆದಾಯವನ್ನು ಹೆಚ್ಚಿಸುವುದು. 
ರೈತ ಕುಟುಂಬಗಳಿಗೆ ವಿವಿಧ ಆದಾಯ ಮೂಲಗಳ ಸೃಜನೆಗೆಪೂರಕವಾಗಿ ಯೋಜನೆ ರೂಪಿಸಿ ಕೃಷಿಯಲ್ಲಿನ ಸಮಸ್ಯೆಗಳಪರಿಹಾರಕ್ಕೆ ಕ್ರಮವಹಿಸುವುದು.
ಕೌಶಲ್ಯ ಹಾಗೂ ಅರೆಕೌಶಲ್ಯವುಳ್ಳ ಗ್ರಾಮೀಣ ಮಾನವಸಂಪನ್ಮೂಲಗಳ ಮೂಲಕ ಕೈಗಾರಿಕೆಗಳ ಭಿವೃದ್ಧಿ ಹಾಗೂ ಸೇವಾವಿಭಾಗಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವುದು.
ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಒಗ್ಗೂಡಿಸಿ ಸ್ಥಳನಿರ್ದಿಷ್ಟ/ ಪ್ರಾದೇಶಿಕ ಉತ್ಪನ್ನಗಳನ್ನು ಸ್ಥಳೀಯವಾಗಿಪ್ರಸಿದ್ಧಗೊಳಿಸುವುದು
ಬೆಳೆ ಸಾಂದ್ರತೆ ಹೆಚ್ಚಿಸುವ ಕ್ರಮಗಳು ಮತ್ತು ಹೆಚ್ಚಿನ ಮೌಲ್ಯದಬೆಳೆಗಳ ವೈವಿಧ್ಯೀಕರಣ ಮೂಲಕ ಬೆಳೆ ಉತ್ಪಾದಕತೆಯಲ್ಲಿಸುಧಾರಣೆ.
ಕೃಷಿಯಿಂದ ಕೃಷಿಯೇತರ ಚಟುವಟಿಕೆ ಕೈಗೊಳ್ಳಲು ಪ್ರೇರೇಪಿಸುವುದು

2.3 :ಸಹಯೋಗ  ಇಲಾಖೆಗಳು

i. ಕೃಷಿ ಇಲಾಖೆ
ii. ತೋಟಗಾರಿಕೆ ಇಲಾಖೆ
iii. ಜಲಾನಯನ ಅಭಿವೃದ್ಧಿ ಇಲಾಖೆ
iv. ಪಶು ಸಂಗೋಪನಾ ಇಲಾಖೆ
v. ರೇಷ್ಮೆ ಇಲಾಖೆ
vi. ಮೀನುಗಾರಿಕೆ ಇಲಾಖೆ
vii. ಅರಣ್ಯ ಇಲಾಖೆ
viii. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ
ix. ಸಹಕಾರ ಇಲಾಖೆ
x. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
xi. ಕೆ. ಪಿ.ಟಿ.ಸಿ.ಎಲ್
xii. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (NRLM)

2.4: ಸಹಯೋಗ ಸಂಸ್ಥೆಗಳು

i.  ಕಬ್ಬು ನಿರ್ದೇಶನಾಲಯ, ಬೆಳಗಾವಿ
ii.  ಎಲ್ಲಾ ಕೃಷಿ / ತೋಟಗಾರಿಕೆ/ ಪಶು ವೈದ್ಯಕೀಯ ವಿಶ್ವವಿದ್ಯಾಲಯಗಳು
iii.  ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ, ಮೈಸೂರು
iv.  ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ - ನಬಾರ್ಡ್
v.  ಲೀಡ್ ಬ್ಯಾಂಕ
vi.  ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ
vii.  ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತುನಿಗಮ ನಿಯಮಿತ
viii.  ಇಕ್ರಿಸ್ಯಾಟ್ (ICRISAT), ಹೈದರಾಬಾದ್
ix.  ಮ್ಯಾನೇಜ್ (MANAGE), ಹೈದರಾಬಾದ್
x.  . . ಎಮ್. ಆರ್ (IIMR), ಹೈದರಾಬಾದ್
xi.  ಕೃಷಿ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟದಲ್ಲಿತೊಡಗಿಸಿಕೊಂಡ ಪ್ರತಿಷ್ಠಿತ ಸಂಸ್ಥೆಗಳು
xii. ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ತಲಘಟ್ಟಪುರ

2.5: ಸಹಯೋಗ ಇಲಾಖೆಗಳು/ ಸಂಸ್ಥೆಗಳು ಸೆಕೆಂಡರಿ ಕೃಷಿಚಟುವಟಿಕೆಗಳನ್ನು ಕೈಗೊಳ್ಳಲು ಪಾಲಿಸಬೇಕಾದ ಅಂಶಗಳು

1. ಸೆಕೆಂಡರಿ ಕೃಷಿ ಚಟುವಟಿಕೆಗಳ ಗುರುತಿಸುವಿಕೆ

2. ಚಟುವಟಿಕೆಗಳ ಆಯ್ಕೆ ಮತ್ತು ಯೋಜನಾ ವರದಿ ತಯಾರಿ

3. ಚಟುವಟಿಕೆಗಳ ಯಶಸ್ಸಿನ ಮೌಲ್ಯಮಾಪನ ಮತ್ತು ವರದಿತಯಾರಿಕೆ

 

2.5.1: ಸೆಕೆಂಡರಿ ಕೃಷಿ ಚಟುವಟಿಕೆಗಳ ಗುರುತಿಸುವಿಕೆ ಹಾಗೂ ಬೆಳೆವಾರು ಚಟುವಟಿಕೆಗಳ ಮ್ಯಾಪಿಂಗ್

    ರೈತರು ಕೃಷಿಯಲ್ಲಿ ಸಂಪನ್ಮೂಲಗಳನ್ನು ಸಮರ್ಪಕವಾಗಿಬಳಸಿಕೊಂಡು ಆರ್ಥಿಕವಾಗಿ ಮುಂದುವರೆಯಲ ತಾಲ್ಲೂಕಿನ ಮುಖ್ಯಬೆಳೆಗಳನ್ನು (ಉತ್ಪನ್ನ) ಆಯ್ಕೆ ಮಾಡಿ ಆದ್ಯತೆ ನೀಡುವುದು.

ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಚಟುವಟಿಕೆಗಳನ್ನುಗುರುತಿಸುವುದು
ಜಿಲ್ಲೆಗಳಲ್ಲಿ ಕ್ಷೇತ್ರ ಸಮೀಕ್ಷೆ ಕೈಗೊಂಡು, ಅದರಂತೆ, ಅವಶ್ಯಕತೆಗನುಗುಣವಾದ ಚಟುವಟಿಕೆಗಳನ್ನು ಗುರುತಿಸುವುದುಹಾಗೂ ವ್ಯಾಪಕ ಪ್ರಚಾರ ನೀಡುವುದು.
ಪ್ರಸ್ತುತ ಜಿಲ್ಲೆಗಳಲ್ಲಿ ಪ್ರಾರಂಭಿಸಿರುವ ಮಾದರಿ ಅಗ್ರಿಸ್ಟಾರ್ಟ್ಅಪ್ ಗಳನ್ನು ಗುರುತಿಸುವುದು. ಅವುಗಳ ಕಾರ್ಯವೈಖರಿ, ಮಾರುಕಟ್ಟೆ ಪ್ರಕ್ರಿಯೆ, ವಾಣಿಜ್ಯ ಪರಿಕಲ್ಪನೆ ಕುರಿತು ಅರಿವು ಮೂಡಿಸಿಇತರರನ್ನು ಪ್ರೇರೇಪಿಸುವುದು.
ಕೃಷಿ/ ತೋಟಗಾರಿಕೆ/ ಪಶು ವೈದ್ಯಕೀಯ ವಿಶ್ವ ವಿದ್ಯಾಲಯಗಳಲ್ಲಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಯಶಸ್ವಿ ಪ್ರಾಯೋಗಿಕಸಂಸ್ಥೆಗಳಲ್ಲಿನ ಇನ್ಕುಬೇಷನ್ ಸೆಂಟರ್ ಮುಖಾಂತರ ಆರಂಭಿಕಹಂತದ ಪರಿಕಲ್ಪನೆ ಬಗ್ಗೆ ಅರಿವು ಮೂಡಿಸುವುದು.
ಸಾರ್ವಜನಿಕ/ಖಾಸಗಿ ಅನುಷ್ಠಾನ ಮಾಡಲು ಅವಕಾಶವಿದ್ದಲ್ಲಿ, ನಿಯಮಾನುಸಾರ ಕ್ರಮ ಕೈಗೊಂಡು ಚಟುವಟಿಕೆಗಳನ್ನು ಗುರುತಿಸುವುದು.

2.5.2:  ಚಟುವಟಿಕೆಗಳ ಆಯ್ಕೆ ಮತ್ತು ಯೋಜನೆ ವರದಿ ತಯಾರಿ

ಚಟುವಟಿಕೆಗಳ ಆಯ್ಕೆಯಲ್ಲಿನ ಮಾನದಂಡಗಳು:

1. ಆರ್ಥಿಕ ವಿಶ್ಲೇಷಣಾ ಪದ್ಧತಿಗಳನ್ನು ಬಳಸಿ ರೈತರ ಆದಾಯಹೆಚ್ಚಿಸುವ ಚಟುವಟಿಕೆಗಳು
2. ಶ್ರಮ/ವೆಚ್ಚ/ಸಂಕೀರ್ಣತೆ ಆಧಾರದ ಮೇಲೆ ತೊಡಗಿಸಿಕೊಂಡಿರುವಚಟುವಟಿಕೆಗಳು
ಕಡಿಮೆ ಶ್ರಮ ಮತ್ತು ಹೆಚ್ಚಿನ ಪರಿಣಾಮ- ಸುಲಭವಾಗಿ, ಕಡಿಮೆಕಾಲಮಿತಿಯಲ್ಲಿ ಯಶಸ್ಸು ಪಡೆಯಬಹುದಾದ ಚಟುವಟಿಕೆಗಳನ್ನುಪರಿಗಣಿಸಬಹುದಾಗಿದೆ.
ಹೆಚ್ಚಿನ ಶ್ರಮ ಮತ್ತು ಹೆಚ್ಚಿನ ಪರಿಣಾಮ-  ಮುಖ್ಯ ಯೋಜನೆಗಳಿಗೆ ಅನುಗುಣವಾಗಿ ಪರಿಗಣಿಸಬಹುದಾಗಿದೆ
ಕಡಿಮೆ ಶ್ರಮ ಮತ್ತು ಕಡಿಮೆ ಪರಿಣಾಮ- ಹೆಚ್ಚು ಸೂಕ್ತವಲ್ಲದವರ್ಗ
ಹೆಚ್ಚಿನ ಶ್ರಮ ಮತ್ತು ಕಡಿಮೆ ಪರಿಣಾಮ- ಹೆಚ್ಚು ಸೂಕ್ತವಲ್ಲದವರ್ಗ

ಯೋಜನೆ ಆಯ್ಕೆಗೆ ಉದಾಹರಣೆಗಳು:

ಕ್ರ ಸಂ

ಯೋಜನೆಯ ಹೆಸರು

ಶ್ರಮ/ ವೆಚ್ಚ

ಪರಿಣಾಮ/ ಲಾಭ

ಶಿಫಾರಸ್ಸು

1

ಕೃಷಿ ತ್ಯಾಜ್ಯ ಸಂಸ್ಕರಣೆ

ಮಧ್ಯಮ

ಹೆಚ್ಚು

ಸೆಕೆಂಡರಿ ಕೃಷಿ ಯೋಜನೆಗಳಡಿಪರಿಗಣಿಸುವುದು.

2

ರೈತ ಉತ್ಪಾದಕ

ಸಂಸ್ಥೆಗಳ ಮಾರುಕಟ್ಟೆವೇದಿಕೆ/ ವ್ಯವಸ್ಥೆ

ಹೆಚ್ಚು

ಹೆಚ್ಚು

ಸೆಕೆಂಡರಿ ಕೃಷಿ ಯೋಜನೆಗಳಡಿಪರಿಗಣಿಸುವುದು.

3

ಪಾಲಿಹೌಸ್ ಕೃಷಿ

ಹೆಚ್ಚು

ಹೆಚ್ಚು

ಚಾಲ್ತಿ ಯೋಜನೆಗಳಡಿಪರಿಗಣಿಸುವುದು.

      ಶ್ರಮವನ್ನು ಕಡಿಮೆ, ಮಧ್ಯಮ ಮತ್ತು ಹೆಚ್ಚು ಎಂದು ವರ್ಗಗಳಾಗಿವಿಂಗಡಣೆ ಮಾಡಲು ಚಟುವಟಿಕೆಗಳಿಗೆ ತಗಲುವ ಸಮಯ, ಅನುದಾನಮತ್ತು ಸಂಕೀರ್ಣತೆಯನ್ನು ಪರಿಗಣಿಸಬಹುದಾಗಿದೆ. ಹಾಗೆಯೇ, ಲಾಭದವರ್ಗಗಳ ವಿಂಗಡಣೆಗೆ, ಮೂಲ ಆರ್ಥಿಕ ಬಂಡವಾಳ ಹೂಡಿಕೆ ಮೇಲಿನಪ್ರತಿಫಲದನ್ವಯ (Returns on investment-ROI) ಪರಿಗಣಿಸುವುದು.

2.5.3: ಚಟುವಟಿಕೆಗಳ ಯಶಸ್ಸಿನ ಮೌಲ್ಯಮಾಪನ ಮತ್ತು ವರದಿತಯಾರಿಕೆ:

1. ಯೋಜನೆಗಳ ಪ್ರಗತಿ ಪರಿಶೀಲನೆ:  ರೂಪಿಸಿದಕ್ರಿಯಾಯೋಜನೆಯಂತೆ  ಯೋಜನೆಗಳ ಮಧ್ಯಂತರ ಪ್ರಗತಿತಿಳಿಯಲು ಪ್ರಗತಿ ಪರಿಶೀಲನೆ
ಜಿಲ್ಲಾ ಮಟ್ಟದ  ಅನುಷ್ಠಾನ ಸಮಿತಿ
ಜಿಲ್ಲಾ ಮಟ್ಟದ  ತಾಂತ್ರಿಕ ಸಮಿತಿ
ರಾಜ್ಯ ಮಟ್ಟದ ಚಾಲನಾ ಸಮಿತಿ
ಇಲಾಖೆಗಳ ಕಾರ್ಯ ಪಡೆ

 

2. ಪರಿಣಾಮ ಪರಿಶೀಲನೆ:
ೋಜನೆಯ ಫಲಾನುಭವಿಗಳ ಸಂಖ್ಯೆ
ಶೇಕಡವಾರು ಸೆಕೆಂಡರಿ ಕೃಷಿ ಅಳವಡಿಕೆ (ಯೋಜನಾ ಪೂರ್ವ ಮತ್ತು ಯೋಜನಾ ನಂತರ)
ಆದಾಯ ಹೆಚ್ಚಳ other parameters - ಯೋಜನೆ ಅನುಷ್ಠಾನದ ಮೊದಲು ಮತ್ತು ನಂತರ
ಉದ್ಯೋಗ ಸೃಜನೆ

 

3 : ಸೆಕೆಂಡರಿ ಕೃಷಿಗೆ ಸಂಬಂಧಿಸಿದಂತೆ ರೈತರ ಆದಾಯ ಹೆಚ್ಚಿಸಲುನವೀನ ಪರಿಕಲ್ಪನೆಗಳು :

ಸೆಕೆಂಡರಿ ಕೃಷಿ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಕೆಲವುಪರಿಣಾಮಕಾರಿ ಯೋಜನೆಗಳ ಕುರಿತು

3.1 ಕೃಷಿ ತ್ಯಾಜ್ಯ ಬಳಸಿ ಹೆಚ್ಚಿನ ಆದಾಯ ಗಳಿಕೆ

3.2 ರೈತ ಉತ್ಪಾದಕ ಸಂಸ್ಥೆಗಳಿಗೆ ಸೀಮಿತವಾಗಿರುವ -ಮಾರುಕಟ್ಟೆ(Digital platform)

    ವೇದಿಕೆಯನ್ನು ಎಲ್ಲಾ ಮಾರಾಟ ಕೇಂದ್ರಗಳಿಗೆ ವಿಸ್ತರಣೆಮಾಡುವುದು.

3.3 ಗ್ರಾಮ ಮಟ್ಟದಲ್ಲಿ ಕೃಷಿ ತ್ಪನ್ನಗಳಿಗೆ ಅವಶ್ಯವಿರುವ ಎಲ್ಲಾ ಕೃಷಿಸಂಸ್ಕರಣಾ ಘಟಕಗಳನ್ನು ಒಂದ ಸೂರಿನಡಿ ಸ್ಥಾಪಿಸುವುದು(Common Facility Center for Agro Processing similar to CHSC) ಮತ್ತು ಸದರಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಯನ್ನುಪ್ರತ್ಯೇಕವಾಗಿ ಕಲ್ಪಿಸುವುದು
3.4 ಜಿಲ್ಲಾವಾರು ಇಲಾಖಾವಾರು ಮುಖ್ಯ ಬೆಳೆಗಳಿಗೆ ಆಹಾರಸರಪಳಿಯಡಿ ಬರುವ ಚಟುವಟಿಕೆಗಳ ಉತ್ತೇಜನ:
3.5 ಸ್ಥಳೀಯ ಉದ್ಯಮಗಳಿಗೆ ಉತ್ತೇಜನ ಹಾಗೂ ಭೌಗೋಳಿಕ ಸೂಚ್ಯಂಕ (Geographical indicator-GI ) ಉತ್ಪನ್ನಗಳಿಗೆ ಆದ್ಯತೆನೀಡುವುದು.
3.6 ಇತರೆ ಚಟುವಟಿಕೆಗಳ ಮೂಲಕ ಉತ್ತೇಜನ ಉದಾ: ಕೃಷಿಪ್ರವಾಸೋದ್ಯಮ

 

ವಿವರ ಕೆಳಗಿನಂತಿವೆ:

3.1 ಕೃಷಿ ತ್ಯಾಜ್ಯ ಬಳಸಿ ಹೆಚ್ಚಿನ ಆದಾಯ ಗಳಿಕೆ :

ಅ) ಬೆಳೆಯ ಅವಶೇಷಗಳು ಹಲವು ಕೈಗಾರಿಕೆಗಳಿಗೆ ಪೂರಕವಸ್ತುಗಳಾಗಿರುತ್ತವೆ.  ಆದ್ದರಿಂದ ಸಂಸ್ಕರಣೆಯಿಂದ ಇವುಗಳನ್ನುಹಲವಾರು ಕೈಗಾರಿಕೆಗಳಾಗಿ ರೂಪಿಸಬಹುದಾಗಿರುತ್ತದೆ.

 

ಉಪಯೋಗಗಳು: 

ಘನ ಇಂಧನವಾಗಿ ಬಳಸಬಹುದಾಗಿದೆ
ಗೊಬ್ಬರ ತಯಾರಿಕೆಗೆ ಮೂಲವಸ್ತುವಾಗಿ ಬಳಸಬಹುದಾಗಿದೆ
ಇತರೆ ಇಂಗಾಲ ಆಧಾರಿತ ರಾಸಾಯನಿಕಗಳ ತಯಾರಿಕೆಗಾಗಿಬಳಸಬಹುದಾಗಿದೆ

) ಕೃಷಿ ತ್ಯಾಜ್ಯಗಳಿಂದ ಕಾಂಪೋಸ್ಟ್ ತಯಾರಿಸುವುದು

 

3.2 ರೈತ ಉತ್ಪಾದಕ ಸಂಸ್ಥೆ ಕೇಂದ್ರೀಕೃತ  - ಮಾರುಕಟ್ಟೆವೇದಿಕೆಗಳು :

 

 ಕೃಷಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಹಲವಾರು ಖಾಸಗಿಮಾರುಕಟ್ಟೆಗಳಿದ್ದು, ರೈತ ಉತ್ಪಾದಕ ಸಂಸ್ಥೆಗಳಿಗೆ  ಕೇಂದ್ರೀಕೃತಮಾರುಕಟ್ಟೆ ವೇದಿಕೆ ರೂಪಿಸಿ,  ಸಮಗ್ರ ಮಾರುಕಟ್ಟೆ ಸಂಪರ್ಕ ಮತ್ತುತಮ್ಮ ಉತ್ಪನ್ನಗಳನ್ನು ಒಂದೇ ಸೂರಿನಡಿ  ಎಲ್ಲೆಡೆ ಮಾರಾಟಮಾಡಬಹುದಾಗಿದೆ.
ರೈತ ಉತ್ಪಾದಕ ಸಂಸ್ಥೆಗಳು ತಮ್ಮ ಉತ್ಪನ್ನಗಳಿಗೆ ಸಕ್ರಿಯವಾಗಿ ಖಾಸಗಿಮಾರುಕಟ್ಟೆಯಲ್ಲಿ ಪ್ರವೇಶ ಪಡೆಯಲು ಪ್ರತ್ಯೇಕ API (Application Programming Interface) ಹೊಂದಬಹುದಾಗಿದೆ. ಇದರಿಂದಾಗಿಖರೀದಿದಾರರ ಸಂಖ್ಯೆ ಹೆಚ್ಚಳವಾಗುವ ಜೊತೆಗೆ ಮಾಸ್ಟರ್ ಮಾರುಕಟ್ಟೆವೇದಿಕೆ ಸೃಜನೆಯಾಗುತ್ತದೆ.   ರೀತಿಯಾಗಿ ಸರ್ಕಾರದಿಂದ ರೂಪಿಸಿದಮಾರುಕಟ್ಟೆ ವೇದಿಕೆಯು ಎಲ್ಲಾ ರೈತ ಉತ್ಪಾದಕ ಸಂಸ್ಥೆಗಳಿಗೆ ತಮ್ಮಉತ್ಪನ್ನಗಳನ್ನು ಮಾರಾಟ ಮಾಡಲು ಸಹಕಾರಿಯಾಗುತ್ತದೆ.

                                                                                   

3.3 ಗ್ರಾಮ ಮಟ್ಟದಲ್ಲಿ ಕೃಷಿ ಉತ್ಪನ್ನಗಳಿಗೆ ಅವಶ್ಯವಿರುವ ಎಲ್ಲಾಕೃಷಿ ಸಂಸ್ಕರಣಾ ಘಟಕಗಳನ್ನು ಒಂದೇ ಸೂರಿನಡಿ ಸ್ಥಾಪಿಸುವುದು(Common Facility Center for Agro Processing similar to CHSC) ಮತ್ತು ಸದರಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಯನ್ನುಪ್ರತ್ಯೇಕವಾಗಿ ಕಲ್ಪಿಸುವುದು.

     ಜಿಲ್ಲೆಯ ಮುಖ್ಯ ಬೆಳೆಗಳನ್ನು ಆದರಿಸಿ ಸದರಿ ಕೃಷಿ ಉತ್ಪನ್ನಗಳನ್ನುಸೆಕೆಂಡರಿ ಕೃಷಿಗೆ ಪರಿಗಣಿಸಲು ಬೇಕಾದ  ಹಾಗೂ ಗ್ರಾಮ ಮಟ್ಟದಲ್ಲಿಅವಶ್ಯವಿರುವ ಎಲ್ಲಾ ಕೃಷಿ ಸಂಸ್ಕರಣಾ ಘಟಕಗಳನ್ನು ಒಂದೇ ಸೂರಿನಡಿಸ್ಥಾಪಿಸುವುದು. ಇದನ್ನು ಸ್ಥಳೀಯ ದ್ದಿಮೆದಾರರು / ಉತ್ತಮ ರೈತಉತ್ಪಾದಕ ಸಂಸ್ಥೆ /ಸ್ವಸಹಾಯ ಗುಂಪು ಇವರ ನೇತೃತ್ವದಲ್ಲಿ ಸ್ಥಾಪಿಸಲುಉದ್ದೇಶಿಸಲಾಗಿದೆ. ಮೂಲಭೂತ ಸೌಕರ್ಯಗಳನ್ನು ಬಳಸಿ ತಯಾರಿಸಲಾದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಯನ್ನು ಪ್ರತ್ಯೇಕವಾಗಿ ಕಲ್ಪಿಸುವುದು.

3.4 ಜಿಲ್ಲಾವಾರು ಇಲಾಖಾವಾರು ಮುಖ್ಯ ಬೆಳೆಗಳಿಗೆ ಆಹಾರ ಸರಪಳಿ (promotion of value chain activities for major crops of the district) ಯಡಿ ಬರುವ ಚಟುವಟಿಕೆಗಳ ಉತ್ತೇಜನ

      ಜಿಲ್ಲಾವಾರು ಸೆಕೆಂಡರಿ ಕೃಷಿಗೆ ಸಾಮರ್ಥ್ಯವಿರುವ ಚಟುವಟಿಕೆಗಳನ್ನುಆಯ್ಕೆ ಮಾಡುವುದು.

3.5 ಸ್ಥಳೀಯ ಉದ್ಯಮಗಳಿಗೆ ಉತ್ತೇಜನ ಹಾಗೂ ಭೌಗೋಳಿಕ ಸೂಚ್ಯಂಕ –(Geographical indicator-GI ) ಉತ್ಪನ್ನಗಳಿಗೆ ಆದ್ಯತೆ ನೀಡುವುದು.

     ಸ್ಥಳೀಯವಾಗಿ ಚಾಲ್ತಿಯಲ್ಲಿರುವ ಉದ್ಯಮಗಳಿಗೆ ಇನ್ನೂ ಹೆಚ್ಚಿನ ತಾಂತ್ರಿಕತೆಗಳನ್ನು

      ಉತ್ತೇಜಿಸುವ ಮೂಲಕ ಸೆಕೆಂಡರಿ ಕೃಷಿಯಲ್ಲಿ ಅಳವಡಿಸಬಹುದಾಗಿದೆ.

 

3.6 ಇತರೆ ಚಟುವಟಿಕೆಗಳ ಮೂಲಕ ಉತ್ತೇಜನ
ಕೃಷಿ ಪ್ರವಾಸೋದ್ಯಮ,
ಜೇನುಸಾಕಾಣಿಕೆ,
ಅಣಬೆ ಬೇಸಾಯ,
ಬಿದಿರು ಕೃಷಿ
ಕೃಷಿ-ಅರಣ್ಯ
ಅಡುಗೆ ಎಣ್ಣೆ ಉತ್ಪಾದನೆ
ಡೈರಿ ಉತ್ಪನ್ನಗಳು

 

4 : ಒಗ್ಗೂಡಿಸುವಿಕೆಯಡಿಯಲ್ಲಿ ಕೆಳಗಿನ ಕೇಂದ್ರ ಪುರಸ್ಕೃತ ಯೋಜನೆಗಳನ್ನು ಪರಿಗಣಿಸುವುದು

1. ಮುದ್ರಾ ಸಾಲಗಳು ,  Stand-Up India, Start-Up India
2. RKVY-RAFTAAR: to promote incubation facilities, enterprises etc
3. ರೈತ ಉತ್ಪಾದಕ ಸಂಸ್ಥೆಗಳು
4. ಕೃಷಿ ಬಂಡವಾಳ ನಿಧಿ (AIF)
5. ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬಧ್ಧಗೊಳಿಸುವಿಕೆ ಯೋಜನೆ (PMFME)  
6. ಸ್ಪೂರ್ತಿ ಯೋಜನೆ
7. ಖಾಧಿ ಮತ್ತು ಗ್ರಾಮೋದ್ಯೋಗ ಮಂಡಳಿ ಕಾರ್ಯಕ್ರಮಗಳು( MSME)
8. ಕೌಶಲ್ಯ ಅಭಿವೃದ್ದಿಗಾಗಿ  ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (NRLM)
9. ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶಾಭಿವೃದ್ದಿ ಪ್ರಾಧಿಕಾರ (NRAA)
10. ರಾಷ್ಟ್ರೀಯ ಪಶು ಸಂಗೋಪನಾ ಮಿಷನ್ (NLM)

ಇದೇ ರೀತಿ ವಿವಿಧ ಇಲಾಖೆಯಡಿ ಲಭ್ಯವಿರುವ ಯೋಜನೆಗಳನ್ನು ಪರಿಗಣಿಸುವುದು 5. ಸೆಕೆಂಡರಿ ಕೃಷಿಯ ಅನುಷ್ಠಾನ ಮಾರ್ಗಸೂಚಿ:

 

5.1  ಪೀಠಿಕೆ:

          ರೈತರ ಆದಾಯವನ್ನು ಹೆಚ್ಚಿಸುವ ಧ್ಯೇಯದೊಂದಿಗೆ ರಾಷ್ಟ್ರದಲ್ಲೇ ಮೊದಲ ಬಾರಿಗೆ ಸೆಕೆಂಡರಿ  ಕೃಷಿ ನಿರ್ದೇಶನಾಲಯವನ್ನು ಸ್ಥಾಪಿಸಲಾಗಿದೆ. ರೈತ ಉತ್ಪಾದಕರ ಸಂಸ್ಥೆಗಳನ್ನು ಬಳಸಿ ಕೃಷಿಯ ಪ್ರಾಥಮಿಕ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ, ಈ  ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸಲು ಸಹಕಾರಿಯಾಗಲಿದೆ ಎಂದು 2022-23ನೇ ಸಾಲಿನಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದ ಆಯವ್ಯಯದಲ್ಲಿ ಘೋಷಣೆಯಾಗಿದೆ.

         ಕರ್ನಾಟಕ ರಾಜ್ಯದ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ  ರಾಜ್ಯ ಸೆಕೆಂಡರಿ  ಕೃಷಿ ನಿರ್ದೇಶನಾಲಯವು ಮಾನ್ಯ ಮುಖ್ಯ ಮಂತ್ರಿಗಳ ಮಹತ್ವಾಕಾಂಕ್ಷಿ ಪರಿಕಲ್ಪನೆಯಾಗಿರುತ್ತದೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಪ್ರಾಣಿಜನ್ಯ ಉತ್ಪನ್ನಗಳ ಸಂಸ್ಕರಣೆ, ಗ್ರಾಮೀಣ ಮತ್ತು ಗುಡಿ ಕೈಗಾರಿಕೆಗಳ ಮೂಲಕ ರೈತರಿಗೆ ಹೆಚ್ಚಿನ ಆದಾಯ ತರಲು ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಉದ್ಯೋಗ ಸೃಜನೆಗೆ ಪೂರಕವಾಗಿ, ಕೃಷಿ ಉತ್ಪನ್ನಗಳಿಂದ ಉಪ ಉತ್ಪನ್ನಗಳ ತಯಾರಿಕೆಗೆ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲು ಸುಸ್ಥಿರ ಹಾಗೂ ಕ್ರೂಡೀಕೃತ ವ್ಯವಸ್ಥೆಗಾಗಿ ಪ್ರತ್ಯೇಕ ರಾಜ್ಯ ಸೆಕೆಂಡರಿ ಕೃಷಿ ನಿರ್ದೇಶನಾಲಯವನ್ನು ಸರ್ಕಾರದ ಆದೇಶ ಸಂ: ಎ ಎಸ್ ಸಿ/73/2021(ಪಿ-3), ಬೆಂಗಳೂರು, ದಿನಾಂಕ: 18-01-2022 ರನ್ವಯಅಧಿಸೂಚಿಸಲಾಗಿದೆ.

        ಸೆಕೆಂಡರಿ ಕೃಷಿ ನಿರ್ದೇಶನಾಲಯವು ಕರ್ನಾಟಕ ರಾಜ್ಯದ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಸಂಸ್ಥೆಯಾಗಿದ್ದು, ರಾಷ್ಟ್ರದಲ್ಲೇ ಪ್ರಪ್ರಥಮ ಮಾದರಿಯಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಯೋಜಿಸಲಾಗಿರುತ್ತದೆ.

ಸರ್ಕಾರದ ಆದೇಶ ಸಂಖ್ಯೆ: AGRI-AML/172/2023, ದಿನಾಂಕ: 06-09-2023 ರನ್ವಯ, ಸೆಕೆಂಡರಿ ಕೃಷಿ ನಿರ್ದೇಶನಾಯದಕಾರ್ಯಕ್ರಮಗಳ ಅನುಷ್ಠಾನ ಮಾರ್ಗಸೂಚಿಯನ್ನುಅನುಮೋದಿಸಲಾಗಿರುತ್ತದೆ. ಅದರಂತೆ ಕೃಷಿ ಹಾಗೂ ಕೃಷಿ ಸಂಬಂಧಿತಅವಶ್ಯವಿರುವ ಕ್ರಿಯಾಯೋಜನೆಯನ್ನು ಸೆಕೆಂಡರಿ ಕೃಷಿನಿರ್ದೇಶನಾಲಯದ ಮೂಲಕ ರಾಜ್ಯಾದ್ಯಂತಅನುಷ್ಠಾನಗೊಳಿಸಲಾಗುತ್ತದೆ.

5.2 : ಆಯವ್ಯಯ:

   2024-25ನೇ ಸಾಲಿನಲ್ಲಿ ಯೋಜನೆಯ ಅನುಷ್ಠಾನಕ್ಕಾಗಿಆಯವ್ಯಯದಲ್ಲಿ ರೂ.1.97 ಕೋಟಿಗಳ ಅನುದಾನವನ್ನು ನಿಗಧಿಪಡಿಸಲಾಗಿದೆ.

 

5.3 : ಯೋಜನೆಯ ಕಾರ್ಯ  ವ್ಯಾಪ್ತಿ

          ಕರ್ನಾಟಕ ರಾಜ್ಯದ ಹವಾಮಾನ ಆಧಾರಿತ ಕೃಷಿ ವಲಯದಆಧಾರದ ಮೇಲೆ ಐದು ಜಿಲ್ಲೆಗಳನ್ನು ಆಯ್ಕೆ ಮಾಡಿ ಅನುಷ್ಠಾನಮಾಡಲಾಗುವುದು. ಆಯ್ಕೆ ಮಾನದಂಡ ಮತ್ತು ಆಯ್ಕೆಯಾದ ಜಿಲ್ಲೆ ವಿವರ ಕೆಳಗಿನಂತಿದೆ.

 

 

ಕ್ರ ಸಂ

ಆಯ್ಕೆಯಾದ ಜಿಲ್ಲೆ

ಕೃಷಿ ವಲಯ

ತಾಲ್ಲೂಕುಗಳ ಸಂಖ್ಯೆ

1

ಕಲಬುರ್ಗಿ

ಈಶಾನ್ಯ ಅರೆಮಲೆನಾಡು ಮತ್ತು ಈಶಾನ್ಯ ಒಣ ವಲಯ

7

2

ವಿಜಯಪುರ

ಉತ್ತರ ಒಣ ವಲಯ

5

3

ದಾವಣಗೆರೆ

ಮದ್ಯಮ ಒಣ ವಲಯ ಮತ್ತು ದಕ್ಷಿಣ ಅರೆಮಲೆನಾಡು  ವಲಯ

6

4

ಮಂಡ್ಯ

ದಕ್ಷಿಣ ಒಣ ವಲಯ

7

5

ಚಿಕ್ಕಮಗಳೂರು

ದಕ್ಷಿಣ ಅರೆಮಲೆನಾಡು  ವಲಯ,

ಮದ್ಯಮ ಒಣ ವಲಯ ಮತ್ತು ಗುಡ್ಡಗಾಡು ವಲಯ

7

ಒಟ್ಟು

32

 

ಸೂಚನೆ:

1. ಆಯ್ಕೆಯಾದ ಐದು ಜಿಲ್ಲೆಗಳ ಎಲ್ಲಾ ತಾಲ್ಲೂಕುಗಳಲ್ಲಿ ವ್ಯಾಪಕ ಪ್ರಚಾರ ನೀಡಿ ಅನುಷ್ಠಾನ ಮಾಡಲು ಆದ್ಯತೆ ನೀಡುವುದು. 
2. ಯೋಜನೆಯ ಪ್ರದೇಶದಲ್ಲಿ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಚಾಲ್ತಿಯಲ್ಲಿರುವ ಕಾರ್ಯಕ್ರಮಗಳ ಅನುಷ್ಠಾನ ಜೊತೆಗೆ ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ಇಲಾಖಾವಾರು  ಸೆಕೆಂಡರಿ ಕೃಷಿ  ತಾಂತ್ರಿಕತೆಗಳನ್ನು ಗುರುತಿಸಿ ಅನುಷ್ಠಾನ ಮಾಡವುದು.

 

ಜಿಲ್ಲಾವಾರು ಸೆಕೆಂಡರಿ ಕೃಷಿಗೆ  ಸೂಕ್ತವಿರುವ ಚಟುವಟಿಕೆಗಳನ್ನು ಗುರುತಿಸುವ ಕುರಿತು

      ಕರ್ನಾಟಕ ರಾಜ್ಯದಲ್ಲಿ ಜಿಲ್ಲಾವಾರು ಬೆಳೆಗಳಲ್ಲಿ, ಕೃಷಿ ಹಾಗೂ ಕೃಷಿ ಸಂಬಂಧಿತ ವಲಯಗಳಲ್ಲಿ ಅಗಾಧವಾದ ವೈವಿಧ್ಯತೆಯನ್ನು ಕಾಣಬಹುದಾಗಿದೆ. ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಪದ್ಧತಿ, ಪಶು ಸಂಗೋಪನೆ, ರೇಷ್ಮೆ, ಮೀನುಗಾರಿಕೆ, ಅರಣ್ಯ ಇತ್ಯಾದಿಗಳ ಆಧಾರದಲ್ಲಿ ಜಿಲ್ಲೆಗಳಲ್ಲಿ ವಿಭಿನ್ನ ಚಟುವಟಿಕೆಗಳಿಗೆ ಅವಕಾಶವಿದ್ದು, ಸ್ಥಳೀಯ ಅವಶ್ಯಕತೆ ಹಾಗೂ ಬೇಡಿಕೆಯನುಸಾರ ಸೂಕ್ತ ಚಟುವಟಿಕೆಗಳನ್ನು ಕೈಗೊಂಡಲ್ಲಿ ರೈತರ ಆದಾಯವನ್ನು ವೃದ್ಧಿಸಬಹುದಾಗಿದೆ.

        ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಜಿಲ್ಲಾವಾರು ಸೆಕೆಂಡರಿ ಕೃಷಿಗೆಸೂಕ್ತವಾಗಿರುವ ಸಂಭಾವ್ಯ ಚಟುವಟಿಕೆಗಳನ್ನು ಸ್ಥಳೀಯ ಅವಶ್ಯಕತೆಗನುಗುಣವಾಗಿ ಗುರುತಿಸುವ ಅವಶ್ಯಕತೆ ಇರುತ್ತದೆ. ಈ ಕಾರ್ಯವನ್ನು ಕೈಗೊಳ್ಳಲು ಸೂಕ್ತ ಸಂಸ್ಥೆಯನ್ನು ಗುರುತಿಸಿ, ನಿಗಧಿತ ಸಮಯದಲ್ಲಿ ಜಿಲ್ಲಾವಾರು ಸೂಕ್ತವಾದ ಲಾಭದಾಯಕ ಸೆಕೆಂಡರಿ ಕೃಷಿ ಚಟುವಟಿಕೆಗಳ ಮಾಹಿತಿಯನ್ನು ಕ್ರೋಡೀಕರಿಸಿ ವರದಿಯನ್ನು ತಯಾರಿಸುವುದು. ಸದರಿ ಕಾರ್ಯವನ್ನು ಕೈಗೊಳ್ಳಲು ಸೂಕ್ತವಾದ ಸಂಸ್ಥೆಯನ್ನು ನಿಯಮಾನುಸಾರ ಆಯ್ಕೆ ಮಾಡುವುದು ಹಾಗೂ ಇದಕ್ಕೆ ತಗಲುವ ವೆಚ್ಚವನ್ನು ಸಂಬಂಧಿಸಿದ ಘಟಕದಡಿ ಭರಿಸುವುದು.

 

ಸೆಕೆಂಡರಿ ಕೃಷಿಯಲ್ಲಿ ಕೈಗೊಳ್ಳುವ ಕಾರ್ಯಕ್ರಮ/ ಚಟುವಟಿಕೆಗಳ ವಿವರ :        

       ಸೆಕೆಂಡರಿ ಕೃಷಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಿಂದ ಈ ಕೆಳಗಿನ ಘಟಕಗಳಡಿ ಕೈಗೊಳ್ಳುವ ಕಾರ್ಯಕ್ರಮ/ ಚಟುವಟಿಕೆಗಳಿಗೆ ರೂಪಿಸುವ ಯೋಜನಾ ವರದಿಗಳನ್ವಯ ಅನುದಾನ ನೀಡಲಾಗುವುದು. ಸೆಕೆಂಡರಿ ಕೃಷಿ ಚಟುವಟಿಕೆಗಳನ್ನು ಪ್ರಮುಖವಾಗಿ 3 ವಿಧವಾಗಿ ವಿಂಗಡಿಸಿದೆ.

ಅ)   ಉತ್ಪಾದಿತ ಬೆಳೆಗಳ ಮೌಲ್ಯವರ್ಧನೆ: ಜಿಲ್ಲಾವಾರು ಪ್ರಮುಖ ಬೆಳೆಗಳ ಆಹಾರ ಸರಪಳಿಯಡಿ ಬರುವ ಚಟುವಟಿಕೆಗಳ ಉತ್ತೇಜನ-“Type A” activities.

ಆ)  ಪರ್ಯಾಯ ಉದ್ಯಮಗಳಿಗೆ ಉತ್ತೇಜನ – “Type B” activities

)   ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಪಶು ಸಂಗೋಪನಾ ತ್ಯಾಜ್ಯಗಳನ್ನು ಬಳಸಿ ಕೈಗೊಳ‍್ಳಬಹುದಾದ ಚಟುವಟಿಕೆಗಳಿಗೆ ಉತ್ತೇಜನ- “Type –C “activities

(ಸೂಚನೆ: ಪಿ.ಎಮ್.ಎಫ್.ಎಮ್.ಇ. (PMFME) ಯೋಜನೆಯಡಿಕೈಗೊಳ್ಳಬಹುದಾದ ಚಟುವಟಿಕೆಗಳನ್ನು ಹೊರತುಪಡಿಸಿ (separate Food Processing Directorate) ಚಟುವಟಿಕೆಗಳಿಗೆ ಸೆಕೆಂಡರಿ ಕೃಷಿ ಯೋಜನೆಯಡಿ ಒತ್ತು ನೀಡುವುದು)

5.4 ತಾಂತ್ರಿಕ ಸಮಿತಿಗಳು:

1. ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ:  

ವೈಯಕ್ತಿಕ ಮತ್ತು ಗುಂಪು ಆಧಾರಿತ ಚಟುವಟಿಕೆಗಳ ಎಲ್ಲಾ ಯೋಜನಾ ವರದಿಗಳನ್ನು ಈ ಕೆಳಗಿನ ತಾಂತ್ರಿಕ ಸಮಿತಿಯು ಮಾರ್ಗಸೂಚಿಯನ್ವಯ ಪರಿಶೀಲಿಸಿ, ತನ್ನ ಶಿಫಾರಸ್ಸಿನೊಂದಿಗೆಅನುಮೋದನೆಗಾಗಿ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಗೆ ಸಲ್ಲಿಸುವುದು.

 

ಕ್ರ.ಸಂ

ಸದಸ್ಯರ ಹುದ್ದೆ

ಸ್ಥಾನ

1.

ಜಂಟಿ ಕೃಷಿ ನಿರ್ದೇಶಕರು  

ಅಧ್ಯಕ್ಷರು

2.

ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕರು ಅಥವಾ ಸಂಬಂಧಿಸಿದ ವಿಜ್ಞಾನಿಗಳು

ಸದಸ್ಯರು

3.

ಜಂಟಿ  ನಿರ್ದೇಶಕರು (ಕೈಗಾರಿಕೆ  ಮತ್ತು ವಾಣಿಜ್ಯ ಇಲಾಖೆ)

ಸದಸ್ಯರು

4.

ಉಪ ನಿರ್ದೇಶಕರು(ಪಶು ಸಂಗೋಪನೆ)

ಸದಸ್ಯರು

5.

ಉಪ ನಿರ್ದೇಶಕರು (ತೋಟಗಾರಿಕೆ)

ಸದಸ್ಯರು

6.

ಉಪ ನಿರ್ದೇಶಕರು (ರೇಷ್ಮೆ)

ಸದಸ್ಯರು

7.

ಉಪ ನಿರ್ದೇಶಕರು (ಮೀನುಗಾರಿಕೆ)

ಸದಸ್ಯರು

8

ಪ್ರಸ್ತಾಪಿಸಿದ ಯೋಜನಾ ವರದಿಯ ಸಂಬಂಧಿತ ಜಿಲ್ಲಾ ಮಟ್ಟದ ಅಧಿಕಾರಿಗಳು

ಸದಸ್ಯರು

9

ಗುರುತಿಸಲಾದ ಜಿಲ್ಲಾ ಸಂಪನ್ಮೂಲ ವ್ಯಕ್ತಿ

ಸದಸ್ಯರು

10

ಸಹಾಯಕ ಕೃಷಿ ನಿರ್ದೇಶಕರು (ವಿ. ತ)

ಸಂಚಾಲಕರು

 

ಪರಿಶೀಲಿಸಬೇಕಾದ ಮುಖ್ಯ ಅಂಶಗಳು :

1. ಮಾರ್ಗಸೂಚಿಯನ್ವಯ ಬಂಡವಾಳ ವೆಚ್ಚ (Capital Cost), ದುಡಿಮೆ ಬಂಡವಾಳ (Working Capital), DSCR (Debt Service Coverage Ratio), IRR (Internal Rate of Return) ಹಾಗೂ BC Ratio (Benefit Cost Ratio) ಅನುಪಾತಗಳನ್ನು ಪರಿಶೀಲಿಸುವುದು.
2. ಇತರೆ ಇಲಾಖೆಯಲ್ಲಿ ಈಗಾಗಲೇ ಸಹಾಯಧನದ ಪುನರಾವರ್ತನೆ (Duplicate) ಕುರಿತು ಪರಿಶೀಲನೆ.
3. ಚಾಲ್ತಿ ಯೋಜನೆಗಳಲ್ಲಿ ಕಡಿಮೆ ಸಹಾಯಧನ ಇದ್ದಲ್ಲಿ ಅಥವಾ ಪ್ರಸಕ್ತ ವರ್ಷದಲ್ಲಿ ಅನುದಾನ ಲಭ್ಯವಿಲ್ಲದ ಸಂದರ್ಭಗಳಲ್ಲಿ ಸದರಿ ಚಟುವಟಿಕೆಗಳನ್ನು ಸೆಕೆಂಡರಿ ಕೃಷಿ ಯೋಜನೆಯಡಿ ಪರಿಗಣಿಸುವುದು.
4. ಯೋಜನೆಯ ಕಾರ್ಯಸಾಧ್ಯತೆ (Feasibility/Viability) ಕುರಿತು ಪರಿಶೀಲನೆ.

 

2. ರಾಜ್ಯ ಮಟ್ಟದ ತಾಂತ್ರಿಕ ಸಮಿತಿ

ಸಮುದಾಯ ಸೆಕೆಂಡರಿ ಕೃಷಿ ಉದ್ದಿಮೆಗೆ ಸಂಬಂಧಿಸಿದ ಯಂತ್ರೋಪಕರಣಗಳ ಸ್ಥಾಪನೆಗೆ (ಬಾಡಿಗೆ ಆಧಾರಿತ ಸೇವಾ ಕೇಂದ್ರಮಾದರಿಯಂತೆ) ಸಂಬಂಧಿಸಿದ ಎಲ್ಲಾ ಯೋಜನಾ ವರದಿಗಳನ್ನು ಈ ಕೆಳಗಿನ ತಾಂತ್ರಿಕ ಸಮಿತಿಯು ಮಾರ್ಗಸೂಚಿಯನ್ವಯ ಪರಿಶೀಲಿಸಿ, ಸೂಕ್ತ ಯೋಜನಾ ವರದಿಯನ್ನು ಅನುಮೋದಿಸಿ ಸಂಬಂಧಿಸಿದ ಜಿಲ್ಲಾ ಮಟ್ಟದ ಸಮಿತಿಗೆ ಅನುಷ್ಠಾನಕ್ಕಾಗಿ ಕಳುಹಿಸುವುದು. ರಾಜ್ಯ ಮಟ್ಟದ ತಾಂತ್ರಿಕ ಸಮಿತಿಯಲ್ಲಿ ಅನುಮೋದನೆಗೊಂಡ ಯೋಜನಾ ವರದಿಗಳನ್ನು ರಾಜ್ಯ ಮಟ್ಟದ ಚಾಲನಾ ಸಮಿತಿ ಸಭೆಯ ಗಮನಕ್ಕೆ ಮಂಡಿಸುವುದು.

 

ಕ್ರ.ಸಂ

 

ಸದಸ್ಯರ ಹುದ್ದೆ

ಸ್ಥಾನ

1.

ನಿರ್ದೇಶಕರು , ರಾಜ್ಯ ಸೆಕೆಂಡರಿ ಕೃಷಿ ನಿರ್ದೇಶನಾಲಯ

ಅಧ್ಯಕ್ಷರು

2.

ಸಂಬಂಧಿಸಿದ ಕೃಷಿ ವಿಶ್ವ ವಿದ್ಯಾಲಯದ ಇನ್ಕುಬೇಷನ್ ಕೇಂದ್ರದ ವಿಜ್ಞಾನಿಗಳು

ಸದಸ್ಯರು

3.

ಜಂಟಿ ನಿರ್ದೇಶಕರು(ಪಶು ಸಂಗೋಪನೆ)*

ಸದಸ್ಯರು

4.

ಜಂಟಿ ನಿರ್ದೇಶಕರು (ತೋಟಗಾರಿಕೆ)*

ಸದಸ್ಯರು

5.

ಜಂಟಿ ನಿರ್ದೇಶಕರು (ರೇಷ್ಮೆ)*

ಸದಸ್ಯರು

6.

ಜಂಟಿ ನಿರ್ದೇಶಕರು( ಮೀನುಗಾರಿಕೆ)*

ಸದಸ್ಯರು

7

ಜಂಟಿ ಕೃಷಿ ನಿರ್ದೇಶಕರು(ಜಲಾನಯನ ಅಭಿವೃದ್ಧಿ)*

ಸದಸ್ಯರು

8

ಪ್ರಸ್ತಾಪಿಸಿದ ಯೋಜನಾ ವರದಿಯ ಸಂಬಂಧಿತ ರಾಜ್ಯ ಮಟ್ಟದ ನೋಡಲ್ ಅಧಿಕಾರಿಗಳು

ಸದಸ್ಯರು

9

ಜಂಟಿ ಕೃಷಿ ನಿರ್ದೇಶಕರು (ಸೆಕೆಂಡರಿ  ಕೃಷಿ ನಿರ್ದೇಶನಾಲಯ)*

ಸದಸ್ಯ ಕಾರ್ಯದರ್ಶಿಗಳು

        * ಆಯಾ ಇಲಾಖೆಯ ಸೆಕೆಂಡರಿ ಕೃಷಿ ಕಾರ್ಯಪಡೆ ಮುಖ್ಯಸ್ಥರು

 

ಪರಿಶೀಲಿಸಬೇಕಾದ ಮುಖ್ಯ ಅಂಶಗಳು :

1. ಮಾರ್ಗಸೂಚಿಯನ್ವಯ ಬಂಡವಾಳ ವೆಚ್ಚ (Capital Cost), ದುಡಿಮೆ ಬಂಡವಾಳ (Working Capital), DSCR (Debt Service Coverage Ratio), IRR (Internal Rate of Return) ಹಾಗೂ BC Ratio (Benefit Cost Ratio) ಅನುಪಾತಗಳನ್ನು ಪರಿಶೀಲಿಸುವುದು.
2. ಇತರೆ ಇಲಾಖೆಯಲ್ಲಿ ಈಗಾಗಲೇ ಸಹಾಯಧನದ ಪುನರಾವರ್ತನೆ (Duplicate) ಕುರಿತು ಪರಿಶೀಲನೆ.
3. ಚಾಲ್ತಿ ಯೋಜನೆಗಳಲ್ಲಿ ಕಡಿಮೆ ಸಹಾಯಧನ ಇದ್ದಲ್ಲಿ ಅಥವಾ ಪ್ರಸಕ್ತ ವರ್ಷದಲ್ಲಿ ಅನುದಾನ ಲಭ್ಯವಿಲ್ಲದ ಸಂದರ್ಭಗಳಲ್ಲಿ ಸದರಿ ಚಟುವಟಿಕೆಗಳನ್ನು ಸೆಕೆಂಡರಿ ಕೃಷಿ ಯೋಜನೆಯಡಿ ಪರಿಗಣಿಸುವುದು.
4. ಯೋಜನೆಯ ಕಾರ್ಯಸಾಧ್ಯತೆ (Feasibility/Viability) ಕುರಿತು ಪರಿಶೀಲನೆ.

 

5.5:  ಸೆಕೆಂಡರಿ ಕೃಷಿಯ ಮುಖ್ಯ ಘಟಕಗಳು

1. ವೈಯಕ್ತಿಕ ರೈತ ಫಲಾನುಭವಿಗಳಿಗೆ ಸಹಾಯಧನ
2. ರೈತ ಉತ್ಪಾದಕರ ಸಂಸ್ಥೆಗಳಿಗೆ /ಸ್ವಸಹಾಯ ಗುಂಪು/ಸಹಾಕಾರಿ ಸಂಘಗಳು/ ಸೊಸೈಟಿಗಳು ಇತ್ಯಾದಿಗಳಿಗೆ ಸಹಾಯಧನ
3. ಸಮುದಾಯ ಸೆಕೆಂಡರಿ ಕೃಷಿ ಉದ್ದಿಮೆಗೆ ಸಂಬಂಧಿಸಿದ ಯಂತ್ರೋಪಕರಣಗಳ ಸ್ಥಾಪನೆಗೆ (ಬಾಡಿಗೆ ಆಧಾರಿತ ಸೇವಾ ಕೇಂದ್ರ  ಮಾದರಿಯಂತೆ) ಸಹಾಯಧನ

ಯೋಜನಾ ವರದಿಯಲ್ಲಿ ಪರಿಗಣಿಸಬೇಕಾದ ಅಂಶಗಳು:

1. ಬಂಡವಾಳ ವೆಚ್ಚ (capital cost):
ಯಂತ್ರೋಪಕರಣಗಳು, ಸಲಕರಣೆಗಳು ಇತ್ಯಾದಿ
ಮೂಲಭೂತ ಸೌಕರ್ಯಗಳು: ಯಂತ್ರ ಸಾಮಗ್ರಿಗಳಿಗೆ ತಳಪಾಯ , ಶೆಡ್ ಇತ್ಯಾದಿ ತಾಂತ್ರಿಕ ಸಿವಿಲ್ ಕಾಮಗಾರಿಗಳು (ಒಟ್ಟು ಯೋಜನಾ ವೆಚ್ಚದ ಶೇ.30 ಕ್ಕೆ ಮೀರದಂತೆ).
2. ದುಡಿಮೆ ಬಂಡವಾಳ (working capital):  ಇದು ಕಚ್ಚಾ ಸಾಮಗ್ರಿಗಳು, ಕಾರ್ಮಿಕ ವೆಚ್ಚ, ಸಾಗಾಣಿಕೆ ವೆಚ್ಚ, ವಿದ್ಯುತ್ ಶುಲ್ಕ, ನೀರಿನ ಸೌಲಭ್ಯ ಇತ್ಯಾದಿಗಳ ವೆಚ್ವವನ್ನು ಒಳಗೊಂಡಿದೆ.
5.6 : ಸೆಕೆಂಡರಿ ಕೃಷಿ ಚಟುವಟಿಕೆ ಕೈಗೊಳ್ಳಲು ಸಹಾಯಧನ :

 

1. ವೈಯಕ್ತಿಕ ರೈತ ಫಲಾನುಭವಿಗಳಿಗೆ  ಸಹಾಯಧನ:   

ಅ) 3 ಲಕ್ಷದವರೆಗಿನ ಸಹಾಯಧನದ ಪ್ರಸ್ತಾವನೆಗಳಿಗೆ: ಎಲ್ಲಾ ವರ್ಗದ ರೈತರಿಗೆ ಕಿರು ಉದ್ಯಮವನ್ನು ಸ್ಥಾಪಿಸಲು/ ಮೇಲ್ದರ್ಜೆಗೇರಿಸಲು ಅನುವಾಗುವಂತೆ ಶೇ. 50 ಸಹಾಯಧನಅಥವಾ ಗರಿಷ್ಟ ಸಹಾಯಧನ ರೂ.3.00 ಲಕ್ಷಗಳು ಮೀರದಂತೆ, ಅರ್ಹಯೋಜನಾ ಪ್ರಸ್ತಾವನೆಗಳಿಗೆ ಜಿಲ್ಲಾ ಅನುಷ್ಟಾನ ಸಮಿತಿಯಲ್ಲಿಅನುಮೋದನೆ ಪಡೆದು ಸಹಾಯಧನ ನೀಡುವುದು.      

    ಫಲಾನುಭವಿಗಳು ಉಳಿಕೆ ಶೇ.50 ನ್ನು  ಬ್ಯಾಂಕ್ ಸಾಲ/ ಸ್ವಂತ ಬಂಡವಾಳ ಹೂಡಿಕೆಯಿಂದ ಅನುಷ್ಟಾನ ಮಾಡಲು ಅವಕಾಶವಿರುತ್ತದೆ. ಸಹಾಯಧನವನ್ನು ಬ್ಯಾಂಕ್ ಸಾಲದ ಮುಖಾಂತರ (Backended subsidy) ಅಥವಾ ನೇರವಾಗಿ ಫಲಾನುಭವಿಗೆ ಅಥವಾ ಮಾರಾಟಗಾರರಿಗೆ (vendor) ನೀಡಲಾಗುವುದು.

ಆ) ರೂ. 3 -10 ಲಕ್ಷದವರೆಗಿನ ಸಹಾಯಧನದ ಪ್ರಸ್ತಾವನೆಗಳಿಗೆ:  ಎಲ್ಲಾ ವರ್ಗದ ರೈತರಿಗೆ ಶೇ. 50 ರ ಸಹಾಯಧನ ಅಥವಾ ಗರಿಷ್ಟ ರೂ.10.00 ಲಕ್ಷಗಳು ಮೀರದಂತೆ ಸಹಾಯಧನದ ಪ್ರಸ್ತಾವನೆಗಳಿಗೆ ಜಿಲ್ಲಾ ಅನುಷ್ಟಾನ ಸಮಿತಿಯಲ್ಲಿ ಅನುಮೋದನೆ ಪಡೆದು ಅನುಷ್ಟಾನ ಮಾಡುವುದು. ಫಲಾನುಭವಿಗಳು ಉಳಿಕೆ ಶೇ.50 ನ್ನು ಕಡ್ಡಾಯವಾಗಿ ಬ್ಯಾಂಕ್ ಸಾಲದ ರೂಪದಲ್ಲಿ ಪಡೆದುಕೊಳ್ಳುವುದು.

ಸಹಾಯಧನವನ್ನು ಬ್ಯಾಂಕ್ ಸಾಲದ ಮುಖಾಂತರ(Backended subsidy) ಅಥವಾ ಮಾರಾಟಗಾರರಿಗೆ (vendor) ನೀಡಲಾಗುವುದು.

 

ಸಹಾಯಧನಕ್ಕಾಗಿ ಈ ಕೆಳಗಿನ ವೆಚ್ಚಗಳನ್ನು ಮಾತ್ರ ಪರಿಗಣಿಸಲಾಗುವುದು.

ಯಂತ್ರೋಪಕರಣಗಳು/ ಸಲಕರೆಣೆಗಳು ಇತ್ಯಾದಿ
ಮೂಲಭೂತ ಸೌಕರ್ಯಗಳು: ವಿದ್ಯುತ್, ಯಂತ್ರ ಸಾಮಗ್ರಿಗಳಿಗೆ ತಳಪಾಯ , ಶೆಡ್ ಇತ್ಯಾದಿ ತಾಂತ್ರಿಕ ಸಿವಿಲ್ ಕಾಮಗಾರಿಗಳು (ಸಹಾಯಧನದ ಶೇ.30 ಕ್ಕೆ ಮೀರದಂತೆ)
ಸಹಾಯಧನಕ್ಕಾಗಿ ದುಡಿಮೆ ಬಂಡವಾಳವನ್ನು ಪರಿಗಣಿಸಲಾಗುವುದಿಲ್ಲ.

 

2. ರೈತ ಉತ್ಪಾದಕ ಸಂಸ್ಥೆಗಳಿಗೆ /ಸ್ವಸಹಾಯ ಸಂಘಗಳು/ಸಹಕಾರಿ ಸಂಘಗಳು / ರೈತರ ಗುಂಪು ಗಳಿಗೆ ಸೆಕೆಂಡರಿ ಕೃಷಿ ಚಟುವಟಿಕೆ ಕೈಗೊಳ್ಳಲು ಉತ್ತೇಜನ:

ಸೆಕೆಂಡರಿ ಕೃಷಿ ಕೈಗೊಳ್ಳುವ ಉತ್ಪಾದಕ ಸಂಸ್ಥೆಗಳಿಗೆ /ಸ್ವಸಹಾಯಗುಂಪಿಗೆ/ ಸಂಘ ಸಂಸ್ಥೆಗಳು/ ಸಹಾಕಾರಿ ಸಂಘಗಳು ಇತ್ಯಾದಿ ಸಂಸ್ಥಗಳಿಗೆಅನುಮೋದಿತ ಯೋಜನಾ ವೆಚ್ಚದ ಗರಿಷ್ಟ 10 ಲಕ್ಷದವರೆಗೆ ಶೇ. 50 ರ ಸಹಾಯಧನ ನೀಡಲಾಗುವುದು. ಉಳಿಕೆ ಮೊತ್ತವನ್ನು ರೈತ ಉತ್ಪಾದಕರ ಸಂಸ್ಥೆ/ ಸ್ವಸಹಾಯ ಗುಂಪು/ ಸಂಘ ಸಂಸ್ಥೆಗಳು ಬ್ಯಾಂಕ್ ಸಾಲದ ಮುಖಾಂತರ ಪಡೆಯಬೇಕಾಗಿರುತ್ತದೆ. ಈ ಯೋಜನಾ ವರದಿಗಳನ್ನು ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಯ ಅನುಮೋದನೆಗಾಗಿ ಸಲ್ಲಿಸುವುದು. ಸಹಾಯಧನವನ್ನು ಬ್ಯಾಂಕ್ ಸಾಲದ ಮುಖಾಂತರ (Backended subsidy) ಫಲಾನುಭವಿಗಳ ಖಾತೆಗೆ ಅಥವಾ ಮಾರಾಟಗಾರರಿಗೆ (vendor) ನೀಡಲಾಗುವುದು.

ಸಹಾಯಧನಕ್ಕಾಗಿ ಈ ಕೆಳಗಿನ ವೆಚ್ಚಗಳನ್ನು ಮಾತ್ರ ಪರಿಗಣಿಸಲಾಗುವುದು.

ಯಂತ್ರೋಪಕರಣಗಳು/ ಸಲಕರೆಣೆಗಳು ಇತ್ಯಾದಿ
ಮೂಲಭೂತ ಸೌಕರ್ಯಗಳು: ಯಂತ್ರ ಸಾಮಗ್ರಿಗಳಿಗೆ ತಳಪಾಯ , ಶೆಡ್ ಇತ್ಯಾದಿ ತಾಂತ್ರಿಕ ಸಿವಿಲ್ ಕಾಮಗಾರಿಗಳು (ಸಹಾಯಧನದ ಶೇ.30 ಕ್ಕೆ ಮೀರದಂತೆ)
ಸಹಾಯಧನಕ್ಕಾಗಿ ದುಡಿಮೆ ಬಂಡವಾಳ ವೆಚ್ಚವನ್ನು ಪರಿಗಣಿಸಲಾಗುವುದಿಲ್ಲ

ಸಮುದಾಯ ಸೆಕೆಂಡರಿ ಕೃಷಿ ಉದ್ದಿಮೆಗೆ ಸಂಬಂಧಿಸಿದ ಯಂತ್ರೋಪಕರಣಗಳ ಸ್ಥಾಪನೆಗೆ (ಬಾಡಿಗೆ ಆಧಾರಿತ ಸೇವಾ ಕೇಂದ್ರ  ಮಾದರಿಯಂತೆ) ಸಹಾಯಧನ:      

ಸೆಕೆಂಡರಿ ಕೃಷಿ ಚಟುವಟಿಕೆ ಕೈಗೊಳ್ಳಲು ಬೇಕಾಗುವ ಯಂತ್ರೋಪಕರಣಗಳನ್ನು ಒಂದೇ ಸೂರಿನಡಿ ಕಲ್ಪಿಸುವ ಉದ್ದೇಶದೊಂದಿಗೆ ರೈತ ಉತ್ಪಾದಕರ ಸಂಸ್ಥೆಗಳಿಗೆ/ ಸಹಕಾರಿ ಸಂಘಗಳು /ಸ್ವಸಹಾಯ ಗುಂಪಿಗೆ ಇತ್ಯಾದಿ ಅನುಮೋದಿತ ಯೋಜನಾ ವರದಿಯ ಗರಿಷ್ಟ 15 ಲಕ್ಷದವರೆಗೆ ಅಥವಾ ಶೇ. 50 ಸಹಾಯಧನವನ್ನು ನೀಡಲಾಗುವುದು. ಉಳಿಕೆ ಮೊತ್ತವನ್ನುಆಯ್ಕೆಯಾದ ಸಂಸ್ಥೆಯು ಬ್ಯಾಂಕ್ ಸಾಲದ ಮುಖಾಂತರಭರಿಸಬೇಕಾಗಿರುತ್ತದೆ. ಸಹಾಧನ ಪಡೆಯಲು ಸಂಸ್ಕರಣ ಘಟಕದ ಜೊತೆ ಶೀತಲ ಘಟಕ, ಶೇಕರಣಾ ಮಳಿಗೆಗಳು ಹಾಗೂ ಪ್ರಯೋಗಾಲಯಗಳನ್ನು ಒಳಗೊಂಡಿರಬೇಕು. ಈ ಯೋಜನಾ ವರದಿಗಳನ್ನು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಶಿಫಾರಸ್ಸಿನೊಂದಿಗೆ ರಾಜ್ಯ ಮಟ್ಟದ ತಾಂತ್ರಿಕ ಸಮಿತಿಯ ಅನುಮೋದನೆಗಾಗಿ ಸಲ್ಲಿಸುವುದು.

ಸಹಾಯಧನಕ್ಕಾಗಿ ಈ ಕೆಳಗಿನ ವೆಚ್ಚಗಳನ್ನು ಮಾತ್ರ ಪರಿಗಣಿಸಲಾಗುವುದು.

ಯಂತ್ರೋಪಕರಣಗಳು/ ಸಲಕರೆಣೆಗಳು ಇತ್ಯಾದಿ
ಮೂಲಭೂತ ಸೌಕರ್ಯಗಳು: ವಿದ್ಯುತ್, ಯಂತ್ರ ಸಾಮಗ್ರಿಗಳಿಗೆ ತಳಪಾಯ , ಶೆಡ್ ಇತ್ಯಾದಿ ತಾಂತ್ರಿಕ ಸಿವಿಲ್ ಕಾಮಗಾರಿಗಳು (ಸಹಾಯಧನದ ಶೇ.30 ಕ್ಕೆ ಮೀರದಂತೆ)
ಸಹಾಯಧನಕ್ಕಾಗಿ ದುಡಿಮೆ ಬಂಡವಾಳ ವೆಚ್ಚವನ್ನು ಪರಿಗಣಿಸಲಾಗುವುದಿಲ್ಲ

 

5.7 ಅರ್ಹತೆಗಳು:
1. 18 ವರ್ಷ ಮೇಲ್ಪಟ್ಟವರಾಗಿರಬೇಕು
2. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅವಕಾಶವಿರುತ್ತದೆ
3. ಅರ್ಹ ಫಲಾನುಭವಿಗಳು:
ವೈಯಕ್ತಿಕ ಫಲಾನುಭವಿಗಳು: ರೈತ/ರೈತ ಮಹಿಳೆ/ ಕೃಷಿ ಕಾರ್ಮಿಕರುಇತ್ಯಾದಿ
ಅರ್ಹ ಗುಂಪುಗಳು: ರೈತ ಉತ್ಪಾದಕ ಸಂಸ್ಥೆಗಳಿಗೆ /ಸ್ವಸಹಾಯ ಸಂಘಗಳು/ಸಹಕಾರಿ ಸಂಘಗಳು/ ರೈತರ ಗುಂಪುಗಳು ಇತ್ಯಾದಿ
ಸಮುದಾಯ ಆಧಾರಿತ ಮೂಲಸೌಕರ್ಯದಡಿ: ರೈತ ಉತ್ಪಾದಕರಸಂಸ್ಥೆಗಳಿಗೆ /ಸ್ವಸಹಾಯ ಗುಂಪುಗಳು/ ಸಹಕಾರಿ ಸಂಘಗಳು/ ರೈತರ ಗುಂಪುಗಳು ಇತ್ಯಾದಿ ಸಹಾಯಧನ ಪಡೆಯಬಹುದು
4. ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ ಮತ್ತು ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಮುಂದೆ ಪ್ರಸ್ತಾವನೆಗಳನ್ನು ಮಂಡಿಸಿದಾಗ ಯೋಜನೆಪುನಾರಾವರ್ತನೆ (ಡುಫ್ಲಿಕೇಶನ್) ಆಗದ ಕುರಿತು ಖಾತರಿಪಡಿಸಬೇಕು ಮತ್ತು ಸಂಭದಪಟ್ಟ ಇಲಾಖೆಗಳಿಂದ ನಿರಾಕ್ಷೇಪಣಾಪ್ರಮಾಣಪತ್ರ ಪಡೆಯಬೇಕು
5. 01.04.2024 ನಂತರ ಹೊಸದಾಗಿ ಸ್ಥಾಪಿಸಲ್ಪಟ್ಟ/ ಮೇಲ್ದರ್ಜೆಗೇರಿಸಿದ ಘಟಕಗಳನ್ನು ಮಾತ್ರ ಪರಿಗಣಿಸುವುದು.
5.8 ಅನುಷ್ಠಾನಗೊಳಿಸುವ ವಿಧಾನ:
1.   ಸೆಕೆಂಡರಿ ಕೃಷಿ ನಿರ್ದೇಶನಾಲಯವು, ಸೆಕೆಂಡರಿ ಕೃಷಿಯಲ್ಲಿ ವ್ಯಾಖ್ಯಾನಿಸಿದಂತೆ ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಏಕ ಗವಾಕ್ಷಿ” ಮಾದರಿಯಲ್ಲಿ ಸ್ವೀಕರಿಸಲು ಹಾಗೂ ಕಾರ್ಯನಿರ್ವಹಿಸಲು ಯೋಜಿಸಲಾಗಿರುತ್ತದೆ.
2.  ಇಲಾಖೆಯಡಿ ಈಗಾಗಲೇ ಚಾಲ್ತಿಯಲ್ಲಿರುವ ಕೇಂದ್ರ ಪುರಸ್ಕೃತ ಹಾಗೂ ರಾಜ್ಯ ವಲಯ ಯೋಜನೆಗಳಡಿ ಒಗ್ಗೂಡಿಸುವಿಕೆಗೆ ಕ್ರಮ ಕೈಗೊಳ್ಳಲು ಅವಕಾಶವಿರುತ್ತದೆ.
3.  ಸೆಕೆಂಡರಿ ಕೃಷಿ ಕುರಿತು ರಾಜ್ಯ ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳ ಮೂಲಕ ವ್ಯಾಪಕ ಪ್ರಚಾರ ನೀಡಲು ಜಂಟಿ ಕೃಷಿ ನಿರ್ದೇಶಕರು ಕ್ರಮ ಕೈಗೊಳ್ಳುವುದು(ಘಟಕವಾರು ವೆಚ್ಚವನ್ನು ಅನುಬಂಧ- 2 ರಲ್ಲಿ ನೀಡಿದೆ)
4.  ಇತರೆ ಇಲಾಖೆಯಲ್ಲಿ ಈಗಾಗಲೇ ಸಹಾಯಧನದ ಪುನರಾವರ್ತನೆ (Duplication) ಯಾಗದಂತೆ ಸಂಬಂಧಪಟ್ಟ ಇಲಾಖೆಗಳಿಂದ ನಿರಾಪೇಕ್ಷಣಾ ಪತ್ರ ಪಡೆಯುವುದು.
5.  ನೂತನ/ ನವೀನ ಪರಿಕಲ್ಪನೆಗಳನ್ನು, ಚಟುವಟಿಕೆಗಳನ್ನು ಸೂಕ್ತ ಯೋಜನಾ ವರದಿಯೊಂದಿಗೆ ಆದ್ಯತೆಯೊಂದಿಗೆ ಅನುಷ್ಠಾನ ಮಾಡುವುದು.
6.  ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆವಾರು ವಿಷಯತಜ್ಞರು ಹಾಗೂ ಪರಿಣಿತರೊಳಗೊಂಡಂತೆ, ಪ್ರತ್ಯೇಕ ಕಾರ್ಯಪಡೆ ರಚಿಸಲಾಗಿರುತ್ತದೆ. Website ನಲ್ಲಿ ಇಲಾಖಾವಾರು ಕಾರ್ಯಪಡೆಯ ಮಾಹಿತಿ ಲಭ್ಯವಿದ್ದು ಇವರನ್ನು ಸಂಪರ್ಕಿಸಿ ಮಾಹಿತಿ ಪಡೆಯುವುದು.
7.  ಜಿಲ್ಲಾ ಮಟ್ಟದಲ್ಲಿ:   ವೈಯಕ್ತಿಕ ಹಾಗೂ ಗುಂಪು ಆಧಾರಿತ ಚಟುವಟಿಕೆಗಳ ಸಹಾಯಧನದ ಪ್ರಸ್ತಾವನೆಗಳನ್ನು ಜಿಲ್ಲಾ ತಾಂತ್ರಿಕ ಸಮಿತಿಯಲ್ಲಿ ಪರಿಶೀಲಿಸಿ ಅರ್ಹ ಪ್ರಸ್ತಾವನೆಗಳನ್ನು ಜಿಲ್ಲಾ ಮಟ್ಟದಅನುಷ್ಠಾನ ಸಮಿತಿಯಲ್ಲಿ ಅನುಮೋದನೆ ನೀಡಿಅಂತಿಮಗೊಳಿಸುವುದು. ಹಾಗೆಯೇ ಸದರಿ ಅನುಮೋದಿತ ಚಟುವಟಿಕೆಗಳ ವಿವರವನ್ನು ಮಾಹಿತಿಗಾಗಿ ರಾಜ್ಯ ಮಟ್ಟದ ಸೆಕೆಂಡರಿ ಕೃಷಿ ನಿರ್ದೇಶನಾಲಯಕ್ಕೆ ವರದಿ ಸಲ್ಲಿಸುವುದು.  
8.  ರಾಜ್ಯ ಮಟ್ಟದಲ್ಲಿ: ರಾಜ್ಯ ಮಟ್ಟದ ಸೆಕೆಂಡರಿ ಕೃಷಿ ನಿರ್ದೇಶನಾಲಯವು ಜಿಲ್ಲೆಗಳಿಂದ ಬಂದಿರುವ ಸಮುದಾಯ ಸೆಕೆಂಡರಿ ಕೃಷಿ ಉದ್ದಿಮೆಗೆ ಸಂಬಂಧಿಸಿದ ಯಂತ್ರೋಪಕರಣಗಳ ಸ್ಥಾಪನಾಘಟಕಗಳ ಯೋಜನಾ ವರದಿ/Business plan ಗಳನ್ನು ಸಂಬಂಧಿತ ಇಲಾಖೆಗಳಿಂದ ನಿಯೋಜಿಸಲಾದ ಅಧಿಕಾರಿಗಳನ್ನೊಳಗೊಂಡ ತಾಂತ್ರಿಕ ಸಮಿತಿಯಲ್ಲಿ ನಿಯಮಾನುಸಾರ ಪರಿಶೀಲಿಸಿ ಅನುಮೋದನೆ ನೀಡುವುದು. ಅನುಮೋದನೆಗೊಂಡ ಯೋಜನಾ ವರದಿಗಳನ್ನು ರಾಜ್ಯಮಟ್ಟದ ಚಾಲನಾ ಸಮಿತಿ ಸಭೆಯ ಗಮನಕ್ಕೆ ಮಂಡಿಸುವುದು.ಅನುಮೋದಿತ ಸೆಕೆಂಡರಿ ಕೃಷಿ ಚಟುವಟಿಕೆಗಳನ್ನು ಆಯಾ ಜಿಲ್ಲೆಗಳಲ್ಲಿಅನುಷ್ಠಾನ ಮಾಡಲಾಗುವುದು.

   

 

ವಿಶೇಷ ಸೂಚನೆ: ಸ್ವೀಕೃತವಾಗುವ ಯೋಜನಾ ಪ್ರಸ್ತಾವನೆಗಳನ್ನು ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಯಲ್ಲಿ ಇಲಾಖಾಧಿಕಾರಿಗಳು ಅನುದಾನ ಲಭ್ಯತೆಯನ್ನು ಪರಿಗಣಿಸಿ, ಪರಿಶೀಲಿಸಿ ಅನುಮೋದನೆ ನೀಡುವುದು /ಶಿಫಾರಸ್ಸು ಮಾಡುವುದು.

 

 

 

5.9  ನೋಂದಣಿ ಮತ್ತು ಅರ್ಜಿ ಸಲ್ಲಿಸುವಿಕೆ:

(ಅ) ಸೆಕೆಂಡರಿ ಕೃಷಿ ಚಟುವಟಿಕೆಗಳಲ್ಲಿ ಆಸಕ್ತ ವೈಯಕ್ತಿಕ ಫಲಾನುಭವಿಗಳನ್ನು ಅಥವಾ ಗುಂಪು / ಸಮುದಾಯ ಆಧಾರಿತ ಚಟುವಟಿಕೆಗಳನ್ನು ಕೈಗೊಳ್ಳಲು ವ್ಯಾಪಕ ಪ್ರಚಾರ ನೀಡುವುದು.

(ಆ) ಆಸಕ್ತ ರೈತರು ನಿಗದಿತ ನಮೂನೆಲ್ಲಿ (ನಮೂನೆ-1 & 2) ಅವರವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಕ್ಕೆ/ ಸಹಾಯಕ ಕೃಷಿ ನಿರ್ದೇಶಕರ ಕಛೇರಿ/ ಜಂಟಿ ಕೃಷಿ ನಿರ್ದೇಶಕರ ಕಛೇರಿಗೆ ಅರ್ಜಿ ಸಲ್ಲಿಸುವುದು.

(ಇ) ಸಲ್ಲಿಸಕೆಯಾಅರ್ಜಿಗಳನ್ನು ಅರ್ಜಿಗಳನ್ನು ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಗೆ ಮಂಡಿಸಿ, ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ಅನುಮೋದನೆ ನಂತರ ಮಂಜೂರಾತಿ ನೀಡುವುದು.  

() ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಮಂಜೂರಾತಿ ನಂತರ ಅರ್ಜಿಯನ್ನು ಸಹಾಯಕ ಕೃಷಿ ನಿರ್ದೇಶಕರಿಗೆ ಕಳುಹಿಸುವುದು.  ಸಹಾಯಕ ಕೃಷಿ ನಿರ್ದೇಶಕರು ಈ ಮಂಜೂರಾತಿಯನ್ನು ಆಧರಿಸಿ ಸಂಬಂಧಪಟ್ಟ ಫಲಾನುಭವಿಗೆ ಕಾರ್ಯಾದೇಶ ಪತ್ರವನ್ನು ನೀಡುವುದು.

() ಫಲಾನುಭವಿಯು ಯೋಜನಾಪ್ರಸ್ತಾವನೆಯ ಅನುಸಾರಯಂತ್ರೋಪಕರಣಗಳೊಂದಿಗೆ ಸೆಕೆಂಡರಿ ಕೃಷಿ ಚಟುವಟಿಕೆಗಳಿಗಾಗಿ ಘಟಕವನ್ನು ಸ್ಥಾಪಿಸುವುದು.  ಘಟಕ ಸ್ಥಾಪನೆಯ ನಂತರ ಪತ್ರ ಮುಖೇನ ಸಹಾಯಧನಕ್ಕಾಗಿ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸುವುದು.

() ಕೃಷಿ ಅಧಿಕಾರಿಯು ಸದರಿ ಘಟಕಕ್ಕೆ ಭೇಟಿ ನೀಡಿ ಸದರಿ ಘಟಕಚಾಲ್ತಿ ಇರುವ ಕುರಿತು ಖಾತರಿಪಡಿಸಿಕಂಡು ಯಂತ್ರೋಪಕರಣಗಳಿರುವಜಿ.ಪಿ.ಎಸ್. ಫೋಟೋ ಹಾಗೂ ಇತರೆ ದಾಖಲಾತಿಗಳೊಂದಿಗೆ (Invoice, Electricity Bill, 5 ವರ್ಷದವೆರೆಗೆ ಮುಂದುವೆರೆಸುವುದಾಗಿ ಮತ್ತುಯಾರಿಗೂ ಮಾರಟ ಮಾಡದಿರುವ ಕುರಿತು ಮುಚ್ಚಳಿಕೆ ಪತ್ರ)ಸಹಾಯಧನ ಬಿಡುಗಡೆಗಾಗಿ ಸಹಾಯಕ ಕೃಷಿ ನಿರ್ದೇಶಕರಿಗೆಪ್ರಸ್ತಾವನೆಯನ್ನು ಸಲ್ಲಿಸುವುದು.

() ಸಹಾಯಕ ಕೃಷಿ ನಿರ್ದೇಶಕರು ಕೃಷಿ ಅಧಿಕಾರಿಯವರಿಂದ ಸ್ವೀಕರಿಸಿದ ಪ್ರಸ್ತಾವನೆಯನ್ನು ಪರಿಶೀಲಿಸಿದ ನಂತರ ಆರ್ಥಿಕ ಮಂಜೂರಾತಿ ನೀಡಿ , ಉಪ ಕೃಷಿ ನಿರ್ದೇಶಕರ ಮೇಲುಸಹಿಯೊಂದಿಗೆ ಸಹಾಯಧನಕ್ಕಾಗಿ ಬಿಲ್ಲನ್ನು ಖಜಾನೆಗೆ ಸಲ್ಲಿಸುವುದು.  ಖಜಾನೆಯಿಂದ ಸಹಾಯಧನ ಪಾವತಿಯಾದ ನಂತರ ಫಲಾನುಭವಿಯಿಂದ ಸಹಾಯಧನ ಪಡೆದಿದ್ದಕ್ಕೆ ಸ್ವೀಕೃತಿಯನ್ನು ಪಡೆಯುವುದು.

() ಸಮುದಾಯ ಆಧಾರಿತ ಪ್ರಸ್ತಾವನೆಗಳಿಗೆ ಜಂಟಿ ಕೃಷಿ ನಿರ್ದೇಶಕರ ಶಿಫಾರಸ್ಸಿನೊಂದಿಗೆ ನಿರ್ದೇಶಕರು, ಸೆಕೆಂಡರಿ ಕೃಷಿ ನಿರ್ದೇಶನಾಲಯಕ್ಕೆಸಲ್ಲಿಸುವುದು.  ಸ್ವೀಕರಿಸಿದ ಪ್ರಸ್ತಾವನೆಗಳನ್ನು ರಾಜ್ಯ ಮಟ್ಟದ ತಾಂತ್ರಿಕ ಸಮಿತಿಯಲ್ಲಿ ನಿಯಮಾನುಸಾರ ಪರಿಶೀಲಿಸಿ ಅನುಮೋದನೆ ನೀಡುವುದು.ಅನುಮೋದನೆಗೊಂಡ ಯೋಜನಾ ವರದಿಗಳನ್ನು ರಾಜ್ಯ ಮಟ್ಟದ ಚಾಲನಾಸಮಿತಿ ಸಭೆಯ ಗಮನಕ್ಕೆ ಮಂಡಿಸುವುದು. ಇಂತಹ ಪ್ರಸ್ತಾವನೆಗಳಿಗೆ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಕಾರ್ಯಾದೇಶ ಪತ್ರ ನೀಡುವುದು ಮತ್ತು ಕೃಷಿ ಅಧಿಕಾರಿ ಘಟಕ ಸ್ಥಾಪನೆ ನಂತರ ತಪಾಸಣೆ ಕೈಗೊಂಡು, ಜಿ.ಪಿ.ಎಸ್. ಪೋಟೋಗಳು ಹಾಗೂ ಇತರೆ ದಾಖಲಾತಿಗಳನ್ನು ಅಪ್ ಲೋಡ್ ಮಾಡಿ, ಸಹಾಯಕ ಕೃಷಿ ನಿರ್ದೇಶಕರಿಗೆ ಪ್ರಸ್ತಾವನೆಯನ್ನುಫಾರ್ವಡ್ ಮಾಡುವುದು. ಸಹಾಯಕ ಕೃಷಿ ನಿರ್ದೇಶಕರು ಸಹಾಯಧನ ಬಿಡುಗಡೆಗೆ ಖಜಾನೆಗೆ ಬಿಲ್ಲನ್ನು ಸಲ್ಲಿಸುವುದು.

I. ಸಹಾಯಧನ ನೀಡುವ ವಿಧಾನ:

ಅ) ಜಿಲ್ಲೆಗಳಿಗೆ ಖಜಾನೆ -2 ಮುಖಾಂತರ ರಾಜ್ಯ ಸೆಕೆಂಡರಿ ಕೃಷಿ ನಿರ್ದೇಶನಾಲಯದಿಂದ ಅನುದಾನ ಬಿಡುಗಡೆ ಮಾಡಲಾಗುವುದು.

ಆ) ವೈಯಕ್ತಿಕ/ ರೈತ್ಪಾದಕ ಸಂಸ್ಥೆಗಳು/ಸ್ವಸಹಾಯ ಗುಂಪು/ ಸಮುದಾಯ ಕೃಷಿ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಜಿಲ್ಲೆಗಳಿಂದ ಫಲಾನುಭವಿಗಳಿಗೆ ಸಹಾಯಧನ ವಿತರಿಸತಕ್ಕದ್ದು.

 

5.10: ವಿವಿಧ ಕಾರ್ಯಪಡೆಯ ಜವಾಬ್ದಾರಿಗಳು:

 

I. ಕೃಷಿ ಅಧಿಕಾರಿಗಳು:
1. ರೈತ ಸಂಪರ್ಕ ಕೇಂದ್ರದ ಕೃಷಿ ಆಧಿಕಾರಿಗಳು ಸಹಯೋಗ ಇಲಾಖೆಗಳಲ್ಲಿನ ಕ್ಷೇತ್ರ ಮಟ್ಟದ ಅಧಿಕಾರಿಗಳ ಸಹಯೋಗದೊಂದಿಗೆ ಸೆಕೆಂಡರಿ ಕೃಷಿ ಅನುಷ್ಠಾನ ಮಾಡಲು ಸೂಕ್ತ ಪ್ರಚಾರದ ಮೂಲಕ ರೈತರಿಗೆ/ ರೈತ ಉತ್ಪಾದಕ ಸಂಸ್ಥೆಗಳು/ಸ್ವಸಹಾಯ ಗುಂಪುಗಳಿಗೆಚಟುವಟಿಕೆ ಕೈಗೊಳ್ಳಲು ಪ್ರೇರೀಪಿಸುವುದು ಹಾಗೂ ಪಲಾನುಭವಿಗಳ ಅರ್ಜಿಗಳನ್ನು ನೊಂದಾಯಿಸಲು ಮಾರ್ಗದರ್ಶನ ನೀಡುವುದು.
2. ಹೋಬಳಿ ಮಟ್ಟದ ವಿವಿಧ ಇಲಾಖೆಗಳೊಂದಿಗೆ ಸೆಕೆಂಡರಿ ಕೃಷಿ ಅನುಷ್ಠಾನಮಾಡಲು ಸಮನ್ವಯ ಸಾಧಿಸುವುದು.
3. ಆಯ್ಕೆಯಾದ ಫಲಾನುಭವಿಗಳ ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವುದು (100%).

 

II. ಸಹಾಯಕ ಕೃಷಿ ನಿರ್ದೇಶಕರು:
1. ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೈತ ಉತ್ಪಾದಕ ಕೇಂದ್ರಗಳು/ಸ್ವಸಹಾಯ ಗುಂಪುಗಳಿಗೆ ಚಟುವಟಿಕೆ ಕೈಗೊಳ್ಳಲು ಪ್ರೇರೇಪಿಸುವುದು.
2. ತಾಲ್ಲೂಕಿನಲ್ಲಿ ಸೆಕೆಂಡರಿ ಕೃಷಿ ಅಳವಡಿಕೆಗೆ ಸಂಬಂಧಿಸಿದಂತೆ ವಿಸ್ತರಣಾ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲು ಕ್ರಮ ವಹಿಸುವುದು.
3. ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳೊಂದಿಗೆ ಸೆಕೆಂಡರಿಕೃಷಿ ಅನುಷ್ಠಾನ ಮಾಡಲು ಸಮನ್ವಯ ಸಾಧಿಸುವುದು.
4. ಆಯ್ಕೆಯಾದ ಫಲಾನುಭವಿಗಳ ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವುದು (25%).
5. ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ಮೂಲಕ ಆಯ್ಕೆಯಾದ ಫಲಾನುಭವಿಗಳಿಗೆ ಕಾರ್ಯಾದೇಶ ನೀಡುವುದು.

 

III. ಉಪ ಕೃಷಿ ನಿರ್ದೇಶಕರು:
1. ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೈತ ಉತ್ಪಾದಕ ಕೇಂದ್ರಗಳು/ಸ್ವಸಹಾಯ ಗುಂಪುಗಳಿಗೆ ಚಟುವಟಿಕೆ ಕೈಗೊಳ್ಳಲು ಪ್ರೇರೇಪಿಸುವುದು.
2. ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಮಯೋಚಿತವಾಗಿ ಯೋಜನೆಗಳ ಒಗ್ಗೂಡಿಸುವಿಕೆಗೆ ಕ್ರಮಕೈಗೊಳ್ಳುವುದು.
3. ಆಯ್ಕೆಯಾದ ಫಲಾನುಭವಿಗಳ ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವುದು (10%). ಅನುಮೋದನೆಗೊಂಡ ಚಟುವಟಿಕೆಗಳ ಬಿಲ್ಲುಗಳಿಗೆ ಮೇಲುಸಹಿಗೊಳಿಸಿ ಅನುದಾನ ಬಿಡುಗಡೆ  ಮಾಡುವುದು.

IV. ಜಂಟಿ ಕೃಷಿ ನಿರ್ದೇಶಕರು 

1. ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಸ್ಥಳೀಯ ಅವಶ್ಯಕತೆಗನುಗುಣವಾಗಿ ಜಿಲ್ಲಾ ಮಟ್ಟದ ಕ್ರಿಯಾ ಯೋಜನೆ ಸಿದ್ದಪಡಿಸಲು ಕ್ರಮವಹಿಸುವುದು.
2. ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎರಡುತಿಂಗಳಿಗೊಮ್ಮೆ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ಸಭೆ ನಡೆಸಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲಿಸಲು ಕ್ರಮಕೈಗೊಳ್ಳುವುದು.
3. ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಮಯೋಚಿತವಾಗಿ ಯೋಜನೆಗಳ ಒಗ್ಗೂಡಿಸುವಿಕೆಗೆ ಕ್ರಮಕೈಗೊಳ್ಳುವುದು.
4. ಜಿಲ್ಲಾವಾರು ಸೆಕೆಂಡರಿ ಕೃಷಿಗೆ ಸೂಕ್ತವಿರುವ ಚಟುವಟಿಕೆಗಳನ್ನು ಗುರುತಿಸಲು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸೂಕ್ತ ಸಂಸ್ಥೆಯನ್ನು ಆಯ್ಕೆ ಮಾಡಿ ಸದರಿ ಕಾರ್ಯವನ್ನು ಕೈಗೊಂಡು ವರದಿ ಸಲ್ಲಿಸುವುದು.
5. ಚಟುವಟಿಕೆಗಳ ಅನುಷ್ಠಾನದ ಮೌಲ್ಯಮಾಪನಕ್ಕಾಗಿ ಮೂರು ವರ್ಷದವರೆಗೆ ಆಯ್ಕೆಯಾದ ಫಲಾನುಭವಿಗಳ ಸ್ಥಳ ಪರಿಶೀಲನೆಯನ್ನು ಕೈಗೊಂಡು ವರದಿ ನೀಡುವುದು (5%).
6. ತಮ್ಮ ಅಧೀನ ಕಛೇರಿಗಳಿಗೆ ಅನುದಾನ ಬಿಡುಗಡೆ ಮಾಡುವುದಲ್ಲದೇ ಭೌತಿಕ ಗುರಿಗಳನ್ನು ನೀಡುವುದು.

 

v) ರಾಜ್ಯ ಮಟ್ಟದ ಸೆಕೆಂಡರಿ ಕೃಷಿ ನಿರ್ದೇಶನಾಲಯ:

1. ಸೆಕೆಂಡರಿ ಕೃಷಿ ವಲಯದಲ್ಲಿ ಸಾಧಿಸಬೇಕಾದ ವಿವಿಧ ಕಾರ್ಯಚಟುವಟಿಕೆಗಳನ್ನು ಗುರುತಿಸುವುದು
2. ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ, ಹುಲ್ಲುಗಾವಲು, ಅರಣ್ಯ ಮತ್ತು ಇತರೆ ಉಪವಲಯಗಳಲ್ಲಿ ಲಭ್ಯವಿರುವ ವಿವಿಧ ಉತ್ಪನ್ನಗಳ (ಪ್ರಾಥಮಿಕ ಹಾಗೂ ಉಪ ಉತ್ಪನ್ನ) ಪ್ರಮಾಣದ ಮೌಲ್ಯಮಾಪನ ಮಾಡುವುದು.
3. ಸೆಕೆಂಡರಿ ಕೃಷಿಗೆ ಸಂಬಂಧಿಸಿದ, ಕೃಷಿ ಮತ್ತು ಸಂಬಂಧಿತ ಇಲಾಖೆಗಳಡಿ ಚಾಲ್ತಿಯಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಒಗ್ಗೂಡಿಸುವಿಕೆಯಲ್ಲಿ ಅನುಷ್ಠಾನ ಮಾಡುವುದು.
4. ಪ್ರಾಥಮಿಕ ಮತ್ತು ಸೆಕೆಂಡರಿ ಸಂಸ್ಕರಣೆಯನ್ನು ಉತ್ತೇಜಿಸಲು ಅಗತ್ಯವಿರುವ ಕೌಶಲ್ಯಗಳನ್ನು ಗುರುತಿಸುವುದು ಮತ್ತು ಅವಶ್ಯಕತೆಗನುಗುಣವಾದ ತರಬೇತಿ, ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡುವುದು.
5. ಸೆಕೆಂಡರಿ ಉತ್ಪನ್ನಗಳಿಗೆ ಪ್ರತ್ಯೇಕ ಮಾರುಕಟ್ಟೆ/ ಸಂಪರ್ಕ ಕಲ್ಪಿಸಲು ಪರ್ಯಾಯ ಮಾರ್ಗಗಳನ್ನು ಗುರುತಿಸುವುದು.
6. ಉತ್ಪನ್ನಗಳ ಗುಣಮಟ್ಟವನ್ನು ಅಭಿವೃದ್ಧಿಪಡಿಸಲು ಮಾನದಂಡಗಳನ್ನು ನಿಗಧಿಪಡಿಸುವುದು, ಗುಣಮಟ್ಟ ನಿಯಂತ್ರಣ ಸೌಲಭ್ಯಗಳು, ಭೌಗೋಳಿಕ ಸೂಚ್ಯಂಕ ಉತ್ಪನ್ನಗಳ ಅಭಿವೃದ್ಧಿ ಇತ್ಯಾದಿ ಮೂಲಕ ಸೆಕೆಂಡರಿ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ವೇದಿಕೆ / ವ್ಯವಸ್ಥೆ ಕಲ್ಪಿಸುವುದು.
7. ಸೆಕೆಂಡರಿ ಕೃಷಿಗೆ ಸಂಬಂಧಿಸಿದಂತೆ ಜಿಲ್ಲಾವಾರು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಗೆ ಮಾರ್ಗದರ್ಶನ ನೀಡುವುದು.
8. ಸೆಕೆಂಡರಿ ಕೃಷಿಗೆ ಸಂಬಂಧಿಸಿದಂತೆ ಮೇಲಿನ ಎಲ್ಲಾ ಯೋಜನೆಗಳನ್ನು ಸಂಯೋಜಿಸಿ ರಾಜ್ಯಮಟ್ಟದ ಸಮಗ್ರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವುದು.
9. ಸಮಗ್ರ ಕ್ರಿಯಾ ಯೋಜನೆಯ ಪ್ರಗತಿಯ ಮೇಲ್ವಿಚಾರಣೆ ಮತ್ತು ಪ್ರಗತಿ ಪರಿಶೀಲನೆ ಮಾಡುವುದು. ಕ್ರಿಯಾ ಯೋಜನೆಯ ಮಧ್ಯಂತರ ತಿದ್ದುಪಡಿಮಾಡಲು ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಗೆ ಮಾರ್ಗದರ್ಶನ ನೀಡುವುದು.
10. ಸೆಕೆಂಡರಿ ಕೃಷಿಯ ಉದ್ದೇಶಗಳಿಗನುಗುಣವಾಗಿ ಹೊಸ ಕಾರ್ಯತಂತ್ರಗಳು, ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಸೂಚಿಸುವುದು.

 

Vi. ರಾಜ್ಯ ಮಟ್ಟದ ವಿವಿಧ ಇಲಾಖೆಗಳು:

1. ನಿರ್ದೇಶನಾಲಯದ ತಾಂತ್ರಿಕ ತಂಡಕ್ಕೆ ಪ್ರತಿ ಇಲಾಖೆಯಿಂದ ಒಬ್ಬ ನೋಡಲ್ ಅಧಿಕಾರಿಯನ್ನು ನಿಯೋಜಿಸುವುದು
2. ಜಿಲ್ಲಾವಾರು  ಸೆಕೆಂಡರಿ ಚಟುವಟಿಕೆಗಳನ್ನು ಗುರುತಿಸಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಸಹಯೋಗದೊಂದಿಗೆ ವರದಿ ತಯಾರಿಸಲು ಅನುವು ಮಾಡುವುದು ಹಾಗೂ ವ್ಯಾಪಕ ಪ್ರಚಾರ ನೀಡುವುದು.
3. ಇಲಾಖೆಯಲ್ಲಿ ಒಗ್ಗೂಡಿಸುವಿಕೆಯಡಿ ಕಾರ್ಯಕ್ರಮಗಳನ್ನು ಸೆಕೆಂಡರಿ ಕೃಷಿ ಜೊತೆ ಸಂಯೋಜಿಸುವುದು.

     

5.11 ಉಸ್ತುವಾರಿ ಮತ್ತು ಮೌಲ್ಯಮಾಪನ:

ಅ) ಜಿಲ್ಲಾ ಮಟ್ಟದ ಆಯಾ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮ ಅನುಷ್ಠಾನದ ಉಸ್ತುವಾರಿಯನ್ನು  ನಿಯತಕಾಲಿಕವಾಗಿ ಮಾಡಿ ಕ್ರೋಢಿಕೃತ ವರದಿಯನ್ನು ಸಲ್ಲಿಸುವುದು.    

   ಆ) ರಾಜ್ಯ ಸೆಕೆಂಡರಿ ಕೃಷಿ ನಿರ್ದೇಶನಾಲಯದಿಂದ  ಆಯಾ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮ ಅನುಷ್ಠಾನದ ಉಸ್ತುವಾರಿಯನ್ನು ನಿಯತಕಾಲಿಕವಾಗಿ ಮಾಡಿ ಕ್ರೋಡಿಕೃತ ವರದಿಯನ್ನು ಸಲ್ಲಿಸುವುದು .

ಇ) ಈ ಯೋಜನೆಯ ಮುಖ್ಯ ಉದ್ದೇಶವು ಲಿತಾಂಶ ಆಧಾರಿತವಾಗಿರುವುದರಿಂದ ಆರ್ಥಿಕ ವರ್ಷದ ಅಂತ್ಯದಲ್ಲಿ ಫಲಾನುಭವಿಗಳ ವಿವರ ಮತ್ತು ಯಶೋಗಾಥೆಯೊಂದಿಗೆ ಕಿರುಹೊತ್ತಿಗೆ (Compendium)ಯನ್ನು  ಹಾಗೂ Video Documentary ಯನ್ನು ಕಡ್ಡಾಯವಾಗಿ ಸಲ್ಲಿಸುವುದು.

 

(ಈ) ಯೋಜನಾ ಅನುಷ್ಠಾನದ ಒಂದು ವರ್ಷದಿಂದ ಮೂರು ವರ್ಷದವರೆಗೆ ಚಟುವಟಿಕೆಯ ಯಶಸ್ಸಿನ ಮೌಲ್ಯಮಾಪನವನ್ನು ಸಂಬಂಧಿತ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ವರ್ಷವಾರು ಕ್ಷೇತ್ರ ತಪಾಸಣೆಯನ್ನು ಕೈಗೊಂಡು, ದಾಖಲಾತಿಗಳನ್ನು ಪರಿಶೀಲಿಸಿ ವರದಿಯನ್ನು ನಿರ್ದೇಶನಾಲಯಕ್ಕೆ ಸಲ್ಲಿಸುವುದು

5.12 ಸೆಕೆಂಡರಿ ಕೃಷಿ ಗೆ ಸಂಬಂಧಿಸಿದಂತೆ ಇತರೆ ಮಾಹಿತಿಗಳು:

1. ಸೆಕೆಂಡರಿ ಕೃಷಿ ನಿರ್ದೇಶನಾಲಯದ ಸ್ಥಾಪನೆ, ಪ್ರಚಾರ ಮತ್ತು ವರದಿ ತಯಾರಿಕೆಗೆ ಆಡಳಿತ ವೆಚ್ಚದ ಅವಶ್ಯಕತೆ ಇರುತ್ತದೆ. ಅಲ್ಲದೇ, ಕೃಷಿ ನಿರ್ದೇಶಕರ ವೇತನ, ಕಛೇರಿ ವೆಚ್ಚ, ರಾಜ್ಯ ಮಟ್ಟದ ಕಾರ್ಯಾಗಾರ, ಇಂಧನ ವೆಚ್ಚ ಹಾಗೂ ಕಾರ್ಯಕ್ರಮದ ಪೂರಕ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.
2. ಸೆಕೆಂಡರಿ ಕೃಷಿಡಿಯಲ್ಲಿ ಫಲಾನುಭವಿಗಳು ಆದ್ಯತೆ ನೀಡಿ ಇಚ್ಚಿಸಿದ ಯಂತ್ರೋಪಕರಣ/ ಉಪಕರಣಗಳನ್ನು  ಖರೀದಿಸಲು ಪರಿಗಣಿಸುವುದು.